Homeಚಳವಳಿಅತ್ಯಾಚಾರ ತಡೆಗೆ ದೆಹಲಿಯಲ್ಲಿ ಹುಡುಗರಿಗೆ ಅರಿವು ಮತ್ತು ಪ್ರತಿಜ್ಞೆ: ಕೇಜ್ರಿವಾಲ್‌

ಅತ್ಯಾಚಾರ ತಡೆಗೆ ದೆಹಲಿಯಲ್ಲಿ ಹುಡುಗರಿಗೆ ಅರಿವು ಮತ್ತು ಪ್ರತಿಜ್ಞೆ: ಕೇಜ್ರಿವಾಲ್‌

- Advertisement -
- Advertisement -

ನಿರ್ಭಯ ಅತ್ಯಾಚಾರದ ಆರೋಪಿಗಳಿಗೆ ಗಲ್ಲು ಶಿಕ್ಷೆ ಸನಿಹವಾಗಿದೆ. ಹೈದರಾಬಾದ್‌ ಪಶುವೈದ್ಯೆಯ ಅತ್ಯಾಚಾರ, ಕೊಲೆ ಆರೋಪಿಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ. ಆಂಧ್ರದಲ್ಲಿ ದಿಶಾ ಮಸೂದೆ ಜಾರಿಗೊಳಿಸಲಾಗಿದೆ. ಇದೇ ನಿಟ್ಟಿನಲ್ಲಿ ದೆಹಲಿಯಲ್ಲಿಯೂ ಸಹ ಅತ್ಯಾಚಾರ ತಡೆಗೆ ಬೃಹತ್‌ ಅಭಿಯಾನಕ್ಕೆ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಸರ್ಕಾರ ನಿರ್ಧರಿಸಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳ ಹೆಚ್ಚಳವು ಮಾನಸಿಕ ಅಧಃಪತನದ ಸಂಕೇತವಾಗಿದೆ. ಆದ್ದರಿಂದ, ಮಹಿಳೆಯರುಮ ಹೆಣ್ಣು ಮಕ್ಕಳೊಂದಿಗೆ ಕೆಟ್ಟದಾಗಿ ವರ್ತಿಸಬಾರದು ಎಂಬ ಅರಿವನ್ನು ಪ್ರತಿ ಶಾಲೆ ಮತ್ತು ಕಾಲೇಜುಗಳಲ್ಲಿನ ಹುಡಗರಿಗೆ ಮೂಡಿಸಲು ಮುಂದಾಗಿದ್ದೇವೆ. ಆ ವಿಚಾರದ ಕುರಿತು ಹುಡುಗರಿಗೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದಿಲ್ಲ ಎಂಬ ಪ್ರತಿಜ್ಞೆ ಸಹ ಬೋದಿಸಲಿದ್ದೇವೆ ಎಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ಇದನ್ನು ಓದಿ: 14ದಿನಗಳಲ್ಲಿ ವಿಚಾರಣೆ, 21 ದಿನಗಳಲ್ಲಿ ಶಿಕ್ಷೆ ಪ್ರಕಟ: ಅತ್ಯಾಚಾರದ ವಿರುದ್ಧ ದಿಶಾ ಮಸೂದೆಗೆ ಆಂಧ್ರ ಅಸ್ತು

ಈ ಅಭಿಯಾನವು ದೆಹಲಿಯಾದ್ಯಂತ ನಿರಂತರವಾಗಿ ನಡೆಯಲಿದೆ. ಇದು ಹುಡುಗರಿಗೆ ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಒಂದು ರೀತಿಯಲ್ಲಿ ಚಿಕ್ಕ ಮಕ್ಕಳಿನಲ್ಲಿಯೇ ಯಾವುದು ಸರಿ, ಯಾವುದು ತಪ್ಪು ಎಂದು ಅರಿವು ಮೂಡಿಸಲು ಈ ವಿಧಾನವೂ ಸೂಕ್ತವಾಗಿದೆ. ಇದು ಮಕ್ಕಳನ್ನು ಹೆಣ್ಣು ಮಕ್ಕಳ ಕುರಿತು ಸೂಕ್ಷ್ಮತೆಯನ್ನು ಬೆಳೆಸುತ್ತದೆ.

ಎಲ್ಲಾ ಹುಡುಗಿಯರನ್ನು ತಮ್ಮ ಸಹೋದರರೊಂದಿಗೆ ಮಾತನಾಡಲು ಕೇಳಲಾಗುತ್ತದೆ. ಮತ್ತು ಅವರು ಯಾವುದೇ ಮಹಿಳೆಯೊಂದಿಗೆ ಕೆಟ್ಟದಾಗಿ ವರ್ತಿಸುವುದಿಲ್ಲ ಎಂದು ತಿಳಿಸಿ, ಮತ್ತು ಅವರ ಸಹೋದರರು ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುತ್ತಾರೆ. ಮತ್ತು ಅವನು ಏನಾದರೂ ತಪ್ಪು ಮಾಡಿದರೆ, ‘ನಾನು ನಿಮ್ಮೊಂದಿಗೆ ಎಲ್ಲ ಸಂಬಂಧಗಳನ್ನು ಮುರಿಯುತ್ತಿದ್ದೇನೆ’ ಎಂದು ಹುಡುಗಿ ತನ್ನ ಸಹೋದರನಿಗೆ ಹೇಳಬೇಕು ಎಂದು ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: 14ದಿನಗಳಲ್ಲಿ ವಿಚಾರಣೆ, 21 ದಿನಗಳಲ್ಲಿ ಶಿಕ್ಷೆ ಪ್ರಕಟ: ಅತ್ಯಾಚಾರದ ವಿರುದ್ಧ ದಿಶಾ ಮಸೂದೆಗೆ ಆಂಧ್ರ ಅಸ್ತು

ಈ ಅಭಿಯಾನವನ್ನು ಬಹಳಷ್ಟು ಮಹಿಳಾ ಸಂಘಟನೆಗಳು ಸ್ವಾಗತಿಸುವ ನಿರೀಕ್ಷೆಯಿದೆ. ಏಕೆಂದರೆ ಬಹಳಷ್ಟು ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಗಳಿಗೆ ಪರಿಹಾರಗಲು ತಳಮಟ್ಟದಲ್ಲಿರುತ್ತವೆ. ಸಾಕಷ್ಟು ಬಾರಿ ಅತ್ಯಾಚಾರಕ್ಕೊಳಗಾಗಿ ಹೆಣ್ಣು ಮಗಳೇ ಅದಕ್ಕೆ ಕಾರಣ, ಅವಳ ಬಟ್ಟೆ ಕಾರಣ, ಅವಳ ನಡತೆ ಕಾರಣ ಎಂದು ದೂರುವ ಕೆಟ್ಟ ಪರಿಪಾಠ ರೂಡಿಯಲ್ಲಿದೆ. ಅದಕ್ಕೆ ಬದಲಾಗಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳು ನೋಡುವ ದೃಷ್ಟಿಕೋನವನ್ನು ಶಿಕ್ಷಣದ ಮೂಲಕ ಬದಲಿಸಬೇಕಾಗಿದೆ.

ಹಾಗಾಗಿ ಗಂಡು ಮಕ್ಕಳು ಉತ್ತಮ ಶಿಕ್ಷಣ ಪಡೆದು ಹೆಣ್ಣು ಮಕ್ಕಳನ್ನು ಸಹ ಸಮಾನಳೆಂದು ನೋಡಿದ್ದಲ್ಲಿ, ಅತ್ಯಾಚಾರ ಅತ್ಯಂತ ಘೋರ ಪಾಪ ಎಂದು ಅರಿತುಕೊಂಡಲ್ಲಿ ಅವುಗಳ ಪ್ರಮಾಣ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ದೆಹಲಿ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸುತ್ತಲೇ ಉಳಿದ ರಾಜ್ಯಗಳು ಸಹ ಇದನ್ನು ಅನುಸರಿಸಿದರೆ ಒಳ್ಳೆಯದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ‘ಜಿ-ರಾಮ್‌ಜಿ’ ಕಾಯ್ದೆಯ ವಿರುದ್ಧ ಕಾಂಗ್ರೆಸ್‌ನಿಂದ ದೇಶಾದ್ಯಂತ ಪ್ರತಿಭಟನೆ ಘೋಷಣೆ

ಮನರೇಗಾ ಕಾಯ್ದೆಗೆ ತಿದ್ದುಪಡಿ ಮೂಲಕ ಜಾರಿಗೆ ತಂದಿರುವ ಜಿ-ರಾಮ್‌ಜಿ ಕಾಯ್ದೆಯ ವಿರುದ್ಧ ಜನವರಿ 8 ರಿಂದ ದೇಶಾದ್ಯಂತ ಆಂದೋಲನ ನಡೆಸಲು ಕಾಂಗ್ರೆಸ್ ಶನಿವಾರ ನಿರ್ಧರಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಬಾಂಗ್ಲಾದೇಶ| ಗುಂಪು ದಾಳಿಗೆ ಒಳಗಾಗಿದ್ದ ಹಿಂದೂ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಹೊಸ ವರ್ಷದ ಮುನ್ನಾದಿನದಂದು ಗುಂಪೊಂದು ಇರಿದು ಬೆಂಕಿ ಹಚ್ಚಿದ ಹಿಂದೂ ಉದ್ಯಮಿ ಖೋಕೋನ್ ಚಂದ್ರ ದಾಸ್ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಢಾಕಾದ ರಾಷ್ಟ್ರೀಯ ಬರ್ನ್ ಇನ್ಸ್ಟಿಟ್ಯೂಟ್‌ನಲ್ಲಿ ಸುಟ್ಟ ಗಾಯಗಳ ವಿಭಾಗದಲ್ಲಿ ಅವರು...

ಅಮೆರಿಕದ ಎಚ್ಚರಿಕೆ ಬೆನ್ನಲ್ಲೇ ವೆನೆಜುವೆಲಾ ರಾಜಧಾನಿಯಲ್ಲಿ ವಿಮಾನಗಳ ಅಬ್ಬರ; ಸರಣಿ ಸ್ಫೋಟ

ಶನಿವಾರ ಮುಂಜಾನೆ ಸಮೀಪದಲ್ಲೇ ವಿಮಾನಗಳು ಘರ್ಜಿಸಿದವು, ಬೀದಿಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಹೊಗೆ ಬುಗ್ಗೆ ಆವರಿಸಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರೆಸ್ ಪ್ರಕಾರ,...

ಉಡುಪಿ: ಹಿಮ್ಮುಕವಾಗಿ ಚಲಿಸಿದ ಕಾರು: ಬೈಕ್ ಸವಾರರು ಮತ್ತು ಆಟೋಗೆ ಡಿಕ್ಕಿ: ಸಿಸಿಟಿವಿ ವಿಡಿಯೋ ವೈರಲ್

ಉಡುಪಿಯಲ್ಲಿ ನಿಲ್ಲಿಸಿದ್ದ ಕಾರೊಂದು ಹಠಾತ್ತನೆ ಹಿಂದಕ್ಕೆ ಸರಿದು ಅಪಘಾತಕ್ಕೆ ಕಾರಣವಾಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿಯೊ ರಸ್ತೆಬದಿಯಲ್ಲಿ ನಿಂತಿದ್ದ ಕಾರನ್ನು ತೋರಿಸುತ್ತದೆ. ಕೆಲವು ಸೆಕೆಂಡುಗಳ ನಂತರ, ಒಬ್ಬ ವ್ಯಕ್ತಿ...

ಕೆಕೆಆರ್‌ ತಂಡದಿಂದ ಬಾಂಗ್ಲಾ ಆಟಗಾರನ ಕೈಬಿಡುವಂತೆ ಬಿಸಿಸಿಐ ಸೂಚನೆ

ಬಾಂಗ್ಲಾದೇಶದ ವಿರುದ್ಧ ದೇಶದಾದ್ಯಂತ ಹೆಚ್ಚುತ್ತಿರುವ ಆಕ್ರೋಶದ ನಂತರ ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಂಸ್ಥೆಗೆ...

ಛತ್ತೀಸ್‌ಗಢ: ಬಸ್ತಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 12 ಕ್ಕೂ ಹೆಚ್ಚು ನಕ್ಸಲರ ಸಾವು

ಸುಕ್ಮಾ/ಬಿಜಾಪುರ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 12 ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಕ್ಮಾದಲ್ಲಿ 10 ಕ್ಕೂ ಹೆಚ್ಚು ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಯಿತು,...

ಆರ್‌ಎಸ್‌ಎಸ್ ಅರೆಸೈನಿಕ ಸಂಘಟನೆಯಲ್ಲ; ಬಿಜೆಪಿಯನ್ನು ನೋಡಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ: ಮೋಹನ್ ಭಾಗವತ್

ಭೋಪಾಲ್: ಸಮವಸ್ತ್ರ ಮತ್ತು ದೈಹಿಕ ವ್ಯಾಯಾಮಗಳ ಹೊರತಾಗಿಯೂ, ಸಂಘವು ಅರೆಸೈನಿಕ ಸಂಘಟನೆಯಲ್ಲ ಮತ್ತು ಬಿಜೆಪಿಯನ್ನು ನೋಡಿ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ದೊಡ್ಡ ತಪ್ಪು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಶುಕ್ರವಾರ ಕೋಲ್ಕತ್ತಾದಲ್ಲಿ...

ತೆಲಂಗಾಣ ವಿಧಾನಸಭೆಯಲ್ಲಿ ‘ಮನರೇಗಾ’ ಬದಲಿ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕಾರ 

ಹೈದರಾಬಾದ್: ಬಿಜೆಪಿ ಸದಸ್ಯರ ವಿರೋಧದ ನಡುವೆಯೂ, ತೆಲಂಗಾಣ ವಿಧಾನಸಭೆಯು ಶುಕ್ರವಾರ MGNREGA ಅನ್ನು VB G RAM G ಕಾಯ್ದೆಯೊಂದಿಗೆ ಬದಲಾಯಿಸುವ ಕೇಂದ್ರದ ಕ್ರಮವನ್ನು ವಿರೋಧಿಸಿ ನಿರ್ಣಯವನ್ನು ಅಂಗೀಕರಿಸಿತು ಮತ್ತು ಹಿಂದಿನ ಶಾಸನವನ್ನು...

ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ

19ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯನ್ನು ತಂದಂತಹ ಸಾವಿತ್ರಿಬಾಯಿ ಫುಲೆಯವರನ್ನು ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯುತ್ತಾರೆ. 1818ರಲ್ಲಿ ಪೇಶ್ವೆಗಳ ರಾಜ್ಯಭಾರ ಕೊನೆಗೊಂಡು ಬ್ರಿಟಿಷರ ಆಡಳಿತ ಶುರುವಾಗಿತ್ತು. ಬ್ರಿಟೀಷರು ಅಧಿಕಾರ ವಹಿಸಿಕೊಂಡು ಹದಿಮೂರು ವರ್ಷಗಳ...

‘ಪ್ರಾಯಶ್ಚಿತ ದಿನ..’: ಮಾನ್ಯ ಪಾಟೀಲ್ ಮರ್ಯಾದೆಗೇಡು ಹತ್ಯೆ ಖಂಡಿಸಿದ ಲಿಂಗಾಯತ ಸಂಘಟನೆಗಳು

ಅಮಾನವೀಯ ಘಟನೆಗೆ ಸಾಕ್ಷಿಯಾಗಿರುವ ಮಾನ್ಯ ಪಾಟೀಲ್ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿ 'ಜಾಗತಿಕ ಲಿಂಗಾಯತ ಮಹಾಸಭಾ' ನೇತೃತ್ವದಲ್ಲಿ ಶುಕ್ರವಾರ 'ಪ್ರಾಯಶ್ಚಿತ ದಿನ' ಆಚರಿಸಲಾಯಿತು. ದಲಿತ ಸಂಘಟನೆಗಳು ಸಂತ್ರಸ್ತೆಯ ಪತಿಯ ಕುಟುಂಬವನ್ನು ಸಕ್ರಿಯವಾಗಿ ಬೆಂಬಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರೂ,...