Homeಕರ್ನಾಟಕಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ವಿಚಾರಣೆ ಗುರುವಾರಕ್ಕೆ ಮುಂದೂಡಿದ ನ್ಯಾಯಾಲಯ

- Advertisement -
- Advertisement -

ಹಿಜಾಬ್‌ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠ ಬುಧವಾರದಂದು ವಿಚಾರಣೆಯನ್ನು ಮುಂದುವರೆಸಿದೆ. ಸೋಮವಾರದಂದು ಮಧ್ಯಂತರ ಆದೇಶವನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಲ್ಲಿಸಿದ್ದ ಅಫಿಡವಿಟ್‌ ಅನ್ನು ನ್ಯಾಯಾಲಯ ನಿರಾಕರಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ಬುಧವಾರದಿಂದ ಕಾಲೇಜುಗಳು ಪುನರಾರಂಭವಾಗುತ್ತಿದ್ದು, ಮಧ್ಯಂತರ ಆದೇಶಕ್ಕೆ ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬೇಕು ಎಂದು ತಿಳಿಸಿದ್ದರು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, “ಅರ್ಜಿ ದೋಷಪೂರಿತವಾಗಿದೆ. ಇದು ಕಕ್ಷಿದಾರರಿಂದ ಬಂದ ಅಫಿಡವಿಟ್ ಅಲ್ಲ. ಅದನ್ನು ವಕೀಲರೇ ಸ್ವತಃ ದಾಖಲಿಸಿದ್ದಾರೆ. ಸರ್ಕಾರ ಸರಿಯಾದ ಅರ್ಜಿಗೆ ಮಾತ್ರ ಪ್ರತಿಕ್ರಿಯಿಸುತ್ತದೆ. ‘ಅಸ್ಪಷ್ಟ ಅಫಿಡವಿಟ್’ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಸರ್ಕಾರದ ವಾದವನ್ನು ಒಪ್ಪಿಕೊಂಡ ನ್ಯಾಯ ಪೀಠವು ಅಫಿಡವಿಟ್ ಅನ್ನು ಅಸಮರ್ಪಕ ಎಂದು ತಿರಸ್ಕೃತಗೊಳಿಸಿತ್ತು.

ಬುಧವಾರ ವಿಚಾರಣೆ ಪ್ರಾರಂಭಿಸಿದ ನ್ಯಾಯಾಲಯ

ಮಂಗಳವಾರ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ತನ್ನ ವಾದ ಪೂರ್ಣಗೊಳಿಸಿದ್ದು, ಇಂದು ಮತ್ತೊಬ್ಬ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ವಾದ ಮುಂದುವರಿಸಲಿದ್ದಾರೆ.

  • ವಕೀಲ ಕಲೀಶ್ವರಂ ರಾಜ್‌: ಗೊಂದಲಗಳನ್ನು ನಿಯಂತ್ರಿಸಲು ಪ್ರತಿ ವಕೀಲರಿಗೆ ನಿರ್ದಿಷ್ಟ ಸಮಯ ನಿಗದಿಪಡಿಸುವುದು ಉತ್ತಮ.
  • ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ ಇದಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ.
  • ಮುಖ್ಯನ್ಯಾಯಮೂರ್ತಿ ಅವಸ್ಥಿ: ಮಧ್ಯಪ್ರವೇಶದ ಮೂಲಕ ಮನವಿಗಳನ್ನು ಆಲಿಸುವುದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ.
  • ವಕೀಲ ಶಾದನ್‌ ಫರಾಸತ್‌: ಸಮಯ ನಿಗದಿಪಡಿಸಿ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ, ನಮ್ಮೆಲ್ಲರ ವಾದವನ್ನೂ ಆಲಿಸಿ. ನಮ್ಮನ್ನು ವಾದದಿಂದ ಹೊರಗಿಡಬೇಡಿ.
  • ತನ್ನ ವಾದ ಮಂಡನೆ ಪ್ರಾರಂಭಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌
  • ರವಿವರ್ಮ ಕುಮಾರ್‌: ಕರ್ನಾಟಕ ಶಿಕ್ಷಣ ನಿಯಮಗಳು 1995ರಲ್ಲಿನ ನಿಯಮ 11 ಅನ್ನು ನೋಡಿ. ಈ ನಿಯಮದ ಪ್ರಕಾರ ಶಿಕ್ಷಣ ಸಂಸ್ಥೆ ತನ್ನ ಸಮವಸ್ತ್ರ ಬದಲಿಸಬೇಕಾದರೆ ಆ ಸಂಸ್ಥೆಯು ಒಂದು ವರ್ಷ ಮುಂಚಿತವಾಗಿ ನೋಟಿಸ್‌ ನೀಡಬೇಕು. ಕರ್ನಾಟಕ ಶಿಕ್ಷಣ ಕಾಯಿದೆ ಅಡಿ ಇನ್ನೊಂದು ರೂಪದಲ್ಲಿ ನಿಯಮಗಳನ್ನು ರೂಪಿಸಲಾಗಿದೆ.
  • ಪರಿಶೀಲನಾ ಸಮಿತಿಯ ನಿಯಮಗಳ ಉಲ್ಲೇಖಿಸಿದ ರವಿವರ್ಮ ಕುಮಾರ್‌ ಅವರು, ಈ ನಿಯಮಗಳ ಅಡಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗೆ ಮಾನ್ಯತೆ ಇಲ್ಲ. ಆಕ್ಷೇಪಾರ್ಹ ಸಂಸ್ಥೆಯನ್ನು ನಿರ್ವಹಿಸುವ ಸರ್ಕಾರಿ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಪದವಿ ಪೂರ್ವ ಸರ್ಕಾರಿ ಕಾಲೇಜುಗಳಿಗೆ ಸಮವಸ್ತ್ರ ಸೂಚಿಸುವುದು ಕಾನೂನುಬಾಹಿರವಾಗಿದೆ.
  • ಮುಖ್ಯ ನ್ಯಾಯಮೂರ್ತಿ: ಈ ಮಾರ್ಗಸೂಚಿಯನ್ನು ಯಾವ ಅಧಿಕಾರದಿಂದ ಹೊರಡಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿಲ್ಲ.
  • ರವಿವರ್ಮ ಕುಮಾರ್‌: ಇದನ್ನು ಸರ್ಕಾರದ ಇಲಾಖೆ ಹೊರಡಿಸಿದೆ.
  • ಮುಖ್ಯನ್ಯಾಯಮೂರ್ತಿ: ಇದು ನಿಯಮವಲ್ಲ.
  • ರವಿವರ್ಮ ಕುಮಾರ್‌: ಇದು ನಿಯಮವಲ್ಲ ಎಂಬುದಕ್ಕೆ ನನ್ನ ಸಹಮತವಿದೆ. ಆದರೆ, ಸಮವಸ್ತ್ರ ನಿಗದಿ ಮಾಡಿಲ್ಲ ಎಂಬುದು ವಾಸ್ತವಿಕ ಹೇಳಿಕೆಯಾಗಿದೆ.
  • ಯಮೂರ್ತಿ ದೀಕ್ಷಿತ್‌: ನೀವು ಇದನ್ನು ಆಧರಿಸಿ ವಾದಿಸುತ್ತಿದ್ದೀರಿ. ಇದನ್ನು ನೀವು ಆಧರಿಸುವುದಾದರೆ ಅದರ ಕಾನೂನು ಸ್ಥಿತಿಗತಿ ತಿಳಿಯಲು ನಾವು ಬಯಸುತ್ತೇವೆ.
  • ರವಿವರ್ಮ: ಈ ದಾಖಲೆಯಲ್ಲಿ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇಲ್ಲಿ ಶೈಕ್ಷಣಿಕ ವರ್ಷ, ಪ್ರತಿ ಕೋರ್ಸ್‌ಗೆ ಪ್ರವೇಶಾತಿ ಹೇಗೆ ನೀಡಬೇಕು ಎಂಬುದು ಇದೆ. ಯಾವುದೇ ಪ್ರಾಂಶುಪಾಲರು ಸಮವಸ್ತ್ರವನ್ನು ರೂಪಿಸಬಾರದು, ಒಂದು ವೇಳೆ ಪ್ರಾಂಶುಪಾಲರು ಸಮವಸ್ತ್ರಕ್ಕೆ ಒತ್ತಾಯಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳಬಹುದು ಎಂದು ಸ್ವತಃ ಇಲಾಖೆಯೆ ಖಡಾಖಂಡಿತವಾಗಿ ಹೇಳಿದೆ. ಇದರ ಬಗ್ಗೆ ದಾಖಲೆ ನಾನು ಸಲ್ಲಿಸುತ್ತಿದ್ದೇನೆ. ಆದರೆ ಈಗ ಹಿಜಾಬ್‌ ಧರಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮವಹಿಸಲಾಗುತ್ತಿದೆ.
  • ರವಿವರ್ಮ: ಕಾಯಿದೆಯ ನಿಬಂಧನೆ ಅಥವಾ ಯಾವುದೇ ನಿಯಮದ ಅಡಿ ಯಾವುದೇ ಸಮವಸ್ತ್ರ ಉಲ್ಲೇಖಿಸಿಲ್ಲ. ಕಾಯಿದೆ ಅಥವಾ ನಿಯಮಗಳ ಅಡಿ ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಲಾಗಿಲ್ಲ.
  • ನ್ಯಾಯಮೂರ್ತಿ ದೀಕ್ಷಿತ್‌: ನಾನು ಅದನ್ನು ತಾರ್ಕಿಕವಾಗಿ ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದೇನೆ. ಹಾಗೆಂದು ಯಾವುದೇ ನಿಷೇಧವಿಲ್ಲ. ತಾರ್ಕಿಕವಾಗಿ ಅದನ್ನು ವಿಶ್ಲೇಷಿಸಿದರೆ – ಕೃಪಾನ್ ಒಯ್ಯಲು ಅಥವಾ ಆಕ್ಷೇಪಾರ್ಹವಾದ ಯಾವುದಕ್ಕೂ ಯಾವುದೇ ನಿಷೇಧವಿಲ್ಲ. ಏಕೆಂದರೆ, ಇವುಗಳು ಕಾಯಿದೆಯ ಬಗ್ಗೆ ಮಾತನಾಡುವುದಿಲ್ಲ ಎಂದರೆ ಅದನ್ನು ಅನುಮತಿಸಬಹುದು ಎಂದರ್ಥವಲ್ಲ. ಹಿಜಾಬ್ ಅನ್ನು ಅನುಮತಿಸಬೇಕು ಅಥವಾ ಅನುಮತಿಸಬಾರದು ಎಂದು ಅದು ಹೇಳುವುದಿಲ್ಲ ನಿಜ. ಆದರೆ, ಅದನ್ನು ಸ್ವತಂತ್ರವಾಗಿ ವಾದಿಸಬೇಕು.
  • ರವಿವರ್ಮ ಕುಮಾರ್‌: ಹಿಜಾಬ್‌ ನಿಷೇಧಿಸಿಲ್ಲ ಎಂದಷ್ಟೇ ನಾನು ಹೇಳುತ್ತಿದ್ದೇನೆ. ಹೀಗಾಗಿ, ಕಾನೂನಿನ ಯಾವ ನಿಯಮದಡಿ ನನ್ನನ್ನು ತರಗತಿಯಿಂದ ಹೊರಗಿಡಲಾಗಿದೆ? ಇದಕ್ಕೆ ಅನುಮತಿಸಿದವರು ಯಾರು?
  • ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಜಾಬ್‌ ಉಲ್ಲೇಖಿಸಿರುವ ಸರ್ಕಾರದ ಭಾಗಶಃ ಆದೇಶವನ್ನು ಉಲ್ಲೇಖಿಸಿ, “ಅಂತಿಮವಾಗಿ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಸರ್ಕಾರವು ಕಾಲೇಜು ಅಭಿವೃದ್ಧಿ ಸಮಿತಿಗೆ ಸಮವಸ್ತ್ರ ಸೂಚಿಸುವ ಅಧಿಕಾರ ನೀಡಿದೆ”
  • “ಕೆಲವು ವಿದ್ಯಾರ್ಥಿಗಳು ತಮ್ಮ ಧರ್ಮದ ಪ್ರಕಾರ ಆಚರಣೆಯಲ್ಲಿ ತೊಡಗಿದ್ದಾರೆ ಎಂಬುದು ಗಮನಕ್ಕೆ ಬಂದಿದೆ” ಎಂದು ಸರ್ಕಾರದ ಆದೇಶದ ಒಂದು ಭಾಗವನ್ನು ಉಲ್ಲೇಖಿಸಿ, ಇದು ಹಿಜಾಬ್‌ ಧರಿಸಿ ಬಂದವರ ಮೇಲೆ ಮಾಡಿದ ನೇರ ದೋಷಾರೋಪಣೆಯಾಗಿದೆ ಎಂದು ಕುಮಾರ್‌ ಹೇಳುತ್ತಾರೆ.
  • ನಿಯೋಗದ ಬಗ್ಗೆ ಉಲ್ಲೇಖವಿರುವ ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್‌ 143 ಅನ್ನು ಉಲ್ಲೇಖಿಸಿದ ರವಿವರ್ಮ ಕುಮಾರ್, ಸೆಕ್ಷನ್ 143 ರ ಪ್ರಕಾರ ನಿಯೋಗವು “ಅಂತಹ ಅಧಿಕಾರಿ ಅಥವಾ ರಾಜ್ಯ ಸರ್ಕಾರಕ್ಕೆ ಅಧೀನವಾಗಿರುವ ಪ್ರಾಧಿಕಾರ” ದಲ್ಲಿ ಇರಬೇಕು ಎಂದು ಹೇಳುತ್ತದೆ. ಆದರೆ ಕಾಲೇಜು ಅಭಿವೃದ್ಧಿ ಸಮಿತಿ ಆ ಪ್ರಾಧಿಕಾರವಲ್ಲ ಎಂದು ಹೇಳುತ್ತಾರೆ.
  • ರವಿವರ್ಮ ಕುಮಾರ್‌: ವಿದ್ಯಾರ್ಥಿಗಳ ಕಲ್ಯಾಣ ಅಥವಾ ಶಿಸ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ರಚಿಸಲಾಗಿಲ್ಲ. ಇದು ಶೈಕ್ಷಣಿಕ ಗುಣಮಟ್ಟಕ್ಕೆ ಮಾತ್ರ ಸೀಮಿತ.
  • ಮುಖ್ಯ ನ್ಯಾಯಮೂರ್ತಿ: ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಕಾಲೇಜುಗಳು ಸಮವಸ್ತ್ರ ಸೂಚಿಸಬಾರದೇ? ಏಕರೂಪತೆ, ಶಿಸ್ತು, ಸಮವಸ್ತ್ರವನ್ನು ಕಾಪಾಡಿಕೊಳ್ಳಲು ಏಕೆ ಸಾಧ್ಯವಿಲ್ಲ? ಇದು ಶೈಕ್ಷಣಿಕ ಮಾನದಂಡಗಳ ಭಾಗವಾಗಿರಬಹುದಲ್ಲವೆ.
  • ರವಿವರ್ಮ ಕುಮಾರ್‌: ಇದು ಶೈಕ್ಷಣಿಕ ಗುಣಮಟ್ಟಕ್ಕೆ ಸಂಬಂಧಿಸಿಲ್ಲ. ಶೈಕ್ಷಣಿಕ ಗುಣಮಟ್ಟವನ್ನು ಶಿಕ್ಷಕರು-ವಿದ್ಯಾರ್ಥಿಗಳ ಅನುಪಾತ, ಪಠ್ಯಕ್ರಮ, ತರಗತಿ ನಡೆಸುವ ವಿಧಾನ ಇತ್ಯಾದಿ ನಿರ್ಧರಿಸುತ್ತದೆ. ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ಅಧಿಕಾರ ಬಳಸುವುವುದನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಊಹಿಸುವುದಕ್ಕೆ ಸಾಧ್ಯವಿಲ್ಲ.
  • ಮುಖ್ಯ ನ್ಯಾಯಮೂರ್ತಿ: ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅತ್ಯಗತ್ಯವಾದ ಶಿಸ್ತು ಮತ್ತು ಏಕರೂಪತೆಯನ್ನು ಕಾಪಾಡಿಕೊಳ್ಳುವುದು ಎಂದು ಏಕೆ ಅರ್ಥೈಸಲಾಗುವುದಿಲ್ಲ.
  • ರವಿವರ್ಮ ಕುಮಾರ್‌: ಅದನ್ನು ಈಗಾಗಲೇ ಒಳಗೊಳ್ಳಲಾಗಿದೆ. ಸೆಕ್ಷನ್‌ 2ರಲ್ಲಿ ಅದಕ್ಕೆ ಅವಕಾಶವಿದೆ.
  • ನ್ಯಾಯಮೂರ್ತಿ ದೀಕ್ಷಿತ್‌: ಈ ಪೊಲೀಸ್‌ ಅಧಿಕಾರ ಎಂದರೇನು. ಪೊಲೀಸ್‌ ಇಲಾಖೆಯಲ್ಲಿ ಇದನ್ನು ಪೊಲೀಸ್‌ ಅಧಿಕಾರ ಎಂದರೆ ಅರ್ಥವಾಗುತ್ತದೆ. ಶೈಕ್ಷಣಿಕ ಸಂಸ್ಥೆಯಲ್ಲಿ ಇದನ್ನು ಪೊಲೀಸ್‌ ಅಧಿಕಾರ ಎನ್ನಲಾಗದು. ನೀವು ಹೇಳುತ್ತಿರುವುದಕ್ಕೆ ನ್ಯಾಯಾಂಗದ ಅಭಿಪ್ರಾಯವೂ ವಿರುದ್ಧವಾಗಿದೆ. ಒಂದೇ ಒಂದು ನಿರ್ಧಾರ ವಿರುದ್ಧವಾಗಿದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಾನು ತಪ್ಪು ಎಂದು ನಾನು ಒಪ್ಪಿಕೊಳ್ಳುವೆ.
  • ರವಿವರ್ಮ ಕುಮಾರ್‌: ನಾನು ಹೇಳುತ್ತಿರುವುದು ಸಮವಸ್ತ್ರವನ್ನು ಸೂಚಿಸುವ ಅಧಿಕಾರವನ್ನು ಸರ್ಕಾರದ ಆದೇಶ ನೀಡುವುದಿಲ್ಲ.
  • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ಸಮವಸ್ತ್ರ ಸೂಚಿಸುವ ಅಧಿಕಾರ ಕಾಲೇಜು ಅಭಿಮೃದ್ದಿ ಸಮಿತಿಗೆ ಇಲ್ಲ ಎಂದು ನೀವು ಹೇಳುತ್ತಿದ್ದೀರಾ?
  • ರವಿವರ್ಮ ಕುಮಾರ್‌: ಹೌದು. ಇದಕ್ಕೆ ಸೆಕ್ಷನ್‌ 143ರಲ್ಲಿ ಯಾವುದೇ ಅಧಿಕಾರ ನೀಡಲಾಗಿಲ್ಲ. ಕಾಯಿದೆ ಅಡಿ ಕಾಲೇಜು ಅಭಿವೃದ್ದಿ ಸಮಿತಿ ಪ್ರಾಧಿಕಾರವಲ್ಲ. ಶಾಸಕರೊಬ್ಬರನ್ನು ಸರ್ಕಾರಕ್ಕೆ ‘ಅಧೀನ’ ಎಂದು ಕರೆಯಬಹುದೇ? ನಮ್ಮ ಸಂವಿಧಾನದ ಅಡಿ ಜನಪ್ರತಿನಿಧಿಗಳು, ಶಾಸಕರು ಮತ್ತು ಸಂಸದರು ಸರ್ಕಾರವನ್ನು ಉತ್ತರಾದಾಯಿತ್ವಕ್ಕೆ ಗುರುತುಪಡಿಸುತ್ತಾರೆ. ಸರ್ಕಾರವನ್ನು ಉತ್ತರಾದಾಯಿತ್ವಕ್ಕೆ ಒಳಪಡಿಸುವುದು ಭಾರತ ಸಂವಿಧಾನದ ಹಾಲ್‌ಮಾರ್ಕ್‌ ಆಗಿದೆ.
  • ರವಿವರ್ಮ ಕುಮಾರ್‌: ಆಡಳಿತವನ್ನು ಶಾಸಕರು ಹೇಗೆ ತಮ್ಮ ಕೈಗೆ ಪಡೆಯಬಹುದು? ಅಧಿಕಾರಗಳ ಪ್ರತ್ಯೇಕತೆ ಸಿದ್ಧಾಂತವು ಅಧಿಕಾರಗಳ ಮಿಶ್ರಣವಿಲ್ಲ ಎಂದು ಖಚಿತಪಡಿಸಿಕೊಳ್ಳುವುದು. ಶಾಸಕ ಅಥವಾ ಸಂಸದರಿಗೆ ಶಾಸನದ ಅಡಿಯಲ್ಲಿ ಅಥವಾ ಸಂವಿಧಾನದ 162 ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ವಹಿಸಲಾಗುವುದಿಲ್ಲ.
  • ರವಿವರ್ಮ ಕುಮಾರ್‌: ಶಾಸಕರಿಗೆ ಆಡಳಿತಾತ್ಮಕ ಅಧಿಕಾರ ನೀಡುವುದು ಆತ್ಮಹತ್ಯೆಕಾರಿ ನಿರ್ಧಾರ. ಒಬ್ಬ ಶಾಸಕ, ಅವರು ಯಾರೇ ಆಗಿರಲಿ, ಅವರು ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ವಿದ್ಯಾರ್ಥಿಗಳ ಕಲ್ಯಾಣವನ್ನು ನೀವು ರಾಜಕೀಯ ಪಕ್ಷ ಅಥವಾ ರಾಜಕೀಯ ಸಿದ್ಧಾಂತಕ್ಕೆ ಒಪ್ಪಿಸಬಹುದೇ? ಹೀಗಾಗಿ, ಇಂಥ ಸಮಿತಿಯನ್ನು ರಚಿಸುವುದು ಭಾರತದ ಸಂವಿಧಾನ ಮತ್ತು ಅಧಿಕಾರ ಪ್ರತ್ಯೇಕತಾ ಸಿದ್ಧಾಂತಕ್ಕೆ ಸಾವಿನ ಮೊಳೆ ಹೊಡೆದಂತೆ.
  • ರವಿವರ್ಮ ಕುಮಾರ್‌: ದಕ್ಷಿಣ ಭಾರತದಲ್ಲಿ ನಮಗೆ ಧಾರ್ಮಿಕ ಸಂಕೇತಗಳ ಬಗ್ಗೆ ಹೆಚ್ಚು ಒಲವು. ಯಾವುದೇ ಸ್ಥಳಕ್ಕೆ ಹೋದರೂ ವಿಶೇಷವಾಗಿ ಸಾರ್ವಜನಿಕ ಸ್ಥಳಗಳಿಗೆ ಹೋದಾಗ, ನಮ್ಮ ಶಿಕ್ಷಕರೂ ಧಾರ್ಮಿಕ ಸಂಕೇತಗಳನ್ನು ಬಿಂಬಿಸುವ ಉಡುಪು ಹಾಕುತ್ತಾರೆ.
  • ಪ್ರಕರಣದ ಒಂದರ ಉಲ್ಲೇಖ ಮಾಡಿದ ರವಿವರ್ಮ, ದೇವಸ್ಥಾನವೊಂದರಲ್ಲಿ ಆನೆ ಇತ್ತು. ಆ ಆನೆಯ ಹಣೆಯಲ್ಲಿ ಯಾವ ಧಾರ್ಮಿಕ ಚಿಹ್ನೆ ಇರಬೇಕು ಎಂಬ ಪ್ರಶ್ನೆ ಎದ್ದಿತು. ಸದರಿ ವಿಚಾರವು ಸಮಾಲೋಚನಾ ಸಭೆಯಲ್ಲಿ ನಿರ್ಧಾರವಾಗುವ ವೇಳೆಗೆ ಆನೆ ಸಾವನ್ನಪ್ಪಿತ್ತು ಎಂದು ಹೇಳುತ್ತಾರೆ.
  • ನ್ಯಾಯಮೂರ್ತಿ ದೀಕ್ಷಿತ್‌: ಈ ಪ್ರಕರಣದಲ್ಲಿ ಅದಾಗಬಾರದು.
  • ರವಿವರ್ಮ ಕುಮಾರ್‌: ಇಲ್ಲಿ ಆ ರೀತಿ ಆಗಬಾರದು ಎಂದು ನಾನು ವಿನಯಪೂರ್ವಕವಾಗಿ ಕೇಳುತ್ತೇನೆ. ಈ ವಿಷಯವಾಗಿ ಸುಮಾರು 50 ವರ್ಷಗಳ ಕಾಲ ಕಾನೂನು ಹೋರಾಟ ಕಂಡಿತು. ಕೊನೆಯ ಹಂತದಲ್ಲಿ ಖ್ಯಾತ ಪರಾಸರನ್‌ ಅವರು ಇದರಲ್ಲಿ ವಾದಿಸಿದ್ದರೆನ್ನುವ ನೆನಪು.
  • ರವಿವರ್ಮ ಕುಮಾರ್‌ ಅವರಿಂದ ಸಂಶೋಧನಾ ಪ್ರಬಂಧದ ಉಲ್ಲೇಖ. ಇದರಲ್ಲಿ ಬಹುತೇಕ ಮಹಿಳೆಯರು ಶಿರವಸ್ತ್ರ ಬಳಸುತ್ತಾರೆ ಎಂದು ಕಂಡುಕೊಳ್ಳಲಾಗಿದೆ. 85%ರಷ್ಟು ಮುಸ್ಲಿಮ್‌, 86%ರಷ್ಟು ಸಿಖ್‌ ಮತ್ತು 59%ರಷ್ಟು ಹಿಂದೂ ಮಹಿಳೆಯರು ಶಿರವಸ್ತ್ರ ಬಳಸುತ್ತಾರೆ ಎಂದು ಹೇಳಲಾಗಿದೆ.
  • ನ್ಯಾಯಮೂರ್ತಿ ದೀಕ್ಷಿತ್‌: ಸಂಶೋಧನಾ ಪ್ರಬಂಧದ ಅಧಿಕೃತತೆ ಕುರಿತು ಪ್ರಶ್ನೆಯಿಂದೆ.
  • ರವಿವರ್ಮ ಕುಮಾರ್‌: ದೇಶದ ವೈವಿಧ್ಯತೆಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ನೂರಾರು ಧಾರ್ಮಿಕ ಸಂಕೇತಗಳು ಇರುವಾಗ ಸರ್ಕಾರ ಹಿಜಾಬ್‌ ಅನ್ನೇ ಏಕೆ ಗುರಿಯಾಗಿಸಿಕೊಂಡಿದೆ? ಸಂವಿಧಾದನ 15ನೇ ವಿಧಿಯ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ ಆಧರಿಸಿ ರಾಜ್ಯವು ಯಾವುದೇ ನಾಗರಿಕರ ವಿರುದ್ಧ ತಾರತಮ್ಯ ಮಾಡಬಾರದು. ಈ ಪ್ರಕರಣದಲ್ಲಿ ನನ್ನ ಧರ್ಮದ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ.
  • ಮುಖ್ಯ ನ್ಯಾಯಮೂರ್ತಿ ಅವಸ್ಥಿ: 15ನೇ ವಿಧಿಯು ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ ಎಂದು ನೀವು ಹೇಳುತ್ತೀರಿ. ಆದರೆ ನಿಯಮವು ಎಲ್ಲರಿಗೂ ಶಿರವಸ್ತ್ರ ನಿಷೇಧಿಸುತ್ತದೆ, ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರವಲ್ಲ.
  • ರವಿವರ್ಮ ಕುಮಾರ್‌: ಹಿಜಾಬ್‌ ಅನ್ನು ಕೇವಲ ಮುಸ್ಲಿಮರು ಮಾತ್ರವೇ ಧರಿಸುತ್ತಾರೆ. ಗೂಂಗಟ್‌ ಧರಿಸಲು ಅನುಮತಿ ಇದೆ, ಬಳೆ ಧರಿಸಲು ಅನುಮತಿ ಇದೆ. ಕ್ರಿಶ್ಚಿಯನ್ನರ ಶಿಲುಬೆಗೇಕೆ ನಿಷೇಧವಿಲ್ಲ? ಸಿಖ್ಖರ ಪಗಡಿಗೇಕೆ ನಿಷೇಧವಿಲ್ಲ? ಇಲ್ಲಿ ಧಾರ್ಮಿಕ ಪೂರ್ವಾಗ್ರಹ ತುಂಬಿದೆ, ಸೂಚನೆ ಇಲ್ಲ. ಕಾಯಿದೆಯ ಅಡಿಯಲ್ಲಿ ಯಾವುದೇ ಅಧಿಕಾರವನ್ನು ಹೊಂದಿರದ ವ್ಯಕ್ತಿಗಳಿಂದ ನಮ್ಮನ್ನು ತರಗತಿಯಿಂದ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಗಿದೆ.
  • ರವಿವರ್ಮ ಕುಮಾರ್: ಶಿಕ್ಷಣದ ಗುರಿ ಬಹುತ್ವವನ್ನು ಉತ್ತೇಜಿಸುವುದಾಗಿದೆಯೆ ಹೊರತು ಏಕರೂಪತೆಯನ್ನಲ್ಲ. ತರಗತಿಯು ಸಮಾಜದ ವೈವಿಧ್ಯತೆಯ ಪ್ರತಿಬಿಂಬವಾಗಬೇಕು.
    ಮೇಲಿನ ವಾದಕ್ಕೆ ಪೂರಕವಾಗಿ ಪುಟ್ಟಸ್ವಾಮಿ ಮತ್ತು ಎನ್‌ಎಎಲ್‌ಎಸ್‌ಎ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸುತ್ತಾರೆ.
  • ರವಿವರ್ಮ ಕುಮಾರ್: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಆಕೆಯ ಧಾರ್ಮಿಕ ಚಿಹ್ನೆ ಧರಿಸಿರುವ ವ್ಯಕ್ತಿಗೆ ತರಗತಿಗಳಿಗೆ ಹಾಜರಾಗಲು ಏಕೆ ಅವಕಾಶ ನೀಡಬಾರದು? ಇದು ಕಠಿಣ ಕ್ರಮವಾಗಿದೆ.
  • ‘ತರಗತಿಯಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕು. ಇದು ಆರ್‌ಟಿಇ ಕಾಯಿದೆಯ ಧ್ಯೇಯವಾಕ್ಯ’ – ಇದನ್ನು ಸೊಸೈಟಿ ಆಫ್ ಅನ್‌ಅಯ್ಡೆಡ್ ಸ್ಕೂಲ್ಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮುಂದೆ ಭಾರತ ಸರ್ಕಾರ ಹೇಳಿದೆ ಎಂದು ರವಿವರ್ಮ ವಾದಿಸುತ್ತಾರೆ.
  • ರವಿವರ್ಮ: ನನ್ನ ವಾದ ಏನೆಂದರೆ, ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಧಾರ್ಮಿಕ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಯನ್ನು ತರಗತಿಗಳಿಗೆ ಹಾಜರಾಗಲು ಯಾಕೆ ಅನುಮತಿಸಬಾರದು.
  • ರವಿವರ್ಮ ಕುಮಾರ್: ಮುಸ್ಲಿಂ ಹುಡುಗಿಯರು ತರಗತಿಗಳಲ್ಲಿ ಕನಿಷ್ಠ ಪ್ರಾತಿನಿಧ್ಯ ಹೊಂದಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು. ಈ ಆಧಾರದ ಮೇಲೆ ಅವರನ್ನು ತರಗತಿಯಿಂದ ಹೊರಗೆ ಹಾಕಿದರೆ ನಿಜಕ್ಕೂ ಅವರ ಭವಿಷ್ಯಕ್ಕೆ ಕತ್ತಲು ಕವಿಯಲಿದೆ.
  • ಹಿರಿಯ ವಕೀಲ ರವಿವರ್ಮ ಕುಮಾರ್ ತಮ್ಮ ಅಹವಾಲುಗಳನ್ನು ಮುಕ್ತಾಯಗೊಳಿಸುತ್ತಾರೆ.
  • ಹಿರಿಯ ವಕೀಲ ಯೂಸೂಫ್‌ ಮುಚ್ಚಾಲ ಅವರಿಂದ ವಾದ ಮಂಡನೆ ಆರಂಭ.
  • ಯೂಸೂಫ್‌ ಮುಚ್ಚಾಲ: ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶಿಸಲು ಫೆಬ್ರವರಿ 3ರಿಂದ ನಿರ್ಬಂಧ ವಿಧಿಸಲಾಗಿದೆ. 25ನೇ ವಿಧಿ ಅಡಿ ಆತ್ಮಸಾಕ್ಷಿ ಎಂಬುವುದು ಬಹಳ ವಿಶಾಲವಾದ ಪದವಾಗಿದೆ. ದೇವರನ್ನು ನಂಬದ ಜನರು ಇನ್ನೂ ಆತ್ಮಸಾಕ್ಷಿಯಲ್ಲಿ ತಮ್ಮ ನಂಬಿಕೆಗೆ ಅರ್ಹರಾಗಿರುತ್ತಾರೆ. ಧರ್ಮಗಳ ಸಾರ್ವತ್ರಿಕತೆಯನ್ನು ನಂಬುವ ಜನರು ಇರಬಹುದು. ಅವರ ರಕ್ಷಣೆಗಾಗಿ ನ್ಯಾಯಾಲಯದ ಮುಂದೆ ಬಂದರೆ, ಅತ್ಯಗತ್ಯ ಧಾರ್ಮಿಕ ಆಚರಣೆ ಬಗ್ಗೆ ಮಾತನಾಡಬೇಕಾಗಿಲ್ಲ.
  • ಒಂದೋ ಶಿಕ್ಷಣ ಪಡೆಯಬೇಕು ಇಲ್ಲವೆಂದರೆ ಆತ್ಮಸಾಕ್ಷಿಯನ್ನು ಉಳಿಸಿಕೊಳ್ಳಬೇಕು ಎಂಬಂತ ಪರಿಸ್ಥಿತಿಗೆ ಮುಸ್ಲಿಂ ಮಹಿಳೆಯರನ್ನು ಯಾಕೆ ದೂಡಬೇಕು? ಎಂದು ಯೂಸುಫ್ ಪ್ರಶ್ನಿಸುತ್ತಾರೆ.
  • ಯೂಸುಫ್ :ಸಂವಿಧಾನದ 15ಎ ವಿಧಿಯ ಪ್ರಕಾರ ಪ್ರತಿಯೊಬ್ಬ ನಾಗರಿಕನು ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವೈವಿಧ್ಯಗಳನ್ನು ಮೀರಿ ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯ ಮತ್ತು ಸಾಮಾನ್ಯ ಸಹೋದರತ್ವದ ಮನೋಭಾವವನ್ನು ಉತ್ತೇಜಿಸಬೇಕು. ಏಕರೂಪತೆ ಮತ್ತು ಶಿಸ್ತು ಹೊಂದುವ ಉದ್ದೇಶದಿಂದ ಸಮವಸ್ತ್ರ ತರಲು ಎಂದು ಬಯಸಿದ್ದಾರೆ ಎಂದು ಇಟ್ಟುಕೊಂಡರೂ ಸಂಬಂಧಪಟ್ಟವರು ಮತ್ತು ತಮ್ಮ ಹಕ್ಕುಗಳಿಗೆ ಧಕ್ಕೆಯಾಗುವುದನ್ನು ಯಾಕೆ ಹೇಳಬಾರದು.
  • ಯೂಸುಫ್: ಮಧ್ಯಂತರ ಮನವಿಗಳನ್ನು ವಿಲೇವಾರಿ ಮಾಡಲಾಗಿಲ್ಲ. ಇದು ಮಧ್ಯಂತರ ಆದೇಶದ ಮೇಲಿನ ವಾದವೋ ಅಥವಾ ಅಂತಿಮ ವಿಚಾರಣೆಯೋ?
  • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ನೀವು ವಾದ ಆರಂಭಿಸಿದಿರಿ ನಾವು ಕೇಳುತ್ತಿದ್ದೇವೆ. ನೀವು ಅಂತಿಮ ವಾದ  ಮಂಡಿಸಿದ್ದೀರೋ ಅಥವಾ ಮಧ್ಯಂತರ ವಾದವೋ ನಮಗೆ ಗೊತ್ತಿಲ್ಲ. ಮಧ್ಯಂತರ ಪರಿಹಾರ ಕೋರಿದ್ದ ಯಾವುದೇ ಮನವಿಯನ್ನು ನಾವು ವಿಲೇವಾರಿ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ.
  • ಈ ನಡುವೆ ಪ್ರೊ. ರವಿವರ್ಮ ಕುಮಾರ್‌ ಅವರು ಮಧ್ಯಂತರ ಆದೇಶದಲ್ಲಿ ಸ್ಪಷ್ಟತೆ ಕೇಳುತ್ತಾರೆ.
  • ಇದಕ್ಕೆ ಸಂಬಂಧಿಸಿದ ಮನವಿಯನ್ನು ಕೆಲವು ತಾಂತ್ರಿಕ ಕಾರಣಗಾಗಿ ನಿನ್ನೆ ಆಲಿಸಿಲ್ಲ.
    ಹೆಚ್ಚುವರಿ ಶಿರವಸ್ತ್ರಕ್ಕೆ ಬದಲಾಗಿ, ಒಂದೇ ಬಣ್ಣದ ದುಪ್ಪಟ್ಟಾ ಹಾಕಲು ವಿದ್ಯಾರ್ಥಿಗಳಿಗೆ ಅನುಮತಿಸಬೇಕು ಎಂಬುದನ್ನು ಮನವಿಯಲ್ಲಿ ವಿವರಿಸಲಾಗಿದೆ.
  • ಈ ಮನವಿಗೆ ಆಕ್ಷೇಪಣೆ ಸಲ್ಲಿಸಲು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ ಎರಡು ದಿನ ಕಾಲಾವಕಾಶ ಕೋರುತ್ತಾರೆ.
  • ಇದಕ್ಕೆ ನ್ಯಾಯಾಲಯ ಅನುಮತಿ ನೀಡುತ್ತದೆ.
  • ದಿನ ವಿಚಾರಣೆ ಮುಕ್ತಾಯ; ವಿಚಾರಣೆ ನಾಳೆಗೆ ಮುಂದೂಡಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...