Homeಕರ್ನಾಟಕಯಡ್ಡಿಯ ಗುಲಗಂಜಿಯೂ, ಕಟೀಲ್‌ರ ಪಿಟೀಲೂ....

ಯಡ್ಡಿಯ ಗುಲಗಂಜಿಯೂ, ಕಟೀಲ್‌ರ ಪಿಟೀಲೂ….

- Advertisement -
- Advertisement -

ನಮ್ಮಲ್ಲಿರುವುದು ಭಿನ್ನಮತ ಅಲ್ಲ, ಭಿನ್ನಾಭಿಪ್ರಾಯ ಮಾತ್ರ, ನಾವು ಎಲ್ಲರಿಗಿಂತ ಭಿನ್ನ ಎಂದವರ ಪಾಡು ಹತ್ತರೊಳಗೆ ಹನ್ನೊಂದು ಎಂಬಂತಾಗಿದೆ. ಯಾರಿಗಿಂತ ಭಿನ್ನವೆಂದು ಅಧಿಕಾರಕ್ಕೆ ಬಂದರೋ ಅವರಿಗಿಂತ ಕಡೆಯಾಗಿ ಹೋಗಿದ್ದಾರೆ. ಯಾರಿಗೆ ಗೊತ್ತು ಅಧಿಕಾರದ ಅಮಲು ಎಲ್ಲ ನಿಯಮಗಳನ್ನೂ ಗಾಳಿಗೆ ತೂರುತ್ತದೆ ಎಂದು. ಅಧಿಕಾರ ಉಂಡ ಮೇಲೆ ಯಯಾತಿಯಾಗಬೇಕು. ಮತ್ತೆಮತ್ತೆ ಯೌವ್ವನ ಬೇಕು. ಹೆಸರನ್ನೂ ಬದಲಾಯಿಸಬೇಕು. ಬೇರೊಬ್ಬರೊಂದಿಗೆ ವಿವಾಹವೂ ನಡೆಯಬೇಕು. ಇದೆಲ್ಲವೂ ಅಪೂರ್ಣಗೊಂಡಿರುವ ಕೆಲಸಗಳನ್ನು ಮುಗಿಸಲು. ಇದಕ್ಕಾಗಿ ಗದ್ದುಗೆ ಬೇಕು. ಗದ್ದುಗೆ ಪಡೆಯಲು ಯಾವ ಗದ್ದುಗೆಗೆ ಬೇಕಾದರೂ ಅಡ್ಡಬೀಳಲು ಸಿದ್ದ. ಇದು ರಾಜಕಾರಣಿಗಳು ಕಾರ್ಯವೈಖರಿ.

ನಾಲ್ಕನೇ ಬಾರಿ ಅಧಿಕಾರದ ಗದ್ದುಗೆ ಏರಿ ಕುಳಿತಿರುವ ಬಿ.ಎಸ್.ಯಡಿಯೂರಪ್ಪ ಚಿಗುರು ಮೀಸೆಯ ತೋಳ್ಬಲದ ಯುವಕನಾಗಬೇಕು. ಅವರ ಅಧಿಕಾರದ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ನೀಡುವುದು, ಸೈಕಲ್ ನೀಡಿದ್ದು ಬಿಟ್ಟರೆ ಬೇರೇನೂ ಕೆಲಸಗಳು ಆಗಲಿಲ್ಲ. ಕೆಲಸ ಮಾಡಲು ಮನಸ್ಸು ಇರಲಿಲ್ಲವೋ? ಅಥವಾ ಕೆಲಸಕ್ಕೆ ಕೊಕ್ಕೆ ಇಕ್ಕಿದರೂ, ಭಿನ್ನಮತ ಕಾರಣವೋ ಅಂತು ಬಸ್ ಹತ್ತಿ ಇಳಿದು ಮತ್ತೆ ಹತ್ತಿದ್ದಾರೆ. ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾದರೆ, ಜನಪರ ಕೆಲಸಕ್ಕೆ ಬದ್ದನಾಗಿದ್ದರೆ ಹತ್ತು ಸಲ ಮುಖ್ಯಮಂತ್ರಿಯಾದರೂ ಯಾರ ಅಭ್ಯಂತರವೂ ಇಲ್ಲ. ಆದರೆ ಅಧಿಕಾರದ ಲಾಲಸೆಗೆ ಹುದ್ದೆ ಏರಿದರೆ ಅದರಿಂದ ಜನರಿಗಾದ ಪ್ರಯೋಜನವೇನು ಅಲ್ಲವೇ?

ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಭರಪೂರ ಟೀಕಿಸುತ್ತಿದ್ದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರ ಸ್ವಾಮಿ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಜರಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸುವುದಾಗಿ ಹೇಳಿದರು. ಹೇಳಿದಂತೆ ನಡೆದುಕೊಂಡರು. ರಾಜ್ಯದಲ್ಲಿ ಬರ ಆವರಿಸಿ ಜನ ತತ್ತರಿಸಿ ಹೋಗಿದ್ದಾರೆ ಎಂದು ಬೊಬ್ಬೆ ಹೊಡೆದರು. ಕೆಲವೆಡೆ ಏಕಾಂಗಿಯಾಗಿ ಮತ್ತೆ ಕೆಲವೆಡೆ ಪರಿವಾರ ಸಮೇತ ಹೋಗಿ ಜನರ ಗಮನ ಸೆಳೆಯುವ ಕೆಲಸ ಮಾಡಿದರು. ಜೊತೆಯಲ್ಲಿದ್ದವರು ಶೋಭಾ ಕರಂದ್ಲಾಜೆ, ಜಿ.ಎಸ್.ಬಸವರಾಜು, ಬಸವರಾಜ ಬೊಮ್ಮಾಯಿ, ಅದೇ ಉಮೇಶ್ ಕತ್ತಿ. ಒಳಗೊಳಗೆ ಚಕ್ರವ್ಯೂಹವನ್ನು ರಚಿಸಿದರು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ರಾಜಿನಾಮೆ ಕೊಡಿಸಿದರು. ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ತಿಪ್ಪೆಯನ್ನು ಸಾರಿಸಿದರು. ಕೊನೆಯದಾಗಿ ಮುಖ್ಯಮಂತ್ರಿಯೂ ಆದರು.

ಈಗ ಕಾಲ ಬದಲಾಗಿದೆ. 105 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಕರ್ನಾಟಕದ ಅಧಿಕಾರದ ಗದ್ದುಗೆ ಹಿಡಿದಿದೆ. ಹಠಕ್ಕೆ ಬಿದ್ದಂತೆ ಯಡಿಯೂರಪ್ಪ ಮುಖ್ಯಮಂತ್ರಿಯು ಆಗಿದ್ದಾರೆ. ಆದರೆ ಏನು ಬಂತು. ಕಷ್ಟಕ್ಕೆ ಆಗದವನು ನಂಟನಲ್ಲ, ಊಟಕ್ಕೆ ಇಲ್ಲದ ಉಪ್ಪಿನಕಾಯಿ ಮತ್ಯಾಕೆ.. ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ಸುಮಾರು 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸುರಿದು ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಬಿತ್ತನೆ ಮಾಡಿದ್ದ, ಫಸಲಿಗೆ ಬಂದಿದ್ದ ಬೆಳೆಯೆಲ್ಲವೂ ನೀರು ಪಾಲಾಗಿದೆ. ಮನೆಯಲ್ಲಿ ಕಾಗದ ಪತ್ರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮಳೆಯಲ್ಲಿ ಇರಲು ಜಾಗವಿಲ್ಲದೆ ಜನರ ಸಿಟ್ಟನ್ನು ಹೊರ ಹಾಕುತ್ತಿದ್ದರೂ ಯಡಿಯೂರಪ್ಪ ಅತ್ತ ತಲೆಯೂ ಹಾಕದೆ ಮೌನಕ್ಕೆ ಶರಣಾಗಿದ್ದಾರೆ. ಉತ್ತರ ಕರ್ನಾಟಕದ ಜನರ ಏನಾಗಿದ್ದಾರೆ ಎಂದು ನೋಡುತ್ತಲೂ ಇಲ್ಲ.

ಹಿಂದಿನ ಸರ್ಕಾರವನ್ನು ಟೀಕಿಸುತ್ತಿದ್ದ ಯಡಿಯೂರಪ್ಪ ಬರಪರಿಹಾರ ನೀಡಲಿಲ್ಲವೆಂದು ಅಕ್ರೋಶಭರಿತರಾದರು. ತಾನೇ ಅಧಿಕಾರಕ್ಕೆ ಏರಿದಾಗ ಅದೇ ಆಕ್ರೋಶದ ಮಾತುಗಳಲ್ಲಿ ಕೇಂದ್ರಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಕೇಳಬಹುದಿಲ್ಲವೇ? ಅದು ಮಾಡಲಿಲ್ಲ. ದೆಹಲಿಗೆ ಎರಡು ಬಾರಿ ಹೋಗಿ ಬಂದು ನಾಟಕ ಮಾಡಿದರು. ಯಡಿಯೂರಪ್ಪನವರಿಗೆ ಹೈಕಮಾಂಡ್ ನಾಯಕರು ಕ್ಯಾರೆ ಅಂದರೋ ಬಿಟ್ಟರೋ! ಪರಿಹಾರವಂತು ಬರಲಿಲ್ಲ. 25 ಸಂಸದರು ಕೂಡ ತುಟಿ ಎರಡು ಮಾಡಲಿಲ್ಲ. ಬಿಜೆಪಿ ಅಧ್ಯಕ್ಷರೂ ನಾನು ಕರಾವಳಿಗೆ ಮಾತ್ರ ಎಂಬಂತೆ ವರ್ತಿಸಿದರು. ಮೀಡಿಯಾಗಳು ಯಡಿಯೂರಪ್ಪ, ಕಟೀಲ್ ನಡುವೆ ಹೊಂದಾಣಿಕೆ ಇಲ್ಲವೆಂಬಂತೆ ಬಿಂಬಿಸಿದವು. ಕೂಡಲೇ ಯಡಿಯೂಪ್ಪ ನನ್ನ ಮತ್ತು ಕಟೀಲು ನಡುವೆ ಗುಲಗಂಜಿಯಷ್ಟೂ ಭಿನ್ನಾಭಿಪ್ರಾಯಗಳಿಲ್ಲ ಎಂದು ತೇಪೆ ಹಚ್ಚುವ ಕೆಲಸ ಮಾಡಿದರು. ಅವರಿಗೆ ಇವರು ಮಣಿದರೋ ಇವರಿಗೆ ಅವರು ಮಣಿದರೋ ಅಂತು ಭಿನ್ನಮತದ ನಾಟಕ ಮಾತ್ರ ನಡೆಯುತ್ತಿದೆ.

‘ಗುಲಗಂಜಿ ಎಷ್ಟೇ ಕೆಂಪಗಿದ್ದರೂ ಅದರ ತಿಕ ಮಾತ್ರ ಕಪ್ಪು’ ಎಂಬಂತೆ ಬಿಜೆಪಿ ಭಿನ್ನರಾಗ ಹಾಡುತ್ತಲೇ ಬರುತ್ತಿದೆ. ಪೀಟಿಲು ಕೊಯ್ಯುತ್ತಲೇ ಇದೆ. ಆದರೆ ಜನರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಜನ ನರಳುತ್ತಲೇ ಇದ್ದಾರೆ. ಉತ್ತರದ ಕೂಗು ಸೊರಗುತ್ತಿದೆ. ಪರಿಹಾರದ ಕನಸು ಗಗನ ಕುಸಮವೆಂದು ಜನ ಭಾವಿಸಿದ್ದರೆ, ಯಡಿಯೂರಪ್ಪ, 25 ಸಂಸದರು ಬಾಯಿ ಬಿಡದಂತೆ ಕೇಂದ್ರದ ಪರಿಹಾರಕ್ಕಾಗಿ ಭಿಕ್ಷೆ ಬೇಡಿ ನಿಂತುಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್- ಜೆಡಿಎಸ್ ಒಮ್ಮೊಮ್ಮೆ ಸದ್ದು ಮಾಡುತ್ತಾ ಮೌನಕ್ಕೆ ಶರಣಾಗಿವೆ. ಯಡಿಯೂರಪ್ಪ ಅವರ ಶೌರ್ಯ ವಿರೋಧ ಪಕ್ಷದಲ್ಲಿದ್ದಾಗ ಎಂದು ವಿರೋಧಿಗಳು ಗಹಗಹಿಸಿ ನಗುವಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...