Homeಕರ್ನಾಟಕಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ನೆರೆ ಪರಿಹಾರಕ್ಕೆ, ಕೋವಿಡ್ ಚಿಕಿತ್ಸೆಗೆ ನೀಡಲು ಹಣವಿಲ್ಲದೆ ಪರದಾಡುವ ಸರ್ಕಾರ ಮಠಗಳಿಗೆ ಕಳೆದ ವಾರವಷ್ಟೆ 46 ಕೋಟಿ ಹಣ ತೆತ್ತಿದ್ದು ಗುಟ್ಟೇನಲ್ಲ ಎನ್ನುತ್ತಾರೆ ಹಿರಿಯ ಬರಹಗಾರ ಡಾ.ಬಿ.ಎಲ್ ವೇಣು

- Advertisement -
- Advertisement -

ರಾಜ್ಯದಲ್ಲಿನ ಕೆಲವು ಸ್ವಾಮೀಜಿಗಳು ರಾಜಕಾರಣದ ಉಸಾಬರಿಗೆ ಬಿದ್ದಿರುವ ಕುರಿತು ಓದಿದೆ. ನನಗೂ ಬರೆಯಬೇಕೆನಿಸಿತು. ಮಠಾಧೀಶರುಗಳ ಕುರಿತು ನಾನೇನು ಹೊಸದಾಗಿ ಬರೆಯುತ್ತಿರುವವನಲ್ಲ. “ಮಠಗಳು ದೇಶಕ್ಕೆ ಶಾಪ” ಎಂಬ ಕೃತಿ ಬರೆದು ವಿವಾದಕ್ಕೀಡಾದವನು ನಾನು. ಇತ್ತೀಚೆಗಂತೂ ಮಠಾಧೀಶರುಗಳು ಅದರಲ್ಲಿಯೂ ಸುಪ್ರೀಂ ಪವರ್ ಮುಖ್ಯಮಂತ್ರಿಗಳ ಎದುರೇ ಗೂಳಿಗಳಂತೆ ಗುಟುರು ಹಾಕಿ ತಮ್ಮ ಮಠಕ್ಕೆ ಬೇಕಾದ ಸವಲತ್ತು, ಕೋಟಿಗಟ್ಟಲೆ ಅನುದಾನವನ್ನು ಬೇಡದೆ ಪಡೆಯುವಷ್ಟು ಪ್ರಭಾವಿತರಾಗಿಬಿಟ್ಟಿದ್ದಾರೆ. ಧರ್ಮಾಂಧ ಸರ್ಕಾರವು ಮತಗಳಿಕೆಗಾಗಿ ಮಠಗಳನ್ನು ಓಲೈಸುವ ಗೀಳಿಗೆ ಬಿದ್ದಂತಿದೆ.

ನೆರೆ ಪರಿಹಾರಕ್ಕೆ, ಕೋವಿಡ್ ಚಿಕಿತ್ಸೆಗೆ ನೀಡಲು ಹಣವಿಲ್ಲದೆ ಪರದಾಡುವ ಸರ್ಕಾರ ಮಠಗಳಿಗೆ ಕಳೆದ ವಾರವಷ್ಟೆ 46 ಕೋಟಿ ಹಣ ತೆತ್ತಿದ್ದು ಗುಟ್ಟೇನಲ್ಲ. ಇದೆಲ್ಲಾ ಹಾಳಾಗಿಹೋಗಲಿ ಎಂದರೆ ಮುಖ್ಯಮಂತ್ರಿಗಳ ಎದುರೇ ತಮ್ಮ ಜಾತಿಯವರನ್ನೆ ಮಂತ್ರಿಗಳನ್ನಾಗಿ ಮಾಡಿರೆಂದು ಶಿಪಾರಸ್ ಮಾಡುವುದು, ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಒಬ್ಬ ಸ್ವಾಮೀಜಿ ಗರಂ ಆದ್ರೆ, ಮತ್ತೊಬ್ಬ, ವೀರಶೈವ ಲಿಂಗಾಯಿತರನ್ನು ’ಪ್ರವರ್ಗ-2ಎ’ಕ್ಕೆ ಸೇರಿಸಿ ಎಂದು ಹುಕುಂ ಮಾಡುತ್ತಾರೆ. ಮಠಾಧೀಶರಿಗೆ ರಾಜಕಾರಣವೇಕೆಂದಿರೋ? ಹಿಂದೆಯೂ ರಾಜರುಗಳಿಗೆ ರಾಜಗುರುಗಳಿದ್ದು ಮಾರ್ಗದರ್ಶನ ಮಾಡುತ್ತಿರಲಿಲ್ಲವೆ ಎಂಬ ಸಬೂಬು ಬೇರೆ.
ನಿಜ ಹಕ್ಕಬುಕ್ಕರಿಗೆ ವಿದ್ಯಾರಣ್ಯ, ಚಂದ್ರಗುಪ್ತನಿಗೆ ಚಾಣಕ್ಯ, ಮದಕರಿನಾಯಕರಿಗೆ ಮರುಘೇಸ್ವಾಮಿಗಳಂಥವರು ಇದ್ದರು. ಅವರೆಂದೂ ತಾವಾಗಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದವರಲ್ಲ.

ತಮ್ಮ ಜಾತಿಮತ ಸಮುದಾಯಗಳ ಹಿತಾಕಾಂಕ್ಷಿಗಳಾದವರೂ ಅಲ್ಲ. ಜಾತಿ ಮೀಸಲಾತಿಗಾಗಿ ಒಬ್ಬ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಲ್ಲದೆ, ಕೇಳಿದಷ್ಟು ಮೀಸಲಾತಿಗೆ ಸಮ್ಮತಿಸದಿದ್ದರೆ ಸಚಿವರಿಂದ ರಾಜಿನಾಮೆ ಕೊಡಿಸುತ್ತೇನೆಂದು ಬೆದರಿಸುತ್ತಾರೆ. ನಿರ್ದಿಷ್ಟ ಸಮುದಾಯಗಳನ್ನು ’ಒಬಿಸಿ’ ಪಟ್ಟಿಗೆ ಸೇರಿಸಿಬಿಡಿ, ’ನಿಮಗೇನೂ ಆಗದು, ಧೈರ್ಯದಿಂದಿರಿ. ನೀವೇ ಮುಂದುವರೆಯುತ್ತೀರಿ’ ಎಂದೆಲ್ಲಾ ಮುಖ್ಯಮಂತ್ರಿಗಳಿಗೆ ಬಹಿರಂಗ ಸಭೆಯಲ್ಲೇ ಸ್ವಾಮೀಜಿಯೊಬ್ಬರು ಅಭಯಹಸ್ತ ತೋರಿದರೆ ಅಲ್ಲಿದ್ದ ಇಬ್ಬರು ಕಾವಿಗಳದ್ದೂ ಕುಮ್ಮಕ್ಕು ಕಂಡು ಬಂತು! ಕೆಲವರಂತೂ ಇಂತಹ ಪಕ್ಷಕ್ಕೆ ಓಟು ಹಾಕಿರೆಂದು ಫರಮಾನು ಹೊರಡಿಸಿ ಗೆಲ್ಲಿಸುವಷ್ಟು ಪ್ರಭಾವಿಗಳು. ಸರ್ಕಾರವನ್ನು ಉರುಳಿಸಬಲ್ಲವೆಂಬಷ್ಟು ಪ್ರಭಾವಿ ಮಠಾಧೀಶರೂ ಹುಟ್ಟಿಕೊಳ್ಳುತ್ತಿರುವಲ್ಲಿ ಇದೇನು ಸರ್ಕಾರದಲ್ಲಿನ ದೌರ್ಬಲ್ಯವೋ? ಮಠಾಧೀಶರುಗಳೇ ಧರ್ಮಾಧರ್ಮಗಳನ್ನು ಮರೆತು ರಾಜಕೀಯ ಲಾಭ ಹಾಗೂ ಬರುವ ಅನುದಾನಕ್ಕಾಗಿ ನಿರ್ಲಜ್ಜರಾಗುತ್ತಿದ್ದಾರೋ ತೋಚದಂತಾಗಿದೆ.

ಸಾಮಾಜಿಕ ನ್ಯಾಯ, ಜನಪರ ಹೋರಾಟಗಳಲ್ಲಿ ತೊಡಗದ ಸ್ವಾಮೀಜಿಯೊಬ್ಬರು ತಮ್ಮ ಜಾತಿ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು – ಮೀಸಲಾತಿ ನೀಡಬೇಕೆಂದು ಕೂಡಲ ಸಂಗಮದಿಂದ ಪಾದಯಾತ್ರೆ ಮಾಡುತ್ತೇನೆಂದು ಜಬರ್ ಮಾಡಿದರೆ, ಮತ್ತೊಬ್ಬ ಸ್ವಾಮೀಜಿ ಕಾಗಿನೆಲೆಯಿಂದ ಪಾದಯಾತ್ರೆ ನಡೆಸುತ್ತೇನೆಂದು ಸರ್ಕಾರದ ಪ್ರಾಣ ಹಿಂಡುತ್ತಿದ್ದಾರೆ! ಜಗದಹಿತವನ್ನು ಬಯಸುವವ ಜಗದ್ಗುರು ಎನ್ನುವುದಾದರೆ ಇವರುಗಳಲ್ಲಿ ಯಾರೂ ಜಗದ್ಗುರುಗಳಲ್ಲ. ಎಲ್ಲರೂ ಜಾತಿ ಗುರುಗಳೆ. ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ. ಜಾತಿಗೊಂದು ಮಠಕಟ್ಟಿ ಸರ್ವರಿಗೂ ಸಮಾನತೆ ದೊರಕಿಸಿಕೊಟ್ಟನೆಂದು ಬೀಗುವವರು ಬಸವಣ್ಣ ಜಾತಿವಿನಾಶಕ್ಕೆ ಪಣತೊಟ್ಟು ಸರ್ವ ಜಾತಿಯ ಜನರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಅಂತರ್ಜಾತೀಯ ವಿವಾಹಕ್ಕೆ ನಾಂದಿ ಹಾಡಿದ್ದನ್ನೇ ಮರೆತುಬಿಡುತ್ತಾರೆ.

ಮರೆಯಲಿ ಬಿಡಿ. ತಮ್ಮ ಸಮುದಾಯಗಳ ಶ್ರೇಯಸ್ಸಿಗೆ ಬಹಿರಂಗವಾಗಿಯೇ ಬ್ಲಾಕ್‌ಮೇಲ್‌ಗಿಳಿದ ಈ ಕಾವಿಧಾರಿಗಳ ಕಾವಿ ಕಿತ್ತೆಸೆದು ಖಾದಿ ಧರಿಸಿ ಕಣಕ್ಕಿಳಿದು ತಮ್ಮ ತಮ್ಮ ಸಮುದಾಯವನ್ನು ಸಂರಕ್ಷಿಸಲಿ. ಕಾವಿಗೆ ಮಾತ್ರ ಕಳಂಕ ತರುವುದು ಬೇಡ, ಬೇಕಾದರೆ ಉತ್ತರಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ಇದ್ದಾರೆ, ಉಮಾಭಾರತಿ, ಸಾಕ್ಷಿ ಮಹಾರಾಜರಂತೆ ಚುನಾವಣೆಗೇ ಇಳಿದುಬಿಡಲಿ. ಎಡಬಿಡಂಗಿತನ ತೋರದೆ ನೇರವಾಗಿ ರಾಜಕೀಯಕ್ಕೆ ಜಂಪ್ ಮಾಡಿ ಸರ್ಕಾರ ರಚಿಸುವ ಹಂತಕ್ಕೇ ಹೋಗಲಿ.

ರಾಜ್ಯದಲ್ಲಿನ ಕಾವಿ ಮತ್ತು ಖಾದಿಗಳು ಕನಿಷ್ಟ ಅಂತರವನ್ನಾದರೂ ಕಾಯ್ದುಕೊಂಡರೆ ಉಭಯತ್ರರಿಗೂ, ನಾಡಿಗೂ ಶುಭ. ಇಷ್ಟಾದರೂ ಇವರುಗಳಲ್ಲಾದರೂ ಒಗ್ಗಟ್ಟು ಉಂಟೋ! ಕಾವಿಗಳ ಕೈಗೇ ಸದ್ಭಕ್ತರು ಅಧಿಕಾರ ಕೊಟ್ಟರೆ ಸರ್ಕಾರ ನಡೆಸಿಯಾರೆ? ಸ್ವಾಮಿಗಳ ನಡೆ ಪ್ರಜಾಪ್ರಭುತ್ವದಲ್ಲಿ ನೋಡುವರ ಎದುರು ನಗೆಪಾಟಲಾಗದೆ ಮಾದರಿಯಾಗಿರಬೇಕಲ್ಲವೆ.

  • ಡಾ. ಬಿ. ಎಲ್. ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ.


ಇದನ್ನೂ ಓದಿ: ತಮಿಳುನಾಡು: ರೈತ ಹೊರಾಟವನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಡಿಎಂಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...