Homeಅಂಕಣಗಳುಊನಾ ಒಂದು ಮಾದರಿಯಾಗಿಬಿಟ್ಟಿದೆಯೆ?

ಊನಾ ಒಂದು ಮಾದರಿಯಾಗಿಬಿಟ್ಟಿದೆಯೆ?

- Advertisement -
- Advertisement -

ಜುಲೈ 11, 2016 ಊನಾ, ಗುಜರಾತ್:
ಬಾಲು ಸರ್ವೈಯಾ, ಅವನ ಇಬ್ಬರು ಪುತ್ರರಾದ ರಮೇಶ್ ಸರ್ವೈಯಾ ಮತ್ತು ವಶರಾಮ್ ಸರ್ವೈಯಾ ಅವರೊಂದಿಗೆ ಕುಂವರ್, ಅಶೋಕ್ ಸರ್ವೈಯಾ, ಮತ್ತು ಬೇಚರ್ ಸರ್ವೈಯಾ ಅವರುಗಳು ತಮ್ಮ ಊರಲ್ಲಿ ಸತ್ತ ಆಕಳ ಚರ್ಮ ಸುಲಿಯುತ್ತಿದ್ದಾಗ ಬಂದ ಗೋರಕ್ಷಕ ಪಡೆಯವರು, ಅವರುಗಳು ಆಕಳನ್ನು ಕೊಂದಿದ್ದು ಎಂದು ಆಪಾದಿಸಿ ಅಲ್ಲಿಂದ ಎತ್ತೊಯ್ಯುತ್ತಾರೆ. ಊನಾ ಪಟ್ಟಣಕ್ಕೆ ಕರೆತಂದು ಒಂದು ದೊಡ್ಡ ವಾಹನಕ್ಕೆ ಅವರನ್ನು ಕಟ್ಟಿ ಹಾಕಿ, ರಾಡ್‍ಗಳಿಂದ ಮನಸೋಇಚ್ಛೆ ಥಳಿಸಲಾಗುತ್ತದೆ. ನೂರಾರು ಜನ ಥಳಿತದ ಈ ದೃಶ್ಯವನ್ನು ನೋಡುತ್ತಾರೆ. ಒಬ್ಬ ತನ್ನ ಮೊಬೈಲಿನ ಕ್ಯಾಮೆರಾದಲ್ಲಿ ದೃಶ್ಯವನ್ನು ಸೆರೆಹಿಡಿಯುತ್ತಾನೆ. ದಲಿತರ ಮೇಲಿನ ಈ ಹಲ್ಲೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಗುಜರಾತಿನ ಮತ್ತು ದೇಶದ ಇತರ ಹೋರಾಟಗಾರರು ಸೇರಿ ಊನಾ ಚಳವಳಿಯನ್ನು ರೂಪಿಸುತ್ತಾರೆ. ಆಗಸ್ಟ್ 15 ರಂದು ಲಕ್ಷಾಂತರ ಜನ ಊನಾದಲ್ಲಿ ಸೇರಿ, ತಾವೆಂದೂ ಇನ್ನು ಮುಂದೆ ಸತ್ತ ದನದ ಚರ್ಮವನ್ನು ಸುಲಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಅದೇ ಚಳವಳಿಯ ರೂವಾರಿಯಾಗಿದ್ದ ಜಿಗ್ನೇಶ್ ಮೇವಾನಿ ಎನ್ನುವ ಯುವಕ ಮುನ್ನೆಲೆಗೆ ಬಂದು ದೇಶಾದ್ಯಂತ ಚಳವಳಿ ಕಟ್ಟಲು ತಿರುಗಾಡುತ್ತಿದ್ದಾನೆ. ಈಗ ಗುಜರಾತಿನ ಶಾಸಕ ಕೂಡ. ಹಲ್ಲೆ ಮಾಡಿದವರನ್ನು ಬಂಧಿಸಿ, 43 ಜನರ ವಿರುದ್ಧ ಪ್ರಕರಣ ನಡೆಯುತ್ತಿದೆ..
ಮೇ 2018, ಶಾಪರ್ ಗ್ರಾಮ, ರಾಜಕೋಟ್ ಜಿಲ್ಲೆ, ಗುಜರಾತ್
ಮುಕೇಶ್ ವಾನಿಯಾ, ಅವನ ಹೆಂಡತಿ ಜಯಾ ಮತ್ತು ಇನ್ನೊಬ್ಬ ಮಹಿಳೆ ಸವಿತಾ, ಈ ಮೂವರು ಬೆಳಗ್ಗೆ 5 ಗಂಟೆಯ ಸುಮಾರಿಗೆ ಎಂದಿನಂತೆ ಅಲ್ಲಿಯ ಕಾರ್ಖಾನೆಯ ಹತ್ತಿರ ಚಿಂದಿ ಆಯಲು ಪ್ರಾರಂಭಿಸಿದ್ದರು. ಆಗ ಅಲ್ಲಿಗೆ ಬಂದ ಕಾರ್ಖಾನೆಯ ಮಾಲೀಕ ಜಯಸುಖ್ ರಾದಾದಿಯ ಮತ್ತು ಅವನ ಸಂಗಡಿಗರು, ಅವರಿಗೆ ಕಾರ್ಖಾನೆಯ ಆವರಣದಲ್ಲಿಯ ಕಸವನ್ನು ತೆಗೆಯಲು ಹೇಳಿದರು. ಆ ಕೆಲಸಕ್ಕೆ ದುಡ್ಡು ತೆಗೆದುಕೊಳ್ಳದೇ ಮಾಡಬೇಕು ಎಂದಿದ್ದಕ್ಕಾಗಿ ಇವರು ಒಪ್ಪಲಿಲ್ಲ. ಇವರು ಕೆಳಜಾತಿಯವರು, ಚಿಂದಿ, ಕಸ ಆಯುವುದು ಅವರ ಕರ್ತವ್ಯ ಎಂದು ವಾದಿಸಿ ಮುಕೇಶನ ಮೇಲೆ ಹಲ್ಲೆ ಮಾಡಲಾರಂಭಿಸಿದರು. ಅಲ್ಲಿಂದ ಅವನ ಹೆಂಡತಿ ಮತ್ತು ಸವಿತಾ ಇಬ್ಬರೂ ಮಹಿಳೆಯರನ್ನು ಅಲ್ಲಿಂದ ಹೊರಗೆ ದಬ್ಬಿದರು. ಕೆಲ ಹೊತ್ತಿನ ನಂತರ ಆ ಇಬ್ಬರೂ ಮಹಿಳೆಯರು ತಮ್ಮ ಹಳ್ಳಿಯ ಕೆಲವು ಜನರೊಂದಿಗೆ ಬಂದಾಗ ಮುಕೇಶ್ ನೆಲದ ಮೇಲೆ ನಿಶ್ಚಲವಾಗಿ ಬಿದ್ದಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅವನು ಆಗಲೇ ಅಸುನೀಗಿದ್ದ.
ಮುಕೇಶನನ್ನು ಒಂದು ಕಂಬಕ್ಕೆ ಕಟ್ಟಿ, ಲೋಹದ ಒಂದು ರಾಡಿನಿಂದ ಒಬ್ಬೊಬ್ಬರಾಗಿ ಥಳಿಸಿದ್ದರು, ಆ ಗುಂಪಿನಲ್ಲಿಯ ಒಬ್ಬ ತುಂಬಾ ಸಂತೋಷದಿಂದಲೇ ಈ ದೃಶ್ಯವನ್ನು ತನ್ನ ಮೊಬೈಲ್‍ನ ಕ್ಯಾಮೆರಾದಲ್ಲಿ ಸೆರೆಹಿಡಿದು, ತನ್ನ ಸ್ನೇಹಿತರಿಗೆ ಕಳಿಸಿದ. ಆ ವಿಡಿಯೋವನ್ನು ಲಕ್ಷಾಂತರ ಜನ ಈಗಾಗಲೇ ನೋಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
25ನೇ ಏಪ್ರಿಲ್ 2018, ಊನಾ, ಗುಜರಾತ್
2016 ಜುಲೈನಲ್ಲಿ ಹಲ್ಲೆಗೀಡಾದ ಸರ್ವೈಯಾ ಕುಟುಂಬದವರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದರು. ಏಪ್ರಿಲ್ 29ರಂದು ಅವರು ಅಧಿಕೃತವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲಿದ್ದರು. ಅದಕ್ಕಾಗಿಯೇ ಇಡೀ ಕುಟುಂಬ ತಯಾರಿಯಲ್ಲಿತ್ತು. ಭಾನುವಾರದ ಕಾರ್ಯಕ್ರಮಕ್ಕಾಗಿ ಕೆಲವು ವಸ್ತುಗಳನ್ನು ಖರೀದಿಸಲು ಅವರು ಸಮೀಪದ ಪಟ್ಟಣವಾದ ಊನಾಗೆ ಬಂದು ಖರೀದಿ ಮಾಡಿ ಹಿಂತಿರುಗುತ್ತಿದ್ದರು. ಬಾಲುಭಾಯಿ, ವಸರಾಮ್ ಮತ್ತಿತರರು ಎಲ್ಲ ವಸ್ತುಗಳೊಂದಿಗೆ ವಾಹನದಲ್ಲಿದ್ದರೆ, ರಮೇಶ್ ಮತ್ತು ಅಶೋಕ್ ಅವರಿಗಿಂತ ಸ್ವಲ್ಪ ಮುಂದೆ ಮೋಟರ್ ಸೈಕಲ್‍ನಲ್ಲಿ ಬರುತ್ತಿದ್ದರು. ಇವರು ಸಮ್ತೇರ್ ಗ್ರಾಮದ ಬಳಿ ಬರುತ್ತಿದ್ದಂತೆ ಎರಡು ವರ್ಷಗಳ ಹಿಂದೆ ಇವರ ಮೇಲೆ ಹಲ್ಲೆ ಮಾಡಿದ್ದ ಕಿರಣ್ ಸಿಂಗ್ ಇವರನ್ನು ನೋಡಿ, ‘ಇವರಿಗೇ ನೋಡು, ನಾವು ಹೊಡೆದಿದ್ದು’ ಎಂದು ತನ್ನ ಸಂಗಡಿಗನಿಗೆ ಹೇಳಿ ಗೇಲಿ ಮಾಡುತ್ತಾ, ರಮೇಶ್ ಮತ್ತು ಅಶೋಕ್ ಅವರನ್ನು ತಡೆಯುತ್ತಾರೆ.. ಅಲ್ಲಿ ಕಿರಣ್ ಸಿಂಗ್ ಇವರಿಬ್ಬರಿಗೂ ಬೆದರಿಕೆ ಹಾಕಿ, ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸುತ್ತಾನೆ. ರಮೇಶ್ ಅವನ ಬೆದರಿಕೆಗೆ ಜಗ್ಗದಿರುವಾಗ ಕಟ್ಟಿಗೆಯ ಸನಿಕೆಯನ್ನು ತೆಗೆದುಕೊಂಡು ಅವನ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ರಮೇಶ್ ಪ್ರತಿರೋಧ ತೋರುತ್ತಾನೆ ಮತ್ತು ಅಷ್ಟರಲ್ಲಿ ಗ್ರಾಮಸ್ಥರು ಬಂದು ಸೇರುವುದರಿಂದ ಕಿರಣ್ ಸಿಂಗ್ ಅವನ ಸಂಗಡಿಗನೊಂದಿಗೆ ಪರಾರಿಯಾಗುತ್ತಾನೆ. ಸರ್ವೈಯಾ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸುತ್ತಾರೆ. ಕಿರಣ್ ಸಿಂಗ್ ಮತ್ತು ಅವನ ಸಂಗಡಿಗ ತಲೆಮರೆಸಿಕೊಳ್ಳುತ್ತಾರೆ.
ಊನಾದ ಘಟನೆಯ ನಂತರ 2016 ರ ಡಿಸೆಂಬರ್ ತಿಂಗಳಲ್ಲಿಯೇ ಊನಾದ 43 ಆರೋಪಿಗಳಲ್ಲಿ 35 ಜನರಿಗೆ ಜಾಮೀನು ಸಿಕ್ಕಿರುತ್ತದೆ. ಆರೋಪಿ ಕಿರಣ್ ಸಿಂಗ್ ಸುಪ್ರೀಮ್ ಕೋರ್ಟಿಗೆ ಹೋಗಿ ತನ್ನನ್ನು ಬಂಧಿಸಬಾರದು ಎನ್ನುವ ಆದೇಶವನ್ನು ತಂದಿದ್ದಾನೆ.
10 ಜೂನ್ 2018, ವಾಕಡಿ ಗ್ರಾಮ, ಜಲಗಾಂವ ಜಿಲ್ಲೆ, ಮಹಾರಾಷ್ಟ್ರ
16 ಮತ್ತು 17 ನೇ ಹದಿವಯಸ್ಸಿನ ಹುಡುಗರು ಜೋಷಿಯವರ ತೋಟದ ಬಾವಿಗೆ ಈಜಲು ಹೋಗಿದ್ದರು. ಆಗ ಅಲ್ಲಿಗೆ ಬಂದ ಈಶ್ವರ್ ಜೋಷಿ ಮತ್ತು ಪಲ್ಹಾದ್ ಲೋಹಾರ್ ಅವರುಗಳು ಈ ಹುಡುಗರನ್ನು ಹಿಡಿದು, ಒಂದೆಡೆಗೆ ಹಾಕಿ, ಬಟ್ಟೆ ಬಿಚ್ಚಿಸಿ ಮನಬಂದಂತೆ ಥಳಿಸಿದರು. ಇಲ್ಲಿಯೂ ಆ ಥಳಿತದ ದೃಶ್ಯವನ್ನು ಮೊಬೈಲ್ ಫೋನಿನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು. ಥಳಿತಕ್ಕೊಳಗಾದ ಹುಡುಗರು ಆದ ಘಟನೆಯ ಬಗ್ಗೆ ಯಾರ ಮುಂದೆಯೂ ಬಾಯಿ ಬಿಚ್ಚಲಿಲ್ಲ. ಎರಡು ದಿನಗಳ ನಂತರ ಥಳಿತದ ವೀಡಿಯೋ ಎಲ್ಲೆಡೆ ಹರಿದಾಡಿ ಅವರ ಪಾಲಕರಿಗೆ ತಲುಪಿದ್ದರಿಂದ ಪ್ರಕರಣ ಬೆಳಕಿಗೆ ಬಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದರು. ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.
ಹೀಗೆ ಕಲೆಹಾಕುತ್ತ ಹೋದರೆ ದಲಿತರ ಮೇಲಿನ ಹಲ್ಲೆಗಳ ಪ್ರಕರಣಕ್ಕೆ ಕೊನೆಯೇ ಇಲ್ಲ. ಈ ಎಲ್ಲಾ ಘಟನೆಗಳಲ್ಲಿ ಹಲ್ಲೆಯ ದೃಶ್ಯವನ್ನು ಸೆರೆಹಿಡಿದದ್ದು ಸಾಮಾನ್ಯವಾಗಿದೆ. ಮತ್ತು ವಿಶೇಷವೆಂದರೆ ಹಲ್ಲೆಕೋರರೇ ಸ್ವತಃ ವಿಡಿಯೋ ಮಾಡಿದ್ದು. ಒಂದು, ಬಹುಶಃ ಅವರಿಗೆ ತಮಗೆ ಯಾವುದೇ ಶಿಕ್ಷೆ ಆಗುವುದಿಲ್ಲ ಎನ್ನುವ ಖಾತ್ರಿ ಇದೆ. ಇನ್ನೊಂದು, ನೋಡಿ ನಾವು ಈ ತರಹ ಹಲ್ಲೆ ಮಾಡುತ್ತಿದ್ದೇವೆ, ಮುಂದೆಯೂ ಮಾಡಲಿದ್ದೇವೆ ಎನ್ನುವ ಸಂದೇಶ ರವಾನಿಸುವ ಉದ್ದೇಶವೂ ಇರಬಹುದು.
ಬಹುಶಃ ಅವರ ಧೋರಣೆಯೇ ಇಂದಿನ ವಾಸ್ತವ ಸತ್ಯವಾಗಿರಬಹುದು.

– ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....