Homeಕರ್ನಾಟಕ‘ಹಿಂದೂ’ ಪದಕ್ಕೆ ಹೀನರ್ಥವಿದೆ: ಲೇಖನ ಪ್ರಕಟಿಸಿದ ಇಸ್ಕಾನ್‌ ವಿರುದ್ಧ ಬಿಜೆಪಿ ಹೋರಾಡುವುದೆ?

‘ಹಿಂದೂ’ ಪದಕ್ಕೆ ಹೀನರ್ಥವಿದೆ: ಲೇಖನ ಪ್ರಕಟಿಸಿದ ಇಸ್ಕಾನ್‌ ವಿರುದ್ಧ ಬಿಜೆಪಿ ಹೋರಾಡುವುದೆ?

- Advertisement -
- Advertisement -

“ಹಿಂದೂ ಎಂಬ ಪದಕ್ಕೆ ಕೆಟ್ಟ ಅರ್ಥವಿದೆ. ಹಲವು ಗ್ರಂಥಗಳಲ್ಲಿ ಈ ಉಲ್ಲೇಖಗಳನ್ನು ಮಾಡಲಾಗಿದೆ” ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿಯವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. “ಕಾಂಗ್ರೆಸ್‌ ಪಕ್ಷವು ಹಿಂದೂ ವಿರೋಧಿ”, “ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ” ಎಂದು ಬಿಜೆಪಿ ಹಾಗೂ ಸಂಘಪರಿವಾರ ಬೀದಿಗೆ ಇಳಿದು ಪ್ರತಿಭಟಿಸಿವೆ.

ಬಿಜೆಪಿ ನಾಯಕರಂತೂ ತರಹೇವಾರಿ ಹೇಳಿಕೆಗಳನ್ನು ನೀಡುತ್ತಾ, ಜಾರಕಿಹೊಳಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಪದದ ಹಿನ್ನೆಲೆಯ ಕುರಿತು ತನಿಖೆ ನಡೆಸುವಂತೆ ಸತೀಶ್ ಜಾರಕಿಹೊಳಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಮನವಿಯನ್ನೂ ಮಾಡಿದ್ದಾರೆ. ಆದರೆ ಜಾರಕಿಹೊಳಿಯವರ ವಿರುದ್ಧ ದ್ವೇಷ ಅಭಿಯಾನ ನಡೆಯುತ್ತಲೇ ಇದೆ. ಈ ಚರ್ಚೆಯ ಹೊತ್ತಿನಲ್ಲಿ ‘ಇಸ್ಕಾನ್‌ ಸಂಸ್ಥೆ’ ಪ್ರಕಟಿಸಿರುವ ಲೇಖನ ಚರ್ಚೆಗೆ ಗ್ರಾಸವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಇಸ್ಕಾನ್‌’ ಧಾರ್ಮಿಕ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಹಿಂದೆ ಪ್ರಕಟವಾಗಿರುವ ಲೇಖನವೊಂದು ಚರ್ಚೆಗೆ ಬಳಕೆಯಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹಾಗೂ ವಕೀಲರಾದ ಭೀಮನಗೌಡ ಪರಗೊಂಡ ಅವರು, “ನಂದ ನಂದನದಾಸ ಎಂಬುವವರ ಹತ್ತಾರು ಲೇಖನಗಳನ್ನು ಇಸ್ಕಾನ್‌ ಸಂಸ್ಥೆಯ ಜಾಲತಾಣದಲ್ಲಿ ಬರೆದಿರುವ ಇಸ್ಕಾನ್‌ ಸದಸ್ಯರಾಗಿದ್ದಾರೆ. 4 ವರ್ಷಗಳ ಹಿಂದೆಯೇ ʼಹಿಂದೂʼ ಎಂದರೆ ಕಳ್ಳ, ಕರಿಯ ಎಂದಿದ್ದಾರೆ. ಸತೀಶ್‌ ಜಾರಕಿಹೊಳಿಯವರ ವಿರುದ್ದ ಹರಿಹಾಯ್ದವರು ಇಸ್ಕಾನ್‌ ವಿರುದ್ದ ಉಸಿರೆತ್ತುತ್ತಾರಾ?” ಎಂದು ಪ್ರಶ್ನಿಸುತ್ತಾ ಬಿಜೆಪಿಯನ್ನು ಟ್ಯಾಗ್‌ ಮಾಡಿದ್ದಾರೆ.

ಭೀಮನಗೌಡ ಪರಗೊಂಡ ಅವರು ಲಗತ್ತಿಸಿರುವ ಲಿಂಕ್‌ ಕ್ಲಿಕ್ ಮಾಡಿದರೆ, ‘ಹಿಂದೂ’ ಎಂಬ ಪದದ ಹಿನ್ನೆಲೆಯ ಕುರಿತು ಮಾಡಲಾಗಿರುವ ಹಲವಾರು ಉಲ್ಲೇಖನಗಳನ್ನು ನಂದ ನಂದನದಾಸ ಅವರ ಲೇಖನದಲ್ಲಿ ಕಾಣಬಹುದು.

ಲೇಖನದಲ್ಲಿರುವ ಆಯ್ದ ಕೆಲವು ಅಂಶಗಳು ಹೀಗಿವೆ:

‘ಹಿಂದೂ’ ಎಂಬ ಪದವು ಸಂಸ್ಕೃತದದ್ದಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಯಾವುದೇ ವೈದಿಕ ಸಾಹಿತ್ಯದಲ್ಲಿ ಇದು ಕಂಡುಬರುವುದಿಲ್ಲ ಎಂದು ಹಲವು ವಿದ್ವಾಂಸರು ಹೇಳುತ್ತಾರೆ. ಹಾಗಾದರೆ ಅಂತಹ ಹೆಸರು ನಿಜವಾಗಿಯೂ ವೈದಿಕ ಮಾರ್ಗ ಅಥವಾ ಸಂಸ್ಕೃತಿಯನ್ನು ಹೇಗೆ ಪ್ರತಿನಿಧಿಸುತ್ತದೆ? ಮತ್ತು ವೈದಿಕ ಸಾಹಿತ್ಯವಿಲ್ಲದೆ, “ಹಿಂದೂ ಧರ್ಮಕ್ಕೆ ಯಾವುದೇ ಆಧಾರವಿಲ್ಲ”….

‘ಹಿಂದೂ’ ಎಂಬ ಹೆಸರನ್ನು ಹೊರಗಿನವರು, ಸಿಂಧು ನದಿಯ ಹೆಸರನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗದ ಆಕ್ರಮಣಕಾರರು ಬಳಸಿರುವುದಾಗಿ ಹೆಚ್ಚಿನ ವಿದ್ವಾಂಸರು ಭಾವಿಸುತ್ತಾರೆ. ಸಂಸ್ಕೃತ ನಿಘಂಟುತಜ್ಞರಾದ ಸರ್ ಮೋನಿಯರ್ ವಿಲಿಯಮ್ಸ್ ಪ್ರಕಾರ, “ಹಿಂದೂ ಅಥವಾ ಭಾರತ ಪದಗಳಿಗೆ ಸ್ಥಳೀಯ ಮೂಲವನ್ನು ಕಂಡುಹಿಡಿಯಲಾಗುವುದಿಲ್ಲ. ಈ ಪದಗಳು ಯಾವುದೇ ಬೌದ್ಧ, ಜೈನ ಪಠ್ಯಗಳಲ್ಲಿ ಅಥವಾ ಭಾರತದ ಯಾವುದೇ ಅಧಿಕೃತ 23 ಭಾಷೆಗಳಲ್ಲಿ ಕಂಡುಬರುವುದಿಲ್ಲ….”

ದಿ ಗ್ರೇಟ್ ಅಲೆಕ್ಸಾಂಡರ್ ಮೊದಲಿಗೆ ಸಿಂಧು ನದಿಯನ್ನು ‘ಇಂದು’ ಎಂದು ಮರುನಾಮಕರಣ ಮಾಡಿದನು ಎಂದು ಕೆಲವು ಮೂಲಗಳು ಹೇಳುತ್ತವೆ. ಆರಂಭದಲ್ಲಿನ “ಎಸ್‌‌” ಅನ್ನು ಕೈಬಿಡಲಾಯಿತು, ಹೀಗಾಗಿ ಗ್ರೀಕರು ಉಚ್ಚರಿಸಲು ಸುಲಭವಾಯಿತು. ಇದು ‘ಇಂದೂಸ್‌’ ಎಂದು ಹೆಸರಾಯಿತು. ಕ್ರಿಸ್ತ ಪೂರ್ವ 325ರ ಸುಮಾರಿಗೆ ಅಲೆಕ್ಸಾಂಡರ್ ಭಾರತವನ್ನು ಆಕ್ರಮಿಸಿದಾಗ ಅವನ ಮೆಸಿಡೋನಿಯನ್ ಪಡೆಗಳು ಸಿಂಧೂ ನದಿಯ ಪೂರ್ವದ ಭೂಮಿಯನ್ನು ಭಾರತ ಎಂದು ಕರೆದರು. ಇದನ್ನು ವಿಶೇಷವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿ ಬಳಸಲಾಗುತ್ತಿತ್ತು….

ನಂತರ, ಮುಸ್ಲಿಂ ಆಕ್ರಮಣಕಾರರು ಅಫ್ಘಾನಿಸ್ತಾನ ಮತ್ತು ಪರ್ಷಿಯಾದಂತಹ ಸ್ಥಳಗಳಿಂದ ಆಗಮಿಸಿದಾಗ, ಅವರು ಸಿಂಧೂ ನದಿಯನ್ನು ಹಿಂದೂ ನದಿ ಎಂದು ಕರೆದರು. ಅದರ ನಂತರ, ಸಿಂಧೂ ನದಿ ಇರುವ ಭಾರತದ ವಾಯುವ್ಯ ಪ್ರಾಂತ್ಯಗಳಲ್ಲಿನ ಆ ಭೂಪ್ರದೇಶದ ನಿವಾಸಿಗಳನ್ನು ವಿವರಿಸಲು ‘ಹಿಂದೂ’ ಎಂಬ ಹೆಸರನ್ನು ಬಳಸಲಾಯಿತು ಮತ್ತು ಆ ಪ್ರದೇಶವನ್ನು ‘ಹಿಂದುಸ್ತಾನ್’ ಎಂದು ಕರೆಯಲಾಯಿತು.

‘ಹಿಂದೂ’ ಎಂಬ ಹೆಸರಿನ ಇನ್ನೊಂದು ನೋಟವು ಭಾರತದ ಆಧ್ಯಾತ್ಮಿಕ ಪಥಗಳ ನಿಜವಾದ ಸಾರವನ್ನು ಅರ್ಥಮಾಡಿಕೊಳ್ಳಲು ಕಾರಣವಾಗುವ ಗೊಂದಲಮಯ ಸ್ವಭಾವವನ್ನು ತೋರಿಸುತ್ತದೆ. ಆರ್.ಎನ್.ಸೂರ್ಯನಾರಾಯಣ ಅವರು ತಮ್ಮ ಯೂನಿವರ್ಸಲ್ ರಿಲಿಜನ್ (ಪು.1-2, 1952ರಲ್ಲಿ ಮೈಸೂರಿನಲ್ಲಿ ಪ್ರಕಟವಾದ) ಪುಸ್ತಕದಲ್ಲಿ ಬರೆದಿರುವಂತೆ, “….ಪಾಶ್ಚಿಮಾತ್ಯ ವಿದ್ವಾಂಸರು ಮತ್ತು ಇತಿಹಾಸಕಾರರು ಕೂಡ ಈ ಬ್ರಾಹ್ಮಣಭೂಮಿಯ ನಿಜವಾದ ಹೆಸರನ್ನು ಪತ್ತೆಹಚ್ಚಲು ವಿಫಲರಾಗಿದ್ದಾರೆ…. ಅವರು ಅದನ್ನು ‘ಹಿಂದೂ’ ಎಂಬ ಅರ್ಥಹೀನ ಪದದಿಂದ ಕರೆದು ತೃಪ್ತಿಪಡಿಸಿದ್ದಾರೆ. ವಿದೇಶಿಗರು ನವೀಕರಿಸಿದ ಈ ಪದವನ್ನು ನಮ್ಮ ಯಾವುದೇ ಸಂಸ್ಕೃತ ಲೇಖಕರು, ಪೂಜ್ಯ ಆಚಾರ್ಯರು ತಮ್ಮ ಕೃತಿಗಳಲ್ಲಿ ಬಳಸಿಲ್ಲ. ಹಿಂದೂ ಪದವನ್ನು ನಿರಂತರವಾಗಿ ಬಳಸಬೇಕೆಂದು ಒತ್ತಾಯಿಸಲು ರಾಜಕೀಯ ಶಕ್ತಿಯು ಕಾರಣವಾಗಿದೆ ಎಂದು ತೋರುತ್ತದೆ. ಹಿಂದೂ ಎಂಬ ಪದವು ಪರ್ಷಿಯನ್ ಸಾಹಿತ್ಯದಲ್ಲಿ ಕಂಡುಬರುತ್ತದೆ. ಹಿಂದೂ-ಇ-ಫಲಾಕ್ ಎಂದರೆ ‘ಆಕಾಶದ ಕಪ್ಪು’ ಮತ್ತು ‘ಶನಿ’ ಎಂದರ್ಥ…. ಪರ್ಷಿಯನ್ನರು ಸಿಂಧುವಿನ ಪವಿತ್ರ ನೆಲಕ್ಕೆ ಬಂದಾಗ, ಹಿಂದೂ ಎಂಬ ಹೆಸರನ್ನು ಇಟ್ಟರು ಎಂದು ಇತಿಹಾಸದಲ್ಲಿ ಓದಿರುವುದು ನಾಚಿಕೆಗೇಡಿನ ಮತ್ತು ಹಾಸ್ಯಾಸ್ಪದವಾಗಿದೆ.

ಹಿಂದೂ ಎಂಬ ಹೆಸರಿನ ಮೂಲದ ಇನ್ನೊಂದು ದೃಷ್ಟಿಕೋನವು ಅವಹೇಳನಕಾರಿ ಅರ್ಥವನ್ನು ಆಧರಿಸಿದೆ. “ಇದಲ್ಲದೆ, ಈ ಹೆಸರನ್ನು [ಹಿಂದೂ] ಮೂಲ ಆರ್ಯ ಜನಾಂಗಕ್ಕೆ ಮುಸ್ಲಿಂ ಆಕ್ರಮಣಕಾರರು ಅವಮಾನಿಸಲು ನೀಡಿರುವುದಾಗಿದೆ. ನಮ್ಮ ಲೇಖಕರು ಹೇಳುವಂತೆ ಪರ್ಷಿಯನ್ ಭಾಷೆಯಲ್ಲಿ ಈ ಪದದ ಅರ್ಥ ಗುಲಾಮ. ಇಸ್ಲಾಂ ಪ್ರಕಾರ, ಇಸ್ಲಾಂ ಧರ್ಮವನ್ನು ಸ್ವೀಕರಿಸದ ಎಲ್ಲರನ್ನು ಗುಲಾಮರು ಎಂದು ಕರೆಯಲಾಗುತ್ತದೆ” (ಉಲ್ಲೇಖ: 1898ರಲ್ಲಿ ಲಾಹೋರ್‌ನಲ್ಲಿ ಪ್ರಕಟವಾಗಿರುವ ಮಹರ್ಷಿ ಶ್ರೀ ದಯಾನಂದ ಸರಸ್ವತಿಯವರ ಕೃತಿ).

“ಇದಲ್ಲದೆ, 1964 ರಲ್ಲಿ ಲಕ್ನೋದಲ್ಲಿ ಪ್ರಕಟವಾದ ಲುಘೆತ್-ಎ-ಕಿಶ್ವರಿ ಎಂಬ ಪರ್ಷಿಯನ್ ನಿಘಂಟಿನಲ್ಲಿ ಹಿಂದೂ ಪದದ ಅರ್ಥವನ್ನು- ‘ಚೋರ್ [ಕಳ್ಳ], ಡಕೂ [ಡಕಾಯಿಟ್], ರಾಹ್ಜಾನ್ [ವೇಲೇಯರ್] ಮತ್ತು ಗುಲಾಮ್ [ಗುಲಾಮ]” ಎಂದು ನೀಡಲಾಗಿದೆ. ಮತ್ತೊಂದು ನಿಘಂಟಾದ ಉರ್ದು-ಫಿರೋಜ್-ಉಲ್-ಲಘಾತ್ (ಭಾಗ ಒಂದನೇ, ಪುಟ 615)ನಲ್ಲಿ ಹಿಂದೂ ಪದದ ಪರ್ಷಿಯನ್ ಅರ್ಥವನ್ನು- ಬರ್ದಾ (ವಿಧೇಯ ಸೇವಕ), ಸಿಯಾ ಫಾಮ್ (ಕಪ್ಪು ಬಣ್ಣ) ಮತ್ತು ಕಾಲಾ (ಕಪ್ಪು) ಎಂದು ವಿವರಿಸಲಾಗಿದೆ.

ಇದನ್ನೂ ಓದಿರಿ: ಸದುದ್ದೇಶದಿಂದ ನೀಡಿದ ಹೇಳಿಕೆ ಹಿಂಪಡೆಯುವೆ: ಸತೀಶ್ ಜಾರಕಿಹೊಳಿ

ಆದ್ದರಿಂದ, ಮೂಲತಃ, ಹಿಂದೂ ಎಂಬುದು ಕೇವಲ ಮುಸ್ಲಿಂ ಮೂಲದ ಮುಂದುವರಿಕೆಯಾಗಿದ್ದು ಅದು ಕಳೆದ 1300 ವರ್ಷಗಳಲ್ಲಿ ಮಾತ್ರ ಬಳಕೆಗೆ ಬಂದಿತು. ಹೀಗಾಗಿ ಇದು ಮಾನ್ಯವಾದ ಸಂಸ್ಕೃತ ಪದವಲ್ಲ, ನಿಜವಾದ ವೈದಿಕ ಸಂಸ್ಕೃತಿ ಅಥವಾ ವೈದಿಕ ಆಧ್ಯಾತ್ಮಿಕ ಮಾರ್ಗದೊಂದಿಗೆ ಯಾವುದೇ ಸಂಬಂಧವನ್ನು ಇದು ಹೊಂದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬಹುದು. “ಹಿಂದೂ ಧರ್ಮ” ಎಂದು ಕರೆಯಲ್ಪಡುವ ಯಾವುದೇ ಧರ್ಮವು ಅಸ್ತಿತ್ವದಲ್ಲಿಲ್ಲ…. (ಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ) (ಲೇಖನದ ‘ಆರ್ಕೈವ್‌ ಲಿಂಕ್‌’)

ಸತೀಶ್ ಜಾರಕಿಹೊಳಿಯವರ ಮೇಲಷ್ಟೇ ವಿರೋಧವೇಕೆ?

ಹಿಂದೂ ಪದಕ್ಕೆ ಹೀನಾರ್ಥಗಳಿವೆ ಎಂದು ತಿಳಿಸುವ ಲೇಖವನ್ನು ಧಾರ್ಮಿಕ ಸಂಸ್ಥೆಯೊಂದು ಕಳೆದ ನಾಲ್ಕು ವರ್ಷಗಳ ಹಿಂದೆಯೇ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸತೀಶ್ ಜಾರಕಿಹೊಳಿಯವರು ಹೇಳಿದ್ದನ್ನೇ ಇಸ್ಕಾನ್‌ ಕೂಡ ಹೇಳಿದೆ. ಬಿಜೆಪಿ ಹಾಗೂ ಸಂಘಪರಿವಾರ ‘ಇಸ್ಕಾನ್‌’ ವಿರುದ್ಧ ಹೋರಾಡುತ್ತದೆಯೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾರಕಿಹೊಳಿರವರು

    ಇವರ ಚೀರಾಟಗಳಿಗೆ ಬೆದರಿ ಶೀಘ್ರವಾಗಿ ಬಬಿಜೆಪಿ ಸೇರಿಬಿಟ್ಟರೆ ಸಬ್ ಕಾ ಸಾಥ್ ಸಬ್ಕಾ ವಿನಾಶ್ ಆದರೂ ಅಸಲೀ ದೇಶಭಕ್ತ ಆಗುತ್ತಾರೆ.

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...