Homeಅಂತರಾಷ್ಟ್ರೀಯಗಾಜಾದಲ್ಲಿ ತೀವ್ರಗೊಂಡ ಆಹಾರ ಬಿಕ್ಕಟ್ಟು; ಒಂದೇ ತಿಂಗಳಲ್ಲಿ ಡಜನ್‌ಗಟ್ಟಲೆ ಮಕ್ಕಳನ್ನು ಬಲಿ ಪಡೆದ ಹಸಿವು

ಗಾಜಾದಲ್ಲಿ ತೀವ್ರಗೊಂಡ ಆಹಾರ ಬಿಕ್ಕಟ್ಟು; ಒಂದೇ ತಿಂಗಳಲ್ಲಿ ಡಜನ್‌ಗಟ್ಟಲೆ ಮಕ್ಕಳನ್ನು ಬಲಿ ಪಡೆದ ಹಸಿವು

- Advertisement -
- Advertisement -

ಗಾಜಾ ನಗರದಲ್ಲಿ ಆಹಾರ ಬಿಕ್ಕಟ್ಟು ತೀವ್ರಗೊಂಡಿದ್ದು, ಒಂದೇ ದಿನದಲ್ಲಿ ಆಸ್ಪತ್ರೆಯಲ್ಲಿ ಐಯವರು ಮಕ್ಕಳು ಹಸಿವಿನಿಂದ ಬಳಲಿ ಸಾವನ್ನಪ್ಪಿದ್ದಾರೆ. ಅವರನ್ನು ಉಳಿಸಲು ವೈದ್ಯರು ಪ್ರಯತ್ನಿಸಿದ ಯಾವುದೇ ಪ್ರಯತ್ನಗಳು ಕೆಲಸ ಮಾಡಲಿಲ್ಲ.

ಇಸ್ರೇಲ್‌ನ ದಿಗ್ಬಂಧನದ ಅಡಿಯಲ್ಲಿರುವ ಗಾಜಾದ ಮಕ್ಕಳನ್ನು ಉಳಿಸಬಹುದಾದ, ಅಪೌಷ್ಟಿಕತೆಗೆ ಚಿಕಿತ್ಸೆ ನೀಡುವ ಮೂಲಭೂತ ಔಷಧಗಳು ಖಾಲಿಯಾಗಿದ್ದವು; ಪರ್ಯಾಯ ಚಿಕಿತ್ಸೆ ಸಹ ನಿಷ್ಪರಿಣಾಮಕಾರಿಯಾಗಿದ್ದವು. ಒಂದರ ನಂತರ ಒಂದರಂತೆ, ಶಿಶುಗಳು ಮತ್ತು ಪುಟ್ಟ ಮಕ್ಕಳು ಸಾವನ್ನಪ್ಪುತ್ತಲೇ ಇವೆ.

ಹಸಿವಿನಿಂದ ಬಳಲುತ್ತಿರುವ ಮಕ್ಕಳು, ಉತ್ತರ ಗಾಜಾದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪ್ರಮುಖ ತುರ್ತು ಕೇಂದ್ರವಾದ ಪೇಷಂಟ್ಸ್ ಫ್ರೆಂಡ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ಸಾವುಗಳು ಹಲವು ಬದಲಾವಣೆಯನ್ನು ಸಹ ಗುರುತಿಸಿವೆ; ಮಕ್ಕಳಲ್ಲಿ ಅಪೌಷ್ಟಿಕತೆ ರೋಗದ ಲಕ್ಷಣಗಳು ಹದಗೆಡುತ್ತಿವೆ, ಅವರು ಅಳಲು ಅಥವಾ ಚಲಿಸಲು ತುಂಬಾ ದುರ್ಬಲರಾಗಿದ್ದಾರೆ ಎಂದು ಪೌಷ್ಟಿಕತಜ್ಞೆ ಡಾ. ರಾಣಾ ಸೊಬೊಹ್ ಹೇಳಿದರು. ಕಳೆದ ತಿಂಗಳುಗಳಲ್ಲಿ, ಆಹಾರ ಪೂರೈಕೆ ಕೊರತೆಯ ಹೊರತಾಗಿಯೂ ಹೆಚ್ಚಿನವರು ಸುಧಾರಿಸಿದ್ದಾರೆ. ಆದರೆ, ಈಗ ರೋಗಿಗಳು ಹೆಚ್ಚು ಕಾಲ ಇರುತ್ತಾರೆ ಮತ್ತು ಚೇತರಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

“ನಾವು ಎದುರಿಸುತ್ತಿರುವ ವಿಪತ್ತಿನ ಕುರಿತು ಮಾತನಾಡಲು ಪದಗಳಿಲ್ಲ. ಮಕ್ಕಳು ಪ್ರಪಂಚದ ಮುಂದೆ ಸಾಯುತ್ತಿದ್ದಾರೆ. ಇದಕ್ಕಿಂತ ಕೊಳಕು ಮತ್ತು ಭಯಾನಕ ಹಂತ ಇನ್ನೊಂದಿಲ್ಲ” ಎಂದು ಆಸ್ಪತ್ರೆಯನ್ನು ಬೆಂಬಲಿಸುವ ಅಮೆರಿಕ ಮೂಲದ ನೆರವು ಸಂಸ್ಥೆ ಮೆಡ್‌ಗ್ಲೋಬಲ್‌ನೊಂದಿಗೆ ಕೆಲಸ ಮಾಡುವ ಸೊಬೊಹ್ ಹೇಳಿದರು.

ಈ ತಿಂಗಳು, ಗಾಜಾದ 2 ಮಿಲಿಯನ್‌ಗಿಂತಲೂ ಹೆಚ್ಚು ಪ್ಯಾಲೆಸ್ತೀನಿಯನ್ನರಲ್ಲಿ ಹೆಚ್ಚುತ್ತಿರುವ ಹಸಿವು ಸಾವಿನ ವೇಗವನ್ನು ಹೆಚ್ಚಿಸುವ ಹಂತವನ್ನು ದಾಟಿದೆ ಎಂದು ನೆರವು ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿ ಹೇಳುತ್ತಾರೆ. ಮಾರ್ಚ್‌ನಿಂದ ಇಸ್ರೇಲ್‌ನ ದಿಗ್ಬಂಧನದ ಅಡಿಯಲ್ಲಿ ಮಕ್ಕಳು, ಸಾಮಾನ್ಯವಾಗಿ ಅತ್ಯಂತ ದುರ್ಬಲರು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ವಯಸ್ಕರು ಸಹ ಬಲಿಯಾಗುತ್ತಿದ್ದಾರೆ.

ಕಳೆದ ಮೂರು ವಾರಗಳಲ್ಲಿ, 28 ವಯಸ್ಕರು ಮತ್ತು 20 ಮಕ್ಕಳು ಸೇರಿದಂತೆ ಕನಿಷ್ಠ 48 ಜನರು ಅಪೌಷ್ಟಿಕತೆಗೆ ಸಂಬಂಧಿಸಿದ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಸಚಿವಾಲಯದ ಪ್ರಕಾರ, 2025 ರ ಹಿಂದಿನ ಐದು ತಿಂಗಳುಗಳಲ್ಲಿ ಸಾವನ್ನಪ್ಪಿದ 10 ಮಕ್ಕಳಿಗಿಂತ ಈ ಸಂಖ್ಯೆ ಹೆಚ್ಚಾಗಿದೆ.

ವಿಶ್ವಸಂಸ್ಥೆಯು ಇದೇ ರೀತಿಯ ಸಂಖ್ಯೆಗಳನ್ನು ವರದಿ ಮಾಡಿದೆ. 2025 ರಲ್ಲಿ ಅಪೌಷ್ಟಿಕತೆಗೆ ಸಂಬಂಧಿಸಿದ ಕಾರಣಗಳಿಂದ 5 ವರ್ಷದೊಳಗಿನ 21 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ. ಜುಲೈನಲ್ಲಿ ಕನಿಷ್ಠ 13 ಮಕ್ಕಳ ಸಾವುಗಳು ವರದಿಯಾಗಿವೆ ಎಂದು ವಿಶ್ವಸಂಸ್ಥೆಯ ಮಾನವೀಯ ಕಚೇರಿಯಾದ ಒಸಿಎಚ್‌ಎ ಗುರುವಾರ ತಿಳಿಸಿದೆ. ಈ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ.

“ಮಾನವರು ಕ್ಯಾಲೋರಿ ಕೊರತೆಯೊಂದಿಗೆ ಬದುಕಲು ಚೆನ್ನಾಗಿ ಬೆಳೆದಿದ್ದಾರೆ. ಆದರೆ, ಇಲ್ಲಿಯವರೆಗೆ ಮಾತ್ರ” ಎಂದು ಮೆಡ್‌ಗ್ಲೋಬಲ್‌ನ ಸಹ-ಸಂಸ್ಥಾಪಕ ಮತ್ತು ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಎರಡು ಬಾರಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಮಕ್ಕಳ ತಜ್ಞ ಡಾ. ಜಾನ್ ಕಹ್ಲರ್ ಹೇಳಿದರು. “ಜನಸಂಖ್ಯೆಯ ಒಂದು ಭಾಗವು ತಮ್ಮ ಮಿತಿಗಳನ್ನು ತಲುಪಿರುವ ರೇಖೆಯನ್ನು ನಾವು ದಾಟಿದ್ದೇವೆ ಎಂದು ತೋರುತ್ತದೆ. ಇದು ಜನಸಂಖ್ಯಾ ಸಾವಿನ ಸುರುಳಿಯ ಆರಂಭ” ಎಂದು ಅವರು ಹೇಳಿದ್ದಾರೆ.

ಸುಮಾರು 100,000 ಮಹಿಳೆಯರು ಮತ್ತು ಮಕ್ಕಳಿಗೆ ಅಪೌಷ್ಟಿಕತೆಗೆ ತುರ್ತಾಗಿ ಚಿಕಿತ್ಸೆಯ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಹೇಳುತ್ತದೆ. ವೈದ್ಯಕೀಯ ಕಾರ್ಯಕರ್ತರು ತಮ್ಮಲ್ಲಿ ಅನೇಕ ಪ್ರಮುಖ ಚಿಕಿತ್ಸೆಗಳು ಮತ್ತು ಔಷಧಿಗಳು ಖಾಲಿಯಾಗಿವೆ ಎಂದು ಹೇಳುತ್ತಾರೆ.

ಗಾಜಾ ನಗರದ ಶಾತಿ ನಿರಾಶ್ರಿತರ ಶಿಬಿರದಲ್ಲಿ, 2 ವರ್ಷದ ಯಾಜನ್ ಅಬು ಫುಲ್‌ನ ತಾಯಿ ನೈಮಾ ತನ್ನ ಕೃಶ ದೇಹವನ್ನು ತೋರಿಸಲು ತನ್ನ ಬಟ್ಟೆಗಳನ್ನು ಬಿಚ್ಚಿದಳು. ಮಗುವಿನ ಕಶೇರುಖಂಡಗಳು, ಪಕ್ಕೆಲುಬುಗಳು ಮತ್ತು ಭುಜ ಹೊರಚಾಚಿದ್ದವು. ಅದರ ಪೃಷ್ಠಗಳು ಸುಕ್ಕುಗಟ್ಟಿದ್ದವು; ಮುಖವು ಭಾವಶೂನ್ಯವಾಗಿತ್ತು.

ತೆಳ್ಳಗಿದ್ದ ಮಗುವಿನ ತಂದೆ ಮಹಮೂದ್ ಕೂಡ ಅದನ್ನು ಹಲವಾರು ಬಾರಿ ಆಸ್ಪತ್ರೆಗೆ ಕರೆದೊಯ್ದರು ಎಂದು ಹೇಳಿದರು. ವೈದ್ಯರು ಅವನಿಗೆ ಆಹಾರ ನೀಡಬೇಕೆಂದು ಹೇಳುತ್ತಾರೆ. “ನಾನು ವೈದ್ಯರಿಗೆ ಹೇಳುತ್ತೇನೆ, ನೀವೇ ನೋಡುತ್ತೀರಿ, ಆಹಾರವಿಲ್ಲ,” ಎಂದು ಅವರು ಹೇಳಿದರು.

ಗರ್ಭಿಣಿಯಾಗಿರುವ ನೈಮಾ ಊಟವನ್ನು ತಯಾರಿಸಿದರು; ಅವರು $9 ಗೆ ಖರೀದಿಸಿದ ಎರಡು ಬದನೆಕಾಯಿಗಳನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ ತಿನ್ನುತ್ತಾರೆ.

ವಯಸ್ಕರ ಸಾವು

ಹಸಿವು ಮೊದಲು ದುರ್ಬಲರನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ: ಮಕ್ಕಳು ಮತ್ತು ಆರೋಗ್ಯ ಸಮಸ್ಯೆಗಳಿರುವ ವಯಸ್ಕರು ಸಹ ಬಲಿಯಾಗುತ್ತಿದ್ದಾರೆ.

ಗುರುವಾರ, ಹಸಿವಿನ ಚಿಹ್ನೆಗಳನ್ನು ಹೊಂದಿರುವ ವಯಸ್ಕ ಪುರುಷ ಮತ್ತು ಮಹಿಳೆಯ ಶವಗಳನ್ನು ಗಾಜಾ ನಗರದ ಶಿಫಾ ಆಸ್ಪತ್ರೆಗೆ ತರಲಾಯಿತು ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸೆಲ್ಮಿಯಾ ಹೇಳಿದರು. ಒಬ್ಬರು ಮಧುಮೇಹದಿಂದ ಬಳಲುತ್ತಿದ್ದರು, ಇನ್ನೊಬ್ಬರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಅವರು ಪೋಷಕಾಂಶಗಳ ತೀವ್ರ ಕೊರತೆ, ಗ್ಯಾಸ್ಟ್ರಿಕ್ ಅರೆಸ್ಟ್ ಮತ್ತು ಅಪೌಷ್ಟಿಕತೆಯಿಂದ ರಕ್ತಹೀನತೆ ಕಾರಣ ಎಂದು ಹೇಳಿದರು.

“ಮೃತಪಟ್ಟ ಅನೇಕ ವಯಸ್ಕರು ಮಧುಮೇಹ ಅಥವಾ ಹೃದಯ ಅಥವಾ ಮೂತ್ರಪಿಂಡದ ತೊಂದರೆಯಂತಹ ಕೆಲವು ರೀತಿಯ ಗಂಭೀರ ಸ್ಥಿತಿಯನ್ನು ಹೊಂದಿದ್ದರು. ಈ ರೋಗಗಳು ಆಹಾರ ಮತ್ತು ಔಷಧವನ್ನು ಹೊಂದಿದ್ದರೆ ಸಾವನ್ನಪ್ಪುವುದಿಲ್ಲ” ಎಂದು ಅಬು ಸೆಲ್ಮಿಯಾ ಹೇಳಿದರು.

ರಷ್ಯಾದ ಅಮುರ್‌ನಲ್ಲಿ ಪ್ರಯಾಣಿಕ ವಿಮಾನ ಅಪಘಾತ; ಸಿಬ್ಬಂದಿ ಸೇರಿದಂತೆ 49ಕ್ಕೂ ಹೆಚ್ಚು ಜನ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...