Homeಮುಖಪುಟಎಲೆಮರೆ-2: `ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕವಿ' - ಎಚ್‌.ನಾಗೇಂದ್ರಪ್ಪ..

ಎಲೆಮರೆ-2: `ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕವಿ’ – ಎಚ್‌.ನಾಗೇಂದ್ರಪ್ಪ..

ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು...

- Advertisement -
- Advertisement -

ಚಳ್ಳಕೆರೆಯ ವಿಠ್ಠಲನಗರದಲ್ಲಿ ಇಸ್ತ್ರಿ ಮಾಡುವ ಪೆಟ್ಟಿಗೆ ಅಂಗಡಿಯಲ್ಲೇ ಪುಸ್ತಕಗಳನ್ನು ನೀಟಾಗಿ ಒತ್ತರಿಸಿಟ್ಟು ಓದುಬರಹ ಮಾಡುವ ಜನಪದ ಕವಿ ಪಗಡಲಬಂಡೆ ಹೆಚ್. ನಾಗೇಂದ್ರಪ್ಪ. ಆಶುಕವಿ, ಸ್ವರಚಿತ ಕವಿತೆಗಳನ್ನು ಹಾಡಿಕೆ ಮೂಲಕ ಜನರಿಗೆ ತಲುಪಿಸುವಾತ. ಬಿ.ಎ ಪದವಿಯಲ್ಲಿ ಕನ್ನಡ ಮೇಜರ್ ಓದಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಕನಸಿದ್ದರೂ ಮಾಡಲಾಗದೆ ಓದನ್ನು ನಿಲ್ಲಿಸಿದರು. ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿದು ಕೆಟ್ಟ ಅನುಭವದೊಂದಿಗೆ ವೃತ್ತಿ ಕಸಬು ಇಸ್ತ್ರಿಯ ಕೈಹಿಡಿದು, ಕಾಯಕದ ಜತೆ ನುಡಿ ವ್ಯವಸಾಯ ನಡೆಸಿದ್ದಾರೆ. ತಾರುಣ್ಯದಲ್ಲಿ ಅತ್ಯುತ್ತಮ ಕ್ರೀಡಾಪಟು. ಕುಸ್ತಿ, ಕಬಡ್ಡಿ, ರನ್ನಿಂಗ್ ರೇಸಲ್ಲಿ ಕಾಲೇಜಿಗೆ ಹೆಸರು ತಂದಾತ. ನಂತರದ ದಿನಗಳಲ್ಲಿ ಕಲೆಯತ್ತ ಹೊರಳಿ ಭಜನೆ, ಹಾಡಿಕೆ, ತತ್ವಪದ, ಏಕಪಾತ್ರಾಭಿನಯ, ದೊಡ್ಡಾಟ ಸಣ್ಣಾಟ ಹೀಗೆ ಬಹುಮುಖ ಪ್ರತಿಭೆಯಾಗಿ ರೂಪುಗೊಂಡರು.

ನಾಗೇಂದ್ರಪ್ಪ ಒಬ್ಬ ಜನಪದ ಕವಿ. ಹಾಗಾಗಿ ಇವರನ್ನು ಇತರೆ ಶಿಷ್ಟಕವಿಗಳ ಜತೆ ಹೋಲಿಸಲಾಗದು. ಅವರ ಕವಿತೆಗಳಲ್ಲಿ ತೀವ್ರವಾದ ರೂಪಕಗಳಾಗಲಿ, ಗಂಭೀರ ಶೋಧವಾಗಲಿ ಕಾಣುವುದಿಲ್ಲ. ಬದಲಾಗಿ ತನ್ನ ಸುತ್ತಮುತ್ತಣ ಯಕಶ್ಚಿತ್ ಎನ್ನುವಂತಹ ಸಂಗತಿಗಳನ್ನು ಆಯ್ದು ಅವುಗಳನ್ನು ಜನÀಪರವಾದ ಕೋರಿಕೆ, ದುಃಖ, ಅಸಹಾಯಕತೆ, ಪ್ರೀತಿ, ಸ್ನೇಹ, ಮೆಚ್ಚುಗೆ, ಬಂಧುತ್ವದಂತಹ ಭಾವನೆಗಳ ಜತೆ ಕಟ್ಟಿದ್ದಾರೆ. ಹೀಗೆ ದಿನದಿನದ ವಿದ್ಯಮಾನಗಳೇ ನಾಗೇಂದ್ರಪ್ಪನ ಕವಿತ್ವದಲ್ಲಿ ಹಾಡುಗಳಾಗಿವೆ. ಈ ಕಾರಣಕ್ಕೆ ಕವಿ ಬೇಂದ್ರೆ ನನಗೆ ಇಷ್ಟ ಎನ್ನುತ್ತಾರೆ.

ಚಳ್ಳಕೆರೆ ಭಾಗ ಕರ್ನಾಟಕದಲ್ಲಿಯೇ ಅತಿ ಕಡಿಮೆ ಮಳೆಬೀಳುವ ಪ್ರದೇಶ. ಹಾಗಾಗಿ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರು ಹೆಚ್ಚಾಗಿ ಕೈಸುಟ್ಟುಕೊಳ್ಳುವುದೇ ಹೆಚ್ಚು. ಈ ಸಂಗತಿಯು ಕವಿಯನ್ನು ಬಹುವಾಗಿ ಕಾಡಿದೆ. ಈ ಕವಿತೆಗಳಲ್ಲಿ ರೈತ ಹೊಲ ಮಳೆ ಮೋಡ ಕುರಿತ ರೂಪಕಗಳು ಮತ್ತೆ ಮತ್ತೆ ಮರುಕಳಿಸಿವೆ. ಅಂತೆಯೇ ಮಳೆ ಕರೆಯುವ ಮೂರ್ನಾಲ್ಕು ಪದ್ಯಗಳಿವೆ. `ಮುನಿದೆ ಏಕೋ ಮಳೆರಾಯ’ ಎನ್ನುವ ಪದ್ಯದಲ್ಲಿ `ಉತ್ತಿದರು ಬಿತ್ತಿದರು ಕತ್ತೆತ್ತಿ ನೋಡಿ/ ಗೋಗರೆದರೂ ಕರಗಲಿಲ್ಲ/ ವರುಣ ದೇವನೆದೆ’ ಎನ್ನುತ್ತಾರೆ.

`ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕಾಯಕದಲಿ’ ಕವಿತೆ ಗಮನ ಸೆಳೆವ ಪದ್ಯ. ನಾಗೇಂದ್ರಪ್ಪ ಸ್ವತಃ ಮಡಿವಾಳ ಸಮುದಾಯಕ್ಕೆ ಸೇರಿದಾತ. ಜಗದ ಬಟ್ಟೆಗಳ ಮಡಿಮಾಡಿಕೊಡುವ ಕುಲಕಸಬನ್ನು ಮಾಡಿದಾತ. ಈಗಲೂ ಇಸ್ತ್ರಿ ಅಂಗಡಿಯಲ್ಲಿ ಲೋಕದ ಬಟ್ಟೆಗಳ ಗರಿಗರಿಯಾಗಿಸುವಾತ. ಇಂತಹ ಸಮುದಾಯದ ಅನುಭವಗಳನ್ನು ನಾಗೇಂದ್ರಪ್ಪ ತುಂಬಾ ಸೂಕ್ಷ್ಮವಾಗಿ ಹಿಡಿದಿದ್ದಾರೆ. `ಇದ್ದಿಲು ನಿಗಿನಿಗಿ ಹೊಳೆದು/ಹೊಟ್ಟೆ ಬಟ್ಟೆ ತೊಡಿಸಿ/ಸ್ಫೂರ್ತಿ ನೀಡಿತು/ಬೂದಿಮುಚ್ಚಿದ ಕೆಂಡವಿದ್ದು/ ಬದುಕಿನ ನೆರವಿನ ತಂಗಾಳಿ ಬೀಸಿದಾಗ ಮತ್ತೆ ಪ್ರಜ್ವಲಿಸಿತು/ ಅಗುಳಿನ ಗಳಿಗೆಯ ಚೀಲ ತುಂಬಿ ನಿದ್ರಿಸಿತು’ ಎನ್ನುತ್ತಾರೆ. ಅಂತೆಯೇ ಉಳ್ಳವರ ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಕವಿ ಸಿರಿವಂತಿಕೆಯ ಮೇಲಿನ ಸಿಟ್ಟನ್ನು ತನ್ನ ಕಾಯಕದಲ್ಲಿ ದಾಟಿಸಿ ಹಗುರಾಗುವಂತಿದೆ. ಹಾಗಾಗಿಯೇ `ಜುಬ್ಬದ ದಿಬ್ಬ ನಿದ್ದೆಯ ಕೆಡಿಸಿ/ಸೊಕ್ಕಿದ ಸುಕ್ಕು ಕೊಬ್ಬನು ಕರಗಿಸಿ/ ಹಾಸಿಗೆ ಹಿಡಿಸಿತು/ ಆಶ್ರಯ ತಪ್ಪಿದ ಪ್ರತಿಭೆ/ತರಗೆಲೆಯಾಗಿ/ಕಮರಿ ಧೂಳಾಯಿತು’ ಎನ್ನುತ್ತಾರೆ. ಮುಂದುವರಿದು `ಲೋಕದ ಸುಕ್ಕುಗಳ/ಇಸ್ತ್ರಿ ಮಾಡುವ ಕಾಯಕದಲಿ/ ನಾನು ನನ್ನವರು/ ಸುಟ್ಟುಕೊಳ್ಳುತ್ತಲೇ/ ಗಟ್ಟಿಯಾಗುತ್ತಿದ್ದೇವೆ/ ಬದುಕೆಂಬ ಇಟ್ಟಿಗೆ ಭಟ್ಟಿಯಲಿ’ ಎಂದು ಬದುಕಿಗೆ ಚೈತನ್ಯ ಪಡೆಯುತ್ತಾರೆ.

ನಾಗೇಂದ್ರಪ್ಪ ಜನಪದ ಕವಿಯಾಗಿಯೂ ಆಧುನಿಕ ವೈಚಾರಿಕತೆ ಇವರ ಕವಿತೆಗಳಲ್ಲಿ ಹೆಣೆದುಕೊಂಡಿದೆ. ಈ ಕಾರಣಕ್ಕೆ ಇಲ್ಲಿ ಜನರ ಕಷ್ಟನಷ್ಟಗಳನ್ನು ಕವಿತೆಯನ್ನಾಗಿಸುತ್ತಲೇ ಇವುಗಳಿಂದ ಹೊರಬರಬಹುದಾದ ದಾರಿಗಳ ಬಗ್ಗೆಯೂ ಜಾಗೃತರಾಗಿದ್ದಾರೆ. ಈ ಸಂಕಲನದ `ಕ್ರಾಂತಿಗೀತೆ’ ಎನ್ನುವ ಕವಿತೆ ಗಮನ ಸೆಳೆಯುವಂತಿದೆ. `ನೆಲ ಅಗೆದರು ಮರ ಕಡಿದರು/ ಅದಿರು ತೆಗೆದರು ಮರಳು ಮಾರಿದರು/ಕನ್ನಡಮ್ಮನ ಬಂಜೆ ಮಾಡಿದರು/ಖಜಾನೆ ಲೂಟಿ ಹೊಡೆದರು’ ಎಂದು ವಾಸ್ತವದ ಕನ್ನಡಮ್ಮನ ನೆನೆಯುತ್ತಾರೆ. ಅಂತೆಯೇ `ಕ್ರಾಂತಿ ಕಹಳೆ ಮೊಳಗಲಿ/ಶಾಂತಿ ಬೀಡು ಆಗಲಿ/ಏಳಿರಿ ಸಿಡಿದೇಳಿರಿ’ ಎಂದು ಕರೆಕೊಡುತ್ತಾರೆ. ಇಷ್ಟರಮಟ್ಟಿಗೆ ಕವಿ ವರ್ತಮಾನವನ್ನು ಎಚ್ಚರದ ಕಣ್ಣಿಂದ ಗಮನಿಸಿದ್ದಾರೆ.

ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು ಎನ್ನುವುದು ಗಮನ ಸೆಳೆಯುತ್ತದೆ. ಹಾಗಾಗಿ ಇಲ್ಲಿ ಕವಿತೆಗಳನ್ನು ಕಟ್ಟುವಲ್ಲಿ ವಾಚ್ಯವಾದರೂ ಈ ಕವಿಗೆ ಕವಿತೆಯಲ್ಲಿ ತಾನು ಹೇಳಬೇಕಿರುವುದು ಏನನ್ನು ಮತ್ತು ಯಾರ ಧ್ವನಿಯನ್ನು ಎನ್ನುವ ಸ್ಪಷ್ಟತೆ ಇದೆ. ಹಾಗಾಗಿಯೇ ನೇಪಾಳದ ಭೂಕಂಪಕ್ಕೆ ಕಣ್ಣೀರಾಗುತ್ತಾರೆ. ರೈತರ ಬವಣೆಗೆ ಕರಗುತ್ತಾರೆ. ನಾಗೇಂದ್ರಪ್ಪ ಶಾಲೆಗಳಿಗೆ ತೆರಳಿ ಕವಿತೆಗಳನ್ನು ಹಾಡಿ ಮಕ್ಕಳನ್ನು ಖುಷಿಗೊಳಿಸುತ್ತಾರೆ. ಆ ಸಂದರ್ಭಗಳಲ್ಲಿ ಬಯಲಾಟ, ಏಕಪಾತ್ರಾಭಿನಯ ಮೊದಲಾದ ಕಲಾರೂಪಗಳಲ್ಲಿಯೂ ಅಭಿನಯಿಸಿ, ಕವಿತೆಯನ್ನು ವಾಚಿಸಿ ಕಾವ್ಯದ ಹಲವು ಸಾಧ್ಯತೆಗಳನ್ನು ಪ್ರಯೋಗಿಸಿದ್ದಾರೆ. ಹೀಗೆ ಜೀವಪರವಾಗಿ ತುಡಿಯುವ ಕವಿ ಇನ್ನಷ್ಟು ಗಟ್ಟಿಯಾಗಿ ಕವಿತೆಗಳನ್ನು ಕಟ್ಟಲಿ ಎಂದು ಆಶಿಸುವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...