Homeಕರೋನಾ ತಲ್ಲಣExplainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

Explainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

- Advertisement -
- Advertisement -

ನಿನ್ನೆ ಶುಕ್ರವಾರದ ಮುಂಜಾನೆವರೆಗೆ, 18-45 ವಯೋಮಾನದ ಸುಮಾರು ಎರಡು ಕೋಟಿ ಯುವಜನರು ಕೋ-ವಿನ್ ಪ್ಲಾಟ್‌ಫಾರ್ಮಿನಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಸಲು ಯತ್ನಿಸಿದ್ದಾರೆ. ಆದರೆ ಕರ್ನಾಟಕ ಸೇರಿದಂತೆ ಹತ್ತು ಹಲವು ರಾಜ್ಯಗಳು ಇವತ್ತಿನಿಂದ 3ನೇ ಹಂತದ ಲಸಿಕೆ ಅಭಿಯಾನ ಆರಂಭಿಸಿಲ್ಲ.

ಇದು ದೇಶದ ಲಸಿಕಾ ನೀತಿಯಲ್ಲಿನ ಅಸಂಬದ್ಧತೆ, ದೂರದರ್ಶಿತ್ವದ ಕೊರತೆ ಮತ್ತು ಜನರಿಗಿಂತ ಕಾರ್ಪೋರೇಟ್‌ಗಳು ಮೇಲು ಎನ್ನುವ ಪ್ರಭುತ್ವದ ಸಿದ್ದಾಂತಕ್ಕೆ ಅನುಗುಣವಾಗಿಯೇ ನಡೆದಿದ್ದು, ಭಾರತದಲ್ಲಿ ಮೊದಲ ಸಲ ಒಂದು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಳ್ಳ ಹಿಡಿಯುತ್ತಿರುವ ಸೂಚನೆಗಳನ್ನು ನೀಡುತ್ತಿದೆ. ಕಡೆಗೂ ಇವತ್ತು ಶನಿವಾರ ಮುಂಜಾನೆ ಎಚ್ಚೆತ್ತುಕೊಂಡ ಕೇಂದ್ರ ಆರೋಗ್ಯ ಇಲಾಖೆ ಲಸಿಕೆಗಳ ಬಗ್ಗೆ ಮಾತನಾಡಿದೆ.

ಆರೋಗ್ಯ ಇಲಾಖೆ ಹೇಳಿದ್ದೇನು?

79 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಳಿದಿವೆ. ಮುಂದಿನ ಮೂರು ದಿನಗಳಲ್ಲಿ 17 ಲಕ್ಷಕ್ಕೂ ಹೆಚ್ಚಿನ ಡೋಸ್‌ಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
17+79= 96 ಲಕ್ಷ ಡೋಸ್‌ಗಳು ಇನ್ನು ಮೂರು ದಿನದಲ್ಲಿ ದೇಶದ ಎಲ್ಲ ರಾಜ್ಯ ಸರ್ಕಾರಗಳು ಮತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇರಲಿವೆ. ಅದೇನೋ ಅರೆಕಾಸಿನ ಮಜ್ಜಿಗೆ ಅಂತಾರಲ್ಲ ಆ ಲೆಕ್ಕವಿದು. ಮಾತೆತ್ತಿದರೆ, ‘ಇಂತಹ ದೊಡ್ಡ ಜನಸಂಖ್ಯೆಯ ದೇಶದಲ್ಲಿ ಕೊರೊನಾ ನಿಯಂತ್ರಣ ಕಷ್ಟ ಎನ್ನುವ ಬಿಜೆಪಿ ಬೆಂಬಲಿಗರ ಸೋಗಲಾಡಿತನ ಇಲ್ಲೇ ಬೆತ್ತಲಾಗುವುದು. 96 ಲಕ್ಷ ಲಸಿಕೆ ಡೊಸ್ ಇಟ್ಟುಕೊಂಡು ದೇಶಾದ್ಯಂತ 3ನೆ ಹಂತದ ಲಸಿಕಾ ಅಭಿಯಾನ ಸಾಧ್ಯವೇ? ಅದೂ ಮೂರು ದಿನದ ಬಳಿಕವಂತೆ! ಆರೋಗ್ಯ ಇಲಾಖೆ ಏಪ್ರಿಲ್ 28ರಂದು 18-44 ವಯಸ್ಸಿನವರಿಗೆ ನೋಂದಣಿಗೆ ಕರೆ ನೀಡುವಾಗ ಈ ವಾಸ್ತವ ಅದಕ್ಕೆ ಗೊತ್ತು ಇರಲಿಲ್ಲವೇ? ಎಲ್ಲ ಗೊತ್ತು ಇರುತ್ತದೆ. ಆ ಕ್ಷಣದ, ಆ ದಿನದ ಜನರ ಆಕ್ರೋಶ, ರಾಜ್ಯ ಸರ್ಕಾರಗಳ ಅಸಮಾಧಾನ ಮತ್ತು ಕೋರ್ಟುಗಳ ಚಾಟಿ ಏಟುಗಳನ್ನು ತಪ್ಪಿಸಿಕೊಳ್ಳಲು ಹಾಗೆ ಮಾಡುತ್ತದೆ. ಇಡೀ ಕೋವಿಡ್ ನಿಯಂತ್ರಣದಲ್ಲಿ ಈ ಬೇಜವಾಬ್ದಾರಿಯೇ ಕೋವಿಡ್‌ ವಿರುದ್ಧದ ಹೋರಾಟದಲ್ಲಿನ ಹಿನ್ನಡೆಗೆ ಕಾರಣವಾಗಿದೆ ಅಲ್ಲವೇ?

ಕೇಂದ್ರವು ಈವರೆಗೆ ಸುಮಾರು 16.37 ಕೋಟಿ ಲಸಿಕೆ ಡೋಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಇದರಲ್ಲಿ, ನಾಶವಾದ ಲಸಿಕೆ ಸೇರಿದಂತೆ ಒಟ್ಟು ಬಳಕೆ 15,58,48,782 ಪ್ರಮಾಣಗಳಾಗಿವೆ ಎಂದು ಸರ್ಕಾರ ಮುಂಜಾನೆ ಹೇಳಿದೆ. (ನಾಶವಾಗಿದ್ದನ್ನು ಒಟ್ಟು ಬಳಕೆಯಾದ ಪ್ರಮಾಣಕ್ಕೆ ಸೇರಿಸಿಕೊಳ್ಳುವ ಕುತಂತ್ರ!)

ಮುಂದಿನ 3 ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗಲಿರುವುದು ಕೇವಲ 17,31,110 ಲಸಿಕೆಗಳು ಮಾತ್ರ! ಅದೂ ಗ್ಯಾರಂಟಿಯಿಲ್ಲವಂತೆ!

ಲಸಿಕಾ ಅಭಿಯಾನದ ಸುತ್ತ….

ಲಡಾಖ್‌ನ ಕೇಂದ್ರಾಡಳಿತ ಪ್ರದೇಶವು ತನ್ನ ಜನಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ನೀಡಿದೆ. ಆದರೆ ಉತ್ತರ ಪ್ರದೇಶವು ಅತಿದೊಡ್ಡ ಪ್ರಮಾಣದಲ್ಲಿ ಕೇಂದ್ರದಿಂದ ಲಸಿಕೆಗಳನ್ನು ಪಡೆದಿದ್ದರೂ ಸಹ ಅದರ ಜನಸಂಖ್ಯೆಯ ಶೇಕಡಾ ಒಂದು ಭಾಗಕ್ಕೂ ಸಂಪೂರ್ಣವಾಗಿ ಲಸಿಕೆ ನೀಡಿಲ್ಲ.

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾದ ಗುಜರಾತ್ ಲಸಿಕೆ ನೀಡುವಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಲಕ್ಷದ್ವೀಪ ಮತ್ತು ತಮಿಳುನಾಡು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ವ್ಯರ್ಥ ಮಾಡಿವೆ.

ಜನವರಿ 16 ರಂದು ಪ್ರಾರಂಭವಾದ ಲಸಿಕೆ ಚಾಲನೆಯ ಮೊದಲ ಹಂತದಲ್ಲಿ, ಲಸಿಕೆಗಳನ್ನು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಕಾಯ್ದಿರಿಸಲಾಗಿತ್ತು. ಮಾರ್ಚ್ 1 ರಿಂದ, 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ರೋಗಲಕ್ಷಣ ಹೊಂದಿದ ಜನರು ಲಸಿಕೆ ಪಡೆಯಲು ಅರ್ಹರಾದರು. ಏಪ್ರಿಲ್ 1 ರಿಂದ, 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಕೋವಿಡ್ ಲಸಿಕೆಗಳಿಗೆ ಅರ್ಹರಾದರು.

ಈಗ, ಇವತ್ತು ಮೇ 1 ರಿಂದ ಭಾರತವು ತನ್ನ ಕೋವಿಡ್ ವ್ಯಾಕ್ಸಿನೇಷನ್ ಅನ್ನು 18 ದಾಟಿದ ಎಲ್ಲಾ ವಯಸ್ಕರಿಗೆ ಮುಕ್ತಗೊಳಿಸಿದೆ. ಆದರೆ ತಯಾರಿ ಇರದ ಪರಿಣಾಮ ಮತ್ತು ಕೇಂದ್ರವು ಲಸಿಕಾ ಕಂಪನಿಗಳ ಮೇಲೆ ಯಾವುದೇ ನಿಯಂತ್ರಣ ಹೊಂದದ ಪರಿಣಾಮ ಇದು ಮುಗ್ಗರಿಸಿದೆ.

ಭಾರತದಲ್ಲಿ ಈವರೆಗೆ ಒಟ್ಟು 15,22,45,179 ( 15 ಕೋಟಿ 22 ಲಕ್ಷ 45,719) ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. 12,54,86,929 ಜನರಿಗೆ ಲಸಿಕೆಯ ಮೊದಲ ಡೋಸ್ ಸಿಕ್ಕಿದ್ದರೆ, 2,67,58,250 ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ಒಟ್ಟಾರೆಯಾಗಿ, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಲಸಿಕಾ ಅಭಿಯಾನದಲ್ಲ್ಲಿ ಉತ್ತಮ ಸಾಧನೆ ತೋರಿವೆ, ಕಳೆದ ವರ್ಷವಷ್ಟೇ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಉನ್ನತ ಸಾಧನೆ ಮಾಡಿದೆ. ತನ್ನ ಜನಸಂಖ್ಯೆಯ ಶೇಕಡಾ 11 ರಷ್ಟು ಜನರಿಗೆ ಲಸಿಕೆಯನ್ನು ಸಂಪೂರ್ಣವಾಗಿ ನೀಡಿದೆ, ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ, ಗುಜರಾತ್ ಮತ್ತು ರಾಜಸ್ಥಾನಗಳು ಉನ್ನತ ಪ್ರದರ್ಶನ ನೀಡಿವೆ. ಗುಜರಾತ್ ರಾಜ್ಯವು ಜನಸಂಖ್ಯೆಯ ಶೇಕಡಾ 3.42 ರಷ್ಟು ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದರೆ, ಶೇಕಡಾ 14.2 ರಷ್ಟು ಜನರು ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

ಅಂತೆಯೇ, ರಾಜಸ್ಥಾನದಲ್ಲಿ, ಶೇಕಡಾ 13.6 ರಷ್ಟು ಜನಸಂಖ್ಯೆಯು ಕನಿಷ್ಠ ಮೊದಲ ಡೋಸ್ ಪಡೆದಿದೆ. 2.77 ರಷ್ಟು ಜನಸಂಖ್ಯೆಯು ಎರಡೂ ಡೋಸ್ ಸ್ವೀಕರಿಸಿದೆ.
ಲಡಾಖ್, ಸಿಕ್ಕಿಂ ಮತ್ತು ತ್ರಿಪುರವನ್ನು ಹೊರತುಪಡಿಸಿ, ಇತರ ಎಲ್ಲ ರಾಜ್ಯಗಳು ಜನಸಂಖ್ಯೆಯ ಶೇಕಡಾ 20 ಕ್ಕಿಂತ ಕಡಿಮೆ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್‌ನೊಂದಿಗೆ ಲಸಿಕೆ ನೀಡಿದರೆ, ಶೇಕಡಾ 5 ಕ್ಕಿಂತ ಕಡಿಮೆ ಜನರು ಎರಡೂ ಪ್ರಮಾಣಗಳನ್ನು ಪಡೆದಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಶೇಕಡಾ 1.97 ಜನರಿಗೆ ಸಂಪೂರ್ಣ ಲಸಿಕೆ (ಎರಡೂ ಡೋಸ್) ಸಿಕ್ಕಿದ್ದ್ದರೆ, ಶೇ. 9.24 ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿದೇಶಗಳಿಗೆ ಲಸಿಕೆ ರಫ್ತು ಮಾಡಿದ್ದು ಏಕೆ ಎಂದು ಪ್ರಶ್ನೆ ಕೇಳಿಬಂದಿದೆ.

ಲಸಿಕೆ ಪೋಲು

ಲಕ್ಷದ್ವೀಪ ಮತ್ತು ತಮಿಳುನಾಡು ಹೆಚ್ಚು ಲಸಿಕೆ ಪೋಲು ಮಾಡಿದ ರಾಜ್ಯಗಳಾಗಿವೆ. ಲಕ್ಷದ್ವೀಪ ತನ್ನ ಶೇಕಡಾ 9.76 ಪ್ರಮಾಣವನ್ನು ವ್ಯರ್ಥ ಮಾಡಿದರೆ, ತಮಿಳುನಾಡು ತನ್ನ ಲಸಿಕೆಗಳಲ್ಲಿ ಶೇ. 8.83 ರಷ್ಟನ್ನು ಪೋಲು ಮಾಡಿದೆ. (ಸಮಯಕ್ಕೆ ಸರಿಯಾಗಿ ಲಸಿಕೆ ನೀಡದಿದ್ದಲ್ಲಿ ಅದರ ಅವಧಿ ಮುಗಿದಾಗ ಅದು ವ್ಯರ್ಥವಾಗುತ್ತದೆ.)

ತಮಿಳುನಾಡಿನಲ್ಲಿ ಶೇಕಡಾ 8.83 ರಷ್ಟು ವ್ಯರ್ಥವಾಗುವುದು ಅಂದರೆ 5,16,191 ಡೋಸ್ ವ್ಯರ್ಥವಾದಂತೆ. ಇದು ಲಡಾಖ್‌ನಂತಹ ಸಣ್ಣ ಪ್ರದೇಶದ ಸಂಪೂರ್ಣ ಜನಸಂಖ್ಯೆಯನ್ನು ಸಂಪೂರ್ಣವಾಗಿ ಲಸಿಕೆ ಮಾಡಲು ಸಾಕು.

ಹೆಚ್ಚುವರಿ ಲಸಿಕೆ

ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ಇನ್ನೂ 79 ಲಕ್ಷ ಡೋಸ್‌ಗಳು ರಾಜ್ಯಗಳ ಬಳಿ ಇವೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 11,80,659 ಲಸಿಕೆಗಳು ಇದ್ದು, ನಂತರದ ಸ್ಥಾನದಲ್ಲಿ ಬಿಹಾರ (8,36,283) ಇದೆ. ಈ ಎರಡೂ ರಾಜ್ಯಗಳು ಲಸಿಕಾ ಅಭಿಯಾನದಲ್ಲಿ ಕಳಪೆ ಸಾಧನೆ ಮಾಡಿವೆ.

ಮೊದಲ ಡೋಸ್ ಮತ್ತು ಎರಡನೇ ಡೋಸ್

ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಮೊದಲ ಡೋಸ್ ನಂತರ 28-56 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾಗಿರುವುದರಿಂದ, ಎರಡನೇ ಡೋಸ್‌ನ ಗ್ರಾಫ್ ಮೊದಲನೆಯದಕ್ಕೆ ಸಮಾನಾಂತರವಾಗಿ ಚಲಿಸಬೇಕು. ಆದರೆ ಹಾಗೆ ಆಗುತ್ತಿಲ್ಲ!

ಕೃಪೆ: ದಿ ಪ್ರಿಂಟ್

ಎರಡು ಪ್ಲಾಟ್‌ಗಳ ನಡುವೆ ಹೆಚ್ಚುತ್ತಿರುವ ಅಂತರವು ಅನೇಕ ಜನರು ತಮ್ಮ ಎರಡನೇ ಡೋಸ್ ಅನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಲಸಿಕೆಗಳು ಲಭ್ಯವಿಲ್ಲದಿರುವುದು ಅಥವಾ ಪ್ರಕರಣಗಳ ಹೆಚ್ಚಳದಿಂದಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಲು ಹಿಂಜರಿಯುವುದು ಇದಕ್ಕೆ ಕಾರಣವಾಗಿರಬಹುದು.

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್

ಇಲ್ಲಿಯವರೆಗೆ ನೀಡಲಾದ ಒಟ್ಟು ಲಸಿಕೆಗಳಲ್ಲಿ ಭಾರತ್ ಬಯೊಟೆಕ್‌ನ ಶೇ.9ರಷ್ಟು ಕೋವ್ಯಾಕ್ಸಿನ್ ಲಸಿಕೆಗಳಿವೆ. ಈವರೆಗೆ ಶೇಕಡಾ 90 ಕ್ಕೂ ಹೆಚ್ಚು ಭಾರತೀಯರು ಸೀರಂನ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಕೇಂದ್ರದಿಂದ 1,500 ಕೋಟಿ ರೂ, ಹಣ ಪಡೆದ ಭಾರತ್ ಬಯೋಟೆಕ್ ಸಾಧನೆ ಗಮನಿಸಿ!

ಲಿಂಗವಾರು ವಿತರಣೆ

ಇಲ್ಲಿಯವರೆಗೆ, ಲಸಿಕೆ ಪಡೆದವರಲ್ಲಿ ಶೇಕಡಾ 52.18 ರಷ್ಟು ಪುರುಷರು, ಶೇ. 47.8 ರಷ್ಟು ಮಹಿಳೆಯರು ಇದ್ದಾರೆ. ಶೇಕಡಾ 0.01 ರಷ್ಟು ಲಸಿಕೆಗಳನ್ನು ತೃತೀಯ ಲಿಂಗಿಗಳಿಗೆ ನೀಡಲಾಗಿದೆ.

* ಪಿ.ಕೆ. ಮಲ್ಲನಗೌಡರ್

(ಮಾಹಿತಿ: ಕೇಂದ್ರ ಆರೋಗ್ಯ ಇಲಾಖೆ, ದಿ ಪ್ರಿಂಟ್ ಮತ್ತು ಇತರ ಮೂಲಗಳು)

ಚಿತ್ರಗಳು: ದಿ ಪ್ರಿಂಟ್


ಇದನ್ನೂ ಓದಿ:ಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ – ಇದು ಕಂಪನಿಗಳು ಅತಿಹೆಚ್ಚು ಲಾಭ ಮಾಡುವ ಸಮಯವಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಯೋಗ್ಯರು, ಅಪ್ರಾಮಾಣಿಕರು ಹಾಗೂ ಅದಕ್ಶರ ಕೈಗೆ ಅಧಿಕಾರ ಸಿಕ್ಕಿರುವುದರ ಪರಿಣಾಮವನ್ನು ನಾವಿಂದು ಅನುಬವಿಸುತ್ತಿದ್ದೇವೆ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...