Homeಕರ್ನಾಟಕ‘ಹೆಡ್‌ಬುಷ್‌‌’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು

‘ಹೆಡ್‌ಬುಷ್‌‌’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು

‘ಬಡವರ ಮಕ್ಳು ಬೆಳೀಬೇಕ್‌ ಕಣ್ರಯ್ಯ’ ಹೇಳಿಕೆ ವೈರಲ್‌ ಆಗುತ್ತಿತ್ತು, ಇದೇ ಹೇಳಿಕೆಯ ಪ್ರೊಫೈಲ್‌ ಫೋಟೋ ಈಗ ಟ್ರೆಂಡ್ ಆಗಿದೆ.

- Advertisement -
- Advertisement -

ನಟ ರಾಕ್ಷಸ ಖ್ಯಾತಿಯ ಧನಂಜಯ ಅವರು ಅಭಿನಯಿಸಿ, ನಿರ್ಮಾಣ ಮಾಡಿರುವ ‘ಹೆಡ್‌ ಬುಷ್‌’ ಸಿನಿಮಾದಲ್ಲಿ ‘ವೀರಗಾಸೆ ಕಲೆಗೆ ಅಪಮಾನ ಎಸಗಲಾಗಿದೆ’ ಎಂದು ಹಿಂದುತ್ವವಾದಿಗಳು ದೂರು ನೀಡಿರುವ ಬೆನ್ನಲ್ಲೇ, ಹಳೆಯ ಸಿನಿಮಾ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗತೊಡಗಿವೆ.

‘ಹೆಡ್‌ ಬುಷ್‌’ನಲ್ಲಿ ವಿವಾದ ಸೃಷ್ಟಿಸಲಾಗಿದೆ ಎನ್ನುವವರು ‌ಈ ದೃಶ್ಯಗಳಿಗೆ ಹಿಂದೇಕೆ ಆಕ್ಷೇಪಗಳನ್ನು ವ್ಯಕ್ತಪಡಿಸಲಿಲ್ಲ. ಇಲ್ಲಿ ಯಾರು ಯಾವ ಸಿನಿಮಾವನ್ನು ಮಾಡಿದ್ದಾರೆ, ಸಿನಿಮಾ ಮಾಡಿದವರ ಸಾಮಾಜಿಕ ಹಿನ್ನೆಲೆ ಏನು ಮುಖ್ಯವಾಗುತ್ತಿದೆ ಎಂಬ ಟೀಕೆಗಳನ್ನು ಸಿನಿಮಾ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

‘ನಟ ಉಪೇಂದ್ರ ಅವರ ಸಿನಿಮಾಗಳಲ್ಲಿ ಹಿಂದೂ ದೇವರುಗಳಿಗೆ ಅವಹೇಳನ ಮಾಡಲಾಗಿದೆ’ ಎಂಬ ಚರ್ಚೆಯ ಜೊತೆಗೆ ಹಲವು ಸಿನಿಮಾಗಳ ದೃಶ್ಯಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ ಅವರು ಇತ್ತೀಚೆಗೆ ನೀಡಿದ್ದ ‘ಬಡವರ ಮಕ್ಳು ಬೆಳೀಬೇಕ್‌ ಕಣ್ರಯ್ಯ’ ಹೇಳಿಕೆ ವೈರಲ್‌ ಆಗುತ್ತಿತ್ತು, ಇದೇ ಹೇಳಿಕೆಯ ಪ್ರೊಫೈಲ್‌ ಫೋಟೋ ಈಗ ಟ್ರೆಂಡ್ ಆಗಿದೆ. ಆ ಮೂಲಕ ಡಾಲಿ ಧನಂಜಯ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

“ಮೊದಲು ಮಾನವನಾಗು” ಎಂದು ಡಾಲಿ ಧನಂಜಯ ಅವರು ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆಯವರಿಗೆ ಬುದ್ಧಿ ಹೇಳಿದ್ದರಿಂದ ಒಂದು ವರ್ಗದ ಜನರು ಧನಂಜಯ ವಿರುದ್ಧ ಹಗೆ ಸಾಧಿಸುತ್ತಿದ್ದಾರೆಂಬ ಪೋಸ್ಟ್‌ಗಳು ಹರಿದಾಡಿವೆ. ಅದರ ಜೊತೆಗೆ ಹಳೆಯ ಸಿನಿಮಾ  ದೃಶ್ಯಗಳು ಗಮನ ಸೆಳೆಯುತ್ತಿವೆ.

“ಉಪೇಂದ್ರ ‘ಗಣೇಶ’ನಿಗೆ ಗನ್‌ ಹಿಡಿದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ. ಡೈರೆಕ್ಟರ್‌ ಗುರುಪ್ರಸಾದ್‌ ಮಠದೊಳಗೇ ಕಾವಿಧಾರಿಗಳು ಎಣ್ಣೆ ಹೊಡಿತಾರೆ ಅಂದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ. ಧನಂಜಯ್‌ ಅವರಿಂದ ಅಪಚಾರಿ ಆಗ್ಬಿಟ್ಟಿದೆ ನೋಡಿ” ಎಂಬ ಪೋಸ್ಟರ್‌ ವೈರಲ್ ಆಗುತ್ತಿದೆ.

“ಇದು ಹಿಂದು ಧರ್ಮಕ್ಕೆ ಮಾಡಿದ ಅವಮಾನ ಅಲ್ವಾ?” ಎಂಬ ಮತ್ತೊಂದು ದೃಶ್ಯವನ್ನು ಉಪೇಂದ್ರ ಅವರ ಸಿನಿಮಾದಿಂದ ಆಯ್ದು ಹಂಚಿಕೊಳ್ಳಲಾಗುತ್ತಿದೆ.

ತುಳಸಿಕೃಷ್ಣ ಎಂಬವರು ಹಲವು ಸಿನಿಮಾ ದೃಶ್ಯಗಳನ್ನು ಪಟ್ಟಿ ಮಾಡಿದ್ದಾರೆ.

ಬೇಡರ ಕಣ್ಣಪ್ಪ: ಅಣ್ಣಾವ್ರು ಬೇಡರ ಕಣ್ಣಪ್ಪ ಪಾತ್ರಧಾರಿಯಾಗಿ ಶಿವಲಿಂಗದ ಮೇಲೆ ಕಾಲಿಡ್ತಾರೆ.
ಉಪೇಂದ್ರ: ಉಪೇಂದ್ರರವರು ಪುರೋಹಿತರಿಗೆ ಎಣ್ಣೆ ಕುಡಿಸಿ, ಗಣೇಶನನ್ನು ನೀರಿಗೆ ಎಸೀತಾರೆ.
A: ಉಪೇಂದ್ರ, I am God, God is great ಅಂತ ತಮ್ಮನ್ನು ತಾವೇ ದೇವರು ಅಂತಾರೆ.
ಅಪ್ಪಾಜಿ: ವೀರಗಾಸೆ ವೇಷಧಾರಿಯಾಗಿ ವಿಲನ್‌ಗಳು ಗೋವಿಂದ, ಗೋವಿಂದ ಅಂತ ಕ್ಯಾಪ್ಟನ್‌ರನ್ನು ಸಾಯಿಸುತ್ತಾರೆ.
ಉಳಿದವರು ಕಂಡಂತೆ: ಹುಲಿ ವೇಷಧಾರಿಯನ್ನು ರಕ್ಷಿತ್ ಶೆಟ್ಟಿ ಹೊಡೆಯುತ್ತಾರೆ.
ಗರುಡ ಗಮನ ವೃಷಭ ವಾಹನ: ಮಾದೇವನ ಹಾಡು ಬರುವಾಗ ರಾಜ್.ಬಿ.ಶೆಟ್ಟಿ ಕೊಲೆ ಮಾಡಿ ಕುಣಿಯುತ್ತಾರೆ.
ಕಾಂತಾರ: ವಿಲನ್ ದೈವದ ಕುತ್ತಿಗೆ ಹಿಸುಕಿ ಮೇಲಕ್ಕೆ ಎತ್ತುತ್ತಾನೆ.
ಜನುಮದ ಜೋಡಿ: ಓ ಊರ ದ್ಯಾವ್ರೆ ಹಾಡು.. ದೇವರಿಗೆ, ನೀ ಎಕ್ಕುಟ್ಟೋಗ, ನಿನ್ ಮನೆ ಕಾಯ್ವೋಗ, ನಿನ್ ತಲೆ ಹೊಡೆಯ, ಹಾಳಾದೋನೆ, ನೀನ್ ನೆಗುದ್ ಬೀಳ, ನಿಂಗ್ ಉಳ ಬೀಳ.

“ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ. ನೀವು ಯಾವುದೇ ಚಿತ್ರ ಹೆಸರಿಸಿ, ಅದರಲ್ಲಿ ತಪ್ಪು ಹುಡುಕಬಹುದು. ಇವೆಲ್ಲವನ್ನು ಆ ಸಂದರ್ಭಕ್ಕೆ ಆ ಪಾತ್ರದ ರಿಯಾಕ್ಷನ್ ಅಂತ ಒಪ್ಪಿಕೊಂಡಿದ್ದೇವೆ. ಈಗ ಡಾಲಿ ವೀರಗಾಸೆ ವೇಷದಲ್ಲಿರುವ ವಿಲನ್‌ಗಳನ್ನು ಹೊಡೆದರೆ, ವೀರಗಾಸೆಗೆ ಅಪಮಾನ ಮಾಡುತ್ತಿರುವವರನ್ನು ಹೊಡೆದಂತೆ ಎಂದುಕೊಳ್ಳಬಹುದಲ್ಲವೆ. ಇಲ್ಲ, ಇಲ್ಲಿ ವಿರೋಧಿಸುತ್ತಿರುವವರಿಗೆ ವೀರಗಾಸೆ ಮುಖ್ಯವಲ್ಲ, ಅದರ ಮೇಲೆ ಪ್ರೀತಿಯು ಇಲ್ಲ, ಡಾಲಿ ಮೇಲಿನ ದ್ವೇಷ ಅಷ್ಟೆ” ಎಂದು ತುಳಸಿ ಕೃಷ್ಣ ತಿಳಿಸಿದ್ದಾರೆ.

May be an image of 3 people and text that says "'ಕಠಾರಿವೀರ ಸುರಸುಂದರಾಂಗಿ' ಸಿನಿಮಾದಲ್ಲಿ ಉಪೇಂದ್ರ ಹಿಂದೂ ದೇವರ ಪಾತ್ರಧಾರಿಗಳನ್ನು ಬೂಟುಕಾಲಲ್ಲಿ ಒದ್ದು ಫೈಟ್ ಮಾಡುವಾಗ.. ಈ ಧರ್ಮರಕ್ಷಕ ಪಡೆಗಳ ವೀರಾಧಿವೀರರು ಯಾವ ಇಲಿ ಬಿಲದೊಳಗೆ ಬೆಚ್ಚಗೆ ಮಲಗಿದ್ರು? 'ಬಡವರಮನೆ ಯಿಂದ ಬಂದ ಡಾಲಿ ಧನಂಜಯ್ ಮೇಲೆ ನಿಮ್ಮ ಪ್ರತಾಪ ತೋರಿಸ್ತ ಇದೀರ? ಯಾಕೆ ಬಡವರ ಮನೆ ಮಕ್ಳು HERO ಆಗ್ಬಾರ್ದ?"‘ಕಠಾರಿವೀರ ಸುರಸುಂದರಾಂಗ’ ಸಿನಿಮಾದ ಸಿನಿಮಾ ದೃಶ್ಯದ ಕುರಿತು ಚರ್ಚೆಯಾಗುತ್ತಿದೆ. ಉಪೇಂದ್ರ ಅವರು ಹಿಂದೂ ದೇವರುಗಳಿಗೆ ಬೂಟು ಕಾಲಲ್ಲಿ ಒದ್ದು ಫೈಟ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

May be an image of 6 people, people standing, fire and text that says 'ಶೂದ್ರರ ಹುಲಿವೇಷಧಾರಿಗೆ ಹೊಡೆದಾಗ ಧರ್ಮಕ್ಕೆ ಅಪಚಾರವಾಗಲಿಲ್ಲ!! ದಲಿತರ ಗುಳಿಗದೈವಕ್ಕೆ ಧಣಿಯ ಗುಲಾಮರು ಹೊಡೆದಾಗ ಧರ್ಮಕ್ಕೆ ಅಪಮಾನವಾಗಲಿಲ್ಲ. ವೀರಗಾಸೆ ವೇಷ ಧರಿಸಿ ಜಯರಾಜ್ ಕೊಲ್ಲಲು ಬಂದ ಖಳರಿಗೆ ನಾಯಕ ಹೊಡೆದಾಗ ಧರ್ಮಕ್ಕೆ ಅಪಮಾನವಾಗಿದೆ ನೋಡಿ. ಬಡವರ ಮಕ್ಕಳನ್ನ ಬೆಳೆಯೋಕೆಲ್ಲಿ ಬಿಡ್ತೀರ?'May be an image of 2 people and text that says 'ವಿಕ್ರಾಂತ್ ರೋಣ ಸಿನಿಮದಲ್ಲಿ ಕೋಲ ದೈವ ಪಾತ್ರಗಳಿಗೆ ನಾಮರ್ದ'ರು ಅಂದು, ನಾಯಕ ಬಡಿದು ಕೊಲ್ಲುತ್ತಾನೆ.. ಧರ್ಮರಕ್ಷಕ ಪುಡುಂಗಿಗಳು ಆವತ್ತು ಎಲ್ಲಿ ದನ ಮೇಯ್ಸೋಕೆ ಹೋಗಿದ್ರು? 'ಡಾಲಿ' ಬಡವರ ಮನೆಯಿಂದ ಬಂದ ಹುಡುಗ.. ಅದೇ ಉರಿ ನಿಮಗೆ.'‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ‘ಹುಲಿ ವೇಷಧಾರಿ’ಗೆ ಹೊಡೆಯುವ ದೃಶ್ಯವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ.

ಹೋರಾಟಗಾರ್ತಿ ನಜ್ಮಾ ಅವರು ಬರೆದಿರುವ ಟಿಪ್ಪಣಿಯನ್ನು ಅನೇಕರು ಶೇರ್‌ ಮಾಡಿದ್ದಾರೆ.

“ನಾನು ಹುಟ್ಟಿರದೆ ಆರಾಮಾಗಿರಕ್ಕೆ ಅನ್ಲಿಲ್ಲ ನಮ್ ಧನಂಜಯ,
ರಿಸ್ಕ್ ಎಷ್ಟಾದ್ರೂ ತಗೊಂಡು ಮುಂದುಕ್ ಹೋಗ್ಬೇಕು ಅಂದ;
ಕಾಸಿರೋರೆ ಜಗತ್ ಆಳ್ಬೇಕು ಅನ್ಲಿಲ್ಲ ನಮ್ ಧನಂಜಯ,
ಬಡವರ್ ಮನೆ ಮಕ್ಳು ಬೆಳೇಬೇಕು ಅಂದ,
ಜಾತಿ ಧರ್ಮ ಅಂತ ಕಿತ್ತಾಡಿ ಸಾಯ್ರಿ ಅನ್ಲಿಲ್ಲ ನಮ್ ಧನಂಜಯ,
ಏನಾದರೂ ಆಗು ಮೊದಲು ಮಾನವನಾಗು ಅಂದ,
ಕಂಡೋರ್ ಹೊಟ್ಟೆ ಮ್ಯಾಲೆ ಹೊಡೆದು ಸಂಪಾದ್ನೇ ಮಾಡು ಅನ್ಲಿಲ್ಲ ನಮ್ ಧನಂಜಯ,
ಕಷ್ಟ ಪಟ್ಟು ದುಡ್ಡು ಮುಂದೆ ಬನ್ನಿ ಅಂದ,
ಮೇಲು-ಕೀಳು, ದೊಡ್ಡೋರು-ಚಿಕ್ಕೋರು ಅನ್ಲಿಲ್ಲ ನಮ್ ಧನಂಜಯ,
ಎಲ್ರು ನಮ್ಮವ್ರು ಕಂತೆ ಒಟ್ಟಿಗೆ ನಡೀರ್ಲಾ ಅಂದ,
ಸಿನೆಮಾ ಅಂದ್ರೆ ಬರಿ ಬಣ್ಣ ಹಚ್ಚೋದಲ್ಲ ಅಂದ ನಮ್ಮ ಧನಂಜಯ,
ಸಿನ್ಮಾ ಅಂದ್ರೆ ಬದ್ಕು-ಬವಣೆ ಕನ್ರಲಾ ಅಂದ” ಎಂಬ ಸಾಲುಗಳನ್ನು ನಜ್ಮಾ ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...