Homeಮುಖಪುಟಡಬ್ಬಿಂಗ್: ತಾತ್ವಿಕ ನೆಲೆ ಹಾಗು ವಾಸ್ತವದ ಸೆಳಕು- ಅಮರ್ ಹೊಳೆಗದ್ದೆ

ಡಬ್ಬಿಂಗ್: ತಾತ್ವಿಕ ನೆಲೆ ಹಾಗು ವಾಸ್ತವದ ಸೆಳಕು- ಅಮರ್ ಹೊಳೆಗದ್ದೆ

ಮನೋರಂಜನಾ ವಲಯ ಹಲವರ ಹೊಟ್ಟೆ ತುಂಬಿಸುತ್ತದೆ. ಅಂತೆಯೇ, ಕೆಲವರನ್ನು ಆಗರ್ಬ ಶ್ರೀಮಂತರನ್ನಾಗಿಯೂ ಮಾಡುತ್ತದೆ. ಬಂಡವಾಳಶಾಹಿ ಹಾಗು ಕೆಲವೇ ವರ್ಗಗಳ ಸಾಂಸ್ಕ್ರುತಿಕ ಹೆಜಮೊನಿಯ ವ್ಯವಸ್ತೆಯನ್ನು ಯಾವತ್ತಿಗೋ ಅದು ತನ್ನದಾಗಿಸಿಕೊಂಡಿದೆ.

- Advertisement -
- Advertisement -

(ಇದನ್ನು ಹೊಸ ಬರಹದಲ್ಲಿ ಬರೆಯಲಾಗಿದ್ದು ಬೇಕಂತಲೇ ಮಹಾಪ್ರಾಣಗಳ ಬಳಕೆಯನ್ನು ಕೈಬಿಡಲಾಗಿದೆ)

ಡಬ್ಬಿಂಗ್ (ಉಲಿಮಾರು, ಮಾತು ಕೂರಿಸುವುದು) ಪರ ಹಾಗು ವಿರೋದದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕಾರಣ, ಕಳೆದ ಒಂದು ತಿಂಗಳಿನಿಂದ ಕನ್ನಡ ಕಿರುತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಸಾಲು ಸಾಲು ಡಬ್ಬಾದ ದಾರಾವಾಹಿಗಳು ಮತ್ತು, ಇವುಗಳ ವಿರುದ್ದ ನಾಡಿನ ಹಿರಿಯ ಕಲಾವಿದರು ಹಾಗು ನಿರ್ದೇಶಕರು, ಸಚಿವ ಆರ್. ಅಶೋಕ್ ಬಳಿ ಕೊಟ್ಟ ದೂರು. ದೂರು ನೀಡಿದವರು ಮತ್ತು ಅವರ ನಿಲುವನ್ನು ಬೆಂಬಲಿಸುವವರು ಒಡ್ಡುವ ಆತಂಕಗಳು ಪ್ರದಾನವಾಗಿ ಇಂತಿವೆ-

ಅ) ದಾರಾವಾಹಿಗಳ ಡಬ್ಬಿಂಗ್‍ನಿಂದಾಗಿ ಕನ್ನಡ ಮನೋರಂಜನೆಯ ವಲಯವು ಹೊರನಾಡಿನ ಮೂಲವಿರುವ ಕೆಲವೇ ಕಲವು ಉದ್ಯಮಪತಿಗಳ ಹಿಡಿತಕ್ಕೆ ಸಿಲುಕಿದೆ. ಅದರಲ್ಲೂ ಮೇಲ್ವರ್ಗದವರ ಹಿಡಿತವೇ ಬಿಗಿಯಾಗಿದೆ.

ಆ) ನಮ್ಮ ನಾಡಿನ ಕಲಾವಿದರು ಹಾಗು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.

ಇ) ಡಬ್ಬ್ ಆದ ದಾರಾವಾಹಿಗಳು ಹೊರನಾಡಿನ ಸಂಸ್ಕ್ರುತಿಗಳನ್ನು ಹೇರುವುದರ ಮೂಲಕ ಹಾಗು, ಪುರಾಣಗಳ ಪ್ರತಿಗಾಮಿ ವ್ಯಾಕ್ಯಾನವನ್ನೇ ಎತ್ತಿ ತೋರಿಸುವುದರ ಮೂಲಕ (ಮಹಾಬಾರತ, ರಾದಾಕ್ರಿಶ್ಣ ಮುಂತಾದ ಸೀರಿಯೆಲ್‍ಗಳು) ಜನರನ್ನು ಈ ನೆಲದ ಬಹುಜನ ಸಂಸ್ಕ್ರುತಿ ಹಾಗು ಪುರೋಗಾಮಿತನದಿಂದ ವಿಮುಕರನ್ನಾಗಿ ಮಾಡುತ್ತಿವೆ.

ಮುಂಚಿನ ಡಬ್ಬಿಂಗ್ ವಿರೋದಿ ಹೋರಾಟಗಳಿಗಿಂತ ಈ ಸಲದ ಹೋರಾಟದ ದನಿಯಲ್ಲಿ ಎರಡು ವಿಶೇಶತೆಗಳು ಕಂಡು ಬರುತ್ತಿವೆ. ಒಂದು, ವಿರೋದಿ ಪಾಳಯದ ಹೆಚ್ಚಿನವರು ಡಬ್ಬಿಂಗ್ ಅನ್ನು ತಾತ್ವಿಕವಾಗಿ ಒಪ್ಪಿರುವುದು (ಅರಿವಿನ ಸರಕುಗಳನ್ನು ಉಣಿಸುವ ಡಿಸ್ಕವರಿ, ಅನಿಮಲ್ ಪ್ಲಾನೆಟ್ ಚ್ಯಾನೆಲ್ ಹಾಗು ಇತರೆ ಮನೋರಂಜನಾ ಸರಕುಗಳಾದ ಕಾರ್ಟೂನ್ ಗಳು ಡಬ್ಬಾಗಲು ತಾತ್ವಿಕವಾಗಿ ಒಪ್ಪಿರುವುದು). ಇನ್ನೊಂದು, ಇವರ ಸಂಸ್ಕ್ರುತಿಯ ವ್ಯಾಕ್ಯಾನದಲ್ಲಿ ಎಡಪಂತೀಯ ಹೊರಳು (ಸಮಾಜಮುಕಿ, ಸಬಾಲ್ಟ್ರನ್ ಸಂಸ್ಕ್ರುತಿಗಳ ಬಗ್ಗೆ ಕಾಳಜಿ). ವಿರೋದಿ ನೆಲೆಯಲ್ಲಿ ಮೂಡಿದ ಈ ವಿಶೇಶತೆಗಳನ್ನು ಗೌರವಿಸ್ತುತ್ತಲೇ, ಅವರಲ್ಲಿ ತಾತ್ವಿಕತೆ ತಂದೊಡ್ಡಿದ ನಿರೀಕ್ಶೆ ಹಾಗು ಅದರ ಪ್ರಾಯೋಗಿಕ ವಾಸ್ತವ ಉಂಟುಮಾಡಿದ ಬ್ರಮನಿರಸನವನ್ನು ಮೊದಲು ಅರಿತು, ಬಳಿಕ ಅವರ ಆತಂಕಗಳನ್ನು ಚರ್ಚಿಸುವುದು ಸೂಕ್ತ.

“ಲೋಕದ ಯಾವುದೇ ನುಡಿಯಲ್ಲಿ ಮೂಡಿದ ಅರಿವು ಹಾಗು ಮನೋರಂಜನೆಯನ್ನು ನನ್ನ ನುಡಿಯಲ್ಲಿ ಪಡೆಯುವ ಹಕ್ಕು ನನಗಿದೆ” ಎಂಬುವುದು ಡಬ್ಬಿಂಗ್ ಪರವಾದ ತಾತ್ವಿಕತೆ. ಇದು ವ್ಯಕ್ತಿನಿಶ್ಟ ಪಾತಳಿಯಿಂದ ರೂಪಿಸಲ್ಪಟ್ಟ ವಯಕ್ತಿಕ ಆಯ್ಕೆ ಸ್ವಾತಂತ್ರ್ಯವನ್ನು ಮುಂದುಮಾಡುವ ತಾತ್ವಿಕತೆ. ಇದು ಸಮುದಾಯದ ಮಟ್ಟಿಗೆ ವಿಸ್ತರಣೆಗೊಂಡಾಗ ನುಡಿಸಮಾನತೆಯ ತಾತ್ವಿಕತೆಯಾಗಿ ರೂಪಾಂತರಗೊಳ್ಳುತ್ತದೆ. ಇವಕ್ಕೆ ಸಂವಾದಿಯಾಗಿ, “ಜನಸಮೂಹದ ಬದುಕಿನ ಮುಂದೆ ವ್ಯಕ್ತಿ ಸ್ವಾಂತಂತ್ರ್ಯ ಗೌಣ”ವೆಂಬ ನಂಬಿಕೆಯಿಂದೇ, ತಾನು ಉಲ್ಲೇಕಿಸಿದ ಜನಸಮೂಹ ಬಾಳುತ್ತಿರುವ ಸಮಾಜದ ಓರೆಕೋರೆಗಳನ್ನು ನೇರ್ಪಡಿಸುವ ಹಾಗು, ಆ ಸಮುದಾಯದ ಸಂಸ್ಕ್ರುತಿ, ಚಿಂತನೆ, ಅನುಬವಗಳನ್ನು ಪ್ರದಾನ ಬೂಮಿಕೆಗೆ ತರುವ ಅಪೇಕ್ಶೆಯನ್ನು ತಾಳ್ದು ವಿಕಸನಗೊಂಡ ಜೀವಪರವೆನಿಸಿಕೊಳ್ಳವ ಸಮೂಹನಿಶ್ಟ ತಾತ್ವಿಕತೆ. ಈ ಮೂರು ವಿಬಿನ್ನ ನೆಲೆಗಳಲ್ಲಿ ನುಡಿಸಮಾನತೆಯು ಡಬ್ಬಿಂಗ್ ವಿರೋದಿಗಳಿಗೆ ಒಪ್ಪಿತವಾಗಿದೆ. ಸಂಗರ್ಶ ಏರ್ಪಟ್ಟಿರುವುದು ವ್ಯಕ್ತಿನಿಶ್ಟ ಹಾಗು ಸಮೂಹನಿಶ್ಟ ತಾತ್ವಿಕತೆಗಳ ಗ್ರಹಿಸುವ ಪರಿಯಲ್ಲಿ. ಡಬ್ಬಿಂಗ್ ಅನ್ನು ವ್ಯಕ್ತಿನಿಶ್ಟ ಪರಿಪ್ರೇಕ್ಶ್ಯದಲ್ಲಿ ಒಪ್ಪಿಯೂ, ಡಬ್ಬ್ ಆದ ಸಾಲು ಸಾಲು ಸೀರಿಯಲ್ಗಳು ತಾವು ನಂಬಿದ ಸಮೂಹನಿಶ್ಟ ತಾತ್ವಿಕತೆಯನ್ನು ಪ್ರಚುರಪಡಿಸದ ಕಾರಣ ಉಂಟಾದ ಬ್ರಮನಿರಸನವು ಡಬ್ಬಿಂಗ್ ವಿರೋದಕ್ಕೆ ಎಡೆಮಾಡಿಕೊಟ್ಟಿದೆ.

ಡಬ್ಬಿಂಗ್ ವಿರೋದಿಗಳ ಸಮೂಹಪರ ಕಾಳಜಿಯನ್ನು ಮೆಚ್ಚುತ್ತ, ತಾತ್ವಿಕ ಮಟ್ಟದಲ್ಲೇ ಅವರಲ್ಲುಂಟಾದ ಗೊಂದಲಗಳತ್ತ ಬೊಟ್ಟುಮಾಡಬೇಕಾಗಿದೆ. ಮೊದಲನೆಯದಾಗಿ, ಒಂದು ನಿರ್ದಿಶ್ಟ ತಾತ್ವಿಕತೆಯನ್ನು ಒಪ್ಪುವುದು ಎಂದರೆ, ಅದರ ಅನುಶ್ಟಾನದಲ್ಲಿ ಎದುರಾಗುವ ಎಲ್ಲಾ ಎಡರುತೊಡರುಗಳನ್ನು ಅಪ್ಪಿಯೂ ತತ್ವನಿಶ್ಟರಾಗಿರುವುದು ಹಾಗು ಆ ತಾತ್ವಿಕ ಚೌಕಟ್ಟನ್ನು ತ್ಯಜಿಸದೆ ಪರಿಹಾರವನ್ನು ಕಂಡುಕೊಳ್ಳುವುದು. ಹಾಗಾಗಿ, ಡಬ್ಬಿಂಗ್ ಅನ್ನು ತಾತ್ವಿಕವಾಗಿ ಒಪ್ಪಿ, ಅದರ ಅನುಶ್ಟಾನದ ಒಂದು ನಿರ್ದಶ್ಟ ಹಂತದಲ್ಲಿ ತೊಡಕುಗಳು ಕಾಣಿಸಿಕೊಂಡಾಗ ಡಬ್ಬಿಂಗನ್ನೇ ವಿರೋದಿಸುವುದು ಸರಿಗಾಣದು. ಇನ್ನು, ಡಬ್ಬಿಂಗ್‍ನಿಂದಾಗಿ ತಮ್ಮ ಸಮೂಹನಿಶ್ಟ ತಾತ್ವಿಕತೆಗೆ ಚ್ಯುತಿಯಾಯಿತೆಂಬ ವಾದವನ್ನು ಒಪ್ಪಿದರೆ, ಹಲವು ಕೇಳ್ವಿಗಳು ಎದುರಾಗುತ್ತವೆ. ಡಬ್ಬಿಂಗ್ ಪೂರ್ವ ಕನ್ನಡ ಸೀರಿಯಲ್‍ಗಳು ಸಮಾಜಮುಕಿ ಸಮೂಹನಿಶ್ಟ ತಾತ್ವಿಕತೆಯನ್ನೇ ಪ್ರತಿಪಾದಿಸುತ್ತಿದ್ದವೇ? ಈ ಸೀರಿಯಲ್‍ಗಳಲ್ಲಿ ಈ ನೆಲದ ಬಹುಸಂಸ್ಕ್ರುತಿ ಹಾಗು ವಯ್ಚಾರಿಕ ಪುರೋಗಾಮಿತನ ಕಂಡುಬಂದಿದ್ದವೇ? ಕನ್ನಾಡಿನ ಬಹುತೇಕ ವಾಹಿನಿಗಳ ಕೇಂದ್ರ ಸ್ತಾನ ಹೊರನಾಡುಗಳೇ ಆಗಿರುವಾಗ ಮತ್ತು, ಅದರ ಹಿಡಿತ ಕೆಲವೇ ಉದ್ಯಮಪತಿಗಳ ಕಯ್ಯಲ್ಲಿರುವಾಗ, ಡಬ್ಬಿಂಗ್ ಮುಂಚಿನ ದಾರಾವಾಹಿಗಳ ಹೆಜೆಮೊನಿಕ್ ಹಿಡಿತದಲ್ಲಿ ಏನಾದರು ವ್ಯತ್ಯಾಸವಿದ್ದಿತೇ? ಆ ದಾರಾವಾಹಿಗಳಲ್ಲೂ ಬೌದ್ದಿಕವಾಗಿ, ಆರ್ತಿಕವಾಗಿ, ಸಾಂಸ್ಕ್ರುತಿಕವಾಗಿ ಆಳಿ, ಲಾಬ ಮಾಡಿಕೊಂಡವರು ಮೇಲ್ವರ್ಗದವರೇ ಅಲ್ಲವೇ? ಹೆಣ್ಣನ್ನು ಬಿಂಬಿಸುವ ರೀತಿಯಲ್ಲಿ ನಮ್ಮ ಸೀರಿಯಲ್ಗಳಿಗೂ, ಡಬ್ಬ್ ಆದವುಗಳಿಗೂ ಏನಾದರೂ ವ್ಯತ್ಯಾಸವಿದೆಯೇ? ಇವಲ್ಲದೆ, ಡಬ್ಬಿಂಗ್ ಹಾಗು ಸಮೂಹನಿಶ್ಟ ತಾತ್ವಿಕತೆಯನ್ನು ಎದುರುಬದುರುಗೊಳಿಸದೆಯೂ, ಈ ಸಂದರ್ಬದಲ್ಲಿ ಎರಡು ಮೂಲಬೂತ ಕೇಳ್ವಿಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕಾಗುತ್ತದೆ. ಮೊದಲನೆಯದು, ಮನೋರಂಜನಾ ವಲಯವು ಕಲಾಬಿವ್ಯಕ್ತಿಯ ತೆರಹೇ ಅತವಾ, ಅದೊಂದು ಉದ್ಯಮವೇ ಎಂಬುದು. ಎರಡನೆಯದು, ನೋಡುಗರಲ್ಲಿ ಅಪೇಕ್ಶಿಸುವ ಪುರೋಗಾಮಿತನವನ್ನು ಗಮನದಲ್ಲಿರಿಸಿಕೊಂಡು ಅವರ ಆಯ್ಕೆ ಸ್ವಾಂತಂತ್ರ್ಯವನ್ನು ಕಿತ್ತುಕೊಳ್ಳುವುದು, ಆ ಜನಸಾಮಾನ್ಯರನ್ನು ದಡ್ಡರೆಂದು, ಅರಿವಿನ ಹಂತದಲ್ಲಿ ಕೀಳಾಗಿರುವವರೆಂದು ಪರಿಗಣಿಸಿದ ಹಾಗಾಗುವುದಿಲ್ಲವೇ ಎಂಬುದು. (ಕೊರೋನಾ ಬೀತಿಯ ಹೊತ್ತಿನಲ್ಲಿ ಕುಟುಂಬಸಮೇತರಾಗಿ ಮಹಾಬಾರತ, ರಾದಾಕ್ರಿಶ್ಣ ಸೀರಿಯಲ್‍ಗಳನ್ನು ನೋಡುತ್ತ ಮಾನಸಿಕ ನೆಮ್ಮದಿ ಹಾಗು ಕೌಟುಂಬಿಕ ಸಾಮರಸ್ಯ ಕಂಡುಕೊಳ್ಳುತ್ತಿರುವ ಎಶ್ಟೋ ಸಂಸಾರಗಳನ್ನು ನಾವು ದಡ್ಡರೆಂದು ಪರಿಗಣಿಸಬೇಕೇ?).

“ನಾಗರಿಕ ಸಮಾಜದ ಸಾಮಾಜಿಕ ಸಂಸ್ತೆಗಳ ಮೂಲಕವೇ ಯಜಮಾನಿಕೆಯು ತನ್ನ ಕಾರ್ಯವನ್ನು ನಡೆಸುತ್ತದೆ. ತನ್ನ ಪ್ರಾಬಲ್ಯಕ್ಕಾಗಿ ನಾಗರಿಕ ಸಮಾಜಗಳಲ್ಲಿ ನಿರಂತರವಾಗಿ ಸಮ್ಮತಿಯನ್ನು ಅತ್ಯಂತ ಸಕ್ರಿಯವಾಗಿ ರೂಪಿಸುವ ಜರೂರತ್ತು ಅದಕ್ಕಿರುತ್ತದೆ” ಎಂಬ ಅಂತೋನಿಯೋ ಗ್ರಾಮ್ಶಿಯವರ ಮಾತುಗಳು (ಡಾ. ಮೇಟಿ ಮಲ್ಲಿಕಾರ್ಜುನ – ಪ್ರಸ್ತಾವನೆ (ಪುಟ 53) – “ತಾತ್ವಿಕತೆ” – ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ – 01 – ಕರ್ನಾಟಕ ಸಾಹಿತ್ಯ ಅಕಾಡೆಮಿ) ಇಲ್ಲಿ ಉಲ್ಲೇಕಾರ್ಹ. ಡಬ್ಬಿಂಗ್ ಇರಲಿ, ಇಲ್ಲದಿರಲಿ ಮನೋರಂಜನಾವಲಯದಲ್ಲಿ ತನ್ನ ಬೌದ್ದಿಕ, ಆರ್ತಿಕ ಹಾಗು ಸಾಂಸ್ಕ್ರುತಿಕ ಒಡೆತನವನ್ನು ಒಂದು ಪ್ರಬಲ ವರ್ಗ ಸಾದಿಸುವುದು ನಡೆದೇ ಇರುತ್ತದೆ. ಸಮೂಹನಿಶ್ಟ ತಾತ್ವಿಕತೆಯ ಪಾತಳಿಯಿಂದ ಈ ಹೆಜೆಮೊನಿಯ ವಿರುದ್ದ ಹೂಡಬೇಕಾದ ಹೂಟ ಮತ್ತು ಹೋರಾಟದ ಪರಿಯನ್ನು ಚರ್ಚಿಸುವ ತುರ್ತು ಒದಗಿಬಂದಿದೆ, ನಿಜ. ಆದರೆ ಈ ಪರಿ ವ್ಯಕ್ತಿ ಹಾಗು ನುಡಿ ಸ್ವಾಂತಂತ್ರ್ಯದ ದನಿಯನ್ನು ಉಡುಗಿಸಬಾರದು. ಯಾಜಮಾನ್ಯ ವಿರೋದಿ ಹೋರಾಟವು ಡಬ್ಬಿಂಗ್ ವಿರೋದಿ ಹೋರಾಟಕ್ಕೆ ಬಂದು ನಿಂತಿರುವುದು ಒಂದು ವಿಪರ್ಯಾಸ. ಎರಡೂ ತಾತ್ವಿಕತೆಗಳ ಬಿನ್ನ ನೆಲೆ ಹಾಗು ದಕ್ಕಿಸಿಕೊಳ್ಳಲು ಸವೆಯಬೇಕಾದ ಬಿನ್ನ ದಾರಿಗಳ ಸ್ಪಶ್ಟ ಅರಿವು ಮೂಡಿದರೆ, ಮೊದಲ (ಅ) ಹಾಗು ಮೂರನೆಯ (ಇ) ಆತಂಕಗಳು ಡಬ್ಬಿಂಗ್ ಪರಿಪ್ರೇಕ್ಶ್ಯದಲ್ಲಿ ನಿರರ್ತಕವೆನಿಸುತ್ತವೆ.

ಕಲಾವಿದರ ಹಾಗು ಕಾರ್ಮಿಕರ ಕುರಿತಾದ ಆತಂಕ ಸಮಂಜಸವಾದದ್ದೇ. ಆದರೆ, ಸಾಲು ಸಾಲು ಡಬ್ಬಿಂಗ್ ದಾರಾವಾಹಿಗಳು ಮೂಡಿಬರುತ್ತಿರುವ ಈ ಕಾಲದ ಅವಸ್ತೆಯನ್ನು ಪರಿಗಣಿಸಬೇಕು. ಕೊರೋನಾ ಬೀತಿಯಲ್ಲಿ ಸರಿಸುಮಾರು ಎರಡು ತಿಂಗಳು ಚಿತ್ರೀಕರಣವೇ ನಿಂತಿದ್ದ ಸಂದರ್ಬದಲ್ಲಿ, ಸ್ತಳೀಯ ಮನೋರಂಜನಾ ಸರಕುಗಳಿಲ್ಲದೆ ವಾಹಿನಿಗಳು ಮುಚ್ಚಿದ ಎತ್ತುಗೆಗಳು ಇರುವಾಗ, ಉಸಿರಾಡಲಾದರೂ ಡಬ್ಬಿಂಗ್ ಸರಕುಗಳಿಗೆ ಕೆಲ ವಾಹಿನಿಗಳು ಮೊರೆಹೋಗಿದ್ದು ಸಹಜವೇ. ಚ್ಯಾನಲ್ಗಳೇ ಮುಚ್ಚಿ ಹೋದರೆ ನಾವೇ ತೆಗೆದ ದಾರಾವಾಹಿಗಳನ್ನು ಯಾವುದರಲ್ಲಿ ಪ್ರಸರಿಸುವುದು? ಹೇಳಿಕೊಳ್ಳುವಂತಹ ಒಂದು ವಾಹಿನಿಯೂ ನಮ್ಮ ಕಯ್ಯಲ್ಲಿ ಇಲ್ಲದಿರುವಾಗ! (ನಮ್ಮ ಕಯ್ಯಲ್ಲಿರಬೇಕು ಎಂದು ಬಯಸುವ ವಾಹಿನಿಯು ಕೆಲವೇ ಉದ್ಯಮಪತಿಗಳ ಹಿಡಿತಲ್ಲಿರುವಂತದ್ದೋ ಅತವಾ, ಸಾಮಾಜಿಕ ಒಡೆತನದಲ್ಲಿರುವಂತದ್ದೋ ಎಂಬ ಚರ್ಚೆಯೂ ಆಗಬೇಕು). ಆದರೆ, ಒಂದಂತೂ ದಿಟ. ಈ ಪರಿಸ್ತಿತಿಯು ಯಾವತ್ತಿಗೂ ಮುಂದುವರೆಯಲಾರದು ಎಂಬುದನ್ನು ನಾವು, ಡಬ್ಬಿಂಗ್‌ಅನ್ನು ಒಪ್ಪಿಕೊಂಡಿರುವ ನೆರೆಯ ತಮಿಳು ಹಾಗು ತೆಲುಗು ಮನೋರಂಜನಾ ವಾಹಿನಿಗಳನ್ನು ನೋಡಿ ಅರಿತುಕೊಳ್ಳಬಹುದು. ಹೊಸತೊಂದು ವಸ್ತು ಮಾರುಕಟ್ಟೆಯಲ್ಲಿ (ಈ ಪದ ಬಳಸದೆ ವಿದಿಯಿಲ್ಲ) ಬಂದಾಗ ಅದು ಸಂಚಲನ ಮೂಡಿಸುತ್ತದೆ. ಕೊರೋನಾ ಹಾಗು ಲಾಕ್‍ಡೌನ್ ಸಂದರ್ಬದಲ್ಲಿ ಅದು ಸಂಜೀವಿನಿಯಾಗಿಯೂ ಕಂಡಿರಬಹುದು. ಆದರೆ, ಚಿತ್ರೀಕರಣ ಮತ್ತೆ ಗರಿಗೆದರಿದೆ. ಡಬ್ಬಿಂಗ್ ದಾರಾವಾಹಿಗಳ ಎಣಿಕೆ ಕಡಿಮೆಗೊಂಡು ವಾಹಿನಿಗಳ ಸರಕುಗಳು ಒಂದು ಹದಕ್ಕೆ ತಲುಪುತ್ತವೆ. ಕಲಾವಿದರೂ, ಕಾರ್ಮಿಕರೂ ಕೆಲಸಗಳನ್ನು ಕಂಡುಕೊಳ್ಳುತ್ತಾರೆ. ಅಲ್ಲಿಯವರೆಗೆ ನಾವು, ಸಹಕಾರ ಸಂಸ್ತೆಗಳು ಹಾಗು ಸರಕಾರದ ಸಹಯೋಗದಲ್ಲಿ ಅವರಿಗೆ ನೆರವನೀಯಬೇಕಾಗುತ್ತದೆ. ಈಗಶ್ಟೇ ಕನ್ನಡ ದಾರಾವಾಹಿ ಜಗತ್ತಿಗೆ ಕಾಲಿಟ್ಟಿರುವ ಡಬ್ಬಿಂಗ್ ನ ಕುರಿತಾಗಿ ಈಗಲೇ ತೀರ್ಪು ನೀಡುವುದು ಆತುರದ ನಡೆಯಾದೀತು. ಡಬ್ಬಿಂಗ್ ಕುರಿತು ಮಿಕ್ಕೆಲ್ಲಾ ಆತಂಕಗಳಿಗೆ “ಬನವಾಸಿ ಬಳಗ”ದ ಜಿ. ಆನಂದ್ ಅವರ “ಡಬ್ಬಿಂಗ್ : ಇದು ಕನ್ನಡಪರ” ಪುಸ್ತಕ ಸೂಕ್ತ ಉತ್ತರಗಳನ್ನು ನೀಡಿರುತ್ತವೆ ಎಂದು ಬಾವಿಸಿದ್ದೇನೆ.

ಮನೋರಂಜನಾ ವಲಯ ಹಲವರ ಹೊಟ್ಟೆ ತುಂಬಿಸುತ್ತದೆ. ಅಂತೆಯೇ, ಕೆಲವರನ್ನು ಆಗರ್ಬ ಶ್ರೀಮಂತರನ್ನಾಗಿಯೂ ಮಾಡುತ್ತದೆ. ಬಂಡವಾಳಶಾಹಿ ಹಾಗು ಕೆಲವೇ ವರ್ಗಗಳ ಸಾಂಸ್ಕ್ರುತಿಕ ಹೆಜಮೊನಿಯ ವ್ಯವಸ್ತೆಯನ್ನು ಯಾವತ್ತಿಗೋ ಅದು ತನ್ನದಾಗಿಸಿಕೊಂಡಿದೆ. ಡಬಿಂಗ್‌ ಇಲ್ಲವೆ, ಇನ್ಯಾವುದೇ ಉಪವ್ಯವಸ್ತೆಗಳು ಮಯ್ದೋರಿದರೂ, ಅವುಗಳಿಂದ ಉಂಟಾಗುವ ಬಾದಕಗಳಿಗೆ ಆ ಪ್ರದಾನ ವ್ಯವಸ್ತೆಯೇ ಕಾರಣ. ಅದರ ವಿರುದ್ದದ ಸಾಂಗಿಕ ಹೋರಾಟದ ದಾರಿಯಿಂದ ಸಮೂಹನಿಶ್ಟ ತಾತ್ವಿಕತೆಯು ತನ್ನನ್ನು ತಾನು ವಿಸ್ತರಿಸಿಕೊಳ್ಳಬೇಕು. ವ್ಯಕ್ತಿ ಹಾಗು ನುಡಿ ಸ್ವಾಂತಂತ್ರ್ಯದ ತಾತ್ವಿಕತೆಯನ್ನು ಕುಬ್ಜಗೊಳಿಸುವ ದಾರಿಯಿಂದಲ್ಲ.


ಇದನ್ನು ಓದಿ: ಮತ್ತೆ ಗರಿಗೆದರಿದ ಡಬ್ಬಿಂಗ್ ವಿವಾದ: ಎರಡಲುಗಿನ ಖಡ್ಗದ ಎದುರು…! – ಬಿ.ಸುರೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...