Homeಮುಖಪುಟಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ.

- Advertisement -
- Advertisement -

ಹಿಂದೆ ಒಂದು ಕಾಲವಿತ್ತು. ಬ್ರಿಟಿಷರ ವಿರುದ್ಧ ನಿಂತು ನಮ್ಮವರು, ಸುಧೀರ್ಘ ಹೋರಾಟದ ನಂತರ ಸ್ವಾಂತಂತ್ರ್ಯ ದೊರಕಿಸುವಲ್ಲಿ ಯಶಸ್ವಿಯಾದರು. ಅಂದಿನ ಹೋರಾಟ, ಪ್ರತಿಭಟನೆ ಅತೀ ಅಗತ್ಯದ್ದಾಗಿತ್ತು. ಸ್ವತಂತ್ರ ಭಾರತದ ನಂತರದ ಗುರಿ, ದೇಶದ ಅಭಿವೃದ್ಧಿ. ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಯೋರ್ವನ ಏಳಿಗೆ, ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮಹಾನ್ ವ್ಯಕ್ತಿಯಾದ ಅಂಬೇಡ್ಕರ್ ಸಂವಿಧಾನ ರೂಪಿಸಿದರು. ಈ ಇತಿಹಾಸ ಬಹಳಷ್ಟು ಸರಳ ಮತ್ತು ಪ್ರತಿಯೋರ್ವನಿಗೂ ತಿಳಿದಿರುವ ವಿಚಾರ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ‘ದೇಶದ ಏಳಿಗೆ’ಯ ಕುರಿತಾಗಿ.

ಒಂದು ದೇಶವನ್ನು ನಾವು ಅಭಿವೃದ್ಧಿ ಹೊಂದಿದೆ ಅಥವಾ ಅಭಿವೃದ್ಧಿ ಹೊಂದುತ್ತಿದೆ ಎಂದು ಕರೆಯಬೇಕಾದರೆ,

·       ರಾಷ್ಟ್ರೀಯ ಉತ್ಪನ್ನ (GDP), ರಾಷ್ಟ್ರೀಯ ಆದಾಯ (GNI)

·       ದೇಶದ ಕೈಗಾರೀಕರಣದ ಹಂತ

·       ಜನರ ಜೀವನ ಮಟ್ಟ

·       ಬಳಸುತ್ತಿರುವ ತಂತ್ರಜ್ಞಾನದ ಗುಣಮಟ್ಟ

ಇವೇ ಮೊದಲಾದ ಅಂಶಗಳು ಮುಖ್ಯವಾಗಿ ಅಳತೆಗೋಲಾಗುತ್ತವೆ. ಇವುಗಳ ಆಧಾರದ ಮೇಲೆ ದೇಶದ ಏಳಿಗೆ ನಿಂತಿದೆ. ಇಂದು ಸುಮಾರು 22 ಶೇಕಡಾ ಭಾರತೀಯರು ಬಡತನದಲ್ಲಿದ್ದರೆ, ನಿರುದ್ಯೋಗ ಗೆರೆ 7ಶೇಕಡದಷ್ಟಿದೆ. ವಿಶ್ವದೆಲ್ಲೆಡೆ ವ್ಯಾಪಿಸಿದ ಕೊರೊನಾ ಭಾರತಕ್ಕೂ ತಗುಲಿ ಬಹಳಷ್ಟು ಬಳಲಿದೆ. ಕೊರೊನಾ ಸೇರಿದಂತೆ ಇನ್ನಿತರ ಕಾರಣಗಳಿಂದ ದೇಶದ ಸಾವಿಸಸಂಖ್ಯೆ 7.5 ಶೇಕಡಾವಾರು ಏರಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ನಾವಿಂದು ಕೋಮುಗಲಭೆಯಲ್ಲಿ ವಿಜ್ರಂಭಿಸುತ್ತಿದ್ದೇವೆ.

ಹಿಜಾಬ್ ಕುರಿತಾಗಿ ಇಂದು ದೇಶದಲ್ಲಿ ಸಾಕಷ್ಟುಗಲಭೆಗಳು, ವಿವಾದಗಳು, ಚರ್ಚೆಗಳು ಭುಗಿಲೆದ್ದಿದೆ. ಮುಸ್ಲೀಂ ಹೆಣ್ಣು ಮಕ್ಕಳ ವಸ್ತ್ರಸಂಹಿತೆಯ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ. ಇದಕ್ಕೆ ಹೆಣ್ಣು ಮಕ್ಕಳ ಶಿಕ್ಷಣ ಬಲಿಯಾಗುತ್ತಿರುವುದು ವಿಷಾದನೀಯ. ಈ ಸಂಘರ್ಷಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಿರುವ ಪಕ್ಷಗಳ ನಡೆ ಬೇಸರದ ಸಂಗತಿ. ಹಿಂದಿನಿಂದಲೂ ಶಾಲಾ-ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದು ಶಿಕ್ಷಣ ಪಡೆಯುತ್ತಿದ್ದ ಅದೆಷ್ಟೋ ಮುಸ್ಲೀಂ ವಿದ್ಯಾರ್ಥಿನಿಯರಿದ್ದರು. ಆಗ ನಮಗೆ ಇದೊಂದು ವಿಷಯವೇ ಆಗಿರಲಿಲ್ಲ. ನಮ್ಮ ಶಿಕ್ಷಣಕ್ಕೆ ತೊಂದರೆ ಆಗಿರಲಿಲ್ಲ. ನಮಗವರು ಬೇರೆ ಎಂದೆಣಿಸಿರಲಿಲ್ಲ. ಜೊತೆಯಾಗಿ ಕುಳಿತುಕೊಳ್ಳುವುದಕ್ಕೂ, ಮಾತನಾಡುವುದಕ್ಕೂ, ಗೆಳೆತನಕ್ಕೂ ಕಷ್ಟವಾಗಿರಲಿಲ್ಲ. ಇಂದೇಕೆ ಏಕಾಏಕಿ ಈ ಮನಸ್ಥಿತಿಗೆ ನಾವು ಬಂದಿದ್ದೇವೆ? ಮುಸ್ಲೀಂ ಹೆಣ್ಣು ಮಗಳೊಬ್ಬಳು ನಮ್ಮ ಒತ್ತಾಯದ ಮೇರೆಗೆ ಹಿಜಾಬ್ ಧರಿಸದೇ ಬಂದಳೆಂದರೆ ನಮ್ಮ ಶಿಕ್ಷಣ ಪ್ರಗತಿ ಸಾಧಿಸುತ್ತದೆಯೆ? ಇದರಿಂದ ನಮಗೇನು ದೊರಕುತ್ತದೆ?

ಏಕೆ ನಮಗೆ ಅನ್ಯಕೋಮಿನ ಪ್ರತಿಯೊಂದು ಆಚಾರ, ವಿಚಾರಗಳು ಪ್ರಚೋದನಕಾರಿಯಾಗಿ ಕಾಣುತ್ತಿದೆ? ಮಾನವ ಸಂಘಜೀವಿ ಸರಿ. ಆದರೆ ನಾವು ಆರಿಸಿಕೊಂಡ ಸಂಘ, ನಾವು ಮಾಡಿಕೊಂಡಿರುವ ಒಡನಾಟಗಳು ಏನನ್ನು ಕಲಿಸುತ್ತಿವೆ? ಯಾವುದರತ್ತ ಮುಖಮಾಡಿದೆ? ಅದರ ಮುಖ್ಯಗುರಿ ಏನು? ದೇಶದ ಏಳಿಗೆ ಅದರಿಂದ ಹೇಗೆ ಸಾಧ್ಯ?ನಾವು ಮಾಡುತ್ತಿರುವ ಇವೆಲ್ಲಾ ಗಲಭೆಗಳು ದೇಶಪ್ರೇಮ ಎಂದೆನ್ನಿಸಿರಬಹುದು. ಆದರೆ ‘ವಿವಿಧತೆಯಲ್ಲಿನ ಏಕತೆ’, ‘ನಾವೆಲ್ಲರೂ ಒಂದೇ’ ಎನ್ನುವ ಸಂವಿಧಾನದ ಧ್ಯೇಯ ಇಂದು ಪಠ್ಯಗಳಲ್ಲಷ್ಟೇ ಉಳಿತ್ತಿದೆಯೇ ವಿನಃ ನಮ್ಮ ಮನದೊಳಗೆ ಇಳಿಯುತ್ತಿಲ್ಲ. ನಾವು ಅಂದುಕೊಂಡಿರುವ ಈ ದೇಶಪ್ರೇಮ ಒಂದುಗೂಡಿಸುವ ಬದಲು, ದೇಶವನ್ನು ಒಡೆಯುತ್ತಿದೆ.

ಇಂದು ನಾವು ಅನ್ಯಕೋಮಿನ ಪ್ರತಿಯೋರ್ವನನ್ನು ಅನುಮಾನಿಸುತ್ತೇವೆ, ಕಾರಣವಿಲ್ಲದೆ ದ್ವೇಷಿಸುತ್ತೇವೆ. ಕಾಳಜಿ, ಪ್ರೀತಿ, ನಂಬಿಕೆಗಳು ಮೂಡುವುದಿಲ್ಲ. ಈ ವಿಷಯಕ್ಕೆ ಕೆಲವು ಮಾಧ್ಯಮ ಮತ್ತು ರಾಜಕಾರಣಿಗಳು ಇನ್ನಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ಬಿತ್ತರಿಸುವ ಸುದ್ದಿಗಳು ಎಷ್ಟು ಸರಿ ಎಂದು ಅವಲೋಕಿಸುವ ಬದಲಿಗೆ ದ್ವೇಷ ಕಾರುವ ವಿಷಯಗಳನ್ನು ಆನಂದಿಸುತ್ತೇವೆ. ನಾವೇ ಆಯ್ಕೆ ಮಾಡಿದ ನಾಯಕರುಗಳು ವೇದಿಕೆಗಳಲ್ಲಿ ಉದ್ರೇಕದಿಂದ ಮಾತುನಾಡುತ್ತಿದ್ದರೆ ಚಪ್ಪಾಳೆ ತಟ್ಟುತ್ತೇವೆ, ಬೆಂಬಲಿಸುತ್ತೇವೆ. ಇದರಿಂದ ದೇಶದ ಪ್ರಗತಿ ಸಾಧ್ಯವೇ ಎಂದು ಯೋಚಿಸುವುದಿಲ್ಲ. ನಮ್ಮ ನಾಯಕರುಗಳ ಕೆಲಸ ನಮ್ಮನ್ನು ಉದ್ರೇಕಿಸಿ, ಗಲಭೆ ಸೃಷ್ಟಿಸುವುದೇ? ಎಂದು ನಮಗೆ ಹೊಳೆಯುವುದೇ ಇಲ್ಲ. ಮಾಧ್ಯಮ ಪ್ರತಿನಿಧಿಯೋರ್ವ ಚರ್ಚಿಸುತ್ತಾ ಮತ್ತೊಬ್ಬನ ಮಾತೇ ಕೇಳಿಸದಷ್ಟು ಬೊಬ್ಬೆ ಹಾಕುವಾಗ ನಮಗೇ ಗೆಲುವು ಸಿಕ್ಕಿದಷ್ಟು ಖುಷಿಯಾಗುತ್ತದೆ. ಹಾಗಾದರೆ ದೇಶ ಒಡೆಯುವುದರಲ್ಲಿ ನಮಗೆ ವಿಕೃತ ಆನಂದ ಸಿಗುತ್ತಿದೆ ಎಂದಲ್ಲವೇ ಇದರರ್ಥ. ನಮ್ಮ ಮನಸ್ಥಿತಿ ಎಲ್ಲಿಗೆ ತಲುಪಿದೆ ಹಾಗಾದರೆ?

ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ. ಈ ವಿಷಯಗಳು ದೇಶದ ಬೆಳವಣಿಗೆಗೆ ಮಾರಕವಾಗದಿರಲಿ. ಪ್ರಜೆಯಾಗಿ ನಾವು ನಾಳೆ ಎಂತಹ ಭಾರತವನ್ನು ಕಟ್ಟಲು ಹೊರಟಿದ್ದೇವೆ ಎನ್ನುವುದನ್ನು ಬೇರೆಯವರೊಂದಿಗೆ ಚರ್ಚಿಸುವ ಮೊದಲು, ವಾದಕ್ಕಿಳಿಯುವ ಮೊದಲು ನಮ್ಮೊಳಗೆ ಉತ್ತರ ಕಂಡುಕೊಳ್ಳಬೇಕಿರುವುದು ಈಗಿನ ತುರ್ತು. ನಮ್ಮ ದೇಶ ಪ್ರಗತಿ ಹೊಂದುವುದು ಹಲವಾರು ಸದ್ಯದ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಾಗ ಮಾತ್ರ. ನಿರುದ್ಯೋಗ ,ಬಡತನ ಮುಂತಾದ ಅತೀ ದೊಡ್ಡ ಸಮಸ್ಯೆಗಳಿಗೆ ಎಲ್ಲರೂ ಒಂದಾಗಿದ್ದಾರೆ ಮಾತ್ರವೇ ಮುಕ್ತಾಯ ದೊರಕುತ್ತದೆ. ಯೋಚಿಸಿ ಮುನ್ನಡೆಯಬೇಕಾದದ್ದು ಪ್ರತಿಯೋರ್ವನ ಕರ್ತವ್ಯವಾಗಿರಲಿ ಎಂಬುದಷ್ಟೇ ಆಶಯ.

  • ಆದಿತ್ಯ ಪ್ರಸಾದ್ ಪಾಂಡೇಲು

ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆದಿತ್ಯ ಪ್ರಸಾದ್‌ರವರಿಗೆ ಸಾಹಿತ್ಯ ಹಾಗು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ಸಣ್ಣ ವಯಸ್ಸಿನಿಂದ ಬರಹಗಾರನಾಗಬೇಕೆಂಬ ತುಡಿತಕ್ಕೆ ದಿಕ್ಕು ತೋರಿದ್ದು ರಂಗಭೂಮಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...