Homeಕರ್ನಾಟಕಸಾವರ್ಕರ್‌ಗೆ ಮೆಚ್ಚುಗೆ ಸೂಚಿಸಿದ ಸಿಎಂಗೆ ರಾಜ್ಯದ ಜನತೆಯಿಂದ ಇತಿಹಾಸ ಪಾಠ!

ಸಾವರ್ಕರ್‌ಗೆ ಮೆಚ್ಚುಗೆ ಸೂಚಿಸಿದ ಸಿಎಂಗೆ ರಾಜ್ಯದ ಜನತೆಯಿಂದ ಇತಿಹಾಸ ಪಾಠ!

- Advertisement -
- Advertisement -

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾವರ್ಕರ್‌ ಅವರನ್ನು ಶ್ಲಾಘಿಸಿ ಮಾಡಿರುವ ಪೋಸ್ಟ್‌ಗೆ ರಾಜ್ಯದ ಜನತೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರಿಗೆ ಇತಿಹಾಸದ ಪುಟಗಳನ್ನು ವಿವರಿಸಿದ್ದಾರೆ.

“ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ, ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ, ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಪುಣ್ಯಸ್ಮರಣೆಯ ದಿನದಂದು ಅವರಿಗೆ ಶತಶತ ನಮನಗಳು. ಅವರ ದೇಶಪ್ರೇಮ, ತ್ಯಾಗ, ಹೋರಾಟಗಳು ಇಂದಿಗೂ ಸ್ಫೂರ್ತಿದಾಯಕವಾಗಿವೆ” ಎಂದು ಬೊಮ್ಮಾಯಿಯವರು ಪೋಸ್ಟ್ ಹಾಕಿದ್ದಾರೆ.

ಆರ್‌ಎಸ್‌ಎಸ್‌ನ ಪ್ರಮುಖ ಮುಖಗಳಲ್ಲಿ ಸಾವರ್ಕರ್‌ ಒಬ್ಬರು. ಹಿಂದುತ್ವವಾದಿಯಾಗಿದ್ದರು. ಸಾವರ್ಕರ್‌ ಜೈಲಿಗೆ ಸೇರಿದ ಬಳಿಕ ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು. ಹೀಗಾಗಿ ಸಾವರ್ಕರ್‌ ಅವರನ್ನು ಪ್ರಖರ ಸ್ವಾತಂತ್ರ್ಯ ಹೋರಾಟಗಾರ ಎಂದೆಲ್ಲ ಸಂಘಪರಿವಾರ ಬಣ್ಣಿಸುವುದನ್ನು ಜನರು ಟೀಕಿಸುತ್ತಾ ಬಂದಿದ್ದಾರೆ. ಸಾವರ್ಕರ್‌ಗೆ ಅಂಟಿರುವ ಕ್ಷಮಾಪಣೆಯ ಇತಿಹಾಸವನ್ನು ಮುಚ್ಚಿಹಾಕುವ ಅಥವಾ ತಿರುಚುವ ಯತ್ನವನ್ನು ಸಂಘಪರಿವಾರವೂ ಮಾಡುತ್ತಾ ಬಂದಿದೆ.

ಇದನ್ನೂ ಓದಿರಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

“ಸಾವರ್ಕರ್‌ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ಗಾಂಧೀಜಿ ಸಲಹೆ ನೀಡಿದ್ದರು” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಕೆಲವು ತಿಂಗಳ ಹಿಂದೆ ಹೇಳಿದ್ದರು. “ರಾಜನಾಥ್‌ ಸಿಂಗ್ ಹೇಳಿಕೆ ಹಾಸ್ಯಾಸ್ಪದ, ಅಸಂಬದ್ಧ ಹಾಗೂ ವಿವೇಚನಾ ರಹಿತ” ಎಂದು ಗಾಂಧೀಜಿಯವರ ಮೊಮ್ಮಗ, ಜೀವನಚರಿತ್ರಕಾರ ರಾಜಮೋಹನ್‌ ಗಾಂಧಿ ಪ್ರತಿಕ್ರಿಯಿಸಿದ್ದರು.

“ಸಾವರ್ಕರ್‌ ಅವರು ಹಲವು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು ಎಂದು ಹೇಳುವುದು ತಪ್ಪೆಂದು ರಾಜನಾಥ್ ಸಿಂಗ್‌ ಹೇಳಿರುವುದು ಸಂಪೂರ್ಣ ಸುಳ್ಳು. ಅಂಡಮಾನ್ ಜೈಲಿಗೆ ಹಾಕಿದ ಕೆಲವೇ ದಿನಗಳಲ್ಲಿ 1911ರಲ್ಲಿ ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆದಿದ್ದರು. ಅಲ್ಲದೆ ಸಾವರ್ಕರ್‌ ಅವರು ಒಟ್ಟು ಏಳು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು” ಎಂದು ರಾಜಮೋಹನ್‌ ಗಾಂಧಿ ಅವರು ‘ದಿ ವೈರ್’ ಸಂದರ್ಶನದಲ್ಲಿ ವಿವರಿಸಿದ್ದರು.

ಕ್ಷಮಾಪಣೆ ಕೇಳಲು ಇದ್ದ ಅವಕಾಶದಲ್ಲಿ ಬಿಡುಗಾಗಿ ಸಾವರ್ಕರ್‌ ಕೋರಿಕೆ ಸಲ್ಲಿಸಿದ್ದರು. “1913ರ ಕ್ಷಮಾಪಣಾ ಅರ್ಜಿಯಲ್ಲಿ ಸರ್ಕಾರ ತನ್ನ ಬಹುಮುಖ ಲಾಭ ಮತ್ತು ಕರುಣೆಯಲ್ಲಿ ನನ್ನನ್ನು ಬಿಡುಗಡೆ  ಮಾಡಲಿ” ಎಂದು ಕೇಳಿಕೊಂಡಿದ್ದರು. ಇದು ಕ್ಷಮಾಪಣೆಯಲ್ಲದೆ ಮತ್ತೇನು” ಎಂದು ಪ್ರಶ್ನಿಸಿದ್ದರು.

ಸಾವರ್ಕರ್ ಅವರ ಅಪರಾಧವನ್ನು ರಾಜಕೀಯ ಎಂದು ತೋರಿಸಲು ಗಾಂಧಿ ಪತ್ರವು ಸಲಹೆ ನೀಡಿದೆ. ಕ್ಷಮಾಪಣೆಗಾಗಿ ಮನವಿ ಮಾಡಲು ಗಾಂಧೀಜಿಯವರು ಪತ್ರ ಬರೆದಿಲ್ಲ. ಮುಖ್ಯವಾಗಿ ಸಾವರ್ಕರ್ ಅವರಿಗೆ ಗಾಂಧೀಜಿಯವರು ಪತ್ರ ಬರೆಯುವ ಒಂಬತ್ತು ವರ್ಷಗಳ ಮೊದಲೇ ಸಾವರ್ಕರ್‌ ಕ್ಷಮಾಪಣಾ ಪತ್ರಗಳನ್ನು ಬ್ರಿಟಿಷರಿಗೆ ಬರೆದಿದ್ದರು ಎಂದು ತಿಳಿಸಿದ್ದರು.

ರಾಜಮೋಹನ್ ಗಾಂಧಿಯವರ ಅಭಿಪ್ರಾಯವನ್ನೇ ಹಲವು ಇತಿಹಾಸಕಾರರು ತಿಳಿಸಿದ್ದಾರೆ. ಆದರೆ ಸಾವರ್ಕರ್ ಅವರನ್ನು ವೈಭವೀಕರಿಸುವುದು ನಡೆಯುತ್ತಲೇ ಇದೆ. ಬೊಮ್ಮಾಯಿಯವರ ಪೋಸ್ಟ್‌ನಲ್ಲೂ ಇದೇ ವೈಭವೀಕರಣ ಇರುವುದನ್ನು ಗುರುತಿಸಿರುವ ರಾಜ್ಯದ ಜನತೆ, ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿರಿ: ಮೇಲ್ಸೇತುವೆಗೆ ಸಾವರ್ಕರ್‌ ಹೆಸರು : ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ‌ ಮಾಡುವ ಅವಮಾನ. – ಸಿದ್ದು

ಸಿಎಂ ಪೋಸ್ಟ್‌ಗೆ ಜನರ ಪ್ರತಿಕ್ರಿಯೆಗಳು (ಆಯ್ದ ಕಾಮೆಂಟ್‌ಗಳು ಇಲ್ಲಿವೆ)

ಬೊಮ್ಮಾಯಿಯವರೆˌ ಬ್ರಿಟೀಷರಿಗೆ ಕ್ಷಮಾಪಣೆ ಕೇಳಿ ಪಿಂಚಣೆ ಪಡೆದ ಈ ಚಿತ್ಪಾವನ ವ್ಯಕ್ತಿಗೆ ಶುಭಾಶಯ ಹೇಳುವ ಮೊದಲು ಒಂದು ಕ್ಷಣ ನಿಮ್ಮ ತಂದೆಯವರು ನಂಬಿದ ಸಿದ್ಧಾಂತ ಸ್ಮರಿಸಿಕೊಳ್ಳಿ. ಅಧಿಕಾರದಾಸೆಗೆ ನೀವೆಲ್ಲ ಸಂಘಿಗಳ ಮನೆ ಕಾಯುವ ಬದಲಿಗೆ ಸಂಘಿಗಳು ನಿಮ್ಮ ಮನೆ ಕಾಯುವಂತೆ ಬದುಕುವುದು ಯಾವಾಗ?

 – ಜೆ.ಎಸ್.ಪಾಟೀಲ್‌

****

“ಧರ್ಮಸ್ಥಳದಲ್ಲಿ ಇದೇ ಸಾವರ್ಕರ್ ಅನುಯಾಯಿ ದಲಿತ ಯುವಕನನ್ನು ಕೊಲೆ ಮಾಡಿದ್ದಾನೆ. ಆ ಕಡೆ ನಿಮ್ಮವರಾರೂ ಸುಳಿದಿಲ್ಲ”

– ಹೇಮಾ ವೆಂಕಟ್‌‌

***

ಇವರು ಗಾಂಧಿ ಹತ್ಯೆಯ ಆರೋಪಿ ಅಲ್ವಾ? ಬ್ರಿಟಿಷರಿಗೆ ನಿರಂತರ ಕ್ಷಮಾಪಣ ಪತ್ರ ನೀಡಿ ಸದಾ ಕಾಲ ನಿಮಗೆ ವಿದೇಯನಾಗಿರುವೆ ಎಂದು ಬರೆದುಕೊಟ್ಟು ಜೈಲಿನಿಂದ ಹೊರಬಂದು ಬ್ರಿಟಿಷರ ಪಿಂಚಣಿ (ಆ ಕಾಲದ 50 ರುಪಾಯಿ) ಪಡೆದು ಬದುಕಿದ ಈತ ವೀರ ಆಗುವುದು ಹೇಗೆ? ಭಾರತದ ಸ್ವಾತಂತ್ರ್ಯಕ್ಕೆ ಆತನ ಕೊಡುಗೆ ಏನು?!

– ಶ್ರೀನಿವಾಸ ಕಾರ್ಕಳ

***

ಬ್ರಿಟಿಷರೆದುರು ಹೋರಾಡಿ ಮಡಿದ ಟಿಪ್ಪುವನ್ನು ದ್ವೇಷಿಸುವ, ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಸಂಗೊಳ್ಳಿ ರಾಯಣ್ಣ, ಆಜೀವ ಬಂಧಿಯಾದ ರಾಣಿ ಚೆನ್ನಮ್ಮರ ಪರಂಪರೆಯನ್ನು ನಾಶ ಮಾಡುವ, ಮಹಾತ್ಮ ಗಾಂಧಿಯವರನ್ನೇ ನಿಂದಿಸುವ, ಅವರ ಹತ್ಯೆಯನ್ನು ಸಮರ್ಥಿಸುವ, ನೆಹರೂ ಅವರಂಥವರನ್ನು ದಿನನಿತ್ಯ ನಿಂದಿಸುವ, ದೊರೆಸ್ವಾಮಿಯವರಂಥ ಸ್ವಾತಂತ್ರ್ಯಯೋಧರನ್ನು ಹಂಗಿಸುತ್ತಲೇ ಇದ್ದ, ಸ್ವಾತಂತ್ರ್ಯ ಚಳವಳಿಯಲ್ಲಾಗಲೀ, ದೇಶ ನಿರ್ಮಾಣದಲ್ಲಾಗಲೀ ಯಾವುದೇ ಕೊಡುಗೆ ನೀಡಿರದ ಪಕ್ಷದವರಿಂದ ಬೇರೇನು ನಿರೀಕ್ಷಿಸಬಹುದು?

 – ಡಾ.ಶ್ರೀನಿವಾಸ ಕಕ್ಕಿಲಾಯ

***

ಇದನ್ನೂ ಓದಿರಿ: ಸಾವರ್ಕರ್‌ & ದಲಿತರು ಕುರಿತಂತೆ ಪೋಸ್ಟ್‌ ಕಾರ್ಡ್ ಹರಡಿದ ಮೂರು ಸುಳ್ಳುಗಳು & ವಾಸ್ತವಗಳು

ಐ ಆಮ್ ವೆರಿ ಸೋರಿ ಮಿಸ್ಟರ್ ಬೊಮ್ಮಾಯಿ ಸಾರ್. ಸೋರಿ ಡೇ ಅನ್ನು ಮರೆತಿದಕ್ಕೆ ಸೋರಿ ಸೋರಿ ಸೋರಿ. ಹ್ಯಾಪಿ ಸೋರಿ ಡೇ ಸಾರ್.

– ರಹೀಮ್ ಭಾಷಾ

***

ಬ್ರಿಟಿಷರಿಗೆ ಕ್ಷಮಾಪಣೆ ಪತ್ ರಬರೆದವರು ಸ್ವಾತಂತ್ರ್ಯ ಹೋರಾಟಗಾರ ಇವರು ಯಾವಾಗ ಹೋರಾಟ ಮಾಡಿದ್ದಾರೆ ಮಾನ್ಯ ಮುಖ್ಯಮಂತ್ರಿ ಗಳೇ? ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಒಮ್ಮೆ ಓದಿನೋಡಿ, ಎಲ್ಲಿಯಾದ್ರು ದಾಮೋದರ ಸಾವರ್ಕರ್ ಹೆಸರಿದೆಯಾ ನೋಡಿ…

– ಅಬ್ದುಲ್‌ ಹಮೀದ್‌

***

ಮುಖ್ಯಮಂತ್ರಿಗಳೇ, ನೀವು ಒಂದು ಜವಾಬ್ದಾರಿ ಸ್ಥಾನದಲ್ಲಿದ್ದುಕ್ಕೊಂಡು ರಾಷ್ಟ್ರಪಿತನ ಸಾವಿಗೆ ಕಾರಣವಾದ ವ್ಯಕ್ತಿಗೆ ಪುಣ್ಯ ಸ್ಮರಣೆ ಶುಭಾಶಯ ಹೇಳ್ತಾ ಇದೀರಲ್ಲ, ಬ್ರಿಟೀಷರ ಕ್ಷಮೆ ಕೇಳಿದ ಹೇಡಿ, ಬ್ರಿಟೀಷರ ಪಿಂಚಣಿ ತೆಗೆದುಕೊಂಡು ಬದುಕುತ್ತಿದ್ದ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ ಅಂದ್ರೆ ಎಲ್ಲಿಂದ ನಗಬೇಕ್ರೀ? ನಮ್ ಕರ್ಮ ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದು.

 -ಕುಶಾಲ್ ಬಿದರೆ

****

“ನೀವು ವೈಯಕ್ತಿಕವಾಗಿ ಸಮರ್ಥಿಸಿಕೊಳ್ಳಿ ಸರ್. ಆದರೆ ರಾಜ್ಯ ಮುಖ್ಯಮಂತ್ರಿಯಾಗಿ ಇವರನ್ನು ಸಮರ್ಥಿಸಿಕೊಳ್ಳಬೇಡಿ. ಹೆಮ್ಮೆಯ ಭಾರತ ಮಾತೆಯ ಪುತ್ರರು- ನಮ್ಮ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನವ್ವ. ಇವರು ಎಂದು ಬ್ರಿಟಿಶರ ಬಳಿ ಕ್ಷಮೆ ಕೇಳದೆ ವೀರ ವೇಶದಿಂದ ಹೋರಾಡಿ ದೇಶಕ್ಕೆ ಪ್ರಾಣ ಬಿಟ್ಟರು. ನಿಮ್ಮ ಸಾವರ್ಕರ್‌ ಥರ ಬ್ರಿಟಿಷರ ಬಳಿ ಕ್ಷಮೆ ಕೇಳಿ ಪಿಂಚಣಿ ಪಡೆಯಲಿಲ್ಲ.

 – ಮಧುಸೂದನ್ ಗೌಡ

***

ದಯವಿಟ್ಟು ಇಂಥವನ್ನು ಯೋಧರಿಗೆ ಹೊಳಿಸಬೇಡಿ ಸರ್. ನಮ್ಮ ಯೋಧರಿಗೆ ಮಾಡುವ ಅವಮಾನ ಅದಾಗುತ್ತೆ. ನಮ್ಮ ಯೋಧರು ವೀರರು. ಎಂದೂ ತಲೆ ಬಾಗಲಾರರು.

 – ವಿಕಾಸ್ ಗೌಡ

***

ಹೀಗೆ ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ಈ ಸುದ್ದಿ ಬರೆಯುವ ವೇಳೆಗೆ ಸಿಎಂಗೆ ಪೋಸ್ಟ್‌ಗೆ ಒಂದೂವರೆ ಸಾವಿರದಷ್ಟು ಜನರು ‘ಹಹಹ’ (😆) ರಿಯಾಕ್ಷನ್‌ ಒತ್ತಿದ್ದಾರೆ. ನಗುವ ಇಮೋಜಿಯೇ ಹೆಚ್ಚಿನ ಸಂಖ್ಯೆಯಲ್ಲಿದೆ.


ಇದನ್ನೂ ಓದಿರಿ: ಸಾವರ್ಕರ್‌‌‌ಗೆ ಗೋಮಾಂಸ ತಿನ್ನುವುದರ ಬಗ್ಗೆ ಯಾವುದೆ ತಕರಾರು ಇರಲಿಲ್ಲ: ದಿಗ್ವಿಜಯ ಸಿಂಗ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬರೇ ಸತ್ತು ಈ ಭೂಮಿ ಮೇಲೆ ಇಲ್ಲದವರ ಬಗ್ಗೆ ( ನೆಹರು, ಟಿಪ್ಪು, ಮೊಘಲರು, ಗಾಂಧೀ, ಔರಂಗಜೇಬ್, ಸಾವರ್ಕರ್, ಮುಂತಾದವರು.) ಬದುಕಿರುವ ಮನುಷ್ಯರ ಸಮಸ್ಯೆಗಳ ಬಗ್ಗೆ ಅಪ್ಪಿ ತಪ್ಪಿಯೂ ಮಾತಾಡಲ್ಲ . ಯಾವ ಸೀಮೆ ನಾಯಕರೋ ಇವರು.

  2. ಯಜಮಾನನ ಅನ್ನದ ಋಣ ಇರುವ ಶ್ವಾನ ಸ್ವಾಮಿ ನಿಷ್ಠೆ ಪ್ರದರ್ಶಿಸಿದೆ,ತಪ್ಪೇನು!?😁

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...