Homeಅಂತರಾಷ್ಟ್ರೀಯಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳಲ್ಲಿ ಫಿನ್‍ಲ್ಯಾಂಡ್ ನಂಬರ್ 1 ಆಗಿದ್ದು ಹೇಗೆ ಗೊತ್ತೆ?

ಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳಲ್ಲಿ ಫಿನ್‍ಲ್ಯಾಂಡ್ ನಂಬರ್ 1 ಆಗಿದ್ದು ಹೇಗೆ ಗೊತ್ತೆ?

- Advertisement -
- Advertisement -

| ಪ್ರೊ. ಅನಿಲ್ ಸದ್ಗೋಪಾಲ್ |

ಇದು ಒಂದು ಪುಟ್ಟ ದೇಶದ ಕಥೆ. ಆ ದೇಶದ ಹೆಸರು ಫಿನ್‍ಲ್ಯಾಂಡ್. ನೀವುಗಳು ಈ ದೇಶದ ಹೆಸರನ್ನು ಬೇರೊಂದು ಪರೋಕ್ಷ ಕಾರಣಕ್ಕಾಗಿ ಕೇಳಿರುತ್ತೀರಿ. ಆ ದೇಶದ ಒಂದು ಉತ್ಪನ್ನ ನಮ್ಮೆಲ್ಲರ ಜೇಬು ಅಥವ ಕೈಗಳಲ್ಲಿರುತ್ತದೆ. ‘ನೋಕಿಯಾ’.

ಮೂರು ದಶಕಗಳ ಹಿಂದೆ ಯುರೋಪಿಯನ್ ದೇಶಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ನಡೆದ ಅಧ್ಯಯನ ವರದಿಯು ಫಿನ್‍ಲ್ಯಾಂಡ್‍ನ ಶಿಕ್ಷಣದ ಸ್ಥಿತಿಗತಿ ಇಡೀ ಪಟ್ಟಿಯಲ್ಲಿ ಕೊಟ್ಟಕೊನೆಯಲ್ಲಿದೆ ಎಂಬುದನ್ನು ತೋರಿಸಿತು. ವರದಿಯು ಈ ವಿಚಾರವನ್ನ ಹೊರಗೆಡವಿದ ಕೂಡಲೇ ಫಿನ್‍ಲ್ಯಾಂಡ್‍ನ ಸರ್ಕಾರ ಯಾವುದೋ ಕೆಲವು ಯೋಜನೆಗಳನ್ನು ಘೋಷಿಸಿ ಅದಕ್ಕೊಂದಿಷ್ಟು ಬಜೆಟ್‍ನ್ನು ನಿಗದಿಪಡಿಸಿ ಸುಮ್ಮನಾಗಲಿಲ್ಲ. ಇದರ ಕಾರಣಗಳ ಬಗ್ಗೆ ತನ್ನದೇ ಆದ ಪರಿಶೋಧನೆಗಳನ್ನು ನಡೆಸಿತು. ಅದರ ನಂತರ ಅಲ್ಲಿನ ಸರ್ಕಾರ ಒಂದು ನಿರ್ಧಾರಕ್ಕೆ ಬಂತು.

ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಕೇವಲ ಸುಧಾರಿಸುವುದಲ್ಲ ಬದಲಿಗೆ ಅದರಲ್ಲಿ ಒಂದು ಕ್ರಾಂತಿಕಾರಕ ಪರಿವರ್ತನೆಯನ್ನೇ ತರಬೇಕು ಎಂದು ಪ್ರಯತ್ನ ಆರಂಭವಾಯಿತು. ಮೂವತ್ತು ವರ್ಷಗಳ ನಂತರ, ಮೂರು ದಶಕಗಳ ಹಿಂದೆ ಅಧ್ಯಯನ ನಡೆಸಿದ್ದ ಅದೇ ಸಂಸ್ಥೆಯು ನಡೆಸಿದ ಶೈಕ್ಷಣಿಕ ಸ್ತಿತಿಗತಿಗಳ ಅಧ್ಯಯನದ ವರದಿಯು, ಫಿನ್‍ಲ್ಯಾಂಡ್ ಯುರೋಪಿನ ದೊಡ್ಡ ಸಂಖ್ಯೆಯ ದೇಶಗಳ ಪಟ್ಟಿಯಲ್ಲಿ ಶೈಕ್ಷಣಿಕವಾಗಿ ಮೊದಲ ಸ್ಥಾನಕ್ಕೆ ಏರಿರುವುದು ಮಾತ್ರವಲ್ಲ ಇಡೀ ಪ್ರಪಂಚದಲ್ಲೇ ಫಿನ್‍ಲ್ಯಾಂಡ್ ನಂ.1 ಸ್ಥಾನದಲ್ಲಿರುವುದನ್ನು ಸಾಬೀತುಪಡಿಸಿತು. ಶಿಕ್ಷಣದ ಗುಣಮಟ್ಟ-ಶಿಕ್ಷಕರ ಗುಣಮಟ್ಟ, ಪಠ್ಯಕ್ರಮ ಮತ್ತು ಬೋಧನಾಕ್ರಮದ ಗುಣಮಟ್ಟ, ಶಿಕ್ಷಣ ಪಡೆಯುವುದಕ್ಕೆ ಸಮಾನ ಅವಕಾಶಗಳು ಮತ್ತು ಸಾರ್ವತ್ರಿಕವಾಗಿ ಎಲ್ಲರಿಗೂ ಒಂದೇ ರೀತಿಯ ಉತ್ತಮ ಉಚಿತ ಶಿಕ್ಷಣ ವ್ಯವಸ್ಥೆ- ಇವುಗಳನ್ನು ಫಿನ್‍ಲ್ಯಾಂಡ್ ಸಾಧಿಸಿದೆ ಎಂಬುದು ಜಗತ್ತಿಗೆ ತಿಳಿಯಿತು. ಈಗಾಗಲು ಕಾರಣಗಳೇನು ಎಂಬುದನ್ನು ನೋಡೋಣ.

ಮೊದಲನೇಯದಾಗಿ ಫಿನ್‍ಲ್ಯಾಂಡ್‍ನ ಸರ್ಕಾರ ಅಲ್ಲಿನ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾತ್ರೋರಾತ್ರಿ ವಶಕ್ಕೆ ತೆಗೆದುಕೊಂಡಿತು. ಏಕೆಂದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ ಹಾಗೂ ಎಲ್ಲರಿಗೂ ಸಾರ್ವತ್ರಿಕವಾಗಿ ಏಕರೂಪವಾಗಿ ದೊರಕಬೇಕಿರುವ ಸಮಾನ ಅವಕಾಶಗಳು ಮೊಟಕಾಗುತ್ತವೆ ಎಂಬುದು ಇದಕ್ಕೆ ಕಾರಣ. ಆದ್ದರಿಂದ ಪೂರ್ವಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರದ ವರೆಗಿನ ಸಂಪೂರ್ಣ ಶಿಕ್ಷಣವನ್ನು ಸರ್ಕಾರ ತನ್ನ ನೇರ ಉಸ್ತುವಾರಿಗೆ ತೆಗೆದುಕೊಂಡಿತು.

ಎರಡನೇಯದಾಗಿ, ಫಿನ್‍ಲ್ಯಾಂಡ್ ಸರ್ಕಾರ ಪ್ರತೀ ಕುಟುಂಬಕ್ಕೂ ಒಂದು ಆದೇಶ ಹೊರಡಿಸಿತು; ಇನ್ನು ಮೇಲೆ ದೇಶದ ಎಲ್ಲಾ ಕುಟುಂಬಗಳು ತಮ್ಮ ಮಕ್ಕಳನ್ನು ಹತ್ತಿರದ ಸರ್ಕಾರಿ ವೆಚ್ಚದಲ್ಲಿ ನಡೆಯುವ ಶಾಲೆಗಳಿಗೇ ಕಳಿಸಬೇಕು ಎಂದು. ಮನೆಯ ಸಮೀಪದ ಸರ್ಕಾರಿ ವೆಚ್ಚದಲ್ಲಿ ನಡೆಯುವ ಸಾರ್ವಜನಿಕ ಶಾಲೆಗೇ ಎಲ್ಲಾ ಮಕ್ಕಳೂ ಹೋಗಲಾರಂಭಿಸಿದ ಕೂಡಲೇ ಅಂತಹ ಎಲ್ಲಾ ಶಾಲೆಗಳೂ ನಿಜವಾದ ಅರ್ಥದಲ್ಲಿ ನೆರೆಹೊರೆ ಶಾಲೆಗಳಾದವು. ಆ ಶಾಲೆಗಳನ್ನು ಬಿಟ್ಟರೆ ಬೇರೆ ಶಾಲೆಗಳಿಗೆ ಯಾವ ಪೋಷಕರೂ ಮಕ್ಕಳನ್ನು ಕಳಿಸುವ ಆಯ್ಕೆಯನ್ನೇ ಅವರಿಗೆ ಕೊಡಲಾಗಿರಲಿಲ್ಲ. ನಮ್ಮಂತಹ ದೇಶದಲ್ಲಿ ಬಂಡವಾಳಶಾಹಿ ಮೌಲ್ಯವಾದ ‘ಆಯ್ಕೆಯ ಸ್ವಾತಂತ್ರ್ಯ’ದ ಬಗ್ಗೆ ತುಂಬಾ ಮಾತನಾಡಲಾಗುತ್ತದೆ (ನ್ಯಾಯಾಲಯಗಳೂ ಸೇರಿ). ಪೋಷಕರಿಗೆ ಆಯ್ಕೆ ಇರಬೇಕು, ಅವರನ್ನು ಹೇಗೆ ಒತ್ತಾಯಿಸಲು ಸಾಧ್ಯ ಎಂದು ಕೇಳಲಾಗುತ್ತದೆ. ಈ ಆಯ್ಕೆಯ ಪರಿಕಲ್ಪನೆಯೇ ತುಂಬಾ ಪೊಳ್ಳಾದುದು. ನಮ್ಮ ದೇಶದಲ್ಲಿ ಪ್ರಜಾತಾಂತ್ರಿಕ ಎಂದು ಕರೆಯಲಾಗುವ ಆಯ್ಕೆಯ ವಿಚಾರವನ್ನು ಫಿನ್‍ಲ್ಯಾಂಡ್ ಲಾಭಗಳಿಕೆಯ ಹುನ್ನಾರ ಎಂದು ನೋಡಿತು.

ಮೂರನೇಯ ಮತ್ತು ಅತ್ಯಂತ ಮುಖ್ಯವಾದ ವಿಚಾರವೆಂದರೆ, ಈ ಎಲ್ಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು-ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು- ಹೊಂದಿರುವ ಬೋಧಕ ಸಿಬ್ಬಂದಿಯು ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಗುಂಪಿಗೆ ಸೇರಿಸಲ್ಪಟ್ಟರು. ಅಲ್ಲಿನ ಮಂತ್ರಿಗಳಿಗಿಂತಲೂ ಉನ್ನತ ಅಧಿಕಾರಿಗಳಿಗಿಂತಲೂ ಶಿಕ್ಷಕರ ವೇತನ ಹೆಚ್ಚಾಯಿತು. ಫಿನ್‍ಲ್ಯಾಂಡ್ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ನಂತರ ಅಲ್ಲಿನ ಶಿಕ್ಷಣ ಸಚಿವರನ್ನು ಈ ಅದ್ಭುತವನ್ನು ಅವರು ಸಾಧಿಸಿದ್ದು ಹೇಗೆ ಎಂಬುದನು ಅಮೇರಿಕನ್ನರಿಗೆ ತಿಳಿಸುವುದಕ್ಕಾಗಿ ಯುಎಸ್‍ಎ ಗೆ ಕರೆಸಲಾಗಿತ್ತು. ಆಗ, ಮಾಧ್ಯಮದ ಜನರು ‘ನೀವು ಶಿಕ್ಷಕರಿಗೆ ಯಾಕೆ ಅತಿ ಹೆಚ್ಚು ಸಂಬಳ ಕೊಡಲು ನಿರ್ಧರಿಸಿದಿರಿ’ ಎಂದು ಕೇಳಿದರು. ಅವರ ಉತ್ತರ ನೆನಪಿನಲ್ಲಿರಿಸಿಕೊಳ್ಳಬೇಕಾದಂಥದ್ದು. ಶಿಕ್ಷಣ ಮಂತ್ರಿ ಉತ್ತರಿಸಿದರು. “ಏಕೆಂಧರೆ ನಾವು ಮಕ್ಕಳಿಗೆ ಸರಿಯಾಗಿ ತರಬೇತುಗೊಳಿಸುವುದು ಎಲ್ಲಾ ಕೆಲಸಗಳಲ್ಲಿ ಅತಿ ಕಷ್ಟದ ಕೆಲಸ ಎಂದು ಅರಿತೆವು. ಹಾಗೆಯೇ ಆ ಕೆಲಸಕ್ಕೆ ಬೇಕಾದ ಅತ್ಯುನ್ನತ ಅರ್ಹತೆ ಹೊಂದಿದವರು ಅಲ್ಲಿಗೆ ಬರಬೇಕಾಗಿದ್ದು ನಮಗೆ ಅತ್ಯಗತ್ಯವಾಗಿತ್ತು. ಆದ್ದರಿಂದ ಈ ಕ್ರಮ ಕೈಗೊಂಡೆವು” ಎಂದು ಉತ್ತರಿಸಿದರು.

ಉಚಿತ ಶಿಕ್ಷಣ ಸಾಧ್ಯವೇ? ಜರ್ಮನಿಯಲ್ಲಿ ಹೇಗಿದೆ?
ಜರ್ಮನಿ! ಜರ್ಮನಿ ಸ್ವಲ್ಪ ಸಮಯದ ಹಿಂದೆ ಇಂತಹ ಪವಾಡ ಎಂದು ಕರೆಯಬಹುದಾದ ವಿಚಾರವನ್ನು ಮಾಡಿ ತೋರಿಸಿತು. ಪೂರ್ವ ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರದವರೆಗೆ ಸಂಪೂರ್ಣ ಉಚಿತ ಶಿಕ್ಷಣ. ಯಾವ ಪೋಷಕರೂ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಏನನ್ನೂ ವೆಚ್ಚ ಮಾಡುವ ಅಗತ್ಯವಿಲ್ಲ. ಇಂಜಿನಿಯರ್‍ಗಳಾಗಲೂ ಸಹಾ! ಮ್ಯಾನೇಜ್‍ಮೆಂಟ್ ಕಲಿಯಲೂ ಸಹಾ!
ಒಮ್ಮೆ ನಾನು ಒಬ್ಬ ಜರ್ಮನ್ ಶಿಕ್ಷಣತಜ್ಞನನ್ನು ಭೇಟಿ ಮಾಡಿದ್ದೆ. ಜರ್ಮನರು ಇಂಗ್ಲೀಷ್ ಕಲಿಯುವುದರ ಬಗ್ಗೆ ಅಷ್ಟೇನೂ ಉತ್ಸುಕರಾಗಿರುವುದಿಲ್ಲ. ಹೀಗಾಗಿ ನಾನು ಆತನನ್ನು “ನೀವು ಮಕ್ಕಳಿಗೆ ಶಿಕ್ಷಣ ನೀಡಲು ಎಷ್ಟು ಹಣ ಪಡೆಯುತ್ತೀರಿ?” ಎಂದು ಕೇಳಿದೆ. ಆತನಿಗೆ ಅರ್ಥ ಆಗಲಿಲ. “ಮಕ್ಕಳಿಂದ ಹಣ, ಯಾಕೆ?” ಎಂದ. “ಯಾಕೆಂದರೆ ಅವರು ನಿಮ್ಮ ಶಿಕ್ಷಣ ಸಂಸ್ಥೆಯನ್ನು ಕಲಿಯಲು ಉಪಯೋಗಿಸಿರುತ್ತಾರಲ್ಲ ಅದಕ್ಕೆ” ಎಂದೆ. ಆತ “ನಮ್ಮ ದೇಶದ ಪ್ರತಿಯೊಂದು ಮಗುವಿಗೂ ಸರ್ಕಾರದಿಂದ ಶಿಕ್ಷಣ ಪಡೆಯುವ ಹಕ್ಕು ಇದೆ, ಅದಕ್ಕಾಗಿ ಅವರು ಹಣ ಏಕೆ ಕಟ್ಟಬೇಕು? ಅದು ನಮ್ಮ ಜವಾಬ್ದಾರಿ ಅಲ್ಲವೇ?” ಎಂದ.

ಇದು ಇಂದಿನ ಭಾರತದಲ್ಲಿ ಬಹುಶಃ ಕಲ್ಪನೆಗೂ ಮೀರಿದ ವಿಚಾರ. ನಮ್ಮನ್ನು ನಾವು ಪ್ರಜಾಪ್ರಭುತ್ವ, ಅಥವಾ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ ಅಥವಾ ನಮ್ಮ ದೇಶ ಯಾವ ವ್ಯವಸ್ಥೆಯಡಿ ನಡೆಯುತ್ತಿದೆ ಮೆಂಬುದೇ ಸ್ವಲ್ಪ ಗೊಂದಲದ ಸಂಗತಿ-ಒಟ್ಟಿನಲ್ಲಿ ಶಿಕ್ಷಣದ ವಿಚಾರದಲ್ಲಿ ಬಹುದೂರ ಸಾಗಬೇಕಿರುವ ನಮ್ಮ ದೇಶದಲ್ಲಿ ಹಣವಸೂಲಿಯೇ ಪ್ರತಿಯೊಂದು ಕೋರ್ಸ್‍ನ ಮೂಲಭೂತ ವಿಷಯ ಆಗಿಬಿಟ್ಟಿದೆ. ಆದರೆ, ಬಂಡವಾಳಶಾಹಿ ಸಿದ್ಧಾಂತದ ಅಡಿಯಲ್ಲಿ ನಡೆಯುವ ಜರ್ಮನಿಯ ಶಿಕ್ಷಣ ಸಂಸ್ಥೆಗಳಲ್ಲಿ ಹಣ ವಸೂಲಿಯೆಂಬ ಕಲ್ಪನೆಯೇ ಅಪರಿಚಿತ! ಆದ್ದರಿಂದ ಉಚಿತ ಶಿಕ್ಷಣ ಎಂಬುದು ನಾವು ಸಾಧಿಸಬೇಕಾದ ಬಹುಮುಖ್ಯವಾದ ಗುರಿ.

ಅಮೇರಿಕಾದಲ್ಲಿ ಯಾವ ಪದ್ದತಿ ಇದೆ?

ನಾನು ಮೂರನೇ ಉದಾಹರಣೆ ತೆಗೆದುಕೊಳ್ಳುತ್ತೇನೆ. ಈಗ ನಾವು ಚರ್ಚಿಸುತ್ತಿರುವುದು ಬಂಡವಾಳಶಾಹಿ ರಾಷ್ಟ್ರಗಳಲ್ಲೇ ಅತಿ ಬಲಾಢ್ಯ ರಾಷ್ಟ್ರವಾದ ಅಮೇರಿಕಾ ಸಂಯುಕ್ತ ಸಂಸ್ಥಾನದ ವಿಚಾರ. ಕಳೆದ 2-3 ದಶಕಗಳಲ್ಲಿ ಅಮೇರಿಕದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದಿನೇ ದಿನೇ ನವ ಉದಾರವಾದಿ ದಾಳಿಗೆ ಗುರಿಯಾಗುತ್ತಿದೆ. ಆ ದೇಶದ ಒಳ್ಳೆಯ ಜನರು – ಲಾಭಕೋರ ಆರ್ಥಿಕ ನೀತಿಗಳು ಶಿಕ್ಷಣ ವ್ಯವಸ್ಥೆಯನ್ನು ನುಂಗುತ್ತಿರುವುದರ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಆದರೆ ಆ ಸಂಯುಕ್ತ ಸಂಸ್ಥಾನದ ಕೆಲವು ರಾಜ್ಯಗಳಲ್ಲಿ ದಾಳಿಯ ಪ್ರಭಾವ ಬಲವಾಗಿಯೇ ಇದೆ. ನಾನು ಈಗ ಹೇಳಲು ಹೊರಟಿರುವುದು ಆ ಬಲವಾದ ದಾಳಿಯನ್ನೂ ಕೂಡಾ ಹಿಮ್ಮೆಟ್ಟಿಸುವಲ್ಲಿ ಶಕ್ತವಾಗಿರುವ ಅಮೇರಿಕಾದ ಕ್ಯಾಲಿಫೊರ್ನಿಯಾ ರಾಜ್ಯದ ಬಗ್ಗೆ.

ನಾನು ಅವರ ಸಮಾನ ಶಾಲಾ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಸ್ವಲ್ಪ ಸಮಯ ಕಳೆದಿದ್ದೇನೆ. ಅಲ್ಲಿನ ನನ್ನ ಸ್ನೇಹಿತರಿಗೆ ಸಾರ್ವಜನಿಕ ವೆಚ್ಚದ ಶಾಲೆಗಳ ಜೊತೆಗೆ ಒಂದು ಖಾಸಗಿ ಶಾಲೆಯನ್ನೂ ತೋರಿಸಬೇಕೆಂದು ಮನವಿ ಮಾಡಿದ್ದೆ. ನಾನು ಮಾತನಾಡುತ್ತಿರುವುದು ಹೆಚ್ಚು ಸಂಪತ್ಭರಿತವಾದ, ಹಾಲಿವುಡ್ ಪ್ರದೇಶವನ್ನು ಹೊಂದಿರುವ ಪಶ್ಚಿಮ ಕ್ಯಾಲಿಫೋರ್ನಿಯಾದ ಬಗ್ಗೆ. ಅಲ್ಲಿನ ನನ್ನ ಗೆಳೆಯರು ಬಹಳ ಪ್ರಾಮಾಣಿಕವಾಗಿ ಶ್ರಮ ಹಾಕಿ ಬಹಳ ಕಷ್ಟದಿಂದ ಒಂದು ಖಾಸಗಿ ಶಾಲೆಯನ್ನು ನನಗಾಗಿ ಹುಡುಕಿ ತೋರಿಸಿದರು. ಆದರೆ, ಅದನ್ನು ಖಾಸಗಿ ಶಾಲೆಯೆಂದು ನಂಬಲು ಸಾಧ್ಯವಾಗದಂತೆ ಬಹಳ ದಯನೀಯ ಸ್ಥಿತಿಯಲ್ಲಿತ್ತು. ಸಾರ್ವಜನಿಕ ಶಾಲೆಗಳು ಅತ್ಯುತ್ತಮವಾಗಿದ್ದವು.

ಅಲ್ಲಿ ನಮ್ಮಲ್ಲಿನ ರೆವಿನ್ಯೂ ಕ್ಷೇತ್ರಗಳ ಹಾಗೆ ಶೈಕ್ಷಣಿಕ ಕ್ಷೇತ್ರಗಳಿರುತ್ತವೆ. ಪ್ರತೀ ಶಾಲೆಗೂ ಜನರಿಂದ ಆಯ್ಕೆಯಾದ ಉಸ್ತುವಾರಿ ಸಮಿತಿಗಳಿರುತ್ತವೆ. ಅಂತಹ ಒಂದು ಕ್ಷೇತ್ರದ ಹಣಕಾಸು ಅಧಿಕಾರಿಯನ್ನು ನಾನು ಭೇಟಿಯಾದೆ. ನಾನು ಕೆಲವು ಪ್ರಶ್ನೆಗಳನ್ನು ಕೇಳಿದೆ. “ನಿಮ್ಮ ರಾಜ್ಯದ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಏನು ಮಾಡುತ್ತೀರಿ?”. “ಅಂತಹ ಎಲ್ಲಾ ಮಕ್ಕಳನ್ನೂ ಹತ್ತಿರದ ಸಮಾನ ಶಾಲೆಗೆ ಕಳಿಸುವುದು ಅಂತಹ ಎಲ್ಲಾ ಬಡ ಕುಟುಂಬಗಳ ಜವಾಬ್ದಾರಿ ಮತ್ತು ಅದು ಅವರಿಗೆ ಕಡ್ಡಾಯ. ಅಷ್ಟು ಮಾತ್ರವಲ್ಲ ಅದು ಇಡೀ ಆ ಶೈಕ್ಷಣಿಕ ಕ್ಷೇತ್ರದ ಆಯ್ಕೆಯಾದ ಸಮಿತಿಯ ಜವಾಬ್ದಾರಿಯೂ ಸಹಾ” ಎಂದು ಅವರು ಹೇಳಿದರು.

ಆಗ ನನ್ನ ಪ್ರಶ್ನೆ “ಕಪ್ಪುಜನರ ಮಕ್ಕಳಿಗೆ ಮತ್ತು ಅಂತಹ ಲ್ಯಾಟಿನ್ ಅಮೇರಿಕಾದಿಂದ ವಲಸೆ ಬಂದ ಹಿಂದುಳಿದ ಮಕ್ಕಳಿಗೆ ನೀವು ಶಿಕ್ಷಣ ಖಾತ್ರಿಪಡಿಸುವುದು ಹೇಗೆ?” ಅದಕ್ಕೆ ಅವರ ಉತ್ತರ ಬಹಳ ಆಸಕ್ತಿಕರ. “ನೋಡಿ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಣಕ್ಕೆ ವೆಚ್ಚವಾಗುವ ಹಣದ ಬಹುಭಾಗ ಒಕ್ಕೂಟ ವ್ಯವಸ್ಥೆಯ ಫೆಡರಲ್ ಸರ್ಕಾರದಿಂದ ಮತ್ತು ಉಳಿದದ್ದು ರಾಜ್ಯ ಸರ್ಕಾರದಿಂದ ಬರುತ್ತದೆ. ಇಡೀ ವರ್ಷದ ಎಲ್ಲಾ ಶೈಕ್ಷಣಿಕ ಖರ್ಚನ್ನು ಪೂರೈಸಲು ಒಂದು ಸೂತ್ರ ಮಾಡಿಕೊಂಡಿದ್ದೇವೆ. ಇಡೀ ವರ್ಷದ ಎಲ್ಲಾ ಖರ್ಚನ್ನು ಕೂಡಿಸಿ ಪ್ರತೀ ಮಗುವಿಗಾಗುವ ತಲಾ ಖರ್ಚನ್ನು ಲೆಕ್ಕ ಹಾಕಿ ಪ್ರತೀ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಷ್ಟನ್ನು ಪ್ರತೀ ಶಾಲೆಗೆ ನೀಡುತ್ತೇವೆ. ಯಾವ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಪ್ಪು ಮಕ್ಕಳು ಅಥವಾ ವಲಸೆ ಕಾರ್ಮಿಕರ ಮಕ್ಕಳು ಇರುತ್ತಾರೋ ಆ ಶಾಲೆಗೆ ಹೆಚ್ಚಿನ ಪ್ರಮಾಣದ ಅನುದಾನ ದೊರೆಯುತ್ತದೆ. ಅದರಿಂದ ಆ ಶಾಲೆಗಳು ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು, ಕ್ರೀಡೆ ಸಂಗೀತ ನೃತ್ಯ ಮೊದಲಾದ ವಿಶೇಷ ಶಿಕ್ಷಕರನ್ನು, ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನೂ ದೊರಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಎಲ್ಲಾ ಶಾಲೆಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳನ್ನು ಹೊರಗಿಡುವ ಬದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಶಾಲೆಗಳಿಗೆ ತಂದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಶಾಲೆಯಲ್ಲಿ ಎಲ್ಲಾ ಜನವಿಭಾಗಗಳ ಮಕ್ಕಳೂ ಇರುವಂತಹ ಪ್ರಾತಿನಿಧ್ಯದ ವ್ಯವಸ್ಥೆ ಸಾಧ್ಯವಾಗಿದೆ” ಎಂದು ಆ ಅಧಿಕಾರಿ ವಿವರಿಸಿದರು.

“ಇದು ನಮ್ಮ ದೇಶದಲ್ಲಿ ತದ್ವಿರುದ್ಧವಾಗಿದೆ” ಎಂದೆ. ಅದಕ್ಕೆ ಅವರು, “ಹೌದು ನನಗೆ ಗೊತ್ತಿದೆ; ನಾನು ಬೌದ್ಧ ಧರ್ಮದೆಡೆಗೆ ಆಕರ್ಷಿತನಾಗಿ ಬೋಧ್‍ಗಯಾಕ್ಕೆ ಬಂದಿದ್ದೆ. ಆಗ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದೆ. ಇಡೀ ವಿಶ್ವದ ನಮ್ಮಂತಹ ಎಷ್ಟೋ ಜನರಿಗೆ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ಬಹಳ ಹಿಂದೆಯೇ ಕೊಡಮಾಡಿದ ಧರ್ಮ ಹುಟ್ಟಿದ ಕಡೆ ಶಿಕ್ಷಣದಲ್ಲಿ ಇಂತಹ ಅಸಮಾನತೆ ಇರುವುದು ವಿಪರ್ಯಾಸ” ಎಂದು ಆತ ವಿಷಾದದಿಂದ ನುಡಿದರು.

ನಾನು ಈಗ ನಿಮ್ಮ ಮುಂದೆ ಮೂರು ದೇಶಗಳ ಉದಾಹರಣೆಗಳನ್ನು ಇರಿಸಿದ್ದೇನೆ. ಬಂಡವಾಳಶಾಹಿ ದೇಶಗಳು ಒಂದು ಮಟ್ಟಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪಾಲಿಸುವಂತಹ ಒತ್ತಡವನ್ನು ಅಲ್ಲಿನ ಪ್ರಜ್ಞಾವಂತ ಜನತೆ ಉಂಟುಮಾಡಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಈ ತತ್ವಗಳು ನಿರಂತರವಾಗಿ ಉಲ್ಲಂಘನೆಯಾಗಿವೆ. ಆದ್ದರಿಂದಲೇ ಇಂದು ಶೋಷಿತ ಸಮುದಾಯಗಳು ಗುಣಮಟ್ಟದ ಶಿಕ್ಷಣದಿಂದ ಹೊರಗುಳಿಯುವುದು ಸಾಮಾನ್ಯ ನಿಯಮ ಎಂಬಂತಾಗಿ ಬಿಟ್ಟಿದೆ. ಅವರಿಗಾಗಿ ಇಲ್ಲಿನ ಸರ್ಕಾರಗಳು ಏನೂ ಮಾಡುವುದಿಲ್ಲ; ಏನಾದರೂ ಮಾಡಿದರೆ ಅದು ಕೇವಲ ಬಾಯುಪಚಾರದ ತೋರಿಕೆಗಾಗಿ ಅಷ್ಟೇ! ಸಮಾಜದ ಶೋಷಿತ ಸಮುದಾಯಗಳ ಪ್ರತ್ಯೇಕತೆ ಇಂದು ಸ್ಥಾಪಿತ ಸತ್ಯ. ಇದರ ವಿರುದ್ಧ ನಾನು ಹೋರಾಟನಿರತನಾಗಿದ್ದೇನೆ. ನೀವು ನಮ್ಮೊಂದಿಗೆ ಕೈಜೋಡಿಸುವಿರಾ?

ಇದನ್ನು ಓದಿ : ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...