Homeಕರ್ನಾಟಕ‘ಹಿಂದೂ’ ಪದಕ್ಕೆ ಹೀನರ್ಥವಿದೆ: ಲೇಖನ ಪ್ರಕಟಿಸಿದ ಇಸ್ಕಾನ್‌ ವಿರುದ್ಧ ಬಿಜೆಪಿ ಹೋರಾಡುವುದೆ?

‘ಹಿಂದೂ’ ಪದಕ್ಕೆ ಹೀನರ್ಥವಿದೆ: ಲೇಖನ ಪ್ರಕಟಿಸಿದ ಇಸ್ಕಾನ್‌ ವಿರುದ್ಧ ಬಿಜೆಪಿ ಹೋರಾಡುವುದೆ?

- Advertisement -
- Advertisement -

“ಹಿಂದೂ ಎಂಬ ಪದಕ್ಕೆ ಕೆಟ್ಟ ಅರ್ಥವಿದೆ. ಹಲವು ಗ್ರಂಥಗಳಲ್ಲಿ ಈ ಉಲ್ಲೇಖಗಳನ್ನು ಮಾಡಲಾಗಿದೆ” ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿಯವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. “ಕಾಂಗ್ರೆಸ್‌ ಪಕ್ಷವು ಹಿಂದೂ ವಿರೋಧಿ”, “ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ” ಎಂದು ಬಿಜೆಪಿ ಹಾಗೂ ಸಂಘಪರಿವಾರ ಬೀದಿಗೆ ಇಳಿದು ಪ್ರತಿಭಟಿಸಿವೆ.

ಬಿಜೆಪಿ ನಾಯಕರಂತೂ ತರಹೇವಾರಿ ಹೇಳಿಕೆಗಳನ್ನು ನೀಡುತ್ತಾ, ಜಾರಕಿಹೊಳಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಪದದ ಹಿನ್ನೆಲೆಯ ಕುರಿತು ತನಿಖೆ ನಡೆಸುವಂತೆ ಸತೀಶ್ ಜಾರಕಿಹೊಳಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಮನವಿಯನ್ನೂ ಮಾಡಿದ್ದಾರೆ. ಆದರೆ ಜಾರಕಿಹೊಳಿಯವರ ವಿರುದ್ಧ ದ್ವೇಷ ಅಭಿಯಾನ ನಡೆಯುತ್ತಲೇ ಇದೆ. ಈ ಚರ್ಚೆಯ ಹೊತ್ತಿನಲ್ಲಿ ‘ಇಸ್ಕಾನ್‌ ಸಂಸ್ಥೆ’ ಪ್ರಕಟಿಸಿರುವ ಲೇಖನ ಚರ್ಚೆಗೆ ಗ್ರಾಸವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಇಸ್ಕಾನ್‌’ ಧಾರ್ಮಿಕ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಹಿಂದೆ ಪ್ರಕಟವಾಗಿರುವ ಲೇಖನವೊಂದು ಚರ್ಚೆಗೆ ಬಳಕೆಯಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹಾಗೂ ವಕೀಲರಾದ ಭೀಮನಗೌಡ ಪರಗೊಂಡ ಅವರು, “ನಂದ ನಂದನದಾಸ ಎಂಬುವವರ ಹತ್ತಾರು ಲೇಖನಗಳನ್ನು ಇಸ್ಕಾನ್‌ ಸಂಸ್ಥೆಯ ಜಾಲತಾಣದಲ್ಲಿ ಬರೆದಿರುವ ಇಸ್ಕಾನ್‌ ಸದಸ್ಯರಾಗಿದ್ದಾರೆ. 4 ವರ್ಷಗಳ ಹಿಂದೆಯೇ ʼಹಿಂದೂʼ ಎಂದರೆ ಕಳ್ಳ, ಕರಿಯ ಎಂದಿದ್ದಾರೆ. ಸತೀಶ್‌ ಜಾರಕಿಹೊಳಿಯವರ ವಿರುದ್ದ ಹರಿಹಾಯ್ದವರು ಇಸ್ಕಾನ್‌ ವಿರುದ್ದ ಉಸಿರೆತ್ತುತ್ತಾರಾ?” ಎಂದು ಪ್ರಶ್ನಿಸುತ್ತಾ ಬಿಜೆಪಿಯನ್ನು ಟ್ಯಾಗ್‌ ಮಾಡಿದ್ದಾರೆ.

ಭೀಮನಗೌಡ ಪರಗೊಂಡ ಅವರು ಲಗತ್ತಿಸಿರುವ ಲಿಂಕ್‌ ಕ್ಲಿಕ್ ಮಾಡಿದರೆ, ‘ಹಿಂದೂ’ ಎಂಬ ಪದದ ಹಿನ್ನೆಲೆಯ ಕುರಿತು ಮಾಡಲಾಗಿರುವ ಹಲವಾರು ಉಲ್ಲೇಖನಗಳನ್ನು ನಂದ ನಂದನದಾಸ ಅವರ ಲೇಖನದಲ್ಲಿ ಕಾಣಬಹುದು.

ಲೇಖನದಲ್ಲಿರುವ ಆಯ್ದ ಕೆಲವು ಅಂಶಗಳು ಹೀಗಿವೆ:

‘ಹಿಂದೂ’ ಎಂಬ ಪದವು ಸಂಸ್ಕೃತದದ್ದಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಯಾವುದೇ ವೈದಿಕ ಸಾಹಿತ್ಯದಲ್ಲಿ ಇದು ಕಂಡುಬರುವುದಿಲ್ಲ ಎಂದು ಹಲವು ವಿದ್ವಾಂಸರು ಹೇಳುತ್ತಾರೆ. ಹಾಗಾದರೆ ಅಂತಹ ಹೆಸರು ನಿಜವಾಗಿಯೂ ವೈದಿಕ ಮಾರ್ಗ ಅಥವಾ ಸಂಸ್ಕೃತಿಯನ್ನು ಹೇಗೆ ಪ್ರತಿನಿಧಿಸುತ್ತದೆ? ಮತ್ತು ವೈದಿಕ ಸಾಹಿತ್ಯವಿಲ್ಲದೆ, “ಹಿಂದೂ ಧರ್ಮಕ್ಕೆ ಯಾವುದೇ ಆಧಾರವಿಲ್ಲ”….

‘ಹಿಂದೂ’ ಎಂಬ ಹೆಸರನ್ನು ಹೊರಗಿನವರು, ಸಿಂಧು ನದಿಯ ಹೆಸರನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗದ ಆಕ್ರಮಣಕಾರರು ಬಳಸಿರುವುದಾಗಿ ಹೆಚ್ಚಿನ ವಿದ್ವಾಂಸರು ಭಾವಿಸುತ್ತಾರೆ. ಸಂಸ್ಕೃತ ನಿಘಂಟುತಜ್ಞರಾದ ಸರ್ ಮೋನಿಯರ್ ವಿಲಿಯಮ್ಸ್ ಪ್ರಕಾರ, “ಹಿಂದೂ ಅಥವಾ ಭಾರತ ಪದಗಳಿಗೆ ಸ್ಥಳೀಯ ಮೂಲವನ್ನು ಕಂಡುಹಿಡಿಯಲಾಗುವುದಿಲ್ಲ. ಈ ಪದಗಳು ಯಾವುದೇ ಬೌದ್ಧ, ಜೈನ ಪಠ್ಯಗಳಲ್ಲಿ ಅಥವಾ ಭಾರತದ ಯಾವುದೇ ಅಧಿಕೃತ 23 ಭಾಷೆಗಳಲ್ಲಿ ಕಂಡುಬರುವುದಿಲ್ಲ….”

ದಿ ಗ್ರೇಟ್ ಅಲೆಕ್ಸಾಂಡರ್ ಮೊದಲಿಗೆ ಸಿಂಧು ನದಿಯನ್ನು ‘ಇಂದು’ ಎಂದು ಮರುನಾಮಕರಣ ಮಾಡಿದನು ಎಂದು ಕೆಲವು ಮೂಲಗಳು ಹೇಳುತ್ತವೆ. ಆರಂಭದಲ್ಲಿನ “ಎಸ್‌‌” ಅನ್ನು ಕೈಬಿಡಲಾಯಿತು, ಹೀಗಾಗಿ ಗ್ರೀಕರು ಉಚ್ಚರಿಸಲು ಸುಲಭವಾಯಿತು. ಇದು ‘ಇಂದೂಸ್‌’ ಎಂದು ಹೆಸರಾಯಿತು. ಕ್ರಿಸ್ತ ಪೂರ್ವ 325ರ ಸುಮಾರಿಗೆ ಅಲೆಕ್ಸಾಂಡರ್ ಭಾರತವನ್ನು ಆಕ್ರಮಿಸಿದಾಗ ಅವನ ಮೆಸಿಡೋನಿಯನ್ ಪಡೆಗಳು ಸಿಂಧೂ ನದಿಯ ಪೂರ್ವದ ಭೂಮಿಯನ್ನು ಭಾರತ ಎಂದು ಕರೆದರು. ಇದನ್ನು ವಿಶೇಷವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿ ಬಳಸಲಾಗುತ್ತಿತ್ತು….

ನಂತರ, ಮುಸ್ಲಿಂ ಆಕ್ರಮಣಕಾರರು ಅಫ್ಘಾನಿಸ್ತಾನ ಮತ್ತು ಪರ್ಷಿಯಾದಂತಹ ಸ್ಥಳಗಳಿಂದ ಆಗಮಿಸಿದಾಗ, ಅವರು ಸಿಂಧೂ ನದಿಯನ್ನು ಹಿಂದೂ ನದಿ ಎಂದು ಕರೆದರು. ಅದರ ನಂತರ, ಸಿಂಧೂ ನದಿ ಇರುವ ಭಾರತದ ವಾಯುವ್ಯ ಪ್ರಾಂತ್ಯಗಳಲ್ಲಿನ ಆ ಭೂಪ್ರದೇಶದ ನಿವಾಸಿಗಳನ್ನು ವಿವರಿಸಲು ‘ಹಿಂದೂ’ ಎಂಬ ಹೆಸರನ್ನು ಬಳಸಲಾಯಿತು ಮತ್ತು ಆ ಪ್ರದೇಶವನ್ನು ‘ಹಿಂದುಸ್ತಾನ್’ ಎಂದು ಕರೆಯಲಾಯಿತು.

‘ಹಿಂದೂ’ ಎಂಬ ಹೆಸರಿನ ಇನ್ನೊಂದು ನೋಟವು ಭಾರತದ ಆಧ್ಯಾತ್ಮಿಕ ಪಥಗಳ ನಿಜವಾದ ಸಾರವನ್ನು ಅರ್ಥಮಾಡಿಕೊಳ್ಳಲು ಕಾರಣವಾಗುವ ಗೊಂದಲಮಯ ಸ್ವಭಾವವನ್ನು ತೋರಿಸುತ್ತದೆ. ಆರ್.ಎನ್.ಸೂರ್ಯನಾರಾಯಣ ಅವರು ತಮ್ಮ ಯೂನಿವರ್ಸಲ್ ರಿಲಿಜನ್ (ಪು.1-2, 1952ರಲ್ಲಿ ಮೈಸೂರಿನಲ್ಲಿ ಪ್ರಕಟವಾದ) ಪುಸ್ತಕದಲ್ಲಿ ಬರೆದಿರುವಂತೆ, “….ಪಾಶ್ಚಿಮಾತ್ಯ ವಿದ್ವಾಂಸರು ಮತ್ತು ಇತಿಹಾಸಕಾರರು ಕೂಡ ಈ ಬ್ರಾಹ್ಮಣಭೂಮಿಯ ನಿಜವಾದ ಹೆಸರನ್ನು ಪತ್ತೆಹಚ್ಚಲು ವಿಫಲರಾಗಿದ್ದಾರೆ…. ಅವರು ಅದನ್ನು ‘ಹಿಂದೂ’ ಎಂಬ ಅರ್ಥಹೀನ ಪದದಿಂದ ಕರೆದು ತೃಪ್ತಿಪಡಿಸಿದ್ದಾರೆ. ವಿದೇಶಿಗರು ನವೀಕರಿಸಿದ ಈ ಪದವನ್ನು ನಮ್ಮ ಯಾವುದೇ ಸಂಸ್ಕೃತ ಲೇಖಕರು, ಪೂಜ್ಯ ಆಚಾರ್ಯರು ತಮ್ಮ ಕೃತಿಗಳಲ್ಲಿ ಬಳಸಿಲ್ಲ. ಹಿಂದೂ ಪದವನ್ನು ನಿರಂತರವಾಗಿ ಬಳಸಬೇಕೆಂದು ಒತ್ತಾಯಿಸಲು ರಾಜಕೀಯ ಶಕ್ತಿಯು ಕಾರಣವಾಗಿದೆ ಎಂದು ತೋರುತ್ತದೆ. ಹಿಂದೂ ಎಂಬ ಪದವು ಪರ್ಷಿಯನ್ ಸಾಹಿತ್ಯದಲ್ಲಿ ಕಂಡುಬರುತ್ತದೆ. ಹಿಂದೂ-ಇ-ಫಲಾಕ್ ಎಂದರೆ ‘ಆಕಾಶದ ಕಪ್ಪು’ ಮತ್ತು ‘ಶನಿ’ ಎಂದರ್ಥ…. ಪರ್ಷಿಯನ್ನರು ಸಿಂಧುವಿನ ಪವಿತ್ರ ನೆಲಕ್ಕೆ ಬಂದಾಗ, ಹಿಂದೂ ಎಂಬ ಹೆಸರನ್ನು ಇಟ್ಟರು ಎಂದು ಇತಿಹಾಸದಲ್ಲಿ ಓದಿರುವುದು ನಾಚಿಕೆಗೇಡಿನ ಮತ್ತು ಹಾಸ್ಯಾಸ್ಪದವಾಗಿದೆ.

ಹಿಂದೂ ಎಂಬ ಹೆಸರಿನ ಮೂಲದ ಇನ್ನೊಂದು ದೃಷ್ಟಿಕೋನವು ಅವಹೇಳನಕಾರಿ ಅರ್ಥವನ್ನು ಆಧರಿಸಿದೆ. “ಇದಲ್ಲದೆ, ಈ ಹೆಸರನ್ನು [ಹಿಂದೂ] ಮೂಲ ಆರ್ಯ ಜನಾಂಗಕ್ಕೆ ಮುಸ್ಲಿಂ ಆಕ್ರಮಣಕಾರರು ಅವಮಾನಿಸಲು ನೀಡಿರುವುದಾಗಿದೆ. ನಮ್ಮ ಲೇಖಕರು ಹೇಳುವಂತೆ ಪರ್ಷಿಯನ್ ಭಾಷೆಯಲ್ಲಿ ಈ ಪದದ ಅರ್ಥ ಗುಲಾಮ. ಇಸ್ಲಾಂ ಪ್ರಕಾರ, ಇಸ್ಲಾಂ ಧರ್ಮವನ್ನು ಸ್ವೀಕರಿಸದ ಎಲ್ಲರನ್ನು ಗುಲಾಮರು ಎಂದು ಕರೆಯಲಾಗುತ್ತದೆ” (ಉಲ್ಲೇಖ: 1898ರಲ್ಲಿ ಲಾಹೋರ್‌ನಲ್ಲಿ ಪ್ರಕಟವಾಗಿರುವ ಮಹರ್ಷಿ ಶ್ರೀ ದಯಾನಂದ ಸರಸ್ವತಿಯವರ ಕೃತಿ).

“ಇದಲ್ಲದೆ, 1964 ರಲ್ಲಿ ಲಕ್ನೋದಲ್ಲಿ ಪ್ರಕಟವಾದ ಲುಘೆತ್-ಎ-ಕಿಶ್ವರಿ ಎಂಬ ಪರ್ಷಿಯನ್ ನಿಘಂಟಿನಲ್ಲಿ ಹಿಂದೂ ಪದದ ಅರ್ಥವನ್ನು- ‘ಚೋರ್ [ಕಳ್ಳ], ಡಕೂ [ಡಕಾಯಿಟ್], ರಾಹ್ಜಾನ್ [ವೇಲೇಯರ್] ಮತ್ತು ಗುಲಾಮ್ [ಗುಲಾಮ]” ಎಂದು ನೀಡಲಾಗಿದೆ. ಮತ್ತೊಂದು ನಿಘಂಟಾದ ಉರ್ದು-ಫಿರೋಜ್-ಉಲ್-ಲಘಾತ್ (ಭಾಗ ಒಂದನೇ, ಪುಟ 615)ನಲ್ಲಿ ಹಿಂದೂ ಪದದ ಪರ್ಷಿಯನ್ ಅರ್ಥವನ್ನು- ಬರ್ದಾ (ವಿಧೇಯ ಸೇವಕ), ಸಿಯಾ ಫಾಮ್ (ಕಪ್ಪು ಬಣ್ಣ) ಮತ್ತು ಕಾಲಾ (ಕಪ್ಪು) ಎಂದು ವಿವರಿಸಲಾಗಿದೆ.

ಇದನ್ನೂ ಓದಿರಿ: ಸದುದ್ದೇಶದಿಂದ ನೀಡಿದ ಹೇಳಿಕೆ ಹಿಂಪಡೆಯುವೆ: ಸತೀಶ್ ಜಾರಕಿಹೊಳಿ

ಆದ್ದರಿಂದ, ಮೂಲತಃ, ಹಿಂದೂ ಎಂಬುದು ಕೇವಲ ಮುಸ್ಲಿಂ ಮೂಲದ ಮುಂದುವರಿಕೆಯಾಗಿದ್ದು ಅದು ಕಳೆದ 1300 ವರ್ಷಗಳಲ್ಲಿ ಮಾತ್ರ ಬಳಕೆಗೆ ಬಂದಿತು. ಹೀಗಾಗಿ ಇದು ಮಾನ್ಯವಾದ ಸಂಸ್ಕೃತ ಪದವಲ್ಲ, ನಿಜವಾದ ವೈದಿಕ ಸಂಸ್ಕೃತಿ ಅಥವಾ ವೈದಿಕ ಆಧ್ಯಾತ್ಮಿಕ ಮಾರ್ಗದೊಂದಿಗೆ ಯಾವುದೇ ಸಂಬಂಧವನ್ನು ಇದು ಹೊಂದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬಹುದು. “ಹಿಂದೂ ಧರ್ಮ” ಎಂದು ಕರೆಯಲ್ಪಡುವ ಯಾವುದೇ ಧರ್ಮವು ಅಸ್ತಿತ್ವದಲ್ಲಿಲ್ಲ…. (ಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ) (ಲೇಖನದ ‘ಆರ್ಕೈವ್‌ ಲಿಂಕ್‌’)

ಸತೀಶ್ ಜಾರಕಿಹೊಳಿಯವರ ಮೇಲಷ್ಟೇ ವಿರೋಧವೇಕೆ?

ಹಿಂದೂ ಪದಕ್ಕೆ ಹೀನಾರ್ಥಗಳಿವೆ ಎಂದು ತಿಳಿಸುವ ಲೇಖವನ್ನು ಧಾರ್ಮಿಕ ಸಂಸ್ಥೆಯೊಂದು ಕಳೆದ ನಾಲ್ಕು ವರ್ಷಗಳ ಹಿಂದೆಯೇ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸತೀಶ್ ಜಾರಕಿಹೊಳಿಯವರು ಹೇಳಿದ್ದನ್ನೇ ಇಸ್ಕಾನ್‌ ಕೂಡ ಹೇಳಿದೆ. ಬಿಜೆಪಿ ಹಾಗೂ ಸಂಘಪರಿವಾರ ‘ಇಸ್ಕಾನ್‌’ ವಿರುದ್ಧ ಹೋರಾಡುತ್ತದೆಯೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾರಕಿಹೊಳಿರವರು

    ಇವರ ಚೀರಾಟಗಳಿಗೆ ಬೆದರಿ ಶೀಘ್ರವಾಗಿ ಬಬಿಜೆಪಿ ಸೇರಿಬಿಟ್ಟರೆ ಸಬ್ ಕಾ ಸಾಥ್ ಸಬ್ಕಾ ವಿನಾಶ್ ಆದರೂ ಅಸಲೀ ದೇಶಭಕ್ತ ಆಗುತ್ತಾರೆ.

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...