Homeಮುಖಪುಟಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ.

- Advertisement -
- Advertisement -

ಹಿಂದೆ ಒಂದು ಕಾಲವಿತ್ತು. ಬ್ರಿಟಿಷರ ವಿರುದ್ಧ ನಿಂತು ನಮ್ಮವರು, ಸುಧೀರ್ಘ ಹೋರಾಟದ ನಂತರ ಸ್ವಾಂತಂತ್ರ್ಯ ದೊರಕಿಸುವಲ್ಲಿ ಯಶಸ್ವಿಯಾದರು. ಅಂದಿನ ಹೋರಾಟ, ಪ್ರತಿಭಟನೆ ಅತೀ ಅಗತ್ಯದ್ದಾಗಿತ್ತು. ಸ್ವತಂತ್ರ ಭಾರತದ ನಂತರದ ಗುರಿ, ದೇಶದ ಅಭಿವೃದ್ಧಿ. ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಯೋರ್ವನ ಏಳಿಗೆ, ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮಹಾನ್ ವ್ಯಕ್ತಿಯಾದ ಅಂಬೇಡ್ಕರ್ ಸಂವಿಧಾನ ರೂಪಿಸಿದರು. ಈ ಇತಿಹಾಸ ಬಹಳಷ್ಟು ಸರಳ ಮತ್ತು ಪ್ರತಿಯೋರ್ವನಿಗೂ ತಿಳಿದಿರುವ ವಿಚಾರ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ‘ದೇಶದ ಏಳಿಗೆ’ಯ ಕುರಿತಾಗಿ.

ಒಂದು ದೇಶವನ್ನು ನಾವು ಅಭಿವೃದ್ಧಿ ಹೊಂದಿದೆ ಅಥವಾ ಅಭಿವೃದ್ಧಿ ಹೊಂದುತ್ತಿದೆ ಎಂದು ಕರೆಯಬೇಕಾದರೆ,

·       ರಾಷ್ಟ್ರೀಯ ಉತ್ಪನ್ನ (GDP), ರಾಷ್ಟ್ರೀಯ ಆದಾಯ (GNI)

·       ದೇಶದ ಕೈಗಾರೀಕರಣದ ಹಂತ

·       ಜನರ ಜೀವನ ಮಟ್ಟ

·       ಬಳಸುತ್ತಿರುವ ತಂತ್ರಜ್ಞಾನದ ಗುಣಮಟ್ಟ

ಇವೇ ಮೊದಲಾದ ಅಂಶಗಳು ಮುಖ್ಯವಾಗಿ ಅಳತೆಗೋಲಾಗುತ್ತವೆ. ಇವುಗಳ ಆಧಾರದ ಮೇಲೆ ದೇಶದ ಏಳಿಗೆ ನಿಂತಿದೆ. ಇಂದು ಸುಮಾರು 22 ಶೇಕಡಾ ಭಾರತೀಯರು ಬಡತನದಲ್ಲಿದ್ದರೆ, ನಿರುದ್ಯೋಗ ಗೆರೆ 7ಶೇಕಡದಷ್ಟಿದೆ. ವಿಶ್ವದೆಲ್ಲೆಡೆ ವ್ಯಾಪಿಸಿದ ಕೊರೊನಾ ಭಾರತಕ್ಕೂ ತಗುಲಿ ಬಹಳಷ್ಟು ಬಳಲಿದೆ. ಕೊರೊನಾ ಸೇರಿದಂತೆ ಇನ್ನಿತರ ಕಾರಣಗಳಿಂದ ದೇಶದ ಸಾವಿಸಸಂಖ್ಯೆ 7.5 ಶೇಕಡಾವಾರು ಏರಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ನಾವಿಂದು ಕೋಮುಗಲಭೆಯಲ್ಲಿ ವಿಜ್ರಂಭಿಸುತ್ತಿದ್ದೇವೆ.

ಹಿಜಾಬ್ ಕುರಿತಾಗಿ ಇಂದು ದೇಶದಲ್ಲಿ ಸಾಕಷ್ಟುಗಲಭೆಗಳು, ವಿವಾದಗಳು, ಚರ್ಚೆಗಳು ಭುಗಿಲೆದ್ದಿದೆ. ಮುಸ್ಲೀಂ ಹೆಣ್ಣು ಮಕ್ಕಳ ವಸ್ತ್ರಸಂಹಿತೆಯ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ. ಇದಕ್ಕೆ ಹೆಣ್ಣು ಮಕ್ಕಳ ಶಿಕ್ಷಣ ಬಲಿಯಾಗುತ್ತಿರುವುದು ವಿಷಾದನೀಯ. ಈ ಸಂಘರ್ಷಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಿರುವ ಪಕ್ಷಗಳ ನಡೆ ಬೇಸರದ ಸಂಗತಿ. ಹಿಂದಿನಿಂದಲೂ ಶಾಲಾ-ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದು ಶಿಕ್ಷಣ ಪಡೆಯುತ್ತಿದ್ದ ಅದೆಷ್ಟೋ ಮುಸ್ಲೀಂ ವಿದ್ಯಾರ್ಥಿನಿಯರಿದ್ದರು. ಆಗ ನಮಗೆ ಇದೊಂದು ವಿಷಯವೇ ಆಗಿರಲಿಲ್ಲ. ನಮ್ಮ ಶಿಕ್ಷಣಕ್ಕೆ ತೊಂದರೆ ಆಗಿರಲಿಲ್ಲ. ನಮಗವರು ಬೇರೆ ಎಂದೆಣಿಸಿರಲಿಲ್ಲ. ಜೊತೆಯಾಗಿ ಕುಳಿತುಕೊಳ್ಳುವುದಕ್ಕೂ, ಮಾತನಾಡುವುದಕ್ಕೂ, ಗೆಳೆತನಕ್ಕೂ ಕಷ್ಟವಾಗಿರಲಿಲ್ಲ. ಇಂದೇಕೆ ಏಕಾಏಕಿ ಈ ಮನಸ್ಥಿತಿಗೆ ನಾವು ಬಂದಿದ್ದೇವೆ? ಮುಸ್ಲೀಂ ಹೆಣ್ಣು ಮಗಳೊಬ್ಬಳು ನಮ್ಮ ಒತ್ತಾಯದ ಮೇರೆಗೆ ಹಿಜಾಬ್ ಧರಿಸದೇ ಬಂದಳೆಂದರೆ ನಮ್ಮ ಶಿಕ್ಷಣ ಪ್ರಗತಿ ಸಾಧಿಸುತ್ತದೆಯೆ? ಇದರಿಂದ ನಮಗೇನು ದೊರಕುತ್ತದೆ?

ಏಕೆ ನಮಗೆ ಅನ್ಯಕೋಮಿನ ಪ್ರತಿಯೊಂದು ಆಚಾರ, ವಿಚಾರಗಳು ಪ್ರಚೋದನಕಾರಿಯಾಗಿ ಕಾಣುತ್ತಿದೆ? ಮಾನವ ಸಂಘಜೀವಿ ಸರಿ. ಆದರೆ ನಾವು ಆರಿಸಿಕೊಂಡ ಸಂಘ, ನಾವು ಮಾಡಿಕೊಂಡಿರುವ ಒಡನಾಟಗಳು ಏನನ್ನು ಕಲಿಸುತ್ತಿವೆ? ಯಾವುದರತ್ತ ಮುಖಮಾಡಿದೆ? ಅದರ ಮುಖ್ಯಗುರಿ ಏನು? ದೇಶದ ಏಳಿಗೆ ಅದರಿಂದ ಹೇಗೆ ಸಾಧ್ಯ?ನಾವು ಮಾಡುತ್ತಿರುವ ಇವೆಲ್ಲಾ ಗಲಭೆಗಳು ದೇಶಪ್ರೇಮ ಎಂದೆನ್ನಿಸಿರಬಹುದು. ಆದರೆ ‘ವಿವಿಧತೆಯಲ್ಲಿನ ಏಕತೆ’, ‘ನಾವೆಲ್ಲರೂ ಒಂದೇ’ ಎನ್ನುವ ಸಂವಿಧಾನದ ಧ್ಯೇಯ ಇಂದು ಪಠ್ಯಗಳಲ್ಲಷ್ಟೇ ಉಳಿತ್ತಿದೆಯೇ ವಿನಃ ನಮ್ಮ ಮನದೊಳಗೆ ಇಳಿಯುತ್ತಿಲ್ಲ. ನಾವು ಅಂದುಕೊಂಡಿರುವ ಈ ದೇಶಪ್ರೇಮ ಒಂದುಗೂಡಿಸುವ ಬದಲು, ದೇಶವನ್ನು ಒಡೆಯುತ್ತಿದೆ.

ಇಂದು ನಾವು ಅನ್ಯಕೋಮಿನ ಪ್ರತಿಯೋರ್ವನನ್ನು ಅನುಮಾನಿಸುತ್ತೇವೆ, ಕಾರಣವಿಲ್ಲದೆ ದ್ವೇಷಿಸುತ್ತೇವೆ. ಕಾಳಜಿ, ಪ್ರೀತಿ, ನಂಬಿಕೆಗಳು ಮೂಡುವುದಿಲ್ಲ. ಈ ವಿಷಯಕ್ಕೆ ಕೆಲವು ಮಾಧ್ಯಮ ಮತ್ತು ರಾಜಕಾರಣಿಗಳು ಇನ್ನಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ಬಿತ್ತರಿಸುವ ಸುದ್ದಿಗಳು ಎಷ್ಟು ಸರಿ ಎಂದು ಅವಲೋಕಿಸುವ ಬದಲಿಗೆ ದ್ವೇಷ ಕಾರುವ ವಿಷಯಗಳನ್ನು ಆನಂದಿಸುತ್ತೇವೆ. ನಾವೇ ಆಯ್ಕೆ ಮಾಡಿದ ನಾಯಕರುಗಳು ವೇದಿಕೆಗಳಲ್ಲಿ ಉದ್ರೇಕದಿಂದ ಮಾತುನಾಡುತ್ತಿದ್ದರೆ ಚಪ್ಪಾಳೆ ತಟ್ಟುತ್ತೇವೆ, ಬೆಂಬಲಿಸುತ್ತೇವೆ. ಇದರಿಂದ ದೇಶದ ಪ್ರಗತಿ ಸಾಧ್ಯವೇ ಎಂದು ಯೋಚಿಸುವುದಿಲ್ಲ. ನಮ್ಮ ನಾಯಕರುಗಳ ಕೆಲಸ ನಮ್ಮನ್ನು ಉದ್ರೇಕಿಸಿ, ಗಲಭೆ ಸೃಷ್ಟಿಸುವುದೇ? ಎಂದು ನಮಗೆ ಹೊಳೆಯುವುದೇ ಇಲ್ಲ. ಮಾಧ್ಯಮ ಪ್ರತಿನಿಧಿಯೋರ್ವ ಚರ್ಚಿಸುತ್ತಾ ಮತ್ತೊಬ್ಬನ ಮಾತೇ ಕೇಳಿಸದಷ್ಟು ಬೊಬ್ಬೆ ಹಾಕುವಾಗ ನಮಗೇ ಗೆಲುವು ಸಿಕ್ಕಿದಷ್ಟು ಖುಷಿಯಾಗುತ್ತದೆ. ಹಾಗಾದರೆ ದೇಶ ಒಡೆಯುವುದರಲ್ಲಿ ನಮಗೆ ವಿಕೃತ ಆನಂದ ಸಿಗುತ್ತಿದೆ ಎಂದಲ್ಲವೇ ಇದರರ್ಥ. ನಮ್ಮ ಮನಸ್ಥಿತಿ ಎಲ್ಲಿಗೆ ತಲುಪಿದೆ ಹಾಗಾದರೆ?

ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ. ಈ ವಿಷಯಗಳು ದೇಶದ ಬೆಳವಣಿಗೆಗೆ ಮಾರಕವಾಗದಿರಲಿ. ಪ್ರಜೆಯಾಗಿ ನಾವು ನಾಳೆ ಎಂತಹ ಭಾರತವನ್ನು ಕಟ್ಟಲು ಹೊರಟಿದ್ದೇವೆ ಎನ್ನುವುದನ್ನು ಬೇರೆಯವರೊಂದಿಗೆ ಚರ್ಚಿಸುವ ಮೊದಲು, ವಾದಕ್ಕಿಳಿಯುವ ಮೊದಲು ನಮ್ಮೊಳಗೆ ಉತ್ತರ ಕಂಡುಕೊಳ್ಳಬೇಕಿರುವುದು ಈಗಿನ ತುರ್ತು. ನಮ್ಮ ದೇಶ ಪ್ರಗತಿ ಹೊಂದುವುದು ಹಲವಾರು ಸದ್ಯದ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಾಗ ಮಾತ್ರ. ನಿರುದ್ಯೋಗ ,ಬಡತನ ಮುಂತಾದ ಅತೀ ದೊಡ್ಡ ಸಮಸ್ಯೆಗಳಿಗೆ ಎಲ್ಲರೂ ಒಂದಾಗಿದ್ದಾರೆ ಮಾತ್ರವೇ ಮುಕ್ತಾಯ ದೊರಕುತ್ತದೆ. ಯೋಚಿಸಿ ಮುನ್ನಡೆಯಬೇಕಾದದ್ದು ಪ್ರತಿಯೋರ್ವನ ಕರ್ತವ್ಯವಾಗಿರಲಿ ಎಂಬುದಷ್ಟೇ ಆಶಯ.

  • ಆದಿತ್ಯ ಪ್ರಸಾದ್ ಪಾಂಡೇಲು

ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆದಿತ್ಯ ಪ್ರಸಾದ್‌ರವರಿಗೆ ಸಾಹಿತ್ಯ ಹಾಗು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ಸಣ್ಣ ವಯಸ್ಸಿನಿಂದ ಬರಹಗಾರನಾಗಬೇಕೆಂಬ ತುಡಿತಕ್ಕೆ ದಿಕ್ಕು ತೋರಿದ್ದು ರಂಗಭೂಮಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...