Homeಅನುವಾದಿತ ಲೇಖನದೇಶದ ಮೊದಲ ಗೇ ಜಡ್ಜ್‌ ಆಗಿ ಶಿಫಾರಸ್ಸುಗೊಂಡ ಸೌರಭ್‌ ಕಿರ್ಪಾಲ್‌ ಅವರನ್ನು ಭಾರತ ಇನ್ನೆಷ್ಟು ಕಾಲ...

ದೇಶದ ಮೊದಲ ಗೇ ಜಡ್ಜ್‌ ಆಗಿ ಶಿಫಾರಸ್ಸುಗೊಂಡ ಸೌರಭ್‌ ಕಿರ್ಪಾಲ್‌ ಅವರನ್ನು ಭಾರತ ಇನ್ನೆಷ್ಟು ಕಾಲ ನಿರ್ಲಕ್ಷಿಸುತ್ತದೆ?

ದೆಹಲಿ ಹೈಕೋರ್ಟ್‌ನ 33 ಜಡ್ಜ್‌ಗಳು ಸೌರಭ್ ಕಿರ್ಪಾಲ್‌ರನ್ನು ನ್ಯಾಯಾಧೀಶರನ್ನಾಗಿ ಶಿಫಾರನ್ನು ಮಾಡಿದ 4 ವರ್ಷದ ನಂತರವೂ  ಅವರು ನ್ಯಾಯಾಧೀಶರಾಗಿ ನೇಮಕವಾಗಲು ಸಾಧ್ಯವಾಗಿಲ್ಲ.

- Advertisement -
- Advertisement -

2017 ರ ಅಕ್ಟೋಬರ್‌ ನಲ್ಲಿ ದೆಹಲಿ ಹೈಕೋರ್ಟ್ ಹಿರಿಯ ನ್ಯಾಯವಾದಿ  ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ನ್ಯಾಯಾಲಯದ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವಂತೆ ಸುಪ್ರೀಂ ಕೋರ್ಟ್‌ ಗೆ ಶಿಫಾರಸ್ಸು ಮಾಡಿತ್ತು. ಸೌರಭ್ ಕಿರ್ಪಾಲ್ ಆ ಮೂಲಕ ದೇಶದಲ್ಲಿ ಆಯ್ಕೆಯಾದ ಮೊಟ್ಟ ಮೊದಲ ಗೇ ಜಡ್ಜ್ ಆದರು. ಆದರೆ ಅವರನ್ನು ದೆಹಲಿ ಹೈಕೋರ್ಟ್‌ನ 33 ಜಡ್ಜ್‌ಗಳು ಸೌರಭ್ ಕಿರ್ಪಾಲ್‌ರನ್ನು ನ್ಯಾಯಾಧೀಶರನ್ನಾಗಿ ಶಿಫಾರನ್ನು ಮಾಡಿದ 4 ವರ್ಷದ ನಂತರವೂ  ಅವರು ನ್ಯಾಯಾಧೀಶರಾಗಿ ನೇಮಕವಾಗಲು ಸಾಧ್ಯವಾಗಿಲ್ಲ. ಭಾರತದಲ್ಲಿ ಒಬ್ಬ ನ್ಯಾಯಾಧೀಶರ ಆಯ್ಕೆಯ ಶಿಫಾರಸ್ಸು 4 ವರ್ಷಗಳ ನಂತರವೂ ನಡೆಯದೇ ಇರುವ ಮೊಟ್ಟ ಮೊದಲ ಘಟನೆ ಇದು. ನಡುವೆ ಸುಪ್ರೀಂ ಕೋರ್ಟ್ ಕಡೆಯಿಂದ ಸೌರಭ ಕಿರ್ಪಾಲ್ ಅವರನ್ನು ಯಾವ ಕಾರಣಕ್ಕೆ ನ್ಯಾಯಾಧೀಶರನ್ನಾಗಿ ನೇಮಕಮಾಡಲಾಗಿಲ್ಲ ಎಂಬ ಉತ್ತರ ಕೂಡ ಬಂದಿಲ್ಲ. ಹಾಗೇ ಶಿಫಾರಸ್ಸನ್ನು ತಿರಸ್ಕರಿಸಲಾಗಿದೆ ಎಂದು ಕೂಡ ಸುಪ್ರೀಂ ಕೋರ್ಟ್ ಇದುವರೆಗೆ ಹೇಳಿಲ್ಲ. ಹೀಗಾಗಿ ಸೌರಭ್‌ ಕಿರ್ಪಾಲ್ ಅವರ ಲೈಂಗಿಕ ಆಯ್ಕೆಯ ಕುರಿತಾದ ಕಾರಣಕ್ಕೆ ಅಥವಾ ಅವರು ಗೇ ಎನ್ನುವ ಕಾರಣಕ್ಕೆ ನ್ಯಾಯಾಧೀಶರಾಗಿ ನೇಮಕವಾಗಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.

ಸೌರಭ್ ಕಿರ್ಪಾಲ್ ಅವರು “ದೇಶದಲ್ಲಿ ಯಾವ ಕಾರಣಕ್ಕೆ ಗೇ ಸಮುದಾಯದ ಒಬ್ಬರೇ ಒಬ್ಬ ನ್ಯಾಯಾಧೀಶರಾಗಿ, ಈ ದೇಶದಲ್ಲಿ ಆಯ್ಕೆಯಾಗಲಿಲ್ಲ. ಈ ವಿಷಯವನ್ನು ಭಾರತ ಅಷ್ಟು ಸಲುಭವಾಗಿ ನಿರ್ಲಕ್ಷಿಸುವಂತಿಲ್ಲ. ಕೇವಲ ವ್ಯಕ್ತಿಯ ಲೈಂಗಿಕ ಆಯ್ಕೆಯ ಕಾರಣಕ್ಕೆ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡುತ್ತಿಲ್ಲವೆಂದಾದರೆ ಅದು ದೇಶದ ಸಂವಿಧಾನ ಹೇಳುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ” ಎಂದು ಅವರು ಅಭಿಪ್ರಾಯ ಪಡುತ್ತಾರೆ.

ನನ್ನನ್ನು ನ್ಯಾಯಾಧೀಶನನ್ನಾಗಿ ದೆಹಲಿ ಹೈಕೋರ್ಟ್ ಶಿಫಾರಸ್ಸು ಮಾಡಿದಾಗ ನಾನು ಎಲ್ಲ ರೀತಿಯಲ್ಲಿಯೂ ನ್ಯಾಯಾಧೀಶ ಹುದ್ದೆಗೆ ಅರ್ಹನಾಗಿದ್ದೆ. ಆದರೆ ದೇಶದಲ್ಲಿ ಇದುವರೆಗೆ ಪರ್ಯಾಯ ಲೈಂಗಿಕತೆಯ ವ್ಯಕ್ತಿ ಈ ದೇಶದಲ್ಲಿ ಆಯ್ಕೆಯಾಗದಿರುವುದು ನನ್ನ ನೇಮಕಾತಿ ಸಾಧ್ಯವೇ ಎಂಬ ಹಲವು ಅನುಮಾನಗಳನ್ನು ಹುಟ್ಟಿ ಹಾಕಿತ್ತು. ಯಾವುದಾದರೂ ಪ್ರಕ್ರಿಯೆ ದೇಶದಲ್ಲಿ ಮೊಟ್ಟ ಮೊದಲಿಗೆ ಸಂಭವಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ನಾಲ್ಕು ವರ್ಷಗಳಲ್ಲಿ ದೇಶದ ಕಾನೂನಿನಲ್ಲಿ ಹಲವು ಬದಲಾವಣೆಗಳಾಗಿವೆ. ಮುಂದೆ ಭಾರತ ತನ್ನ ಮೊಟ್ಟಮೊದಲ ಗೇ ಜಡ್ಜ್ ಅನ್ನು ಹೊಂದಬಹುದು ಎಂಬ ನಂಬಿಕೆ ಇದೆ ಎಂದು ಸೌರಭ್ ಕಿರ್ಪಾಲ್ ಅಭಿಪ್ರಾಯ ಪಡುತ್ತಾರೆ.

ಮಾಧ್ಯಮಗಳ ವರದಿ‌ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಮದನ್ ಲೋಕುರ್ ಹೇಳಿಕೆಗಳ ಆಧಾರದಲ್ಲಿ ಹೇಳುವುದಾದರೆ ಸುಪ್ರೀಂ ಕೋರ್ಟ್ ಮುಂದೆ ಗೇ ಜಡ್ಜ್ ಆಯ್ಕೆಯ ಚರ್ಚೆ ನಡೆಯುತ್ತಿದೆ. ಮತ್ತು ದೇಶ ಇದನ್ನು ಹೇಗೆ ಸ್ವೀಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಜಿಜ್ಞಾಸೆಯಲ್ಲಿ ತೊಡಗಿದೆ ಎಂದು ಸೌರಭ್ ಕಿರ್ಪಾಲ್ ತಿಳಿಸಿದ್ದಾರೆ.

ಸೌರಭ್ ಕಿರ್ಪಾಲ್ ವಿದೇಶಿ ಪ್ರಜೆಯನ್ನು ತನ್ನ ಸಂಗಾತಿಯನ್ನಾಗಿ ಹೊಂದಿರುವುದು ದೇಶದ ಭದ್ರತೆಗೆ ಧಕ್ಕೆಯೆಂದು ಭಾವಿಸಲಾಗಿದೆಯೇ ?

2021 ಮಾರ್ಚ್ ತಿಂಗಳಿನಲ್ಲಿ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್ ಎಸ್. ಎ. ಬೋಬ್ಡೆ ಭಾರತದ ವಿದೇಶಾಂಗ ಮಂತ್ರಿ ಎಸ್ ಜೈ ಶಂಕರ್ ಅವರಿಗೆ ಪತ್ರ ಬರೆದು ಸೌರಭ್ ಕಿರ್ಪಾಲ್ ಅವರ ಆಯ್ಕೆಯ ಕುರಿತು ಸರ್ಕಾರದ ನಿರ್ಧಾರವನ್ನು ಅಂತಿಮ ಗೊಳಿಸುವಂತೆ ಕೇಳಿದ್ದಾರೆ. ಹಾಗೇ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನೇಮಕ ಮಾಡಲು ಯಾಕೆ ತಡವಾಗುತ್ತಿದೆ ಎಂದು ಕಾರಣವನ್ನು ಕೇಳಿದ್ದಾರೆ.

ಎಸ್. ಜೈಶಂಕರ್ ಅವರು ಇದುವರೆಗೆ ಜಸ್ಟಿಸ್ ಎಸ್.ಎ. ಬೋಬ್ಡೆ ಅವರ ಪತ್ರಕ್ಕೆ ಉತ್ತರ ನೀಡಿಲ್ಲ. ಹಿಂದೆ ಕೇಂದ್ರ ಸರ್ಕಾರ ಸೌರಭ್ ಕಿರ್ಪಾಲ್ ನೇಮಕಾತಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಅವರು ವಿದೇಶಿ ಪ್ರಜೆಯನ್ನು ಸಂಗಾತಿಯಾಗಿ ಹೊಂದಿರುವುದು ದೇಶದ ಭದ್ರತೆಗೆ ತೊಂದರೆ ಆಗಲಿದೆ ಎಂಬ ಕಾರಣಗಳನ್ನು ಕೇಂದ್ರ ಸರ್ಕಾರ ನೀಡಿದೆ.

ಸೌರಭ್ ಕಿರ್ಪಾಲ್ ಅವರ ಹಿನ್ನಲೆಯನ್ನು ತನಿಖೆ ಮಾಡುವ ಕೆಲಸ ಮಾಡುತ್ತಿದ್ದ ಭಾರತದ ಗುಪ್ತಚರ ಇಲಾಖೆ ನೇರವಾಗಿ ಸೌರಭ್ ನೇಮಕಾತಿಗೆ ಆಕ್ಷೇಪವನ್ನು  ವ್ಯಕ್ತಪಡಿಸಿಲ್ಲ. ಆದರೆ ಸೌರಭ್ ವಿದೇಶಿ ಸಂಗಾತಿಯನ್ನು ಹೊಂದಿರುವುದು ದೇಶದ ಭದ್ರತೆಗೆ ತೊಡಕಾಗಬಹುದು ಎಂಬ ಅಭಿಪ್ರಾಯವನ್ನು ಭಾರತ ಸರ್ಕಾರಕ್ಕೆ ನೀಡಿದೆ. ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಕೊಲಿಜಿಯಂ ಮುಂದೆ ಕೂಡ ಸೌರಭ್ ಕಿರ್ಪಾಲ್ ಆಯ್ಕೆ ವಿಷಯ ಬಂದಿತ್ತು.  ಕೇಂದ್ರ ಸರ್ಕಾರದ ಆಕ್ಷೇಪದಿಂದ ಅದು ಮುಂದಕ್ಕೆ ಹೋಗಲಿಲ್ಲ.

ಈಗಾಗಲೇ ಜಸ್ಟಿಸ್ ವಿವಿನ್ ಬೋಸ್ ಅವರನ್ನು ಭಾರತದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರನ್ನಾಗಿ ಭಾರತ ನೋಡಿದೆ. ಅವರು ಅಮೆರಿಕನ್‌ ಪ್ರಜೆಯನ್ನು ಮದುವೆಯಾಗಿದ್ದವರು. ನಾವು ದೇಶದಲ್ಲಿ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್‌ ರವಿ ಧವನ್‌, ಮುಖ್ಯ ನ್ಯಾಯಾಧೀಶರಾದ ಪಟ್ನಾಯಕ್‌ ಅವರನ್ನು ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ದಕ್ಷವಾಗಿ ಕಾರ್ಯ ನಿರ್ವಹಿಸಿರುವುದನ್ನು ದೇಶದ ಇತಿಹಾಸದಲ್ಲಿ ನೋಡಿದ್ದೇವೆ. ಇವರುಗಳು ವಿದೇಶಿ ಪ್ರಜೆಗಳನ್ನು ಮದುವೆಯಾಗಿದ್ದರು. ವಿದೇಶಿ ಪ್ರಜೆಗಳನ್ನು ಮದುವೆಯಾಗುವುದು ಅಥವಾ ಸಂಗಾತಿಯನ್ನು ಹೊಂದಿರುವುದು ನ್ಯಾಯಾಧೀಶರ ಆಯ್ಕೆ ಪರಿಗಣನೆಗೆ ದೊಡ್ಡ ವಿಷಯವಲ್ಲವೆಂದು ಈ ಸಂಬಂಧ ಸೌರಭ್‌ ಕಿರ್ಪಾಲ್‌ ಅಭಿಪ್ರಾಯ ಪಡುತ್ತಾರೆ.

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿ ಇರಲು ಸಾಧ್ಯವಿಲ್ಲ. ನಾವು ಈ ದೇಶದ ವ್ಯವಸ್ಥೆಯಲ್ಲಿ ಎಲ್ಲಾ ವರ್ಗಗಳಿಗೂ ಪ್ರಾತಿನಿಧ್ಯವಿರಬೇಕೆಂದು ಬಯಸಬೇಕು. ಹಾಗೇ ವ್ಯವಸ್ಥೆಯಲ್ಲಿ ನಂಬಿಕೆಯನ್ನೂ ಇಡಬೇಕು. ನಿರ್ಧಾರಗಳನ್ನು ಕೈಗೊಳ್ಳುವ ನ್ಯಾಯಾಧೀಶರಿರಲಿ ಅಥವಾ ಸರ್ಕಾರದಲ್ಲಿರುವ ವ್ಯಕ್ತಿಗಳು ಪ್ರಸ್ತುತ ಸಮಾಜದ ಪ್ರತಿಬಿಂಬವೇ ಆಗಿರುತ್ತಾರೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ.  ಬಹುತೇಕ ಮೇಲ್ಜಾತಿಯ ಪುರುಷರೇ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿದ್ದಾರೆ. ಇದು ನಮ್ಮ ಇಂದಿನ ಸಮಾಜದಲ್ಲಿ ಯಾರು ಪ್ರಾಬಲ್ಯವನ್ನು ಸಾಧಿಸಿದ್ದಾರೆ ಎಂಬುದರ ಸಂಕೇತವೇ ಆಗಿದೆ ಎಂದು ಹಿರಿಯ ನ್ಯಾಯವಾದಿಯೊಬ್ಬರು ಸೌರಭ್‌ ಕಿರ್ಪಾಲ್ ನೇಮಕಾತಿ ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ.

ಸೌರಭ್‌ ಕಿರ್ಪಾಲ್ ನೇಮಕ ಭಾರತದಲ್ಲಿ ಸಲಿಂಗಿಗಳ ಕುರಿತಾದ ಅಭಿಪ್ರಾಯವನ್ನು ಬದಲಿಸಬಹುದೇ? ಶೋಷಣೆಯನ್ನು ತಡೆಯಬಹುದೇ?

 

ಈ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಹೈಕೋರ್ಟ್‌ ನಂತಹ ಉನ್ನತ ಸಂಸ್ಥೆಯಲ್ಲಿ ಭಾರತ ಬಹಿರಂಗವಾಗಿ ತಾನು ಎಂದು ಹೇಳಿಕೊಳ್ಳುವ ನ್ಯಾಯಾಧೀಶರನ್ನು ಹೊಂದಿದ್ದರೆ ಭಾರತದಲ್ಲಿ ಸಾಕಷ್ಟು ಬದಲಾವಣೆಗಳು ಸಾಧ್ಯವಾಗಬಹುದು. ದೇಶದಲ್ಲಿ ಸಲಿಂಗಿಗಳ ಕುರಿತಾಗಿ ನಿಂದನಾತ್ಮಕ ಹೇಳಿಕೆಗಳು, ಅಭಿಪ್ರಾಯಗಳು ನಿಲ್ಲಬಹುದು. ನ್ಯಾಯಾಲಯದ ಮುಂದೆ ಪ್ರಕರಣಗಳು ಬಂದಾಗ ಸಂವಿಧಾನದ ಸಮಾನತೆಯ ತತ್ವವನ್ನು ಸಲಿಂಗಿಗಳ ವಿಷಯದಲ್ಲೂ ಅನ್ವಯಿಸಬಹುದು. ಆದರೆ ಈಗ ದೇಶದ ಸರ್ವೋಚ್ಛ ನ್ಯಾಯಾಲಯ ಹಾಗೂ ಹೈಕೋರ್ಟ್‌ ಗಳಲ್ಲಿ ಮಹಿಳಾ ನ್ಯಾಯಾಧೀಶರಿದ್ದರೂ ಸಹ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ತಾರತಮ್ಯ, ಅತ್ಯಾಚಾರಗಳು ನಿಂತಿಲ್ಲ. ಕನಿಷ್ಠ ನ್ಯಾಯಾಲಯದಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿನ ತಾರತಮ್ಯ ಮತ್ತು ದೌರ್ಜನ್ಯಗಳು ನಿಂತಿಲ್ಲ. ಹೀಗಿರುವಾಗ ಸೌರಭ್‌ ಕಿರ್ಪಾಲ್ ಅಥವಾ ಬೇರೇ  ವ್ಯಕ್ತಿ ನ್ಯಾಯಾಧೀಶರಾದ ಮಾತ್ರಕ್ಕೆ ಭಾರತದ ಸಮಾಜದಲ್ಲಿ ಸಲಿಂಗಿಗಳಿಗೆ ಗೌರವ ಮತ್ತು ಮಾನ್ಯತೆಗಳು ಬಂದು ಬಿಡುತ್ತವೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಗೇ ಎಂಬ ಒಂದೇ ಕಾರಣಕ್ಕೆ ನಾಗರೀಕರ ಹಕ್ಕುಗಳಿಗಾಗಿ ತೀವ್ರ ಹೋರಾಟವನ್ನು ನಡೆಸುತ್ತ ಅರ್ಹತೆಯನ್ನು ಹೊಂದಿದ ವ್ಯಕ್ತಿಯನ್ನು ಹೈಕೋರ್ಟ್‌ ನ್ಯಾಯಾಧೀಶರಾಗುವ ಅವಕಾಶವನ್ನು ನಿರಾಕರಿಸುವುದು ಸಾಧ್ಯವಿಲ್ಲ. ದೆಹಲಿ ಹೈಕೋರ್ಟ್‌ನ 33  ಜನ ನ್ಯಾಯಾಧೀಶರು ಒಮ್ಮತದಿಂದ ಸೌರಭ್‌ ಕಿರ್ಪಾಲ್ ಅವರ ಹೆಸರನ್ನು ಶಿಫಾರಸ್ಸು ಮಾಡಿರುವಾಗ ಕೇಂದ್ರ ಸರ್ಕಾರ ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಗೇ ಹಕ್ಕುಗಳ ಹೋರಾಟದ ತಿಂಗಳೆಂದು ಕರೆಯುವ ಜೂನ್‌ ತಿಂಗಳಿನಲ್ಲಿ ಅನೇಕ ವರ್ಷದಿಂದ ಚರ್ಚೆಯಾಗುತ್ತಿರವ ಸೌರಭ್‌ ಕಿರ್ಪಾಲ್ ನೇಮಕಾತಿ ವಿಚಾರ ಇನ್ನಷ್ಟು ಚರ್ಚೆಯಾಗಬೇಕಿದೆ.

ಮೂಲ : ಕ್ವಿಂಟ್‌ ನಡೆಸಿದ ಸೌರಭ್‌ ಕಿರ್ಪಾಲ್‌ ಸಂದರ್ಶನ

ಅನುವಾದ : ರಾಜೇಶ್‌ ಹೆಬ್ಬಾರ್


ಇದನ್ನೂ ಓದಿ; ಪಿಕೆ ಟಾಕೀಸ್: LGBT ಸಮುದಾಯದ ನೋವು-ನಲಿವಿನ ಪಯಣವನ್ನು ಹಿಡಿಯುವ ಪಾನೋಸ್‌ನ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...