Homeಕರ್ನಾಟಕ‘ಹೆಡ್‌ಬುಷ್‌‌’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು

‘ಹೆಡ್‌ಬುಷ್‌‌’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು

‘ಬಡವರ ಮಕ್ಳು ಬೆಳೀಬೇಕ್‌ ಕಣ್ರಯ್ಯ’ ಹೇಳಿಕೆ ವೈರಲ್‌ ಆಗುತ್ತಿತ್ತು, ಇದೇ ಹೇಳಿಕೆಯ ಪ್ರೊಫೈಲ್‌ ಫೋಟೋ ಈಗ ಟ್ರೆಂಡ್ ಆಗಿದೆ.

- Advertisement -
- Advertisement -

ನಟ ರಾಕ್ಷಸ ಖ್ಯಾತಿಯ ಧನಂಜಯ ಅವರು ಅಭಿನಯಿಸಿ, ನಿರ್ಮಾಣ ಮಾಡಿರುವ ‘ಹೆಡ್‌ ಬುಷ್‌’ ಸಿನಿಮಾದಲ್ಲಿ ‘ವೀರಗಾಸೆ ಕಲೆಗೆ ಅಪಮಾನ ಎಸಗಲಾಗಿದೆ’ ಎಂದು ಹಿಂದುತ್ವವಾದಿಗಳು ದೂರು ನೀಡಿರುವ ಬೆನ್ನಲ್ಲೇ, ಹಳೆಯ ಸಿನಿಮಾ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗತೊಡಗಿವೆ.

‘ಹೆಡ್‌ ಬುಷ್‌’ನಲ್ಲಿ ವಿವಾದ ಸೃಷ್ಟಿಸಲಾಗಿದೆ ಎನ್ನುವವರು ‌ಈ ದೃಶ್ಯಗಳಿಗೆ ಹಿಂದೇಕೆ ಆಕ್ಷೇಪಗಳನ್ನು ವ್ಯಕ್ತಪಡಿಸಲಿಲ್ಲ. ಇಲ್ಲಿ ಯಾರು ಯಾವ ಸಿನಿಮಾವನ್ನು ಮಾಡಿದ್ದಾರೆ, ಸಿನಿಮಾ ಮಾಡಿದವರ ಸಾಮಾಜಿಕ ಹಿನ್ನೆಲೆ ಏನು ಮುಖ್ಯವಾಗುತ್ತಿದೆ ಎಂಬ ಟೀಕೆಗಳನ್ನು ಸಿನಿಮಾ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

‘ನಟ ಉಪೇಂದ್ರ ಅವರ ಸಿನಿಮಾಗಳಲ್ಲಿ ಹಿಂದೂ ದೇವರುಗಳಿಗೆ ಅವಹೇಳನ ಮಾಡಲಾಗಿದೆ’ ಎಂಬ ಚರ್ಚೆಯ ಜೊತೆಗೆ ಹಲವು ಸಿನಿಮಾಗಳ ದೃಶ್ಯಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ ಅವರು ಇತ್ತೀಚೆಗೆ ನೀಡಿದ್ದ ‘ಬಡವರ ಮಕ್ಳು ಬೆಳೀಬೇಕ್‌ ಕಣ್ರಯ್ಯ’ ಹೇಳಿಕೆ ವೈರಲ್‌ ಆಗುತ್ತಿತ್ತು, ಇದೇ ಹೇಳಿಕೆಯ ಪ್ರೊಫೈಲ್‌ ಫೋಟೋ ಈಗ ಟ್ರೆಂಡ್ ಆಗಿದೆ. ಆ ಮೂಲಕ ಡಾಲಿ ಧನಂಜಯ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

“ಮೊದಲು ಮಾನವನಾಗು” ಎಂದು ಡಾಲಿ ಧನಂಜಯ ಅವರು ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆಯವರಿಗೆ ಬುದ್ಧಿ ಹೇಳಿದ್ದರಿಂದ ಒಂದು ವರ್ಗದ ಜನರು ಧನಂಜಯ ವಿರುದ್ಧ ಹಗೆ ಸಾಧಿಸುತ್ತಿದ್ದಾರೆಂಬ ಪೋಸ್ಟ್‌ಗಳು ಹರಿದಾಡಿವೆ. ಅದರ ಜೊತೆಗೆ ಹಳೆಯ ಸಿನಿಮಾ  ದೃಶ್ಯಗಳು ಗಮನ ಸೆಳೆಯುತ್ತಿವೆ.

“ಉಪೇಂದ್ರ ‘ಗಣೇಶ’ನಿಗೆ ಗನ್‌ ಹಿಡಿದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ. ಡೈರೆಕ್ಟರ್‌ ಗುರುಪ್ರಸಾದ್‌ ಮಠದೊಳಗೇ ಕಾವಿಧಾರಿಗಳು ಎಣ್ಣೆ ಹೊಡಿತಾರೆ ಅಂದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ. ಧನಂಜಯ್‌ ಅವರಿಂದ ಅಪಚಾರಿ ಆಗ್ಬಿಟ್ಟಿದೆ ನೋಡಿ” ಎಂಬ ಪೋಸ್ಟರ್‌ ವೈರಲ್ ಆಗುತ್ತಿದೆ.

“ಇದು ಹಿಂದು ಧರ್ಮಕ್ಕೆ ಮಾಡಿದ ಅವಮಾನ ಅಲ್ವಾ?” ಎಂಬ ಮತ್ತೊಂದು ದೃಶ್ಯವನ್ನು ಉಪೇಂದ್ರ ಅವರ ಸಿನಿಮಾದಿಂದ ಆಯ್ದು ಹಂಚಿಕೊಳ್ಳಲಾಗುತ್ತಿದೆ.

ತುಳಸಿಕೃಷ್ಣ ಎಂಬವರು ಹಲವು ಸಿನಿಮಾ ದೃಶ್ಯಗಳನ್ನು ಪಟ್ಟಿ ಮಾಡಿದ್ದಾರೆ.

ಬೇಡರ ಕಣ್ಣಪ್ಪ: ಅಣ್ಣಾವ್ರು ಬೇಡರ ಕಣ್ಣಪ್ಪ ಪಾತ್ರಧಾರಿಯಾಗಿ ಶಿವಲಿಂಗದ ಮೇಲೆ ಕಾಲಿಡ್ತಾರೆ.
ಉಪೇಂದ್ರ: ಉಪೇಂದ್ರರವರು ಪುರೋಹಿತರಿಗೆ ಎಣ್ಣೆ ಕುಡಿಸಿ, ಗಣೇಶನನ್ನು ನೀರಿಗೆ ಎಸೀತಾರೆ.
A: ಉಪೇಂದ್ರ, I am God, God is great ಅಂತ ತಮ್ಮನ್ನು ತಾವೇ ದೇವರು ಅಂತಾರೆ.
ಅಪ್ಪಾಜಿ: ವೀರಗಾಸೆ ವೇಷಧಾರಿಯಾಗಿ ವಿಲನ್‌ಗಳು ಗೋವಿಂದ, ಗೋವಿಂದ ಅಂತ ಕ್ಯಾಪ್ಟನ್‌ರನ್ನು ಸಾಯಿಸುತ್ತಾರೆ.
ಉಳಿದವರು ಕಂಡಂತೆ: ಹುಲಿ ವೇಷಧಾರಿಯನ್ನು ರಕ್ಷಿತ್ ಶೆಟ್ಟಿ ಹೊಡೆಯುತ್ತಾರೆ.
ಗರುಡ ಗಮನ ವೃಷಭ ವಾಹನ: ಮಾದೇವನ ಹಾಡು ಬರುವಾಗ ರಾಜ್.ಬಿ.ಶೆಟ್ಟಿ ಕೊಲೆ ಮಾಡಿ ಕುಣಿಯುತ್ತಾರೆ.
ಕಾಂತಾರ: ವಿಲನ್ ದೈವದ ಕುತ್ತಿಗೆ ಹಿಸುಕಿ ಮೇಲಕ್ಕೆ ಎತ್ತುತ್ತಾನೆ.
ಜನುಮದ ಜೋಡಿ: ಓ ಊರ ದ್ಯಾವ್ರೆ ಹಾಡು.. ದೇವರಿಗೆ, ನೀ ಎಕ್ಕುಟ್ಟೋಗ, ನಿನ್ ಮನೆ ಕಾಯ್ವೋಗ, ನಿನ್ ತಲೆ ಹೊಡೆಯ, ಹಾಳಾದೋನೆ, ನೀನ್ ನೆಗುದ್ ಬೀಳ, ನಿಂಗ್ ಉಳ ಬೀಳ.

“ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ. ನೀವು ಯಾವುದೇ ಚಿತ್ರ ಹೆಸರಿಸಿ, ಅದರಲ್ಲಿ ತಪ್ಪು ಹುಡುಕಬಹುದು. ಇವೆಲ್ಲವನ್ನು ಆ ಸಂದರ್ಭಕ್ಕೆ ಆ ಪಾತ್ರದ ರಿಯಾಕ್ಷನ್ ಅಂತ ಒಪ್ಪಿಕೊಂಡಿದ್ದೇವೆ. ಈಗ ಡಾಲಿ ವೀರಗಾಸೆ ವೇಷದಲ್ಲಿರುವ ವಿಲನ್‌ಗಳನ್ನು ಹೊಡೆದರೆ, ವೀರಗಾಸೆಗೆ ಅಪಮಾನ ಮಾಡುತ್ತಿರುವವರನ್ನು ಹೊಡೆದಂತೆ ಎಂದುಕೊಳ್ಳಬಹುದಲ್ಲವೆ. ಇಲ್ಲ, ಇಲ್ಲಿ ವಿರೋಧಿಸುತ್ತಿರುವವರಿಗೆ ವೀರಗಾಸೆ ಮುಖ್ಯವಲ್ಲ, ಅದರ ಮೇಲೆ ಪ್ರೀತಿಯು ಇಲ್ಲ, ಡಾಲಿ ಮೇಲಿನ ದ್ವೇಷ ಅಷ್ಟೆ” ಎಂದು ತುಳಸಿ ಕೃಷ್ಣ ತಿಳಿಸಿದ್ದಾರೆ.

May be an image of 3 people and text that says "'ಕಠಾರಿವೀರ ಸುರಸುಂದರಾಂಗಿ' ಸಿನಿಮಾದಲ್ಲಿ ಉಪೇಂದ್ರ ಹಿಂದೂ ದೇವರ ಪಾತ್ರಧಾರಿಗಳನ್ನು ಬೂಟುಕಾಲಲ್ಲಿ ಒದ್ದು ಫೈಟ್ ಮಾಡುವಾಗ.. ಈ ಧರ್ಮರಕ್ಷಕ ಪಡೆಗಳ ವೀರಾಧಿವೀರರು ಯಾವ ಇಲಿ ಬಿಲದೊಳಗೆ ಬೆಚ್ಚಗೆ ಮಲಗಿದ್ರು? 'ಬಡವರಮನೆ ಯಿಂದ ಬಂದ ಡಾಲಿ ಧನಂಜಯ್ ಮೇಲೆ ನಿಮ್ಮ ಪ್ರತಾಪ ತೋರಿಸ್ತ ಇದೀರ? ಯಾಕೆ ಬಡವರ ಮನೆ ಮಕ್ಳು HERO ಆಗ್ಬಾರ್ದ?"‘ಕಠಾರಿವೀರ ಸುರಸುಂದರಾಂಗ’ ಸಿನಿಮಾದ ಸಿನಿಮಾ ದೃಶ್ಯದ ಕುರಿತು ಚರ್ಚೆಯಾಗುತ್ತಿದೆ. ಉಪೇಂದ್ರ ಅವರು ಹಿಂದೂ ದೇವರುಗಳಿಗೆ ಬೂಟು ಕಾಲಲ್ಲಿ ಒದ್ದು ಫೈಟ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

May be an image of 6 people, people standing, fire and text that says 'ಶೂದ್ರರ ಹುಲಿವೇಷಧಾರಿಗೆ ಹೊಡೆದಾಗ ಧರ್ಮಕ್ಕೆ ಅಪಚಾರವಾಗಲಿಲ್ಲ!! ದಲಿತರ ಗುಳಿಗದೈವಕ್ಕೆ ಧಣಿಯ ಗುಲಾಮರು ಹೊಡೆದಾಗ ಧರ್ಮಕ್ಕೆ ಅಪಮಾನವಾಗಲಿಲ್ಲ. ವೀರಗಾಸೆ ವೇಷ ಧರಿಸಿ ಜಯರಾಜ್ ಕೊಲ್ಲಲು ಬಂದ ಖಳರಿಗೆ ನಾಯಕ ಹೊಡೆದಾಗ ಧರ್ಮಕ್ಕೆ ಅಪಮಾನವಾಗಿದೆ ನೋಡಿ. ಬಡವರ ಮಕ್ಕಳನ್ನ ಬೆಳೆಯೋಕೆಲ್ಲಿ ಬಿಡ್ತೀರ?'May be an image of 2 people and text that says 'ವಿಕ್ರಾಂತ್ ರೋಣ ಸಿನಿಮದಲ್ಲಿ ಕೋಲ ದೈವ ಪಾತ್ರಗಳಿಗೆ ನಾಮರ್ದ'ರು ಅಂದು, ನಾಯಕ ಬಡಿದು ಕೊಲ್ಲುತ್ತಾನೆ.. ಧರ್ಮರಕ್ಷಕ ಪುಡುಂಗಿಗಳು ಆವತ್ತು ಎಲ್ಲಿ ದನ ಮೇಯ್ಸೋಕೆ ಹೋಗಿದ್ರು? 'ಡಾಲಿ' ಬಡವರ ಮನೆಯಿಂದ ಬಂದ ಹುಡುಗ.. ಅದೇ ಉರಿ ನಿಮಗೆ.'‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ‘ಹುಲಿ ವೇಷಧಾರಿ’ಗೆ ಹೊಡೆಯುವ ದೃಶ್ಯವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ.

ಹೋರಾಟಗಾರ್ತಿ ನಜ್ಮಾ ಅವರು ಬರೆದಿರುವ ಟಿಪ್ಪಣಿಯನ್ನು ಅನೇಕರು ಶೇರ್‌ ಮಾಡಿದ್ದಾರೆ.

“ನಾನು ಹುಟ್ಟಿರದೆ ಆರಾಮಾಗಿರಕ್ಕೆ ಅನ್ಲಿಲ್ಲ ನಮ್ ಧನಂಜಯ,
ರಿಸ್ಕ್ ಎಷ್ಟಾದ್ರೂ ತಗೊಂಡು ಮುಂದುಕ್ ಹೋಗ್ಬೇಕು ಅಂದ;
ಕಾಸಿರೋರೆ ಜಗತ್ ಆಳ್ಬೇಕು ಅನ್ಲಿಲ್ಲ ನಮ್ ಧನಂಜಯ,
ಬಡವರ್ ಮನೆ ಮಕ್ಳು ಬೆಳೇಬೇಕು ಅಂದ,
ಜಾತಿ ಧರ್ಮ ಅಂತ ಕಿತ್ತಾಡಿ ಸಾಯ್ರಿ ಅನ್ಲಿಲ್ಲ ನಮ್ ಧನಂಜಯ,
ಏನಾದರೂ ಆಗು ಮೊದಲು ಮಾನವನಾಗು ಅಂದ,
ಕಂಡೋರ್ ಹೊಟ್ಟೆ ಮ್ಯಾಲೆ ಹೊಡೆದು ಸಂಪಾದ್ನೇ ಮಾಡು ಅನ್ಲಿಲ್ಲ ನಮ್ ಧನಂಜಯ,
ಕಷ್ಟ ಪಟ್ಟು ದುಡ್ಡು ಮುಂದೆ ಬನ್ನಿ ಅಂದ,
ಮೇಲು-ಕೀಳು, ದೊಡ್ಡೋರು-ಚಿಕ್ಕೋರು ಅನ್ಲಿಲ್ಲ ನಮ್ ಧನಂಜಯ,
ಎಲ್ರು ನಮ್ಮವ್ರು ಕಂತೆ ಒಟ್ಟಿಗೆ ನಡೀರ್ಲಾ ಅಂದ,
ಸಿನೆಮಾ ಅಂದ್ರೆ ಬರಿ ಬಣ್ಣ ಹಚ್ಚೋದಲ್ಲ ಅಂದ ನಮ್ಮ ಧನಂಜಯ,
ಸಿನ್ಮಾ ಅಂದ್ರೆ ಬದ್ಕು-ಬವಣೆ ಕನ್ರಲಾ ಅಂದ” ಎಂಬ ಸಾಲುಗಳನ್ನು ನಜ್ಮಾ ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...