Homeಮುಖಪುಟಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

ಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

- Advertisement -
- Advertisement -

‘ಡಾ. ರಾಜ್‌ಕುಮಾರ್‌’ ಕನ್ನಡ ಮತ್ತು ಕನ್ನಡಿಗರ ಮಟ್ಟಿಗೆ ಇದೊಂದು ಮಾಂತ್ರಿಕ ಶಬ್ಧವೇ ಸರಿ. ಕನ್ನಡಿಗರು ಮತ್ತು ಇಡೀ ಕನ್ನಡದ ಚಿತ್ರರಂಗದ ಪಾಲಿಗೆ ದಶಕಗಳ ಕಾಲ ಅಜಾತಶತೃವಿನಂತೆ ಮಿಂಚಿದ್ದ ರಾಜ್‌ಕುಮಾರ್‌ ಸಿನಿಮಾ ಆಚೆಗೂ ಮೇರು ವ್ಯಕ್ತಿತ್ವ. ಕನ್ನಡ ಚಳುವಳಿಗಳಲ್ಲಿ ಇಂದಿಗೂ ಸಹ ಅಳಿಸಿ ಹಾಕಲಾಗದ ಹೆಸರು-ವ್ಯಕ್ತಿತ್ವವಾಗಿದ್ದಾರೆ.

50ರ ದಶಕದಿಂದ ಕಳೆದ ಶತಮಾನದ ಕೊನೆಯ ದಶಕದವರೆಗೂ ರಾಜ್‌ಕುಮಾರ್‌ ನಾಯಕ ನಟನಾಗಿಯೇ ನಟಿಸಿದ್ದರು. ಈ ಅವಧಿಯಲ್ಲಿ ಸುಮಾರು 208 ಚಿತ್ರಗಳಲ್ಲಿ ನಟಿಸಿದ್ದ ಅವರ ಒಂದೊಂದು ಚಿತ್ರವೂ ಅವರ ಅಭಿಮಾನಿಗಳ ಪಾಲಿಗೆ ಪಾಠವೇ ಆಗಿ ಹೋಗಿದೆ. ಓರ್ವ ಮಗನಾಗಿ, ತಂದೆಯಾಗಿ, ಪ್ರಿಯತಮನಾಗಿ, ಸಮಾಜ ಸುಧಾರಕನಾಗಿ, ದೇಶ ಕಾಯುವ ಸೈನಿಕನಾಗಿ, ಸರ್ಕಾರಿ ಅಧಿಕಾರಿಯಾಗಿ, ಶಿಕ್ಷಕನಾಗಿ ಹೀಗೆ ಅವರು ನಿರ್ವಹಿಸಿದ ಎಲ್ಲಾ ಪಾತ್ರದಲ್ಲೂ ಒಂದು ಸಮಾಜಿಕ ಕಳಕಳಿಯನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ.

ನೆನಪಿರಲಿ ರಾಜ್‌ಕುಮಾರ್ ನಿಜ ಜೀವನದಲ್ಲಿ ಸಿಗರೇಟ್‌ ಸೇದುತ್ತಿದ್ದರು. ಆದರೆ, ಅದು ತನ್ನ ಅಭಿಮಾನಿಗಳಿಗೆ ಕೆಟ್ಟ ಅನುಕರಣೆಯಾಗಬಾರದು ಎಂಬ ಏಕೈಕ ಕಾರಣಕ್ಕೆ ಅವರು ತೆರೆಯ ಮೇಲೆ ಎಂದಿಗೂ ಸಿಗರೇಟ್‌ ಸೇದುವ ಹಾಗೂ ಮದ್ಯಪಾನ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಅವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ಇಂದು ಅವರ ಜನ್ಮದಿನ. ಆ ನೆಪದಲ್ಲಿ ಡಾ.ರಾಜ್‌ಕುಮಾರ್‌ ಅವರ ಟಾಪ್‌-5 ಅತ್ಯುತ್ತಮ ಚಲನ ಚಿತ್ರಗಳ ಪಟ್ಟಿ ಇಲ್ಲದೆ.

1. ಕಸ್ತೂರಿ ನಿವಾಸ (1971)
ನಿರ್ದೇಶಕ – ದೊರೈ-ಭಗವಾನ್
ಸಂಗೀತ – ಜಿ.ಕೆ.ವೆಂಕಟೇಶ್
ನಿರ್ಮಾಪಕ – ಕೆ.ಸಿ.ಎನ್.ಗೌಡ
ತಾರಾಗಣ – ಡಾ.ರಾಜ್‌ಕುಮಾರ್, ಕೆ.ಎಸ್.ಅಶ್ವತ್, ಜಯಂತಿ, ಭಾರತಿ.

ಕನ್ನಡಿಗರು ಎಂದೂ ಮರೆಯದ ಚಿತ್ರ “ಕಸ್ತೂರಿ ನಿವಾಸ”. ಈ ಚಿತ್ರಕ್ಕಿಂತಲೂ ಹಿಂದೆ ಡಾ.ರಾಜ್‌ಕುಮಾರ್, ಬೇಡರ ಕಣ್ಣಪ್ಪ, ಸತ್ಯ ಹರಿಶ್ಚಂದ್ರ ನಂತಹ ಅದ್ಭುತವಾದ ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರೂ ಸಹ ಕಸ್ತೂರಿ ನಿವಾಸ ಸಿನಿಮಾ ಸೃಷ್ಠಿ ಮಾಡಿದಷ್ಟು ಭಾವನಾತ್ಮಕ ಅಲೆಯನ್ನು ಭಾಗಶಃ ಆ ಕಾಲಘಟ್ಟದಲ್ಲಿ ಯಾವ ಚಿತ್ರವೂ ಸೃಷ್ಠಿಸಿರಲಾರದು.

ಅಣ್ಣಾವ್ರ ಅದ್ಭುತವಾದ ನಟನೆಗೆ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಆ ಕಾಲದಲ್ಲೇ ಈ ಚಿತ್ರ ದಾಖಲೆಯ ಗಳಿಕೆ ಕಂಡಿತ್ತು. ಕನ್ನಡ ಚಿತ್ರೋದ್ಯಮದ ಪಾಲಿಗೆ ಈ ಚಿತ್ರ ಈಗಲೂ ಮೈಲುಗಲ್ಲಾದ್ರೆ, ಕನ್ನಡಿಗರು ಹಾಗೂ ಅಣ್ಣಾವ್ರ ಅಭಿಮಾನಿಗಳ ಪಾಲಿಗೆ ಕಸ್ತೂರಿ ನಿವಾಸ ಎಂದೂ ಮರೆಯಲಾರದ ಚಿತ್ರವೇ ಸರಿ.

2 . ಬಂಗಾರದ ಮನುಷ್ಯ (1972)
ನಿರ್ದೇಶನ – ಸಿದ್ದಲಿಂಗಯ್ಯ
ನಿರ್ಮಾಪಕ – ಆರ್.ಲಕ್ಷ್ಮಣ ಗೋಪಾಲ್
ಸಂಗೀತ – ಜಿ.ಕೆ.ವೆಂಕಟೇಶ್
ತಾರಾಗಣ – ಡಾ.ರಾಜ್‌ಕುಮಾರ್, ಭಾರತಿ, ಎಂ.ಎನ್.ಲಕ್ಷ್ಮೀದೇವಿ

“ಬಂಗಾರದ ಮನುಷ್ಯ” ಕನ್ನಡ ಚಿತ್ರರಂಗದ ಪಾಲಿಗೆ ಮೈಲುಗಲ್ಲಾದ ಚಿತ್ರ. ಡಾ.ರಾಜ್‌ಕುಮಾರ್‌ರವರಿಗೆ ಬಂಗಾರದ ಮನುಷ್ಯ ಎಂಬ ಬಿರುದು ತಂದುಕೊಟ್ಟ ಚಿತ್ರ. ನಿರ್ದೇಶಕ ಸಿದ್ದಲಿಂಗಯ್ಯನವರ ಕಲ್ಪನೆಯಲ್ಲಿ ಮೂಡಿಬಂದಿದ್ದ ಬಂಗಾರದ ಮನುಷ್ಯ ಕೃಷಿ ಹಾಗೂ ಅದರ ಮಹತ್ವವನ್ನು ಸಾರುವ ಚಿತ್ರವಾಗಿದ್ದು, ಆ ಕಾಲಕ್ಕೆ ಭಾರೀ ಜನಪ್ರಿಯತೆ ಗಳಿಸಿತ್ತು.

ಈ ಚಿತ್ರವನ್ನು ವೀಕ್ಷಿಸಿದ ಅಸಂಖ್ಯಾತ ಯುವಕರು ಮತ್ತೆ ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡರು ಎಂಬುದು ಇತಿಹಾಸ. ಹೀಗೆ ಒಂದು ಚಿತ್ರದ ಮೂಲಕ ಸಾಮಾಜಿಕ ಕ್ರಾಂತಿ ಸಾಧ್ಯ ಎಂಬ ಸಾಧ್ಯತೆಯನ್ನು ಕನ್ನಡಿಗರ ಪಾಲಿಗೆ ಸಾಧಿಸಿ ತೋರಿಸಿದ ಕೀರ್ತಿ ಈ ಚಿತ್ರಕ್ಕೆ ಮತ್ತು ಡಾ.ರಾಜ್‌ಕುಮಾರ್‌ ಎಂಬ ಎರಡು ಶಬ್ಧದ ಶಕ್ತಿಗೆ ಸಲ್ಲುತ್ತದೆ.

3. ಗಂಧದಗುಡಿ (1973)
ನಿರ್ದೇಶಕ – ವಿಜಯ್
ನಿರ್ಮಾಪಕ – ಎಂ.ಪಿ.ಶಂಕರ್
ಸಂಗೀತ – ರಾಜನ್-ನಾಗೇಂದ್ರ
ತಾರಾಗಣ – ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಕಲ್ಪನಾ.

ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ಈಗಲೂ ಕಡ್ಡಾಯ ಹಾಡಾಗಿರುವ “ನಾವಾಡುವ ನುಡಿಯೇ ಕನ್ನಡ ನುಡಿ” ಎಂಬ ಹಾಡು ಎಲ್ಲಿಯವರೆಗೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುತ್ತದೆಯೋ ಅಲ್ಲಿಯ ವರೆಗೆ “ಗಂಧದಗುಡಿ” ಎಂಬ ಚಿತ್ರ ಜನರ ಸ್ಮೃತಿ ಪಟಲದಿಂದ ಮರೆಯಾಗಲು ಸಾಧ್ಯವೇ ಇಲ್ಲ.

ಇದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಎರಡು ಮೇರು ಪರ್ವತಗಳಾಗಿರುವ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ ಏಕೈಕ ಚಿತ್ರವೂ ಹೌದು. ಅರಣ್ಯ ಸಂರಕ್ಷಣೆ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸಿದ ಈ ಚಿತ್ರ ಆ ಕಾಲದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಹಿರಿಯ ನಿರ್ದೇಶಕ ವಿಜಯ್ ವೃತ್ತಿ ಬದುಕಿನ ಅತ್ಯಂತ ಶ್ರೇಷ್ಠ ಚಿತ್ರಗಳ ಪೈಕಿ ಇದಕ್ಕೆ ಅಗ್ರಸ್ಥಾನ. ಆದರೆ ಭವಿಷ್ಯದಲ್ಲಿ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಮತ್ತೊಮ್ಮೆ ಜತೆಯಾಗಿ ನಟಿಸದಿರುವುದು ಕನ್ನಡಿಗರ ಪಾಲಿಗೆ ದುರಾದೃಷ್ಟವೇ ಸರಿ.

4. ಒಂದು ಮುತ್ತಿನ ಕಥೆ (1987)
ನಿರ್ದೇಶಕ – ಶಂಕರ್‌ನಾಗ್
ನಿರ್ಮಾಪಕ – ಎ.ದ್ವಾರಕಾನಾಥ್
ಸಂಗೀತ – ಎಲ್.ವೈದ್ಯನಾಥ್
ತಾರಾಗಣ – ಡಾ.ರಾಜ್, ಅರ್ಚನಾ

ಒಂದು ಮುತ್ತಿನ ಕಥೆ” ಶಂಕರ್‌ನಾಗ್ ನಿರ್ದೇಶನದ ಕೊನೆಯ ಚಿತ್ರ. ಅನೇಕ ಕಾರಣಗಳಿಗಾಗಿ ಇದು ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಕನ್ನಡದ ಕ್ರಿಯಾಶೀಲ ಕಲಾವಿದ ಹಾಗೂ ನಿರ್ದೇಶಕ ಎಂದೇ ಹೆಸರಾದ ಶಂಕರ್‌ನಾಗ್ ಈ ಚಿತ್ರದ ಮೂಲಕ ಕನ್ನಡದ ಚಿತ್ರರಂಗವನ್ನು ತಾಂತ್ರಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದ್ದರು.

ಡಾ.ರಾಜ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ಮೊದಲ ಬಾರಿಗೆ ನೀರಿನ ಆಳದಲ್ಲಿ ಚಿತ್ರಿಸಲಾಗಿತ್ತು. ಸಮುದ್ರದಾಳದಲ್ಲಿ ನಾಯಕ ಕೃತಕ ಆಕ್ಟೋಪಸ್ ಜತೆಗೆ ಸಾಹಸ ಮಾಡುವ ಹಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿತ್ತು. ಆ ಕಾಲಕ್ಕೆ ಇದು ಕನ್ನಡ ಚಿತ್ರರಂಗಕ್ಕೆ ತಾಂತ್ರಿಕವಾಗಿ ಹೊಸ ಭಾಷ್ಯ ಬರೆದ ಚಿತ್ರವಾಗಿತ್ತು.

ತಾಂತ್ರಿಕವಾಗಿ ಮಾತ್ರವಲ್ಲದೆ ಚಿತ್ರದ ಕಥೆಯನ್ನೂ ಸಹ ಶಂಕರ್‌ನಾಗ್ ಮನೋಜ್ಞವಾಗಿ ಚಿತ್ರಿಸಿದ್ದರು. ಮುತ್ತಿನ ಶಿಕಾರಿಗೆ ಹೋಗುವ ನಾಯಕನಿಗೆ ದೊಡ್ಡ ಗಾತ್ರದ ಅಪರೂಪದ ಮುತ್ತು ಸಿಗುತ್ತಿದೆ. ಆದರೆ ಅನಕ್ಷರಸ್ಥರಾದ ಈ ಬುಡಕಟ್ಟು ಸಮಾಜದವರನ್ನು ವ್ಯಾಪಾರಿಗಳು ಹೇಗೆಲ್ಲ ಮೋಸ ಮಾಡಿ ಕೊಳ್ಳೆ ಹೊಡೆಯಲು ಪ್ರಯತ್ನಿಸುತ್ತಾರೆ. ಕೊನೆಗೆ ನಾಯಕ ಆ ಮುತ್ತನ್ನು ಏನು ಮಾಡುತ್ತಾನೆ ಎಂಬ ಅಂಶವನ್ನು ಮನಮುಟ್ಟುವಂತೆ ಚಿತ್ರಿಸಲಾಗಿತ್ತು.

ಚಿತ್ರ ಬಿಡುಗಡೆಯಾದಾಗ ಡಾ.ರಾಜ್ ನಟನೆ ಹಾಗೂ ಶಂಕರ್‌ನಾಗ್ ಕ್ರಿಯಾಶೀಲತೆಗೆ ವಿಮರ್ಶಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದ್ರೆ ಡಾ.ರಾಜ್‌ಕುಮಾರ್ ರಂತಹ ಘಟಾನುಘಟಿ ನಟಿಸಿಯೂ ಸಹ ಈ ಚಿತ್ರ ನಿರೀಕ್ಷಿತ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು. ಒಟ್ಟಾರೆ ಕನ್ನಡಿಗರು ನೋಡಲೇಬೇಕಿದ್ದ ಗೆಲ್ಲಿಸಲೇಬೇಕಿದ್ದ ಅಪರೂಪದ ಚಿತ್ರವೊಂದು ಸೋಲಿನ ರುಚಿ ಕಂಡಿದ್ದು ಮಾತ್ರ ವಿಪರ್ಯಾಸ.

5. ಜೀವನ ಚೈತ್ರ (1992)
ನಿರ್ದೇಶಕ – ದೊರೆ-ಭಗವಾನ್
ನಿರ್ಮಾಪಕರು – ಪಾರ್ವತಮ್ಮ ರಾಜ್‌ಕುಮಾರ್
ಸಂಗೀತ – ಉಪೇಂದ್ರ ಕುಮಾರ್
ತಾರಾಗಣ – ಡಾ.ರಾಜ್, ಮಾಧವಿ, ಸುಧಾರಾಣಿ

ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಕಳಕಳಿಯನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಿದ ಹಾಗೂ ಆ ಮೂಲಕ ಕೆಲವು ಪರಿಣಾಮಕಾರಿ ಸಾಮಾಜಿಕ ಬದಲಾವಣೆಗೆ ಕಾರಣವಾದ ಕೆಲವೇ ಕೆಲವು ಚಿತ್ರಗಳ ಪೈಕಿ ಜೀವನ ಚೈತ್ರ ಸಹ ಒಂದು.

ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಮದ್ಯ ಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿಅಭಿನಯಿಸಿದ್ದರು. ಚಿತ್ರದ ನಾಯಕಿ ಮಾಧವಿ. ಸತತ ಮೂರು ವರ್ಷ ಯಾವುದೇ ಸಿನಿಮಾದಲ್ಲಿ ನಟಿಸದ ರಾಜ್‌ಕುಮಾರ್‌ ಈ ಚಿತ್ರದ ಮೂಲಕ ತೆರೆಗೆ ಮರಳಿದ್ದರು. ಅಲ್ಲದೆ, ಈ ಚಿತ್ರ ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದಿತ್ತು.

ಈ ಚಿತ್ರ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ ಎಂಬುದು ವಿಶೇಷ. ಈ ಚಿತ್ರದ ಪರಿಣಾಮವಾಗಿ ಕರ್ನಾಟಕದಲ್ಲಿ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗೂ ಡಾ.ರಾಜ್ ಹಲವು ಅಭಿಮಾನಿಗಳು ಮದ್ಯಪಾನ ತ್ಯಜಿಸಿದರೆಂದು ಅಂದಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಈ ಚಿತ್ರದ “ನಾದಮಯ” ಗೀತೆಗಾಗಿ ರಾಜ್ ಕುಮಾರ್ 40ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಭಾಜನರಾದರು.


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...