Homeಕರ್ನಾಟಕಕೆರೆಗೆ ಹಾರ: ಆ ರೈತನ ಆತ್ಮಹತ್ಯೆಗೆ ಸಿಗುವುದೇ ಪರಿಹಾರ?

ಕೆರೆಗೆ ಹಾರ: ಆ ರೈತನ ಆತ್ಮಹತ್ಯೆಗೆ ಸಿಗುವುದೇ ಪರಿಹಾರ?

- Advertisement -
- Advertisement -

| ಸೋಮಶೇಖರ್ ಚಲ್ಯ |

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ರೈತರೊಬ್ಬರು ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರನ್ನೂ ದಂಗುಬಡಿಸಿದೆ. ತಮಿಳು ಸಿನೆಮಾ ಕತ್ತಿಯಲ್ಲಿ ನಾಡಿನ ಜನರ ಗಮನ ಸೆಳೆಯಲು ರೈತರು ವಿಡಿಯೋ ಮಾಡಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಆಘಾತಕಾರಿ ದೃಶ್ಯವಿತ್ತು. ಅದನ್ನು ಹೋಲುವ ಈ ಘಟನೆಯು ತಾಲೂಕಿನ ಐತಿಹಾಸಿಕ ಗ್ರಾಮ ಅಘಲಯದಲ್ಲಿ ನಡೆದಿದೆ.

ಎರಡು ದಿನದ ಹಿಂದೆ ಸುರೇಶ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಇಂದು ಅಂದರೆ ಜೂನ್ 17ರಂದು ಗೊತ್ತಾಗಿದೆ.  ಅದಾದ ನಂತರ ಅವರು ಮಾಡಿಟ್ಟ ವಿಡಿಯೋ ಕಂಡು ಬಂದಿದೆ. ಕೆಲವೇ ಗಂಟೆಗಳಲ್ಲಿ ಅದು ವೈರಲ್ ಆಗಿದ್ದು, ಇಂದು ಸಂಜೆ ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದಾಗ, ಅವರಿಗೂ ವಿಡಿಯೋ ತಲುಪಿದೆ. ಸಭೆಯಲ್ಲಿ ಮುಖ್ಯಮಂತ್ರಿಯವರು ಇದನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ.

ಸುರೇಶ್, ಅತ್ಮಹತ್ಯೆಗೆ ಶರಣಾದ ರೈತ

ನಮ್ಮ ಊರಿನಲ್ಲಿ ನೀರಿಲ್ಲ ಕೆರೆಗಳಿಗೆ ನೀರು ತುಂಬಿಸಿ ಎಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ರೈತ ಸುರೇಶ್ ರೈತರ ಸಮಸ್ಯೆಗಳನ್ನು ಮತ್ತೊಮ್ಮೆ ಚರ್ಚೆಗೆ ತಂದಿದ್ದಾರೆ. ಸಮ್ಮಿಶ್ರ ಸರ್ಕಾರದ ಬಹು ದೊಡ್ಡ ಭರವಸೆಯಾಗಿದ್ದ ಸಾಲ ಮನ್ನಾದ ಕುರಿತು ಸರ್ಕಾರ ರಚನೆಯಾದಾಗಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಮಾಧ್ಯಮಗಳು ಕೂಡ ಅದೇ ವಿಷಯದ ಸುತ್ತ ಆಗಾಗ ಚರ್ಚೆ ನಡೆಸುತ್ತಿವೆ.

ಮಂಡ್ಯ ಎಂದರೆ ರೈತರಿಗೆ ಸ್ವರ್ಗ, ನೀರಿನ ಸಮಸ್ಯೆಯಿಲ್ಲ, ಸಂಪದ್ಭರಿತ ಜಿಲ್ಲೆ, ಆದರೂ ಅಲ್ಲಿಯ ರೈತರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ರೈತರು ಸೋಮಾರಿಗಳು ಎಂಬ ಮೇಲ್ಪದರದ ಅಭಿಪ್ರಾಯಗಳು ವ್ಯಾಪಕವಾಗಿವೆ. ಆದರೆ ಅಲ್ಲಿಯ ರಿಯಾಲಿಟಿಯೇ ಬೇರೆ. ರಾಜ್ಯದಲ್ಲೇ ಅತೀ ಹೆಚ್ಚು ಭೂವಿಭಜನೆಯಾಗಿ ಅತಿ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿರುವುದು ಈ ಜಿಲ್ಲೆಯಲ್ಲಿ. ನಿಮಗೆ ಆಶ್ಚರ್ಯವೆನಿಸಬಹುದು. ಇಂದಿಗೂ, ಮಂಡ್ಯದ ಶೇ.51 ಭಾಗಕ್ಕೆ ನೀರಾವರಿ ಸೌಲಭ್ಯವೇ ಇಲ್ಲ. ಆ ಪ್ರದೇಶಗಳು ಮಳೆಯನ್ನೇ ಅವಲಂಬಿಸಿವೆ. ಹಾಗಿದ್ದರೂ ಮಳೆ ನೀರನ್ನು ಸಂಗ್ರಹಿಸುವ ಸಾಮಥ್ರ್ಯವೂ ಕೆರೆ-ಕಟ್ಟೆಗಳಲ್ಲಿ ಕಡಿಮೆಯಾಗುತ್ತಿದೆ. ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು ತಾಲ್ಲೂಕಿನ ಒಂದಷ್ಟು ಪ್ರದೇಶ ಬಿಟ್ಟರೆ ಕೆ.ಆರ್.ಪೇಟೆ, ಮಳವಳ್ಳಿ, ನಾಗಮಂಗಲಗಳ ಬಹುಪಾಲು ಪ್ರದೇಶದಲ್ಲಿ ನೀರಾವರಿ ಭೂಮಿ ಕಾಣಲು ಸಾಧ್ಯವಿಲ್ಲ. ಇದನ್ನು ಗುರುತಿಸಿಯೇ ಸುಮಲತಾ ತಮ್ಮ ಚುನಾವಣಾ ಪ್ರಚಾರದಲ್ಲಿ ಕೆರೆ-ಕಟ್ಟೆಗಳ ಹೂಳೆತ್ತಿಸುವ ವಿಚಾರವನ್ನು ಹೆಚ್ಚು ಬಳಸಿಕೊಂಡಿದ್ದರು.

ಇಡೀ ರಾಜ್ಯದಲ್ಲಿ ಕೆರೆ-ಕಟ್ಟೆಗಳಲ್ಲಿ ಹೂಳು ತುಂಬಿಕೊಂಡು, ಕೆರೆಗಳೆಲ್ಲವೂ ಮೈದಾನಗಳಾಗಿ ವರ್ಷಗಳೇ ಕಳೆದಿವೆ. ಒಂದೆಡೆ ಹೂಳು ತುಂಬಿದ್ದರೆ, ಮೊತ್ತೊದೆಡೆ ಕಾಲಕ್ಕೆ ಸರಿಯಾಗಿ ಮಳೆಯೂ ಆಗದೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸುರೇಶ್ ಹೇಳುವಂತೆ 100-150 ಅಡಿಗಳಿಗೆ ನೀರು ಸಿಗುತ್ತಿದ್ದ ಅಂರ್ತಜಲದ ಮಟ್ಟ 1500 ಅಡಿಗಳಿಗೂ ಆಳಕ್ಕೆ ಕುಸಿದಿದೆ. ಹೀಗಿರುವ ಸಂದರ್ಭದಲ್ಲಿಯೂ ಕೆರೆಯ ಹೂಳನ್ನು ತೆಗೆದು ಬೀಳುವ ಅಷ್ಟೋ-ಇಷ್ಟೋ ಮಳೆಯ ನೀರನ್ನಾದರೂ ಸಂಗ್ರಹಿಸುವಂತಹ ಕೆಲಸಕ್ಕೆ ಯಾವ ಸರ್ಕಾರಗಳೂ ಮುಂದಾಗುತ್ತಿಲ್ಲ.

ಕೆರೆಗಳ ಕೋಡಿಗಳ ಮಟ್ಟಕ್ಕೆ ಹೂಳು ತುಂಬಿಕೊಂಡಿದ್ದರೂ ಯಾವ ಶಾಸಕ-ಸಂಸದರಿಗೂ ಕೆರೆಗಳ ಹೂಳೆತ್ತುವುದು ಆದ್ಯತೆಯ ಕೆಲಸ ಎಂದೆನಿಸಿಯೇ ಇಲ್ಲ. ನೀರಿನ ಸಮಸ್ಯೆಯಷ್ಟೇ ಅಲ್ಲದೆ ಬಿತ್ತನೆ ಬೀಜ, ಬೆಳೆಗಳ ಮಾರುಕಟ್ಟೆ ಬೆಲೆ, ವೈಜ್ಞಾನಿಕ ಕೃಷಿಗಳಂತಹ ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಆದರೆ ಆಳುವ ಪಕ್ಷಕ್ಕೆ ಇದಾವುದರ ಅರಿವೂ ಇದ್ದಂತಿಲ್ಲ. ಮಂಡ್ಯದ ಅಷ್ಟೂ ಜನ ಶಾಸಕರು ಅದೇ ಪಕ್ಷದವರಾಗಿದ್ದಾರೆ. ಆದರೂ ಈ ಜಿಲ್ಲೆಗೆ ಯಾವ ಪ್ರಯೋಜನವೂ ಇಲ್ಲ.

ಮದ್ದೂರಿನ ಶಾಸಕ ಹಾಗೂ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಜನ ಸಮಸ್ಯೆ ಹೇಳಿಕೊಳ್ಳಲು ಹೋದರೆ ‘ಇಲ್ಲೇನ್ ಮೆಡೆಗಾರಿಕೆ ಮಾಡೋಕೆ ಬಂದಿದ್ದೀರಾ’ ಎಂದು ಜನರನ್ನು ಪಾವಸ್ಸು ಕಳಿಸುವಂತಹ ಮಟ್ಟಕ್ಕೂ, ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ‘ಯಾವುದೇ ಕಾರಣಕ್ಕೂ ಮಂಡ್ಯದ ಶಾಸಕರು ಕ್ಷೇತ್ರದಲ್ಲಿ ಕೆಲಸ ಮಾಡಬಾರದು, ಜನ ಓಟಾಕಿ ಗೆಲ್ಲಿಸಿರುವ ಸುಮಲತಾ ಇಂದಲೇ ಕೆಲಸ ಮಾಡಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಇಂತಹ ಅಪ್ರಬುದ್ಧ ಜನಪ್ರತಿನಿಧಿಗಳು ತಮಗೂ ಅದೇ ಜನ ಓಟಾಕಿದ್ದಾರೆ ಎಂದು ಮರೆತಿದ್ದಾರೆ. ಈ ರೀತಿಯ ಶಾಸಕರನ್ನು ಹೊಂದಿರುವ ಜಿಲ್ಲೆಯಲ್ಲಿ ಕೆರೆಗಳು ಮೈದಾನಗಳೂ ಆಗಬಹುದು. ಊರುಗಳು ಸ್ಮಶಾನಗಳಾಗಬಹುದು.

ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬಳಲಿದ್ದ ರೈತ ಸುರೇಶ್, ತಮ್ಮ ಆತ್ಮಹತ್ಯೆ ಮುಂಚಿನ ವಿಡಿಯೋದಲ್ಲಿ ನಮ್ಮ ಕುಮಾರಣ್ಣನಿಗೆ ಇನ್ನು ನಾಲ್ಕು ವರ್ಷ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ‘ಯಡಿಯೂರಪ್ಪ ಸಾರ್, ನೀವು ಕುಮಾರಣ್ಣನ ಸರ್ಕಾರಕ್ಕೆ ತೊಂದರೆ ಕೊಡಬೇಡಿ. ನಿಮಗೆ ಅದೃಷ್ಟ ಇದ್ದರೆ ನಿಮಗೂ ಮುಂದಿನ ಸಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಗುತ್ತದೆ’ ಎಂದಿದ್ದಾರೆ. ಸಿದ್ದರಾಮಯ್ಯ & ಡಿಕೆಶಿಯವರಿಂದಲೂ ಎಚ್‍ಡಿಕೆಗೆ ಬೆಂಬಲ ಕೇಳಿದ್ದಾರೆ.

ಜೆಡಿಎಸ್ ಪಕ್ಷದ ಸರ್ಕಾರದ ಮೇಲಿನ ಅವರ ಕಾಳಜಿಯ ಕಾಲು ಭಾಗದಷ್ಟು ಕರ್ತವ್ಯಪ್ರಜ್ಞೆ ಸರ್ಕಾರಕ್ಕಿದೆಯೇ ಎಂಬ ಪ್ರಶ್ನೆಯನ್ನು ವಿಡಿಯೋ ನೋಡಿದವರು ಕೇಳುವಂತಿದೆ. ಸಾಲಮನ್ನಾ ಒಂದೇ ರೈತರ ಸಮಸ್ಯೆಗೆ ಪರಿಹಾರವಂಬಂತೆ ಬಿಂಬಿಸಿ ಎಲ್ಲಾ ಸರ್ಕಾರಗಳು ಸಾಲ ಮನ್ನಾದ ಬೊಬ್ಬೆ ಹೊಡೆಯುತ್ತಾ ಕಾಲ ಕಳೆಯುತ್ತವೆ. ರೈತ ಸಮಸ್ಯೆಯಲ್ಲಿ ಸಾಲವೂ ಒಂದಾಗಿದೆಯೇ ಹೊರತು ಸಾಲವೊಂದೇ ಸಮಸ್ಯೆಯಲ್ಲ ಹಾಗೂ ಸಾಲ ಮನ್ನಾ ಒಂದೇ ರೈತರಿಗೆ ಪರಿಹಾರವಲ್ಲ ಎಂಬದನ್ನು ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ ಗ್ರಾಮದ ರೈತನ ಆತ್ಮಹತ್ಯೆ ಮುಂಚಿನ ವಿಡಿಯೋ ಮತ್ತೊಮ್ಮೆ ಸಾಬೀತು ಮಾಡಿದೆ.

ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲೆಂದೇ ಓಟು ಹಾಕಿದಂತಿದ್ದ ಮಂಡ್ಯ ಜಿಲ್ಲೆಯ ಜನರಿಗೆ ಲೋಕಸಭಾ ಚುನಾವಣೆಯ ನಂತರವೂ ಅಭಿಮಾನ ಕಡಿಮೆಯಾಗಿಲ್ಲ. ಆದರೆ, ಅವರ ನೈಜ ಸಮಸ್ಯೆಗಳಿಗೆ ಈ ಸರ್ಕಾರವು ಪರಿಹಾರ ಕಲ್ಪಿಸುತ್ತದೆಯೇ ಎಂಬುದು ಈಗ ಉಳಿದಿರುವ ಪ್ರಶ್ನೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...