Homeಮುಖಪುಟಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ.

- Advertisement -
- Advertisement -

ಹಿಂದೆ ಒಂದು ಕಾಲವಿತ್ತು. ಬ್ರಿಟಿಷರ ವಿರುದ್ಧ ನಿಂತು ನಮ್ಮವರು, ಸುಧೀರ್ಘ ಹೋರಾಟದ ನಂತರ ಸ್ವಾಂತಂತ್ರ್ಯ ದೊರಕಿಸುವಲ್ಲಿ ಯಶಸ್ವಿಯಾದರು. ಅಂದಿನ ಹೋರಾಟ, ಪ್ರತಿಭಟನೆ ಅತೀ ಅಗತ್ಯದ್ದಾಗಿತ್ತು. ಸ್ವತಂತ್ರ ಭಾರತದ ನಂತರದ ಗುರಿ, ದೇಶದ ಅಭಿವೃದ್ಧಿ. ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಯೋರ್ವನ ಏಳಿಗೆ, ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮಹಾನ್ ವ್ಯಕ್ತಿಯಾದ ಅಂಬೇಡ್ಕರ್ ಸಂವಿಧಾನ ರೂಪಿಸಿದರು. ಈ ಇತಿಹಾಸ ಬಹಳಷ್ಟು ಸರಳ ಮತ್ತು ಪ್ರತಿಯೋರ್ವನಿಗೂ ತಿಳಿದಿರುವ ವಿಚಾರ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ‘ದೇಶದ ಏಳಿಗೆ’ಯ ಕುರಿತಾಗಿ.

ಒಂದು ದೇಶವನ್ನು ನಾವು ಅಭಿವೃದ್ಧಿ ಹೊಂದಿದೆ ಅಥವಾ ಅಭಿವೃದ್ಧಿ ಹೊಂದುತ್ತಿದೆ ಎಂದು ಕರೆಯಬೇಕಾದರೆ,

·       ರಾಷ್ಟ್ರೀಯ ಉತ್ಪನ್ನ (GDP), ರಾಷ್ಟ್ರೀಯ ಆದಾಯ (GNI)

·       ದೇಶದ ಕೈಗಾರೀಕರಣದ ಹಂತ

·       ಜನರ ಜೀವನ ಮಟ್ಟ

·       ಬಳಸುತ್ತಿರುವ ತಂತ್ರಜ್ಞಾನದ ಗುಣಮಟ್ಟ

ಇವೇ ಮೊದಲಾದ ಅಂಶಗಳು ಮುಖ್ಯವಾಗಿ ಅಳತೆಗೋಲಾಗುತ್ತವೆ. ಇವುಗಳ ಆಧಾರದ ಮೇಲೆ ದೇಶದ ಏಳಿಗೆ ನಿಂತಿದೆ. ಇಂದು ಸುಮಾರು 22 ಶೇಕಡಾ ಭಾರತೀಯರು ಬಡತನದಲ್ಲಿದ್ದರೆ, ನಿರುದ್ಯೋಗ ಗೆರೆ 7ಶೇಕಡದಷ್ಟಿದೆ. ವಿಶ್ವದೆಲ್ಲೆಡೆ ವ್ಯಾಪಿಸಿದ ಕೊರೊನಾ ಭಾರತಕ್ಕೂ ತಗುಲಿ ಬಹಳಷ್ಟು ಬಳಲಿದೆ. ಕೊರೊನಾ ಸೇರಿದಂತೆ ಇನ್ನಿತರ ಕಾರಣಗಳಿಂದ ದೇಶದ ಸಾವಿಸಸಂಖ್ಯೆ 7.5 ಶೇಕಡಾವಾರು ಏರಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ನಾವಿಂದು ಕೋಮುಗಲಭೆಯಲ್ಲಿ ವಿಜ್ರಂಭಿಸುತ್ತಿದ್ದೇವೆ.

ಹಿಜಾಬ್ ಕುರಿತಾಗಿ ಇಂದು ದೇಶದಲ್ಲಿ ಸಾಕಷ್ಟುಗಲಭೆಗಳು, ವಿವಾದಗಳು, ಚರ್ಚೆಗಳು ಭುಗಿಲೆದ್ದಿದೆ. ಮುಸ್ಲೀಂ ಹೆಣ್ಣು ಮಕ್ಕಳ ವಸ್ತ್ರಸಂಹಿತೆಯ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ. ಇದಕ್ಕೆ ಹೆಣ್ಣು ಮಕ್ಕಳ ಶಿಕ್ಷಣ ಬಲಿಯಾಗುತ್ತಿರುವುದು ವಿಷಾದನೀಯ. ಈ ಸಂಘರ್ಷಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಿರುವ ಪಕ್ಷಗಳ ನಡೆ ಬೇಸರದ ಸಂಗತಿ. ಹಿಂದಿನಿಂದಲೂ ಶಾಲಾ-ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದು ಶಿಕ್ಷಣ ಪಡೆಯುತ್ತಿದ್ದ ಅದೆಷ್ಟೋ ಮುಸ್ಲೀಂ ವಿದ್ಯಾರ್ಥಿನಿಯರಿದ್ದರು. ಆಗ ನಮಗೆ ಇದೊಂದು ವಿಷಯವೇ ಆಗಿರಲಿಲ್ಲ. ನಮ್ಮ ಶಿಕ್ಷಣಕ್ಕೆ ತೊಂದರೆ ಆಗಿರಲಿಲ್ಲ. ನಮಗವರು ಬೇರೆ ಎಂದೆಣಿಸಿರಲಿಲ್ಲ. ಜೊತೆಯಾಗಿ ಕುಳಿತುಕೊಳ್ಳುವುದಕ್ಕೂ, ಮಾತನಾಡುವುದಕ್ಕೂ, ಗೆಳೆತನಕ್ಕೂ ಕಷ್ಟವಾಗಿರಲಿಲ್ಲ. ಇಂದೇಕೆ ಏಕಾಏಕಿ ಈ ಮನಸ್ಥಿತಿಗೆ ನಾವು ಬಂದಿದ್ದೇವೆ? ಮುಸ್ಲೀಂ ಹೆಣ್ಣು ಮಗಳೊಬ್ಬಳು ನಮ್ಮ ಒತ್ತಾಯದ ಮೇರೆಗೆ ಹಿಜಾಬ್ ಧರಿಸದೇ ಬಂದಳೆಂದರೆ ನಮ್ಮ ಶಿಕ್ಷಣ ಪ್ರಗತಿ ಸಾಧಿಸುತ್ತದೆಯೆ? ಇದರಿಂದ ನಮಗೇನು ದೊರಕುತ್ತದೆ?

ಏಕೆ ನಮಗೆ ಅನ್ಯಕೋಮಿನ ಪ್ರತಿಯೊಂದು ಆಚಾರ, ವಿಚಾರಗಳು ಪ್ರಚೋದನಕಾರಿಯಾಗಿ ಕಾಣುತ್ತಿದೆ? ಮಾನವ ಸಂಘಜೀವಿ ಸರಿ. ಆದರೆ ನಾವು ಆರಿಸಿಕೊಂಡ ಸಂಘ, ನಾವು ಮಾಡಿಕೊಂಡಿರುವ ಒಡನಾಟಗಳು ಏನನ್ನು ಕಲಿಸುತ್ತಿವೆ? ಯಾವುದರತ್ತ ಮುಖಮಾಡಿದೆ? ಅದರ ಮುಖ್ಯಗುರಿ ಏನು? ದೇಶದ ಏಳಿಗೆ ಅದರಿಂದ ಹೇಗೆ ಸಾಧ್ಯ?ನಾವು ಮಾಡುತ್ತಿರುವ ಇವೆಲ್ಲಾ ಗಲಭೆಗಳು ದೇಶಪ್ರೇಮ ಎಂದೆನ್ನಿಸಿರಬಹುದು. ಆದರೆ ‘ವಿವಿಧತೆಯಲ್ಲಿನ ಏಕತೆ’, ‘ನಾವೆಲ್ಲರೂ ಒಂದೇ’ ಎನ್ನುವ ಸಂವಿಧಾನದ ಧ್ಯೇಯ ಇಂದು ಪಠ್ಯಗಳಲ್ಲಷ್ಟೇ ಉಳಿತ್ತಿದೆಯೇ ವಿನಃ ನಮ್ಮ ಮನದೊಳಗೆ ಇಳಿಯುತ್ತಿಲ್ಲ. ನಾವು ಅಂದುಕೊಂಡಿರುವ ಈ ದೇಶಪ್ರೇಮ ಒಂದುಗೂಡಿಸುವ ಬದಲು, ದೇಶವನ್ನು ಒಡೆಯುತ್ತಿದೆ.

ಇಂದು ನಾವು ಅನ್ಯಕೋಮಿನ ಪ್ರತಿಯೋರ್ವನನ್ನು ಅನುಮಾನಿಸುತ್ತೇವೆ, ಕಾರಣವಿಲ್ಲದೆ ದ್ವೇಷಿಸುತ್ತೇವೆ. ಕಾಳಜಿ, ಪ್ರೀತಿ, ನಂಬಿಕೆಗಳು ಮೂಡುವುದಿಲ್ಲ. ಈ ವಿಷಯಕ್ಕೆ ಕೆಲವು ಮಾಧ್ಯಮ ಮತ್ತು ರಾಜಕಾರಣಿಗಳು ಇನ್ನಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ಬಿತ್ತರಿಸುವ ಸುದ್ದಿಗಳು ಎಷ್ಟು ಸರಿ ಎಂದು ಅವಲೋಕಿಸುವ ಬದಲಿಗೆ ದ್ವೇಷ ಕಾರುವ ವಿಷಯಗಳನ್ನು ಆನಂದಿಸುತ್ತೇವೆ. ನಾವೇ ಆಯ್ಕೆ ಮಾಡಿದ ನಾಯಕರುಗಳು ವೇದಿಕೆಗಳಲ್ಲಿ ಉದ್ರೇಕದಿಂದ ಮಾತುನಾಡುತ್ತಿದ್ದರೆ ಚಪ್ಪಾಳೆ ತಟ್ಟುತ್ತೇವೆ, ಬೆಂಬಲಿಸುತ್ತೇವೆ. ಇದರಿಂದ ದೇಶದ ಪ್ರಗತಿ ಸಾಧ್ಯವೇ ಎಂದು ಯೋಚಿಸುವುದಿಲ್ಲ. ನಮ್ಮ ನಾಯಕರುಗಳ ಕೆಲಸ ನಮ್ಮನ್ನು ಉದ್ರೇಕಿಸಿ, ಗಲಭೆ ಸೃಷ್ಟಿಸುವುದೇ? ಎಂದು ನಮಗೆ ಹೊಳೆಯುವುದೇ ಇಲ್ಲ. ಮಾಧ್ಯಮ ಪ್ರತಿನಿಧಿಯೋರ್ವ ಚರ್ಚಿಸುತ್ತಾ ಮತ್ತೊಬ್ಬನ ಮಾತೇ ಕೇಳಿಸದಷ್ಟು ಬೊಬ್ಬೆ ಹಾಕುವಾಗ ನಮಗೇ ಗೆಲುವು ಸಿಕ್ಕಿದಷ್ಟು ಖುಷಿಯಾಗುತ್ತದೆ. ಹಾಗಾದರೆ ದೇಶ ಒಡೆಯುವುದರಲ್ಲಿ ನಮಗೆ ವಿಕೃತ ಆನಂದ ಸಿಗುತ್ತಿದೆ ಎಂದಲ್ಲವೇ ಇದರರ್ಥ. ನಮ್ಮ ಮನಸ್ಥಿತಿ ಎಲ್ಲಿಗೆ ತಲುಪಿದೆ ಹಾಗಾದರೆ?

ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ. ಈ ವಿಷಯಗಳು ದೇಶದ ಬೆಳವಣಿಗೆಗೆ ಮಾರಕವಾಗದಿರಲಿ. ಪ್ರಜೆಯಾಗಿ ನಾವು ನಾಳೆ ಎಂತಹ ಭಾರತವನ್ನು ಕಟ್ಟಲು ಹೊರಟಿದ್ದೇವೆ ಎನ್ನುವುದನ್ನು ಬೇರೆಯವರೊಂದಿಗೆ ಚರ್ಚಿಸುವ ಮೊದಲು, ವಾದಕ್ಕಿಳಿಯುವ ಮೊದಲು ನಮ್ಮೊಳಗೆ ಉತ್ತರ ಕಂಡುಕೊಳ್ಳಬೇಕಿರುವುದು ಈಗಿನ ತುರ್ತು. ನಮ್ಮ ದೇಶ ಪ್ರಗತಿ ಹೊಂದುವುದು ಹಲವಾರು ಸದ್ಯದ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಾಗ ಮಾತ್ರ. ನಿರುದ್ಯೋಗ ,ಬಡತನ ಮುಂತಾದ ಅತೀ ದೊಡ್ಡ ಸಮಸ್ಯೆಗಳಿಗೆ ಎಲ್ಲರೂ ಒಂದಾಗಿದ್ದಾರೆ ಮಾತ್ರವೇ ಮುಕ್ತಾಯ ದೊರಕುತ್ತದೆ. ಯೋಚಿಸಿ ಮುನ್ನಡೆಯಬೇಕಾದದ್ದು ಪ್ರತಿಯೋರ್ವನ ಕರ್ತವ್ಯವಾಗಿರಲಿ ಎಂಬುದಷ್ಟೇ ಆಶಯ.

  • ಆದಿತ್ಯ ಪ್ರಸಾದ್ ಪಾಂಡೇಲು

ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆದಿತ್ಯ ಪ್ರಸಾದ್‌ರವರಿಗೆ ಸಾಹಿತ್ಯ ಹಾಗು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ಸಣ್ಣ ವಯಸ್ಸಿನಿಂದ ಬರಹಗಾರನಾಗಬೇಕೆಂಬ ತುಡಿತಕ್ಕೆ ದಿಕ್ಕು ತೋರಿದ್ದು ರಂಗಭೂಮಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...

ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯ ಜೊತೆಯಲ್ಲೆ ಸುಪ್ರೀಂ ಕೋರ್ಟ್‌ಗೆ ಹೋಗಲು ಕರ್ನಾಟಕ ಸಜ್ಜು

ಕೇಂದ್ರ ಸರ್ಕಾರದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಕಾಯ್ದೆಯ ಹಲವು ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ...

ಉತ್ತರ ಪ್ರದೇಶ: ಮದುವೆ ರಿಸೆಪ್ಷನ್‌ನಲ್ಲಿ ಗೋಮಾಂಸ ಬಡಿಸಿದ ಆರೋಪ; ವರನ ತಂದೆ ಸೇರಿ ಏಳು ಮಂದಿ ಬಂಧನ, ಮಂಟಪ ಸೀಲ್

ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ (ವಲೀಮಾ) ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾರಂಭದಲ್ಲಿ ಅತಿಥಿಗಳಿಗೆ ಗೋಮಾಂಸವನ್ನು ಬೇಯಿಸಿ ಬಡಿಸಲಾಗಿದೆ ಎಂಬ...

ರಾಮ ಮಂದಿರ ದೇಣಿಗೆ ವಿವಾದ: ಎಫ್‌ಐಆರ್ ದಾಖಲಿಸಿ ತ್ವರಿತ ನ್ಯಾಯಾಲಯದ ವಿಚಾರಣೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ರಾಮ ದೇಣಿಗೆ ವಿವಾದ ದುರುಪಯೋಗ ಕುರಿತು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಕೂಡಲೇ, ಬಲಪಂಥೀಯ ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಎಚ್‌ಪಿ ಅಂತರರಾಷ್ಟ್ರೀಯ...

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...