Homeಮುಖಪುಟದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ

ದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ

ಗಾಂಧೀಜಿಯ ಬರಹಗಳನ್ನು ಬಹಳ ಗೌರವದಿಂದ ಓದುವುದೇ ಅಲ್ಲದೇ, ಗಾಂಧಿಯವರನ್ನು ಭಾರತೀಯ ಸಮಾಜ ಮತ್ತಷ್ಟು ಪರಿಣಿತಿಯಿಂದ ಅಂದಾಜು ಮಾಡಬೇಕೆಂದು ತೇಲ್ತುಂಬ್ಡೆ ವಾದಿಸುತ್ತಾರೆ.

- Advertisement -
- Advertisement -

ಸ್ವಾತಂತ್ರ‍್ಯಾನಂತರದಲ್ಲಿ ಅತಿ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಆನಂದ್ ತೇಲ್ತುಂಬ್ಡೆ ಡಾ. ಅಂಬೇಡ್ಕರ್ ಚಿಂತನೆಗಳಿಂದ ಸ್ಪೂರ್ತಿ ಪಡೆದು ಕೇವಲ ತನ್ನ ಸ್ವಂತಶಕ್ತಿಯಿಂದ ಅತ್ಯಂತ ಪ್ರತಿಭಾವಂತನಾದ ಚಿಂತಕನಾಗಿ ಬೆಳೆದರು. ಬಹುಶಃ ನನಗೆ ತಿಳಿದಂತೆ ಅಂಬೇಡ್ಕರ್ ಬರಹಗಳನ್ನು ಅಷ್ಟು ಸಂಪೂರ್ಣವಾಗಿ ಓದಿದವರು ಬಹಳ ಕಡಿಮೆ. ಆನಂದ್ ಅಂಬೇಡ್ಕರ್‌ರನ್ನು ಆಳವಾಗಿ ಅಧ್ಯಯನ ಮಾಡಿದ್ದೇ ಅಲ್ಲದೇ ಮಾರ್ಕ್ಸಿಸಂಅನ್ನು ಕೂಡ ಆಳವಾಗಿ ಅಧ್ಯಯನ ಮಾಡಿದವರು. ಮಾರ್ಕ್ಸಿಸಂನ ಚಾರಿತ್ರಿಕ, ತಾತ್ವಿಕ, ನೈತಿಕ ದೃಷ್ಟಿಕೋನಗಳನ್ನು ಹೆಚ್ಚು ಸಮಗ್ರವಾಗಿ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನ ಮಾಡಿದವರು. ಬಹಳ ಆಶ್ಚರ್ಯವೆಂದರೆ ಗಾಂಧೀಜಿಯ ಬರಹಗಳನ್ನು ಬಹಳ ಗೌರವದಿಂದ ಓದುವುದೇ ಅಲ್ಲದೇ, ಗಾಂಧಿಯವರನ್ನು ಭಾರತೀಯ ಸಮಾಜ ಮತ್ತಷ್ಟು ಪರಿಣಿತಿಯಿಂದ ಅಂದಾಜು ಮಾಡಬೇಕೆಂದು ತೇಲ್ತುಂಬ್ಡೆ ವಾದಿಸುತ್ತಾರೆ. ಈ ಮೂರು ಚಿಂತನೆಗಳ ಧಾರೆಗಳ ಪ್ರಭಾವದಿಂದ ಅವರು ರಚಿಸಿದ 29 ಪುಸ್ತಕಗಳನ್ನು ನೋಡಬಹುದು. ಈ ಪುಸ್ತಕಗಳೆಲ್ಲಾ ಆನಂದ್ ಅವರ ಬೌದ್ಧಿಕ ಶಿಖರಕ್ಕೆ ಕನ್ನಡಿಯಾಗಿವೆ.

ಆನಂದ್ ಚಿಕ್ಕಂದಿನಿಂದಲೇ ಬಹಳ ಚುರುಕಾದ ವಿದ್ಯಾರ್ಥಿ. ಕಡು ಬಡತನದ ಕಾರಣಕ್ಕೆ ರಜೆಯಲ್ಲಿ ಮನೆಗಳಿಗೆ ಸುಣ್ಣ ಬಳಿಯಲು ಹೋಗಿ ಅದರಿಂದ ಬಂದ ಹಣದಿಂದ ವಿದ್ಯಾಭ್ಯಾಸ ಮಾಡಿದರು. ಒಮ್ಮೆ ನಾನು ಆನಂದ್ ಅವರ ತಾಯಿಯನ್ನು ಭೇಟಿಯಾದಾಗ ನಿಮ್ಮ ಮಗನಿಗೆ ಹೆಸರು ಪ್ರತಿಷ್ಟೆ ಎಲ್ಲಾ ಇದೆ, ಒಳ್ಳೆಯ ಮಗನಿಗೆ ತಾಯಿ ನೀವು ಅಂದಾಗ ನನ್ನ ಮುಖವನ್ನೆಲ್ಲಾ ತನ್ನ ಕೈಗಳಿಂದ ಅಪ್ಯಾಯಮಾನವಾಗಿ ಸವರಿದಳು. ಆ ತಾಯಿ ಮನಸ್ಸೆಲ್ಲಾ ಪ್ರೀತಿ ತುಂಬಿದ ಮನುಷ್ಯಳಂತೆ ಕಂಡರು. ಆನಂದ್ ಎಲೆಕ್ಟ್ರೀಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರು. ಆ ನಂತರ ಬಾಂಬೆ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. ಇದರ ಜೊತೆಗೆ ಪ್ರತಿಷ್ಠಿತ ಅಹ್ಮದಾಬಾದ್ ಐ.ಐ.ಎಮ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದರು. ಆಧುನಿಕ ಐ.ಟಿ ರಂಗದಲ್ಲಿ ಮೆಗಾ ಅನಾಲಿಟಿಕ್ಸ್‌ನಲ್ಲಿ ಪ್ರಾವಿಣ್ಯತೆ ಗಳಿಸಿದರು. ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದರು. ಅವರಿಗಿರುವ ಅನುಭವವನ್ನು ನೋಡಿ ಭಾರತ ಸರ್ಕಾರ ಅವರಿಗೆ ಪೆಟ್ರೋನೆಟ್ ಇಂಡಿಯಾ ಲಿಮಿಟೆಡ್‌ನಲ್ಲಿ ಜವಾಬ್ದಾರಿಯನ್ನು ನೀಡಿತು. ಈ ಅಪಾರವಾದ ಅನುಭವದಿಂದ ಮತ್ತೊಂದು ಪ್ರತಿಷ್ಠಿತ ಐಐಟಿ ಗೋರಕ್‌ಪುರ್‌ನಲ್ಲಿ ಪ್ರಾಧ್ಯಾಪಕರಾಗಿ ಆಹ್ವಾನಿಸಿ, ಮ್ಯಾನೇಜ್‌ಮೆಂಟ್ ಎಕಾನಾಮಿಕ್ಸ್ ಬೋಧನೆಯ ಜವಬ್ದಾರಿಯನ್ನು ನೀಡಿತು. ಅಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೇ ಗೋವಾ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಮೆಗಾ ಅನಾಲಿಟಿಕ್ಸ್ ಬೋಧಿಸುವುದಕ್ಕೆ ಆಹ್ವಾನಿಸಿತು. ಈ ವಲಯದಲ್ಲಿ ಪ್ರಾವೀಣ್ಯತೆ ಹೊಂದಿದ ಕೇವಲ ಇಪ್ಪತ್ತು ಜನ ನಿಪುಣರಲ್ಲಿ ಆನಂದ್ ಒಬ್ಬರು. ನಿಜಕ್ಕೂ ಈ ಅರ್ಹತೆಗಳಿಂದಲೇ ಕರ್ನಾಟಕದ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಆನಂದ್ ಈ ವಲಯಗಳಿಗೆ ಸೀಮಿತವಾಗಿದ್ದರೆ ಬಹುಶಃ ಭಾರತ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿಗಳನ್ನೇ ಕೊಡುತ್ತಿತ್ತು. ಆನಂದ್ ಅವರಿಗೆ ಇರುವ ಸಾಮಾಜಿಕ ಹಿನ್ನೆಲೆಯ ಕಾರಣ ಸಮಾಜದಲ್ಲಿ ಇರುವ ತಾರತಮ್ಯ, ಅಸಮಾನತೆ, ಬಡತನ, ಜಾತಿಪದ್ಧತಿ, ನಿರುದ್ಯೋಗ, ಭೂಮಿ ಸಮಸ್ಯೆ, ಜಾಗತೀಕರಣ, ಸಾಮ್ರಾಜ್ಯಶಾಹಿ ಲೂಟಿ, ಭೂಸ್ವಾಮ್ಯ ಸಂಬಂದಗಳು, ಶಿಕ್ಷಣ, ಆರೋಗ್ಯದಂತಹ ಸಮಸ್ಯೆಗಳ ಮೇಲೆ ಸ್ಪಂದಿಸುತ್ತಾ ಬಂದರು. ಒಂದು ಕಡೆ ತಮ್ಮ ಅನಲಿಟಿಕ್ಸ್ ಜವಾಬ್ದಾರಿಯನ್ನು ನಿರ್ವಹಿಸುತ್ತಾ ನಿರಂತರವಾಗಿ ಈ ಸಮಸ್ಯೆಗಳೆಲ್ಲವುಗಳ ಮೇಲೆ ಬರೆದರು. ಉದಾಹರಣೆಗೆ ಅವರು ರಚಿಸಿದ ಗುಣಮಟ್ಟದ ಪುಸ್ತಕ ಖೈರ್ಲಾಂಜಿ ಕೇವಲ ಹತ್ತು ದಿನಗಳಲ್ಲಿ ಬರೆದದ್ದು. ಅದು ಚೈನಾದ ಬೀಜಿಂಗ್‌ನಿಂದ ಕೀನ್ಯಾಗೆ ಪ್ರಯಾಣಿಸುತ್ತಾ ವಿಮಾನದಲ್ಲಿ, ವಿಮಾನಾಶ್ರಯದಲ್ಲಿ ಕಳೆದ ಸಮಯದಲ್ಲಿ ಬರೆದರು. ನವಯಾನ ಎನ್ನುವ ಪ್ರಕಾಶಕ ಸಂಸ್ಥೆಯ ಮುಖ್ಯಸ್ಥ ಎಸ್.ಆನಂದ್ ಈ ವಿಷಯವನ್ನು ಪ್ರಸ್ತಾಪಿಸುತ್ತಾ ಆನಂದ್ ಬಹಳ ಸೃಜನಶೀಲರೆನ್ನುತ್ತಾರೆ.

ಬ್ರಾಹ್ಮಣ್ಯದ ಸಿದ್ಧಾಂತ, ಜಾತಿ ವ್ಯವಸ್ಥೆ, ನಿಯೋ ಲಿಬರಲಿಸಂ, ಭೂಮಾಲೀಕತ್ವ, ಎಲ್ಲದಕ್ಕೂ ಮಿಗಿಲು ದೇಶದಲ್ಲಿ ಬಲಗೊಳ್ಳುತ್ತಿರುವ ಪ್ಯಾಸಿಸ್ಟ್ ಶಕ್ತಿಗಳ ಮೇಲೆ ಅವರು ಗಹನ ಚಿಂತನೆಯುಳ್ಳ ಬರಹಗಳನ್ನು ಬರೆದದ್ದೆ ಅಲ್ಲದೇ, ದೇಶದಲ್ಲಿರುವ ಬಡ ಸಮುದಾಯಗಳಿಗೆ ಡಾ.ಅಂಬೇಡ್ಕರ್ ಸೂಚಿಸಿದ ಹಾಗೆ ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿಯನ್ನು ತಲೆಯ ಮೇಲೆ ಹಾಕಿಕೊಂಡರು. ಬಡ ಸಮುದಾಯಗಳ ಮೇಲೆ, ದಲಿತರ ಮೇಲೆ ದಾಳಿಗಳು ನಡೆದರೆ ಆನಂದ್ ಖುದ್ದಾಗಿ ಅಲ್ಲಿಗೆ ಹೋಗಿ ಅವರ ಪರ ನಿಂತರು. ಹಳೆಯ ಮೆಹಬೂಬನಗರ್ ಜಿಲ್ಲೆಯ ಪಾತಪಲ್ಲೆ ಗ್ರಾಮದಲ್ಲಿ ದಲಿತರ ಮೇಲೆ ಬೋಯ ಸಮುದಾಯ ದಾಳಿ ಮಾಡಿದಾಗ ಎರಡು ಬಾರಿ ಊರಿಗೆ ತೆರಳಿ, ಹೋರಾಡಿ ನ್ಯಾಯ ಸಿಗುವ ಹಾಗೆ ಕೆಲಸ ಮಾಡಿದರು. ಡಾ.ಅಂಬೇಡ್ಕರ್ ಕುಟುಂಬದ ಸದಸ್ಯ ಬಂದರು ಎನ್ನುವುದು ದೊಡ್ಡ ಸುದ್ದಿಯಾಯಿತು. ನಾನು ಪಾತಪಲ್ಲೆಗೆ ಹೋದಾಗ ಬೋಯ ಸಮುದಾಯದವರು ಅಂಬೇಡ್ಕರ್ ಮೊಮ್ಮಗ ಬರುವಷ್ಟು ಅಪರಾಧ ನಾವು ಏನು ಮಾಡಿದ್ದೇವೆ ಎಂದರು. ಆನಂದ್ ಬಂದ ಕಾರಣದಿಂದ ಜಿಲ್ಲಾ ಆಡಳಿತ ಕೂಡ ಸ್ಪಂದಿಸಿತು. ಇದು ಕೇವಲ ಒಂದು ಉದಾಹರಣೆ. ಇಷ್ಟು ಅಪರೂಪವಾದ ವ್ಯಕ್ತಿಯನ್ನು ಯುಎಪಿಎ ಕಾಯ್ದೆಯ ಕೆಳಗೆ ಬಂಧಿಸುವುದು ಎಂದರೆ ದೇಶ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.

ಇಷ್ಟಕ್ಕೂ ಆನಂದ್ ಮಾಡಿದ ಅಪರಾಧವೇನು, ಅವರ ಮೇಲೆ ಹೊರೆಸಿದ ಅಪರಾಧವೇನಾಗಿತ್ತು? ಅವರ ಮೇಲೆ ಹೊರೆಸಿದ ಅಪರಾಧ ಭೀಮಾ ಕೊರೆಗಾಂವ್ ಘಟನೆಯ ಜೊತೆ ಸಂಬಂಧವಿದೆ, ಭೀಮಾ ಕೊರೆಗಾಂವ್ ಮಾವೋಯಿಸ್ಟ್ ಪಕ್ಷದ ಬೆಂಬಲದಿಂದ ನಡೆಯಿತೆನ್ನುವುದು ಪ್ರಧಾನವಾದ ಆರೋಪ. ಭೀಮಾ ಕೋರೆಗಾಂವ್ ನಿಜಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್ ರಾಜಕೀಯ ಹೋರಾಟದ ಶ್ರಮದ ಭಾಗ. ಅಂದಾಜು ಎರಡು ಶತಮಾನಗಳ ಕೆಳಗೆ ಬ್ರಾಹ್ಮಣ ಪೇಶ್ವೆಗಳನ್ನು ಸೋಲಿಸಿದ ಬ್ರಿಟಿಷ್ ಸೈನ್ಯದಲ್ಲಿ ದಲಿತರು ಮುಖ್ಯವಾದ ಪಾತ್ರ ನಿರ್ವಹಿಸಿದರು. ಈ ಘಟನೆಯ ಮೂಲಕ ದಲಿತರಲ್ಲಿ ಚೈತನ್ಯವನ್ನು, ಆತ್ಮವಿಶ್ವಾಸವನ್ನು ಬೆಳೆಸಬಹುದೆಂದು ಅಂಬೇಡ್ಕರ್ ಚಿಂತಿಸಿದರು. ಯಾವ ವರ್ಷವೂ ಇಲ್ಲದೇ 2018ರಲ್ಲಿಯೇ ಇದು ವಿವಾದಾಸ್ಪದವಾಗಿ ಬದಲಾಯಿತು. ಕೇಂದ್ರ, ಮಹಾರಾಷ್ಟ್ರ ಬಿಜೆಪಿ ಸರ್ಕಾರಗಳು ಇದನ್ನು ಬಳಸಿಕೊಂಡು ದೇಶದಲ್ಲಿನ ಹನ್ನೆರಡು ಅತ್ಯಂತ ಪ್ರತಿಭಾವಂತರನ್ನು ಅರೆಸ್ಟ್ ಮಾಡಿತು.

OBSERVE 16TH MAY AS JUSTICE DAY STAND WITH DR. ANAND TELTUMBDE AND OTHER ACTIVISTS

ಮೌಲ್ಯಗಳುಳ್ಳ, ಮೌಲಿಕ ಬದುಕು ನಡೆಸುತ್ತಿರುವ, ವ್ಯವಸ್ಥೆಯ ಜೊತೆ ರಾಜಿಯಾದರೇ ಅದೆಷ್ಟೋ ಬಿರುದು, ಪದವಿಗಳನ್ನಾದರೂ ಪಡೆದು ಜೀವನದಲ್ಲಿ ಸುಖವಾಗಿ ಬದುಕಬಲ್ಲವರಾಗಿದ್ದ ಆ 12 ಜನರು ಇಂದು ಈ ರೀತಿಯಲ್ಲಿ ಜೈಲಿನಲ್ಲಿ ಬಂಧಿಗಳಾಗಿದ್ದಾರೆ. ಮೊದಲಿಗೆ ಒಂಬತ್ತು ಮಂದಿಯನ್ನು ಪೂನಾ ಪೋಲಿಸರು ಬಂಧಿಸಿದರು. ಇದರಲ್ಲಿ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಹೊರಗಡೆ ಇದ್ದುಬಿಟ್ಟಿದ್ದರು. ಆನಂದ್ ವಿಷಯದಲ್ಲಿ ಬಾಂಬೆ ಹೈಕೋರ್ಟ್, ಹಾಗೆಯೇ ನೌಲಾಖ ವಿಷಯದಲ್ಲಿ ದೆಹಲಿ ಹೈಕೋರ್ಟ್ ಕೆಲವು ತಾಂತ್ರಿಕ ಲೋಪಗಳಿಂದ ಸ್ಟೇ ಕೊಟ್ಟಿದ್ದರು. ಈ ಸ್ಟೇ ಮುಂದುವರೆಯುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರ ಹೋಯಿತು. ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರದ ಪಾಲುದಾರರನ್ನು ನಾವು ಭೇಟಿಯಾಗಿದ್ದೆವು. ಭೀಮಾ ಕೊರೇಗಾಂವ್ ಘಟನೆ ಹಾಗೂ ಪ್ರಧಾನಮಂತ್ರಿ ಮೇಲೆ ಹತ್ಯೆಗೆ ಪಿತೂರಿ ಎನ್ನುವುದು ಕೇವಲ ಕಾಲ್ಪನಿಕ, ಇವು ಅಮಾಯಕರ ಮೇಲೆ ಹಾಕಿದ ಕೇಸುಗಳೆಂದು ಎನ್.ಸಿ.ಪಿ ಹಿರಿಯ ನಾಯಕ ಶರದ್ ಪವಾರ್ ನಮ್ಮೊಡನೆ ಹೇಳಿದ್ದರು.

ಇದಾದ ಕೆಲವೇ ದಿನಗಳಲ್ಲಿ, ಪ್ರಕರಣ ದಾಖಲಾದ 18ತಿಂಗಳ ನಂತರ ಕೇಂದ್ರ ಸರ್ಕಾರವು ಈ ಒಟ್ಟು ಪ್ರಕರಣಗಳನ್ನು ಮಹಾರಾಷ್ಟ್ರ ಸರ್ಕಾರದ ವ್ಯಾಪ್ತಿಯಿಂದ ತೆಗೆದು ತಾವೇ ಇದನ್ನು ಎನ್.ಐ.ಎ ಮುಖಾಂತರ ನಿಭಾಯಿಸುತ್ತೇವೆಂದು ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿತು. ಈ ನಿರ್ಣಯದ ನಂತರ ಆನಂದ್ ತೇಲ್ತುಂಬ್ಡೆ, ಗೌತಮ್ ನೌಲಾಖ ಅವರ ಬಂಧನಕ್ಕಿದ್ದ ತಡೆಯಾಜ್ಞೆ ತೆರವಾಗಿ ಈಗ ಬಂಧವಾಗಿದ್ದಾರೆ.
ಆನಂದ್ ಅವರ ಬಂಧನವನ್ನು ದೇಶದೆಲ್ಲೆಡೆ ಅಲ್ಲದೇ, ಅಂತಾರಾಷ್ಟ್ರೀಯವಾಗಿಯೂ ಚಿಂತಕರು ಜನಸಾಮಾನ್ಯರು ಖಂಡಿಸಿದ್ದಾರೆ. ನೋಮ್ ಚಾಮ್ಸ್ಕಿ ಸೇರಿದಂತೆ ಹಲವು ವಿದ್ವಾಂಸರು ಈ ಬಂಧನದ ವಿರುದ್ಧ ಪ್ರತಿಭಟಿಸಿದರು. ಕಾಕತಾಳೀಯವೇ ಆದರೂ ಬಾಬಾ ಸಾಹೇಬ್ ಅಂಬೇಡ್ಕರ್ 129ರ ಜಯಂತಿಯ ದಿನವೇ ಡಾ.ಅಂಬೇಡ್ಕರ್ ಕುಟುಂಬ ಸದಸ್ಯ ಮತ್ತು ಅವರ ಬೌದ್ಧಿಕ ವಾರಸುದಾರ ಹಾಗೂ ಚಿಂತಕ ಆನಂದ್ ತೇಲ್ತುಂಬ್ಡೆ ಜೈಲಿಗೆ ಹೋಗಬೇಕಾಗಿ ಬಂದಿದ್ದು ಒಂದು ಐತಿಹಾಸಿಕ ದುರಂತ. ಒಂದು ಕಡೆ ಅಂಬೇಡ್ಕರ್‌ವರಿಗೆ ಗೌರವ ಸೂಚಿಸುತ್ತಲೇ ಆತನ ಕುಟುಂಬ ಸದಸ್ಯನನ್ನು ಜೈಲು ಪಾಲು ಮಾಡುತ್ತಿರುವುದರಲ್ಲಿ ಸರ್ಕಾರದ ದ್ವಂದ್ವ ನೀತಿ ಕಾಣಿಸುತ್ತದೆ ಎಂದು ಆನಂದ್ ಹೇಳಿರುವುದು ಎಲ್ಲರನ್ನು ಆಲೋಚಿಸುವಂತೆ ಮಾಡುತ್ತಿದೆ. ದೇಶವು ತನ್ನ ಸ್ವಭಾವವನ್ನ ತನಗೆ ತಿಳಿಯದ ಹಾಗೆಯೇ ಬಹಿರಂಗಪಡಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನದ ಅವಶ್ಯಕತೆ ಇಲ್ಲ.

ಪ್ರೊ. ಜಿ. ಹರಗೋಪಾಲ್,
ಹಿರಿಯ ಚಿಂತಕ ಮತ್ತು ರಾಜಕೀಯ ಶಾಸ್ತ್ರಜ್ಞ. ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಲ್ಲದೆ, ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಸೇರಿದಂತೆ ದೇಶ ವಿದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಹಲವು ಚಳವಳಿಗಳನ್ನು ಮುನ್ನಡೆಸಿದ್ದಾರೆ.

ಅನುವಾದ: ಅನಿಲ್‌ಕುಮಾರ್ ಚಿಕ್ಕದಾಳವಟ್ಟ


ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...