Homeಅಂಕಣಗಳುಊನಾ ಒಂದು ಮಾದರಿಯಾಗಿಬಿಟ್ಟಿದೆಯೆ?

ಊನಾ ಒಂದು ಮಾದರಿಯಾಗಿಬಿಟ್ಟಿದೆಯೆ?

- Advertisement -
- Advertisement -

ಜುಲೈ 11, 2016 ಊನಾ, ಗುಜರಾತ್:
ಬಾಲು ಸರ್ವೈಯಾ, ಅವನ ಇಬ್ಬರು ಪುತ್ರರಾದ ರಮೇಶ್ ಸರ್ವೈಯಾ ಮತ್ತು ವಶರಾಮ್ ಸರ್ವೈಯಾ ಅವರೊಂದಿಗೆ ಕುಂವರ್, ಅಶೋಕ್ ಸರ್ವೈಯಾ, ಮತ್ತು ಬೇಚರ್ ಸರ್ವೈಯಾ ಅವರುಗಳು ತಮ್ಮ ಊರಲ್ಲಿ ಸತ್ತ ಆಕಳ ಚರ್ಮ ಸುಲಿಯುತ್ತಿದ್ದಾಗ ಬಂದ ಗೋರಕ್ಷಕ ಪಡೆಯವರು, ಅವರುಗಳು ಆಕಳನ್ನು ಕೊಂದಿದ್ದು ಎಂದು ಆಪಾದಿಸಿ ಅಲ್ಲಿಂದ ಎತ್ತೊಯ್ಯುತ್ತಾರೆ. ಊನಾ ಪಟ್ಟಣಕ್ಕೆ ಕರೆತಂದು ಒಂದು ದೊಡ್ಡ ವಾಹನಕ್ಕೆ ಅವರನ್ನು ಕಟ್ಟಿ ಹಾಕಿ, ರಾಡ್‍ಗಳಿಂದ ಮನಸೋಇಚ್ಛೆ ಥಳಿಸಲಾಗುತ್ತದೆ. ನೂರಾರು ಜನ ಥಳಿತದ ಈ ದೃಶ್ಯವನ್ನು ನೋಡುತ್ತಾರೆ. ಒಬ್ಬ ತನ್ನ ಮೊಬೈಲಿನ ಕ್ಯಾಮೆರಾದಲ್ಲಿ ದೃಶ್ಯವನ್ನು ಸೆರೆಹಿಡಿಯುತ್ತಾನೆ. ದಲಿತರ ಮೇಲಿನ ಈ ಹಲ್ಲೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಗುಜರಾತಿನ ಮತ್ತು ದೇಶದ ಇತರ ಹೋರಾಟಗಾರರು ಸೇರಿ ಊನಾ ಚಳವಳಿಯನ್ನು ರೂಪಿಸುತ್ತಾರೆ. ಆಗಸ್ಟ್ 15 ರಂದು ಲಕ್ಷಾಂತರ ಜನ ಊನಾದಲ್ಲಿ ಸೇರಿ, ತಾವೆಂದೂ ಇನ್ನು ಮುಂದೆ ಸತ್ತ ದನದ ಚರ್ಮವನ್ನು ಸುಲಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಅದೇ ಚಳವಳಿಯ ರೂವಾರಿಯಾಗಿದ್ದ ಜಿಗ್ನೇಶ್ ಮೇವಾನಿ ಎನ್ನುವ ಯುವಕ ಮುನ್ನೆಲೆಗೆ ಬಂದು ದೇಶಾದ್ಯಂತ ಚಳವಳಿ ಕಟ್ಟಲು ತಿರುಗಾಡುತ್ತಿದ್ದಾನೆ. ಈಗ ಗುಜರಾತಿನ ಶಾಸಕ ಕೂಡ. ಹಲ್ಲೆ ಮಾಡಿದವರನ್ನು ಬಂಧಿಸಿ, 43 ಜನರ ವಿರುದ್ಧ ಪ್ರಕರಣ ನಡೆಯುತ್ತಿದೆ..
ಮೇ 2018, ಶಾಪರ್ ಗ್ರಾಮ, ರಾಜಕೋಟ್ ಜಿಲ್ಲೆ, ಗುಜರಾತ್
ಮುಕೇಶ್ ವಾನಿಯಾ, ಅವನ ಹೆಂಡತಿ ಜಯಾ ಮತ್ತು ಇನ್ನೊಬ್ಬ ಮಹಿಳೆ ಸವಿತಾ, ಈ ಮೂವರು ಬೆಳಗ್ಗೆ 5 ಗಂಟೆಯ ಸುಮಾರಿಗೆ ಎಂದಿನಂತೆ ಅಲ್ಲಿಯ ಕಾರ್ಖಾನೆಯ ಹತ್ತಿರ ಚಿಂದಿ ಆಯಲು ಪ್ರಾರಂಭಿಸಿದ್ದರು. ಆಗ ಅಲ್ಲಿಗೆ ಬಂದ ಕಾರ್ಖಾನೆಯ ಮಾಲೀಕ ಜಯಸುಖ್ ರಾದಾದಿಯ ಮತ್ತು ಅವನ ಸಂಗಡಿಗರು, ಅವರಿಗೆ ಕಾರ್ಖಾನೆಯ ಆವರಣದಲ್ಲಿಯ ಕಸವನ್ನು ತೆಗೆಯಲು ಹೇಳಿದರು. ಆ ಕೆಲಸಕ್ಕೆ ದುಡ್ಡು ತೆಗೆದುಕೊಳ್ಳದೇ ಮಾಡಬೇಕು ಎಂದಿದ್ದಕ್ಕಾಗಿ ಇವರು ಒಪ್ಪಲಿಲ್ಲ. ಇವರು ಕೆಳಜಾತಿಯವರು, ಚಿಂದಿ, ಕಸ ಆಯುವುದು ಅವರ ಕರ್ತವ್ಯ ಎಂದು ವಾದಿಸಿ ಮುಕೇಶನ ಮೇಲೆ ಹಲ್ಲೆ ಮಾಡಲಾರಂಭಿಸಿದರು. ಅಲ್ಲಿಂದ ಅವನ ಹೆಂಡತಿ ಮತ್ತು ಸವಿತಾ ಇಬ್ಬರೂ ಮಹಿಳೆಯರನ್ನು ಅಲ್ಲಿಂದ ಹೊರಗೆ ದಬ್ಬಿದರು. ಕೆಲ ಹೊತ್ತಿನ ನಂತರ ಆ ಇಬ್ಬರೂ ಮಹಿಳೆಯರು ತಮ್ಮ ಹಳ್ಳಿಯ ಕೆಲವು ಜನರೊಂದಿಗೆ ಬಂದಾಗ ಮುಕೇಶ್ ನೆಲದ ಮೇಲೆ ನಿಶ್ಚಲವಾಗಿ ಬಿದ್ದಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅವನು ಆಗಲೇ ಅಸುನೀಗಿದ್ದ.
ಮುಕೇಶನನ್ನು ಒಂದು ಕಂಬಕ್ಕೆ ಕಟ್ಟಿ, ಲೋಹದ ಒಂದು ರಾಡಿನಿಂದ ಒಬ್ಬೊಬ್ಬರಾಗಿ ಥಳಿಸಿದ್ದರು, ಆ ಗುಂಪಿನಲ್ಲಿಯ ಒಬ್ಬ ತುಂಬಾ ಸಂತೋಷದಿಂದಲೇ ಈ ದೃಶ್ಯವನ್ನು ತನ್ನ ಮೊಬೈಲ್‍ನ ಕ್ಯಾಮೆರಾದಲ್ಲಿ ಸೆರೆಹಿಡಿದು, ತನ್ನ ಸ್ನೇಹಿತರಿಗೆ ಕಳಿಸಿದ. ಆ ವಿಡಿಯೋವನ್ನು ಲಕ್ಷಾಂತರ ಜನ ಈಗಾಗಲೇ ನೋಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
25ನೇ ಏಪ್ರಿಲ್ 2018, ಊನಾ, ಗುಜರಾತ್
2016 ಜುಲೈನಲ್ಲಿ ಹಲ್ಲೆಗೀಡಾದ ಸರ್ವೈಯಾ ಕುಟುಂಬದವರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದರು. ಏಪ್ರಿಲ್ 29ರಂದು ಅವರು ಅಧಿಕೃತವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲಿದ್ದರು. ಅದಕ್ಕಾಗಿಯೇ ಇಡೀ ಕುಟುಂಬ ತಯಾರಿಯಲ್ಲಿತ್ತು. ಭಾನುವಾರದ ಕಾರ್ಯಕ್ರಮಕ್ಕಾಗಿ ಕೆಲವು ವಸ್ತುಗಳನ್ನು ಖರೀದಿಸಲು ಅವರು ಸಮೀಪದ ಪಟ್ಟಣವಾದ ಊನಾಗೆ ಬಂದು ಖರೀದಿ ಮಾಡಿ ಹಿಂತಿರುಗುತ್ತಿದ್ದರು. ಬಾಲುಭಾಯಿ, ವಸರಾಮ್ ಮತ್ತಿತರರು ಎಲ್ಲ ವಸ್ತುಗಳೊಂದಿಗೆ ವಾಹನದಲ್ಲಿದ್ದರೆ, ರಮೇಶ್ ಮತ್ತು ಅಶೋಕ್ ಅವರಿಗಿಂತ ಸ್ವಲ್ಪ ಮುಂದೆ ಮೋಟರ್ ಸೈಕಲ್‍ನಲ್ಲಿ ಬರುತ್ತಿದ್ದರು. ಇವರು ಸಮ್ತೇರ್ ಗ್ರಾಮದ ಬಳಿ ಬರುತ್ತಿದ್ದಂತೆ ಎರಡು ವರ್ಷಗಳ ಹಿಂದೆ ಇವರ ಮೇಲೆ ಹಲ್ಲೆ ಮಾಡಿದ್ದ ಕಿರಣ್ ಸಿಂಗ್ ಇವರನ್ನು ನೋಡಿ, ‘ಇವರಿಗೇ ನೋಡು, ನಾವು ಹೊಡೆದಿದ್ದು’ ಎಂದು ತನ್ನ ಸಂಗಡಿಗನಿಗೆ ಹೇಳಿ ಗೇಲಿ ಮಾಡುತ್ತಾ, ರಮೇಶ್ ಮತ್ತು ಅಶೋಕ್ ಅವರನ್ನು ತಡೆಯುತ್ತಾರೆ.. ಅಲ್ಲಿ ಕಿರಣ್ ಸಿಂಗ್ ಇವರಿಬ್ಬರಿಗೂ ಬೆದರಿಕೆ ಹಾಕಿ, ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸುತ್ತಾನೆ. ರಮೇಶ್ ಅವನ ಬೆದರಿಕೆಗೆ ಜಗ್ಗದಿರುವಾಗ ಕಟ್ಟಿಗೆಯ ಸನಿಕೆಯನ್ನು ತೆಗೆದುಕೊಂಡು ಅವನ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ರಮೇಶ್ ಪ್ರತಿರೋಧ ತೋರುತ್ತಾನೆ ಮತ್ತು ಅಷ್ಟರಲ್ಲಿ ಗ್ರಾಮಸ್ಥರು ಬಂದು ಸೇರುವುದರಿಂದ ಕಿರಣ್ ಸಿಂಗ್ ಅವನ ಸಂಗಡಿಗನೊಂದಿಗೆ ಪರಾರಿಯಾಗುತ್ತಾನೆ. ಸರ್ವೈಯಾ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸುತ್ತಾರೆ. ಕಿರಣ್ ಸಿಂಗ್ ಮತ್ತು ಅವನ ಸಂಗಡಿಗ ತಲೆಮರೆಸಿಕೊಳ್ಳುತ್ತಾರೆ.
ಊನಾದ ಘಟನೆಯ ನಂತರ 2016 ರ ಡಿಸೆಂಬರ್ ತಿಂಗಳಲ್ಲಿಯೇ ಊನಾದ 43 ಆರೋಪಿಗಳಲ್ಲಿ 35 ಜನರಿಗೆ ಜಾಮೀನು ಸಿಕ್ಕಿರುತ್ತದೆ. ಆರೋಪಿ ಕಿರಣ್ ಸಿಂಗ್ ಸುಪ್ರೀಮ್ ಕೋರ್ಟಿಗೆ ಹೋಗಿ ತನ್ನನ್ನು ಬಂಧಿಸಬಾರದು ಎನ್ನುವ ಆದೇಶವನ್ನು ತಂದಿದ್ದಾನೆ.
10 ಜೂನ್ 2018, ವಾಕಡಿ ಗ್ರಾಮ, ಜಲಗಾಂವ ಜಿಲ್ಲೆ, ಮಹಾರಾಷ್ಟ್ರ
16 ಮತ್ತು 17 ನೇ ಹದಿವಯಸ್ಸಿನ ಹುಡುಗರು ಜೋಷಿಯವರ ತೋಟದ ಬಾವಿಗೆ ಈಜಲು ಹೋಗಿದ್ದರು. ಆಗ ಅಲ್ಲಿಗೆ ಬಂದ ಈಶ್ವರ್ ಜೋಷಿ ಮತ್ತು ಪಲ್ಹಾದ್ ಲೋಹಾರ್ ಅವರುಗಳು ಈ ಹುಡುಗರನ್ನು ಹಿಡಿದು, ಒಂದೆಡೆಗೆ ಹಾಕಿ, ಬಟ್ಟೆ ಬಿಚ್ಚಿಸಿ ಮನಬಂದಂತೆ ಥಳಿಸಿದರು. ಇಲ್ಲಿಯೂ ಆ ಥಳಿತದ ದೃಶ್ಯವನ್ನು ಮೊಬೈಲ್ ಫೋನಿನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು. ಥಳಿತಕ್ಕೊಳಗಾದ ಹುಡುಗರು ಆದ ಘಟನೆಯ ಬಗ್ಗೆ ಯಾರ ಮುಂದೆಯೂ ಬಾಯಿ ಬಿಚ್ಚಲಿಲ್ಲ. ಎರಡು ದಿನಗಳ ನಂತರ ಥಳಿತದ ವೀಡಿಯೋ ಎಲ್ಲೆಡೆ ಹರಿದಾಡಿ ಅವರ ಪಾಲಕರಿಗೆ ತಲುಪಿದ್ದರಿಂದ ಪ್ರಕರಣ ಬೆಳಕಿಗೆ ಬಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದರು. ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.
ಹೀಗೆ ಕಲೆಹಾಕುತ್ತ ಹೋದರೆ ದಲಿತರ ಮೇಲಿನ ಹಲ್ಲೆಗಳ ಪ್ರಕರಣಕ್ಕೆ ಕೊನೆಯೇ ಇಲ್ಲ. ಈ ಎಲ್ಲಾ ಘಟನೆಗಳಲ್ಲಿ ಹಲ್ಲೆಯ ದೃಶ್ಯವನ್ನು ಸೆರೆಹಿಡಿದದ್ದು ಸಾಮಾನ್ಯವಾಗಿದೆ. ಮತ್ತು ವಿಶೇಷವೆಂದರೆ ಹಲ್ಲೆಕೋರರೇ ಸ್ವತಃ ವಿಡಿಯೋ ಮಾಡಿದ್ದು. ಒಂದು, ಬಹುಶಃ ಅವರಿಗೆ ತಮಗೆ ಯಾವುದೇ ಶಿಕ್ಷೆ ಆಗುವುದಿಲ್ಲ ಎನ್ನುವ ಖಾತ್ರಿ ಇದೆ. ಇನ್ನೊಂದು, ನೋಡಿ ನಾವು ಈ ತರಹ ಹಲ್ಲೆ ಮಾಡುತ್ತಿದ್ದೇವೆ, ಮುಂದೆಯೂ ಮಾಡಲಿದ್ದೇವೆ ಎನ್ನುವ ಸಂದೇಶ ರವಾನಿಸುವ ಉದ್ದೇಶವೂ ಇರಬಹುದು.
ಬಹುಶಃ ಅವರ ಧೋರಣೆಯೇ ಇಂದಿನ ವಾಸ್ತವ ಸತ್ಯವಾಗಿರಬಹುದು.

– ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...