Homeಕರ್ನಾಟಕಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ: ಈ ಮಠಾಧೀಶರಿಗೇನಾಗಿದೆ?

ನೆರೆ ಪರಿಹಾರಕ್ಕೆ, ಕೋವಿಡ್ ಚಿಕಿತ್ಸೆಗೆ ನೀಡಲು ಹಣವಿಲ್ಲದೆ ಪರದಾಡುವ ಸರ್ಕಾರ ಮಠಗಳಿಗೆ ಕಳೆದ ವಾರವಷ್ಟೆ 46 ಕೋಟಿ ಹಣ ತೆತ್ತಿದ್ದು ಗುಟ್ಟೇನಲ್ಲ ಎನ್ನುತ್ತಾರೆ ಹಿರಿಯ ಬರಹಗಾರ ಡಾ.ಬಿ.ಎಲ್ ವೇಣು

- Advertisement -
- Advertisement -

ರಾಜ್ಯದಲ್ಲಿನ ಕೆಲವು ಸ್ವಾಮೀಜಿಗಳು ರಾಜಕಾರಣದ ಉಸಾಬರಿಗೆ ಬಿದ್ದಿರುವ ಕುರಿತು ಓದಿದೆ. ನನಗೂ ಬರೆಯಬೇಕೆನಿಸಿತು. ಮಠಾಧೀಶರುಗಳ ಕುರಿತು ನಾನೇನು ಹೊಸದಾಗಿ ಬರೆಯುತ್ತಿರುವವನಲ್ಲ. “ಮಠಗಳು ದೇಶಕ್ಕೆ ಶಾಪ” ಎಂಬ ಕೃತಿ ಬರೆದು ವಿವಾದಕ್ಕೀಡಾದವನು ನಾನು. ಇತ್ತೀಚೆಗಂತೂ ಮಠಾಧೀಶರುಗಳು ಅದರಲ್ಲಿಯೂ ಸುಪ್ರೀಂ ಪವರ್ ಮುಖ್ಯಮಂತ್ರಿಗಳ ಎದುರೇ ಗೂಳಿಗಳಂತೆ ಗುಟುರು ಹಾಕಿ ತಮ್ಮ ಮಠಕ್ಕೆ ಬೇಕಾದ ಸವಲತ್ತು, ಕೋಟಿಗಟ್ಟಲೆ ಅನುದಾನವನ್ನು ಬೇಡದೆ ಪಡೆಯುವಷ್ಟು ಪ್ರಭಾವಿತರಾಗಿಬಿಟ್ಟಿದ್ದಾರೆ. ಧರ್ಮಾಂಧ ಸರ್ಕಾರವು ಮತಗಳಿಕೆಗಾಗಿ ಮಠಗಳನ್ನು ಓಲೈಸುವ ಗೀಳಿಗೆ ಬಿದ್ದಂತಿದೆ.

ನೆರೆ ಪರಿಹಾರಕ್ಕೆ, ಕೋವಿಡ್ ಚಿಕಿತ್ಸೆಗೆ ನೀಡಲು ಹಣವಿಲ್ಲದೆ ಪರದಾಡುವ ಸರ್ಕಾರ ಮಠಗಳಿಗೆ ಕಳೆದ ವಾರವಷ್ಟೆ 46 ಕೋಟಿ ಹಣ ತೆತ್ತಿದ್ದು ಗುಟ್ಟೇನಲ್ಲ. ಇದೆಲ್ಲಾ ಹಾಳಾಗಿಹೋಗಲಿ ಎಂದರೆ ಮುಖ್ಯಮಂತ್ರಿಗಳ ಎದುರೇ ತಮ್ಮ ಜಾತಿಯವರನ್ನೆ ಮಂತ್ರಿಗಳನ್ನಾಗಿ ಮಾಡಿರೆಂದು ಶಿಪಾರಸ್ ಮಾಡುವುದು, ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಒಬ್ಬ ಸ್ವಾಮೀಜಿ ಗರಂ ಆದ್ರೆ, ಮತ್ತೊಬ್ಬ, ವೀರಶೈವ ಲಿಂಗಾಯಿತರನ್ನು ’ಪ್ರವರ್ಗ-2ಎ’ಕ್ಕೆ ಸೇರಿಸಿ ಎಂದು ಹುಕುಂ ಮಾಡುತ್ತಾರೆ. ಮಠಾಧೀಶರಿಗೆ ರಾಜಕಾರಣವೇಕೆಂದಿರೋ? ಹಿಂದೆಯೂ ರಾಜರುಗಳಿಗೆ ರಾಜಗುರುಗಳಿದ್ದು ಮಾರ್ಗದರ್ಶನ ಮಾಡುತ್ತಿರಲಿಲ್ಲವೆ ಎಂಬ ಸಬೂಬು ಬೇರೆ.
ನಿಜ ಹಕ್ಕಬುಕ್ಕರಿಗೆ ವಿದ್ಯಾರಣ್ಯ, ಚಂದ್ರಗುಪ್ತನಿಗೆ ಚಾಣಕ್ಯ, ಮದಕರಿನಾಯಕರಿಗೆ ಮರುಘೇಸ್ವಾಮಿಗಳಂಥವರು ಇದ್ದರು. ಅವರೆಂದೂ ತಾವಾಗಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದವರಲ್ಲ.

ತಮ್ಮ ಜಾತಿಮತ ಸಮುದಾಯಗಳ ಹಿತಾಕಾಂಕ್ಷಿಗಳಾದವರೂ ಅಲ್ಲ. ಜಾತಿ ಮೀಸಲಾತಿಗಾಗಿ ಒಬ್ಬ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಲ್ಲದೆ, ಕೇಳಿದಷ್ಟು ಮೀಸಲಾತಿಗೆ ಸಮ್ಮತಿಸದಿದ್ದರೆ ಸಚಿವರಿಂದ ರಾಜಿನಾಮೆ ಕೊಡಿಸುತ್ತೇನೆಂದು ಬೆದರಿಸುತ್ತಾರೆ. ನಿರ್ದಿಷ್ಟ ಸಮುದಾಯಗಳನ್ನು ’ಒಬಿಸಿ’ ಪಟ್ಟಿಗೆ ಸೇರಿಸಿಬಿಡಿ, ’ನಿಮಗೇನೂ ಆಗದು, ಧೈರ್ಯದಿಂದಿರಿ. ನೀವೇ ಮುಂದುವರೆಯುತ್ತೀರಿ’ ಎಂದೆಲ್ಲಾ ಮುಖ್ಯಮಂತ್ರಿಗಳಿಗೆ ಬಹಿರಂಗ ಸಭೆಯಲ್ಲೇ ಸ್ವಾಮೀಜಿಯೊಬ್ಬರು ಅಭಯಹಸ್ತ ತೋರಿದರೆ ಅಲ್ಲಿದ್ದ ಇಬ್ಬರು ಕಾವಿಗಳದ್ದೂ ಕುಮ್ಮಕ್ಕು ಕಂಡು ಬಂತು! ಕೆಲವರಂತೂ ಇಂತಹ ಪಕ್ಷಕ್ಕೆ ಓಟು ಹಾಕಿರೆಂದು ಫರಮಾನು ಹೊರಡಿಸಿ ಗೆಲ್ಲಿಸುವಷ್ಟು ಪ್ರಭಾವಿಗಳು. ಸರ್ಕಾರವನ್ನು ಉರುಳಿಸಬಲ್ಲವೆಂಬಷ್ಟು ಪ್ರಭಾವಿ ಮಠಾಧೀಶರೂ ಹುಟ್ಟಿಕೊಳ್ಳುತ್ತಿರುವಲ್ಲಿ ಇದೇನು ಸರ್ಕಾರದಲ್ಲಿನ ದೌರ್ಬಲ್ಯವೋ? ಮಠಾಧೀಶರುಗಳೇ ಧರ್ಮಾಧರ್ಮಗಳನ್ನು ಮರೆತು ರಾಜಕೀಯ ಲಾಭ ಹಾಗೂ ಬರುವ ಅನುದಾನಕ್ಕಾಗಿ ನಿರ್ಲಜ್ಜರಾಗುತ್ತಿದ್ದಾರೋ ತೋಚದಂತಾಗಿದೆ.

ಸಾಮಾಜಿಕ ನ್ಯಾಯ, ಜನಪರ ಹೋರಾಟಗಳಲ್ಲಿ ತೊಡಗದ ಸ್ವಾಮೀಜಿಯೊಬ್ಬರು ತಮ್ಮ ಜಾತಿ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು – ಮೀಸಲಾತಿ ನೀಡಬೇಕೆಂದು ಕೂಡಲ ಸಂಗಮದಿಂದ ಪಾದಯಾತ್ರೆ ಮಾಡುತ್ತೇನೆಂದು ಜಬರ್ ಮಾಡಿದರೆ, ಮತ್ತೊಬ್ಬ ಸ್ವಾಮೀಜಿ ಕಾಗಿನೆಲೆಯಿಂದ ಪಾದಯಾತ್ರೆ ನಡೆಸುತ್ತೇನೆಂದು ಸರ್ಕಾರದ ಪ್ರಾಣ ಹಿಂಡುತ್ತಿದ್ದಾರೆ! ಜಗದಹಿತವನ್ನು ಬಯಸುವವ ಜಗದ್ಗುರು ಎನ್ನುವುದಾದರೆ ಇವರುಗಳಲ್ಲಿ ಯಾರೂ ಜಗದ್ಗುರುಗಳಲ್ಲ. ಎಲ್ಲರೂ ಜಾತಿ ಗುರುಗಳೆ. ಯಾವುದೂ ಜಾತ್ಯತೀತ ಮಠವಲ್ಲ, ಎಲ್ಲವೂ ಜಾತಿಮಠಗಳೇ. ಜಾತಿಗೊಂದು ಮಠಕಟ್ಟಿ ಸರ್ವರಿಗೂ ಸಮಾನತೆ ದೊರಕಿಸಿಕೊಟ್ಟನೆಂದು ಬೀಗುವವರು ಬಸವಣ್ಣ ಜಾತಿವಿನಾಶಕ್ಕೆ ಪಣತೊಟ್ಟು ಸರ್ವ ಜಾತಿಯ ಜನರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಅಂತರ್ಜಾತೀಯ ವಿವಾಹಕ್ಕೆ ನಾಂದಿ ಹಾಡಿದ್ದನ್ನೇ ಮರೆತುಬಿಡುತ್ತಾರೆ.

ಮರೆಯಲಿ ಬಿಡಿ. ತಮ್ಮ ಸಮುದಾಯಗಳ ಶ್ರೇಯಸ್ಸಿಗೆ ಬಹಿರಂಗವಾಗಿಯೇ ಬ್ಲಾಕ್‌ಮೇಲ್‌ಗಿಳಿದ ಈ ಕಾವಿಧಾರಿಗಳ ಕಾವಿ ಕಿತ್ತೆಸೆದು ಖಾದಿ ಧರಿಸಿ ಕಣಕ್ಕಿಳಿದು ತಮ್ಮ ತಮ್ಮ ಸಮುದಾಯವನ್ನು ಸಂರಕ್ಷಿಸಲಿ. ಕಾವಿಗೆ ಮಾತ್ರ ಕಳಂಕ ತರುವುದು ಬೇಡ, ಬೇಕಾದರೆ ಉತ್ತರಪ್ರದೇಶದಲ್ಲಿನ ಯೋಗಿ ಆದಿತ್ಯನಾಥ ಇದ್ದಾರೆ, ಉಮಾಭಾರತಿ, ಸಾಕ್ಷಿ ಮಹಾರಾಜರಂತೆ ಚುನಾವಣೆಗೇ ಇಳಿದುಬಿಡಲಿ. ಎಡಬಿಡಂಗಿತನ ತೋರದೆ ನೇರವಾಗಿ ರಾಜಕೀಯಕ್ಕೆ ಜಂಪ್ ಮಾಡಿ ಸರ್ಕಾರ ರಚಿಸುವ ಹಂತಕ್ಕೇ ಹೋಗಲಿ.

ರಾಜ್ಯದಲ್ಲಿನ ಕಾವಿ ಮತ್ತು ಖಾದಿಗಳು ಕನಿಷ್ಟ ಅಂತರವನ್ನಾದರೂ ಕಾಯ್ದುಕೊಂಡರೆ ಉಭಯತ್ರರಿಗೂ, ನಾಡಿಗೂ ಶುಭ. ಇಷ್ಟಾದರೂ ಇವರುಗಳಲ್ಲಾದರೂ ಒಗ್ಗಟ್ಟು ಉಂಟೋ! ಕಾವಿಗಳ ಕೈಗೇ ಸದ್ಭಕ್ತರು ಅಧಿಕಾರ ಕೊಟ್ಟರೆ ಸರ್ಕಾರ ನಡೆಸಿಯಾರೆ? ಸ್ವಾಮಿಗಳ ನಡೆ ಪ್ರಜಾಪ್ರಭುತ್ವದಲ್ಲಿ ನೋಡುವರ ಎದುರು ನಗೆಪಾಟಲಾಗದೆ ಮಾದರಿಯಾಗಿರಬೇಕಲ್ಲವೆ.

  • ಡಾ. ಬಿ. ಎಲ್. ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ.


ಇದನ್ನೂ ಓದಿ: ತಮಿಳುನಾಡು: ರೈತ ಹೊರಾಟವನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಡಿಎಂಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...