Homeಅಂಕಣಗಳುದುಸ್ಥಿತಿಯಲ್ಲಿ ಬದುಕುತ್ತಿರುವ ಗುಬ್ಬಿ ವೀರಣ್ಣನ ಸೊಸೆ ರಂಗ ಕಲಾವಿದೆ ಶಾಂತಮ್ಮ

ದುಸ್ಥಿತಿಯಲ್ಲಿ ಬದುಕುತ್ತಿರುವ ಗುಬ್ಬಿ ವೀರಣ್ಣನ ಸೊಸೆ ರಂಗ ಕಲಾವಿದೆ ಶಾಂತಮ್ಮ

- Advertisement -
- Advertisement -
ಎಲೆಮರೆ-22

ರಾಮನಗರದ ಜಾನಪದ ಲೋಕ ಆಯೋಜಿಸಿದ್ದ ಲೋಕೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಹೋಗಿದ್ದೆ. ಭಾಷಣ ಮುಗಿಸಿಕೊಂಡು ಊರಿಗೆ ಮರಳುವಾಗ, ರಾಮನಗರದ ಪ್ರಜಾವಾಣಿ ಪತ್ರಕರ್ತ ರುದ್ರೇಶ್ ನಿಮಗೆ ಒಬ್ಬರನ್ನು ಪರಿಚಯಿಸುತ್ತೇನೆ ಬನ್ನಿ ಎಂದರು. ಯಾರು ಏನು ಎಂದು ಕೇಳದೆ ಸರಿ ಆಗಲಿ ಎಂದು ಆತನ ಬೈಕ್ ಏರಿ ಹೊರಟೆ. ಸಂದಿಗೊಂದಿ ಸುತ್ತಿಕೊಂಡು ಒಂದು ಪುಟ್ಟ ಮನೆಗೆ ಕರೆತಂದರು. ಇಳಿವಯಸ್ಸಿನ ಅಜ್ಜಿಯೊಬ್ಬರು ಬಂದು ಗೇಟ್ ತೆಗೆದು ಒಳ ಕರೆದರು. ಅದೊಂದು ಪುಟ್ಟ ಮನೆ. `ಬಾ ಮಗನೆ ಕೂತುಕೋ..’ ಎಂದು ಕುಡಿಯಲು ನೀರು ಕೊಟ್ಟರು. ಆಗ ರುದ್ರೇಶ ಇವರು ಶಾಂತಮ್ಮ ಅಂತ. ಗುಬ್ಬಿ ವೀರಣ್ಣನ ಮಗ ನಟ ಜಿ.ವಿ.ಚನ್ನಬಸಪ್ಪ ಅವರ ಮಡದಿ, ಇಂದು ಯಾರ ಆಸರೆಯೂ ಇಲ್ಲದಂತೆ ಬದುಕುತ್ತಿದ್ದಾರೆ ಎಂದು ಹೇಳಿದರು. ಶಾಂತಮ್ಮ ತಮ್ಮ ವೃತ್ತಿಜೀವನದ ಫೋಟೋಗಳ ಆಲ್ಬಮ್ ಮುಂದಿಟ್ಟರು. ನಾನು ಈ ಫೋಟೋಗಳನ್ನು ನೋಡುತ್ತಾಹೋದಂತೆ ಅಲ್ಲಲ್ಲಿ ತಡೆದು ಶಾಂತಮ್ಮ ಒಂದೊಂದು ಫೋಟೋದ ಸಂದರ್ಭವನ್ನು ವಿವರಿಸತೊಡಗಿದರು. ಮುಖದಲ್ಲಿ ಒಮ್ಮೊಮ್ಮೆ ಮಿಂಚು, ಮತ್ತೊಮ್ಮೆ ಕಡುದುಃಖ. ಹಳೆಯ ನೆನಪುಗಳು ಉತ್ಸಾಹ ಹೆಚ್ಚಿಸಿ ಒಮ್ಮೆ ಜೋರು ಮಾತಾಡಿದರೆ, ಮತ್ತೊಮ್ಮೆ ಪಿಸುದನಿಯಲ್ಲಿ ಅದನ್ನೆಲ್ಲಾ ಹೇಳಬಾರದು ಮರಿ ಎಂದು ಕಣ್ಣಲ್ಲಿ ನೀರು ತರುತ್ತಿದ್ದರು. ಒಂದು ಗಂಟೆಯ ಮಾತುಕತೆ ನನ್ನನ್ನು ಎಪ್ಪತ್ತು ಎಂಬತ್ತರ ದಶಕದ ರಂಗಭೂಮಿಯ ವಾತಾವರಣವನ್ನು ಕಣ್ಮುಂದೆ ಸೃಷ್ಟಿಸಿತು. ಸಾವಿರಾರು ನಾಟಕಗಳಲ್ಲಿ ಅಭಿನಯಿಸಿ ದುಸ್ಥಿತಿಯಲ್ಲಿ ಬದುಕುತ್ತಿರುವ ಶಾಂತಮ್ಮನ ಬಗೆಗೆ ದುಃಖವೂ ಆಯಿತು.

ಒಮ್ಮೆ ಪ್ರಜಾಮತ ಎನ್ನುವ ಪತ್ರಿಕೆಯಲ್ಲಿ ವಾದಿರಾಜ, ಜಯಂತಿ, ರಾಧಾ-ರುಕ್ಮಿಣಿ (ನಟಿ ಶೃತಿ ಅವರ ತಾಯಿ) ಯವರ ಫೋಟೋ ಪ್ರಕಟವಾಗಿರುತ್ತದೆ. ಪುಟ್ಟ ಹುಡುಗಿ ಪೇಪರ್ ನೋಡುತ್ತಾ ಈ ನಟನಟಿಯರ ಚಿತ್ರ ನೋಡುತ್ತಾಳೆ. ನಾನು ಇವರ ಹಾಗೆ ನಟಿಯಾಗಬೇಕೆಂದು ಕನಸು ಕಾಣುತ್ತಾಳೆ. ಈ ಕನಸಿನ ದಾರಿ ಹಿಡಿದು 1964 ರಲ್ಲಿ 13ನೇ ವಯಸ್ಸಿನಲ್ಲಿ ಲವ-ಕುಶ ನಾಟಕದಲ್ಲಿ ಬಾಲನಟಿಯಾಗಿ ಆ ಹುಡುಗಿ ನಟಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಹುಡುಗಿಯೇ ಮುಂದೆ ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿ 40 ವರ್ಷಗಳ ಕಾಲ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾಳೆ. ಆ ಪುಟ್ಟ ಹುಡುಗಿಯೇ ಇಂದು ರಾಮನಗರದಲ್ಲಿ ಒಂಟಿಜೀವನ ನಡೆಸುತ್ತಿರುವ ರಂಗನಟಿ ಶಾಂತಮ್ಮ.

ರಾಮನಗರದ ಬಳಿ ಇರುವ ಪುಟ್ಟ ಊರು ಅರ್ಚಕರಳ್ಳಿಯಲ್ಲಿ ನಿಂಗಯ್ಯ ಮತ್ತು ಪುಟ್ಟಮ್ಮನ ಮಗಳಾಗಿ ಶಾಂತಮ್ಮ 1951 ರಲ್ಲಿ ಜನಿಸಿದರು. `ಮೊದಲ ನಾಟಕ ಲವ-ಕುಶದಲ್ಲಿ ಬಾಲ ನೃತ್ಯಕಲಾವಿದೆಯಾಗಿ ಅಭಿನಯಿಸಿದಾಗ ಮೊದಲು ನನಗೆ ಬಣ್ಣ ಹಚ್ಚಿದ್ದು ರಾಧಮ್ಮ. ನನ್ನ ಮೊದಲ ಸಂಬಳ ಹದಿನೈದು ರೂಪಾಯಿ. ಅಂದು ಆರಂಭವಾದ ಕಲಾ ಬದುಕು ಸುದೀರ್ಘ ನಲವತ್ತೆರಡು ವರ್ಷ ನಾಟಕ ಕಂಪನಿ ಬಿಟ್ಟರೆ ಬೇರೆ ಲೋಕವೆ ಗೊತ್ತಿರಲಿಲ್ಲ’ ಎನ್ನುತ್ತಾರೆ. ಮೈಸೂರು ಮಹಾರಾಜರ ಸಮ್ಮುಖದಲ್ಲಿ `ಸಾಹುಕಾರ’ ನಾಟಕದಲ್ಲಿ ಬಾಲಕಲಾವಿದೆಯಾಗಿ ನರ್ತನ ಮಾಡಿದ್ದು ಹಾಗೂ ವರನಟ ಡಾ. ರಾಜಕುಮಾರ್ ಅವರಿಂದ ನೆನಪಿನ ಕಾಣಿಕೆ ಸ್ವೀಕರಿಸಿದ್ದು ನನ್ನ ಜೀವನದ ಮರೆಯಲಾರದ ಕ್ಷಣಗಳು’ ಎನ್ನುತ್ತಾರೆ.

ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ನಾಟಕದಲ್ಲಿ ಪಾರ್ವತಿಯಾಗಿ, ಸಂಸಾರನೌಕೆಯಲ್ಲಿ ಗಿರಿಜೆಯಾಗಿ, ಆರ್. ನಾಗರತ್ನಮ್ಮ ಅವರ ಶ್ರೀಕೃಷ್ಣ ಗಾರುಡಿಯಲ್ಲಿ ಸಹದೇವನ ಪಾತ್ರ, ಮುದುಕನ ಮದುವೆಯಲ್ಲಿ ಕಾವೇರಿ, ಕಲ್ಯಾಣಿ, ಗೋಮುಖ ವ್ಯಾಘ್ರದಲ್ಲಿ ತುಳಸಿ, ಚನ್ನಪ್ಪ ಚನ್ನೇಗೌಡ ಪಾತ್ರದಲ್ಲಿ ಪಾರ್ವತಿ, ಶ್ರೀಕೃಷ್ಣ ಲೀಲೆಯ ಲಲಿತ, ಸುಂದರಿ, ಶರಣ ಬಸವೇಶ್ವರ ನಾಟಕದ ಗಂಗಾಂಬಿಕೆ, ಸಾಹುಕಾರ ನಾಟಕದ ಇಂದುಮತಿ, ಅಣ್ಣ ತಮ್ಮ ನಾಟಕದಲ್ಲಿ ಹಾಸ್ಯ ಕಲಾವಿದೆಯಾಗಿ ಲಕ್ಷ್ಮಿ, ಶೋಭಾ ಪಾತ್ರ, ಲವ-ಕುಶ ನಾಟಕದಲ್ಲಿ ಸೀತೆಯಾಗಿ, ಹೀಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಭಕ್ತಿ ಪ್ರಧಾನ ಎಲ್ಲಾ ಬಗೆಯ ನಾಟಕಗಳಲ್ಲಿ ಎಲ್ಲಾ ಬಗೆಯ ಪಾತ್ರಗಳಿಗೆ ಶಾಂತಮ್ಮ ಜೀವ ತುಂಬಿ ನಟಿಸಿದರು.

`ರಾಜ್ಯದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದೇನೆ. ಒಮ್ಮೊಮ್ಮೆ ದಿನಕ್ಕೆ ಮೂರು ಬಾರಿ ಪ್ರದರ್ಶನ ನೀಡಿರುವೆ. ಗುಬ್ಬಿ ವೀರಣ್ಣ ಅವರ ಹಿರಿಯ ಪುತ್ರಿ ಜಿ.ವಿ. ಸುವರ್ಣಮ್ಮ ಅವರೊಂದಿಗೆ `ಪಾದುಕ ಪಟ್ಟಾಭಿಷೇಕ’ದಲ್ಲಿ ಅವರು ಮಂಥರೆಯಾಗಿ ನಾನು ಸೀತೆ, ಕೈಕೆಯಾಗಿ ನಟಿಸಿದ್ದೆ. ಯೋಗಾನರಸಿಂಹಮೂರ್ತಿ ಅವರ ಕಂಪನಿಯಲ್ಲಿ `ಬೀದಿ ಕಾಮಣ್ಣ’ ನಾಟಕದಲ್ಲಿ ಎಂ.ಎಸ್.ಸತ್ಯ ಅವರ ಜೋಡಿಯಾಗಿ, ಸದಾರಮೆ ನಾಟಕದಲ್ಲಿ ನರಸಿಂಹರಾಜು, ಶಾಂತಕುಮಾರ ರಾಯರು, ಜಿ.ವಿ.ಚನ್ನಬಸಪ್ಪ, ಜಿ.ವಿ.ರಾಜಣ್ಣ (ಗುಬ್ಬಿ ವೀರಣ್ಣ ಅವರ ಪುತ್ರರು), ನಟ ರಾಮಕೃಷ್ಣ, ಚೋಮನದುಡಿ ವಾಸುದೇವ, ಧೀರೇಂದ್ರ ಗೋಪಾಲ್, ಸುಂದರ ಕೃಷ್ಣ ಅರಸ್, ಸುಧೀರ್, ರಾಜಾನಂದ್, ಗಾಜಿನ ಮನೆ ನಾಟಕದಲ್ಲಿ ಚಿಂದೋಡಿ ಲೀಲಾ, ಉಮಾಶ್ರೀ, ರಾಧಾ-ರುಕ್ಮಿಣಿ, ಶ್ರೀಲಲಿತಾ ಸೇರಿದಂತೆ ಹಲವರೊಂದಿಗೆ ಅಭಿನಯಿಸಿದ್ದೇನೆ’ ಎಂದು ಶಾಂತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಸಾಮಾಜಿಕ ನಾಟಕಗಳಾದ `ವರ ನೋಡಿ ಹೆಣ್ಣು ಕೊಡು’ ನಾಟಕದಲ್ಲಿ ರತ್ನನ ಪಾತ್ರ, `ಚನ್ನಪ್ಪ ಚನ್ನಗೌಡ’ ನಾಟಕದಲ್ಲಿ ಪಾರ್ವತಿ ಪಾತ್ರದಲ್ಲಿ ಶಾಂತಮ್ಮ ತುಂಬಾ ಜನಪ್ರಿಯರಾಗಿದ್ದರು. `ಮೂರು ಬಾರಿ ಅಣ್ಣಾವ್ರನ್ನ ನೋಡಿ ಮಾತಾಡಿಸಿದ್ದೆ. ಫಾರಿನ್‍ಗೆ ಹೋಗಬೇಕಾದ್ರೆ ದಾವಣಗೆರೆ ಕ್ಯಾಂಪಿಗೆ ಬಂದಿದ್ರು, ದೇವತಾ ಮನುಷ್ಯ ಶೂಟಿಂಗ್‍ನಲ್ಲಿ ಹೇಳಿಕಳಿಸಿದ್ರು ಆಗ ನಮ್ಮ ಯಜಮಾನರು ಮತ್ತು ನಾನು ತುಂಬಾ ಹೊತ್ತು ಮಾತಾಡಿದ್ವಿ’ ಎಂದು ಡಾ. ರಾಜಕುಮಾರ್ ಅವರ ಭೇಟಿಯ ನೆನಪುಗಳನ್ನು ಹೇಳುತ್ತಾರೆ. ಯಾವುದೇ ನಾಟಕದಲ್ಲಿ ಇಂತ ಪಾತ್ರ ಮಾಡೋರಿಲ್ಲ ಅಂದ್ರೆ ಸಾಕು ಯಾವುದೇ ಪಾತ್ರವಿರಲಿ ಅದನ್ನು ನಿರ್ವಹಿಸಿ ಸೈ ಅನ್ನಿಸಿಕೊಂಡಿದಿನಿ, ಅಷ್ಟರಮಟ್ಟಿಗೆ ರಂಗಭೂಮಿಯಲ್ಲಿ ನಾನು ಪಳಗಿದ್ದೆ, ಈಗಲೂ ಕೃಷ್ಣ ಲೀಲೆ ನಾಟಕದ ರಾಧೆ ಪಾತ್ರದ ಲಂಗವನ್ನು, ಮಂತ್ರಿಣಿ ಪಾತ್ರದ ಡ್ರೆಸ್ಸುಗಳನ್ನು, ಆಗಿನ ವಿಗ್ಗುಗಳನ್ನು ನೆನಪಿಗಾಗಿ ಕಾಪಾಡಿರುವೆ’ ಎನ್ನುತ್ತಾರೆ.

ನಾಟಕಗಳ ಅಭಿನಯದಲ್ಲಿ ಪರಸ್ಪರರು ಆಕರ್ಷಣೆಯಾಗಿ 1971 ರಲ್ಲಿ ಗುಬ್ಬಿ ವೀರಣ್ಣನ ಮಗ ಜಿ.ವಿ.ಚನ್ನಬಸಪ್ಪ ಅವರನ್ನು ಮದುವೆಯಾದರು. ಇದು ಎರಡನೆ ಮದುವೆಯಾದ ಕಾರಣ ಶಾಂತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಆಗಲಿಲ್ಲ. ಎಲ್ಲರೂ ನನಗೆ ಮೋಸ ಮಾಡಿದರು ಎಂದು ಶಾಂತಮ್ಮ ದುಃಖಿಸುತ್ತಾರೆ. ಈಗಲೂ ಅವಕಾಶ ಸಿಕ್ಕರೆ ನಟಿಸಲು ಸಿದ್ಧ ಎನ್ನುವ ಸ್ವಾಭಿಮಾನಿ ಶಾಂತಮ್ಮ ನಿಜಕ್ಕೂ ಕಡುಕಷ್ಟದಲ್ಲಿ ಬದುಕುತ್ತಿದ್ದಾರೆ. ಪ್ರಜಾವಾಣಿ ಪತ್ರಕರ್ತ ರುದ್ರೇಶ್ ಶಾಂತಮ್ಮಗೆ ಒಂದಷ್ಟು ಆಸರೆಯಾಗಿದ್ದಾರೆ. ತಾಂತ್ರಿಕ ಕಾರಣದಿಂದ ಕಳೆದ ಮೂರು ತಿಂಗಳಿಂದ ಕಲಾವಿದರ ಮಾಸಾಶನವೂ ಬರುತ್ತಿಲ್ಲ. ಈ ವಿಷಯವನ್ನು ಕವಿ ನಾಗೇಂದ್ರ ಪ್ರಸಾದ್ ಅವರ ಗಮನಕ್ಕೆ ತಂದಾಗ ಶಿವಾರ್ಜುನ ಸಿನೆಮಾದ ನಿರ್ಮಾಪಕ ಶಿವಾರ್ಜುನ ಅವರಿಂದ ಒಂದಷ್ಟು ನೆರವು ಕೊಡಿಸಿದ್ದಾರೆ. ಇಂತಹ ರಂಗಕಲಾವಿದೆಗೆ ನೆರವಾಗುವ ಮನಸ್ಸಿದ್ದವರು ಖಂಡಿತಾ ಸಹಾಯ ಮಾಡಬಹುದು. ಎಲೆಮರೆಕಾಲಂನಲ್ಲಿ ಈ ತೆರನಾಗಿ ಸಹಾಯವನ್ನು ಯಾರಿಗೂ ಕೋರಿಲ್ಲ, ಆದರೆ ಶಾಂತಮ್ಮನ ದುಸ್ಥಿತಿಗೆ `ನ್ಯಾಯಪಥ’ವೂ ನೆರವಿಗೆ ಬರಬೇಕೆನ್ನುವ ಕಾರಣಕ್ಕೆ ಶಾಂತಮ್ಮನ ಬ್ಯಾಂಕ್ ವಿವರ ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ಕೊಡುತ್ತಿದ್ದೇವೆ. ಈ ಇಳಿಗಾಲದಲ್ಲಿ ಮನಸ್ಸಿದ್ದವರು ಶಾಂತಮ್ಮನಿಗೆ ನೆರವಾಗಿ.

ಬ್ಯಾಂಕ್ ಖಾತೆ ವಿವರ:
Name: N.Shanthamma
A/C: 0593101026583
IFSC: CNRB0000593
Bank: CANARA BANK
Mobil: 9845643106

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...