Homeಕರ್ನಾಟಕHijab Live | ಹಿಜಾಬ್ ಲೈವ್‌ | ವಿದ್ಯಾರ್ಥಿನಿಯರ ಪರ ವಾದ ಮುಕ್ತಾಯ; ಶುಕ್ರವಾರ ವಾದ...

Hijab Live | ಹಿಜಾಬ್ ಲೈವ್‌ | ವಿದ್ಯಾರ್ಥಿನಿಯರ ಪರ ವಾದ ಮುಕ್ತಾಯ; ಶುಕ್ರವಾರ ವಾದ ಮಂಡಲಿಸಲಿರುವ ರಾಜ್ಯ ಸರ್ಕಾರ

- Advertisement -
- Advertisement -

ರಾಜ್ಯ ಹೈಕೋರ್ಟ್ ಪೂರ್ಣ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ಮುಂದುವಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ. ಎಂ. ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ಪ್ರಕರಣದ ಕುರಿತು ವಾದ ಮಂಡನೆಯಾಗುತ್ತಿದೆ.


ಅಪ್‌ಡೇಟ್‌‌ 03:45 PM

  • ಈಗ ಹಿರಿಯ ವಕೀಲ ಎ. ಎಮ್. ದಾರ್ ವಾದಗಳನ್ನು ಪ್ರಾರಂಭಿಸುತ್ತಾರೆ
  • “ಹಿಬಾಬ್‌ ನಿಷೇಧ ಮಾಡಿರುವ ಸರ್ಕಾರದ ಈ ಆದೇಶವು ಅಸಂವಿಧಾನಿಕ ಮತ್ತು ನಿಗೂಢ ಸ್ವಭಾವದ್ದಾಗಿದೆ”.
  • ಮುಖ್ಯ ನ್ಯಾಯಮೂರ್ತಿ: ನಿಮ್ಮ ಅಂಗೀತೃತ ಸ್ಥಾನ ತಿಳಿಯಲು ನಮಗೆ ಅವಕಾಶ ಮಾಡಿ.
  • ದಾರ್: ನಾನು ಐದು ಹುಡುಗಿಯರ ಪರವಾಗಿದ್ದು, ಅವರು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು. ನಾವು ಹಿಜಾಬ್ ಹಾಕುವವರಾಗಿದ್ದು, ಸರ್ಕಾರದ ಆದೇಶದಿಂದ ನಮಗೆ ಸಮಸ್ಯೆ ಆಗಿದೆ ಎಂಬುವುದು ಅವರ ಮನವಿಯಾಗಿದೆ.
  • ನ್ಯಾಯಮೂರ್ತಿ ದೀಕ್ಷಿತ್: ಇದು ಪಿಐಎಲ್ ಅಲ್ಲವೇ?
  • ದಾರ್: ಇದು ಸಂತ್ರಸ್ತ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ.
  • ಜಸ್ಟಿಸ್‌ ದೀಕ್ಷಿತ್: ಅವರು ಯಾವ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ? ಸಂಸ್ಥೆಯು ತಡೆಯಿತು ಎಂದು ನೀವು ಎಲ್ಲಿ ಹೇಳಿದ್ದೀರಿ?
  • ದಾರ್: ನಾನು ಎಲ್ಲಾ ವಿವರಗಳನ್ನು ನೀಡಿದ್ದೇನೆ.
  • ನ್ಯಾಯಮೂರ್ತಿ ದೀಕ್ಷಿತ್: ದಯವಿಟ್ಟು ಓದಿ.
  • ದಾರ್: ದಯವಿಟ್ಟು ನೋಡಿ…ಒಂದು ಸೆಕೆಂಡ್
  • ನ್ಯಾಯಮೂರ್ತಿ ದೀಕ್ಷಿತ್: ನೀವು ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ.
  • ದಾರ್: ನಾನು ಹೇಳಿದ್ದೇನೆ.
  • ನ್ಯಾಯಮೂರ್ತಿ ದೀಕ್ಷಿತ್: ದಯವಿಟ್ಟು ಓದಿ.
  • ದಾರ್: ನಾನು ಅಫಿಡವಿಟ್ ಸಲ್ಲಿಸುತ್ತೇನೆ. ಏಕೆಂದರೆ ಅವರು ಓದುತ್ತಿದ್ದಾರೆ. ನಾವು ಬೆಂಗಳೂರಿನಲ್ಲಿ ಸಾಮಾನ್ಯ ವಿದ್ಯಾರ್ಥಿಗಳು.
  • ನ್ಯಾಯಮೂರ್ತಿ ದೀಕ್ಷಿತ್: ಯಾವ ಅರ್ಜಿದಾರರು ಯಾವ ಕಾಲೇಜಿನಲ್ಲಿ ಓದುತ್ತಿದ್ದಾರೆ ಎಂಬುದನ್ನು ನೀವು ನಮೂದಿಸಬೇಕು. ಇದು ಒಂದು ಪ್ರಮುಖ ವಿಷಯವಾಗಿದೆ. ನಾಗರಿಕ ಪ್ರಕ್ರಿಯೆ ಸಂಹಿತೆ ನಿಯಮಗಳನ್ನು ನಮ್ಮ ರಿಟ್‌ ಮನವಿ ನಿಯಮಗಳು ಅಳವಡಿಸಿಕೊಂಡಿವೆ. ನೀವು ಅವುಗಳನ್ನು ಪಾಲಿಸಿಲ್ಲ. ನೀವು ಯಾವ ಶಾಲೆಯಲ್ಲಿ ಓದುತ್ತಿದ್ದೀರಿ, ಯಾವ ಶಾಲೆಯನ್ನು ತಡೆಯಲಾಗಿದೆ ಎಂದು ನೀವು ಮನವಿಯಲ್ಲಿ ಉಲ್ಲೇಖಿಸಿಲ್ಲ.
  • ದಾರ್: ನಾನು ಇಂದು ಅಥವಾ ನಾಳೆ ಪೂರಕ ಅಫಿಡವಿಟ್ ಸಲ್ಲಿಸುತ್ತೇನೆ.
  • ಮುಖ್ಯ ನ್ಯಾಯಮೂರ್ತಿ: ನಿಮ್ಮ ಪ್ರಕರಣವನ್ನು ಸುಧಾರಿಸಲು ನಾವು ನಿಮಗೆ ಅವಕಾಶವನ್ನು ನೀಡಲು ಸಾಧ್ಯವಿಲ್ಲ.
  • ದಾರ್: ದಯವಿಟ್ಟು ಅವಕಾಶ ಕೊಡಿ. ನಾನು ಸಂವಿಧಾನ ಮತ್ತು ಧರ್ಮದ ಬಗ್ಗೆ ತಿಳಿದಿರುವ ಹಿರಿಯ ವಕೀಲ.
  • ಮುಖ್ಯ ನ್ಯಾಯಮೂರ್ತಿ: ಹೊಸದಾಗಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ನಾವು ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತೇವೆ.
  • ಅಡ್ವೊಕೇಟ್ ಜನರಲ್: ರಾಜ್ಯ ಸರ್ಕಾರದ ಪರವಾಗಿ ನಾನು ನಾಳೆ ವಾದ ಮಾಡುತ್ತೇನೆ.

     

  • ನ್ಯಾಯಮೂರ್ತಿ ದೀಕ್ಷಿತ್: ಮಹತ್ವದ ವಿಷಯಕ್ಕಾಗಿ, ವಿಶೇಷ ಪೀಠವನ್ನು ರಚಿಸಲಾಗಿದೆ. ಅರ್ಜಿದಾರರು ತಮ್ಮ ವಾದವನ್ನು ತುಂಬಾ ಸುಂದರವಾಗಿ ಮಂಡಿಸಿದ್ದಾರೆ.
  • ಸರ್ಕಾರದ ಪರವಾಗಿ ನಾಳೆ ವಾದ ಮಾಡುವ ಬಗ್ಗೆ ಅಡ್ವೊಕೋಟ್‌ ವಿನಂತಿ.

     

  • ವಕೀಲ ಶಾದನ್ ಫರ್ಸತ್ ಅವರು ತಮ್ಮ ಮಧ್ಯಸ್ಥಿಕೆ ಅರ್ಜಿಯನ್ನು ಆಲಿಸಲು ಮನವಿ ಮಾಡುತ್ತಾರೆ.
  • ಮುಖ್ಯ ನ್ಯಾಯಮೂರ್ತಿ: ನಾವು ನಿಮ್ಮನ್ನು ಆಲಿಸಿದರೆ, ಎಲ್ಲರನ್ನೂ ಆಲಿಸಬೇಕಾಗುತ್ತದೆ. ಈ ತಾರತಮ್ಯ ಮಾಡಲು ಸಾಧ್ಯವಿಲ್ಲ.
  • ಅಡ್ವೊಕೇಟ್ ಜನರಲ್: ನನಗೆ ವಾದಿಸಲು ಸ್ವಲ್ಪ ಸಮಯ ಬೇಕು. ನಾಳೆ ವಾದ ಮಾಡುತ್ತೇನೆ.
  • ಮುಖ್ಯ ನ್ಯಾಯಮೂರ್ತಿ: ನೀವು ಸರ್ಕಾರದ ಆದೇಶವನ್ನು ಅನ್ನು ಮಾರ್ಪಡಿಸಲು ಹೋದರೆ, ನೀವು ಸಮಯ ಬೇಕಾಗಬಹುದು (ಹಾಸ್ಯದ ಧ್ವನಿಯಲ್ಲಿ)
  • ಕಾಲೇಜು ಅಭಿವೃದ್ಧಿ ಸಮಿತಿಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಾಜನ್ ಪೊವ್ವಯ್ಯ ಅವರು ಅಡ್ವೊಕೇಟ್‌ ಜನರಲ್‌ ತಮ್ಮ ವಾದಗಳನ್ನು ಪೂರ್ಣಗೊಳಿಸಿದ ನಂತರ ವಾದ ಮಂಡನೆ ಮಾಡುವುದಾಗಿ ಹೇಳುತ್ತಾರೆ.
  •  

    ಆರೋಪಕ್ಕೆ ಗುರಿಯಾಗಿರುವ ಪ್ರಾಧ್ಯಾಪಕರ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಎಸ್‌.ಎಸ್‌. ನಾಗಾನಂದ್‌ ಕೂಡಾ ಅಡ್ವೊಕೇಟ್‌ ಜನರಲ್‌ ವಾದ ಪೂರ್ಣಗೊಳಿಸಿದ ನಂತರ ವಾದ ಮಂಡಿಸುವುದಾಗಿ ಹೇಳುತ್ತಾರೆ.

  • ವಕೀಲ ಸುಭಾಷ್ ಝಾ ಅವರು ಮಧ್ಯಸ್ಥಿಕೆದಾರರಾಗಿ ಅರ್ಧ ಗಂಟೆ ಕಾಲಾವಕಾಶ ಕೋರುತ್ತಾರೆ. “ಹಿಜಾಬ್‌ ಮತ್ತು ಉದ್ದನೆಯ ಗಡ್ಡದ ಕುರಿತು ಹೈಕೋರ್ಟ್‌ಗಳಲ್ಲಿ ಇದೇ ಮೊದಲ ಬಾರಿಗೆ ವಾದ ನಡೆಯುತ್ತಿಲ್ಲ. ಬಾಂಬೆ ಮತ್ತು ಕೇರಳ ಹೈಕೋರ್ಟ್‌ಗಳು ಈ ಬಗ್ಗೆ ವಾದ ಆಲಿಸಿ, ಇದು ಇಸ್ಲಾಮ್‌ನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿವೆ. ಈಗ ಎಬ್ಬಿಸಲಾಗಿರುವ ವಿಚಾರಗಳಿಗೆ ಅದರಲ್ಲಿ ಉತ್ತರವಿದೆ.. ನ್ಯಾಯಾಲಯಗಳು ಹಿಜಾಬ್ ಅವಿಭಾಜ್ಯವಲ್ಲ ಎಂದು ಪರಿಗಣಿಸಿದೆ” ಎಂದು ಸುಭಾಷ್‌ ಝಾ ಹೇಳುತ್ತಾರೆ.
  • ಝಾ: ನ್ಯಾಯಾಲಯವು ಒಂದು ಕಡೆಯಿಂದ ಮಾತ್ರ ಆಲಿಸುತ್ತಿದೆ.

     

  • ಮುಖ್ಯ ನ್ಯಾಯಮೂರ್ತಿ: ಸುಭಾಷ್‌ ಝಾ ಅವರೇ, ನಾವು ಮೊದಲು ಅರ್ಜಿದಾರರನ್ನು ಆಲಿಸುತ್ತೇವೆ. ನಂತರ ಪ್ರತಿವಾದಿಗಳನ್ನು ಆಲಿಸುತ್ತೇವೆ. ಇದಾದ ನಂತರ ನಾವು ಮಧ್ಯಸ್ಥಗಾರರನ್ನೂ ಆಲಿಸುವ ಬಗ್ಗೆ ನಿರ್ಧರಿಸುತ್ತೇವೆ. ಅಲ್ಲಿವರೆಗೆ ನಾವು ಮಧ್ಯಪ್ರವೇಶಿಸಲು ಯಾರಿಗೂ ಅನುಮತಿ ನೀಡುತ್ತಿಲ್ಲ.
  • ಮುಖ್ಯ ನ್ಯಾಯಮೂರ್ತಿ: ನೀವು ಬೇಕಾದರೆ, ವಾದಗಳಿಗೆ ಪ್ರತಿಕ್ರಿಯೆ ನೀಡಲಿರುವ ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಿ.
  • ವಕೀಲ ಕೊತ್ವಾಲ್‌(ಮಧ್ಯಪ್ರವೇಶಿಸಿ): ನಾನು ನಿಯಮಗಳನ್ನು ಪಾಲಿಸಿರುವುದರಿಂದ ನಾಳೆಯಾದರೂ ನನ್ನ ಮನವಿ ಆಲಿಸಿ.
  • ಮುಖ್ಯ ನ್ಯಾಯಮೂರ್ತಿ: ನಿಮಗೆ ನಾವು ಸಹಾಯ ಮಾಡಲಾಗದು. ನಿಮಗೆ ಈಗಾಗಲೇ ನಾವು ಅವಕಾಶ ಮಾಡಿಕೊಟ್ಟಿದ್ದೇವೆ. ಈಗ ಆದೇಶ ಹೊರಡಿಸಲಾಗಿದೆ.
  • ಸಮಸ್ಯೆ ಬಗೆಹರಿಸಲು ಸಂಧಾನ ಮಾಡಲು ಮಧ್ಯಸ್ಥಿಕೆ ವಹಿಸಬೇಕು ಎಂದು ವಕೀಲರೊಬ್ಬರು ಹೇಳುತ್ತಾರೆ.

     

  • ಮುಖ್ಯ ನ್ಯಾಯಮೂರ್ತಿ: ಇದು ಸಾಂವಿಧಾನಿಕ ಸಮಸ್ಯೆಗಳು ಒಳಗೊಂಡಿವೆ. ಅಂತಹ ವಿಷಯದಲ್ಲಿ ಸಂಧಾನ ಮಾಡಲು ಮಧ್ಯಸ್ಥಿಕೆ ಮಾಡಲು ಹೇಗೆ ಸಾಧ್ಯ? ಕಕ್ಷಿದಾರರು ಒಪ್ಪಿಗೆ ನೀಡಿದರೆ ಅವರ ನಡುವೆ ಸಂಧಾನ ಮಾಡಬಹುದು. ನೀವು ಅರ್ಜಿದಾರರು ಮತ್ತು ಪ್ರತಿವಾದಿಗಳ ಬಳಿ ಹೋಗಿ. ಅವರು ಒಪ್ಪಿದರೆ, ನಾವು ಅದನ್ನು ಪರಿಗಣಿಸುತ್ತೇವೆ.
  • ಇಂದಿನ ವಿಚಾರಣೆ ಮುಕ್ತಾಯ. ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದುವರಿಯಲಿದೆ.

ಅಪ್‌ಡೇಟ್‌‌ 03:25 PM

  • ವಕೀಲ ಹಾಗೂ ಮನೋವಿಜ್ಞಾನಿ ಡಾ. ವಿನೋದ್‌ ಕುಲಕರ್ಣಿ ಅವರು ವೈಯಕ್ತಿಕವಾಗಿ ಪಕ್ಷಾತೀತವಾಗಿ ವಾದ ಮಂಡಿಸುತ್ತಿದ್ದಾರೆ.
  • “ಈ ಹಿಜಾಬ್ ಸಮಸ್ಯೆಯು ಉನ್ಮಾದವನ್ನು ಉಂಟುಮಾಡುತ್ತಿದೆ. ಮುಸ್ಲಿಂ ಹೆಣ್ಣುಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಂವಿಧಾನದ ಪೀಠಿಕೆಯಂತೆ, ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ”
  • ಮುಖ್ಯ ನ್ಯಾಯಮೂರ್ತಿ: ಈ ಪಿಐಎಲ್‌ ಅಲ್ಲಿ ಕೂಡಾ ಹೈಕೋರ್ಟ್‌ ನಿಯಮಗಳನ್ನು ಪಾಲಿಸಲಾಗಿಲ್ಲ. ಮತ್ತೊಮ್ಮೆ ಆಕ್ಷೇಪಿಸಿದ ಪೀಠ.
  • ಎಲ್ಲಾ ವಿಚಾರಗಳನ್ನು ಘೋಷಿಸಿದ್ದೇನೆ ಎಂದು ವಾದಿಸಿದ ಡಾ. ಕುಲಕರ್ಣಿ.
  • ಮುಖ್ಯ ನ್ಯಾಯಮೂರ್ತಿ: ನಿಮಗೆ ಏನು ಪರಿಹಾರ ಬೇಕು?
  • ಕುಲಕರ್ಣಿ: ನಾನು ಕೇಳುತ್ತಿರುವ ಮಧ್ಯಂತರ ಪರಿಹಾರ ಏನೆಂದರೆ, ಮುಸ್ಲಿಮರಿಗೆ ಅತ್ಯಂತ ಶುಭದಿನವಾದ ಜುಮಾ ದಿನದಂದು ಮತ್ತು ಶೀಘ್ರದಲ್ಲೇ ಬರಲಿರುವ ಪವಿತ್ರ ರಂಜಾನ್ ಮಾಸದ ಶುಕ್ರವಾರದಂದು ಮುಸ್ಲಿಂ ಹುಡುಗಿಯರಿಗೆ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಆದೇಶ ನೀಡಿ.
  • ಮುಖ್ಯ ನ್ಯಾಯಮೂರ್ತಿ: ನಿಮ್ಮ ಮನವಿಗಳನ್ನು ಓದಿ.
  • ಮನವಿಯನ್ನು ವಾಚಿಸಿದ ಕುಲಕರ್ಣಿ.
  • ಮುಖ್ಯ ನ್ಯಾಯಮೂರ್ತಿ: ನೀವು ಮನವಿಯಲ್ಲಿ  ಸಮವಸ್ತ್ರವನ್ನು ಧರಿಸಲು ನಿರ್ದೇಶಿಸಿ ಎಂದು ಕೋರಿದ್ದೀರಿ. ನಿಮ್ಮ ಮನವಿಗಳು ವಿರೋಧಾತ್ಮಕವಾಗಿವೆ.
  • ಮುಖ್ಯ ನ್ಯಾಯಮೂರ್ತಿ: ನಿಮ್ಮ ಮನವಿಯಲ್ಲಿ, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರವನ್ನು ಧರಿಸಬೇಕೆಂದು ನೀವು ಹೇಳುತ್ತೀರಿ. ಹಿಜಾಬ್‌ನೊಂದಿಗೆ ಸಮವಸ್ತ್ರವನ್ನು ಧರಿಸಲು ಅನುಮತಿಸಿ ಎಂದು ನೀವು ಮನವಿಯಲ್ಲಿ ಹೇಳಿದ್ದೀರಿ.
  • ಕುಲಕರ್ಣಿ: ಹಿಜಾಬ್ ಸಮವಸ್ತ್ರದ ಭಾಗವಾಗಿದೆ ಮೈ ಲಾರ್ಡ್ಸ್.
  • ಕುಲಕರ್ಣಿ ಅವರು ಲತಾ ಮಂಗೇಶ್ಕರ್ ಹಾಡು “ಕುಚ್ ಪಕರ್ ಕುಚ್ ಖೋನಾ ಹೈ…” ಅನ್ನು ಉಲ್ಲೇಖಿಸುತ್ತಾರೆ.
  • ಕುಲಕರ್ಣಿ ಹೇಳುವಂತೆ ಒಬ್ಬ ಮುಸಲ್ಮಾನನಿಗೆ 5 ಕರ್ತವ್ಯಗಳಿವೆ.
  • ಮುಖ್ಯ ನ್ಯಾಯಮೂರ್ತಿ: ಶುಕ್ರವಾರದಂದು ಅವರಿಗೆ ಹಿಜಾಬ್ ಅನ್ನು ಅನುಮತಿಸಬೇಕೆಂದು ನೀವು ಬಯಸುತ್ತೀರಾ? ನೀವು ವಾದಿಸುವುದನ್ನು ನಾವು ಪರಿಗಣಿಸುತ್ತೇವೆ. ಕುರಾನ್‌ನಲ್ಲಿ ಎಲ್ಲಿ ಹೇಳಲಾಗಿದೆ ಎಂದು ನೀವು ತೋರಿಸಬಹುದೇ?
  • ಕುಲಕರ್ಣಿ: ಸದ್ಯಕ್ಕೆ ನನ್ನ ಬಳಿ ಕುರಾನ್‌ ಇಲ್ಲ. ಮುಂದಿನ ಹಂತದಲ್ಲಿ ಅದನ್ನು ನಾನು ತೋರಿಸುವೆ.
  • ಸಿಜೆ ಅವಸ್ಥಿ: ನೀವು ಅದನ್ನು ತೋರಿಸದಿದ್ದರೆ ನಾವು ಇದನ್ನು ಒಪ್ಪಲಾಗದು.
  • ಕುಲಕರ್ಣಿ: ಹಿಜಾಬ್‌ ನಿಷೇಧ, ಕುರಾನ್‌ ನಿಷೇಧಕ್ಕೆ ಸಮಾನ.
  • ಸಿಜೆ ಅವಸ್ಥಿ: ಹಿಜಾಬ್‌ ನಿಷೇಧಿಸಲಾಗಿಲ್ಲ.
  • ಡಾ. ಕುಲಕರ್ಣಿ: ಹಿಜಾಬ್‌ಗೆ ಪೀಠ ಅನುಮತಿಸದಿದ್ದರೆ ಅದು ಕುರಾನ್‌ ನಿಷೇಧಕ್ಕೆ ಸಮಾನವಾಗುತ್ತದೆ. ಇದು ಅನಗತ್ಯ ಸಮಸ್ಯೆಗಳಿಗೆ ನಾಂದಿ ಹಾಡಬಹುದು. ಇಡೀ ಜಗತ್ತಿನಲ್ಲಿರುವ ಮುಸ್ಲಿಮ್‌ ಸಮುದಾಯಕ್ಕೆ ಕುರಾನ್‌ ಅನ್ವಯಿಸುತ್ತದೆ.
  • ಡಾ. ಕುಲಕರ್ಣಿ: ನಾನೊಬ್ಬ ಬ್ರಾಹ್ಮಣ ….ನನ್ನ ವಾದವೇನೆಂದರೆ ಹಿಜಾಬ್ ನಿಷೇಧ ಮಾಡುವುದೆಂದರೆ, ಕುರಾನ್‌ನ ನಿಷೇಧಕ್ಕೆ ಕಾರಣವಾಗಬಹುದು. ಶುಕ್ರವಾರ ಮತ್ತು ರಂಜಾನ್‌ನಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಲು ದಯವಿಟ್ಟು ಇಂದೇ ಆದೇಶವನ್ನು ನೀಡಿ ಎಂಬುದು ನನ್ನ ವಾದವಾಗಿದೆ.
  • ವಾದ ಮುಕ್ತಾಯಗೊಳಿಸಿದ ಡಾ. ಕುಲಕರ್ಣಿ

ಅಪ್‌ಡೇಟ್‌‌ 03:00 PM

  • ವಾದ ಆರಂಭಿಸಿದ ವಕೀಲ ರಹಮತ್‌‌-ಉಲ್ಲಾ-ಕೊತ್ವಾಲ್‌.
  • ಕೊತ್ವಾಲ್‌: ಆರ್ಟಿಕಲ್ 14, 15 ಮತ್ತು 25 ರ ಹೊರತಾಗಿ, ಸರ್ಕಾರದ ಈ ಆದೇಶವು ಅಂತರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಬಾಧ್ಯತೆಗಳ ಮೇಲೆ ಗೌರವವನ್ನು ಬೆಳೆಸುವ ಆರ್ಟಿಕಲ್ 51 (ಸಿ) ಅನ್ನು ಉಲ್ಲಂಘಿಸುತ್ತದೆ.
  • ಕೊತ್ವಾಲ್ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಉಲ್ಲೇಖಿಸುತ್ತಾನೆ.
  • ಕೊತ್ವಾಲ್: ಸರ್ಕಾರದ ಕ್ರಮವು ಕೇವಲ ಧರ್ಮ ಮತ್ತು ಲಿಂಗದ ಆಧಾರದ ಮೇಲೆ ಅನಿಯಂತ್ರಿತ ತಾರತಮ್ಯವನ್ನು ಸೃಷ್ಟಿಸುತ್ತಿದೆ. ಸರ್ಕಾರವು ಕೇವಲ ಧಾರ್ಮಿಕ ತಲೆ ವಸ್ತ್ರವಾದ ಹಿಜಾಬ್ ಆಧಾರದ ಮೇಲೆ ಶಿಕ್ಷಣದ ಹಕ್ಕನ್ನು ಉಲ್ಲಂಘಿಸುತ್ತಿದೆ.
  • ಸಿಜೆ: ನಿಮ್ಮ ವಿವಾದವೇನು?
  • ಕೊತ್ವಾಲ್: ಸರ್ಕಾರದ ಈ ಕ್ರಮವು ಅಂತರಾಷ್ಟ್ರೀಯ ಒಪ್ಪಂದಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ.
  • ಮುಖ್ಯ ನ್ಯಾಯಮೂರ್ತಿ: ನೀವು ನ್ಯಾಯಾಲಯದ ಮಾತನ್ನೂ ಕೇಳುತ್ತೀರಾ? ಮೊದಲು ನಿಮ್ಮ ವಿಶ್ವಸನೀಯತೆ ತೋರಿಸಿ, ನೀವು ಯಾರು?
  • ಕೊತ್ವಾಲ್: ಅಂತರಾಷ್ಟ್ರೀಯ ಒಪ್ಪಂದಗಳನ್ನು ನ್ಯಾಯಾಲಯದ ಗಮನಕ್ಕೆ ತರುತ್ತಿದ್ದೇನೆ.
  • ಮುಖ್ಯ ನ್ಯಾಯಮೂರ್ತಿ: ನ್ಯಾಯಾಲಯದ ಮಾತನ್ನು ಕೇಳದೆ ಈ ರೀತಿ ವಾದ ಮಾಡಲು ನಾವು ಅನುಮತಿಸುವುದಿಲ್ಲ. ನೀವು ಯಾರು?
  • ಕೊತ್ವಾಲ್: ನಾನು ಸಾಮಾಜಿಕ ಕಾರ್ಯಕರ್ತ, ಆರ್‌ಟಿಐ ಕಾರ್ಯಕರ್ತ, ಅವರು ಈ ಗೌರವಾನ್ವಿತ ನ್ಯಾಯಾಲಯಕ್ಕೆ ಸಹಾಯ ಮಾಡಲು ಬಯಸುತ್ತಿದ್ದೇನೆ. ಕೋವಿಡ್‌ ಸಂಬಂಧಿತ ಮನವಿಗಳು ಸೇರಿದಂತೆ ಹಲವು ಪಿಐಎಲ್‌ಗಳಲ್ಲಿ ಈ ನ್ಯಾಯಾಲಯದಲ್ಲಿ ವಾದಿಸಿದ್ದೇನೆ.
  • ಮುಖ್ಯ ನ್ಯಾಯಮೂರ್ತಿ: ನಮಗೆ ನಿಮ್ಮ ನೆರವು ಅಗತ್ಯವಿಲ್ಲ. ಪಿಐಎಲ್ ನಿಯಮಗಳ ಬಗ್ಗೆ ನಿಮಗೆ ತಿಳಿದಿದೆಯೇ? ಪಿಐಎಲ್‌ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ತಿಳಿಸಿ.
  • ಹೌದು ಎನ್ನುತ್ತಾರೆ ಕೊತ್ವಾಲ್. ಅರ್ಜಿಯಲ್ಲಿ ಪ್ಯಾರಾಗ್ರಾಫ್ ಅನ್ನು ಸೂಚಿಸುತ್ತಾರೆ.
  • ಪ್ಯಾರಾಗ್ರಾಫ್ ಬೇರೆ ಯಾವುದನ್ನೋ ಉಲ್ಲೇಖಿಸುತ್ತಿದೆ ಎಂದು ಪೀಠವು ಸೂಚಿಸುತ್ತದೆ.
  • ನ್ಯಾಯಮೂರ್ತಿ ದೀಕ್ಷಿತ್: ಇಂಥ ಮಹತ್ವದ ಪ್ರಕರಣ ಇರುವಾಗ ನೀವು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ದಾಖಲೆಗಳು ಸರಿಯಾಗಿಲ್ಲ. ಈ ಸಮಯವನ್ನು ಬೇರೆ ವಕೀಲರು ವಾದಕ್ಕೆ ಬಳಸಿಕೊಳ್ಳಬಹುದಿತ್ತು. ನಾವು ಈ ಅರ್ಜಿಯನ್ನು ವಜಾ ಮಾಡುತ್ತೇವೆ. ಇದು ನಿರ್ವಹಣೆಗೆ ಯೋಗ್ಯವಾಗಿಲ್ಲ.
  • ಕೊತ್ವಾಲ್‌: ಕೆಲವು ಪುಟಗಳ ವಿಚಾರದಲ್ಲಿ ಸಮಸ್ಯೆ ಇರಬಹುದು. ನನಗೆ ಬಂದಿರುವ ಸೂಚನೆಯ ಪ್ರಕಾರ ಎಲ್ಲ ನಿಯವನ್ನೂ ಪಾಲಿಸಿರುವೆ. ತಾಂತ್ರಿಕ ವಿಚಾರಗಳ ಬಗ್ಗೆ ಹೆಚ್ಚು ಪರಿಶೀಲನೆ ನಡೆಸಬಾರದಾಗಿ ಕೋರುವೆ. ಎರಡು-ಮೂರು ನಿಮಿಷಗಳಲ್ಲಿ ನನ್ನ ವಾದ ಪೂರ್ಣಗೊಳಿಸುವೆ.
  • ನ್ಯಾಯಮೂರ್ತಿ ದೀಕ್ಷಿತ್: ನಿಯಮ 14 ತಾಂತ್ರಿಕ ವಿಚಾರ ಅಲ್ಲ.
  • ಮುಖ್ಯ ನ್ಯಾಯಮೂರ್ತಿ: ದಂಡ ವಿಧಿಸಿ ನಿಮ್ಮ ಮನವಿಯನ್ನು ವಜಾ ಮಾಡುತ್ತೇವೆ. ನೀವು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ.
  • ಪೀಠ: ಕರ್ನಾಟಕ ಪಿಐಎಲ್‌‌‌‌‌‌‌‌ ನಿಯಮಗಳು-2018 ಅಡಿಯಲ್ಲಿ ಪಿಐಎಲ್‌‌ ಸಲ್ಲಿಸುವಾಗ ಸೂಚನೆಗಳನ್ನು ಪಾಲಿಸಲು ಉಲ್ಲೇಖಿಸಲಾಗಿದೆ. ನಿಯಮ ಪಾಲಿಸದೇ ಈ ಮನವಿಯನ್ನು ಸಲ್ಲಿಸಲಾಗಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ.
  • ಪೀಠದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಕೀಲ ಕೊತ್ವಾಲ್‌.
  • ಕೊತ್ವಾಲ್‌: ನಾನು ಈ ಹಿಂದೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದೇನೆ ಮತ್ತು ನಿರ್ವಹಣೆಯ ಆಧಾರದ ಮೇಲೆ ನನ್ನ ಅರ್ಜಿಯನ್ನು ವಜಾಗೊಳಿಸಿರುವುದು ಇದೇ ಮೊದಲು. ನಿಯಮಗಳನ್ನು ನಾನು ಪಾಲಿಸಿದ್ದೇನೆ. ಧನ್ಯವಾದಗಳು.

ಅಪ್‌ಡೇಟ್‌‌ 02:45 PM

ಹಿಜಾಬ್ ನಿಷೇಧ ಕುರಿತಂತೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಗುರುವಾರದಂದು ಮುಂದುವರಿಕೆ

  • ವಕೀಲ ಆದಿತ್ಯ ಚಟರ್ಜಿ ಅವರು ಹೊಸ ಅರ್ಜಿ ಸಲ್ಲಿಕೆಯಾಗಿರುವುದನ್ನು ಉಲ್ಲೇಖ ಮಾಡುತ್ತಾರೆ.
  • ಅಡ್ವೊಕೇಟ್‌ ಜನರಲ್‌‌: ಈಗ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ, ಅದು ಯಾಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿಲ್ಲ. ಅರ್ಜಿದಾರರು ಖಾಸಗಿ ಸಂಸ್ಥೆಗಳು. ಅವರು ಸರ್ಕಾರದ ಆದೇಶವನ್ನು ಮಾತ್ರ ಪ್ರಶ್ನಿಸಿದ್ದಾರೆ.
  •  Adv Shadad Farast: ನಾವು ಇಂಟರ್ಲೋಕ್ಯೂಟರಿ ಅಪ್ಲಿಕೇಶನ್ ಸಲ್ಲಿಸಿದ್ದೇವೆ. ಭಾರತವು ಸಹಿ ಮಾಡಿರುವ ವಿಶ್ವಸಂಸ್ಥೆಯ ಮಕ್ಕಳ ಸಮಾವೇಶದಲ್ಲಿ ಗುರುತಿಸಲಾದ ಕೆಲವು ಹಕ್ಕುಗಳನ್ನು ನಾವು ಸೂಚಿಸಲು ಬಯಸುವ ಏಕೈಕ ವಿಷಯ.
  • ಮುಖ್ಯ ನ್ಯಾಯಮೂರ್ತಿ: ಮಧ್ಯಪ್ರವೇಶ ಮನವಿಗಳನ್ನು ಏಕೆ ಸಲ್ಲಿಸಲಾಗುತ್ತಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಅರ್ಜಿದಾರರು ಮತ್ತು ಪ್ರತಿವಾದಿಗಳನ್ನು ಆಲಿಸುತ್ತೇವೆ. ಅಗತ್ಯವೆನಿಸದರೆ ನಿಮ್ಮ ಮಧ್ಯಪ್ರವೇಶಕ್ಕೆ ಅನುವು ಮಾಡಿಕೊಟ್ಟು ನಿಮ್ಮ ಸಹಾಯವನ್ನೂ ಪಡೆದುಕೊಳ್ಳುತ್ತೇವೆ. ನಮಗೆ ಯಾರ ಹಸ್ತಕ್ಷೇಪವೂ ಬೇಕಾಗಿಲ್ಲ.
  • ಮುಖ್ಯ ನ್ಯಾಯಮೂರ್ತಿ: ನಾಲ್ಕು ಮನವಿಗಳನ್ನು ಸಲ್ಲಿಸಲಾಗಿದೆ. ನಾಲ್ಕು ದಿನಗಳಿಂದ ವಾದ-ಪ್ರತಿವಾದ ನಡೆಯುತ್ತಿದೆ. ಇದಕ್ಕಾಗಿ ವಿಶೇಷ ಪೀಠ ರಚಿಸಲಾಗಿದೆ. ಇನ್ನೂ ಎಷ್ಟು ದಿನ ನಿಮಗೆ ಬೇಕು?
  • ಇನ್ನೊಬ್ಬ ಮಧ್ಯಸ್ಥಗಾರರ ಉಲ್ಲೇಖ.
  • ಮುಖ್ಯ ನ್ಯಾಯಮೂರ್ತಿ: ನಾವು ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ.
  • ಹೊಸ ಅರ್ಜಿಯನ್ನು ತೆಗೆದುಕೊಂಡ ನ್ಯಾಯಾಲಯ
  • ವಕೀಲರೊಬ್ಬರಿಂದ ವಾದ ಆರಂಭ. ನ್ಯಾಯಾಲಯ ಶುಲ್ಕ ರೂ. 300 ಅನ್ನು ನೀವು ಪಾವತಿಸಿಲ್ಲ ಎಂದ ಮುಖ್ಯ ನ್ಯಾಯಮೂರ್ತಿ ಅವಸ್ಥಿ.
  • ಕೆಲವು ಆಕ್ಷೇಪಣೆಗಳನ್ನೂ ಸರಿಪಡಿಸಲಾಗಿಲ್ಲ. ಆಕ್ಷೇಪಣೆಗಳನ್ನು ಸರಿಪಡಿಸಿ, ನಾಳೆ ನಿಮ್ಮನ್ನು ಆಲಿಸುತ್ತೇವೆ.
    ರಾಜ್ಯ ಹೈಕೋರ್ಟ್ ಪೂರ್ಣ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ಮುಂದುವಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ. ಎಂ. ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ಪ್ರಕರಣದ ಕುರಿತು ವಾದ ಮಂಡನೆಯಾಗುತ್ತಿದೆ.



    ಕಳೆದ ಶುಕ್ರವಾರ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳನ್ನು ಶೀಘ್ರವಾಗಿ ಪುನಃ ತೆರೆಯುವಂತೆ ರಾಜ್ಯವನ್ನು ವಿನಂತಿಸಿ, ಮಧ್ಯಂತರ ಆದೇಶವನ್ನು ನೀಡಿತ್ತು. ಈ ಆದೇಶದಲ್ಲಿ ವಿಚಾರಣೆ ಮುಗಿಯುವವರೆಗೂ ಸಮಸ್ಯೆ ಇರುವ ಕಾಲೇಜುಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಬಟ್ಟೆಗಳನ್ನು ಧರಿಸುವುದನ್ನು ನಿರ್ಬಂಧಿಸಿತ್ತು.

    ಸಂತ್ರಸ್ತ ವಿದ್ಯಾರ್ಥಿಗಳ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ದೇವದತ್ತ್ ಕಾಮತ್‌ ತಮ್ಮ ವಾದವನ್ನು ಮಂಡಿಸಿ, “ಹಿಜಾಬ್ ಧರಿಸುವ ಹಕ್ಕು ಇಸ್ಲಾಂ ಧರ್ಮದ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿರುವುದರಿಂದ, ಸಂವಿಧಾನದ 14,19 ಮತ್ತು 25 ನೇ ವಿಧಿಗಳ ಅಡಿಯಲ್ಲಿ ಅಂತಹ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ” ಎಂದು ಹೇಳಿದ್ದಾರೆ.

    “ಸಂವಿಧಾನದ 25ನೇ ಪರಿಚ್ಛೇದದ ಮೂಲಕ ಸ್ಕಾರ್ಫ್ ಧರಿಸುವುವ ಹಕ್ಕು ಬರುವುದಿಲ್ಲ ಎಂದಿದ್ದ ರಾಜ್ಯ ಸರ್ಕಾರ ಮಾಡಿದ ಘೋಷಣೆಯು, ‘ಸಂಪೂರ್ಣವಾಗಿ ತಪ್ಪಾಗಿದೆ’. ಕಾಲೇಜು ಅಭಿವೃದ್ಧಿ ಸಮಿತಿಗೆ ಸ್ಕಾರ್ಫ್ ಬೇಕೆ ಅಥವಾ ಬೇಡವೇ ಎಂಬುವುದನ್ನು ನಿರ್ಧರಿಸಲು ಬಿಡುವುದು ‘ಸಂಪೂರ್ಣ ಕಾನೂನುಬಾಹಿರವಾಗಿದೆ” ಎಂದು ದೇವದತ್‌ ಕಾಮತ್‌ ವಾದಿಸಿದ್ದಾರೆ.

    ಬುಧವಾರ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, “ಸರ್ಕಾರವು ಮುಸ್ಲಿಂ ಹೆಣ್ಣುಮಕ್ಕಳನ್ನು ಅವರ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತಿದೆ. ಫೆಬ್ರವರಿ 5 ರ ಸರ್ಕಾರಿ ಆದೇಶವು ಹಿಜಾಬ್ ಧರಿಸುವುದನ್ನು ಗುರಿಯಾಗಿಸುತ್ತದೆ. ಆದರೆ ಇತರ ಧಾರ್ಮಿಕ ಚಿಹ್ನೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದು ಸಂವಿಧಾನದ 15 ನೇ ವಿಧಿಯನ್ನು ಉಲ್ಲಂಘನೆಯಾಗಿದೆ” ಎಂದು ವಾದಿಸಿದ್ದಾರೆ.

    “ಮುಸ್ಲಿಮ್ ಹುಡುಗಿಯರು ತಲೆಗೆ ಸ್ಕಾರ್ಫ್ ಧರಿಸುವುದನ್ನು ತಡೆಯುವುದು, ನಿಷೇಧಿಸುವುದು ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗಿದೆ” ಎಂದು ವಕೀಲ ಯೂಸುಫ್ ಮುಚ್ಚಾಲಾ ವಾದಿಸಿದ್ದಾರೆ. ಅವರು ಶಾಹಿರಾ ಬಾನೋ ಪ್ರಕರಣದಲ್ಲಿ ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಬಳಸಿದ ತತ್ವವನ್ನು ಅವರು ನ್ಯಾಯಾಲಯದಲ್ಲಿ ಉಲ್ಲೇಖಿಸಿದ್ದಾರೆ.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...