Homeಕರ್ನಾಟಕ‘ಹಿಂದೂ’ ಪದಕ್ಕೆ ಹೀನರ್ಥವಿದೆ: ಲೇಖನ ಪ್ರಕಟಿಸಿದ ಇಸ್ಕಾನ್‌ ವಿರುದ್ಧ ಬಿಜೆಪಿ ಹೋರಾಡುವುದೆ?

‘ಹಿಂದೂ’ ಪದಕ್ಕೆ ಹೀನರ್ಥವಿದೆ: ಲೇಖನ ಪ್ರಕಟಿಸಿದ ಇಸ್ಕಾನ್‌ ವಿರುದ್ಧ ಬಿಜೆಪಿ ಹೋರಾಡುವುದೆ?

- Advertisement -
- Advertisement -

“ಹಿಂದೂ ಎಂಬ ಪದಕ್ಕೆ ಕೆಟ್ಟ ಅರ್ಥವಿದೆ. ಹಲವು ಗ್ರಂಥಗಳಲ್ಲಿ ಈ ಉಲ್ಲೇಖಗಳನ್ನು ಮಾಡಲಾಗಿದೆ” ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿಯವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. “ಕಾಂಗ್ರೆಸ್‌ ಪಕ್ಷವು ಹಿಂದೂ ವಿರೋಧಿ”, “ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ” ಎಂದು ಬಿಜೆಪಿ ಹಾಗೂ ಸಂಘಪರಿವಾರ ಬೀದಿಗೆ ಇಳಿದು ಪ್ರತಿಭಟಿಸಿವೆ.

ಬಿಜೆಪಿ ನಾಯಕರಂತೂ ತರಹೇವಾರಿ ಹೇಳಿಕೆಗಳನ್ನು ನೀಡುತ್ತಾ, ಜಾರಕಿಹೊಳಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಪದದ ಹಿನ್ನೆಲೆಯ ಕುರಿತು ತನಿಖೆ ನಡೆಸುವಂತೆ ಸತೀಶ್ ಜಾರಕಿಹೊಳಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಮನವಿಯನ್ನೂ ಮಾಡಿದ್ದಾರೆ. ಆದರೆ ಜಾರಕಿಹೊಳಿಯವರ ವಿರುದ್ಧ ದ್ವೇಷ ಅಭಿಯಾನ ನಡೆಯುತ್ತಲೇ ಇದೆ. ಈ ಚರ್ಚೆಯ ಹೊತ್ತಿನಲ್ಲಿ ‘ಇಸ್ಕಾನ್‌ ಸಂಸ್ಥೆ’ ಪ್ರಕಟಿಸಿರುವ ಲೇಖನ ಚರ್ಚೆಗೆ ಗ್ರಾಸವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಇಸ್ಕಾನ್‌’ ಧಾರ್ಮಿಕ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಹಿಂದೆ ಪ್ರಕಟವಾಗಿರುವ ಲೇಖನವೊಂದು ಚರ್ಚೆಗೆ ಬಳಕೆಯಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹಾಗೂ ವಕೀಲರಾದ ಭೀಮನಗೌಡ ಪರಗೊಂಡ ಅವರು, “ನಂದ ನಂದನದಾಸ ಎಂಬುವವರ ಹತ್ತಾರು ಲೇಖನಗಳನ್ನು ಇಸ್ಕಾನ್‌ ಸಂಸ್ಥೆಯ ಜಾಲತಾಣದಲ್ಲಿ ಬರೆದಿರುವ ಇಸ್ಕಾನ್‌ ಸದಸ್ಯರಾಗಿದ್ದಾರೆ. 4 ವರ್ಷಗಳ ಹಿಂದೆಯೇ ʼಹಿಂದೂʼ ಎಂದರೆ ಕಳ್ಳ, ಕರಿಯ ಎಂದಿದ್ದಾರೆ. ಸತೀಶ್‌ ಜಾರಕಿಹೊಳಿಯವರ ವಿರುದ್ದ ಹರಿಹಾಯ್ದವರು ಇಸ್ಕಾನ್‌ ವಿರುದ್ದ ಉಸಿರೆತ್ತುತ್ತಾರಾ?” ಎಂದು ಪ್ರಶ್ನಿಸುತ್ತಾ ಬಿಜೆಪಿಯನ್ನು ಟ್ಯಾಗ್‌ ಮಾಡಿದ್ದಾರೆ.

ಭೀಮನಗೌಡ ಪರಗೊಂಡ ಅವರು ಲಗತ್ತಿಸಿರುವ ಲಿಂಕ್‌ ಕ್ಲಿಕ್ ಮಾಡಿದರೆ, ‘ಹಿಂದೂ’ ಎಂಬ ಪದದ ಹಿನ್ನೆಲೆಯ ಕುರಿತು ಮಾಡಲಾಗಿರುವ ಹಲವಾರು ಉಲ್ಲೇಖನಗಳನ್ನು ನಂದ ನಂದನದಾಸ ಅವರ ಲೇಖನದಲ್ಲಿ ಕಾಣಬಹುದು.

ಲೇಖನದಲ್ಲಿರುವ ಆಯ್ದ ಕೆಲವು ಅಂಶಗಳು ಹೀಗಿವೆ:

‘ಹಿಂದೂ’ ಎಂಬ ಪದವು ಸಂಸ್ಕೃತದದ್ದಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಯಾವುದೇ ವೈದಿಕ ಸಾಹಿತ್ಯದಲ್ಲಿ ಇದು ಕಂಡುಬರುವುದಿಲ್ಲ ಎಂದು ಹಲವು ವಿದ್ವಾಂಸರು ಹೇಳುತ್ತಾರೆ. ಹಾಗಾದರೆ ಅಂತಹ ಹೆಸರು ನಿಜವಾಗಿಯೂ ವೈದಿಕ ಮಾರ್ಗ ಅಥವಾ ಸಂಸ್ಕೃತಿಯನ್ನು ಹೇಗೆ ಪ್ರತಿನಿಧಿಸುತ್ತದೆ? ಮತ್ತು ವೈದಿಕ ಸಾಹಿತ್ಯವಿಲ್ಲದೆ, “ಹಿಂದೂ ಧರ್ಮಕ್ಕೆ ಯಾವುದೇ ಆಧಾರವಿಲ್ಲ”….

‘ಹಿಂದೂ’ ಎಂಬ ಹೆಸರನ್ನು ಹೊರಗಿನವರು, ಸಿಂಧು ನದಿಯ ಹೆಸರನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗದ ಆಕ್ರಮಣಕಾರರು ಬಳಸಿರುವುದಾಗಿ ಹೆಚ್ಚಿನ ವಿದ್ವಾಂಸರು ಭಾವಿಸುತ್ತಾರೆ. ಸಂಸ್ಕೃತ ನಿಘಂಟುತಜ್ಞರಾದ ಸರ್ ಮೋನಿಯರ್ ವಿಲಿಯಮ್ಸ್ ಪ್ರಕಾರ, “ಹಿಂದೂ ಅಥವಾ ಭಾರತ ಪದಗಳಿಗೆ ಸ್ಥಳೀಯ ಮೂಲವನ್ನು ಕಂಡುಹಿಡಿಯಲಾಗುವುದಿಲ್ಲ. ಈ ಪದಗಳು ಯಾವುದೇ ಬೌದ್ಧ, ಜೈನ ಪಠ್ಯಗಳಲ್ಲಿ ಅಥವಾ ಭಾರತದ ಯಾವುದೇ ಅಧಿಕೃತ 23 ಭಾಷೆಗಳಲ್ಲಿ ಕಂಡುಬರುವುದಿಲ್ಲ….”

ದಿ ಗ್ರೇಟ್ ಅಲೆಕ್ಸಾಂಡರ್ ಮೊದಲಿಗೆ ಸಿಂಧು ನದಿಯನ್ನು ‘ಇಂದು’ ಎಂದು ಮರುನಾಮಕರಣ ಮಾಡಿದನು ಎಂದು ಕೆಲವು ಮೂಲಗಳು ಹೇಳುತ್ತವೆ. ಆರಂಭದಲ್ಲಿನ “ಎಸ್‌‌” ಅನ್ನು ಕೈಬಿಡಲಾಯಿತು, ಹೀಗಾಗಿ ಗ್ರೀಕರು ಉಚ್ಚರಿಸಲು ಸುಲಭವಾಯಿತು. ಇದು ‘ಇಂದೂಸ್‌’ ಎಂದು ಹೆಸರಾಯಿತು. ಕ್ರಿಸ್ತ ಪೂರ್ವ 325ರ ಸುಮಾರಿಗೆ ಅಲೆಕ್ಸಾಂಡರ್ ಭಾರತವನ್ನು ಆಕ್ರಮಿಸಿದಾಗ ಅವನ ಮೆಸಿಡೋನಿಯನ್ ಪಡೆಗಳು ಸಿಂಧೂ ನದಿಯ ಪೂರ್ವದ ಭೂಮಿಯನ್ನು ಭಾರತ ಎಂದು ಕರೆದರು. ಇದನ್ನು ವಿಶೇಷವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿ ಬಳಸಲಾಗುತ್ತಿತ್ತು….

ನಂತರ, ಮುಸ್ಲಿಂ ಆಕ್ರಮಣಕಾರರು ಅಫ್ಘಾನಿಸ್ತಾನ ಮತ್ತು ಪರ್ಷಿಯಾದಂತಹ ಸ್ಥಳಗಳಿಂದ ಆಗಮಿಸಿದಾಗ, ಅವರು ಸಿಂಧೂ ನದಿಯನ್ನು ಹಿಂದೂ ನದಿ ಎಂದು ಕರೆದರು. ಅದರ ನಂತರ, ಸಿಂಧೂ ನದಿ ಇರುವ ಭಾರತದ ವಾಯುವ್ಯ ಪ್ರಾಂತ್ಯಗಳಲ್ಲಿನ ಆ ಭೂಪ್ರದೇಶದ ನಿವಾಸಿಗಳನ್ನು ವಿವರಿಸಲು ‘ಹಿಂದೂ’ ಎಂಬ ಹೆಸರನ್ನು ಬಳಸಲಾಯಿತು ಮತ್ತು ಆ ಪ್ರದೇಶವನ್ನು ‘ಹಿಂದುಸ್ತಾನ್’ ಎಂದು ಕರೆಯಲಾಯಿತು.

‘ಹಿಂದೂ’ ಎಂಬ ಹೆಸರಿನ ಇನ್ನೊಂದು ನೋಟವು ಭಾರತದ ಆಧ್ಯಾತ್ಮಿಕ ಪಥಗಳ ನಿಜವಾದ ಸಾರವನ್ನು ಅರ್ಥಮಾಡಿಕೊಳ್ಳಲು ಕಾರಣವಾಗುವ ಗೊಂದಲಮಯ ಸ್ವಭಾವವನ್ನು ತೋರಿಸುತ್ತದೆ. ಆರ್.ಎನ್.ಸೂರ್ಯನಾರಾಯಣ ಅವರು ತಮ್ಮ ಯೂನಿವರ್ಸಲ್ ರಿಲಿಜನ್ (ಪು.1-2, 1952ರಲ್ಲಿ ಮೈಸೂರಿನಲ್ಲಿ ಪ್ರಕಟವಾದ) ಪುಸ್ತಕದಲ್ಲಿ ಬರೆದಿರುವಂತೆ, “….ಪಾಶ್ಚಿಮಾತ್ಯ ವಿದ್ವಾಂಸರು ಮತ್ತು ಇತಿಹಾಸಕಾರರು ಕೂಡ ಈ ಬ್ರಾಹ್ಮಣಭೂಮಿಯ ನಿಜವಾದ ಹೆಸರನ್ನು ಪತ್ತೆಹಚ್ಚಲು ವಿಫಲರಾಗಿದ್ದಾರೆ…. ಅವರು ಅದನ್ನು ‘ಹಿಂದೂ’ ಎಂಬ ಅರ್ಥಹೀನ ಪದದಿಂದ ಕರೆದು ತೃಪ್ತಿಪಡಿಸಿದ್ದಾರೆ. ವಿದೇಶಿಗರು ನವೀಕರಿಸಿದ ಈ ಪದವನ್ನು ನಮ್ಮ ಯಾವುದೇ ಸಂಸ್ಕೃತ ಲೇಖಕರು, ಪೂಜ್ಯ ಆಚಾರ್ಯರು ತಮ್ಮ ಕೃತಿಗಳಲ್ಲಿ ಬಳಸಿಲ್ಲ. ಹಿಂದೂ ಪದವನ್ನು ನಿರಂತರವಾಗಿ ಬಳಸಬೇಕೆಂದು ಒತ್ತಾಯಿಸಲು ರಾಜಕೀಯ ಶಕ್ತಿಯು ಕಾರಣವಾಗಿದೆ ಎಂದು ತೋರುತ್ತದೆ. ಹಿಂದೂ ಎಂಬ ಪದವು ಪರ್ಷಿಯನ್ ಸಾಹಿತ್ಯದಲ್ಲಿ ಕಂಡುಬರುತ್ತದೆ. ಹಿಂದೂ-ಇ-ಫಲಾಕ್ ಎಂದರೆ ‘ಆಕಾಶದ ಕಪ್ಪು’ ಮತ್ತು ‘ಶನಿ’ ಎಂದರ್ಥ…. ಪರ್ಷಿಯನ್ನರು ಸಿಂಧುವಿನ ಪವಿತ್ರ ನೆಲಕ್ಕೆ ಬಂದಾಗ, ಹಿಂದೂ ಎಂಬ ಹೆಸರನ್ನು ಇಟ್ಟರು ಎಂದು ಇತಿಹಾಸದಲ್ಲಿ ಓದಿರುವುದು ನಾಚಿಕೆಗೇಡಿನ ಮತ್ತು ಹಾಸ್ಯಾಸ್ಪದವಾಗಿದೆ.

ಹಿಂದೂ ಎಂಬ ಹೆಸರಿನ ಮೂಲದ ಇನ್ನೊಂದು ದೃಷ್ಟಿಕೋನವು ಅವಹೇಳನಕಾರಿ ಅರ್ಥವನ್ನು ಆಧರಿಸಿದೆ. “ಇದಲ್ಲದೆ, ಈ ಹೆಸರನ್ನು [ಹಿಂದೂ] ಮೂಲ ಆರ್ಯ ಜನಾಂಗಕ್ಕೆ ಮುಸ್ಲಿಂ ಆಕ್ರಮಣಕಾರರು ಅವಮಾನಿಸಲು ನೀಡಿರುವುದಾಗಿದೆ. ನಮ್ಮ ಲೇಖಕರು ಹೇಳುವಂತೆ ಪರ್ಷಿಯನ್ ಭಾಷೆಯಲ್ಲಿ ಈ ಪದದ ಅರ್ಥ ಗುಲಾಮ. ಇಸ್ಲಾಂ ಪ್ರಕಾರ, ಇಸ್ಲಾಂ ಧರ್ಮವನ್ನು ಸ್ವೀಕರಿಸದ ಎಲ್ಲರನ್ನು ಗುಲಾಮರು ಎಂದು ಕರೆಯಲಾಗುತ್ತದೆ” (ಉಲ್ಲೇಖ: 1898ರಲ್ಲಿ ಲಾಹೋರ್‌ನಲ್ಲಿ ಪ್ರಕಟವಾಗಿರುವ ಮಹರ್ಷಿ ಶ್ರೀ ದಯಾನಂದ ಸರಸ್ವತಿಯವರ ಕೃತಿ).

“ಇದಲ್ಲದೆ, 1964 ರಲ್ಲಿ ಲಕ್ನೋದಲ್ಲಿ ಪ್ರಕಟವಾದ ಲುಘೆತ್-ಎ-ಕಿಶ್ವರಿ ಎಂಬ ಪರ್ಷಿಯನ್ ನಿಘಂಟಿನಲ್ಲಿ ಹಿಂದೂ ಪದದ ಅರ್ಥವನ್ನು- ‘ಚೋರ್ [ಕಳ್ಳ], ಡಕೂ [ಡಕಾಯಿಟ್], ರಾಹ್ಜಾನ್ [ವೇಲೇಯರ್] ಮತ್ತು ಗುಲಾಮ್ [ಗುಲಾಮ]” ಎಂದು ನೀಡಲಾಗಿದೆ. ಮತ್ತೊಂದು ನಿಘಂಟಾದ ಉರ್ದು-ಫಿರೋಜ್-ಉಲ್-ಲಘಾತ್ (ಭಾಗ ಒಂದನೇ, ಪುಟ 615)ನಲ್ಲಿ ಹಿಂದೂ ಪದದ ಪರ್ಷಿಯನ್ ಅರ್ಥವನ್ನು- ಬರ್ದಾ (ವಿಧೇಯ ಸೇವಕ), ಸಿಯಾ ಫಾಮ್ (ಕಪ್ಪು ಬಣ್ಣ) ಮತ್ತು ಕಾಲಾ (ಕಪ್ಪು) ಎಂದು ವಿವರಿಸಲಾಗಿದೆ.

ಇದನ್ನೂ ಓದಿರಿ: ಸದುದ್ದೇಶದಿಂದ ನೀಡಿದ ಹೇಳಿಕೆ ಹಿಂಪಡೆಯುವೆ: ಸತೀಶ್ ಜಾರಕಿಹೊಳಿ

ಆದ್ದರಿಂದ, ಮೂಲತಃ, ಹಿಂದೂ ಎಂಬುದು ಕೇವಲ ಮುಸ್ಲಿಂ ಮೂಲದ ಮುಂದುವರಿಕೆಯಾಗಿದ್ದು ಅದು ಕಳೆದ 1300 ವರ್ಷಗಳಲ್ಲಿ ಮಾತ್ರ ಬಳಕೆಗೆ ಬಂದಿತು. ಹೀಗಾಗಿ ಇದು ಮಾನ್ಯವಾದ ಸಂಸ್ಕೃತ ಪದವಲ್ಲ, ನಿಜವಾದ ವೈದಿಕ ಸಂಸ್ಕೃತಿ ಅಥವಾ ವೈದಿಕ ಆಧ್ಯಾತ್ಮಿಕ ಮಾರ್ಗದೊಂದಿಗೆ ಯಾವುದೇ ಸಂಬಂಧವನ್ನು ಇದು ಹೊಂದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬಹುದು. “ಹಿಂದೂ ಧರ್ಮ” ಎಂದು ಕರೆಯಲ್ಪಡುವ ಯಾವುದೇ ಧರ್ಮವು ಅಸ್ತಿತ್ವದಲ್ಲಿಲ್ಲ…. (ಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ) (ಲೇಖನದ ‘ಆರ್ಕೈವ್‌ ಲಿಂಕ್‌’)

ಸತೀಶ್ ಜಾರಕಿಹೊಳಿಯವರ ಮೇಲಷ್ಟೇ ವಿರೋಧವೇಕೆ?

ಹಿಂದೂ ಪದಕ್ಕೆ ಹೀನಾರ್ಥಗಳಿವೆ ಎಂದು ತಿಳಿಸುವ ಲೇಖವನ್ನು ಧಾರ್ಮಿಕ ಸಂಸ್ಥೆಯೊಂದು ಕಳೆದ ನಾಲ್ಕು ವರ್ಷಗಳ ಹಿಂದೆಯೇ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸತೀಶ್ ಜಾರಕಿಹೊಳಿಯವರು ಹೇಳಿದ್ದನ್ನೇ ಇಸ್ಕಾನ್‌ ಕೂಡ ಹೇಳಿದೆ. ಬಿಜೆಪಿ ಹಾಗೂ ಸಂಘಪರಿವಾರ ‘ಇಸ್ಕಾನ್‌’ ವಿರುದ್ಧ ಹೋರಾಡುತ್ತದೆಯೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾರಕಿಹೊಳಿರವರು

    ಇವರ ಚೀರಾಟಗಳಿಗೆ ಬೆದರಿ ಶೀಘ್ರವಾಗಿ ಬಬಿಜೆಪಿ ಸೇರಿಬಿಟ್ಟರೆ ಸಬ್ ಕಾ ಸಾಥ್ ಸಬ್ಕಾ ವಿನಾಶ್ ಆದರೂ ಅಸಲೀ ದೇಶಭಕ್ತ ಆಗುತ್ತಾರೆ.

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....