Homeಕರ್ನಾಟಕಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

ಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

- Advertisement -
- Advertisement -

ಡಾ. ಪ್ರಕಾಶ್ ಮಂಟೇದ ಅವರು ಬರೆದ ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ ಎಂಬ ಶೀರ್ಷಿಕೆಯ ಲೇಖನದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಡಾ.ಪ್ರಕಾಶ್ ಮಂಟೇದ ವಿರುದ್ಧ 153ಎ ಮತ್ತು ಐಪಿಸಿಯ 505ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ನ.1ರಂದು ವಿಚಾರಣೆಗೆ ಹಾಜರಾಗುವಂತೆ ಡಾ.ಪ್ರಕಾಶ್ ಮಂಟೇದ ಅವರಿಗೆ ರಾಮನಗರ ಗ್ರಾಮಾಂತರ ಪೊಲೀಸರು ನೊಟೀಸ್‌ ನೀಡಿದ್ದಾರೆ.

ರಾಮನಗರದ ಭೋವಿ ಸಮುದಾಯದ ವ್ಯಕ್ತಿಯೊಬ್ಬ ಪ್ರಕಾಶ್ ಮಂಟೇದ ಅವರ ವಿರುದ್ದ ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:
ಲೇಖಕ ಡಾ.ಪ್ರಕಾಶ್ ಮಂಟೇದ ಅವರು ತಮ್ಮ ಬಾಲ್ಯದ ಜೀವನಕ್ಕೆ ಸಂಬಂಧಿಸಿ ಅನುಭವದ ಲೇಖನ ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ’ ಎಂಬ ಶೀರ್ಷಿಕೆಯಡಿ ಬರೆದಿದ್ದು, ಇದನ್ನು ಬಿಗ್ ಕನ್ನಡ ವೆಬ್‌ ಮಾದ್ಯಮ ಪ್ರಕಟಿಸಿದೆ.

ಪರಿಶಿಷ್ಟ ಜಾತಿಯವರೇ ಆದ ತನ್ನೂರಿನ ಬೋವಿ ಸಮುದಾಯದ ಜನರು ಪರಿಶಿಷ್ಟ ಜಾತಿಯ ಹೊಲೆಯರನ್ನು ಅವಮಾನಿಸಿದ ನಿದರ್ಶನಗಳ ಕುರಿತು ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು. SC ಪಟ್ಟಿಯಲ್ಲಿನ ಸ್ಪರ್ಶ್ಯ ಮತ್ತು ಅಸ್ಪೃಶ್ಯ ಸಮುದಾಯದಗಳ ನಡುವೆ ಇರುವ ಜಾತಿ ತಾರತಮ್ಯದ ಅಸಮಾನತೆಯನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದರು.

ಎಸ್ಸಿಗಳೆನ್ನುವ ಭೋವಿಗಳು ಅಮಾನವೀಯವಾಗಿ ನಡೆಸಿಕೊಂಡಿದ್ದಿದೆ. ಭೋವಿಗಳು ತಮ್ಮ ದಬ್ಬಾಳಿಕೆ, ಪುಂಡಾಟಿಕೆಗಳಿಂದ ಊರಲ್ಲಿ ದೌರ್ಜನ್ಯದ ಹವಾ ಇಟ್ಟಿದ್ದರು. ಅಂದಿನ ಇವರ ಜಾತೀಯತೆಯನ್ನು ಇವರ ಸಾಮಾಜಿಕ ಅಜ್ಞಾನ ಎಂದು ಸುಮ್ಮನಾಗಬಹುದಷ್ಟೆ. ಆದರೂ ಜಾತಿ ಆಚರಣೆಯಲ್ಲಿ ತಮ್ಮಂತೆಯೇ ಎಸ್ಸಿಗಳಾದ ಹೊಲೆಯರನ್ನು ನಿಕೃಷ್ಟವಾಗಿ ನಡೆಸಿಕೊಂಡದ್ದಿದೆ ಸೇರಿ ಹಲವು ವಿಚಾರಗಳನ್ನು, ನಿದರ್ಶನಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಡಾ.ಪ್ರಕಾಶ್ ಮಂಟೇದ, ನನ್ನ ಬರಹದ ಬಗ್ಗೆ ಸಮಾಜದಲ್ಲಿ ಶಾಂತಿ ಕದಡಿದ, ಕೋಮು ದ್ವೇಷದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ನಾನು 30 ವರ್ಷಗಳ ನನ್ನ ಅನುಭವವನ್ನು ಹಂಚಿಕೊಂಡಿದ್ದೆ. ಬಿಗ್‌ ಕನ್ನಡದಲ್ಲಿ ‘ಅರಿವೇ ಕಂಡಾಯ’ ಸರಣಿ ಅಂಕಣಗಳನ್ನು ನಾನು ಬರೆಯುತ್ತಿದ್ದೇನೆ. ಅದರಲ್ಲಿ ನನ್ನ ಮೂಲ, ಊರಿನ ಬಗ್ಗೆ ಬರೆಯುವಾಗ, ನಮ್ಮ ತಂದೆ ಅಂಬೇಡ್ಕರ್‌ ಸಂಘ ಮಾಡಿದ ಪೋಟೋ ಕಾಣಿಸಿಕೊಂಡಿತ್ತು. ನಮ್ಮ ಅಪ್ಪ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವನ್ನು ಮಾಡಿದ್ದರು. ಇದನ್ನು ನೋಡಿ  ‘ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ, ಭೋವಿಗಳ ಅಂದಿನ ಅಟ್ಟಹಾಸವೂ ಎಂಬ ಲೇಖನ ಬರೆದೆ. ಅವತ್ತಿಗೆ ನಮ್ಮಲ್ಲಿ ಬೋವಿ ಸಮುದಾಯದ ಜನರು ಪ್ರಬಲವಾಗಿದ್ದರು. ಈ ವೇಳೆ ನನಗೆ ಆದ ಜಾತಿ ಆಧಾರಿತ ಅನುಭವದ ಬಗ್ಗೆ ಬರೆದಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಸ್ಪೃಶ್ಯ, ಅಸ್ಪೃಶ್ಯತೆಯ ತಳ ಮತ್ತು ಮೇಲ್ಮಟ್ಟದ ಜಾತಿ ದೌರ್ಜನ್ಯದ ತಲಸ್ಪರ್ಶದ ಅರಿವಿದೆ. ಆತ್ಮ ವಂಚನೆ ಮಾಡಿಕೊಂಡು ಹುಸಿ ಜಾತ್ಯತೀತ ವಿಚಾರಗಳನ್ನು ಮಾತಾಡುವ ತೆವಲು ಅಥವಾ ಗೀಳು ನನಗಿಲ್ಲ. ಇವತ್ತಿಗೂ ಕೆಲವರಿಗೆ ಜಾತಿಯ ರೂಪ ವಿರೂಪಗಳು ಹೇಗೆ ಸ್ಥಿರೀಕರಣ ಗೊಳ್ಳುತ್ತಿವೆ ಎಂಬುದು ಗೊತ್ತಿಲ್ಲ. ಕೆಲವರ ಬಳಿ ಸಿದ್ಧಾಂತ, ಸ್ಟಾಕ್ ರಿಯಾಕ್ಷನ್ಸ್ ಮಾತ್ರವಿದೆ. ಆದರೆ ಜಾತಿ ಚಲನೆಯ ಸಂಕೀರ್ಣತೆಗಳ ಅರಿವು ಮತ್ತು ಅದು ಮಾಡುವ ಗಾಯ ಮತ್ತು ಗಾಸಿತನಗಳು ನಮಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ಇಂದಿಗೂ ಹೊಲೆಯ ಸಮುದಾಯದ ಜನರನ್ನು ಅಸಹಾಯಕರನ್ನಾಗಿಸಿ ಏನೇ ಆದರೂ ಸುಮ್ಮನಿರುವಂತೆ ಆರ್ಭಟ ಮಾಡುವವರು ನನ್ನ ಮೇಲೆ ಪ್ರಕರಣ ದಾಖಲು ಮಾಡಿರುತ್ತಾರೆ. ಹಾಗೆ ನೋಡಿದರೆ ಇಡೀ ಕುಂಭಾಪುರ ಕಾಲೋನಿಯನ್ನು ಹಾಳುಗೆಡುತ್ತಿರುವವರು ಇವರೇ ಆಗಿರುತ್ತಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು ಇದನ್ನು ಗಮನಿಸಬೇಕು. ಇಂತಹ ಅವಿವೇಕಿಗಳು ಮತ್ತು ದುಷ್ಟರನ್ನು ಇಟ್ಟುಕೊಂಡು ಸ್ಥಳೀಯವಾಗಿ ಕಾಂಗ್ರೆಸ್ ಸಾಧಿಸುವುದಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯ ಹೇಳಲು ನಮಗೆ ಅಂಜಿಕೆ ಯಾಕೆ? ಬಾಬಾ ಸಾಹೇಬರು ಹೇಳಿದಂತೆ ಎಂಜಲು ಮತ್ತು ರಕ್ತವನ್ನು ಟಚಬಲ್ ದಲಿತರು, ಅನ್‌ಟ ಚಬಲ್ ದಲಿತರ ಜೊತೆ ಬೆರೆಸಬಲ್ಲರೆ?  ನಾನು ತಳಮಟ್ಟದ ಸತ್ಯವನ್ನು ಮಾತಾಡಿದ್ದೇನೆ. ಈ ವಿಚಾರದಲ್ಲಿ ಯಾವುದೇ ಕಪೋಲ ಕಲ್ಪಿತ ಸಂಗತಿಗಳು ನನ್ನ ಲೇಖನದಲ್ಲಿ ಇರುವುದಿಲ್ಲ. ಈ ಬಗ್ಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಭಾಸ್ಕರ್‌ ಪ್ರಸಾದ್‌, ಪ್ರಕಾಶ್ ಮಂಟೇದ ಅವರ ಮೇಲೆ ಕೇಸ್ ದಾಖಲಿಸಲಾಗಿದೆ. ನಾನು ಪ್ರಕಾಶ್ ಮಂಟೇದ ಅವರ ಜೊತೆ ಇದ್ದೇನೆ. ಸುಮ್ಮನೆ ಮಾತಿಗೆ ಮಾತ್ರ ಇರೋದಲ್ಲ.‌ ಅವರ ಮೇಲೆ ಕೇಸು ಹಾಕಿರುವ ಪೊಲೀಸರಿಗೆ  ಅವರು ಮಾಡಿರುವ ತಪ್ಪೇನು ಎಂದು ಕಾನೂನಿನ ಮೂಲಕ ತಿಳಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಬಾಲ್ಯದಲ್ಲಿ ಕೇವಲ ಜಾತಿಯ ಕಾರಣಕ್ಕೆ ನಾನೆಷ್ಟು ಹಿಂಸೆ, ಅವಮಾನ, ನಷ್ಟಗಳನ್ನು ಅನುಭವಿಸಿದ್ದೆ ಎಂದು ತನ್ನ ಜೀವನದ ಅನುಭವವನ್ನು ಬರೆದುಕೊಳ್ಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತೆ? ಜಾತಿ ದೌರ್ಜನ್ಯದ ವಿರುದ್ದ ಪ್ರತಿರೋಧ ಒಡ್ಡಲು ಹೇಗೆ ಸಾಧ್ಯವಾಯ್ತು ಎಂಬ ಬಗ್ಗೆ ಕಥನವನ್ನು ಬರೆದುಕೊಳ್ಳುವುದು ಅಪರಾಧ ಎಂದಾದರೆ ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಅನೇಕ ದಲಿತ ಮುಖಂಡರು ಹಾಗು ಸಾಹಿತಿಗಳು  ಜಾತಿ ದೌರ್ಜನ್ಯಗಳ ಘಟನೆಗಳ ಬಗ್ಗೆ ಲೇಖನ ಬರೆದಿದ್ದಾರೆ. ನಾನು ಕೂಡ ಇಲ್ಲಿನ ಜಾತಿ ದೌರ್ಜನ್ಯಗಳ ಬಗ್ಗೆ ಲೇಖನವನ್ನು ಬರೆದಿದ್ದೇನೆ. ಇನ್ನು ಮುಂದೆ ಇಂತಹ ಜಾತಿ ದೌರ್ಜನ್ಯದ ದಾಖಲಾತಿಗಳಿಗೆಲ್ಲಾ ಸೆಕ್ಷನ್ 505, 153A ಅಡಿಯಲ್ಲಿ FIR ಜಡಿಯುತ್ತೀರಾ?
ಯಾವ ಮುಠ್ಠಾಳನಾದರೂ ಇಂತಹ ಕೇಸು ದಾಖಲಿಸುವುದನ್ನು ಒಪ್ಪಬಹುದೇನು ಎಂದು ಭಾಸ್ಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ZEE TV ಕನ್ನಡದಲ್ಲಿ ಅಂಬೇಡ್ಕರರ ಜೀವನ ಚರಿತ್ರೆಯಲ್ಲಿ ಜಾತಿ ದೌರ್ಜನ್ಯಗಳ ಬಗ್ಗೆ ಬರೆಯಲಾಗಿದೆ. ಹಾಗಾದರೆ ನೀವು ಈ ಜಾತಿ ದಬ್ಬಾಳಿಕೆಯ ಚರಿತ್ರೆಯನ್ನು ಬರೆದವರ ಮತ್ತು ಪ್ರಸಾರ ಮಾಡಿದವರ ಮೇಲೆ ಕೇಸ್ ದಾಖಲಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಇಂತಹ ದೂರುಗಳು ಬಂದಾಗ, ಬಂದ ದೂರುಗಳಿಗೆಲ್ಲಾ FIR ಮಾಡಲೇಬೇಕಿಲ್ಲ. ಒಂದು NCR ಮಾಡಿ ಆಪಾದಿತರಿಗೆ ನೋಟಿಸ್ ಕೊಟ್ಟು ಅವರು ನೀಡುವ ಹೇಳಿಕೆಯ ಮೇಲೆ ಮುಂದುವರೆಯಬಹುದು. ದೂರನ್ನು ಕೋರ್ಟಿನ ಗಮನಕ್ಕೆ ತಂದು ಕೋರ್ಟಿನ ಅನುಮತಿ ಪಡೆದು FIR ದಾಖಲಿಸಬಹುದು. ಆದರೆ ಈ ಪ್ರಕರಣದಲ್ಲಿ ಪೂರ್ವಾಗ್ರಹ ಪೀಡಿತ ಪೋಲೀಸರು ಹಾಗೇನೂ ಮಾಡದೇ ನೇರವಾಗಿ FIR ಮಾಡಿರುವುದರ ಹಿಂದೆ ಜಾತಿ ರೋಗವೇ ಕೆಲಸ ಮಾಡಿದೆ. ಮತ್ತದಕ್ಕೆ ನಾವು ಸರ್ಕಾರವನ್ನೂ ಹೊಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂದಿಸಿದ ಕರ್ತವ್ಯ ಭ್ರಷ್ಟ ಪೋಲೀಸರ ಮೇಲೆ ಸೂಕ್ತ ಕ್ರಮವಹಿಸಿ ಎಂದು ಸರ್ಕಾರಕ್ಕೆ ಭಾಸ್ಕರ ಪ್ರಸಾದ್‌ ಅವರು ಆಗ್ರಹಿಸಿದ್ದಾರೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...