Homeಮುಖಪುಟಡಬ್ಬಿಂಗ್: ತಾತ್ವಿಕ ನೆಲೆ ಹಾಗು ವಾಸ್ತವದ ಸೆಳಕು- ಅಮರ್ ಹೊಳೆಗದ್ದೆ

ಡಬ್ಬಿಂಗ್: ತಾತ್ವಿಕ ನೆಲೆ ಹಾಗು ವಾಸ್ತವದ ಸೆಳಕು- ಅಮರ್ ಹೊಳೆಗದ್ದೆ

ಮನೋರಂಜನಾ ವಲಯ ಹಲವರ ಹೊಟ್ಟೆ ತುಂಬಿಸುತ್ತದೆ. ಅಂತೆಯೇ, ಕೆಲವರನ್ನು ಆಗರ್ಬ ಶ್ರೀಮಂತರನ್ನಾಗಿಯೂ ಮಾಡುತ್ತದೆ. ಬಂಡವಾಳಶಾಹಿ ಹಾಗು ಕೆಲವೇ ವರ್ಗಗಳ ಸಾಂಸ್ಕ್ರುತಿಕ ಹೆಜಮೊನಿಯ ವ್ಯವಸ್ತೆಯನ್ನು ಯಾವತ್ತಿಗೋ ಅದು ತನ್ನದಾಗಿಸಿಕೊಂಡಿದೆ.

- Advertisement -
- Advertisement -

(ಇದನ್ನು ಹೊಸ ಬರಹದಲ್ಲಿ ಬರೆಯಲಾಗಿದ್ದು ಬೇಕಂತಲೇ ಮಹಾಪ್ರಾಣಗಳ ಬಳಕೆಯನ್ನು ಕೈಬಿಡಲಾಗಿದೆ)

ಡಬ್ಬಿಂಗ್ (ಉಲಿಮಾರು, ಮಾತು ಕೂರಿಸುವುದು) ಪರ ಹಾಗು ವಿರೋದದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕಾರಣ, ಕಳೆದ ಒಂದು ತಿಂಗಳಿನಿಂದ ಕನ್ನಡ ಕಿರುತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಸಾಲು ಸಾಲು ಡಬ್ಬಾದ ದಾರಾವಾಹಿಗಳು ಮತ್ತು, ಇವುಗಳ ವಿರುದ್ದ ನಾಡಿನ ಹಿರಿಯ ಕಲಾವಿದರು ಹಾಗು ನಿರ್ದೇಶಕರು, ಸಚಿವ ಆರ್. ಅಶೋಕ್ ಬಳಿ ಕೊಟ್ಟ ದೂರು. ದೂರು ನೀಡಿದವರು ಮತ್ತು ಅವರ ನಿಲುವನ್ನು ಬೆಂಬಲಿಸುವವರು ಒಡ್ಡುವ ಆತಂಕಗಳು ಪ್ರದಾನವಾಗಿ ಇಂತಿವೆ-

ಅ) ದಾರಾವಾಹಿಗಳ ಡಬ್ಬಿಂಗ್‍ನಿಂದಾಗಿ ಕನ್ನಡ ಮನೋರಂಜನೆಯ ವಲಯವು ಹೊರನಾಡಿನ ಮೂಲವಿರುವ ಕೆಲವೇ ಕಲವು ಉದ್ಯಮಪತಿಗಳ ಹಿಡಿತಕ್ಕೆ ಸಿಲುಕಿದೆ. ಅದರಲ್ಲೂ ಮೇಲ್ವರ್ಗದವರ ಹಿಡಿತವೇ ಬಿಗಿಯಾಗಿದೆ.

ಆ) ನಮ್ಮ ನಾಡಿನ ಕಲಾವಿದರು ಹಾಗು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.

ಇ) ಡಬ್ಬ್ ಆದ ದಾರಾವಾಹಿಗಳು ಹೊರನಾಡಿನ ಸಂಸ್ಕ್ರುತಿಗಳನ್ನು ಹೇರುವುದರ ಮೂಲಕ ಹಾಗು, ಪುರಾಣಗಳ ಪ್ರತಿಗಾಮಿ ವ್ಯಾಕ್ಯಾನವನ್ನೇ ಎತ್ತಿ ತೋರಿಸುವುದರ ಮೂಲಕ (ಮಹಾಬಾರತ, ರಾದಾಕ್ರಿಶ್ಣ ಮುಂತಾದ ಸೀರಿಯೆಲ್‍ಗಳು) ಜನರನ್ನು ಈ ನೆಲದ ಬಹುಜನ ಸಂಸ್ಕ್ರುತಿ ಹಾಗು ಪುರೋಗಾಮಿತನದಿಂದ ವಿಮುಕರನ್ನಾಗಿ ಮಾಡುತ್ತಿವೆ.

ಮುಂಚಿನ ಡಬ್ಬಿಂಗ್ ವಿರೋದಿ ಹೋರಾಟಗಳಿಗಿಂತ ಈ ಸಲದ ಹೋರಾಟದ ದನಿಯಲ್ಲಿ ಎರಡು ವಿಶೇಶತೆಗಳು ಕಂಡು ಬರುತ್ತಿವೆ. ಒಂದು, ವಿರೋದಿ ಪಾಳಯದ ಹೆಚ್ಚಿನವರು ಡಬ್ಬಿಂಗ್ ಅನ್ನು ತಾತ್ವಿಕವಾಗಿ ಒಪ್ಪಿರುವುದು (ಅರಿವಿನ ಸರಕುಗಳನ್ನು ಉಣಿಸುವ ಡಿಸ್ಕವರಿ, ಅನಿಮಲ್ ಪ್ಲಾನೆಟ್ ಚ್ಯಾನೆಲ್ ಹಾಗು ಇತರೆ ಮನೋರಂಜನಾ ಸರಕುಗಳಾದ ಕಾರ್ಟೂನ್ ಗಳು ಡಬ್ಬಾಗಲು ತಾತ್ವಿಕವಾಗಿ ಒಪ್ಪಿರುವುದು). ಇನ್ನೊಂದು, ಇವರ ಸಂಸ್ಕ್ರುತಿಯ ವ್ಯಾಕ್ಯಾನದಲ್ಲಿ ಎಡಪಂತೀಯ ಹೊರಳು (ಸಮಾಜಮುಕಿ, ಸಬಾಲ್ಟ್ರನ್ ಸಂಸ್ಕ್ರುತಿಗಳ ಬಗ್ಗೆ ಕಾಳಜಿ). ವಿರೋದಿ ನೆಲೆಯಲ್ಲಿ ಮೂಡಿದ ಈ ವಿಶೇಶತೆಗಳನ್ನು ಗೌರವಿಸ್ತುತ್ತಲೇ, ಅವರಲ್ಲಿ ತಾತ್ವಿಕತೆ ತಂದೊಡ್ಡಿದ ನಿರೀಕ್ಶೆ ಹಾಗು ಅದರ ಪ್ರಾಯೋಗಿಕ ವಾಸ್ತವ ಉಂಟುಮಾಡಿದ ಬ್ರಮನಿರಸನವನ್ನು ಮೊದಲು ಅರಿತು, ಬಳಿಕ ಅವರ ಆತಂಕಗಳನ್ನು ಚರ್ಚಿಸುವುದು ಸೂಕ್ತ.

“ಲೋಕದ ಯಾವುದೇ ನುಡಿಯಲ್ಲಿ ಮೂಡಿದ ಅರಿವು ಹಾಗು ಮನೋರಂಜನೆಯನ್ನು ನನ್ನ ನುಡಿಯಲ್ಲಿ ಪಡೆಯುವ ಹಕ್ಕು ನನಗಿದೆ” ಎಂಬುವುದು ಡಬ್ಬಿಂಗ್ ಪರವಾದ ತಾತ್ವಿಕತೆ. ಇದು ವ್ಯಕ್ತಿನಿಶ್ಟ ಪಾತಳಿಯಿಂದ ರೂಪಿಸಲ್ಪಟ್ಟ ವಯಕ್ತಿಕ ಆಯ್ಕೆ ಸ್ವಾತಂತ್ರ್ಯವನ್ನು ಮುಂದುಮಾಡುವ ತಾತ್ವಿಕತೆ. ಇದು ಸಮುದಾಯದ ಮಟ್ಟಿಗೆ ವಿಸ್ತರಣೆಗೊಂಡಾಗ ನುಡಿಸಮಾನತೆಯ ತಾತ್ವಿಕತೆಯಾಗಿ ರೂಪಾಂತರಗೊಳ್ಳುತ್ತದೆ. ಇವಕ್ಕೆ ಸಂವಾದಿಯಾಗಿ, “ಜನಸಮೂಹದ ಬದುಕಿನ ಮುಂದೆ ವ್ಯಕ್ತಿ ಸ್ವಾಂತಂತ್ರ್ಯ ಗೌಣ”ವೆಂಬ ನಂಬಿಕೆಯಿಂದೇ, ತಾನು ಉಲ್ಲೇಕಿಸಿದ ಜನಸಮೂಹ ಬಾಳುತ್ತಿರುವ ಸಮಾಜದ ಓರೆಕೋರೆಗಳನ್ನು ನೇರ್ಪಡಿಸುವ ಹಾಗು, ಆ ಸಮುದಾಯದ ಸಂಸ್ಕ್ರುತಿ, ಚಿಂತನೆ, ಅನುಬವಗಳನ್ನು ಪ್ರದಾನ ಬೂಮಿಕೆಗೆ ತರುವ ಅಪೇಕ್ಶೆಯನ್ನು ತಾಳ್ದು ವಿಕಸನಗೊಂಡ ಜೀವಪರವೆನಿಸಿಕೊಳ್ಳವ ಸಮೂಹನಿಶ್ಟ ತಾತ್ವಿಕತೆ. ಈ ಮೂರು ವಿಬಿನ್ನ ನೆಲೆಗಳಲ್ಲಿ ನುಡಿಸಮಾನತೆಯು ಡಬ್ಬಿಂಗ್ ವಿರೋದಿಗಳಿಗೆ ಒಪ್ಪಿತವಾಗಿದೆ. ಸಂಗರ್ಶ ಏರ್ಪಟ್ಟಿರುವುದು ವ್ಯಕ್ತಿನಿಶ್ಟ ಹಾಗು ಸಮೂಹನಿಶ್ಟ ತಾತ್ವಿಕತೆಗಳ ಗ್ರಹಿಸುವ ಪರಿಯಲ್ಲಿ. ಡಬ್ಬಿಂಗ್ ಅನ್ನು ವ್ಯಕ್ತಿನಿಶ್ಟ ಪರಿಪ್ರೇಕ್ಶ್ಯದಲ್ಲಿ ಒಪ್ಪಿಯೂ, ಡಬ್ಬ್ ಆದ ಸಾಲು ಸಾಲು ಸೀರಿಯಲ್ಗಳು ತಾವು ನಂಬಿದ ಸಮೂಹನಿಶ್ಟ ತಾತ್ವಿಕತೆಯನ್ನು ಪ್ರಚುರಪಡಿಸದ ಕಾರಣ ಉಂಟಾದ ಬ್ರಮನಿರಸನವು ಡಬ್ಬಿಂಗ್ ವಿರೋದಕ್ಕೆ ಎಡೆಮಾಡಿಕೊಟ್ಟಿದೆ.

ಡಬ್ಬಿಂಗ್ ವಿರೋದಿಗಳ ಸಮೂಹಪರ ಕಾಳಜಿಯನ್ನು ಮೆಚ್ಚುತ್ತ, ತಾತ್ವಿಕ ಮಟ್ಟದಲ್ಲೇ ಅವರಲ್ಲುಂಟಾದ ಗೊಂದಲಗಳತ್ತ ಬೊಟ್ಟುಮಾಡಬೇಕಾಗಿದೆ. ಮೊದಲನೆಯದಾಗಿ, ಒಂದು ನಿರ್ದಿಶ್ಟ ತಾತ್ವಿಕತೆಯನ್ನು ಒಪ್ಪುವುದು ಎಂದರೆ, ಅದರ ಅನುಶ್ಟಾನದಲ್ಲಿ ಎದುರಾಗುವ ಎಲ್ಲಾ ಎಡರುತೊಡರುಗಳನ್ನು ಅಪ್ಪಿಯೂ ತತ್ವನಿಶ್ಟರಾಗಿರುವುದು ಹಾಗು ಆ ತಾತ್ವಿಕ ಚೌಕಟ್ಟನ್ನು ತ್ಯಜಿಸದೆ ಪರಿಹಾರವನ್ನು ಕಂಡುಕೊಳ್ಳುವುದು. ಹಾಗಾಗಿ, ಡಬ್ಬಿಂಗ್ ಅನ್ನು ತಾತ್ವಿಕವಾಗಿ ಒಪ್ಪಿ, ಅದರ ಅನುಶ್ಟಾನದ ಒಂದು ನಿರ್ದಶ್ಟ ಹಂತದಲ್ಲಿ ತೊಡಕುಗಳು ಕಾಣಿಸಿಕೊಂಡಾಗ ಡಬ್ಬಿಂಗನ್ನೇ ವಿರೋದಿಸುವುದು ಸರಿಗಾಣದು. ಇನ್ನು, ಡಬ್ಬಿಂಗ್‍ನಿಂದಾಗಿ ತಮ್ಮ ಸಮೂಹನಿಶ್ಟ ತಾತ್ವಿಕತೆಗೆ ಚ್ಯುತಿಯಾಯಿತೆಂಬ ವಾದವನ್ನು ಒಪ್ಪಿದರೆ, ಹಲವು ಕೇಳ್ವಿಗಳು ಎದುರಾಗುತ್ತವೆ. ಡಬ್ಬಿಂಗ್ ಪೂರ್ವ ಕನ್ನಡ ಸೀರಿಯಲ್‍ಗಳು ಸಮಾಜಮುಕಿ ಸಮೂಹನಿಶ್ಟ ತಾತ್ವಿಕತೆಯನ್ನೇ ಪ್ರತಿಪಾದಿಸುತ್ತಿದ್ದವೇ? ಈ ಸೀರಿಯಲ್‍ಗಳಲ್ಲಿ ಈ ನೆಲದ ಬಹುಸಂಸ್ಕ್ರುತಿ ಹಾಗು ವಯ್ಚಾರಿಕ ಪುರೋಗಾಮಿತನ ಕಂಡುಬಂದಿದ್ದವೇ? ಕನ್ನಾಡಿನ ಬಹುತೇಕ ವಾಹಿನಿಗಳ ಕೇಂದ್ರ ಸ್ತಾನ ಹೊರನಾಡುಗಳೇ ಆಗಿರುವಾಗ ಮತ್ತು, ಅದರ ಹಿಡಿತ ಕೆಲವೇ ಉದ್ಯಮಪತಿಗಳ ಕಯ್ಯಲ್ಲಿರುವಾಗ, ಡಬ್ಬಿಂಗ್ ಮುಂಚಿನ ದಾರಾವಾಹಿಗಳ ಹೆಜೆಮೊನಿಕ್ ಹಿಡಿತದಲ್ಲಿ ಏನಾದರು ವ್ಯತ್ಯಾಸವಿದ್ದಿತೇ? ಆ ದಾರಾವಾಹಿಗಳಲ್ಲೂ ಬೌದ್ದಿಕವಾಗಿ, ಆರ್ತಿಕವಾಗಿ, ಸಾಂಸ್ಕ್ರುತಿಕವಾಗಿ ಆಳಿ, ಲಾಬ ಮಾಡಿಕೊಂಡವರು ಮೇಲ್ವರ್ಗದವರೇ ಅಲ್ಲವೇ? ಹೆಣ್ಣನ್ನು ಬಿಂಬಿಸುವ ರೀತಿಯಲ್ಲಿ ನಮ್ಮ ಸೀರಿಯಲ್ಗಳಿಗೂ, ಡಬ್ಬ್ ಆದವುಗಳಿಗೂ ಏನಾದರೂ ವ್ಯತ್ಯಾಸವಿದೆಯೇ? ಇವಲ್ಲದೆ, ಡಬ್ಬಿಂಗ್ ಹಾಗು ಸಮೂಹನಿಶ್ಟ ತಾತ್ವಿಕತೆಯನ್ನು ಎದುರುಬದುರುಗೊಳಿಸದೆಯೂ, ಈ ಸಂದರ್ಬದಲ್ಲಿ ಎರಡು ಮೂಲಬೂತ ಕೇಳ್ವಿಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕಾಗುತ್ತದೆ. ಮೊದಲನೆಯದು, ಮನೋರಂಜನಾ ವಲಯವು ಕಲಾಬಿವ್ಯಕ್ತಿಯ ತೆರಹೇ ಅತವಾ, ಅದೊಂದು ಉದ್ಯಮವೇ ಎಂಬುದು. ಎರಡನೆಯದು, ನೋಡುಗರಲ್ಲಿ ಅಪೇಕ್ಶಿಸುವ ಪುರೋಗಾಮಿತನವನ್ನು ಗಮನದಲ್ಲಿರಿಸಿಕೊಂಡು ಅವರ ಆಯ್ಕೆ ಸ್ವಾಂತಂತ್ರ್ಯವನ್ನು ಕಿತ್ತುಕೊಳ್ಳುವುದು, ಆ ಜನಸಾಮಾನ್ಯರನ್ನು ದಡ್ಡರೆಂದು, ಅರಿವಿನ ಹಂತದಲ್ಲಿ ಕೀಳಾಗಿರುವವರೆಂದು ಪರಿಗಣಿಸಿದ ಹಾಗಾಗುವುದಿಲ್ಲವೇ ಎಂಬುದು. (ಕೊರೋನಾ ಬೀತಿಯ ಹೊತ್ತಿನಲ್ಲಿ ಕುಟುಂಬಸಮೇತರಾಗಿ ಮಹಾಬಾರತ, ರಾದಾಕ್ರಿಶ್ಣ ಸೀರಿಯಲ್‍ಗಳನ್ನು ನೋಡುತ್ತ ಮಾನಸಿಕ ನೆಮ್ಮದಿ ಹಾಗು ಕೌಟುಂಬಿಕ ಸಾಮರಸ್ಯ ಕಂಡುಕೊಳ್ಳುತ್ತಿರುವ ಎಶ್ಟೋ ಸಂಸಾರಗಳನ್ನು ನಾವು ದಡ್ಡರೆಂದು ಪರಿಗಣಿಸಬೇಕೇ?).

“ನಾಗರಿಕ ಸಮಾಜದ ಸಾಮಾಜಿಕ ಸಂಸ್ತೆಗಳ ಮೂಲಕವೇ ಯಜಮಾನಿಕೆಯು ತನ್ನ ಕಾರ್ಯವನ್ನು ನಡೆಸುತ್ತದೆ. ತನ್ನ ಪ್ರಾಬಲ್ಯಕ್ಕಾಗಿ ನಾಗರಿಕ ಸಮಾಜಗಳಲ್ಲಿ ನಿರಂತರವಾಗಿ ಸಮ್ಮತಿಯನ್ನು ಅತ್ಯಂತ ಸಕ್ರಿಯವಾಗಿ ರೂಪಿಸುವ ಜರೂರತ್ತು ಅದಕ್ಕಿರುತ್ತದೆ” ಎಂಬ ಅಂತೋನಿಯೋ ಗ್ರಾಮ್ಶಿಯವರ ಮಾತುಗಳು (ಡಾ. ಮೇಟಿ ಮಲ್ಲಿಕಾರ್ಜುನ – ಪ್ರಸ್ತಾವನೆ (ಪುಟ 53) – “ತಾತ್ವಿಕತೆ” – ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ – 01 – ಕರ್ನಾಟಕ ಸಾಹಿತ್ಯ ಅಕಾಡೆಮಿ) ಇಲ್ಲಿ ಉಲ್ಲೇಕಾರ್ಹ. ಡಬ್ಬಿಂಗ್ ಇರಲಿ, ಇಲ್ಲದಿರಲಿ ಮನೋರಂಜನಾವಲಯದಲ್ಲಿ ತನ್ನ ಬೌದ್ದಿಕ, ಆರ್ತಿಕ ಹಾಗು ಸಾಂಸ್ಕ್ರುತಿಕ ಒಡೆತನವನ್ನು ಒಂದು ಪ್ರಬಲ ವರ್ಗ ಸಾದಿಸುವುದು ನಡೆದೇ ಇರುತ್ತದೆ. ಸಮೂಹನಿಶ್ಟ ತಾತ್ವಿಕತೆಯ ಪಾತಳಿಯಿಂದ ಈ ಹೆಜೆಮೊನಿಯ ವಿರುದ್ದ ಹೂಡಬೇಕಾದ ಹೂಟ ಮತ್ತು ಹೋರಾಟದ ಪರಿಯನ್ನು ಚರ್ಚಿಸುವ ತುರ್ತು ಒದಗಿಬಂದಿದೆ, ನಿಜ. ಆದರೆ ಈ ಪರಿ ವ್ಯಕ್ತಿ ಹಾಗು ನುಡಿ ಸ್ವಾಂತಂತ್ರ್ಯದ ದನಿಯನ್ನು ಉಡುಗಿಸಬಾರದು. ಯಾಜಮಾನ್ಯ ವಿರೋದಿ ಹೋರಾಟವು ಡಬ್ಬಿಂಗ್ ವಿರೋದಿ ಹೋರಾಟಕ್ಕೆ ಬಂದು ನಿಂತಿರುವುದು ಒಂದು ವಿಪರ್ಯಾಸ. ಎರಡೂ ತಾತ್ವಿಕತೆಗಳ ಬಿನ್ನ ನೆಲೆ ಹಾಗು ದಕ್ಕಿಸಿಕೊಳ್ಳಲು ಸವೆಯಬೇಕಾದ ಬಿನ್ನ ದಾರಿಗಳ ಸ್ಪಶ್ಟ ಅರಿವು ಮೂಡಿದರೆ, ಮೊದಲ (ಅ) ಹಾಗು ಮೂರನೆಯ (ಇ) ಆತಂಕಗಳು ಡಬ್ಬಿಂಗ್ ಪರಿಪ್ರೇಕ್ಶ್ಯದಲ್ಲಿ ನಿರರ್ತಕವೆನಿಸುತ್ತವೆ.

ಕಲಾವಿದರ ಹಾಗು ಕಾರ್ಮಿಕರ ಕುರಿತಾದ ಆತಂಕ ಸಮಂಜಸವಾದದ್ದೇ. ಆದರೆ, ಸಾಲು ಸಾಲು ಡಬ್ಬಿಂಗ್ ದಾರಾವಾಹಿಗಳು ಮೂಡಿಬರುತ್ತಿರುವ ಈ ಕಾಲದ ಅವಸ್ತೆಯನ್ನು ಪರಿಗಣಿಸಬೇಕು. ಕೊರೋನಾ ಬೀತಿಯಲ್ಲಿ ಸರಿಸುಮಾರು ಎರಡು ತಿಂಗಳು ಚಿತ್ರೀಕರಣವೇ ನಿಂತಿದ್ದ ಸಂದರ್ಬದಲ್ಲಿ, ಸ್ತಳೀಯ ಮನೋರಂಜನಾ ಸರಕುಗಳಿಲ್ಲದೆ ವಾಹಿನಿಗಳು ಮುಚ್ಚಿದ ಎತ್ತುಗೆಗಳು ಇರುವಾಗ, ಉಸಿರಾಡಲಾದರೂ ಡಬ್ಬಿಂಗ್ ಸರಕುಗಳಿಗೆ ಕೆಲ ವಾಹಿನಿಗಳು ಮೊರೆಹೋಗಿದ್ದು ಸಹಜವೇ. ಚ್ಯಾನಲ್ಗಳೇ ಮುಚ್ಚಿ ಹೋದರೆ ನಾವೇ ತೆಗೆದ ದಾರಾವಾಹಿಗಳನ್ನು ಯಾವುದರಲ್ಲಿ ಪ್ರಸರಿಸುವುದು? ಹೇಳಿಕೊಳ್ಳುವಂತಹ ಒಂದು ವಾಹಿನಿಯೂ ನಮ್ಮ ಕಯ್ಯಲ್ಲಿ ಇಲ್ಲದಿರುವಾಗ! (ನಮ್ಮ ಕಯ್ಯಲ್ಲಿರಬೇಕು ಎಂದು ಬಯಸುವ ವಾಹಿನಿಯು ಕೆಲವೇ ಉದ್ಯಮಪತಿಗಳ ಹಿಡಿತಲ್ಲಿರುವಂತದ್ದೋ ಅತವಾ, ಸಾಮಾಜಿಕ ಒಡೆತನದಲ್ಲಿರುವಂತದ್ದೋ ಎಂಬ ಚರ್ಚೆಯೂ ಆಗಬೇಕು). ಆದರೆ, ಒಂದಂತೂ ದಿಟ. ಈ ಪರಿಸ್ತಿತಿಯು ಯಾವತ್ತಿಗೂ ಮುಂದುವರೆಯಲಾರದು ಎಂಬುದನ್ನು ನಾವು, ಡಬ್ಬಿಂಗ್‌ಅನ್ನು ಒಪ್ಪಿಕೊಂಡಿರುವ ನೆರೆಯ ತಮಿಳು ಹಾಗು ತೆಲುಗು ಮನೋರಂಜನಾ ವಾಹಿನಿಗಳನ್ನು ನೋಡಿ ಅರಿತುಕೊಳ್ಳಬಹುದು. ಹೊಸತೊಂದು ವಸ್ತು ಮಾರುಕಟ್ಟೆಯಲ್ಲಿ (ಈ ಪದ ಬಳಸದೆ ವಿದಿಯಿಲ್ಲ) ಬಂದಾಗ ಅದು ಸಂಚಲನ ಮೂಡಿಸುತ್ತದೆ. ಕೊರೋನಾ ಹಾಗು ಲಾಕ್‍ಡೌನ್ ಸಂದರ್ಬದಲ್ಲಿ ಅದು ಸಂಜೀವಿನಿಯಾಗಿಯೂ ಕಂಡಿರಬಹುದು. ಆದರೆ, ಚಿತ್ರೀಕರಣ ಮತ್ತೆ ಗರಿಗೆದರಿದೆ. ಡಬ್ಬಿಂಗ್ ದಾರಾವಾಹಿಗಳ ಎಣಿಕೆ ಕಡಿಮೆಗೊಂಡು ವಾಹಿನಿಗಳ ಸರಕುಗಳು ಒಂದು ಹದಕ್ಕೆ ತಲುಪುತ್ತವೆ. ಕಲಾವಿದರೂ, ಕಾರ್ಮಿಕರೂ ಕೆಲಸಗಳನ್ನು ಕಂಡುಕೊಳ್ಳುತ್ತಾರೆ. ಅಲ್ಲಿಯವರೆಗೆ ನಾವು, ಸಹಕಾರ ಸಂಸ್ತೆಗಳು ಹಾಗು ಸರಕಾರದ ಸಹಯೋಗದಲ್ಲಿ ಅವರಿಗೆ ನೆರವನೀಯಬೇಕಾಗುತ್ತದೆ. ಈಗಶ್ಟೇ ಕನ್ನಡ ದಾರಾವಾಹಿ ಜಗತ್ತಿಗೆ ಕಾಲಿಟ್ಟಿರುವ ಡಬ್ಬಿಂಗ್ ನ ಕುರಿತಾಗಿ ಈಗಲೇ ತೀರ್ಪು ನೀಡುವುದು ಆತುರದ ನಡೆಯಾದೀತು. ಡಬ್ಬಿಂಗ್ ಕುರಿತು ಮಿಕ್ಕೆಲ್ಲಾ ಆತಂಕಗಳಿಗೆ “ಬನವಾಸಿ ಬಳಗ”ದ ಜಿ. ಆನಂದ್ ಅವರ “ಡಬ್ಬಿಂಗ್ : ಇದು ಕನ್ನಡಪರ” ಪುಸ್ತಕ ಸೂಕ್ತ ಉತ್ತರಗಳನ್ನು ನೀಡಿರುತ್ತವೆ ಎಂದು ಬಾವಿಸಿದ್ದೇನೆ.

ಮನೋರಂಜನಾ ವಲಯ ಹಲವರ ಹೊಟ್ಟೆ ತುಂಬಿಸುತ್ತದೆ. ಅಂತೆಯೇ, ಕೆಲವರನ್ನು ಆಗರ್ಬ ಶ್ರೀಮಂತರನ್ನಾಗಿಯೂ ಮಾಡುತ್ತದೆ. ಬಂಡವಾಳಶಾಹಿ ಹಾಗು ಕೆಲವೇ ವರ್ಗಗಳ ಸಾಂಸ್ಕ್ರುತಿಕ ಹೆಜಮೊನಿಯ ವ್ಯವಸ್ತೆಯನ್ನು ಯಾವತ್ತಿಗೋ ಅದು ತನ್ನದಾಗಿಸಿಕೊಂಡಿದೆ. ಡಬಿಂಗ್‌ ಇಲ್ಲವೆ, ಇನ್ಯಾವುದೇ ಉಪವ್ಯವಸ್ತೆಗಳು ಮಯ್ದೋರಿದರೂ, ಅವುಗಳಿಂದ ಉಂಟಾಗುವ ಬಾದಕಗಳಿಗೆ ಆ ಪ್ರದಾನ ವ್ಯವಸ್ತೆಯೇ ಕಾರಣ. ಅದರ ವಿರುದ್ದದ ಸಾಂಗಿಕ ಹೋರಾಟದ ದಾರಿಯಿಂದ ಸಮೂಹನಿಶ್ಟ ತಾತ್ವಿಕತೆಯು ತನ್ನನ್ನು ತಾನು ವಿಸ್ತರಿಸಿಕೊಳ್ಳಬೇಕು. ವ್ಯಕ್ತಿ ಹಾಗು ನುಡಿ ಸ್ವಾಂತಂತ್ರ್ಯದ ತಾತ್ವಿಕತೆಯನ್ನು ಕುಬ್ಜಗೊಳಿಸುವ ದಾರಿಯಿಂದಲ್ಲ.


ಇದನ್ನು ಓದಿ: ಮತ್ತೆ ಗರಿಗೆದರಿದ ಡಬ್ಬಿಂಗ್ ವಿವಾದ: ಎರಡಲುಗಿನ ಖಡ್ಗದ ಎದುರು…! – ಬಿ.ಸುರೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...