Homeಕರ್ನಾಟಕಯಡ್ಡಿಯ ಗುಲಗಂಜಿಯೂ, ಕಟೀಲ್‌ರ ಪಿಟೀಲೂ....

ಯಡ್ಡಿಯ ಗುಲಗಂಜಿಯೂ, ಕಟೀಲ್‌ರ ಪಿಟೀಲೂ….

- Advertisement -
- Advertisement -

ನಮ್ಮಲ್ಲಿರುವುದು ಭಿನ್ನಮತ ಅಲ್ಲ, ಭಿನ್ನಾಭಿಪ್ರಾಯ ಮಾತ್ರ, ನಾವು ಎಲ್ಲರಿಗಿಂತ ಭಿನ್ನ ಎಂದವರ ಪಾಡು ಹತ್ತರೊಳಗೆ ಹನ್ನೊಂದು ಎಂಬಂತಾಗಿದೆ. ಯಾರಿಗಿಂತ ಭಿನ್ನವೆಂದು ಅಧಿಕಾರಕ್ಕೆ ಬಂದರೋ ಅವರಿಗಿಂತ ಕಡೆಯಾಗಿ ಹೋಗಿದ್ದಾರೆ. ಯಾರಿಗೆ ಗೊತ್ತು ಅಧಿಕಾರದ ಅಮಲು ಎಲ್ಲ ನಿಯಮಗಳನ್ನೂ ಗಾಳಿಗೆ ತೂರುತ್ತದೆ ಎಂದು. ಅಧಿಕಾರ ಉಂಡ ಮೇಲೆ ಯಯಾತಿಯಾಗಬೇಕು. ಮತ್ತೆಮತ್ತೆ ಯೌವ್ವನ ಬೇಕು. ಹೆಸರನ್ನೂ ಬದಲಾಯಿಸಬೇಕು. ಬೇರೊಬ್ಬರೊಂದಿಗೆ ವಿವಾಹವೂ ನಡೆಯಬೇಕು. ಇದೆಲ್ಲವೂ ಅಪೂರ್ಣಗೊಂಡಿರುವ ಕೆಲಸಗಳನ್ನು ಮುಗಿಸಲು. ಇದಕ್ಕಾಗಿ ಗದ್ದುಗೆ ಬೇಕು. ಗದ್ದುಗೆ ಪಡೆಯಲು ಯಾವ ಗದ್ದುಗೆಗೆ ಬೇಕಾದರೂ ಅಡ್ಡಬೀಳಲು ಸಿದ್ದ. ಇದು ರಾಜಕಾರಣಿಗಳು ಕಾರ್ಯವೈಖರಿ.

ನಾಲ್ಕನೇ ಬಾರಿ ಅಧಿಕಾರದ ಗದ್ದುಗೆ ಏರಿ ಕುಳಿತಿರುವ ಬಿ.ಎಸ್.ಯಡಿಯೂರಪ್ಪ ಚಿಗುರು ಮೀಸೆಯ ತೋಳ್ಬಲದ ಯುವಕನಾಗಬೇಕು. ಅವರ ಅಧಿಕಾರದ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ನೀಡುವುದು, ಸೈಕಲ್ ನೀಡಿದ್ದು ಬಿಟ್ಟರೆ ಬೇರೇನೂ ಕೆಲಸಗಳು ಆಗಲಿಲ್ಲ. ಕೆಲಸ ಮಾಡಲು ಮನಸ್ಸು ಇರಲಿಲ್ಲವೋ? ಅಥವಾ ಕೆಲಸಕ್ಕೆ ಕೊಕ್ಕೆ ಇಕ್ಕಿದರೂ, ಭಿನ್ನಮತ ಕಾರಣವೋ ಅಂತು ಬಸ್ ಹತ್ತಿ ಇಳಿದು ಮತ್ತೆ ಹತ್ತಿದ್ದಾರೆ. ಜನರ ನೋವಿಗೆ ಮಿಡಿವ ಪ್ರಾಣಮಿತ್ರನಾದರೆ, ಜನಪರ ಕೆಲಸಕ್ಕೆ ಬದ್ದನಾಗಿದ್ದರೆ ಹತ್ತು ಸಲ ಮುಖ್ಯಮಂತ್ರಿಯಾದರೂ ಯಾರ ಅಭ್ಯಂತರವೂ ಇಲ್ಲ. ಆದರೆ ಅಧಿಕಾರದ ಲಾಲಸೆಗೆ ಹುದ್ದೆ ಏರಿದರೆ ಅದರಿಂದ ಜನರಿಗಾದ ಪ್ರಯೋಜನವೇನು ಅಲ್ಲವೇ?

ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಭರಪೂರ ಟೀಕಿಸುತ್ತಿದ್ದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರ ಸ್ವಾಮಿ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಜರಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸುವುದಾಗಿ ಹೇಳಿದರು. ಹೇಳಿದಂತೆ ನಡೆದುಕೊಂಡರು. ರಾಜ್ಯದಲ್ಲಿ ಬರ ಆವರಿಸಿ ಜನ ತತ್ತರಿಸಿ ಹೋಗಿದ್ದಾರೆ ಎಂದು ಬೊಬ್ಬೆ ಹೊಡೆದರು. ಕೆಲವೆಡೆ ಏಕಾಂಗಿಯಾಗಿ ಮತ್ತೆ ಕೆಲವೆಡೆ ಪರಿವಾರ ಸಮೇತ ಹೋಗಿ ಜನರ ಗಮನ ಸೆಳೆಯುವ ಕೆಲಸ ಮಾಡಿದರು. ಜೊತೆಯಲ್ಲಿದ್ದವರು ಶೋಭಾ ಕರಂದ್ಲಾಜೆ, ಜಿ.ಎಸ್.ಬಸವರಾಜು, ಬಸವರಾಜ ಬೊಮ್ಮಾಯಿ, ಅದೇ ಉಮೇಶ್ ಕತ್ತಿ. ಒಳಗೊಳಗೆ ಚಕ್ರವ್ಯೂಹವನ್ನು ರಚಿಸಿದರು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ರಾಜಿನಾಮೆ ಕೊಡಿಸಿದರು. ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ತಿಪ್ಪೆಯನ್ನು ಸಾರಿಸಿದರು. ಕೊನೆಯದಾಗಿ ಮುಖ್ಯಮಂತ್ರಿಯೂ ಆದರು.

ಈಗ ಕಾಲ ಬದಲಾಗಿದೆ. 105 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಕರ್ನಾಟಕದ ಅಧಿಕಾರದ ಗದ್ದುಗೆ ಹಿಡಿದಿದೆ. ಹಠಕ್ಕೆ ಬಿದ್ದಂತೆ ಯಡಿಯೂರಪ್ಪ ಮುಖ್ಯಮಂತ್ರಿಯು ಆಗಿದ್ದಾರೆ. ಆದರೆ ಏನು ಬಂತು. ಕಷ್ಟಕ್ಕೆ ಆಗದವನು ನಂಟನಲ್ಲ, ಊಟಕ್ಕೆ ಇಲ್ಲದ ಉಪ್ಪಿನಕಾಯಿ ಮತ್ಯಾಕೆ.. ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ಸುಮಾರು 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಸುರಿದು ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಬಿತ್ತನೆ ಮಾಡಿದ್ದ, ಫಸಲಿಗೆ ಬಂದಿದ್ದ ಬೆಳೆಯೆಲ್ಲವೂ ನೀರು ಪಾಲಾಗಿದೆ. ಮನೆಯಲ್ಲಿ ಕಾಗದ ಪತ್ರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮಳೆಯಲ್ಲಿ ಇರಲು ಜಾಗವಿಲ್ಲದೆ ಜನರ ಸಿಟ್ಟನ್ನು ಹೊರ ಹಾಕುತ್ತಿದ್ದರೂ ಯಡಿಯೂರಪ್ಪ ಅತ್ತ ತಲೆಯೂ ಹಾಕದೆ ಮೌನಕ್ಕೆ ಶರಣಾಗಿದ್ದಾರೆ. ಉತ್ತರ ಕರ್ನಾಟಕದ ಜನರ ಏನಾಗಿದ್ದಾರೆ ಎಂದು ನೋಡುತ್ತಲೂ ಇಲ್ಲ.

ಹಿಂದಿನ ಸರ್ಕಾರವನ್ನು ಟೀಕಿಸುತ್ತಿದ್ದ ಯಡಿಯೂರಪ್ಪ ಬರಪರಿಹಾರ ನೀಡಲಿಲ್ಲವೆಂದು ಅಕ್ರೋಶಭರಿತರಾದರು. ತಾನೇ ಅಧಿಕಾರಕ್ಕೆ ಏರಿದಾಗ ಅದೇ ಆಕ್ರೋಶದ ಮಾತುಗಳಲ್ಲಿ ಕೇಂದ್ರಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಕೇಳಬಹುದಿಲ್ಲವೇ? ಅದು ಮಾಡಲಿಲ್ಲ. ದೆಹಲಿಗೆ ಎರಡು ಬಾರಿ ಹೋಗಿ ಬಂದು ನಾಟಕ ಮಾಡಿದರು. ಯಡಿಯೂರಪ್ಪನವರಿಗೆ ಹೈಕಮಾಂಡ್ ನಾಯಕರು ಕ್ಯಾರೆ ಅಂದರೋ ಬಿಟ್ಟರೋ! ಪರಿಹಾರವಂತು ಬರಲಿಲ್ಲ. 25 ಸಂಸದರು ಕೂಡ ತುಟಿ ಎರಡು ಮಾಡಲಿಲ್ಲ. ಬಿಜೆಪಿ ಅಧ್ಯಕ್ಷರೂ ನಾನು ಕರಾವಳಿಗೆ ಮಾತ್ರ ಎಂಬಂತೆ ವರ್ತಿಸಿದರು. ಮೀಡಿಯಾಗಳು ಯಡಿಯೂರಪ್ಪ, ಕಟೀಲ್ ನಡುವೆ ಹೊಂದಾಣಿಕೆ ಇಲ್ಲವೆಂಬಂತೆ ಬಿಂಬಿಸಿದವು. ಕೂಡಲೇ ಯಡಿಯೂಪ್ಪ ನನ್ನ ಮತ್ತು ಕಟೀಲು ನಡುವೆ ಗುಲಗಂಜಿಯಷ್ಟೂ ಭಿನ್ನಾಭಿಪ್ರಾಯಗಳಿಲ್ಲ ಎಂದು ತೇಪೆ ಹಚ್ಚುವ ಕೆಲಸ ಮಾಡಿದರು. ಅವರಿಗೆ ಇವರು ಮಣಿದರೋ ಇವರಿಗೆ ಅವರು ಮಣಿದರೋ ಅಂತು ಭಿನ್ನಮತದ ನಾಟಕ ಮಾತ್ರ ನಡೆಯುತ್ತಿದೆ.

‘ಗುಲಗಂಜಿ ಎಷ್ಟೇ ಕೆಂಪಗಿದ್ದರೂ ಅದರ ತಿಕ ಮಾತ್ರ ಕಪ್ಪು’ ಎಂಬಂತೆ ಬಿಜೆಪಿ ಭಿನ್ನರಾಗ ಹಾಡುತ್ತಲೇ ಬರುತ್ತಿದೆ. ಪೀಟಿಲು ಕೊಯ್ಯುತ್ತಲೇ ಇದೆ. ಆದರೆ ಜನರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಜನ ನರಳುತ್ತಲೇ ಇದ್ದಾರೆ. ಉತ್ತರದ ಕೂಗು ಸೊರಗುತ್ತಿದೆ. ಪರಿಹಾರದ ಕನಸು ಗಗನ ಕುಸಮವೆಂದು ಜನ ಭಾವಿಸಿದ್ದರೆ, ಯಡಿಯೂರಪ್ಪ, 25 ಸಂಸದರು ಬಾಯಿ ಬಿಡದಂತೆ ಕೇಂದ್ರದ ಪರಿಹಾರಕ್ಕಾಗಿ ಭಿಕ್ಷೆ ಬೇಡಿ ನಿಂತುಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್- ಜೆಡಿಎಸ್ ಒಮ್ಮೊಮ್ಮೆ ಸದ್ದು ಮಾಡುತ್ತಾ ಮೌನಕ್ಕೆ ಶರಣಾಗಿವೆ. ಯಡಿಯೂರಪ್ಪ ಅವರ ಶೌರ್ಯ ವಿರೋಧ ಪಕ್ಷದಲ್ಲಿದ್ದಾಗ ಎಂದು ವಿರೋಧಿಗಳು ಗಹಗಹಿಸಿ ನಗುವಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...