Homeಕರ್ನಾಟಕನಾವೆಲ್ಲಾ ಕೋತಿಗಳಾಗುತ್ತಿರುವುದು ಹೇಗೆ? ವಿಕಾಸ ಮತ್ತು ಹಿಂಚಲನೆ... - ಅಭಿಜಿತ್ ಬ್ಯಾನರ್ಜಿ

ನಾವೆಲ್ಲಾ ಕೋತಿಗಳಾಗುತ್ತಿರುವುದು ಹೇಗೆ? ವಿಕಾಸ ಮತ್ತು ಹಿಂಚಲನೆ… – ಅಭಿಜಿತ್ ಬ್ಯಾನರ್ಜಿ

ನಮ್ಮ ದೇಶದಲ್ಲಿನ ಮುಕ್ತತೆಯ, ಕುತೂಹಲದ, ಸಂವಾದದ, ಅಮೂರ್ತತೆಯ, ಆತಿಥ್ಯದ ಮತ್ತು ಕಾರುಣ್ಯದ ಸಂಪ್ರದಾಯಗಳನ್ನು ಗೌರವಿಸಿ, ಮೆಚ್ಚುವ ಚಳುವಳಿಯೊಂದನ್ನು ಹುಟ್ಟುಹಾಕಬೇಕಾಗಿದೆ.

- Advertisement -
- Advertisement -

ವಿಕಾಸ ಮತ್ತು ಹಿಂಚಲನೆ : ಅಭಿಜಿತ್ ಬ್ಯಾನರ್ಜಿ
ಅನುವಾದ: ಟಿ ಎಸ್ ವೇಣುಗೋಪಾಲ್

ಕೋತಿ ಮನುಷ್ಯನಾಗೋದನ್ನು ನಾವ್ಯಾರೂ ನೋಡಿಲ್ಲ. ಆದರೆ ಮನುಷ್ಯರು ಮಂಗಗಳಾಗುವುದನ್ನು ಆಗೀಗ ನೋಡುತ್ತಿರುತ್ತೇವೆ. ತಾನು ಕಂಡೇ ಇಲ್ಲದ್ದನ್ನು, ಯಾರೂ ಯಾವತ್ತೂ ಕಾಣದ್ದನ್ನು ಕಲ್ಪಿಸಿಕೊಳ್ಳುವ ವಿಶಿಷ್ಟ ಸಾಮರ್ಥ್ಯ ಮನುಷ್ಯನಿಗೆ ಮಾತ್ರ ಸಾಧ್ಯ. ಚಿಂಪಾಂಜಿಗಳಿಗೆ ಕೆಲವು ಗುರುತುಗಳನ್ನು ಗ್ರಹಿಸಿಕೊಳ್ಳಲಿಕ್ಕೆ ಸಾಧ್ಯವಾಗಬಹುದು, ಕೆಲವು ಪದಗಳನ್ನೂ ಕಲಿಯಬಹುದು. ಆದರೆ ಯಾವುದೇ ಚಿಂಪಾಂಜಿಗೂ ಗಣೇಶನನ್ನೋ ಅಥವಾ ಒಂದು ಏಕಶೃಂಗಿಯನ್ನೋ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಈ ಪ್ರಮುಖ ಗುಣವನ್ನು ಅಲ್ಲಗೆಳೆಯುವುದೇ ಜಗತ್ತಿನೆಲ್ಲೆಡೆ ಬಲಪಂಥೀಯ ಜನಪ್ರಿಯ ರಾಜಕೀಯದ ಪ್ರಮುಖ ಕಸುಬಾಗಿಬಿಟ್ಟಿದೆೆ. “ದಲಿತರು ಅಂದರೆ ಮಲ ತೆಗೆಯುವವರು. ಅವರ ವ್ಯವಹಾರ ಎಲ್ಲಾ ಏನಿದ್ದರೂ ಸತ್ತ ಪ್ರಾಣಿಗಳು, ಮನುಷ್ಯರ ಕಕ್ಕಸ್ಸಿನ ಜೊತೆಗೆ. ಅವರ ಕೈಯಲ್ಲಿ ನಾವು ನೀರೇ ಕುಡಿಯುವುದಿಲ್ಲ. ಇನ್ನು ಅವರಿಗೆ ಮಗಳನ್ನು ಕೊಡುವುದೇ?” “ಮುಸಲ್ಮಾನರು ಕಟುಕರು, ಮುಗ್ದ ಜನರನ್ನು ಬಾಂಬು ಹಾಕಿ ಕೊಲ್ಲೋ ಜನ. ಹಿಂಸೆ ಅವರ ಭಾಗವಾಗಿಬಿಟ್ಟಿದೆ,” “ಕರಿಯರು ಅಂದ್ರೆ ಡ್ರಗ್ಸ್ ಮಾರೋರು, ಅಪರಾಧಿಗಳು ಅಂತ ಯಾರಿಗೆ ತಾನೆ ಗೊತ್ತಿಲ್ಲ? ಜೈಲು ತುಂಬಾ ಅವರೇ ಇದ್ದಾರೆ. ಅವರು ನಮಗೆ ಸಮಾನರಾಗೋದಕ್ಕೆ ಹೇಗೆ ಸಾಧ್ಯ?” ಹೀಗೆಲ್ಲಾ ಮಾತನಾಡುತ್ತಾರೆ.

ದಲಿತರೇನು ಮಲ ತೆಗೆಯಬೇಕು ಅಂತ ಬಯಸಿಕೊಂಡು ತೆಗೆಯುತ್ತಿಲ್ಲ. ಹಾಗೆಯೇ ನೀಗ್ರೋಗಳು ತಮ್ಮದು ಗುಲಾಮಗಿರಿಯ ಹಾಗೂ ಅನ್ಯಾಯದ ಚರಿತ್ರೆ ಆಗಿರಲಿ ಅಂತ ಬಯಸಿರಲಿಲ್ಲ. ಹಿಂಸೆ ರಾಜಕೀಯ ಪ್ರತಿರೋಧದ ಒಂದು ರೂಪ. (ಸಾಮಾನ್ಯವಾಗಿ ಇಂತಹ ಹಿಂಸೆಯಲ್ಲಿ ಮುಗ್ದರೇ ಸಾಯುತ್ತಿದ್ದರು.) ಆ ಹಿಂಸೆಯ ಪರಂಪರೆಯನ್ನು ಇಂದು ಮುಸ್ಲಿಂ ಭಯೋತ್ಪಾದಕತೆ ಮುಂದುವರಿಸಿಕೊಂಡು ಹೋಗುತ್ತಿದೆ. ಹಲವು ಬಂಗಾಲಿಗಳು ಮತ್ತು ಮಹಾರಾಷ್ಟ್ರದ (ಹಿಂದುತ್ವದ ಪ್ರಬಲ ಪ್ರತಿಪಾದಕ ವಿನಾಯಕ ದಾಮೋದರ್ ಸಾರ್ವಕರ್‌ ಸೇರಿದಂತೆ) ಹಿಂದುಗಳು ಇದನ್ನು ಬ್ರಿಟಿಷರ ವಿರುದ್ಧ ಬಳಸಿದ್ದರು. ಯಹೂದಿ ನಾಗರಿಕ ಹೋರಾಟಗಾರರು ಬ್ರಿಟಿಷರ ವಿರುದ್ಧ ಬಳಸಿದ್ದರು. ಆಗ ಅದು ಪ್ಯಾಲೆಸ್ತೈನ್ ಆಗಿತ್ತು. ಐರಿಷ್ ಕ್ಯಾಥೊಲಿಕರು ಇತ್ತೀಚಿನ ಕೆಲವು ವರ್ಷಗಳವರೆಗೆ ತಮ್ಮ ಇಂಗ್ಲಿಷ್ ಧಣಿಗಳ ವಿರುದ್ಧ ಬಳಸಿದ್ದರು. ಈಗ ಆ ಚರಿತ್ರೆ ಹೆಚ್ಚು ಕಡಿಮೆ ಮರೆತೇಹೋಗಿದೆ. 2001ರ ನಂತರ ಕೇವಲ ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದಾಗಿಬಿಟ್ಟಿದೆ.

ಹೀಗೆ ವಾಚ್ಯಾರ್ಥವನ್ನು ನಿರೂಪಿಸುವ ಈ ಪ್ರವೃತ್ತಿಯೇ ಭೂಮಿ ಚಪ್ಪಟೆಯಾಗಿದೆ ಎಂಬ ಚಳುವಳಿಗೂ ಸ್ಪೂರ್ತಿ ನೀಡಿದೆ. ಅಮೇರಿಕೆಯಲ್ಲಿ ಟ್ರಂಪ್ ಬೆಂಬಲಿಗರಲ್ಲಿ ಇದು ತುಂಬಾ ಜನಪ್ರಿಯವಾಗಿದೆ: “ನನಗೆ ಭೂಮಿ ಚಪ್ಪಟೆಯಾಗಿ ಕಾಣುತ್ತಿದೆ. ಅಷ್ಟೇ ಅಲ್ಲ ಬೈಬಲಿನಲ್ಲೂ ಹಾಗೆ ಹೇಳಿದೆ.” ಜೊತೆಗೆ ಈ ಬೈಬಲ್ ಗೆಳೆಯರು, ಹಾಗೂ ನಮ್ಮ ಹಿಂದಿ ವಲಯದವರು ಪಾಪ ಡಾರ್ವಿನ್ನನನ್ನು ಕೂಡ ಟೀಕಿಸುತ್ತಿದ್ದಾರೆ. ಡಾರ್ವಿನ್ ಹೇಳಿರೋದು ಅವರ ಧರ್ಮಗ್ರಂಥಗಳಿಗೆ ಅನುಗುಣವಾಗಿ ಇಲ್ಲವಂತೆ. ಹೀಗೆಲ್ಲಾ ವಾದಿಸೋದನ್ನು ಮೇಲ್‌ಸ್ತರದವರ ವಿಜ್ಞಾನ ಹಾಗೂ ಸಮಾಜವಿಜ್ಞಾನದ ಚಿಂತನೆಗಳನ್ನು ತಳಸಮುದಾಯದವರು ವಿರೋಧಿಸುವ ಕ್ರಮ ಅಂತ ಭಾವಿಸಿಬಿಡಬಹುದು. ಆದರೆ ಅದು ತಪ್ಪು. ಹಾಗೆ ಮಾಡೋತ್ತಾ ಹೋದರೆ ಕೊನೆಗೆ ತಳಸ್ತರದವರನ್ನು ಓಲೈಕೆ ಮಾಡಿದಂತೆ ಆಗುತ್ತದೆ.

ವಿಜ್ಞಾನ ಅಂತ ನೀವು ಹೇಳುತ್ತಿರೋದು ನನಗೆ ಕಾಣುತ್ತಿಲ್ಲ ಅಂತ ಒಬ್ಬ ಸಾಮಾನ್ಯ ಹೆಂಗಸು ಹೇಳೋದಿಲ್ಲ. ಅವಳಿಗೂ ನಮ್ಮ ನಾಯಕರಷ್ಟೇ ಅಥವಾ ಅವರಿಗಿಂತ ಹೆಚ್ಚು ಅಮೂರ್ತವಾದ ಕಲ್ಪನೆಗಳನ್ನು ಗ್ರಹಿಸಿಕೊಳ್ಳೋದಕ್ಕೆ ಸಾಧ್ಯ. ಯಾಕೆಂದರೆ ಅವಳು ಅಷ್ಟೊಂದು ಸಿನಿಕಲ್ ಆಗಿಲ್ಲ. ಅವಳು ದಿನ ಮೈಕ್ರೋವೇವ್ ಬಳಸುತ್ತಾಳೆ. ಬೆಂಕಿಯಿಲ್ಲದೆ ಶಾಖ ಹೇಗೆ ಬಂತು ಅಂತ ಅವಳು ಕೇಳೋಲ್ಲ. ಅವಳಿಗೆ ಅಷ್ಟು ಜಾಣತನ ಇದೆ. ವಿಜ್ಞಾನದ ಎಷ್ಟೋ ಕೆಲಸಗಳು ಹಿನ್ನೆಲೆಯಲ್ಲಿ ನಡೆಯುತ್ತಿರುತ್ತವೆ. ಅವು ಕಣ್ಣಿಗೆ ಕಾಣಿಸೋದಿಲ್ಲ ಅನ್ನೋದು ಅವಳಿಗೆ ಗೊತ್ತು. ವಿಕಾಸ ಅನ್ನೋದು ನನ್ನ ಕಣ್ಣ ಮುಂದೆ ನಡೆಯಬೇಕು ಅಂತ ಅವಳು ಕೇಳುವುದಿಲ್ಲ.

ಮುಸ್ಲಿಮರನ್ನು ದ್ವೇಷಿಸುವುದಕ್ಕೆ ಆಗಲಿ, ದಲಿತರನ್ನು ಕೀಳಾಗಿ ಕಾಣುವುದಕ್ಕೇ ಆಗಲಿ ನಮ್ಮ ನೇರ ಅನುಭವ ಕಾರಣ ಅಲ್ಲ. ನಮ್ಮಲ್ಲಿ ಬಹುಪಾಲು ಮಂದಿಗೆ ಅಂತಹ ಯಾವುದೇ ಅನುಭವ ಆಗಿಲ್ಲ. ನಮ್ಮ ಅಕ್ಕಪಕ್ಕದ ಮುಸ್ಲಿಮರು ಉಳಿದ ಎಲ್ಲರಂತೆಯೇ ಇರುತ್ತಾರೆ. ಅದು ನಮ್ಮ ದಿನನಿತ್ಯದ ಅನುಭವ. ಆದರೆ ನಿಜವಾದ ಸಮಸ್ಯೆಯೆಂದರೆ ಈಗ ನಮ್ಮ ಅಕ್ಕಪಕ್ಕದಲ್ಲಿ ಮುಸ್ಲಿಮರು ವಾಸಿಸುತ್ತಿಲ್ಲ. ಅವರಲ್ಲಿ ಹೆದರಿಕೆ ಹುಟ್ಟಿಸಿ, ತಮ್ಮಷ್ಟಕ್ಕೆ ತಾವೇ ಅವರು ಅದೃಶ್ಯರಾಗುವಂತೆ ಮಾಡಿದ್ದೇವೆ. ನಾವು ಅವರನ್ನು ಇಂದು ನೋಡುತ್ತಿರುವುದು ವೃತ್ತಪತ್ರಿಕೆಯ ಪುಟಗಳಲ್ಲಿ ಅಥವಾ ಮಾಂಸದ ಅಂಗಡಿಗಳಲ್ಲಿ. ಅದು ನಮ್ಮ ಪೂರ್ವಗ್ರಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.

ಇನ್ನು ನಮ್ಮ ಮಗಳನ್ನು ಮದುವೆಯಾಗಲಿರುವ ಕೆಳಜಾತಿಯ ಅಳಿಯನ ವಿಷಯಕ್ಕೆ ಬಂದರೆ, ಅವನ ಮೋಹಕ ಗುಣ, ಜಗತ್ತಿನಲ್ಲಿ ಅವನು ಸಾಧಿಸಿರುವ ಯಶಸ್ಸನ್ನು ತಿರಸ್ಕರಿಸುವುದಕ್ಕೆ ನಮಗೆ ಆಗೋದಿಲ್ಲ. ಅದಕ್ಕೇ ಅವನು ‘ಅಪಾಯಕಾರಿ’ಯಾಗಿ ಕಾಣುತ್ತಾನೆ. ಹಾಗಾಗಿಯೇ ಖಾಪ್ ಪಂಚಾಯತಿಗಳು ಅವರನ್ನು ಹೆದರಿಸಿ, ಬೆದರಿಸುವ ಕೆಲಸಕ್ಕೆ ಕೈಹಾಕಿವೆ.

ಈ ಸಂಕುಚಿತ ಮನಸ್ಸಿನ, ಪೂರ್ವಗ್ರಹದ ಕಥೆಗಳಲ್ಲಿ ಆರ್ಗಾನಿಕ್ ಆದದ್ದು ಅಥವಾ ಸತ್ಯ ಅನ್ನುವಂತಹದ್ದು ಏನೂ ಇಲ್ಲ. ಇಲ್ಲೊಂದಿಷ್ಟು ಕೊಂಕು, ಅಲ್ಲೊಂದಿಷ್ಟು ಅರ್ಧ ಸತ್ಯ ಸೇರಿಕೊಂಡು ಜಾಗರೂಕತೆಯಿಂದ ಈ ಕಥೆಯನ್ನು ಹೆಣೆಯಲಾಗಿದೆ. ಇಂದು ಪದ್ಮಾವತಿ, ನಾಳೆ ಅಯೋಧ್ಯಾ ಇಂತಹ ಘಟನೆಗಳು. ನಿರಂತರವಾಗಿ ಯುದ್ಧವೊಂದು ನಡೆಯುತ್ತಿದೆ, ತಮಗೆ ಅದರಲ್ಲಿ ಸೋಲಾಗಬಹುದು ಅನ್ನುವ ಭಾವನೆಯನ್ನು ಜನರಲ್ಲಿ ಮೂಡಿಸುತ್ತಿವೆ. ಇಂತಹ ಘಟನೆಗಳನ್ನು ನಿರಂತರವಾಗಿ ಸೃಷ್ಟಿಸುತ್ತಾ, ಉರಿ ಆರದ ಹಾಗೆ ನೋಡಿಕೊಳ್ಳುತ್ತಿವೆ.

ಬೇರೆ ಏನೂ ವಿಷಯ ಸಿಗದೇ ಹೋದಾಗ, ವಿಕಾಸದ ವಿಷಯವನ್ನು ಯಾಕೆ ಪ್ರಯತ್ನಿಸಬಾರದು? ಈ ಕಚ್ಚಾಟದಲ್ಲಿ ಯಾರಾದರೂ ಒಂದಿಷ್ಟು ಜನ ತೊಡಗಿಕೊಳ್ಳಬಹುದು ಅನ್ನೋ ಯೋಚನೆ ಇವರಿಗೆ ಬರುತ್ತೆ. ನಾವೆಲ್ಲಾ ಕೋತಿಗಳಾಗುತ್ತಿರುವುದು ಹೀಗೆ. ನಿಜವಾಗಿ ಆತಂಕದ ವಿಷಯ ಅಂದರೆ ಈ ಕುರಿತು ಏನೂ ಮಾಡುತ್ತಿಲ್ಲ. ನನ್ನದೇ ವಿಷಯಕ್ಕೆ ಬಂದರೆ ಕೈ ಹಿಸುಕಿಕೊಂಡು ಒಳ್ಳೆಯ ಶಿಕ್ಷಣ ಬೇಕು ಅಂತ ಮಾತನಾಡುತ್ತೇನೆ. ನಿಜ ಹೇಳಬೇಕೆಂದರೆ ಆಶೋಕ ವಿಶ್ವವಿದ್ಯಾನಿಲಯದಲ್ಲಿ ಮತ್ತು ಅಹಮದಾಬಾದ್ ವಿಶ್ವವಿದ್ಯಾನಿಲಯಗಳಲ್ಲ್ಲಿ ಒಳ್ಳೆ ಕೆಲಸಗಳು ಆಗುತ್ತಿವೆ. ಒಂದು ಉದಾರವಾದಿ ಶಿಕ್ಷಣ ಕೊಡೋ ಅದ್ಭುತವಾದ ಕೆಲಸ ಅಲ್ಲಿ ನಡೆಯುತ್ತಿದೆ. ಹಾಗೆಯೇ ಚೆನ್ನೈನಲ್ಲಿನ ಇನ್ಸ್ಟಿಟ್ಯೂಟ್ ಫಾರ್ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಅಂತಹ ಸಂಸ್ಥೆಗಳಲ್ಲೂ ಒಳ್ಳೆ ಕೆಲಸ ಆಗುತ್ತಿದೆ. ಆದರೆ ತುಂಬಾ ಕಡಿಮೆ. ತುಂಬಾ ಸಮಯ ಉಳಿದಿಲ್ಲ.

ನಮ್ಮ ದೇಶವನ್ನು ಉಳಿಸಲು, ಅಥವಾ ನಮ್ಮಲ್ಲಿ ಅನೇಕರು ಇದೆ ಅಂದುಕೊಂಡಿದ್ದ ದೇಶವನ್ನು ಉಳಿಸಲು ಒಂದು ಚಳುವಳಿಯನ್ನು ಮಾಡಬೇಕಾಗಿದೆ. ನಮ್ಮ ದೇಶದಲ್ಲಿನ ಮುಕ್ತತೆಯ, ಕುತೂಹಲದ, ಸಂವಾದದ, ಅಮೂರ್ತತೆಯ, ಆತಿಥ್ಯದ ಮತ್ತು ಕಾರುಣ್ಯದ ಸಂಪ್ರದಾಯಗಳನ್ನು ಗೌರವಿಸಿ, ಮೆಚ್ಚುವ ಚಳುವಳಿಯೊಂದನ್ನು ಹುಟ್ಟುಹಾಕಬೇಕಾಗಿದೆ. ಈ ಚಳುವಳಿಯಲ್ಲಿ ಧಾರ್ಮಿಕರು ಮತ್ತು ನಿರೀಶ್ವರವಾದಿಗಳು; ಅಂತೆಯೇ ತೀವ್ರವಾದ ಭಾವುಕತೆ ಹಾಗೂ ವೈಚಾರಿಕತೆ ಮತ್ತು ವಿಶಿಷ್ಟವಾಗಿ ಭಾರತೀಯವೇ ಅಗಿರುವ ಇವೆಲ್ಲವುಗಳು ಒಟ್ಟಾಗಿ ಸೇರಿಕೊಂಡ ಚಳುವಳಿಯೊಂದು ಆಗಬೇಕಾಗಿದೆ. ಹೊಸ ರಾಷ್ಟ್ರೀಯ ಚಳುವಳಿಯೊಂದು ಬೇಕಾಗಿದೆ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...