Homeಕರೋನಾ ತಲ್ಲಣExplainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

Explainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

- Advertisement -
- Advertisement -

ನಿನ್ನೆ ಶುಕ್ರವಾರದ ಮುಂಜಾನೆವರೆಗೆ, 18-45 ವಯೋಮಾನದ ಸುಮಾರು ಎರಡು ಕೋಟಿ ಯುವಜನರು ಕೋ-ವಿನ್ ಪ್ಲಾಟ್‌ಫಾರ್ಮಿನಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಸಲು ಯತ್ನಿಸಿದ್ದಾರೆ. ಆದರೆ ಕರ್ನಾಟಕ ಸೇರಿದಂತೆ ಹತ್ತು ಹಲವು ರಾಜ್ಯಗಳು ಇವತ್ತಿನಿಂದ 3ನೇ ಹಂತದ ಲಸಿಕೆ ಅಭಿಯಾನ ಆರಂಭಿಸಿಲ್ಲ.

ಇದು ದೇಶದ ಲಸಿಕಾ ನೀತಿಯಲ್ಲಿನ ಅಸಂಬದ್ಧತೆ, ದೂರದರ್ಶಿತ್ವದ ಕೊರತೆ ಮತ್ತು ಜನರಿಗಿಂತ ಕಾರ್ಪೋರೇಟ್‌ಗಳು ಮೇಲು ಎನ್ನುವ ಪ್ರಭುತ್ವದ ಸಿದ್ದಾಂತಕ್ಕೆ ಅನುಗುಣವಾಗಿಯೇ ನಡೆದಿದ್ದು, ಭಾರತದಲ್ಲಿ ಮೊದಲ ಸಲ ಒಂದು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಳ್ಳ ಹಿಡಿಯುತ್ತಿರುವ ಸೂಚನೆಗಳನ್ನು ನೀಡುತ್ತಿದೆ. ಕಡೆಗೂ ಇವತ್ತು ಶನಿವಾರ ಮುಂಜಾನೆ ಎಚ್ಚೆತ್ತುಕೊಂಡ ಕೇಂದ್ರ ಆರೋಗ್ಯ ಇಲಾಖೆ ಲಸಿಕೆಗಳ ಬಗ್ಗೆ ಮಾತನಾಡಿದೆ.

ಆರೋಗ್ಯ ಇಲಾಖೆ ಹೇಳಿದ್ದೇನು?

79 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಳಿದಿವೆ. ಮುಂದಿನ ಮೂರು ದಿನಗಳಲ್ಲಿ 17 ಲಕ್ಷಕ್ಕೂ ಹೆಚ್ಚಿನ ಡೋಸ್‌ಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
17+79= 96 ಲಕ್ಷ ಡೋಸ್‌ಗಳು ಇನ್ನು ಮೂರು ದಿನದಲ್ಲಿ ದೇಶದ ಎಲ್ಲ ರಾಜ್ಯ ಸರ್ಕಾರಗಳು ಮತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇರಲಿವೆ. ಅದೇನೋ ಅರೆಕಾಸಿನ ಮಜ್ಜಿಗೆ ಅಂತಾರಲ್ಲ ಆ ಲೆಕ್ಕವಿದು. ಮಾತೆತ್ತಿದರೆ, ‘ಇಂತಹ ದೊಡ್ಡ ಜನಸಂಖ್ಯೆಯ ದೇಶದಲ್ಲಿ ಕೊರೊನಾ ನಿಯಂತ್ರಣ ಕಷ್ಟ ಎನ್ನುವ ಬಿಜೆಪಿ ಬೆಂಬಲಿಗರ ಸೋಗಲಾಡಿತನ ಇಲ್ಲೇ ಬೆತ್ತಲಾಗುವುದು. 96 ಲಕ್ಷ ಲಸಿಕೆ ಡೊಸ್ ಇಟ್ಟುಕೊಂಡು ದೇಶಾದ್ಯಂತ 3ನೆ ಹಂತದ ಲಸಿಕಾ ಅಭಿಯಾನ ಸಾಧ್ಯವೇ? ಅದೂ ಮೂರು ದಿನದ ಬಳಿಕವಂತೆ! ಆರೋಗ್ಯ ಇಲಾಖೆ ಏಪ್ರಿಲ್ 28ರಂದು 18-44 ವಯಸ್ಸಿನವರಿಗೆ ನೋಂದಣಿಗೆ ಕರೆ ನೀಡುವಾಗ ಈ ವಾಸ್ತವ ಅದಕ್ಕೆ ಗೊತ್ತು ಇರಲಿಲ್ಲವೇ? ಎಲ್ಲ ಗೊತ್ತು ಇರುತ್ತದೆ. ಆ ಕ್ಷಣದ, ಆ ದಿನದ ಜನರ ಆಕ್ರೋಶ, ರಾಜ್ಯ ಸರ್ಕಾರಗಳ ಅಸಮಾಧಾನ ಮತ್ತು ಕೋರ್ಟುಗಳ ಚಾಟಿ ಏಟುಗಳನ್ನು ತಪ್ಪಿಸಿಕೊಳ್ಳಲು ಹಾಗೆ ಮಾಡುತ್ತದೆ. ಇಡೀ ಕೋವಿಡ್ ನಿಯಂತ್ರಣದಲ್ಲಿ ಈ ಬೇಜವಾಬ್ದಾರಿಯೇ ಕೋವಿಡ್‌ ವಿರುದ್ಧದ ಹೋರಾಟದಲ್ಲಿನ ಹಿನ್ನಡೆಗೆ ಕಾರಣವಾಗಿದೆ ಅಲ್ಲವೇ?

ಕೇಂದ್ರವು ಈವರೆಗೆ ಸುಮಾರು 16.37 ಕೋಟಿ ಲಸಿಕೆ ಡೋಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಇದರಲ್ಲಿ, ನಾಶವಾದ ಲಸಿಕೆ ಸೇರಿದಂತೆ ಒಟ್ಟು ಬಳಕೆ 15,58,48,782 ಪ್ರಮಾಣಗಳಾಗಿವೆ ಎಂದು ಸರ್ಕಾರ ಮುಂಜಾನೆ ಹೇಳಿದೆ. (ನಾಶವಾಗಿದ್ದನ್ನು ಒಟ್ಟು ಬಳಕೆಯಾದ ಪ್ರಮಾಣಕ್ಕೆ ಸೇರಿಸಿಕೊಳ್ಳುವ ಕುತಂತ್ರ!)

ಮುಂದಿನ 3 ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗಲಿರುವುದು ಕೇವಲ 17,31,110 ಲಸಿಕೆಗಳು ಮಾತ್ರ! ಅದೂ ಗ್ಯಾರಂಟಿಯಿಲ್ಲವಂತೆ!

ಲಸಿಕಾ ಅಭಿಯಾನದ ಸುತ್ತ….

ಲಡಾಖ್‌ನ ಕೇಂದ್ರಾಡಳಿತ ಪ್ರದೇಶವು ತನ್ನ ಜನಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ನೀಡಿದೆ. ಆದರೆ ಉತ್ತರ ಪ್ರದೇಶವು ಅತಿದೊಡ್ಡ ಪ್ರಮಾಣದಲ್ಲಿ ಕೇಂದ್ರದಿಂದ ಲಸಿಕೆಗಳನ್ನು ಪಡೆದಿದ್ದರೂ ಸಹ ಅದರ ಜನಸಂಖ್ಯೆಯ ಶೇಕಡಾ ಒಂದು ಭಾಗಕ್ಕೂ ಸಂಪೂರ್ಣವಾಗಿ ಲಸಿಕೆ ನೀಡಿಲ್ಲ.

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾದ ಗುಜರಾತ್ ಲಸಿಕೆ ನೀಡುವಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಲಕ್ಷದ್ವೀಪ ಮತ್ತು ತಮಿಳುನಾಡು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ವ್ಯರ್ಥ ಮಾಡಿವೆ.

ಜನವರಿ 16 ರಂದು ಪ್ರಾರಂಭವಾದ ಲಸಿಕೆ ಚಾಲನೆಯ ಮೊದಲ ಹಂತದಲ್ಲಿ, ಲಸಿಕೆಗಳನ್ನು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಕಾಯ್ದಿರಿಸಲಾಗಿತ್ತು. ಮಾರ್ಚ್ 1 ರಿಂದ, 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ರೋಗಲಕ್ಷಣ ಹೊಂದಿದ ಜನರು ಲಸಿಕೆ ಪಡೆಯಲು ಅರ್ಹರಾದರು. ಏಪ್ರಿಲ್ 1 ರಿಂದ, 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಕೋವಿಡ್ ಲಸಿಕೆಗಳಿಗೆ ಅರ್ಹರಾದರು.

ಈಗ, ಇವತ್ತು ಮೇ 1 ರಿಂದ ಭಾರತವು ತನ್ನ ಕೋವಿಡ್ ವ್ಯಾಕ್ಸಿನೇಷನ್ ಅನ್ನು 18 ದಾಟಿದ ಎಲ್ಲಾ ವಯಸ್ಕರಿಗೆ ಮುಕ್ತಗೊಳಿಸಿದೆ. ಆದರೆ ತಯಾರಿ ಇರದ ಪರಿಣಾಮ ಮತ್ತು ಕೇಂದ್ರವು ಲಸಿಕಾ ಕಂಪನಿಗಳ ಮೇಲೆ ಯಾವುದೇ ನಿಯಂತ್ರಣ ಹೊಂದದ ಪರಿಣಾಮ ಇದು ಮುಗ್ಗರಿಸಿದೆ.

ಭಾರತದಲ್ಲಿ ಈವರೆಗೆ ಒಟ್ಟು 15,22,45,179 ( 15 ಕೋಟಿ 22 ಲಕ್ಷ 45,719) ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. 12,54,86,929 ಜನರಿಗೆ ಲಸಿಕೆಯ ಮೊದಲ ಡೋಸ್ ಸಿಕ್ಕಿದ್ದರೆ, 2,67,58,250 ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ಒಟ್ಟಾರೆಯಾಗಿ, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಲಸಿಕಾ ಅಭಿಯಾನದಲ್ಲ್ಲಿ ಉತ್ತಮ ಸಾಧನೆ ತೋರಿವೆ, ಕಳೆದ ವರ್ಷವಷ್ಟೇ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಉನ್ನತ ಸಾಧನೆ ಮಾಡಿದೆ. ತನ್ನ ಜನಸಂಖ್ಯೆಯ ಶೇಕಡಾ 11 ರಷ್ಟು ಜನರಿಗೆ ಲಸಿಕೆಯನ್ನು ಸಂಪೂರ್ಣವಾಗಿ ನೀಡಿದೆ, ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ, ಗುಜರಾತ್ ಮತ್ತು ರಾಜಸ್ಥಾನಗಳು ಉನ್ನತ ಪ್ರದರ್ಶನ ನೀಡಿವೆ. ಗುಜರಾತ್ ರಾಜ್ಯವು ಜನಸಂಖ್ಯೆಯ ಶೇಕಡಾ 3.42 ರಷ್ಟು ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದರೆ, ಶೇಕಡಾ 14.2 ರಷ್ಟು ಜನರು ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

ಅಂತೆಯೇ, ರಾಜಸ್ಥಾನದಲ್ಲಿ, ಶೇಕಡಾ 13.6 ರಷ್ಟು ಜನಸಂಖ್ಯೆಯು ಕನಿಷ್ಠ ಮೊದಲ ಡೋಸ್ ಪಡೆದಿದೆ. 2.77 ರಷ್ಟು ಜನಸಂಖ್ಯೆಯು ಎರಡೂ ಡೋಸ್ ಸ್ವೀಕರಿಸಿದೆ.
ಲಡಾಖ್, ಸಿಕ್ಕಿಂ ಮತ್ತು ತ್ರಿಪುರವನ್ನು ಹೊರತುಪಡಿಸಿ, ಇತರ ಎಲ್ಲ ರಾಜ್ಯಗಳು ಜನಸಂಖ್ಯೆಯ ಶೇಕಡಾ 20 ಕ್ಕಿಂತ ಕಡಿಮೆ ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್‌ನೊಂದಿಗೆ ಲಸಿಕೆ ನೀಡಿದರೆ, ಶೇಕಡಾ 5 ಕ್ಕಿಂತ ಕಡಿಮೆ ಜನರು ಎರಡೂ ಪ್ರಮಾಣಗಳನ್ನು ಪಡೆದಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಶೇಕಡಾ 1.97 ಜನರಿಗೆ ಸಂಪೂರ್ಣ ಲಸಿಕೆ (ಎರಡೂ ಡೋಸ್) ಸಿಕ್ಕಿದ್ದ್ದರೆ, ಶೇ. 9.24 ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿದೇಶಗಳಿಗೆ ಲಸಿಕೆ ರಫ್ತು ಮಾಡಿದ್ದು ಏಕೆ ಎಂದು ಪ್ರಶ್ನೆ ಕೇಳಿಬಂದಿದೆ.

ಲಸಿಕೆ ಪೋಲು

ಲಕ್ಷದ್ವೀಪ ಮತ್ತು ತಮಿಳುನಾಡು ಹೆಚ್ಚು ಲಸಿಕೆ ಪೋಲು ಮಾಡಿದ ರಾಜ್ಯಗಳಾಗಿವೆ. ಲಕ್ಷದ್ವೀಪ ತನ್ನ ಶೇಕಡಾ 9.76 ಪ್ರಮಾಣವನ್ನು ವ್ಯರ್ಥ ಮಾಡಿದರೆ, ತಮಿಳುನಾಡು ತನ್ನ ಲಸಿಕೆಗಳಲ್ಲಿ ಶೇ. 8.83 ರಷ್ಟನ್ನು ಪೋಲು ಮಾಡಿದೆ. (ಸಮಯಕ್ಕೆ ಸರಿಯಾಗಿ ಲಸಿಕೆ ನೀಡದಿದ್ದಲ್ಲಿ ಅದರ ಅವಧಿ ಮುಗಿದಾಗ ಅದು ವ್ಯರ್ಥವಾಗುತ್ತದೆ.)

ತಮಿಳುನಾಡಿನಲ್ಲಿ ಶೇಕಡಾ 8.83 ರಷ್ಟು ವ್ಯರ್ಥವಾಗುವುದು ಅಂದರೆ 5,16,191 ಡೋಸ್ ವ್ಯರ್ಥವಾದಂತೆ. ಇದು ಲಡಾಖ್‌ನಂತಹ ಸಣ್ಣ ಪ್ರದೇಶದ ಸಂಪೂರ್ಣ ಜನಸಂಖ್ಯೆಯನ್ನು ಸಂಪೂರ್ಣವಾಗಿ ಲಸಿಕೆ ಮಾಡಲು ಸಾಕು.

ಹೆಚ್ಚುವರಿ ಲಸಿಕೆ

ಆರೋಗ್ಯ ಸಚಿವಾಲಯದ ಪ್ರಕಾರ, ಭಾರತವು ಇನ್ನೂ 79 ಲಕ್ಷ ಡೋಸ್‌ಗಳು ರಾಜ್ಯಗಳ ಬಳಿ ಇವೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 11,80,659 ಲಸಿಕೆಗಳು ಇದ್ದು, ನಂತರದ ಸ್ಥಾನದಲ್ಲಿ ಬಿಹಾರ (8,36,283) ಇದೆ. ಈ ಎರಡೂ ರಾಜ್ಯಗಳು ಲಸಿಕಾ ಅಭಿಯಾನದಲ್ಲಿ ಕಳಪೆ ಸಾಧನೆ ಮಾಡಿವೆ.

ಮೊದಲ ಡೋಸ್ ಮತ್ತು ಎರಡನೇ ಡೋಸ್

ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಮೊದಲ ಡೋಸ್ ನಂತರ 28-56 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾಗಿರುವುದರಿಂದ, ಎರಡನೇ ಡೋಸ್‌ನ ಗ್ರಾಫ್ ಮೊದಲನೆಯದಕ್ಕೆ ಸಮಾನಾಂತರವಾಗಿ ಚಲಿಸಬೇಕು. ಆದರೆ ಹಾಗೆ ಆಗುತ್ತಿಲ್ಲ!

ಕೃಪೆ: ದಿ ಪ್ರಿಂಟ್

ಎರಡು ಪ್ಲಾಟ್‌ಗಳ ನಡುವೆ ಹೆಚ್ಚುತ್ತಿರುವ ಅಂತರವು ಅನೇಕ ಜನರು ತಮ್ಮ ಎರಡನೇ ಡೋಸ್ ಅನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಲಸಿಕೆಗಳು ಲಭ್ಯವಿಲ್ಲದಿರುವುದು ಅಥವಾ ಪ್ರಕರಣಗಳ ಹೆಚ್ಚಳದಿಂದಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಲು ಹಿಂಜರಿಯುವುದು ಇದಕ್ಕೆ ಕಾರಣವಾಗಿರಬಹುದು.

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್

ಇಲ್ಲಿಯವರೆಗೆ ನೀಡಲಾದ ಒಟ್ಟು ಲಸಿಕೆಗಳಲ್ಲಿ ಭಾರತ್ ಬಯೊಟೆಕ್‌ನ ಶೇ.9ರಷ್ಟು ಕೋವ್ಯಾಕ್ಸಿನ್ ಲಸಿಕೆಗಳಿವೆ. ಈವರೆಗೆ ಶೇಕಡಾ 90 ಕ್ಕೂ ಹೆಚ್ಚು ಭಾರತೀಯರು ಸೀರಂನ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಕೇಂದ್ರದಿಂದ 1,500 ಕೋಟಿ ರೂ, ಹಣ ಪಡೆದ ಭಾರತ್ ಬಯೋಟೆಕ್ ಸಾಧನೆ ಗಮನಿಸಿ!

ಲಿಂಗವಾರು ವಿತರಣೆ

ಇಲ್ಲಿಯವರೆಗೆ, ಲಸಿಕೆ ಪಡೆದವರಲ್ಲಿ ಶೇಕಡಾ 52.18 ರಷ್ಟು ಪುರುಷರು, ಶೇ. 47.8 ರಷ್ಟು ಮಹಿಳೆಯರು ಇದ್ದಾರೆ. ಶೇಕಡಾ 0.01 ರಷ್ಟು ಲಸಿಕೆಗಳನ್ನು ತೃತೀಯ ಲಿಂಗಿಗಳಿಗೆ ನೀಡಲಾಗಿದೆ.

* ಪಿ.ಕೆ. ಮಲ್ಲನಗೌಡರ್

(ಮಾಹಿತಿ: ಕೇಂದ್ರ ಆರೋಗ್ಯ ಇಲಾಖೆ, ದಿ ಪ್ರಿಂಟ್ ಮತ್ತು ಇತರ ಮೂಲಗಳು)

ಚಿತ್ರಗಳು: ದಿ ಪ್ರಿಂಟ್


ಇದನ್ನೂ ಓದಿ:ಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ – ಇದು ಕಂಪನಿಗಳು ಅತಿಹೆಚ್ಚು ಲಾಭ ಮಾಡುವ ಸಮಯವಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಯೋಗ್ಯರು, ಅಪ್ರಾಮಾಣಿಕರು ಹಾಗೂ ಅದಕ್ಶರ ಕೈಗೆ ಅಧಿಕಾರ ಸಿಕ್ಕಿರುವುದರ ಪರಿಣಾಮವನ್ನು ನಾವಿಂದು ಅನುಬವಿಸುತ್ತಿದ್ದೇವೆ.

LEAVE A REPLY

Please enter your comment!
Please enter your name here

- Advertisment -

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...