Homeಅಂಕಣಗಳುದುಸ್ಥಿತಿಯಲ್ಲಿ ಬದುಕುತ್ತಿರುವ ಗುಬ್ಬಿ ವೀರಣ್ಣನ ಸೊಸೆ ರಂಗ ಕಲಾವಿದೆ ಶಾಂತಮ್ಮ

ದುಸ್ಥಿತಿಯಲ್ಲಿ ಬದುಕುತ್ತಿರುವ ಗುಬ್ಬಿ ವೀರಣ್ಣನ ಸೊಸೆ ರಂಗ ಕಲಾವಿದೆ ಶಾಂತಮ್ಮ

- Advertisement -
- Advertisement -
ಎಲೆಮರೆ-22

ರಾಮನಗರದ ಜಾನಪದ ಲೋಕ ಆಯೋಜಿಸಿದ್ದ ಲೋಕೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಹೋಗಿದ್ದೆ. ಭಾಷಣ ಮುಗಿಸಿಕೊಂಡು ಊರಿಗೆ ಮರಳುವಾಗ, ರಾಮನಗರದ ಪ್ರಜಾವಾಣಿ ಪತ್ರಕರ್ತ ರುದ್ರೇಶ್ ನಿಮಗೆ ಒಬ್ಬರನ್ನು ಪರಿಚಯಿಸುತ್ತೇನೆ ಬನ್ನಿ ಎಂದರು. ಯಾರು ಏನು ಎಂದು ಕೇಳದೆ ಸರಿ ಆಗಲಿ ಎಂದು ಆತನ ಬೈಕ್ ಏರಿ ಹೊರಟೆ. ಸಂದಿಗೊಂದಿ ಸುತ್ತಿಕೊಂಡು ಒಂದು ಪುಟ್ಟ ಮನೆಗೆ ಕರೆತಂದರು. ಇಳಿವಯಸ್ಸಿನ ಅಜ್ಜಿಯೊಬ್ಬರು ಬಂದು ಗೇಟ್ ತೆಗೆದು ಒಳ ಕರೆದರು. ಅದೊಂದು ಪುಟ್ಟ ಮನೆ. `ಬಾ ಮಗನೆ ಕೂತುಕೋ..’ ಎಂದು ಕುಡಿಯಲು ನೀರು ಕೊಟ್ಟರು. ಆಗ ರುದ್ರೇಶ ಇವರು ಶಾಂತಮ್ಮ ಅಂತ. ಗುಬ್ಬಿ ವೀರಣ್ಣನ ಮಗ ನಟ ಜಿ.ವಿ.ಚನ್ನಬಸಪ್ಪ ಅವರ ಮಡದಿ, ಇಂದು ಯಾರ ಆಸರೆಯೂ ಇಲ್ಲದಂತೆ ಬದುಕುತ್ತಿದ್ದಾರೆ ಎಂದು ಹೇಳಿದರು. ಶಾಂತಮ್ಮ ತಮ್ಮ ವೃತ್ತಿಜೀವನದ ಫೋಟೋಗಳ ಆಲ್ಬಮ್ ಮುಂದಿಟ್ಟರು. ನಾನು ಈ ಫೋಟೋಗಳನ್ನು ನೋಡುತ್ತಾಹೋದಂತೆ ಅಲ್ಲಲ್ಲಿ ತಡೆದು ಶಾಂತಮ್ಮ ಒಂದೊಂದು ಫೋಟೋದ ಸಂದರ್ಭವನ್ನು ವಿವರಿಸತೊಡಗಿದರು. ಮುಖದಲ್ಲಿ ಒಮ್ಮೊಮ್ಮೆ ಮಿಂಚು, ಮತ್ತೊಮ್ಮೆ ಕಡುದುಃಖ. ಹಳೆಯ ನೆನಪುಗಳು ಉತ್ಸಾಹ ಹೆಚ್ಚಿಸಿ ಒಮ್ಮೆ ಜೋರು ಮಾತಾಡಿದರೆ, ಮತ್ತೊಮ್ಮೆ ಪಿಸುದನಿಯಲ್ಲಿ ಅದನ್ನೆಲ್ಲಾ ಹೇಳಬಾರದು ಮರಿ ಎಂದು ಕಣ್ಣಲ್ಲಿ ನೀರು ತರುತ್ತಿದ್ದರು. ಒಂದು ಗಂಟೆಯ ಮಾತುಕತೆ ನನ್ನನ್ನು ಎಪ್ಪತ್ತು ಎಂಬತ್ತರ ದಶಕದ ರಂಗಭೂಮಿಯ ವಾತಾವರಣವನ್ನು ಕಣ್ಮುಂದೆ ಸೃಷ್ಟಿಸಿತು. ಸಾವಿರಾರು ನಾಟಕಗಳಲ್ಲಿ ಅಭಿನಯಿಸಿ ದುಸ್ಥಿತಿಯಲ್ಲಿ ಬದುಕುತ್ತಿರುವ ಶಾಂತಮ್ಮನ ಬಗೆಗೆ ದುಃಖವೂ ಆಯಿತು.

ಒಮ್ಮೆ ಪ್ರಜಾಮತ ಎನ್ನುವ ಪತ್ರಿಕೆಯಲ್ಲಿ ವಾದಿರಾಜ, ಜಯಂತಿ, ರಾಧಾ-ರುಕ್ಮಿಣಿ (ನಟಿ ಶೃತಿ ಅವರ ತಾಯಿ) ಯವರ ಫೋಟೋ ಪ್ರಕಟವಾಗಿರುತ್ತದೆ. ಪುಟ್ಟ ಹುಡುಗಿ ಪೇಪರ್ ನೋಡುತ್ತಾ ಈ ನಟನಟಿಯರ ಚಿತ್ರ ನೋಡುತ್ತಾಳೆ. ನಾನು ಇವರ ಹಾಗೆ ನಟಿಯಾಗಬೇಕೆಂದು ಕನಸು ಕಾಣುತ್ತಾಳೆ. ಈ ಕನಸಿನ ದಾರಿ ಹಿಡಿದು 1964 ರಲ್ಲಿ 13ನೇ ವಯಸ್ಸಿನಲ್ಲಿ ಲವ-ಕುಶ ನಾಟಕದಲ್ಲಿ ಬಾಲನಟಿಯಾಗಿ ಆ ಹುಡುಗಿ ನಟಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಹುಡುಗಿಯೇ ಮುಂದೆ ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿ 40 ವರ್ಷಗಳ ಕಾಲ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾಳೆ. ಆ ಪುಟ್ಟ ಹುಡುಗಿಯೇ ಇಂದು ರಾಮನಗರದಲ್ಲಿ ಒಂಟಿಜೀವನ ನಡೆಸುತ್ತಿರುವ ರಂಗನಟಿ ಶಾಂತಮ್ಮ.

ರಾಮನಗರದ ಬಳಿ ಇರುವ ಪುಟ್ಟ ಊರು ಅರ್ಚಕರಳ್ಳಿಯಲ್ಲಿ ನಿಂಗಯ್ಯ ಮತ್ತು ಪುಟ್ಟಮ್ಮನ ಮಗಳಾಗಿ ಶಾಂತಮ್ಮ 1951 ರಲ್ಲಿ ಜನಿಸಿದರು. `ಮೊದಲ ನಾಟಕ ಲವ-ಕುಶದಲ್ಲಿ ಬಾಲ ನೃತ್ಯಕಲಾವಿದೆಯಾಗಿ ಅಭಿನಯಿಸಿದಾಗ ಮೊದಲು ನನಗೆ ಬಣ್ಣ ಹಚ್ಚಿದ್ದು ರಾಧಮ್ಮ. ನನ್ನ ಮೊದಲ ಸಂಬಳ ಹದಿನೈದು ರೂಪಾಯಿ. ಅಂದು ಆರಂಭವಾದ ಕಲಾ ಬದುಕು ಸುದೀರ್ಘ ನಲವತ್ತೆರಡು ವರ್ಷ ನಾಟಕ ಕಂಪನಿ ಬಿಟ್ಟರೆ ಬೇರೆ ಲೋಕವೆ ಗೊತ್ತಿರಲಿಲ್ಲ’ ಎನ್ನುತ್ತಾರೆ. ಮೈಸೂರು ಮಹಾರಾಜರ ಸಮ್ಮುಖದಲ್ಲಿ `ಸಾಹುಕಾರ’ ನಾಟಕದಲ್ಲಿ ಬಾಲಕಲಾವಿದೆಯಾಗಿ ನರ್ತನ ಮಾಡಿದ್ದು ಹಾಗೂ ವರನಟ ಡಾ. ರಾಜಕುಮಾರ್ ಅವರಿಂದ ನೆನಪಿನ ಕಾಣಿಕೆ ಸ್ವೀಕರಿಸಿದ್ದು ನನ್ನ ಜೀವನದ ಮರೆಯಲಾರದ ಕ್ಷಣಗಳು’ ಎನ್ನುತ್ತಾರೆ.

ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ನಾಟಕದಲ್ಲಿ ಪಾರ್ವತಿಯಾಗಿ, ಸಂಸಾರನೌಕೆಯಲ್ಲಿ ಗಿರಿಜೆಯಾಗಿ, ಆರ್. ನಾಗರತ್ನಮ್ಮ ಅವರ ಶ್ರೀಕೃಷ್ಣ ಗಾರುಡಿಯಲ್ಲಿ ಸಹದೇವನ ಪಾತ್ರ, ಮುದುಕನ ಮದುವೆಯಲ್ಲಿ ಕಾವೇರಿ, ಕಲ್ಯಾಣಿ, ಗೋಮುಖ ವ್ಯಾಘ್ರದಲ್ಲಿ ತುಳಸಿ, ಚನ್ನಪ್ಪ ಚನ್ನೇಗೌಡ ಪಾತ್ರದಲ್ಲಿ ಪಾರ್ವತಿ, ಶ್ರೀಕೃಷ್ಣ ಲೀಲೆಯ ಲಲಿತ, ಸುಂದರಿ, ಶರಣ ಬಸವೇಶ್ವರ ನಾಟಕದ ಗಂಗಾಂಬಿಕೆ, ಸಾಹುಕಾರ ನಾಟಕದ ಇಂದುಮತಿ, ಅಣ್ಣ ತಮ್ಮ ನಾಟಕದಲ್ಲಿ ಹಾಸ್ಯ ಕಲಾವಿದೆಯಾಗಿ ಲಕ್ಷ್ಮಿ, ಶೋಭಾ ಪಾತ್ರ, ಲವ-ಕುಶ ನಾಟಕದಲ್ಲಿ ಸೀತೆಯಾಗಿ, ಹೀಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಭಕ್ತಿ ಪ್ರಧಾನ ಎಲ್ಲಾ ಬಗೆಯ ನಾಟಕಗಳಲ್ಲಿ ಎಲ್ಲಾ ಬಗೆಯ ಪಾತ್ರಗಳಿಗೆ ಶಾಂತಮ್ಮ ಜೀವ ತುಂಬಿ ನಟಿಸಿದರು.

`ರಾಜ್ಯದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದೇನೆ. ಒಮ್ಮೊಮ್ಮೆ ದಿನಕ್ಕೆ ಮೂರು ಬಾರಿ ಪ್ರದರ್ಶನ ನೀಡಿರುವೆ. ಗುಬ್ಬಿ ವೀರಣ್ಣ ಅವರ ಹಿರಿಯ ಪುತ್ರಿ ಜಿ.ವಿ. ಸುವರ್ಣಮ್ಮ ಅವರೊಂದಿಗೆ `ಪಾದುಕ ಪಟ್ಟಾಭಿಷೇಕ’ದಲ್ಲಿ ಅವರು ಮಂಥರೆಯಾಗಿ ನಾನು ಸೀತೆ, ಕೈಕೆಯಾಗಿ ನಟಿಸಿದ್ದೆ. ಯೋಗಾನರಸಿಂಹಮೂರ್ತಿ ಅವರ ಕಂಪನಿಯಲ್ಲಿ `ಬೀದಿ ಕಾಮಣ್ಣ’ ನಾಟಕದಲ್ಲಿ ಎಂ.ಎಸ್.ಸತ್ಯ ಅವರ ಜೋಡಿಯಾಗಿ, ಸದಾರಮೆ ನಾಟಕದಲ್ಲಿ ನರಸಿಂಹರಾಜು, ಶಾಂತಕುಮಾರ ರಾಯರು, ಜಿ.ವಿ.ಚನ್ನಬಸಪ್ಪ, ಜಿ.ವಿ.ರಾಜಣ್ಣ (ಗುಬ್ಬಿ ವೀರಣ್ಣ ಅವರ ಪುತ್ರರು), ನಟ ರಾಮಕೃಷ್ಣ, ಚೋಮನದುಡಿ ವಾಸುದೇವ, ಧೀರೇಂದ್ರ ಗೋಪಾಲ್, ಸುಂದರ ಕೃಷ್ಣ ಅರಸ್, ಸುಧೀರ್, ರಾಜಾನಂದ್, ಗಾಜಿನ ಮನೆ ನಾಟಕದಲ್ಲಿ ಚಿಂದೋಡಿ ಲೀಲಾ, ಉಮಾಶ್ರೀ, ರಾಧಾ-ರುಕ್ಮಿಣಿ, ಶ್ರೀಲಲಿತಾ ಸೇರಿದಂತೆ ಹಲವರೊಂದಿಗೆ ಅಭಿನಯಿಸಿದ್ದೇನೆ’ ಎಂದು ಶಾಂತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಸಾಮಾಜಿಕ ನಾಟಕಗಳಾದ `ವರ ನೋಡಿ ಹೆಣ್ಣು ಕೊಡು’ ನಾಟಕದಲ್ಲಿ ರತ್ನನ ಪಾತ್ರ, `ಚನ್ನಪ್ಪ ಚನ್ನಗೌಡ’ ನಾಟಕದಲ್ಲಿ ಪಾರ್ವತಿ ಪಾತ್ರದಲ್ಲಿ ಶಾಂತಮ್ಮ ತುಂಬಾ ಜನಪ್ರಿಯರಾಗಿದ್ದರು. `ಮೂರು ಬಾರಿ ಅಣ್ಣಾವ್ರನ್ನ ನೋಡಿ ಮಾತಾಡಿಸಿದ್ದೆ. ಫಾರಿನ್‍ಗೆ ಹೋಗಬೇಕಾದ್ರೆ ದಾವಣಗೆರೆ ಕ್ಯಾಂಪಿಗೆ ಬಂದಿದ್ರು, ದೇವತಾ ಮನುಷ್ಯ ಶೂಟಿಂಗ್‍ನಲ್ಲಿ ಹೇಳಿಕಳಿಸಿದ್ರು ಆಗ ನಮ್ಮ ಯಜಮಾನರು ಮತ್ತು ನಾನು ತುಂಬಾ ಹೊತ್ತು ಮಾತಾಡಿದ್ವಿ’ ಎಂದು ಡಾ. ರಾಜಕುಮಾರ್ ಅವರ ಭೇಟಿಯ ನೆನಪುಗಳನ್ನು ಹೇಳುತ್ತಾರೆ. ಯಾವುದೇ ನಾಟಕದಲ್ಲಿ ಇಂತ ಪಾತ್ರ ಮಾಡೋರಿಲ್ಲ ಅಂದ್ರೆ ಸಾಕು ಯಾವುದೇ ಪಾತ್ರವಿರಲಿ ಅದನ್ನು ನಿರ್ವಹಿಸಿ ಸೈ ಅನ್ನಿಸಿಕೊಂಡಿದಿನಿ, ಅಷ್ಟರಮಟ್ಟಿಗೆ ರಂಗಭೂಮಿಯಲ್ಲಿ ನಾನು ಪಳಗಿದ್ದೆ, ಈಗಲೂ ಕೃಷ್ಣ ಲೀಲೆ ನಾಟಕದ ರಾಧೆ ಪಾತ್ರದ ಲಂಗವನ್ನು, ಮಂತ್ರಿಣಿ ಪಾತ್ರದ ಡ್ರೆಸ್ಸುಗಳನ್ನು, ಆಗಿನ ವಿಗ್ಗುಗಳನ್ನು ನೆನಪಿಗಾಗಿ ಕಾಪಾಡಿರುವೆ’ ಎನ್ನುತ್ತಾರೆ.

ನಾಟಕಗಳ ಅಭಿನಯದಲ್ಲಿ ಪರಸ್ಪರರು ಆಕರ್ಷಣೆಯಾಗಿ 1971 ರಲ್ಲಿ ಗುಬ್ಬಿ ವೀರಣ್ಣನ ಮಗ ಜಿ.ವಿ.ಚನ್ನಬಸಪ್ಪ ಅವರನ್ನು ಮದುವೆಯಾದರು. ಇದು ಎರಡನೆ ಮದುವೆಯಾದ ಕಾರಣ ಶಾಂತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಆಗಲಿಲ್ಲ. ಎಲ್ಲರೂ ನನಗೆ ಮೋಸ ಮಾಡಿದರು ಎಂದು ಶಾಂತಮ್ಮ ದುಃಖಿಸುತ್ತಾರೆ. ಈಗಲೂ ಅವಕಾಶ ಸಿಕ್ಕರೆ ನಟಿಸಲು ಸಿದ್ಧ ಎನ್ನುವ ಸ್ವಾಭಿಮಾನಿ ಶಾಂತಮ್ಮ ನಿಜಕ್ಕೂ ಕಡುಕಷ್ಟದಲ್ಲಿ ಬದುಕುತ್ತಿದ್ದಾರೆ. ಪ್ರಜಾವಾಣಿ ಪತ್ರಕರ್ತ ರುದ್ರೇಶ್ ಶಾಂತಮ್ಮಗೆ ಒಂದಷ್ಟು ಆಸರೆಯಾಗಿದ್ದಾರೆ. ತಾಂತ್ರಿಕ ಕಾರಣದಿಂದ ಕಳೆದ ಮೂರು ತಿಂಗಳಿಂದ ಕಲಾವಿದರ ಮಾಸಾಶನವೂ ಬರುತ್ತಿಲ್ಲ. ಈ ವಿಷಯವನ್ನು ಕವಿ ನಾಗೇಂದ್ರ ಪ್ರಸಾದ್ ಅವರ ಗಮನಕ್ಕೆ ತಂದಾಗ ಶಿವಾರ್ಜುನ ಸಿನೆಮಾದ ನಿರ್ಮಾಪಕ ಶಿವಾರ್ಜುನ ಅವರಿಂದ ಒಂದಷ್ಟು ನೆರವು ಕೊಡಿಸಿದ್ದಾರೆ. ಇಂತಹ ರಂಗಕಲಾವಿದೆಗೆ ನೆರವಾಗುವ ಮನಸ್ಸಿದ್ದವರು ಖಂಡಿತಾ ಸಹಾಯ ಮಾಡಬಹುದು. ಎಲೆಮರೆಕಾಲಂನಲ್ಲಿ ಈ ತೆರನಾಗಿ ಸಹಾಯವನ್ನು ಯಾರಿಗೂ ಕೋರಿಲ್ಲ, ಆದರೆ ಶಾಂತಮ್ಮನ ದುಸ್ಥಿತಿಗೆ `ನ್ಯಾಯಪಥ’ವೂ ನೆರವಿಗೆ ಬರಬೇಕೆನ್ನುವ ಕಾರಣಕ್ಕೆ ಶಾಂತಮ್ಮನ ಬ್ಯಾಂಕ್ ವಿವರ ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ಕೊಡುತ್ತಿದ್ದೇವೆ. ಈ ಇಳಿಗಾಲದಲ್ಲಿ ಮನಸ್ಸಿದ್ದವರು ಶಾಂತಮ್ಮನಿಗೆ ನೆರವಾಗಿ.

ಬ್ಯಾಂಕ್ ಖಾತೆ ವಿವರ:
Name: N.Shanthamma
A/C: 0593101026583
IFSC: CNRB0000593
Bank: CANARA BANK
Mobil: 9845643106

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...