Homeಮುಖಪುಟಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

ಕನ್ನಡಿಗರು ಎಂದೂ ಮರೆಯದ ಡಾ.ರಾಜ್‌ ಅವರ ಟಾಪ್‌-5 ಚಿತ್ರಗಳು!

- Advertisement -
- Advertisement -

‘ಡಾ. ರಾಜ್‌ಕುಮಾರ್‌’ ಕನ್ನಡ ಮತ್ತು ಕನ್ನಡಿಗರ ಮಟ್ಟಿಗೆ ಇದೊಂದು ಮಾಂತ್ರಿಕ ಶಬ್ಧವೇ ಸರಿ. ಕನ್ನಡಿಗರು ಮತ್ತು ಇಡೀ ಕನ್ನಡದ ಚಿತ್ರರಂಗದ ಪಾಲಿಗೆ ದಶಕಗಳ ಕಾಲ ಅಜಾತಶತೃವಿನಂತೆ ಮಿಂಚಿದ್ದ ರಾಜ್‌ಕುಮಾರ್‌ ಸಿನಿಮಾ ಆಚೆಗೂ ಮೇರು ವ್ಯಕ್ತಿತ್ವ. ಕನ್ನಡ ಚಳುವಳಿಗಳಲ್ಲಿ ಇಂದಿಗೂ ಸಹ ಅಳಿಸಿ ಹಾಕಲಾಗದ ಹೆಸರು-ವ್ಯಕ್ತಿತ್ವವಾಗಿದ್ದಾರೆ.

50ರ ದಶಕದಿಂದ ಕಳೆದ ಶತಮಾನದ ಕೊನೆಯ ದಶಕದವರೆಗೂ ರಾಜ್‌ಕುಮಾರ್‌ ನಾಯಕ ನಟನಾಗಿಯೇ ನಟಿಸಿದ್ದರು. ಈ ಅವಧಿಯಲ್ಲಿ ಸುಮಾರು 208 ಚಿತ್ರಗಳಲ್ಲಿ ನಟಿಸಿದ್ದ ಅವರ ಒಂದೊಂದು ಚಿತ್ರವೂ ಅವರ ಅಭಿಮಾನಿಗಳ ಪಾಲಿಗೆ ಪಾಠವೇ ಆಗಿ ಹೋಗಿದೆ. ಓರ್ವ ಮಗನಾಗಿ, ತಂದೆಯಾಗಿ, ಪ್ರಿಯತಮನಾಗಿ, ಸಮಾಜ ಸುಧಾರಕನಾಗಿ, ದೇಶ ಕಾಯುವ ಸೈನಿಕನಾಗಿ, ಸರ್ಕಾರಿ ಅಧಿಕಾರಿಯಾಗಿ, ಶಿಕ್ಷಕನಾಗಿ ಹೀಗೆ ಅವರು ನಿರ್ವಹಿಸಿದ ಎಲ್ಲಾ ಪಾತ್ರದಲ್ಲೂ ಒಂದು ಸಮಾಜಿಕ ಕಳಕಳಿಯನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ.

ನೆನಪಿರಲಿ ರಾಜ್‌ಕುಮಾರ್ ನಿಜ ಜೀವನದಲ್ಲಿ ಸಿಗರೇಟ್‌ ಸೇದುತ್ತಿದ್ದರು. ಆದರೆ, ಅದು ತನ್ನ ಅಭಿಮಾನಿಗಳಿಗೆ ಕೆಟ್ಟ ಅನುಕರಣೆಯಾಗಬಾರದು ಎಂಬ ಏಕೈಕ ಕಾರಣಕ್ಕೆ ಅವರು ತೆರೆಯ ಮೇಲೆ ಎಂದಿಗೂ ಸಿಗರೇಟ್‌ ಸೇದುವ ಹಾಗೂ ಮದ್ಯಪಾನ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಅವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ಇಂದು ಅವರ ಜನ್ಮದಿನ. ಆ ನೆಪದಲ್ಲಿ ಡಾ.ರಾಜ್‌ಕುಮಾರ್‌ ಅವರ ಟಾಪ್‌-5 ಅತ್ಯುತ್ತಮ ಚಲನ ಚಿತ್ರಗಳ ಪಟ್ಟಿ ಇಲ್ಲದೆ.

1. ಕಸ್ತೂರಿ ನಿವಾಸ (1971)
ನಿರ್ದೇಶಕ – ದೊರೈ-ಭಗವಾನ್
ಸಂಗೀತ – ಜಿ.ಕೆ.ವೆಂಕಟೇಶ್
ನಿರ್ಮಾಪಕ – ಕೆ.ಸಿ.ಎನ್.ಗೌಡ
ತಾರಾಗಣ – ಡಾ.ರಾಜ್‌ಕುಮಾರ್, ಕೆ.ಎಸ್.ಅಶ್ವತ್, ಜಯಂತಿ, ಭಾರತಿ.

ಕನ್ನಡಿಗರು ಎಂದೂ ಮರೆಯದ ಚಿತ್ರ “ಕಸ್ತೂರಿ ನಿವಾಸ”. ಈ ಚಿತ್ರಕ್ಕಿಂತಲೂ ಹಿಂದೆ ಡಾ.ರಾಜ್‌ಕುಮಾರ್, ಬೇಡರ ಕಣ್ಣಪ್ಪ, ಸತ್ಯ ಹರಿಶ್ಚಂದ್ರ ನಂತಹ ಅದ್ಭುತವಾದ ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರೂ ಸಹ ಕಸ್ತೂರಿ ನಿವಾಸ ಸಿನಿಮಾ ಸೃಷ್ಠಿ ಮಾಡಿದಷ್ಟು ಭಾವನಾತ್ಮಕ ಅಲೆಯನ್ನು ಭಾಗಶಃ ಆ ಕಾಲಘಟ್ಟದಲ್ಲಿ ಯಾವ ಚಿತ್ರವೂ ಸೃಷ್ಠಿಸಿರಲಾರದು.

ಅಣ್ಣಾವ್ರ ಅದ್ಭುತವಾದ ನಟನೆಗೆ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಆ ಕಾಲದಲ್ಲೇ ಈ ಚಿತ್ರ ದಾಖಲೆಯ ಗಳಿಕೆ ಕಂಡಿತ್ತು. ಕನ್ನಡ ಚಿತ್ರೋದ್ಯಮದ ಪಾಲಿಗೆ ಈ ಚಿತ್ರ ಈಗಲೂ ಮೈಲುಗಲ್ಲಾದ್ರೆ, ಕನ್ನಡಿಗರು ಹಾಗೂ ಅಣ್ಣಾವ್ರ ಅಭಿಮಾನಿಗಳ ಪಾಲಿಗೆ ಕಸ್ತೂರಿ ನಿವಾಸ ಎಂದೂ ಮರೆಯಲಾರದ ಚಿತ್ರವೇ ಸರಿ.

2 . ಬಂಗಾರದ ಮನುಷ್ಯ (1972)
ನಿರ್ದೇಶನ – ಸಿದ್ದಲಿಂಗಯ್ಯ
ನಿರ್ಮಾಪಕ – ಆರ್.ಲಕ್ಷ್ಮಣ ಗೋಪಾಲ್
ಸಂಗೀತ – ಜಿ.ಕೆ.ವೆಂಕಟೇಶ್
ತಾರಾಗಣ – ಡಾ.ರಾಜ್‌ಕುಮಾರ್, ಭಾರತಿ, ಎಂ.ಎನ್.ಲಕ್ಷ್ಮೀದೇವಿ

“ಬಂಗಾರದ ಮನುಷ್ಯ” ಕನ್ನಡ ಚಿತ್ರರಂಗದ ಪಾಲಿಗೆ ಮೈಲುಗಲ್ಲಾದ ಚಿತ್ರ. ಡಾ.ರಾಜ್‌ಕುಮಾರ್‌ರವರಿಗೆ ಬಂಗಾರದ ಮನುಷ್ಯ ಎಂಬ ಬಿರುದು ತಂದುಕೊಟ್ಟ ಚಿತ್ರ. ನಿರ್ದೇಶಕ ಸಿದ್ದಲಿಂಗಯ್ಯನವರ ಕಲ್ಪನೆಯಲ್ಲಿ ಮೂಡಿಬಂದಿದ್ದ ಬಂಗಾರದ ಮನುಷ್ಯ ಕೃಷಿ ಹಾಗೂ ಅದರ ಮಹತ್ವವನ್ನು ಸಾರುವ ಚಿತ್ರವಾಗಿದ್ದು, ಆ ಕಾಲಕ್ಕೆ ಭಾರೀ ಜನಪ್ರಿಯತೆ ಗಳಿಸಿತ್ತು.

ಈ ಚಿತ್ರವನ್ನು ವೀಕ್ಷಿಸಿದ ಅಸಂಖ್ಯಾತ ಯುವಕರು ಮತ್ತೆ ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡರು ಎಂಬುದು ಇತಿಹಾಸ. ಹೀಗೆ ಒಂದು ಚಿತ್ರದ ಮೂಲಕ ಸಾಮಾಜಿಕ ಕ್ರಾಂತಿ ಸಾಧ್ಯ ಎಂಬ ಸಾಧ್ಯತೆಯನ್ನು ಕನ್ನಡಿಗರ ಪಾಲಿಗೆ ಸಾಧಿಸಿ ತೋರಿಸಿದ ಕೀರ್ತಿ ಈ ಚಿತ್ರಕ್ಕೆ ಮತ್ತು ಡಾ.ರಾಜ್‌ಕುಮಾರ್‌ ಎಂಬ ಎರಡು ಶಬ್ಧದ ಶಕ್ತಿಗೆ ಸಲ್ಲುತ್ತದೆ.

3. ಗಂಧದಗುಡಿ (1973)
ನಿರ್ದೇಶಕ – ವಿಜಯ್
ನಿರ್ಮಾಪಕ – ಎಂ.ಪಿ.ಶಂಕರ್
ಸಂಗೀತ – ರಾಜನ್-ನಾಗೇಂದ್ರ
ತಾರಾಗಣ – ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಕಲ್ಪನಾ.

ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ಈಗಲೂ ಕಡ್ಡಾಯ ಹಾಡಾಗಿರುವ “ನಾವಾಡುವ ನುಡಿಯೇ ಕನ್ನಡ ನುಡಿ” ಎಂಬ ಹಾಡು ಎಲ್ಲಿಯವರೆಗೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುತ್ತದೆಯೋ ಅಲ್ಲಿಯ ವರೆಗೆ “ಗಂಧದಗುಡಿ” ಎಂಬ ಚಿತ್ರ ಜನರ ಸ್ಮೃತಿ ಪಟಲದಿಂದ ಮರೆಯಾಗಲು ಸಾಧ್ಯವೇ ಇಲ್ಲ.

ಇದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಎರಡು ಮೇರು ಪರ್ವತಗಳಾಗಿರುವ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ ಏಕೈಕ ಚಿತ್ರವೂ ಹೌದು. ಅರಣ್ಯ ಸಂರಕ್ಷಣೆ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸಿದ ಈ ಚಿತ್ರ ಆ ಕಾಲದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಹಿರಿಯ ನಿರ್ದೇಶಕ ವಿಜಯ್ ವೃತ್ತಿ ಬದುಕಿನ ಅತ್ಯಂತ ಶ್ರೇಷ್ಠ ಚಿತ್ರಗಳ ಪೈಕಿ ಇದಕ್ಕೆ ಅಗ್ರಸ್ಥಾನ. ಆದರೆ ಭವಿಷ್ಯದಲ್ಲಿ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಮತ್ತೊಮ್ಮೆ ಜತೆಯಾಗಿ ನಟಿಸದಿರುವುದು ಕನ್ನಡಿಗರ ಪಾಲಿಗೆ ದುರಾದೃಷ್ಟವೇ ಸರಿ.

4. ಒಂದು ಮುತ್ತಿನ ಕಥೆ (1987)
ನಿರ್ದೇಶಕ – ಶಂಕರ್‌ನಾಗ್
ನಿರ್ಮಾಪಕ – ಎ.ದ್ವಾರಕಾನಾಥ್
ಸಂಗೀತ – ಎಲ್.ವೈದ್ಯನಾಥ್
ತಾರಾಗಣ – ಡಾ.ರಾಜ್, ಅರ್ಚನಾ

ಒಂದು ಮುತ್ತಿನ ಕಥೆ” ಶಂಕರ್‌ನಾಗ್ ನಿರ್ದೇಶನದ ಕೊನೆಯ ಚಿತ್ರ. ಅನೇಕ ಕಾರಣಗಳಿಗಾಗಿ ಇದು ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಕನ್ನಡದ ಕ್ರಿಯಾಶೀಲ ಕಲಾವಿದ ಹಾಗೂ ನಿರ್ದೇಶಕ ಎಂದೇ ಹೆಸರಾದ ಶಂಕರ್‌ನಾಗ್ ಈ ಚಿತ್ರದ ಮೂಲಕ ಕನ್ನಡದ ಚಿತ್ರರಂಗವನ್ನು ತಾಂತ್ರಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದ್ದರು.

ಡಾ.ರಾಜ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ಮೊದಲ ಬಾರಿಗೆ ನೀರಿನ ಆಳದಲ್ಲಿ ಚಿತ್ರಿಸಲಾಗಿತ್ತು. ಸಮುದ್ರದಾಳದಲ್ಲಿ ನಾಯಕ ಕೃತಕ ಆಕ್ಟೋಪಸ್ ಜತೆಗೆ ಸಾಹಸ ಮಾಡುವ ಹಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿತ್ತು. ಆ ಕಾಲಕ್ಕೆ ಇದು ಕನ್ನಡ ಚಿತ್ರರಂಗಕ್ಕೆ ತಾಂತ್ರಿಕವಾಗಿ ಹೊಸ ಭಾಷ್ಯ ಬರೆದ ಚಿತ್ರವಾಗಿತ್ತು.

ತಾಂತ್ರಿಕವಾಗಿ ಮಾತ್ರವಲ್ಲದೆ ಚಿತ್ರದ ಕಥೆಯನ್ನೂ ಸಹ ಶಂಕರ್‌ನಾಗ್ ಮನೋಜ್ಞವಾಗಿ ಚಿತ್ರಿಸಿದ್ದರು. ಮುತ್ತಿನ ಶಿಕಾರಿಗೆ ಹೋಗುವ ನಾಯಕನಿಗೆ ದೊಡ್ಡ ಗಾತ್ರದ ಅಪರೂಪದ ಮುತ್ತು ಸಿಗುತ್ತಿದೆ. ಆದರೆ ಅನಕ್ಷರಸ್ಥರಾದ ಈ ಬುಡಕಟ್ಟು ಸಮಾಜದವರನ್ನು ವ್ಯಾಪಾರಿಗಳು ಹೇಗೆಲ್ಲ ಮೋಸ ಮಾಡಿ ಕೊಳ್ಳೆ ಹೊಡೆಯಲು ಪ್ರಯತ್ನಿಸುತ್ತಾರೆ. ಕೊನೆಗೆ ನಾಯಕ ಆ ಮುತ್ತನ್ನು ಏನು ಮಾಡುತ್ತಾನೆ ಎಂಬ ಅಂಶವನ್ನು ಮನಮುಟ್ಟುವಂತೆ ಚಿತ್ರಿಸಲಾಗಿತ್ತು.

ಚಿತ್ರ ಬಿಡುಗಡೆಯಾದಾಗ ಡಾ.ರಾಜ್ ನಟನೆ ಹಾಗೂ ಶಂಕರ್‌ನಾಗ್ ಕ್ರಿಯಾಶೀಲತೆಗೆ ವಿಮರ್ಶಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದ್ರೆ ಡಾ.ರಾಜ್‌ಕುಮಾರ್ ರಂತಹ ಘಟಾನುಘಟಿ ನಟಿಸಿಯೂ ಸಹ ಈ ಚಿತ್ರ ನಿರೀಕ್ಷಿತ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು. ಒಟ್ಟಾರೆ ಕನ್ನಡಿಗರು ನೋಡಲೇಬೇಕಿದ್ದ ಗೆಲ್ಲಿಸಲೇಬೇಕಿದ್ದ ಅಪರೂಪದ ಚಿತ್ರವೊಂದು ಸೋಲಿನ ರುಚಿ ಕಂಡಿದ್ದು ಮಾತ್ರ ವಿಪರ್ಯಾಸ.

5. ಜೀವನ ಚೈತ್ರ (1992)
ನಿರ್ದೇಶಕ – ದೊರೆ-ಭಗವಾನ್
ನಿರ್ಮಾಪಕರು – ಪಾರ್ವತಮ್ಮ ರಾಜ್‌ಕುಮಾರ್
ಸಂಗೀತ – ಉಪೇಂದ್ರ ಕುಮಾರ್
ತಾರಾಗಣ – ಡಾ.ರಾಜ್, ಮಾಧವಿ, ಸುಧಾರಾಣಿ

ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಕಳಕಳಿಯನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಿದ ಹಾಗೂ ಆ ಮೂಲಕ ಕೆಲವು ಪರಿಣಾಮಕಾರಿ ಸಾಮಾಜಿಕ ಬದಲಾವಣೆಗೆ ಕಾರಣವಾದ ಕೆಲವೇ ಕೆಲವು ಚಿತ್ರಗಳ ಪೈಕಿ ಜೀವನ ಚೈತ್ರ ಸಹ ಒಂದು.

ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಮದ್ಯ ಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿಅಭಿನಯಿಸಿದ್ದರು. ಚಿತ್ರದ ನಾಯಕಿ ಮಾಧವಿ. ಸತತ ಮೂರು ವರ್ಷ ಯಾವುದೇ ಸಿನಿಮಾದಲ್ಲಿ ನಟಿಸದ ರಾಜ್‌ಕುಮಾರ್‌ ಈ ಚಿತ್ರದ ಮೂಲಕ ತೆರೆಗೆ ಮರಳಿದ್ದರು. ಅಲ್ಲದೆ, ಈ ಚಿತ್ರ ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದಿತ್ತು.

ಈ ಚಿತ್ರ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ ಎಂಬುದು ವಿಶೇಷ. ಈ ಚಿತ್ರದ ಪರಿಣಾಮವಾಗಿ ಕರ್ನಾಟಕದಲ್ಲಿ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗೂ ಡಾ.ರಾಜ್ ಹಲವು ಅಭಿಮಾನಿಗಳು ಮದ್ಯಪಾನ ತ್ಯಜಿಸಿದರೆಂದು ಅಂದಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಈ ಚಿತ್ರದ “ನಾದಮಯ” ಗೀತೆಗಾಗಿ ರಾಜ್ ಕುಮಾರ್ 40ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಭಾಜನರಾದರು.


ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...