Homeಕರ್ನಾಟಕಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ನೆರೆ ಪರಿಹಾರಕ್ಕೆ, ಕೋವಿಡ್ ಚಿಕಿತ್ಸೆಗೆ ನೀಡಲು ಹಣವಿಲ್ಲದೆ ಪರದಾಡುವ ಸರ್ಕಾರ ಮಠಗಳಿಗೆ ಕಳೆದ ವಾರವಷ್ಟೆ 46 ಕೋಟಿ ಹಣ ತೆತ್ತಿದ್ದು ಗುಟ್ಟೇನಲ್ಲ ಎನ್ನುತ್ತಾರೆ ಹಿರಿಯ ಬರಹಗಾರ ಡಾ.ಬಿ.ಎಲ್ ವೇಣು

- Advertisement -
- Advertisement -

ರಾಜ್ಯದಲ್ಲಿನ ಕೆಲವು ಸ್ವಾಮೀಜಿಗಳು ರಾಜಕಾರಣದ ಉಸಾಬರಿಗೆ ಬಿದ್ದಿರುವ ಕುರಿತು ಓದಿದೆ. ನನಗೂ ಬರೆಯಬೇಕೆನಿಸಿತು. ಮಠಾಧೀಶರುಗಳ ಕುರಿತು ನಾನೇನು ಹೊಸದಾಗಿ ಬರೆಯುತ್ತಿರುವವನಲ್ಲ. “ಮಠಗಳು ದೇಶಕ್ಕೆ ಶಾಪ” ಎಂಬ ಕೃತಿ ಬರೆದು ವಿವಾದಕ್ಕೀಡಾದವನು ನಾನು. ಇತ್ತೀಚೆಗಂತೂ ಮಠಾಧೀಶರುಗಳು ಅದರಲ್ಲಿಯೂ ಸುಪ್ರೀಂ ಪವರ್ ಮುಖ್ಯಮಂತ್ರಿಗಳ ಎದುರೇ ಗೂಳಿಗಳಂತೆ ಗುಟುರು ಹಾಕಿ ತಮ್ಮ ಮಠಕ್ಕೆ ಬೇಕಾದ ಸವಲತ್ತು, ಕೋಟಿಗಟ್ಟಲೆ ಅನುದಾನವನ್ನು ಬೇಡದೆ ಪಡೆಯುವಷ್ಟು ಪ್ರಭಾವಿತರಾಗಿಬಿಟ್ಟಿದ್ದಾರೆ. ಧರ್ಮಾಂಧ ಸರ್ಕಾರವು ಮತಗಳಿಕೆಗಾಗಿ ಮಠಗಳನ್ನು ಓಲೈಸುವ ಗೀಳಿಗೆ ಬಿದ್ದಂತಿದೆ.

ನೆರೆ ಪರಿಹಾರಕ್ಕೆ, ಕೋವಿಡ್ ಚಿಕಿತ್ಸೆಗೆ ನೀಡಲು ಹಣವಿಲ್ಲದೆ ಪರದಾಡುವ ಸರ್ಕಾರ ಮಠಗಳಿಗೆ ಕಳೆದ ವಾರವಷ್ಟೆ 46 ಕೋಟಿ ಹಣ ತೆತ್ತಿದ್ದು ಗುಟ್ಟೇನಲ್ಲ. ಇದೆಲ್ಲಾ ಹಾಳಾಗಿಹೋಗಲಿ ಎಂದರೆ ಮುಖ್ಯಮಂತ್ರಿಗಳ ಎದುರೇ ತಮ್ಮ ಜಾತಿಯವರನ್ನೆ ಮಂತ್ರಿಗಳನ್ನಾಗಿ ಮಾಡಿರೆಂದು ಶಿಪಾರಸ್ ಮಾಡುವುದು, ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಒಬ್ಬ ಸ್ವಾಮೀಜಿ ಗರಂ ಆದ್ರೆ, ಮತ್ತೊಬ್ಬ, ವೀರಶೈವ ಲಿಂಗಾಯಿತರನ್ನು ’ಪ್ರವರ್ಗ-2ಎ’ಕ್ಕೆ ಸೇರಿಸಿ ಎಂದು ಹುಕುಂ ಮಾಡುತ್ತಾರೆ. ಮಠಾಧೀಶರಿಗೆ ರಾಜಕಾರಣವೇಕೆಂದಿರೋ? ಹಿಂದೆಯೂ ರಾಜರುಗಳಿಗೆ ರಾಜಗುರುಗಳಿದ್ದು ಮಾರ್ಗದರ್ಶನ ಮಾಡುತ್ತಿರಲಿಲ್ಲವೆ ಎಂಬ ಸಬೂಬು ಬೇರೆ.
ನಿಜ ಹಕ್ಕಬುಕ್ಕರಿಗೆ ವಿದ್ಯಾರಣ್ಯ, ಚಂದ್ರಗುಪ್ತನಿಗೆ ಚಾಣಕ್ಯ, ಮದಕರಿನಾಯಕರಿಗೆ ಮರುಘೇಸ್ವಾಮಿಗಳಂಥವರು ಇದ್ದರು. ಅವರೆಂದೂ ತಾವಾಗಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದವರಲ್ಲ.

ತಮ್ಮ ಜಾತಿಮತ ಸಮುದಾಯಗಳ ಹಿತಾಕಾಂಕ್ಷಿಗಳಾದವರೂ ಅಲ್ಲ. ಜಾತಿ ಮೀಸಲಾತಿಗಾಗಿ ಒಬ್ಬ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಲ್ಲದೆ, ಕೇಳಿದಷ್ಟು ಮೀಸಲಾತಿಗೆ ಸಮ್ಮತಿಸದಿದ್ದರೆ ಸಚಿವರಿಂದ ರಾಜಿನಾಮೆ ಕೊಡಿಸುತ್ತೇನೆಂದು ಬೆದರಿಸುತ್ತಾರೆ. ನಿರ್ದಿಷ್ಟ ಸಮುದಾಯಗಳನ್ನು ’ಒಬಿಸಿ’ ಪಟ್ಟಿಗೆ ಸೇರಿಸಿಬಿಡಿ, ’ನಿಮಗೇನೂ ಆಗದು, ಧೈರ್ಯದಿಂದಿರಿ. ನೀವೇ ಮುಂದುವರೆಯುತ್ತೀರಿ’ ಎಂದೆಲ್ಲಾ ಮುಖ್ಯಮಂತ್ರಿಗಳಿಗೆ ಬಹಿರಂಗ ಸಭೆಯಲ್ಲೇ ಸ್ವಾಮೀಜಿಯೊಬ್ಬರು ಅಭಯಹಸ್ತ ತೋರಿದರೆ ಅಲ್ಲಿದ್ದ ಇಬ್ಬರು ಕಾವಿಗಳದ್ದೂ ಕುಮ್ಮಕ್ಕು ಕಂಡು ಬಂತು! ಕೆಲವರಂತೂ ಇಂತಹ ಪಕ್ಷಕ್ಕೆ ಓಟು ಹಾಕಿರೆಂದು ಫರಮಾನು ಹೊರಡಿಸಿ ಗೆಲ್ಲಿಸುವಷ್ಟು ಪ್ರಭಾವಿಗಳು. ಸರ್ಕಾರವನ್ನು ಉರುಳಿಸಬಲ್ಲವೆಂಬಷ್ಟು ಪ್ರಭಾವಿ ಮಠಾಧೀಶರೂ ಹುಟ್ಟಿಕೊಳ್ಳುತ್ತಿರುವಲ್ಲಿ ಇದೇನು ಸರ್ಕಾರದಲ್ಲಿನ ದೌರ್ಬಲ್ಯವೋ? ಮಠಾಧೀಶರುಗಳೇ ಧರ್ಮಾಧರ್ಮಗಳನ್ನು ಮರೆತು ರಾಜಕೀಯ ಲಾಭ ಹಾಗೂ ಬರುವ ಅನುದಾನಕ್ಕಾಗಿ ನಿರ್ಲಜ್ಜರಾಗುತ್ತಿದ್ದಾರೋ ತೋಚದಂತಾಗಿದೆ.

ಸಾಮಾಜಿಕ ನ್ಯಾಯ, ಜನಪರ ಹೋರಾಟಗಳಲ್ಲಿ ತೊಡಗದ ಸ್ವಾಮೀಜಿಯೊಬ್ಬರು ತಮ್ಮ ಜಾತಿ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು – ಮೀಸಲಾತಿ ನೀಡಬೇಕೆಂದು ಕೂಡಲ ಸಂಗಮದಿಂದ ಪಾದಯಾತ್ರೆ ಮಾಡುತ್ತೇನೆಂದು ಜಬರ್ ಮಾಡಿದರೆ, ಮತ್ತೊಬ್ಬ ಸ್ವಾಮೀಜಿ ಕಾಗಿನೆಲೆಯಿಂದ ಪಾದಯಾತ್ರೆ ನಡೆಸುತ್ತೇನೆಂದು ಸರ್ಕಾರದ ಪ್ರಾಣ ಹಿಂಡುತ್ತಿದ್ದಾರೆ! ಜಗದಹಿತವನ್ನು ಬಯಸುವವ ಜಗದ್ಗುರು ಎನ್ನುವುದಾದರೆ ಇವರುಗಳಲ್ಲಿ ಯಾರೂ ಜಗದ್ಗುರುಗಳಲ್ಲ. ಎಲ್ಲರೂ ಜಾತಿ ಗುರುಗಳೆ. ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ. ಜಾತಿಗೊಂದು ಮಠಕಟ್ಟಿ ಸರ್ವರಿಗೂ ಸಮಾನತೆ ದೊರಕಿಸಿಕೊಟ್ಟನೆಂದು ಬೀಗುವವರು ಬಸವಣ್ಣ ಜಾತಿವಿನಾಶಕ್ಕೆ ಪಣತೊಟ್ಟು ಸರ್ವ ಜಾತಿಯ ಜನರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಅಂತರ್ಜಾತೀಯ ವಿವಾಹಕ್ಕೆ ನಾಂದಿ ಹಾಡಿದ್ದನ್ನೇ ಮರೆತುಬಿಡುತ್ತಾರೆ.

ಮರೆಯಲಿ ಬಿಡಿ. ತಮ್ಮ ಸಮುದಾಯಗಳ ಶ್ರೇಯಸ್ಸಿಗೆ ಬಹಿರಂಗವಾಗಿಯೇ ಬ್ಲಾಕ್‌ಮೇಲ್‌ಗಿಳಿದ ಈ ಕಾವಿಧಾರಿಗಳ ಕಾವಿ ಕಿತ್ತೆಸೆದು ಖಾದಿ ಧರಿಸಿ ಕಣಕ್ಕಿಳಿದು ತಮ್ಮ ತಮ್ಮ ಸಮುದಾಯವನ್ನು ಸಂರಕ್ಷಿಸಲಿ. ಕಾವಿಗೆ ಮಾತ್ರ ಕಳಂಕ ತರುವುದು ಬೇಡ, ಬೇಕಾದರೆ ಉತ್ತರಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ಇದ್ದಾರೆ, ಉಮಾಭಾರತಿ, ಸಾಕ್ಷಿ ಮಹಾರಾಜರಂತೆ ಚುನಾವಣೆಗೇ ಇಳಿದುಬಿಡಲಿ. ಎಡಬಿಡಂಗಿತನ ತೋರದೆ ನೇರವಾಗಿ ರಾಜಕೀಯಕ್ಕೆ ಜಂಪ್ ಮಾಡಿ ಸರ್ಕಾರ ರಚಿಸುವ ಹಂತಕ್ಕೇ ಹೋಗಲಿ.

ರಾಜ್ಯದಲ್ಲಿನ ಕಾವಿ ಮತ್ತು ಖಾದಿಗಳು ಕನಿಷ್ಟ ಅಂತರವನ್ನಾದರೂ ಕಾಯ್ದುಕೊಂಡರೆ ಉಭಯತ್ರರಿಗೂ, ನಾಡಿಗೂ ಶುಭ. ಇಷ್ಟಾದರೂ ಇವರುಗಳಲ್ಲಾದರೂ ಒಗ್ಗಟ್ಟು ಉಂಟೋ! ಕಾವಿಗಳ ಕೈಗೇ ಸದ್ಭಕ್ತರು ಅಧಿಕಾರ ಕೊಟ್ಟರೆ ಸರ್ಕಾರ ನಡೆಸಿಯಾರೆ? ಸ್ವಾಮಿಗಳ ನಡೆ ಪ್ರಜಾಪ್ರಭುತ್ವದಲ್ಲಿ ನೋಡುವರ ಎದುರು ನಗೆಪಾಟಲಾಗದೆ ಮಾದರಿಯಾಗಿರಬೇಕಲ್ಲವೆ.

  • ಡಾ. ಬಿ. ಎಲ್. ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ.


ಇದನ್ನೂ ಓದಿ: ತಮಿಳುನಾಡು: ರೈತ ಹೊರಾಟವನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಡಿಎಂಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...