Homeಅಂಕಣಗಳುಕಳೆದುಹೋದ ದಿನಗಳು - 18: ಗುಂಡೂರಾವ್ ಸರ್ಕಾರದ ವಿರುದ್ಧ ಪ್ರತಿಭಟನೆ

ಕಳೆದುಹೋದ ದಿನಗಳು – 18: ಗುಂಡೂರಾವ್ ಸರ್ಕಾರದ ವಿರುದ್ಧ ಪ್ರತಿಭಟನೆ

ಮುಖ್ಯಮಂತ್ರಿಗಳ ಆಪ್ತರೆಂದು ಕೆಲವೇ ಸಮಯದ ಹಿಂದೆ ಗುರುತಿಸಲ್ಪಟ್ಟಿದ್ದ ಗಣಪಯ್ಯ ಅದೇ ಮುಖ್ಯಮಂತ್ರಿಯ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

- Advertisement -
- Advertisement -

ಕರ್ನಾಟಕದಲ್ಲಿ ಹಲವು ರಾಜಕೀಯ ಸ್ಥಿತ್ಯಂತರಗಳಾದವು. ಇಂದಿರಾಗಾಂಧಿ ಮತ್ತು ದೇವರಾಜ ಅರಸರು  ರಾಜಕೀಯವಾಗಿ ವಿರೋಧಿಗಳಾಗಿದ್ದರು. ರಾಜ್ಯ ರಾಜಕಾರಣದಲ್ಲಿ ಧೂಮಕೇತುವಿನಂತೆ ಗುಂಡೂರಾಯರ ಸರ್ಕಾರ ಬಂದಿತ್ತು.

ಗಣಪಯ್ಯನವರ ರೈತಪರ ಕೆಲಸಗಳು ಮುಂದುವರೆದಿದ್ದವು. ಭಾರತದ ರೈತ ಒಕ್ಕೂಟದ ಅಡಿಯಲ್ಲಿ ಅವರು ಅನೇಕ ಕಡೆಗಳಲ್ಲಿ ರೈತಯವಕರನ್ನು ಸಂಘಟಿಸಿದ್ದರು. ಸಕಲೇಶಪುರದಲ್ಲಿ ಜಾನೇಕರೆ ಮೋಹನ್ ಎಂಬವರು ಸಕ್ರಿಯರಾಗಿದ್ದರು. ಮುಂದೆ ಅವರು ಕರ್ನಾಟಕ ರಾಜ್ಯ ರೈತ ಸಂಘದ ನಾಯಕರಾದರು. ಹೊಂಬಾಳೆ ಎಂಬ ರೈತ ಗೀತೆಗಳ ಕ್ಯಾಸೆಟ್‌ಅನ್ನು ಹೊರತಂದವರೂ ಇವರೇ. ಅದರಲ್ಲಿನ  ಹಿ.ಶಿ.ರಾಮಚಂದ್ರೇಗೌಡ ಅವರ ರೈತ ಹೋರಾಟದ ಗೀತೆಗಳನ್ನು ಖ್ಯಾತಗಾಯಕ ಯುವರಾಜ್ ಹಾಡಿದ್ದರು. ಒಂದೆರಡು ಹಾಡುಗಳನ್ನು ಸಿ.ಅಶ್ವತ್ ಹಾಡಿದ್ದರು. ಈ ಹಾಡುಗಳು ಅಂದು ರೈತ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಹೊಂಬಾಳೆ ಕ್ಯಾಸೆಟ್ ನ ವಿವರಗಳು

ಆ ಸಮಯದಲ್ಲೇ ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟದಿಂದ ಸಕಲೇಶಪುರ ತಾಲ್ಲೂಕಿನಲ್ಲಿ ಏಲಕ್ಕಿ ಬೆಳೆ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು. ಅದಕ್ಕಾಗಿ ಕಾಫಿ ಬೋರ್ಡಿನಿಂದ ಓಂಕಾರಪ್ಪ ಎಂಬ ಒಬ್ಬರು ಅಧಿಕಾರಿಯನ್ನು ಎರವಲು ಸೇವೆಯಾಗಿ ಪಡೆದಿದ್ದರು. ಸಾಮಾನ್ಯವಾಗಿ ಖಾಲಿಯೇ ಇರುತ್ತಿದ್ದ ಪೂರ್ಣಿಮಾ ಎಸ್ಟೇಟ್ ಬಂಗಲೆಯಲ್ಲಿ ಅವರ ವಾಸ. ಅವರು ಒಬ್ಬರೇ ವಾಸವಿದ್ದುದರಿಂದ ನಾನು ರಾತ್ರಿಗೆ ಅಲ್ಲಿ ಹೋಗಿ ಉಳಿಯುತ್ತಿದ್ದೆ. ಓಂಕಾರಪ್ಪ ಸ್ನೇಹಜೀವಿ, ನಮ್ಮ ನಾಟಕದ ರಿಹರ್ಸಲ್‌ಗಳನ್ನು ಅಲ್ಲಿಯೇ ಮಾಡುತ್ತಿದ್ದೆವು. ಒಂದು ಹೊಸದಾಗಿ ಕೊಂಡಿದ್ದ ಟೇಪ್ ರೆಕಾರ್ಡ್‌ರ್ ಒಂದು ಅವರಲ್ಲಿತ್ತು. ನಮ್ಮ ನಾಟಕದ ರಿಹರ್ಸಲ್‌ಗೆ ಬಳಸಲು ಅದನ್ನು ನಮಗೆ ಕೊಡುತ್ತಿದ್ದರು.

ಈ ಏಲಕ್ಕಿ ಅಭಿವೃದ್ಧಿ ಯೋಜನೆಯ ಹಿಂದೆ ರವೀಂದ್ರನಾಥರು ಇದ್ದರು ಮತ್ತು ಅದರ ಕೆಲಸದಲ್ಲಿ ಅವರು ಹೆಚ್ಚು ಓಡಾಡುತ್ತಿದ್ದುದರಿಂದ ನಾಲ್ಕೈದು ಕಡೆ ಡೈರಿಗಳಿಗೆ ಭೇಟಿ ನೀಡುವ ಕೆಲಸವೂ ನನಗೆ ಸೇರಿತು. ಅದರ ಓಡಾಟಕ್ಕೆ ನನಗೊಂದು ಸೈಕಲ್ ಕೊಡಿಸಿದರು.

ಆ ಕಾಲದಲ್ಲಿ ಓಡಾಡಲು ಸೈಕಲ್ ಸಿಕ್ಕಿದ್ದು, ನನಗೊಂದು ಹೆಲಿಕಾಪ್ಟರ್ ಸಿಕ್ಕಿದಂತಾಗಿತ್ತು.

ನಮ್ಮ ಪಕ್ಕದ ಗಾಣದಹೊಳೆ ಗ್ರಾಮದಲ್ಲಿ ಮಿತ್ರ ರೈತ ಯುವಕ ಸಂಘ ಎಂಬ ಸಂಘವನ್ನು ಭಾರತ ರೈತ ಒಕ್ಕೂಟದ ಅಂಗ ಸಂಸ್ಥೆಯಾಗಿ ಗಣಪಯ್ಯ ಸ್ಥಾಪಿಸಿದರು. ಗಾಣದಹೊಳೆಯ ಮೋಟೇಗೌಡರ ಮಗ ಮಂಜುನಾಥ್ ಅವರು ಅದರ ಅಧ್ಯಕ್ಷರಾಗಿದ್ದರು.

ಹೊಂಬಾಳೆ ಕ್ಯಾಸೆಟ್ ನ ವಿವರಗಳು

ಗಣಪಯ್ಯನವರೇ ಒಂದು ದಿನ ನನ್ನನ್ನು ಕರೆದು “ನಿನಿಗೆ ಹೇಗೂ ಹತ್ತಿರದಲ್ಲಿ ಉಂಟು. ನೀನು ಅಲ್ಲಿ ಸೇರಿಕೊ” ಎಂದರು. ಹೇಗೂ ಓಡಾಟಕ್ಕೆ ಸೈಕಲ್ ಇತ್ತು! ನಾನು ಮಿತ್ರ ಯುವಕ ಸಂಘದ ಸದಸ್ಯನೂ ಆಗಿ ಕೆಲಕಾಲದ ನಂತರ ಕಾರ್ಯದರ್ಶಿಯಾಗಿ ಭಡ್ತಿ ಹೊಂದಿದೆ.

ಆ ಸಂಘದಲ್ಲಿ ಗಾಣದಹೊಳೆ ಮತ್ತು ರಕ್ಷಿದಿ ಮತ್ತು ಸುತ್ತ ಹಲವು ಗ್ರಾಮಗಳ ಅನೇಕ ಯುವಕರು ಇದ್ದೆವು. ಅಲ್ಲದೆ ಸಕಲೇಶಪುರದ ರೋಟರಿ ಸಂಸ್ಥೆಗಳಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ವಾಸುದೇವ ಶರ್ಮ, ಎಂ.ಜಿ. ರಾಧಾಕೃಷ್ಣ ಮುಂತಾದವರೆಲ್ಲ ಇದ್ದರು.

ಮಿತ್ರ ರೈತ ಯುವಕ ಸಂಘದ ಮೂಲಕ ನಾವು ಕ್ರೀಡಾ ಕೂಟಗಳಲ್ಲಿ ಭಾಗವಹಿಸುವುದು, ಗಿಡಗಳನ್ನು ನೆಡುವುದೂ, ಆರೋಗ್ಯ ಕ್ರಮಗಳನ್ನು ಮಾಡುವುದೂ ಮಾಡುತ್ತಿದ್ದೆವು. ಕೆಲವರು ಗಣಪಯ್ಯನವರ ಜೊತೆ ರೈತರ ಸಭೆಗಳಿಗೂ ಹೋಗುತ್ತಿದ್ದರು.

ನಂತರ ಸಂಘಕ್ಕೊಂದು ಕಟ್ಟಡ ಕಟ್ಟಿಕೊಳ್ಳಬೇಕೆಂದು ತೀರ್ಮಾನಿಸಿ ಅದಕ್ಕಾಗಿ ಹಣ ಸಂಗ್ರಹ ಮಾಡಲು ಒಂದು ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಿದೆವು. ಸ್ವಲ್ಪ ಹಣ ಸಂಗ್ರಹವಾದ ಮೇಲೆ ಒಂದು ಕಟ್ಟಡವನ್ನು ಕಟ್ಟಲು ರಸ್ತೆ ಪಕ್ಕದಲ್ಲಿ ಒಂದು ಸರ್ಕಾರಿ ಸ್ಥಳವನ್ನು ಆಯ್ಕೆ ಮಾಡಿದೆವು. ಆದರೆ ಆ ಸ್ಥಳಕ್ಕೆ ಪಕ್ಕದವರೊಬ್ಬರ ತಕರಾರು ಪ್ರಾರಂಭವಾಗಿ ನಂತರ ಕೆಲವರು ರಾಜಕೀಯದ ವ್ಯಕ್ತಿಗಳಿಂದಲೂ ವಿರೋಧ ಬಂತು.

ಅದೇ ಸಮಯದಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಗುಂಡೂರಾಯರು, ಹಾರ್ಲೆ ಎಸ್ಟೇಟಿಗೆ ಬಂದು ಉಳಿದರು. ಆಗ ನಾವೆಲ್ಲ ಸೇರಿ ಗಣಪಯ್ಯನವರಲ್ಲಿ ಹೇಳಿ, ಗುಂಡೂರಾಯರಿಂದ ನಾವು ಯೋಜಿಸಿಕೊಂಡಿದ್ದ ಸ್ಥಳದಲ್ಲಿ ಗುದ್ದಲಿ ಪೂಜೆ ಮಾಡಿಸಿ, ಶಂಕುಸ್ಥಾಪನೆ ಮಾಡಿಸಿದೆವು. ನಂತರ ಆ ಕೆಲವರ ವಿರೋಧ ನಿಂತು ಹೋಯಿತು. ಮುಂದೆ ಕಾರಣಾಂತರದಿಂದ ಯುವಕ ಸಂಘದ ಕಟ್ಟಡ ನಿರ್ಮಾಣ ಆಗಲಿಲ್ಲ.

ಹಾರ್ಲೆಗೆ ಬಂದು ಉಳಿದ ಗುಂಡೂರಾಯರು, ಗಣಪಯ್ಯನವರು ಸಾಕಮ್ಮನವರ ತೋಟದಲ್ಲಿದ್ದ ಕಾಲದ ಹಲವಾರು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದರು.

ಸುತ್ತಮುತ್ತಲಿನ ಗ್ರಾಮಗಳ ಜನರು ಮತ್ತು ಮುಖ್ಯವಾಗಿ ಹಾರ್ಲೆಯ ಕೂಲಿ ಕಾರ್ಮಿಕರು ಸೇರಿ ಆ ದಾರಿಯಲ್ಲಿ ಬಸ್ ಸಂಚಾರದ ವ್ಯವಸ್ಥೆ ಮಾಡಿಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡರು. ಗುಂಡೂರಾಯರು ತಮ್ಮ ಎಂದಿನ ಶೈಲಿಯಂತೆ ಕೂಡಲೇ ಸಕಲೇಶಪುರದಿಂದ ನಡಹಳ್ಳಿಯವರೆಗೆ ಬೆಳಗ್ಗೆ ಮತ್ತು ಸಂಜೆ ಬಸ್ ಸಂಚಾರದ ವ್ಯವಸ್ಥೆಗೆ ಅಲ್ಲೇ ಆದೇಶ ನೀಡಿದರು. ಅಂದು ಪ್ರಾರಂಭವಾದ ನಡಹಳ್ಳಿ ಬಸ್ ಸಂಚಾರ ಈಗ ಹೆಚ್ಚಾಗಿ ಪ್ರತಿದಿನ ನಾಲ್ಕೈದು ಸಂಚಾರ ಮಾಡುತ್ತಿದೆಯಲ್ಲದೆ ಮುಂದಿನ ಮಲ್ಲೇಗದ್ದೆ ಗ್ರಾಮದವರೆಗೂ ಹೋಗುತ್ತಿದೆ.

ಗುಂಡೂರಾಯರನ್ನು ಗಣಪಯ್ಯನವರು ಅಗಲಟ್ಟಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಆ ಕಾಲದಲ್ಲಿ ಅಲ್ಲಿ ರಕ್ಷಿದಿ ಬಾರೆ ಎಂಬ ದೀಣೆಯು ಸುಮಾರು ನೂರು ಹೆಕ್ಟೇರ್‌ಗಳಷ್ಟು ಏನೂ ಬೆಳೆಯದೆ ಬೋಳು ದೀಣೆಯಾಗಿತ್ತು. ಅಲ್ಲಿ ಹುಲ್ಲು ಕೂಡಾ ಚೆನ್ನಾಗಿ ಬೆಳೆಯುತ್ತಿರಲಿಲ್ಲ. ಆ ದೀಣೆಯ ಮೇಲೇ ಗುಂಡೂರಾಯರ ಸಾರ್ವಜನಿಕ ಸಭೆಯನ್ನು ಏರ್ಪಡಿಸಿ, ದೀಣೆಯಲ್ಲಿ ಮರಗಿಡ ನೆಡಿಸುವ ಯೋಜನೆಯನ್ನು ಗಣಪಯ್ಯನವರು ಮುಂದಿಟ್ಟರು. ಆಗ ಗುಂಡೂರಾಯರು ಮರಗಿಡ ನೆಡುವ ಜೊತೆಯಲ್ಲಿ ಹಾರ್ಲೆಯ ಪಾರ್ಕಿನಂತೆ ಇಲ್ಲೂ ಒಂದು ಈಜು ಕೊಳ, ಉದ್ಯಾನಗಳನ್ನೂ ನಿರ್ಮಾಣ ಮಾಡುವ ಯೋಜನೆ ತಯಾರಿಸಿ ಎಂದು ಅಧಿಕಾರಿಗಳಿಗೆ ಅಲ್ಲೇ ಸೂಚಿಸಿದರು.

ಆ ಸಭೆಯಲ್ಲಿಯೇ ಕೆಲವರು ಅದನ್ನು ವಿರೋಧಿಸಿ, ಇಲ್ಲಿ ಮರಗಿಡ ನೆಡಬಾರದೆಂದು ಈ ಸ್ಥಳ ದನ ಮೇಯಲು ಬೇಕೆಂದೂ ಅರ್ಜಿ ನೀಡಿದರು.

ಹಾರ್ಲೆಯಲ್ಲಿ ಒಂದು ದಿನ ಉಳಿದಿದ್ದ ಗುಂಡೂರಾಯರು, ಗಣಪಯ್ಯನವರ ಕೆಲವು ಸಾರ್ವಜನಿಕ ಕೆಲಸಗಳಿಗೆ ಮಂಜೂರಾತಿ ನೀಡಿ ಹೊರಡುವಾಗ ಹಾರ್ಲೆಯ “ಜ್ಞಾನ ಮಂದಿರ”ವನ್ನು ನೋಡಿ ವಿವರಗಳನ್ನು ತಿಳಿದು. ತಮ್ಮ ಸರ್ಕಾರದ ವಯಸ್ಕರ ಶಿಕ್ಷಣ ಕಾರ್ಯಕ್ರಮದ ಒಂದು ಯೋಜನೆಗೆ “ಜ್ಞಾನ ಮಂದಿರ” ಕಾರ್ಯಕ್ರಮ ಎಂದು ಹೆಸರಿಟ್ಟರು.

ಹಾರ್ಲೆ ಎಸ್ಟೇಟ್ ನ ಜ್ಞಾನ ಮಂದಿರ

ಇಷ್ಟೆಲ್ಲ ಆದ ನಂತರ ಮುಂದಿನ ಕೆಲವೇ ದಿನಗಳಲ್ಲಿ ಗಣಪಯ್ಯನವರೇ ಗುಂಡೂರಾಯರ ವಿರುದ್ಧ ಬೀದಿಗಿಳಿಯುವಂತಾಯಿತು. ಗುಂಡೂರಾಯರ ಸರ್ಕಾರ ನರಗುಂದ ನವಲುಗುಂದಗಳಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿತು. ಮಿತ್ರ ಯುವಕ ಸಂಘದ ವತಿಯಿಂದ ಸಕಲೇಶಪುರದಲ್ಲಿ ಗುಂಡೂರಾಯರ ಸರ್ಕಾರದ ವಿರುದ್ಧ ಮೆರವಣಿಗೆಯನ್ನು ಯೋಜಿಸಿದೆವು. ಇಡೀ ದಿನ ಕುಳಿತು ಪ್ಲಕಾರ್ಡುಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಬರೆದೆವು. ಒಂದು ಕರಪತ್ರವೂ ತಯಾರಾಯಿತು. ಪ್ರತಿಭಟನೆಯಲ್ಲಿ ನಾವೇ ಮೊದಲಿಗರಾಗಬೇಕೆಂಬ ಹುಮ್ಮಸ್ಸಿನಲ್ಲಿ ಅವಸರದಲ್ಲಿ ಕೂಡಲೇ ಕಾರ್ಯಕ್ರಮ ಹಮ್ಮಿಕೊಂಡೆವು.

ಕರ್ನಾಟಕ ರಾಜ್ಯ ರೈತ ಸಂಘವಿನ್ನೂ ನಮ್ಮಲ್ಲಿ ಪ್ರಬಲವಾಗಿ ಬೆಳೆದಿರಲಿಲ್ಲ.

ನಮ್ಮ ಪ್ರತಿಭಟನೆಯ ಕಾರ್ಯಕ್ರಮ ಸುದ್ದಿಯಾಗಿತ್ತು. ಪ್ರತಿಭಟನೆಗೆ ಪೋಲೀಸರು ಅನುಮತಿಯನ್ನು ನಿರಾಕರಿಸಿದರು. ಆದರೆ ನಾವು ಒಪ್ಪಲು ತಯಾರಿರಲಿಲ್ಲ. ಇದು ನರಗುಂದ ಗೋಲಿಬಾರ್‌ಗೆ ತಕ್ಷಣದ ಮತ್ತು ಮೊದಲ ಪ್ರತಿಭಟನೆಯಾಗಿತ್ತು.

ಹಾಸನದಿಂದ ದೊಡ್ಡ ಸಂಖ್ಯೆಯಲ್ಲಿ ಮೀಸಲು ಪೋಲಿಸರನ್ನು ಕರೆಸಿದ್ದರು. ನಾವು ಮೆರವಣಿಗೆ ಹೊರಡದಂತೆ ಪೋಲಿಸರು ತಡೆದರು.

ಆಗ ಗಣಪಯ್ಯನವರು ಮೆರವಣಿಗೆಯ ಮುಂದೆ ಬಂದು ನಿಂತು ತಾವೇ ಮೆರವಣಿಗೆಯನ್ನು ಮುನ್ನಡೆಸಿದರು. ಮುಖ್ಯಮಂತ್ರಿಗಳ ಆಪ್ತರೆಂದು ಕೆಲವೇ ಸಮಯದ ಹಿಂದೆ ಗುರುತಿಸಲ್ಪಟ್ಟಿದ್ದ ಗಣಪಯ್ಯ ಅದೇ ಮುಖ್ಯಮಂತ್ರಿಯ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿ ಇದ್ದುದನ್ನು ಕಂಡು ಅವರಿಗೂ ತಬ್ಬಿಬ್ಬಾಯಿತು.

ಮೆರವಣಿಗೆಯ ಎರಡೂ ಕಡೆ ಸಾಲುಗಟ್ಟಿದ ಪೋಲಿಸರು ಮದ್ಯದಲ್ಲಿ ನಮ್ಮ ಮೆರವಣಿಗೆ ನಗರದಲ್ಲಿ ಸಾಗಿತು. ಹೆಚ್ಚೂ ಕಡಿಮೆ ಪ್ರತಿಭಟನಕಾರರಷ್ಟೇ ಜನ ಪೋಲಿಸರಿದ್ದರು.

ಮರುದಿನ ಹಾಸನದ ಪತ್ರಿಕೆಗಳಲ್ಲಿ “ಅಪಾರ ಸಂಖ್ಯೆಯಲ್ಲಿದ್ದ ಪೋಲಿಸರು ಮೆರವಣಿಗೆಯೊಂದಿಗೆ ಸಾಗಿದರು” ಎಂದು ವರದಿಯಾಯಿತು.

ಆ ವರ್ಷ ನಾವು ಗಾಣದಹೊಳೆ ಯುವಕಸಂಘದ ವತಿಯಿಂದ ಆಗಸ್ಟ್ ಹದಿನೈದರಂದು ಕರಾಳ ದಿನವನ್ನು ಆಚರಿಸಿದೆವು.

ಮಿತ್ರ ಯುವಕ ಸಂಘದ ಚಟುವಟಿಕೆಯಿಂದ ಇದ್ದ ಕಾಲದಲ್ಲಿ ನಮ್ಮ ಕಾರ್ಮಿಕ ಮಿತ್ರ ಸಂಘದ ವತಿಯಿಂದ ಗಾಣದಹೊಳೆಯಲ್ಲಿ “ಸತ್ಯಕ್ಕೆ ಸಾವಿಲ್ಲ”, ನಮ್ಮ ಎಲುಬುಗಳ ಮೇಲೆ” ಮುಂತಾದ ನಾಟಕ ಪ್ರದರ್ಶನವನ್ನೂ ಮಾಡಿದೆವು.

ಗಾಣದ ಹೊಳೆಯ ಪಕ್ಕದ ಹೆಬ್ಬಸಾಲೆ ಗ್ರಾಮಕ್ಕೆ ಸೇರಿದ ಮೇಲಳ್ಳಿ ದೀಣೆಯಲ್ಲಿ ಒಂದು ಸಮತಟ್ಟಾದ ಮೈದಾನವಿದೆ. ಅಲ್ಲಿ ಮಿತ್ರ ಯುವಕ ಸಂಘದ ಯುವಕರು ಕ್ರಿಕೆಟ್ ಆಡುತ್ತಿದ್ದರು. ಕೆಲವು ಕ್ರೀಡಾಕೂಟಗಳೂ ಅಲ್ಲಿ ನಡೆಯುತ್ತಿದ್ದವು. ಆ ಸ್ಥಳ ಒತ್ತುವರಿಯಾಗದಂತೆ ಹಾಗೂ ಬೇರೆ ಯಾವುದಕ್ಕೂ ಬಳಕೆಯಾಗದಂತೆ ಆಟದ ಬಯಲಾಗಿಯೇ ಉಳಿಸುವಲ್ಲಿ ಮಿತ್ರ ಯುವಕ ಸಂಘದ ಪರಿಶ್ರಮವಿತ್ತು. ಈಗ ಮಿತ್ರ ಯುವಕ ಸಂಘ ಇಲ್ಲದಿದ್ದರೂ, ಸ್ಥಳೀಯ ಯುವಕರು ತಮ್ಮದೇ ಒಂದು ಸಂಘಟನೆಯನ್ನು ಕಟ್ಟಿಕೊಂಡು ಆ ಆಟದ ಬಯಲನ್ನು ಅಭಿವೃದ್ಧಿಪಡಿಸಿ ಉಳಿಸಿಕೊಂಡು ಬರುತ್ತಿದ್ದಾರೆ. ಒಂದು ಸಮುದಾಯ ಭವನವನ್ನೂ ನಿರ್ಮಿಸಿದ್ದಾರೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...