Homeಮುಖಪುಟಎಲೆಮರೆ-2: `ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕವಿ' - ಎಚ್‌.ನಾಗೇಂದ್ರಪ್ಪ..

ಎಲೆಮರೆ-2: `ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕವಿ’ – ಎಚ್‌.ನಾಗೇಂದ್ರಪ್ಪ..

ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು...

- Advertisement -
- Advertisement -

ಚಳ್ಳಕೆರೆಯ ವಿಠ್ಠಲನಗರದಲ್ಲಿ ಇಸ್ತ್ರಿ ಮಾಡುವ ಪೆಟ್ಟಿಗೆ ಅಂಗಡಿಯಲ್ಲೇ ಪುಸ್ತಕಗಳನ್ನು ನೀಟಾಗಿ ಒತ್ತರಿಸಿಟ್ಟು ಓದುಬರಹ ಮಾಡುವ ಜನಪದ ಕವಿ ಪಗಡಲಬಂಡೆ ಹೆಚ್. ನಾಗೇಂದ್ರಪ್ಪ. ಆಶುಕವಿ, ಸ್ವರಚಿತ ಕವಿತೆಗಳನ್ನು ಹಾಡಿಕೆ ಮೂಲಕ ಜನರಿಗೆ ತಲುಪಿಸುವಾತ. ಬಿ.ಎ ಪದವಿಯಲ್ಲಿ ಕನ್ನಡ ಮೇಜರ್ ಓದಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಕನಸಿದ್ದರೂ ಮಾಡಲಾಗದೆ ಓದನ್ನು ನಿಲ್ಲಿಸಿದರು. ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿದು ಕೆಟ್ಟ ಅನುಭವದೊಂದಿಗೆ ವೃತ್ತಿ ಕಸಬು ಇಸ್ತ್ರಿಯ ಕೈಹಿಡಿದು, ಕಾಯಕದ ಜತೆ ನುಡಿ ವ್ಯವಸಾಯ ನಡೆಸಿದ್ದಾರೆ. ತಾರುಣ್ಯದಲ್ಲಿ ಅತ್ಯುತ್ತಮ ಕ್ರೀಡಾಪಟು. ಕುಸ್ತಿ, ಕಬಡ್ಡಿ, ರನ್ನಿಂಗ್ ರೇಸಲ್ಲಿ ಕಾಲೇಜಿಗೆ ಹೆಸರು ತಂದಾತ. ನಂತರದ ದಿನಗಳಲ್ಲಿ ಕಲೆಯತ್ತ ಹೊರಳಿ ಭಜನೆ, ಹಾಡಿಕೆ, ತತ್ವಪದ, ಏಕಪಾತ್ರಾಭಿನಯ, ದೊಡ್ಡಾಟ ಸಣ್ಣಾಟ ಹೀಗೆ ಬಹುಮುಖ ಪ್ರತಿಭೆಯಾಗಿ ರೂಪುಗೊಂಡರು.

ನಾಗೇಂದ್ರಪ್ಪ ಒಬ್ಬ ಜನಪದ ಕವಿ. ಹಾಗಾಗಿ ಇವರನ್ನು ಇತರೆ ಶಿಷ್ಟಕವಿಗಳ ಜತೆ ಹೋಲಿಸಲಾಗದು. ಅವರ ಕವಿತೆಗಳಲ್ಲಿ ತೀವ್ರವಾದ ರೂಪಕಗಳಾಗಲಿ, ಗಂಭೀರ ಶೋಧವಾಗಲಿ ಕಾಣುವುದಿಲ್ಲ. ಬದಲಾಗಿ ತನ್ನ ಸುತ್ತಮುತ್ತಣ ಯಕಶ್ಚಿತ್ ಎನ್ನುವಂತಹ ಸಂಗತಿಗಳನ್ನು ಆಯ್ದು ಅವುಗಳನ್ನು ಜನÀಪರವಾದ ಕೋರಿಕೆ, ದುಃಖ, ಅಸಹಾಯಕತೆ, ಪ್ರೀತಿ, ಸ್ನೇಹ, ಮೆಚ್ಚುಗೆ, ಬಂಧುತ್ವದಂತಹ ಭಾವನೆಗಳ ಜತೆ ಕಟ್ಟಿದ್ದಾರೆ. ಹೀಗೆ ದಿನದಿನದ ವಿದ್ಯಮಾನಗಳೇ ನಾಗೇಂದ್ರಪ್ಪನ ಕವಿತ್ವದಲ್ಲಿ ಹಾಡುಗಳಾಗಿವೆ. ಈ ಕಾರಣಕ್ಕೆ ಕವಿ ಬೇಂದ್ರೆ ನನಗೆ ಇಷ್ಟ ಎನ್ನುತ್ತಾರೆ.

ಚಳ್ಳಕೆರೆ ಭಾಗ ಕರ್ನಾಟಕದಲ್ಲಿಯೇ ಅತಿ ಕಡಿಮೆ ಮಳೆಬೀಳುವ ಪ್ರದೇಶ. ಹಾಗಾಗಿ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರು ಹೆಚ್ಚಾಗಿ ಕೈಸುಟ್ಟುಕೊಳ್ಳುವುದೇ ಹೆಚ್ಚು. ಈ ಸಂಗತಿಯು ಕವಿಯನ್ನು ಬಹುವಾಗಿ ಕಾಡಿದೆ. ಈ ಕವಿತೆಗಳಲ್ಲಿ ರೈತ ಹೊಲ ಮಳೆ ಮೋಡ ಕುರಿತ ರೂಪಕಗಳು ಮತ್ತೆ ಮತ್ತೆ ಮರುಕಳಿಸಿವೆ. ಅಂತೆಯೇ ಮಳೆ ಕರೆಯುವ ಮೂರ್ನಾಲ್ಕು ಪದ್ಯಗಳಿವೆ. `ಮುನಿದೆ ಏಕೋ ಮಳೆರಾಯ’ ಎನ್ನುವ ಪದ್ಯದಲ್ಲಿ `ಉತ್ತಿದರು ಬಿತ್ತಿದರು ಕತ್ತೆತ್ತಿ ನೋಡಿ/ ಗೋಗರೆದರೂ ಕರಗಲಿಲ್ಲ/ ವರುಣ ದೇವನೆದೆ’ ಎನ್ನುತ್ತಾರೆ.

`ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕಾಯಕದಲಿ’ ಕವಿತೆ ಗಮನ ಸೆಳೆವ ಪದ್ಯ. ನಾಗೇಂದ್ರಪ್ಪ ಸ್ವತಃ ಮಡಿವಾಳ ಸಮುದಾಯಕ್ಕೆ ಸೇರಿದಾತ. ಜಗದ ಬಟ್ಟೆಗಳ ಮಡಿಮಾಡಿಕೊಡುವ ಕುಲಕಸಬನ್ನು ಮಾಡಿದಾತ. ಈಗಲೂ ಇಸ್ತ್ರಿ ಅಂಗಡಿಯಲ್ಲಿ ಲೋಕದ ಬಟ್ಟೆಗಳ ಗರಿಗರಿಯಾಗಿಸುವಾತ. ಇಂತಹ ಸಮುದಾಯದ ಅನುಭವಗಳನ್ನು ನಾಗೇಂದ್ರಪ್ಪ ತುಂಬಾ ಸೂಕ್ಷ್ಮವಾಗಿ ಹಿಡಿದಿದ್ದಾರೆ. `ಇದ್ದಿಲು ನಿಗಿನಿಗಿ ಹೊಳೆದು/ಹೊಟ್ಟೆ ಬಟ್ಟೆ ತೊಡಿಸಿ/ಸ್ಫೂರ್ತಿ ನೀಡಿತು/ಬೂದಿಮುಚ್ಚಿದ ಕೆಂಡವಿದ್ದು/ ಬದುಕಿನ ನೆರವಿನ ತಂಗಾಳಿ ಬೀಸಿದಾಗ ಮತ್ತೆ ಪ್ರಜ್ವಲಿಸಿತು/ ಅಗುಳಿನ ಗಳಿಗೆಯ ಚೀಲ ತುಂಬಿ ನಿದ್ರಿಸಿತು’ ಎನ್ನುತ್ತಾರೆ. ಅಂತೆಯೇ ಉಳ್ಳವರ ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಕವಿ ಸಿರಿವಂತಿಕೆಯ ಮೇಲಿನ ಸಿಟ್ಟನ್ನು ತನ್ನ ಕಾಯಕದಲ್ಲಿ ದಾಟಿಸಿ ಹಗುರಾಗುವಂತಿದೆ. ಹಾಗಾಗಿಯೇ `ಜುಬ್ಬದ ದಿಬ್ಬ ನಿದ್ದೆಯ ಕೆಡಿಸಿ/ಸೊಕ್ಕಿದ ಸುಕ್ಕು ಕೊಬ್ಬನು ಕರಗಿಸಿ/ ಹಾಸಿಗೆ ಹಿಡಿಸಿತು/ ಆಶ್ರಯ ತಪ್ಪಿದ ಪ್ರತಿಭೆ/ತರಗೆಲೆಯಾಗಿ/ಕಮರಿ ಧೂಳಾಯಿತು’ ಎನ್ನುತ್ತಾರೆ. ಮುಂದುವರಿದು `ಲೋಕದ ಸುಕ್ಕುಗಳ/ಇಸ್ತ್ರಿ ಮಾಡುವ ಕಾಯಕದಲಿ/ ನಾನು ನನ್ನವರು/ ಸುಟ್ಟುಕೊಳ್ಳುತ್ತಲೇ/ ಗಟ್ಟಿಯಾಗುತ್ತಿದ್ದೇವೆ/ ಬದುಕೆಂಬ ಇಟ್ಟಿಗೆ ಭಟ್ಟಿಯಲಿ’ ಎಂದು ಬದುಕಿಗೆ ಚೈತನ್ಯ ಪಡೆಯುತ್ತಾರೆ.

ನಾಗೇಂದ್ರಪ್ಪ ಜನಪದ ಕವಿಯಾಗಿಯೂ ಆಧುನಿಕ ವೈಚಾರಿಕತೆ ಇವರ ಕವಿತೆಗಳಲ್ಲಿ ಹೆಣೆದುಕೊಂಡಿದೆ. ಈ ಕಾರಣಕ್ಕೆ ಇಲ್ಲಿ ಜನರ ಕಷ್ಟನಷ್ಟಗಳನ್ನು ಕವಿತೆಯನ್ನಾಗಿಸುತ್ತಲೇ ಇವುಗಳಿಂದ ಹೊರಬರಬಹುದಾದ ದಾರಿಗಳ ಬಗ್ಗೆಯೂ ಜಾಗೃತರಾಗಿದ್ದಾರೆ. ಈ ಸಂಕಲನದ `ಕ್ರಾಂತಿಗೀತೆ’ ಎನ್ನುವ ಕವಿತೆ ಗಮನ ಸೆಳೆಯುವಂತಿದೆ. `ನೆಲ ಅಗೆದರು ಮರ ಕಡಿದರು/ ಅದಿರು ತೆಗೆದರು ಮರಳು ಮಾರಿದರು/ಕನ್ನಡಮ್ಮನ ಬಂಜೆ ಮಾಡಿದರು/ಖಜಾನೆ ಲೂಟಿ ಹೊಡೆದರು’ ಎಂದು ವಾಸ್ತವದ ಕನ್ನಡಮ್ಮನ ನೆನೆಯುತ್ತಾರೆ. ಅಂತೆಯೇ `ಕ್ರಾಂತಿ ಕಹಳೆ ಮೊಳಗಲಿ/ಶಾಂತಿ ಬೀಡು ಆಗಲಿ/ಏಳಿರಿ ಸಿಡಿದೇಳಿರಿ’ ಎಂದು ಕರೆಕೊಡುತ್ತಾರೆ. ಇಷ್ಟರಮಟ್ಟಿಗೆ ಕವಿ ವರ್ತಮಾನವನ್ನು ಎಚ್ಚರದ ಕಣ್ಣಿಂದ ಗಮನಿಸಿದ್ದಾರೆ.

ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು ಎನ್ನುವುದು ಗಮನ ಸೆಳೆಯುತ್ತದೆ. ಹಾಗಾಗಿ ಇಲ್ಲಿ ಕವಿತೆಗಳನ್ನು ಕಟ್ಟುವಲ್ಲಿ ವಾಚ್ಯವಾದರೂ ಈ ಕವಿಗೆ ಕವಿತೆಯಲ್ಲಿ ತಾನು ಹೇಳಬೇಕಿರುವುದು ಏನನ್ನು ಮತ್ತು ಯಾರ ಧ್ವನಿಯನ್ನು ಎನ್ನುವ ಸ್ಪಷ್ಟತೆ ಇದೆ. ಹಾಗಾಗಿಯೇ ನೇಪಾಳದ ಭೂಕಂಪಕ್ಕೆ ಕಣ್ಣೀರಾಗುತ್ತಾರೆ. ರೈತರ ಬವಣೆಗೆ ಕರಗುತ್ತಾರೆ. ನಾಗೇಂದ್ರಪ್ಪ ಶಾಲೆಗಳಿಗೆ ತೆರಳಿ ಕವಿತೆಗಳನ್ನು ಹಾಡಿ ಮಕ್ಕಳನ್ನು ಖುಷಿಗೊಳಿಸುತ್ತಾರೆ. ಆ ಸಂದರ್ಭಗಳಲ್ಲಿ ಬಯಲಾಟ, ಏಕಪಾತ್ರಾಭಿನಯ ಮೊದಲಾದ ಕಲಾರೂಪಗಳಲ್ಲಿಯೂ ಅಭಿನಯಿಸಿ, ಕವಿತೆಯನ್ನು ವಾಚಿಸಿ ಕಾವ್ಯದ ಹಲವು ಸಾಧ್ಯತೆಗಳನ್ನು ಪ್ರಯೋಗಿಸಿದ್ದಾರೆ. ಹೀಗೆ ಜೀವಪರವಾಗಿ ತುಡಿಯುವ ಕವಿ ಇನ್ನಷ್ಟು ಗಟ್ಟಿಯಾಗಿ ಕವಿತೆಗಳನ್ನು ಕಟ್ಟಲಿ ಎಂದು ಆಶಿಸುವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...