Homeಮುಖಪುಟಎಲೆಮರೆ-2: `ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕವಿ' - ಎಚ್‌.ನಾಗೇಂದ್ರಪ್ಪ..

ಎಲೆಮರೆ-2: `ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕವಿ’ – ಎಚ್‌.ನಾಗೇಂದ್ರಪ್ಪ..

ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು...

- Advertisement -
- Advertisement -

ಚಳ್ಳಕೆರೆಯ ವಿಠ್ಠಲನಗರದಲ್ಲಿ ಇಸ್ತ್ರಿ ಮಾಡುವ ಪೆಟ್ಟಿಗೆ ಅಂಗಡಿಯಲ್ಲೇ ಪುಸ್ತಕಗಳನ್ನು ನೀಟಾಗಿ ಒತ್ತರಿಸಿಟ್ಟು ಓದುಬರಹ ಮಾಡುವ ಜನಪದ ಕವಿ ಪಗಡಲಬಂಡೆ ಹೆಚ್. ನಾಗೇಂದ್ರಪ್ಪ. ಆಶುಕವಿ, ಸ್ವರಚಿತ ಕವಿತೆಗಳನ್ನು ಹಾಡಿಕೆ ಮೂಲಕ ಜನರಿಗೆ ತಲುಪಿಸುವಾತ. ಬಿ.ಎ ಪದವಿಯಲ್ಲಿ ಕನ್ನಡ ಮೇಜರ್ ಓದಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಕನಸಿದ್ದರೂ ಮಾಡಲಾಗದೆ ಓದನ್ನು ನಿಲ್ಲಿಸಿದರು. ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿದು ಕೆಟ್ಟ ಅನುಭವದೊಂದಿಗೆ ವೃತ್ತಿ ಕಸಬು ಇಸ್ತ್ರಿಯ ಕೈಹಿಡಿದು, ಕಾಯಕದ ಜತೆ ನುಡಿ ವ್ಯವಸಾಯ ನಡೆಸಿದ್ದಾರೆ. ತಾರುಣ್ಯದಲ್ಲಿ ಅತ್ಯುತ್ತಮ ಕ್ರೀಡಾಪಟು. ಕುಸ್ತಿ, ಕಬಡ್ಡಿ, ರನ್ನಿಂಗ್ ರೇಸಲ್ಲಿ ಕಾಲೇಜಿಗೆ ಹೆಸರು ತಂದಾತ. ನಂತರದ ದಿನಗಳಲ್ಲಿ ಕಲೆಯತ್ತ ಹೊರಳಿ ಭಜನೆ, ಹಾಡಿಕೆ, ತತ್ವಪದ, ಏಕಪಾತ್ರಾಭಿನಯ, ದೊಡ್ಡಾಟ ಸಣ್ಣಾಟ ಹೀಗೆ ಬಹುಮುಖ ಪ್ರತಿಭೆಯಾಗಿ ರೂಪುಗೊಂಡರು.

ನಾಗೇಂದ್ರಪ್ಪ ಒಬ್ಬ ಜನಪದ ಕವಿ. ಹಾಗಾಗಿ ಇವರನ್ನು ಇತರೆ ಶಿಷ್ಟಕವಿಗಳ ಜತೆ ಹೋಲಿಸಲಾಗದು. ಅವರ ಕವಿತೆಗಳಲ್ಲಿ ತೀವ್ರವಾದ ರೂಪಕಗಳಾಗಲಿ, ಗಂಭೀರ ಶೋಧವಾಗಲಿ ಕಾಣುವುದಿಲ್ಲ. ಬದಲಾಗಿ ತನ್ನ ಸುತ್ತಮುತ್ತಣ ಯಕಶ್ಚಿತ್ ಎನ್ನುವಂತಹ ಸಂಗತಿಗಳನ್ನು ಆಯ್ದು ಅವುಗಳನ್ನು ಜನÀಪರವಾದ ಕೋರಿಕೆ, ದುಃಖ, ಅಸಹಾಯಕತೆ, ಪ್ರೀತಿ, ಸ್ನೇಹ, ಮೆಚ್ಚುಗೆ, ಬಂಧುತ್ವದಂತಹ ಭಾವನೆಗಳ ಜತೆ ಕಟ್ಟಿದ್ದಾರೆ. ಹೀಗೆ ದಿನದಿನದ ವಿದ್ಯಮಾನಗಳೇ ನಾಗೇಂದ್ರಪ್ಪನ ಕವಿತ್ವದಲ್ಲಿ ಹಾಡುಗಳಾಗಿವೆ. ಈ ಕಾರಣಕ್ಕೆ ಕವಿ ಬೇಂದ್ರೆ ನನಗೆ ಇಷ್ಟ ಎನ್ನುತ್ತಾರೆ.

ಚಳ್ಳಕೆರೆ ಭಾಗ ಕರ್ನಾಟಕದಲ್ಲಿಯೇ ಅತಿ ಕಡಿಮೆ ಮಳೆಬೀಳುವ ಪ್ರದೇಶ. ಹಾಗಾಗಿ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರು ಹೆಚ್ಚಾಗಿ ಕೈಸುಟ್ಟುಕೊಳ್ಳುವುದೇ ಹೆಚ್ಚು. ಈ ಸಂಗತಿಯು ಕವಿಯನ್ನು ಬಹುವಾಗಿ ಕಾಡಿದೆ. ಈ ಕವಿತೆಗಳಲ್ಲಿ ರೈತ ಹೊಲ ಮಳೆ ಮೋಡ ಕುರಿತ ರೂಪಕಗಳು ಮತ್ತೆ ಮತ್ತೆ ಮರುಕಳಿಸಿವೆ. ಅಂತೆಯೇ ಮಳೆ ಕರೆಯುವ ಮೂರ್ನಾಲ್ಕು ಪದ್ಯಗಳಿವೆ. `ಮುನಿದೆ ಏಕೋ ಮಳೆರಾಯ’ ಎನ್ನುವ ಪದ್ಯದಲ್ಲಿ `ಉತ್ತಿದರು ಬಿತ್ತಿದರು ಕತ್ತೆತ್ತಿ ನೋಡಿ/ ಗೋಗರೆದರೂ ಕರಗಲಿಲ್ಲ/ ವರುಣ ದೇವನೆದೆ’ ಎನ್ನುತ್ತಾರೆ.

`ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕಾಯಕದಲಿ’ ಕವಿತೆ ಗಮನ ಸೆಳೆವ ಪದ್ಯ. ನಾಗೇಂದ್ರಪ್ಪ ಸ್ವತಃ ಮಡಿವಾಳ ಸಮುದಾಯಕ್ಕೆ ಸೇರಿದಾತ. ಜಗದ ಬಟ್ಟೆಗಳ ಮಡಿಮಾಡಿಕೊಡುವ ಕುಲಕಸಬನ್ನು ಮಾಡಿದಾತ. ಈಗಲೂ ಇಸ್ತ್ರಿ ಅಂಗಡಿಯಲ್ಲಿ ಲೋಕದ ಬಟ್ಟೆಗಳ ಗರಿಗರಿಯಾಗಿಸುವಾತ. ಇಂತಹ ಸಮುದಾಯದ ಅನುಭವಗಳನ್ನು ನಾಗೇಂದ್ರಪ್ಪ ತುಂಬಾ ಸೂಕ್ಷ್ಮವಾಗಿ ಹಿಡಿದಿದ್ದಾರೆ. `ಇದ್ದಿಲು ನಿಗಿನಿಗಿ ಹೊಳೆದು/ಹೊಟ್ಟೆ ಬಟ್ಟೆ ತೊಡಿಸಿ/ಸ್ಫೂರ್ತಿ ನೀಡಿತು/ಬೂದಿಮುಚ್ಚಿದ ಕೆಂಡವಿದ್ದು/ ಬದುಕಿನ ನೆರವಿನ ತಂಗಾಳಿ ಬೀಸಿದಾಗ ಮತ್ತೆ ಪ್ರಜ್ವಲಿಸಿತು/ ಅಗುಳಿನ ಗಳಿಗೆಯ ಚೀಲ ತುಂಬಿ ನಿದ್ರಿಸಿತು’ ಎನ್ನುತ್ತಾರೆ. ಅಂತೆಯೇ ಉಳ್ಳವರ ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಕವಿ ಸಿರಿವಂತಿಕೆಯ ಮೇಲಿನ ಸಿಟ್ಟನ್ನು ತನ್ನ ಕಾಯಕದಲ್ಲಿ ದಾಟಿಸಿ ಹಗುರಾಗುವಂತಿದೆ. ಹಾಗಾಗಿಯೇ `ಜುಬ್ಬದ ದಿಬ್ಬ ನಿದ್ದೆಯ ಕೆಡಿಸಿ/ಸೊಕ್ಕಿದ ಸುಕ್ಕು ಕೊಬ್ಬನು ಕರಗಿಸಿ/ ಹಾಸಿಗೆ ಹಿಡಿಸಿತು/ ಆಶ್ರಯ ತಪ್ಪಿದ ಪ್ರತಿಭೆ/ತರಗೆಲೆಯಾಗಿ/ಕಮರಿ ಧೂಳಾಯಿತು’ ಎನ್ನುತ್ತಾರೆ. ಮುಂದುವರಿದು `ಲೋಕದ ಸುಕ್ಕುಗಳ/ಇಸ್ತ್ರಿ ಮಾಡುವ ಕಾಯಕದಲಿ/ ನಾನು ನನ್ನವರು/ ಸುಟ್ಟುಕೊಳ್ಳುತ್ತಲೇ/ ಗಟ್ಟಿಯಾಗುತ್ತಿದ್ದೇವೆ/ ಬದುಕೆಂಬ ಇಟ್ಟಿಗೆ ಭಟ್ಟಿಯಲಿ’ ಎಂದು ಬದುಕಿಗೆ ಚೈತನ್ಯ ಪಡೆಯುತ್ತಾರೆ.

ನಾಗೇಂದ್ರಪ್ಪ ಜನಪದ ಕವಿಯಾಗಿಯೂ ಆಧುನಿಕ ವೈಚಾರಿಕತೆ ಇವರ ಕವಿತೆಗಳಲ್ಲಿ ಹೆಣೆದುಕೊಂಡಿದೆ. ಈ ಕಾರಣಕ್ಕೆ ಇಲ್ಲಿ ಜನರ ಕಷ್ಟನಷ್ಟಗಳನ್ನು ಕವಿತೆಯನ್ನಾಗಿಸುತ್ತಲೇ ಇವುಗಳಿಂದ ಹೊರಬರಬಹುದಾದ ದಾರಿಗಳ ಬಗ್ಗೆಯೂ ಜಾಗೃತರಾಗಿದ್ದಾರೆ. ಈ ಸಂಕಲನದ `ಕ್ರಾಂತಿಗೀತೆ’ ಎನ್ನುವ ಕವಿತೆ ಗಮನ ಸೆಳೆಯುವಂತಿದೆ. `ನೆಲ ಅಗೆದರು ಮರ ಕಡಿದರು/ ಅದಿರು ತೆಗೆದರು ಮರಳು ಮಾರಿದರು/ಕನ್ನಡಮ್ಮನ ಬಂಜೆ ಮಾಡಿದರು/ಖಜಾನೆ ಲೂಟಿ ಹೊಡೆದರು’ ಎಂದು ವಾಸ್ತವದ ಕನ್ನಡಮ್ಮನ ನೆನೆಯುತ್ತಾರೆ. ಅಂತೆಯೇ `ಕ್ರಾಂತಿ ಕಹಳೆ ಮೊಳಗಲಿ/ಶಾಂತಿ ಬೀಡು ಆಗಲಿ/ಏಳಿರಿ ಸಿಡಿದೇಳಿರಿ’ ಎಂದು ಕರೆಕೊಡುತ್ತಾರೆ. ಇಷ್ಟರಮಟ್ಟಿಗೆ ಕವಿ ವರ್ತಮಾನವನ್ನು ಎಚ್ಚರದ ಕಣ್ಣಿಂದ ಗಮನಿಸಿದ್ದಾರೆ.

ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು ಎನ್ನುವುದು ಗಮನ ಸೆಳೆಯುತ್ತದೆ. ಹಾಗಾಗಿ ಇಲ್ಲಿ ಕವಿತೆಗಳನ್ನು ಕಟ್ಟುವಲ್ಲಿ ವಾಚ್ಯವಾದರೂ ಈ ಕವಿಗೆ ಕವಿತೆಯಲ್ಲಿ ತಾನು ಹೇಳಬೇಕಿರುವುದು ಏನನ್ನು ಮತ್ತು ಯಾರ ಧ್ವನಿಯನ್ನು ಎನ್ನುವ ಸ್ಪಷ್ಟತೆ ಇದೆ. ಹಾಗಾಗಿಯೇ ನೇಪಾಳದ ಭೂಕಂಪಕ್ಕೆ ಕಣ್ಣೀರಾಗುತ್ತಾರೆ. ರೈತರ ಬವಣೆಗೆ ಕರಗುತ್ತಾರೆ. ನಾಗೇಂದ್ರಪ್ಪ ಶಾಲೆಗಳಿಗೆ ತೆರಳಿ ಕವಿತೆಗಳನ್ನು ಹಾಡಿ ಮಕ್ಕಳನ್ನು ಖುಷಿಗೊಳಿಸುತ್ತಾರೆ. ಆ ಸಂದರ್ಭಗಳಲ್ಲಿ ಬಯಲಾಟ, ಏಕಪಾತ್ರಾಭಿನಯ ಮೊದಲಾದ ಕಲಾರೂಪಗಳಲ್ಲಿಯೂ ಅಭಿನಯಿಸಿ, ಕವಿತೆಯನ್ನು ವಾಚಿಸಿ ಕಾವ್ಯದ ಹಲವು ಸಾಧ್ಯತೆಗಳನ್ನು ಪ್ರಯೋಗಿಸಿದ್ದಾರೆ. ಹೀಗೆ ಜೀವಪರವಾಗಿ ತುಡಿಯುವ ಕವಿ ಇನ್ನಷ್ಟು ಗಟ್ಟಿಯಾಗಿ ಕವಿತೆಗಳನ್ನು ಕಟ್ಟಲಿ ಎಂದು ಆಶಿಸುವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...