Homeನ್ಯಾಯ ಪಥಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ - ಯೋಗೇಶ್ ಮಾಸ್ಟರ್

ಪುಟಕ್ಕಿಟ್ಟ ಪುಟಗಳು: ಶುಭ ಸಂದೇಶ ಹೊಸ ಒಡಂಬಡಿಕೆ – ಯೋಗೇಶ್ ಮಾಸ್ಟರ್

ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು.

- Advertisement -
- Advertisement -

ಅತ್ಯಂತ ಹೆಚ್ಚು ಮುದ್ರಣವಾದ ಪುಸ್ತಕ ಬೈಬಲ್. ಅದರ ಪ್ರತಿಗಳಷ್ಟು ಕ್ರೈಸ್ತರಿರದಿದ್ದರೂ, ಧರ್ಮಪ್ರಚಾರದ ಕರ್ತವ್ಯದಿಂದ ಪಾದ್ರಿಗಳು ಭಾಷೆಗಳನ್ನು ಕಲಿತು ಬೈಬಲ್ಲನ್ನೂ ಮತ್ತು ಕ್ರಿಸ್ತನನ್ನೂ ಜನರಿಗೆ ಪರಿಚಯಿಸಿದರು. ಇದರ ಅಡ್ಡಪರಿಣಾಮಗಳಾಗಿ ನಿಘಂಟುಗಳು ಪ್ರಾದೇಶಿಕ ಭಾಷೆಗಳಿಗೆ ಲಭ್ಯವಾದವು ಮತ್ತು ಅಕ್ಷರವಂಚಿತ ವರ್ಗದವರು ಸುಶಿಕ್ಷಿತರಾದರು. ಕನ್ನಡಕ್ಕೆ ಕಿಟ್ಟಲ್ ನಿಘಂಟನ್ನು ನೀಡಿದಂತೆ ಕ್ರೈಸ್ತರು ಬಹಳಷ್ಟು ಭಾಷೆಗಳಿಗೆ ನಿಘಂಟುಗಳನ್ನು ನೀಡಿದರು.

ಶುಭ ಸಂದೇಶವೆಂದರೆ ಕ್ರಿಸ್ತನ ಜೀವನ ಮತ್ತು ಅವನ ಆಪ್ತ ಶಿಷ್ಯರು ತಮ್ಮ ಗುರುವಿನ ಶುಭ ಸಂದೇಶವನ್ನು ಪ್ರಚಾರ ಮಾಡಿದ ಕತೆ. ಇದನ್ನು ಒಡಂಬಡಿಕೆ ಅಥವಾ ಒಪ್ಪಂದ ಎನ್ನುವುದು. ಏಕೆಂದರೆ, ದೇವರು ಮಾನವರೊಂದಿಗೆ ಮಾಡಿಕೊಂಡಿರುವ ಹೊಸ ಒಪ್ಪಂದ ಎಂದು. ಮನುಷ್ಯರ ಬಾಳ್ವೆಗೆ ಬೇಕಾದ ಸತ್ಯವನ್ನೇ ದೇವರೆಂದು, ಅದರ ಮಗನಾಗಿ ಗುರುತಿಸಿಕೊಂಡ ಯೇಸು ತನ್ನಪ್ಪನ ಒಲವ ಪಡೆಯಲು ತಾನೇ ಬೆಳಕು ಮತ್ತು ಮಾರ್ಗವಾದ.

ಯೇಸು ದೇವಾಲಯಗಳಲ್ಲಿನ ವ್ಯಾಪಾರಿ ಧೋರಣೆಗಳನ್ನು ಖಂಡಿಸಿ ಆ್ಯಂಗ್ರೀ ಯಂಗ್‍ಮ್ಯಾನ್‍ನಂತೆ ಅಲ್ಲಿ ವಸ್ತುಗಳನ್ನೆಲ್ಲಾ ಚೆಲ್ಲಾಡಿ, ಚಾಟಿ ಬೀಸಿ ಕೂಗಾಡುತ್ತಾನೆ “ದೇವಾಲಯವನ್ನು ಸಂತೆಯನ್ನಾಗಿಸಬೇಡಿ” ಎಂದು. ರೋಮ್ ಚಕ್ರಾಧಿಪತ್ಯದ ಅಂಕೆಯಲ್ಲಿದ್ದ ಯೆಹೂದಿಗಳು ಮೌಢ್ಯ ಮತ್ತು ಸಂಪ್ರದಾಯಗಳಲ್ಲಿ ಬಿದ್ದಿದ್ದಾರೆಂದು ಅರ್ಥವಾಗಿ ಯೇಸುವೂ ಕಲ್ಯಾಣದ ಬಸವಣ್ಣನಂತೆ ಸಮಾಜದಿಂದ ಬಹಿಷ್ಕೃತರೊಂದಿಗೆ, ತಳವರ್ಗದವರೊಂದಿಗೆಯೇ ಸೇರಿ ಕಣ್ಣು ತೆರೆಸಲು ಪ್ರಾರಂಭಿಸುತ್ತಾನೆ.

ಅವನ ಬೆಟ್ಟದ ಮೇಲಿನ ಬೋಧನೆ ಮತ್ತು ಸಂದರ್ಭಾನುಸಾರ ನೀಡುವ ತಿಳುವಳಿಕೆ ಈಗೂ ಅತ್ಯದ್ಭುತ ಮತ್ತು ಸೂಕ್ಷ್ಮ ಒಳನೋಟಗಳು. ತಲೆ ಮೇಲೆ ಆಣೆ ಮಾಡಿದರೆ ಕಪ್ಪು ಕೂದಲನ್ನು ಬೆಳ್ಳಗಾಗಿಸದು, ಬಿಳಿಯದನ್ನು ಕಪ್ಪಾಗಿಸದು ಎನ್ನುತ್ತಾ ಮೌಢ್ಯವನ್ನು ಧಿಕ್ಕರಿಸಿದರೆ, ದೇವರಿಗೆ ನೈವೇದ್ಯ ನೀಡುವಾಗ ಮೊದಲು ನಿನ್ನ ನೆರೆಯವನೊಂದಿಗಿನ ವ್ಯಾಜ್ಯವನ್ನು ಬಗೆಹರಿಸಿ ಆರಾಧನೆ ಸಲ್ಲಿಸು ಎನ್ನುತ್ತಾ ದೇವರಿಗಿಂತ ಮುಖ್ಯ ಮಾನವನೊಂದಿಗಿನ ನಿನ್ನ ಸಂಬಂಧ ಎಂದು ಸೌಹಾರ್ದತೆ ತೋರುತ್ತಾನೆ. ಹಾದರದವಳಿಗೆ ಕಲ್ಲೊಗೆಯುವ ಮಂದಿಗೆ ತಪ್ಪು ಮಾಡದವರು ಮೊದಲು ಕಲ್ಲು ಬೀರಲಿ ಎಂದು ಸಮಾಜದ ಸೋಗಲಾಡಿ ನೈತಿಕತೆಯನ್ನು ಪ್ರಶ್ನಿಸುತ್ತಾನೆ. ಭೀತಿಯ ದೇವರನ್ನು ಪ್ರೀತಿಯ ತಂದೆಯನ್ನಾಗಿಸಿ ಸಾಂಪ್ರದಾಯಕ ಪರಿಕಲ್ಪನೆಯನ್ನು ತೊಲಗಿಸಿಬಿಡುತ್ತಾನೆ. ಬದುಕು ಮತ್ತು ಬೋಧನೆಗಳ ಪೂರ್ತಿ ಪ್ರೀತಿ, ಸಾಮರಸ್ಯ, ಕ್ಷಮೆ, ಆತ್ಮಾವಲೋಕನ, ಪಶ್ಚಾತ್ತಾಪದಂತಹ ಮೌಲ್ಯಗಳನ್ನೇ ಪ್ರತಿಪಾದಿಸುತ್ತಾನೆ.

ಮ್ಯಾಥ್ಯೂ, ಮಾರ್ಕ್, ಲೂಕ್ ಮತ್ತು ಜಾನ್ ಅವರದ್ದನ್ನೇ ಪ್ರಧಾನವಾಗಿ ಬೈಬಲ್ಲಿನಲ್ಲಿ ಹೊಂದಿದ್ದರೂ ಅವರ ಬರವಣಿಗೆಗಳಲ್ಲಿಯೇ ವ್ಯತ್ಯಾಸಗಳಿವೆ. ಯೇಸುವಿನ ಕಾಲದಲ್ಲಿ ಬದುಕಿದ್ದ ಜೋಸೆಫಸ್‍ನ ಬರವಣಿಗೆಗಳನ್ನು ಇವರು ತೆಗೆದುಕೊಳ್ಳದೇ ಇರುವುದಕ್ಕೆ ಕಾರಣ ಧಾರ್ಮಿಕತೆಯನ್ನು ಗಟ್ಟಿಗೊಳಿಸದೇ ವಾಸ್ತವದ ಶೈಲಿಯಲ್ಲಿರಬಹುದು. ಯೇಸುವೇ ಪವಾಡಗಳನ್ನು ಅಲ್ಲಗಳೆಯುವಾಗ ಬೈಬಲ್ಲು ಪವಾಡಗಳಿಂದಲೇ ತುಂಬಿವೆ. ಉತ್ಪ್ರೇಕ್ಷೆ ಮತ್ತು ರೂಪಕಗಳಲ್ಲಿ ನಾವು ಯೇಸುವನ್ನು ಗುರುತಿಸಬೇಕು.

ಕರ್ನಾಟಕದಲ್ಲಿ ಬಸವಣ್ಣನ ಮರಣಾನಂತರ ಶರಣರು ಚೆಲ್ಲಾಪಿಲ್ಲಿಯಾದಂತೆ ಕ್ರಿಸ್ತನ ಮರಣಾನಂತರವೂ ಅವನ ಶಿಷ್ಯರು ಚೆಲ್ಲಾಪಿಲ್ಲಿಯಾಗಿದ್ದರು. ಬಸವನ ಕುರುಹನ್ನು ಉಳಿಸಿ ವಿಜೃಂಭಿಸಲು ಪ್ರಾರಂಭದ ಬಸವಪ್ರೇಮಿಗಳು ಪುರಾಣದ ಮೊರೆ ಹೋದಂತೆ ಪ್ರಾರಂಭದ ಕ್ರೈಸ್ತರು ಕ್ರಿಸ್ತನ ಮಹತ್ವವನ್ನು ವಿಜೃಂಭಿಸಲು ಪವಾಡಗಳ ಮೊರೆ ಹೋದರು. ಗುಟ್ಟಾಗಿ ಒಟ್ಟಾಗುತ್ತಾ ಧರ್ಮಸಭೆಗಳನ್ನು ಮಾಡುತ್ತಾ ಹೊರಗಿನ ಸಮಾಜಕ್ಕೆ ಬಂದಿದ್ದು ಅವರ ತ್ಯಾಗ ಬಲಿದಾನಗಳ ಕತೆಯೇ.

ಕ್ರಿಸ್ತನೆಂಬ ಕ್ರಾಂತಿಯೋಗಿ ತನ್ನ ಜೀವಿತಾವಧಿಯಲ್ಲಿ ಪ್ರೀತಿ, ಕರುಣೆ, ಸೌಹಾರ್ದ, ಕ್ಷಮೆ, ಪಶ್ಚಾತ್ತಾಪ, ಸಮಾನತೆ ಇವುಗಳೆಲ್ಲವನ್ನೂ ಹೊಂದಿರುವ ವ್ಯಕ್ತಿಗಳನ್ನು ರೂಪಿಸಲು, ಸಮಾಜವನ್ನು ಕಟ್ಟಲು ಯತ್ನಿಸಿದ್ದೇ ಪವಾಡ. ಇದೇ ಶುಭ ಸಂದೇಶದ ಪುಟಗಳಲ್ಲಿ ಪುಟಕ್ಕಿಟ್ಟಂತೆ ಹೊಳೆಯುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...