Homeಅಂಕಣಗಳುಊನಾ ಒಂದು ಮಾದರಿಯಾಗಿಬಿಟ್ಟಿದೆಯೆ?

ಊನಾ ಒಂದು ಮಾದರಿಯಾಗಿಬಿಟ್ಟಿದೆಯೆ?

- Advertisement -
- Advertisement -

ಜುಲೈ 11, 2016 ಊನಾ, ಗುಜರಾತ್:
ಬಾಲು ಸರ್ವೈಯಾ, ಅವನ ಇಬ್ಬರು ಪುತ್ರರಾದ ರಮೇಶ್ ಸರ್ವೈಯಾ ಮತ್ತು ವಶರಾಮ್ ಸರ್ವೈಯಾ ಅವರೊಂದಿಗೆ ಕುಂವರ್, ಅಶೋಕ್ ಸರ್ವೈಯಾ, ಮತ್ತು ಬೇಚರ್ ಸರ್ವೈಯಾ ಅವರುಗಳು ತಮ್ಮ ಊರಲ್ಲಿ ಸತ್ತ ಆಕಳ ಚರ್ಮ ಸುಲಿಯುತ್ತಿದ್ದಾಗ ಬಂದ ಗೋರಕ್ಷಕ ಪಡೆಯವರು, ಅವರುಗಳು ಆಕಳನ್ನು ಕೊಂದಿದ್ದು ಎಂದು ಆಪಾದಿಸಿ ಅಲ್ಲಿಂದ ಎತ್ತೊಯ್ಯುತ್ತಾರೆ. ಊನಾ ಪಟ್ಟಣಕ್ಕೆ ಕರೆತಂದು ಒಂದು ದೊಡ್ಡ ವಾಹನಕ್ಕೆ ಅವರನ್ನು ಕಟ್ಟಿ ಹಾಕಿ, ರಾಡ್‍ಗಳಿಂದ ಮನಸೋಇಚ್ಛೆ ಥಳಿಸಲಾಗುತ್ತದೆ. ನೂರಾರು ಜನ ಥಳಿತದ ಈ ದೃಶ್ಯವನ್ನು ನೋಡುತ್ತಾರೆ. ಒಬ್ಬ ತನ್ನ ಮೊಬೈಲಿನ ಕ್ಯಾಮೆರಾದಲ್ಲಿ ದೃಶ್ಯವನ್ನು ಸೆರೆಹಿಡಿಯುತ್ತಾನೆ. ದಲಿತರ ಮೇಲಿನ ಈ ಹಲ್ಲೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಗುಜರಾತಿನ ಮತ್ತು ದೇಶದ ಇತರ ಹೋರಾಟಗಾರರು ಸೇರಿ ಊನಾ ಚಳವಳಿಯನ್ನು ರೂಪಿಸುತ್ತಾರೆ. ಆಗಸ್ಟ್ 15 ರಂದು ಲಕ್ಷಾಂತರ ಜನ ಊನಾದಲ್ಲಿ ಸೇರಿ, ತಾವೆಂದೂ ಇನ್ನು ಮುಂದೆ ಸತ್ತ ದನದ ಚರ್ಮವನ್ನು ಸುಲಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಅದೇ ಚಳವಳಿಯ ರೂವಾರಿಯಾಗಿದ್ದ ಜಿಗ್ನೇಶ್ ಮೇವಾನಿ ಎನ್ನುವ ಯುವಕ ಮುನ್ನೆಲೆಗೆ ಬಂದು ದೇಶಾದ್ಯಂತ ಚಳವಳಿ ಕಟ್ಟಲು ತಿರುಗಾಡುತ್ತಿದ್ದಾನೆ. ಈಗ ಗುಜರಾತಿನ ಶಾಸಕ ಕೂಡ. ಹಲ್ಲೆ ಮಾಡಿದವರನ್ನು ಬಂಧಿಸಿ, 43 ಜನರ ವಿರುದ್ಧ ಪ್ರಕರಣ ನಡೆಯುತ್ತಿದೆ..
ಮೇ 2018, ಶಾಪರ್ ಗ್ರಾಮ, ರಾಜಕೋಟ್ ಜಿಲ್ಲೆ, ಗುಜರಾತ್
ಮುಕೇಶ್ ವಾನಿಯಾ, ಅವನ ಹೆಂಡತಿ ಜಯಾ ಮತ್ತು ಇನ್ನೊಬ್ಬ ಮಹಿಳೆ ಸವಿತಾ, ಈ ಮೂವರು ಬೆಳಗ್ಗೆ 5 ಗಂಟೆಯ ಸುಮಾರಿಗೆ ಎಂದಿನಂತೆ ಅಲ್ಲಿಯ ಕಾರ್ಖಾನೆಯ ಹತ್ತಿರ ಚಿಂದಿ ಆಯಲು ಪ್ರಾರಂಭಿಸಿದ್ದರು. ಆಗ ಅಲ್ಲಿಗೆ ಬಂದ ಕಾರ್ಖಾನೆಯ ಮಾಲೀಕ ಜಯಸುಖ್ ರಾದಾದಿಯ ಮತ್ತು ಅವನ ಸಂಗಡಿಗರು, ಅವರಿಗೆ ಕಾರ್ಖಾನೆಯ ಆವರಣದಲ್ಲಿಯ ಕಸವನ್ನು ತೆಗೆಯಲು ಹೇಳಿದರು. ಆ ಕೆಲಸಕ್ಕೆ ದುಡ್ಡು ತೆಗೆದುಕೊಳ್ಳದೇ ಮಾಡಬೇಕು ಎಂದಿದ್ದಕ್ಕಾಗಿ ಇವರು ಒಪ್ಪಲಿಲ್ಲ. ಇವರು ಕೆಳಜಾತಿಯವರು, ಚಿಂದಿ, ಕಸ ಆಯುವುದು ಅವರ ಕರ್ತವ್ಯ ಎಂದು ವಾದಿಸಿ ಮುಕೇಶನ ಮೇಲೆ ಹಲ್ಲೆ ಮಾಡಲಾರಂಭಿಸಿದರು. ಅಲ್ಲಿಂದ ಅವನ ಹೆಂಡತಿ ಮತ್ತು ಸವಿತಾ ಇಬ್ಬರೂ ಮಹಿಳೆಯರನ್ನು ಅಲ್ಲಿಂದ ಹೊರಗೆ ದಬ್ಬಿದರು. ಕೆಲ ಹೊತ್ತಿನ ನಂತರ ಆ ಇಬ್ಬರೂ ಮಹಿಳೆಯರು ತಮ್ಮ ಹಳ್ಳಿಯ ಕೆಲವು ಜನರೊಂದಿಗೆ ಬಂದಾಗ ಮುಕೇಶ್ ನೆಲದ ಮೇಲೆ ನಿಶ್ಚಲವಾಗಿ ಬಿದ್ದಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅವನು ಆಗಲೇ ಅಸುನೀಗಿದ್ದ.
ಮುಕೇಶನನ್ನು ಒಂದು ಕಂಬಕ್ಕೆ ಕಟ್ಟಿ, ಲೋಹದ ಒಂದು ರಾಡಿನಿಂದ ಒಬ್ಬೊಬ್ಬರಾಗಿ ಥಳಿಸಿದ್ದರು, ಆ ಗುಂಪಿನಲ್ಲಿಯ ಒಬ್ಬ ತುಂಬಾ ಸಂತೋಷದಿಂದಲೇ ಈ ದೃಶ್ಯವನ್ನು ತನ್ನ ಮೊಬೈಲ್‍ನ ಕ್ಯಾಮೆರಾದಲ್ಲಿ ಸೆರೆಹಿಡಿದು, ತನ್ನ ಸ್ನೇಹಿತರಿಗೆ ಕಳಿಸಿದ. ಆ ವಿಡಿಯೋವನ್ನು ಲಕ್ಷಾಂತರ ಜನ ಈಗಾಗಲೇ ನೋಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
25ನೇ ಏಪ್ರಿಲ್ 2018, ಊನಾ, ಗುಜರಾತ್
2016 ಜುಲೈನಲ್ಲಿ ಹಲ್ಲೆಗೀಡಾದ ಸರ್ವೈಯಾ ಕುಟುಂಬದವರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದರು. ಏಪ್ರಿಲ್ 29ರಂದು ಅವರು ಅಧಿಕೃತವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲಿದ್ದರು. ಅದಕ್ಕಾಗಿಯೇ ಇಡೀ ಕುಟುಂಬ ತಯಾರಿಯಲ್ಲಿತ್ತು. ಭಾನುವಾರದ ಕಾರ್ಯಕ್ರಮಕ್ಕಾಗಿ ಕೆಲವು ವಸ್ತುಗಳನ್ನು ಖರೀದಿಸಲು ಅವರು ಸಮೀಪದ ಪಟ್ಟಣವಾದ ಊನಾಗೆ ಬಂದು ಖರೀದಿ ಮಾಡಿ ಹಿಂತಿರುಗುತ್ತಿದ್ದರು. ಬಾಲುಭಾಯಿ, ವಸರಾಮ್ ಮತ್ತಿತರರು ಎಲ್ಲ ವಸ್ತುಗಳೊಂದಿಗೆ ವಾಹನದಲ್ಲಿದ್ದರೆ, ರಮೇಶ್ ಮತ್ತು ಅಶೋಕ್ ಅವರಿಗಿಂತ ಸ್ವಲ್ಪ ಮುಂದೆ ಮೋಟರ್ ಸೈಕಲ್‍ನಲ್ಲಿ ಬರುತ್ತಿದ್ದರು. ಇವರು ಸಮ್ತೇರ್ ಗ್ರಾಮದ ಬಳಿ ಬರುತ್ತಿದ್ದಂತೆ ಎರಡು ವರ್ಷಗಳ ಹಿಂದೆ ಇವರ ಮೇಲೆ ಹಲ್ಲೆ ಮಾಡಿದ್ದ ಕಿರಣ್ ಸಿಂಗ್ ಇವರನ್ನು ನೋಡಿ, ‘ಇವರಿಗೇ ನೋಡು, ನಾವು ಹೊಡೆದಿದ್ದು’ ಎಂದು ತನ್ನ ಸಂಗಡಿಗನಿಗೆ ಹೇಳಿ ಗೇಲಿ ಮಾಡುತ್ತಾ, ರಮೇಶ್ ಮತ್ತು ಅಶೋಕ್ ಅವರನ್ನು ತಡೆಯುತ್ತಾರೆ.. ಅಲ್ಲಿ ಕಿರಣ್ ಸಿಂಗ್ ಇವರಿಬ್ಬರಿಗೂ ಬೆದರಿಕೆ ಹಾಕಿ, ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸುತ್ತಾನೆ. ರಮೇಶ್ ಅವನ ಬೆದರಿಕೆಗೆ ಜಗ್ಗದಿರುವಾಗ ಕಟ್ಟಿಗೆಯ ಸನಿಕೆಯನ್ನು ತೆಗೆದುಕೊಂಡು ಅವನ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ರಮೇಶ್ ಪ್ರತಿರೋಧ ತೋರುತ್ತಾನೆ ಮತ್ತು ಅಷ್ಟರಲ್ಲಿ ಗ್ರಾಮಸ್ಥರು ಬಂದು ಸೇರುವುದರಿಂದ ಕಿರಣ್ ಸಿಂಗ್ ಅವನ ಸಂಗಡಿಗನೊಂದಿಗೆ ಪರಾರಿಯಾಗುತ್ತಾನೆ. ಸರ್ವೈಯಾ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸುತ್ತಾರೆ. ಕಿರಣ್ ಸಿಂಗ್ ಮತ್ತು ಅವನ ಸಂಗಡಿಗ ತಲೆಮರೆಸಿಕೊಳ್ಳುತ್ತಾರೆ.
ಊನಾದ ಘಟನೆಯ ನಂತರ 2016 ರ ಡಿಸೆಂಬರ್ ತಿಂಗಳಲ್ಲಿಯೇ ಊನಾದ 43 ಆರೋಪಿಗಳಲ್ಲಿ 35 ಜನರಿಗೆ ಜಾಮೀನು ಸಿಕ್ಕಿರುತ್ತದೆ. ಆರೋಪಿ ಕಿರಣ್ ಸಿಂಗ್ ಸುಪ್ರೀಮ್ ಕೋರ್ಟಿಗೆ ಹೋಗಿ ತನ್ನನ್ನು ಬಂಧಿಸಬಾರದು ಎನ್ನುವ ಆದೇಶವನ್ನು ತಂದಿದ್ದಾನೆ.
10 ಜೂನ್ 2018, ವಾಕಡಿ ಗ್ರಾಮ, ಜಲಗಾಂವ ಜಿಲ್ಲೆ, ಮಹಾರಾಷ್ಟ್ರ
16 ಮತ್ತು 17 ನೇ ಹದಿವಯಸ್ಸಿನ ಹುಡುಗರು ಜೋಷಿಯವರ ತೋಟದ ಬಾವಿಗೆ ಈಜಲು ಹೋಗಿದ್ದರು. ಆಗ ಅಲ್ಲಿಗೆ ಬಂದ ಈಶ್ವರ್ ಜೋಷಿ ಮತ್ತು ಪಲ್ಹಾದ್ ಲೋಹಾರ್ ಅವರುಗಳು ಈ ಹುಡುಗರನ್ನು ಹಿಡಿದು, ಒಂದೆಡೆಗೆ ಹಾಕಿ, ಬಟ್ಟೆ ಬಿಚ್ಚಿಸಿ ಮನಬಂದಂತೆ ಥಳಿಸಿದರು. ಇಲ್ಲಿಯೂ ಆ ಥಳಿತದ ದೃಶ್ಯವನ್ನು ಮೊಬೈಲ್ ಫೋನಿನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು. ಥಳಿತಕ್ಕೊಳಗಾದ ಹುಡುಗರು ಆದ ಘಟನೆಯ ಬಗ್ಗೆ ಯಾರ ಮುಂದೆಯೂ ಬಾಯಿ ಬಿಚ್ಚಲಿಲ್ಲ. ಎರಡು ದಿನಗಳ ನಂತರ ಥಳಿತದ ವೀಡಿಯೋ ಎಲ್ಲೆಡೆ ಹರಿದಾಡಿ ಅವರ ಪಾಲಕರಿಗೆ ತಲುಪಿದ್ದರಿಂದ ಪ್ರಕರಣ ಬೆಳಕಿಗೆ ಬಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದರು. ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.
ಹೀಗೆ ಕಲೆಹಾಕುತ್ತ ಹೋದರೆ ದಲಿತರ ಮೇಲಿನ ಹಲ್ಲೆಗಳ ಪ್ರಕರಣಕ್ಕೆ ಕೊನೆಯೇ ಇಲ್ಲ. ಈ ಎಲ್ಲಾ ಘಟನೆಗಳಲ್ಲಿ ಹಲ್ಲೆಯ ದೃಶ್ಯವನ್ನು ಸೆರೆಹಿಡಿದದ್ದು ಸಾಮಾನ್ಯವಾಗಿದೆ. ಮತ್ತು ವಿಶೇಷವೆಂದರೆ ಹಲ್ಲೆಕೋರರೇ ಸ್ವತಃ ವಿಡಿಯೋ ಮಾಡಿದ್ದು. ಒಂದು, ಬಹುಶಃ ಅವರಿಗೆ ತಮಗೆ ಯಾವುದೇ ಶಿಕ್ಷೆ ಆಗುವುದಿಲ್ಲ ಎನ್ನುವ ಖಾತ್ರಿ ಇದೆ. ಇನ್ನೊಂದು, ನೋಡಿ ನಾವು ಈ ತರಹ ಹಲ್ಲೆ ಮಾಡುತ್ತಿದ್ದೇವೆ, ಮುಂದೆಯೂ ಮಾಡಲಿದ್ದೇವೆ ಎನ್ನುವ ಸಂದೇಶ ರವಾನಿಸುವ ಉದ್ದೇಶವೂ ಇರಬಹುದು.
ಬಹುಶಃ ಅವರ ಧೋರಣೆಯೇ ಇಂದಿನ ವಾಸ್ತವ ಸತ್ಯವಾಗಿರಬಹುದು.

– ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...