Homeಮುಖಪುಟಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

ಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

- Advertisement -
- Advertisement -

‘ಡಾ. ರಾಜ್‌ಕುಮಾರ್‌’ ಕನ್ನಡ ಮತ್ತು ಕನ್ನಡಿಗರ ಮಟ್ಟಿಗೆ ಇದೊಂದು ಮಾಂತ್ರಿಕ ಶಬ್ಧವೇ ಸರಿ. ಕನ್ನಡಿಗರು ಮತ್ತು ಇಡೀ ಕನ್ನಡದ ಚಿತ್ರರಂಗದ ಪಾಲಿಗೆ ದಶಕಗಳ ಕಾಲ ಅಜಾತಶತೃವಿನಂತೆ ಮಿಂಚಿದ್ದ ರಾಜ್‌ಕುಮಾರ್‌ ಸಿನಿಮಾ ಆಚೆಗೂ ಮೇರು ವ್ಯಕ್ತಿತ್ವ. ಕನ್ನಡ ಚಳುವಳಿಗಳಲ್ಲಿ ಇಂದಿಗೂ ಸಹ ಅಳಿಸಿ ಹಾಕಲಾಗದ ಹೆಸರು-ವ್ಯಕ್ತಿತ್ವವಾಗಿದ್ದಾರೆ.

50ರ ದಶಕದಿಂದ ಕಳೆದ ಶತಮಾನದ ಕೊನೆಯ ದಶಕದವರೆಗೂ ರಾಜ್‌ಕುಮಾರ್‌ ನಾಯಕ ನಟನಾಗಿಯೇ ನಟಿಸಿದ್ದರು. ಈ ಅವಧಿಯಲ್ಲಿ ಸುಮಾರು 208 ಚಿತ್ರಗಳಲ್ಲಿ ನಟಿಸಿದ್ದ ಅವರ ಒಂದೊಂದು ಚಿತ್ರವೂ ಅವರ ಅಭಿಮಾನಿಗಳ ಪಾಲಿಗೆ ಪಾಠವೇ ಆಗಿ ಹೋಗಿದೆ. ಓರ್ವ ಮಗನಾಗಿ, ತಂದೆಯಾಗಿ, ಪ್ರಿಯತಮನಾಗಿ, ಸಮಾಜ ಸುಧಾರಕನಾಗಿ, ದೇಶ ಕಾಯುವ ಸೈನಿಕನಾಗಿ, ಸರ್ಕಾರಿ ಅಧಿಕಾರಿಯಾಗಿ, ಶಿಕ್ಷಕನಾಗಿ ಹೀಗೆ ಅವರು ನಿರ್ವಹಿಸಿದ ಎಲ್ಲಾ ಪಾತ್ರದಲ್ಲೂ ಒಂದು ಸಮಾಜಿಕ ಕಳಕಳಿಯನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ.

ನೆನಪಿರಲಿ ರಾಜ್‌ಕುಮಾರ್ ನಿಜ ಜೀವನದಲ್ಲಿ ಸಿಗರೇಟ್‌ ಸೇದುತ್ತಿದ್ದರು. ಆದರೆ, ಅದು ತನ್ನ ಅಭಿಮಾನಿಗಳಿಗೆ ಕೆಟ್ಟ ಅನುಕರಣೆಯಾಗಬಾರದು ಎಂಬ ಏಕೈಕ ಕಾರಣಕ್ಕೆ ಅವರು ತೆರೆಯ ಮೇಲೆ ಎಂದಿಗೂ ಸಿಗರೇಟ್‌ ಸೇದುವ ಹಾಗೂ ಮದ್ಯಪಾನ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಅವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ಇಂದು ಅವರ ಜನ್ಮದಿನ. ಆ ನೆಪದಲ್ಲಿ ಡಾ.ರಾಜ್‌ಕುಮಾರ್‌ ಅವರ ಟಾಪ್‌-5 ಅತ್ಯುತ್ತಮ ಚಲನ ಚಿತ್ರಗಳ ಪಟ್ಟಿ ಇಲ್ಲದೆ.

1. ಕಸ್ತೂರಿ ನಿವಾಸ (1971)
ನಿರ್ದೇಶಕ – ದೊರೈ-ಭಗವಾನ್
ಸಂಗೀತ – ಜಿ.ಕೆ.ವೆಂಕಟೇಶ್
ನಿರ್ಮಾಪಕ – ಕೆ.ಸಿ.ಎನ್.ಗೌಡ
ತಾರಾಗಣ – ಡಾ.ರಾಜ್‌ಕುಮಾರ್, ಕೆ.ಎಸ್.ಅಶ್ವತ್, ಜಯಂತಿ, ಭಾರತಿ.

ಕನ್ನಡಿಗರು ಎಂದೂ ಮರೆಯದ ಚಿತ್ರ “ಕಸ್ತೂರಿ ನಿವಾಸ”. ಈ ಚಿತ್ರಕ್ಕಿಂತಲೂ ಹಿಂದೆ ಡಾ.ರಾಜ್‌ಕುಮಾರ್, ಬೇಡರ ಕಣ್ಣಪ್ಪ, ಸತ್ಯ ಹರಿಶ್ಚಂದ್ರ ನಂತಹ ಅದ್ಭುತವಾದ ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರೂ ಸಹ ಕಸ್ತೂರಿ ನಿವಾಸ ಸಿನಿಮಾ ಸೃಷ್ಠಿ ಮಾಡಿದಷ್ಟು ಭಾವನಾತ್ಮಕ ಅಲೆಯನ್ನು ಭಾಗಶಃ ಆ ಕಾಲಘಟ್ಟದಲ್ಲಿ ಯಾವ ಚಿತ್ರವೂ ಸೃಷ್ಠಿಸಿರಲಾರದು.

ಅಣ್ಣಾವ್ರ ಅದ್ಭುತವಾದ ನಟನೆಗೆ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಆ ಕಾಲದಲ್ಲೇ ಈ ಚಿತ್ರ ದಾಖಲೆಯ ಗಳಿಕೆ ಕಂಡಿತ್ತು. ಕನ್ನಡ ಚಿತ್ರೋದ್ಯಮದ ಪಾಲಿಗೆ ಈ ಚಿತ್ರ ಈಗಲೂ ಮೈಲುಗಲ್ಲಾದ್ರೆ, ಕನ್ನಡಿಗರು ಹಾಗೂ ಅಣ್ಣಾವ್ರ ಅಭಿಮಾನಿಗಳ ಪಾಲಿಗೆ ಕಸ್ತೂರಿ ನಿವಾಸ ಎಂದೂ ಮರೆಯಲಾರದ ಚಿತ್ರವೇ ಸರಿ.

2 . ಬಂಗಾರದ ಮನುಷ್ಯ (1972)
ನಿರ್ದೇಶನ – ಸಿದ್ದಲಿಂಗಯ್ಯ
ನಿರ್ಮಾಪಕ – ಆರ್.ಲಕ್ಷ್ಮಣ ಗೋಪಾಲ್
ಸಂಗೀತ – ಜಿ.ಕೆ.ವೆಂಕಟೇಶ್
ತಾರಾಗಣ – ಡಾ.ರಾಜ್‌ಕುಮಾರ್, ಭಾರತಿ, ಎಂ.ಎನ್.ಲಕ್ಷ್ಮೀದೇವಿ

“ಬಂಗಾರದ ಮನುಷ್ಯ” ಕನ್ನಡ ಚಿತ್ರರಂಗದ ಪಾಲಿಗೆ ಮೈಲುಗಲ್ಲಾದ ಚಿತ್ರ. ಡಾ.ರಾಜ್‌ಕುಮಾರ್‌ರವರಿಗೆ ಬಂಗಾರದ ಮನುಷ್ಯ ಎಂಬ ಬಿರುದು ತಂದುಕೊಟ್ಟ ಚಿತ್ರ. ನಿರ್ದೇಶಕ ಸಿದ್ದಲಿಂಗಯ್ಯನವರ ಕಲ್ಪನೆಯಲ್ಲಿ ಮೂಡಿಬಂದಿದ್ದ ಬಂಗಾರದ ಮನುಷ್ಯ ಕೃಷಿ ಹಾಗೂ ಅದರ ಮಹತ್ವವನ್ನು ಸಾರುವ ಚಿತ್ರವಾಗಿದ್ದು, ಆ ಕಾಲಕ್ಕೆ ಭಾರೀ ಜನಪ್ರಿಯತೆ ಗಳಿಸಿತ್ತು.

ಈ ಚಿತ್ರವನ್ನು ವೀಕ್ಷಿಸಿದ ಅಸಂಖ್ಯಾತ ಯುವಕರು ಮತ್ತೆ ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡರು ಎಂಬುದು ಇತಿಹಾಸ. ಹೀಗೆ ಒಂದು ಚಿತ್ರದ ಮೂಲಕ ಸಾಮಾಜಿಕ ಕ್ರಾಂತಿ ಸಾಧ್ಯ ಎಂಬ ಸಾಧ್ಯತೆಯನ್ನು ಕನ್ನಡಿಗರ ಪಾಲಿಗೆ ಸಾಧಿಸಿ ತೋರಿಸಿದ ಕೀರ್ತಿ ಈ ಚಿತ್ರಕ್ಕೆ ಮತ್ತು ಡಾ.ರಾಜ್‌ಕುಮಾರ್‌ ಎಂಬ ಎರಡು ಶಬ್ಧದ ಶಕ್ತಿಗೆ ಸಲ್ಲುತ್ತದೆ.

3. ಗಂಧದಗುಡಿ (1973)
ನಿರ್ದೇಶಕ – ವಿಜಯ್
ನಿರ್ಮಾಪಕ – ಎಂ.ಪಿ.ಶಂಕರ್
ಸಂಗೀತ – ರಾಜನ್-ನಾಗೇಂದ್ರ
ತಾರಾಗಣ – ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಕಲ್ಪನಾ.

ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ಈಗಲೂ ಕಡ್ಡಾಯ ಹಾಡಾಗಿರುವ “ನಾವಾಡುವ ನುಡಿಯೇ ಕನ್ನಡ ನುಡಿ” ಎಂಬ ಹಾಡು ಎಲ್ಲಿಯವರೆಗೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುತ್ತದೆಯೋ ಅಲ್ಲಿಯ ವರೆಗೆ “ಗಂಧದಗುಡಿ” ಎಂಬ ಚಿತ್ರ ಜನರ ಸ್ಮೃತಿ ಪಟಲದಿಂದ ಮರೆಯಾಗಲು ಸಾಧ್ಯವೇ ಇಲ್ಲ.

ಇದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಎರಡು ಮೇರು ಪರ್ವತಗಳಾಗಿರುವ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ ಏಕೈಕ ಚಿತ್ರವೂ ಹೌದು. ಅರಣ್ಯ ಸಂರಕ್ಷಣೆ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸಿದ ಈ ಚಿತ್ರ ಆ ಕಾಲದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಹಿರಿಯ ನಿರ್ದೇಶಕ ವಿಜಯ್ ವೃತ್ತಿ ಬದುಕಿನ ಅತ್ಯಂತ ಶ್ರೇಷ್ಠ ಚಿತ್ರಗಳ ಪೈಕಿ ಇದಕ್ಕೆ ಅಗ್ರಸ್ಥಾನ. ಆದರೆ ಭವಿಷ್ಯದಲ್ಲಿ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಮತ್ತೊಮ್ಮೆ ಜತೆಯಾಗಿ ನಟಿಸದಿರುವುದು ಕನ್ನಡಿಗರ ಪಾಲಿಗೆ ದುರಾದೃಷ್ಟವೇ ಸರಿ.

4. ಒಂದು ಮುತ್ತಿನ ಕಥೆ (1987)
ನಿರ್ದೇಶಕ – ಶಂಕರ್‌ನಾಗ್
ನಿರ್ಮಾಪಕ – ಎ.ದ್ವಾರಕಾನಾಥ್
ಸಂಗೀತ – ಎಲ್.ವೈದ್ಯನಾಥ್
ತಾರಾಗಣ – ಡಾ.ರಾಜ್, ಅರ್ಚನಾ

ಒಂದು ಮುತ್ತಿನ ಕಥೆ” ಶಂಕರ್‌ನಾಗ್ ನಿರ್ದೇಶನದ ಕೊನೆಯ ಚಿತ್ರ. ಅನೇಕ ಕಾರಣಗಳಿಗಾಗಿ ಇದು ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಕನ್ನಡದ ಕ್ರಿಯಾಶೀಲ ಕಲಾವಿದ ಹಾಗೂ ನಿರ್ದೇಶಕ ಎಂದೇ ಹೆಸರಾದ ಶಂಕರ್‌ನಾಗ್ ಈ ಚಿತ್ರದ ಮೂಲಕ ಕನ್ನಡದ ಚಿತ್ರರಂಗವನ್ನು ತಾಂತ್ರಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದ್ದರು.

ಡಾ.ರಾಜ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ಮೊದಲ ಬಾರಿಗೆ ನೀರಿನ ಆಳದಲ್ಲಿ ಚಿತ್ರಿಸಲಾಗಿತ್ತು. ಸಮುದ್ರದಾಳದಲ್ಲಿ ನಾಯಕ ಕೃತಕ ಆಕ್ಟೋಪಸ್ ಜತೆಗೆ ಸಾಹಸ ಮಾಡುವ ಹಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿತ್ತು. ಆ ಕಾಲಕ್ಕೆ ಇದು ಕನ್ನಡ ಚಿತ್ರರಂಗಕ್ಕೆ ತಾಂತ್ರಿಕವಾಗಿ ಹೊಸ ಭಾಷ್ಯ ಬರೆದ ಚಿತ್ರವಾಗಿತ್ತು.

ತಾಂತ್ರಿಕವಾಗಿ ಮಾತ್ರವಲ್ಲದೆ ಚಿತ್ರದ ಕಥೆಯನ್ನೂ ಸಹ ಶಂಕರ್‌ನಾಗ್ ಮನೋಜ್ಞವಾಗಿ ಚಿತ್ರಿಸಿದ್ದರು. ಮುತ್ತಿನ ಶಿಕಾರಿಗೆ ಹೋಗುವ ನಾಯಕನಿಗೆ ದೊಡ್ಡ ಗಾತ್ರದ ಅಪರೂಪದ ಮುತ್ತು ಸಿಗುತ್ತಿದೆ. ಆದರೆ ಅನಕ್ಷರಸ್ಥರಾದ ಈ ಬುಡಕಟ್ಟು ಸಮಾಜದವರನ್ನು ವ್ಯಾಪಾರಿಗಳು ಹೇಗೆಲ್ಲ ಮೋಸ ಮಾಡಿ ಕೊಳ್ಳೆ ಹೊಡೆಯಲು ಪ್ರಯತ್ನಿಸುತ್ತಾರೆ. ಕೊನೆಗೆ ನಾಯಕ ಆ ಮುತ್ತನ್ನು ಏನು ಮಾಡುತ್ತಾನೆ ಎಂಬ ಅಂಶವನ್ನು ಮನಮುಟ್ಟುವಂತೆ ಚಿತ್ರಿಸಲಾಗಿತ್ತು.

ಚಿತ್ರ ಬಿಡುಗಡೆಯಾದಾಗ ಡಾ.ರಾಜ್ ನಟನೆ ಹಾಗೂ ಶಂಕರ್‌ನಾಗ್ ಕ್ರಿಯಾಶೀಲತೆಗೆ ವಿಮರ್ಶಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದ್ರೆ ಡಾ.ರಾಜ್‌ಕುಮಾರ್ ರಂತಹ ಘಟಾನುಘಟಿ ನಟಿಸಿಯೂ ಸಹ ಈ ಚಿತ್ರ ನಿರೀಕ್ಷಿತ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು. ಒಟ್ಟಾರೆ ಕನ್ನಡಿಗರು ನೋಡಲೇಬೇಕಿದ್ದ ಗೆಲ್ಲಿಸಲೇಬೇಕಿದ್ದ ಅಪರೂಪದ ಚಿತ್ರವೊಂದು ಸೋಲಿನ ರುಚಿ ಕಂಡಿದ್ದು ಮಾತ್ರ ವಿಪರ್ಯಾಸ.

5. ಜೀವನ ಚೈತ್ರ (1992)
ನಿರ್ದೇಶಕ – ದೊರೆ-ಭಗವಾನ್
ನಿರ್ಮಾಪಕರು – ಪಾರ್ವತಮ್ಮ ರಾಜ್‌ಕುಮಾರ್
ಸಂಗೀತ – ಉಪೇಂದ್ರ ಕುಮಾರ್
ತಾರಾಗಣ – ಡಾ.ರಾಜ್, ಮಾಧವಿ, ಸುಧಾರಾಣಿ

ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಕಳಕಳಿಯನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಿದ ಹಾಗೂ ಆ ಮೂಲಕ ಕೆಲವು ಪರಿಣಾಮಕಾರಿ ಸಾಮಾಜಿಕ ಬದಲಾವಣೆಗೆ ಕಾರಣವಾದ ಕೆಲವೇ ಕೆಲವು ಚಿತ್ರಗಳ ಪೈಕಿ ಜೀವನ ಚೈತ್ರ ಸಹ ಒಂದು.

ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಮದ್ಯ ಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿಅಭಿನಯಿಸಿದ್ದರು. ಚಿತ್ರದ ನಾಯಕಿ ಮಾಧವಿ. ಸತತ ಮೂರು ವರ್ಷ ಯಾವುದೇ ಸಿನಿಮಾದಲ್ಲಿ ನಟಿಸದ ರಾಜ್‌ಕುಮಾರ್‌ ಈ ಚಿತ್ರದ ಮೂಲಕ ತೆರೆಗೆ ಮರಳಿದ್ದರು. ಅಲ್ಲದೆ, ಈ ಚಿತ್ರ ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದಿತ್ತು.

ಈ ಚಿತ್ರ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ ಎಂಬುದು ವಿಶೇಷ. ಈ ಚಿತ್ರದ ಪರಿಣಾಮವಾಗಿ ಕರ್ನಾಟಕದಲ್ಲಿ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗೂ ಡಾ.ರಾಜ್ ಹಲವು ಅಭಿಮಾನಿಗಳು ಮದ್ಯಪಾನ ತ್ಯಜಿಸಿದರೆಂದು ಅಂದಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಈ ಚಿತ್ರದ “ನಾದಮಯ” ಗೀತೆಗಾಗಿ ರಾಜ್ ಕುಮಾರ್ 40ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಭಾಜನರಾದರು.


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....