Homeಕರ್ನಾಟಕಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

ಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

- Advertisement -
- Advertisement -

ಡಾ. ಪ್ರಕಾಶ್ ಮಂಟೇದ ಅವರು ಬರೆದ ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ ಎಂಬ ಶೀರ್ಷಿಕೆಯ ಲೇಖನದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಡಾ.ಪ್ರಕಾಶ್ ಮಂಟೇದ ವಿರುದ್ಧ 153ಎ ಮತ್ತು ಐಪಿಸಿಯ 505ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ನ.1ರಂದು ವಿಚಾರಣೆಗೆ ಹಾಜರಾಗುವಂತೆ ಡಾ.ಪ್ರಕಾಶ್ ಮಂಟೇದ ಅವರಿಗೆ ರಾಮನಗರ ಗ್ರಾಮಾಂತರ ಪೊಲೀಸರು ನೊಟೀಸ್‌ ನೀಡಿದ್ದಾರೆ.

ರಾಮನಗರದ ಭೋವಿ ಸಮುದಾಯದ ವ್ಯಕ್ತಿಯೊಬ್ಬ ಪ್ರಕಾಶ್ ಮಂಟೇದ ಅವರ ವಿರುದ್ದ ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:
ಲೇಖಕ ಡಾ.ಪ್ರಕಾಶ್ ಮಂಟೇದ ಅವರು ತಮ್ಮ ಬಾಲ್ಯದ ಜೀವನಕ್ಕೆ ಸಂಬಂಧಿಸಿ ಅನುಭವದ ಲೇಖನ ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ’ ಎಂಬ ಶೀರ್ಷಿಕೆಯಡಿ ಬರೆದಿದ್ದು, ಇದನ್ನು ಬಿಗ್ ಕನ್ನಡ ವೆಬ್‌ ಮಾದ್ಯಮ ಪ್ರಕಟಿಸಿದೆ.

ಪರಿಶಿಷ್ಟ ಜಾತಿಯವರೇ ಆದ ತನ್ನೂರಿನ ಬೋವಿ ಸಮುದಾಯದ ಜನರು ಪರಿಶಿಷ್ಟ ಜಾತಿಯ ಹೊಲೆಯರನ್ನು ಅವಮಾನಿಸಿದ ನಿದರ್ಶನಗಳ ಕುರಿತು ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು. SC ಪಟ್ಟಿಯಲ್ಲಿನ ಸ್ಪರ್ಶ್ಯ ಮತ್ತು ಅಸ್ಪೃಶ್ಯ ಸಮುದಾಯದಗಳ ನಡುವೆ ಇರುವ ಜಾತಿ ತಾರತಮ್ಯದ ಅಸಮಾನತೆಯನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದರು.

ಎಸ್ಸಿಗಳೆನ್ನುವ ಭೋವಿಗಳು ಅಮಾನವೀಯವಾಗಿ ನಡೆಸಿಕೊಂಡಿದ್ದಿದೆ. ಭೋವಿಗಳು ತಮ್ಮ ದಬ್ಬಾಳಿಕೆ, ಪುಂಡಾಟಿಕೆಗಳಿಂದ ಊರಲ್ಲಿ ದೌರ್ಜನ್ಯದ ಹವಾ ಇಟ್ಟಿದ್ದರು. ಅಂದಿನ ಇವರ ಜಾತೀಯತೆಯನ್ನು ಇವರ ಸಾಮಾಜಿಕ ಅಜ್ಞಾನ ಎಂದು ಸುಮ್ಮನಾಗಬಹುದಷ್ಟೆ. ಆದರೂ ಜಾತಿ ಆಚರಣೆಯಲ್ಲಿ ತಮ್ಮಂತೆಯೇ ಎಸ್ಸಿಗಳಾದ ಹೊಲೆಯರನ್ನು ನಿಕೃಷ್ಟವಾಗಿ ನಡೆಸಿಕೊಂಡದ್ದಿದೆ ಸೇರಿ ಹಲವು ವಿಚಾರಗಳನ್ನು, ನಿದರ್ಶನಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಡಾ.ಪ್ರಕಾಶ್ ಮಂಟೇದ, ನನ್ನ ಬರಹದ ಬಗ್ಗೆ ಸಮಾಜದಲ್ಲಿ ಶಾಂತಿ ಕದಡಿದ, ಕೋಮು ದ್ವೇಷದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ನಾನು 30 ವರ್ಷಗಳ ನನ್ನ ಅನುಭವವನ್ನು ಹಂಚಿಕೊಂಡಿದ್ದೆ. ಬಿಗ್‌ ಕನ್ನಡದಲ್ಲಿ ‘ಅರಿವೇ ಕಂಡಾಯ’ ಸರಣಿ ಅಂಕಣಗಳನ್ನು ನಾನು ಬರೆಯುತ್ತಿದ್ದೇನೆ. ಅದರಲ್ಲಿ ನನ್ನ ಮೂಲ, ಊರಿನ ಬಗ್ಗೆ ಬರೆಯುವಾಗ, ನಮ್ಮ ತಂದೆ ಅಂಬೇಡ್ಕರ್‌ ಸಂಘ ಮಾಡಿದ ಪೋಟೋ ಕಾಣಿಸಿಕೊಂಡಿತ್ತು. ನಮ್ಮ ಅಪ್ಪ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವನ್ನು ಮಾಡಿದ್ದರು. ಇದನ್ನು ನೋಡಿ  ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ ಎಂಬ ಲೇಖನ ಬರೆದೆ. ಅವತ್ತಿಗೆ ನಮ್ಮಲ್ಲಿ ಬೋವಿ ಸಮುದಾಯದ ಜನರು ಪ್ರಬಲವಾಗಿದ್ದರು. ಈ ವೇಳೆ ನನಗೆ ಆದ ಜಾತಿ ಆಧಾರಿತ ಅನುಭವದ ಬಗ್ಗೆ ಬರೆದಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಸ್ಪೃಶ್ಯ, ಅಸ್ಪೃಶ್ಯತೆಯ ತಳ ಮತ್ತು ಮೇಲ್ಮಟ್ಟದ ಜಾತಿ ದೌರ್ಜನ್ಯದ ತಲಸ್ಪರ್ಶದ ಅರಿವಿದೆ. ಆತ್ಮ ವಂಚನೆ ಮಾಡಿಕೊಂಡು ಹುಸಿ ಜಾತ್ಯತೀತ ವಿಚಾರಗಳನ್ನು ಮಾತಾಡುವ ತೆವಲು ಅಥವಾ ಗೀಳು ನನಗಿಲ್ಲ. ಇವತ್ತಿಗೂ ಕೆಲವರಿಗೆ ಜಾತಿಯ ರೂಪ ವಿರೂಪಗಳು ಹೇಗೆ ಸ್ಥಿರೀಕರಣ ಗೊಳ್ಳುತ್ತಿವೆ ಎಂಬುದು ಗೊತ್ತಿಲ್ಲ. ಕೆಲವರ ಬಳಿ ಸಿದ್ಧಾಂತ, ಸ್ಟಾಕ್ ರಿಯಾಕ್ಷನ್ಸ್ ಮಾತ್ರವಿದೆ. ಆದರೆ ಜಾತಿ ಚಲನೆಯ ಸಂಕೀರ್ಣತೆಗಳ ಅರಿವು ಮತ್ತು ಅದು ಮಾಡುವ ಗಾಯ ಮತ್ತು ಗಾಸಿತನಗಳು ನಮಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ಇಂದಿಗೂ ಹೊಲೆಯ ಸಮುದಾಯದ ಜನರನ್ನು ಅಸಹಾಯಕರನ್ನಾಗಿಸಿ ಏನೇ ಆದರೂ ಸುಮ್ಮನಿರುವಂತೆ ಆರ್ಭಟ ಮಾಡುವವರು ನನ್ನ ಮೇಲೆ ಪ್ರಕರಣ ದಾಖಲು ಮಾಡಿರುತ್ತಾರೆ. ಹಾಗೆ ನೋಡಿದರೆ ಇಡೀ ಕುಂಭಾಪುರ ಕಾಲೋನಿಯನ್ನು ಹಾಳುಗೆಡುತ್ತಿರುವವರು ಇವರೇ ಆಗಿರುತ್ತಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು ಇದನ್ನು ಗಮನಿಸಬೇಕು. ಇಂತಹ ಅವಿವೇಕಿಗಳು ಮತ್ತು ದುಷ್ಟರನ್ನು ಇಟ್ಟುಕೊಂಡು ಸ್ಥಳೀಯವಾಗಿ ಕಾಂಗ್ರೆಸ್ ಸಾಧಿಸುವುದಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯ ಹೇಳಲು ನಮಗೆ ಅಂಜಿಕೆ ಯಾಕೆ? ಬಾಬಾ ಸಾಹೇಬರು ಹೇಳಿದಂತೆ ಎಂಜಲು ಮತ್ತು ರಕ್ತವನ್ನು ಟಚಬಲ್ ದಲಿತರು, ಅನ್‌ಟ ಚಬಲ್ ದಲಿತರ ಜೊತೆ ಬೆರೆಸಬಲ್ಲರೆ?  ನಾನು ತಳಮಟ್ಟದ ಸತ್ಯವನ್ನು ಮಾತಾಡಿದ್ದೇನೆ. ಈ ವಿಚಾರದಲ್ಲಿ ಯಾವುದೇ ಕಪೋಲ ಕಲ್ಪಿತ ಸಂಗತಿಗಳು ನನ್ನ ಲೇಖನದಲ್ಲಿ ಇರುವುದಿಲ್ಲ. ಈ ಬಗ್ಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಭಾಸ್ಕರ್‌ ಪ್ರಸಾದ್‌, ಪ್ರಕಾಶ್ ಮಂಟೇದ ಅವರ ಮೇಲೆ ಕೇಸ್ ದಾಖಲಿಸಲಾಗಿದೆ. ನಾನು ಪ್ರಕಾಶ್ ಮಂಟೇದ ಅವರ ಜೊತೆ ಇದ್ದೇನೆ. ಸುಮ್ಮನೆ ಮಾತಿಗೆ ಮಾತ್ರ ಇರೋದಲ್ಲ.‌ ಅವರ ಮೇಲೆ ಕೇಸು ಹಾಕಿರುವ ಪೊಲೀಸರಿಗೆ  ಅವರು ಮಾಡಿರುವ ತಪ್ಪೇನು ಎಂದು ಕಾನೂನಿನ ಮೂಲಕ ತಿಳಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಬಾಲ್ಯದಲ್ಲಿ ಕೇವಲ ಜಾತಿಯ ಕಾರಣಕ್ಕೆ ನಾನೆಷ್ಟು ಹಿಂಸೆ, ಅವಮಾನ, ನಷ್ಟಗಳನ್ನು ಅನುಭವಿಸಿದ್ದೆ ಎಂದು ತನ್ನ ಜೀವನದ ಅನುಭವವನ್ನು ಬರೆದುಕೊಳ್ಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತೆ? ಜಾತಿ ದೌರ್ಜನ್ಯದ ವಿರುದ್ದ ಪ್ರತಿರೋಧ ಒಡ್ಡಲು ಹೇಗೆ ಸಾಧ್ಯವಾಯ್ತು ಎಂಬ ಬಗ್ಗೆ ಕಥನವನ್ನು ಬರೆದುಕೊಳ್ಳುವುದು ಅಪರಾಧ ಎಂದಾದರೆ ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಅನೇಕ ದಲಿತ ಮುಖಂಡರು ಹಾಗು ಸಾಹಿತಿಗಳು  ಜಾತಿ ದೌರ್ಜನ್ಯಗಳ ಘಟನೆಗಳ ಬಗ್ಗೆ ಲೇಖನ ಬರೆದಿದ್ದಾರೆ. ನಾನು ಕೂಡ ಇಲ್ಲಿನ ಜಾತಿ ದೌರ್ಜನ್ಯಗಳ ಬಗ್ಗೆ ಲೇಖನವನ್ನು ಬರೆದಿದ್ದೇನೆ. ಇನ್ನು ಮುಂದೆ ಇಂತಹ ಜಾತಿ ದೌರ್ಜನ್ಯದ ದಾಖಲಾತಿಗಳಿಗೆಲ್ಲಾ ಸೆಕ್ಷನ್ 505, 153A ಅಡಿಯಲ್ಲಿ FIR ಜಡಿಯುತ್ತೀರಾ?
ಯಾವ ಮುಠ್ಠಾಳನಾದರೂ ಇಂತಹ ಕೇಸು ದಾಖಲಿಸುವುದನ್ನು ಒಪ್ಪಬಹುದೇನು ಎಂದು ಭಾಸ್ಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ZEE TV ಕನ್ನಡದಲ್ಲಿ ಅಂಬೇಡ್ಕರರ ಜೀವನ ಚರಿತ್ರೆಯಲ್ಲಿ ಜಾತಿ ದೌರ್ಜನ್ಯಗಳ ಬಗ್ಗೆ ಬರೆಯಲಾಗಿದೆ. ಹಾಗಾದರೆ ನೀವು ಈ ಜಾತಿ ದಬ್ಬಾಳಿಕೆಯ ಚರಿತ್ರೆಯನ್ನು ಬರೆದವರ ಮತ್ತು ಪ್ರಸಾರ ಮಾಡಿದವರ ಮೇಲೆ ಕೇಸ್ ದಾಖಲಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಇಂತಹ ದೂರುಗಳು ಬಂದಾಗ, ಬಂದ ದೂರುಗಳಿಗೆಲ್ಲಾ FIR ಮಾಡಲೇಬೇಕಿಲ್ಲ. ಒಂದು NCR ಮಾಡಿ ಆಪಾದಿತರಿಗೆ ನೋಟಿಸ್ ಕೊಟ್ಟು ಅವರು ನೀಡುವ ಹೇಳಿಕೆಯ ಮೇಲೆ ಮುಂದುವರೆಯಬಹುದು. ದೂರನ್ನು ಕೋರ್ಟಿನ ಗಮನಕ್ಕೆ ತಂದು ಕೋರ್ಟಿನ ಅನುಮತಿ ಪಡೆದು FIR ದಾಖಲಿಸಬಹುದು. ಆದರೆ ಈ ಪ್ರಕರಣದಲ್ಲಿ ಪೂರ್ವಾಗ್ರಹ ಪೀಡಿತ ಪೋಲೀಸರು ಹಾಗೇನೂ ಮಾಡದೇ ನೇರವಾಗಿ FIR ಮಾಡಿರುವುದರ ಹಿಂದೆ ಜಾತಿ ರೋಗವೇ ಕೆಲಸ ಮಾಡಿದೆ. ಮತ್ತದಕ್ಕೆ ನಾವು ಸರ್ಕಾರವನ್ನೂ ಹೊಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂದಿಸಿದ ಕರ್ತವ್ಯ ಭ್ರಷ್ಟ ಪೋಲೀಸರ ಮೇಲೆ ಸೂಕ್ತ ಕ್ರಮವಹಿಸಿ ಎಂದು ಸರ್ಕಾರಕ್ಕೆ ಭಾಸ್ಕರ ಪ್ರಸಾದ್‌ ಅವರು ಆಗ್ರಹಿಸಿದ್ದಾರೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...