HomeUncategorizedಬೆಳ್ಳಿಚುಕ್ಕಿ: ಸೌರ ಮಂಡಲದಲ್ಲಿ ಅತ್ಯಂತ ವೇಗವಾಗಿ ಸೂರ್ಯನ ಸುತ್ತ ಸುತ್ತವ ಗ್ರಹ!

ಬೆಳ್ಳಿಚುಕ್ಕಿ: ಸೌರ ಮಂಡಲದಲ್ಲಿ ಅತ್ಯಂತ ವೇಗವಾಗಿ ಸೂರ್ಯನ ಸುತ್ತ ಸುತ್ತವ ಗ್ರಹ!

- Advertisement -
- Advertisement -

ಸೂರ್ಯನಿಂದ ಕೇವಲ 5.79ಕೋಟಿ ಕಿಲೋ ಮೀಟರ್ ದೂರದಲ್ಲಿ ಇರುವ ಗ್ರಹವೇ ಬುಧ ಗ್ರಹ. ಬುಧ ಗ್ರಹ ಸೌರಮಂಡಲದ ಇತರ ಗ್ರಹಗಳಿಗೆ ಹೋಲಿಸಿದರೆ ಅತ್ಯಂತ ಚಿಕ್ಕ ಗ್ರಹ (ಪ್ಲೂಟೋ ಬುಧಕ್ಕಿಂತಲೂ ಚಿಕ್ಕ ‘ಗ್ರಹ’ ಆದರೆ ಪ್ಲೂಟೋವನ್ನು ಆಗಸ್ಟ್ 2008ರಿಂದ ಗ್ರಹಗಳ ಪಟ್ಟಿಯಿಂದ ಕೈಬಿಟ್ಟು ಕುಬ್ಜ ಗ್ರಹದ ಪಟ್ಟಿಗೆ ಸೇರಿಸಲಾಗಿದೆ). ಬುಧ ಸೂರ್ಯನಿಗೆ ಬಹಳ ಹತ್ತಿರವಿರುವ ಗ್ರಹವಾದುದರಿಂದ, ಈ ಗ್ರಹವು 88 ಭೂದಿನಗಳಲ್ಲಿ ಸೂರ್ಯನ ಸುತ್ತ ಒಂದು ಸುತ್ತು ಸುತ್ತುತ್ತದೆ. ಅಲ್ಲದೆ, ತನ್ನ ಅಕ್ಷದ ಸುತ್ತ ಸುತ್ತಲು 58 ಭೂ ದಿನಗಳನ್ನು ತೆಗೆದುಕೊಳ್ಳುತ್ತೆ. ಹಾಗಾಗಿ, ಬುಧ ಗ್ರಹದಲ್ಲಿ ಸುಮಾರು ಒಂದೂವರೆ ದಿನವಾದರೆ (ತನ್ನ ಅಕ್ಷದ ಸುತ್ತ ಸುತ್ತುವ ಸಮಯದ ಒಂದೂವರೆ ಪಟ್ಟು) ಒಂದು ವರ್ಷವಾದಂತೆ! ಇದು ಸೌರ ಮಂಡಲದ ಇನ್ನಿತರ ಎಲ್ಲಾ ಗ್ರಹಗಳಿಗಿಂತ ಅತ್ಯಂತ ವೇಗವಾಗಿ ಸೂರ್ಯನ ಸುತ್ತ ಸುತ್ತುವ ಗ್ರಹ.

ಬುಧ ಗ್ರಹದಲ್ಲಿ ಸೂರ್ಯನ ಶಾಖ ವಿಪರೀತವಾಗಿ ಹೆಚ್ಚಿರುತ್ತದೆ. ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿ 420 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ರಾತ್ರಿಯ ಸಮಯದಲ್ಲಿ ಅಲ್ಲಿನ ಪ್ರದೇಶಗಳಲ್ಲಿ -180 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುತ್ತದೆ. ಇಂತಹ ತೀವ್ರವಾದ ತಾಪಮಾನ ವ್ಯತ್ಯಾಸದಿಂದ ಕೂಡಿರುವ ಬುಧ ಗ್ರಹದಲ್ಲಿ ಪ್ರಸ್ತುತದ ವಿಜ್ಞಾನಕ್ಕೆ ತಿಳಿದಿರುವ ಯಾವ ಜೀವರಾಶಿಯು ಜೀವಿಸಲು ಸಾಧ್ಯವಿಲ್ಲ ಎಂಬ ತಿಳುವಳಿಕೆ ಇದೆ. ಇಂತಹ ವಿಪರೀತ ಸ್ಥಿತಿಯಿರುವ ಪ್ರದೇಶದಲ್ಲಿ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿ ಈ ಗ್ರಹವನ್ನು ಅಧ್ಯಯನ ಮಾಡುವುದು ಕಷ್ಟಕರ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಯಾವುದೇ ಬಾಹ್ಯಾಕಾಶ ನೌಕೆಯನ್ನು ಬುಧ ಗ್ರಹದ ಅಧ್ಯಯನಕ್ಕೆ ಭೂಮಿಯಿಂದ ಕಳುಹಿಸಿದರೆ, ಆ ನೌಕೆಯು ಸೂರ್ಯನ ದಿಕ್ಕಿಗೆ ಪ್ರಯಾಣ ಮಾಡಬೇಕಾಗಿರುವುದರಿಂದ, ನೌಕೆಯನ್ನು ಬುಧ ಗ್ರಹಕ್ಕಿಂತಲೂ ದೊಡ್ಡದಾಗಿರುವ ಸೂರ್ಯನು ತನ್ನತ್ತ ಸೆಳೆಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಆದುದರಿಂದ, ಬುಧ ಗ್ರಹದ ಅಧ್ಯಯನ ಸ್ವಲ್ಪ ಕಷ್ಠವೇ.

ಹೀಗಿದ್ದರೂ, ತಂತ್ರಜ್ಞಾನದ ಸಹಾಯದಿಂದ, 1970-75ರಲ್ಲಿ ಬುಧ ಗ್ರಹಕ್ಕೆ ಪ್ರಥಮ ಬಾಹ್ಯಾಕಾಶ ನೌಕೆಯಾದ ಮೆರಿನಿಯರ್ 10 (Meriner 10) ಎಂಬ ನೌಕೆಯನ್ನು ಕಳುಹಿಸಲಾಯಿತು. ಮಾನವನಿಗೆ ಮೊದಲ ಬಾರಿಗೆ ಬುಧ ಗ್ರಹದ ಭೂಪ್ರದೇಶ ತೋರಿಸಲು ಈ ನೌಕೆಯೇ ಸಹಾಯ ಮಾಡಿದ್ದು. ಜೊತೆಗೆ ಬುಧ ಗ್ರಹದಲ್ಲಿ ತೆಳುವಾದ ವಾತವರಣವಿರುವುದನ್ನು ಇದು ಖಾತರಿಪಡಿಸಿತು. ಬುಧ ಗ್ರಹದ ಭೂಪ್ರದೇಶವು ಚಂದ್ರನ ಮೇಲೆ ಕಾಣುವ ಕುಳಿಗಳ ಹಾಗೆಯೇ ಇರುವುದನ್ನು ಮೆರಿನಿಯರ್ 10 ತೆಗೆದ ಚಿತ್ರಗಳು ನಮಗೆ ತೋರಿಸಿದವು. ಅಲ್ಲದೆ 20074 ರಲ್ಲಿ ಉಡಾವಣೆ ಮಾಡಿದ ಮೆಸೆಂಜರ್ ನೌಕೆಯು 2011ರಲ್ಲಿ ಬುಧ ಗ್ರಹದ ಕಕ್ಷೆಗೆ ತೆರಳಿ ಬುಧ ಗ್ರಹದ ಶೇ.100 ರಷ್ಟು ಭೂಪ್ರದೇಶದ ನಕ್ಷೆಯನ್ನು ತಯಾರಿಸಿತು. ಅಲ್ಲದೆ, ಯುರೋಪ್ ಬಾಹ್ಯಾಕಾಶ ಸಂಸ್ಥೆ ಮತ್ತು ಜಪಾನ್ ಬಾಹ್ಯಾಕಾಶ ಸಂಸ್ಥೆಯ ಜಂಟಿ ಯೋಜನೆಯಲ್ಲಿ, 2018ರಲ್ಲಿ ಉಡಾವಣೆಯಾಗಿರುವ ಬೆಪಿ-ಕೊಲಾಂಬೋ ನೌಕೆಯು 2015ರಲ್ಲಿ ಬುಧ ಗ್ರಹದ ಕಕ್ಷೆಗೆ ತೆರಳಲಿದ್ದು, ಬುಧ ಗ್ರಹದಲ್ಲಿ ಇನ್ನಷ್ಟು ಅಧ್ಯಯನ ನಡೆಸಿ ಮತ್ತಷ್ಟು ವಿಸ್ಮಯಕಾರಿ ವಿಷಯಗಳ ಮೇಲೆ ಬೆಳಕು ಚೆಲ್ಲುವ ಸಾಧ್ಯತೆ ಇದೆ.

ಭೂಮಿಯ ಆಕಾಶದಲ್ಲಿ ಬರಿಗಣ್ಣಿಗೆ ಕಾಣಬಹುದಾದ ಐದು ಗ್ರಹಗಳಲ್ಲಿ ಬುಧ ಗ್ರಹವು ಒಂದು. ಆದರೆ, ಈ ಗ್ರಹವು ಸೂರ್ಯನಿಗೆ ಹತ್ತಿರವಿರುವುದರಿಂದ, ಭೂಮಿಯ ಆಕಾಶದಲ್ಲಿ, ಸೂರ್ಯನ ಬೆಳಕಿನಲ್ಲಿ ಇದನ್ನು ಗುರುತಿಸುವುದು ಕಷ್ಟವಾಗಿರುತ್ತದೆ ಅಲ್ಲದೆ, ಸೂರ್ಯನ ಜೊತೆಯೇ ಈ ಗ್ರಹವು ಮುಳುಗುತ್ತಿರುತ್ತದೆ. ಆದರೆ, ಈ ತಿಂಗಳ 12ರಂದು ಸೂರ್ಯನಿಂದ ಅತೀ ಹೆಚ್ಚು ದೂರದಲ್ಲಿ ಕಾಣುವ ಬುಧ ಗ್ರಹವನ್ನು, ಪಶ್ಚಿಮ ದಿಕ್ಕಿನಲ್ಲಿ ಶುಕ್ರ ಗ್ರಹದ ಸಹಾಯದಿಂದ ಗುರುತಿಸಬಹುದು. ಅಂದೇ ಬುಧ ಗ್ರಹ ಬಹಳ ಪ್ರಕಾಶ ಮಾನವಾಗಿ ಹೊಳೆಯುತ್ತಿರುತ್ತದೆ. ಆ ದಿನದ ಸಂಜೆ ಮೋಡಗಳಿಲ್ಲದೆ ಹೋದರೆ, ಬುಧ, ಶುಕ್ರ, ಮಂಗಳ ಗ್ರಹಗಳನ್ನು ಮತ್ತು ಚಂದ್ರನನ್ನು ಸೂರ್ಯ ಮುಳುಗಿದ ನಂತರ ಪಶ್ಚಿಮದಿಕ್ಕಿನಲ್ಲಿ ಕಾಣಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...