Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ...

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ಹಸಿರು ಬೇಲಿಗಳಿರುವ ತೆಂಗಿನ ತೋಟದಲ್ಲಿ ನುಸಿ ರೋಗ ನಿಯಂತ್ರಣದಲ್ಲಿರುತ್ತದೆ ಎಂದು ನಮ್ಮ ಅನುಭವಕ್ಕೆ ಬಂದಿದೆ.

- Advertisement -
- Advertisement -

ಹಸಿರು ಬೇಲಿಗಳು ತೋಟ ಹೊಲಗಳ ಜೀವಾಳ. ಆದರೀಗ ಮುಳ್ಳು ತಂತಿ ಬೇಲಿಗಳು ಹೆಚ್ಚಾಗಿವೆ. ನಾವು ಹಸಿರು ಬೇಲಿಗಳನ್ನು ಉಳಿಸಿಕೊಂಡಿದ್ದೇವೆ  ಏಕೆಂದರೆ ಅವು ನಮಗೆ ಬೇಕಾದಷ್ಟು ಹಸಿರು ಸೊಪ್ಪು ಕೊಡುತ್ತವೆ, ಕೀಟಗಳ ನಿಯಂತ್ರಣ ಮಾಡುತ್ತವೆ, ಗಾಳಿತಡೆಗಳಾಗಿ ನಿಂತು ಮಣ್ಣಿನ ಸವಕಳಿ ಆಗದಂತೆ ನೋಡಿಕೊಳ್ಳುತ್ತವೆ, ಆಗೊಮ್ಮೆ ಈಗೊಮ್ಮೆ ಜೇನು ತುಪ್ಪ ಕೊಡುತ್ತವೆ. ಬೇಲಿಗೆ ಹೊಂದಿಕೊಂಡಂತೆ ಅನೇಕ ಜಾತಿಯ ಗಿಡಮರಗಳು ಅವರಷ್ಟಕ್ಕೆ ಅವು ಬೆಳೆದು ನಿಲ್ಲುತ್ತವೆ.

ಬೇಲಿಯನ್ನು ವರ್ಷಕ್ಕೆ ಎರಡು ಮೂರು ಬಾರಿ ಸವರಿದರೂ ಅದು ಚಿಮ್ಮಿ ಚಿಗುರಿ ಬೆಳೆಯುತ್ತದೆ. ಯಾಕೆಂದರೆ ಅದರ ಅಡಿಯಲ್ಲಿ ಅಪಾರ ತೇವಾಂಶ ಮತ್ತು ಗೊಬ್ಬರ ಇರುತ್ತದೆ. ಅದು ನಾವು ಹಾಕಿದ್ದಲ್ಲ, ಅಲ್ಲೆ ಉತ್ಪತ್ತಿಯಾದದ್ದು ಅದಕ್ಕೆ ಆ ಬೇಲಿಗೆ ಅಷ್ಟು ಶಕ್ತಿ.

ಹಸಿರು ಬೇಲಿಯನ್ನು ಚಪ್ಪರದ ರೀತಿಯಲ್ಲಿ ಬಳಸಿಕೊಂಡು ಮಳೆಗಾಲದಲ್ಲಿ ಬಳ್ಳಿ ತರಕಾರಿ ಬೆಳೆಯಬಹುದು. ಬೇಲಿಗೆ ಹೊಂದಿಕೊಂಡಂತೆ 2 ಅಡಿ ಗುಂಡಿ ತೆಗೆದು ಒಳ್ಳೆ ಗೊಬ್ಬರ ತುಂಬಿ ಬಿಟ್ಟುಕೊಂಡರೆ, ಒಂದೆರಡು ಮಳೆಬಿದ್ದ ನಂತರ ಹದಗೊಂಡ ಆ ಗುಂಡಿಗೆ ತುಪ್ಪೀರೆ, ಹಿತ್ತಲವರೆ, ಕುಂಬಳ,ತೊಂಡೆ, ಶಂಬೆ ಮುಂತಾದ ಬಳ್ಳಿ ತರಕಾರಿ ಬೀಜಗಳನ್ನು ಊರಿದರೆ ಹೆಚ್ಚು ಹಾರೈಕೆಯಿಲ್ಲದೆ ಬೇಲಿಗೆ ಹಬ್ಬಿ ರುಚಿಕರ, ವಿಷರಹಿತ ತರಕಾರಿ ಕೊಡುತ್ತವೆ. ತೋಟಕ್ಕೆ ಹೋದರೆ ಆ ಬೇಲಿಸಾಲಿಗೆ ಹೋಗದೆ ಹಿಂದಿರುಗದಂತಾ ಸುಸಮಯ ಒದಗಿಬರುತ್ತದೆ. ತರತರದ ತರಕಾರಿಗಳು ನಮ್ಮ ತರಕಾರಿ ಬ್ಯಾಗಿಗೆ ಬಂದು ತುಂಬಿಕೊಳ್ಳುತ್ತವೆ. ಮಳೆ ಆಶ್ರಯದಲ್ಲೆಯೇ ಬೆಳೆದ ಈ ತರಕಾರಿ ರುಚಿಗೆ ಯಾವುದೂ ಸಮವಲ್ಲ. ಚಪ್ಪರ ಹಾಕುವ ಉಸಾಬರಿಯಿಲ್ಲ, ಮತ್ತೆ ಗೊಬ್ಬರ ಕೊಡುವ ಗೊಡವೆ ಇಲ್ಲ, ಕೀಟನಾಶಕದ ಸುದ್ದಿಯಿಲ್ಲ, ಅನಿವಾರ್ಯವಾದರೆ ಮಾತ್ರ ಒಂದೆರಡು ಸಲ ನೀರು ಕೊಡಬೇಕಾಗಬಹುದು ಅಷ್ಟೆ.

ನಮ್ಮ ತೋಟಕ್ಕೆ ಬಂದ ಕೆಲವರು “ನಿಮಗೆ ಬುದ್ಧಿ ಗಿದ್ದಿ ಇದೆಯಾ ಈ ದಾರಿ ಕಡೆಯ ಬೇಲಿಗೆ ತರಕಾರಿ ಬಳ್ಳಿಗಳನ್ನ ಹಬ್ಬಿಸಿದ್ದೀರಲ್ಲ, ಜನ ತರಕಾರಿ ಕದಿಯದೆ ಬಿಟ್ಟಾರೆಯೇ?” ಎಂದು ತಗಾದೆ ತೆಗಿಯುತ್ತಾರೆ. ತೋಟದ ಮಧ್ಯೆ ಈ ಬಳ್ಳಿ ಹಬ್ಬಿಸಲು ಪುಕ್ಕಟೆ ಸಲಹೆ ಕೊಡುತ್ತಾರೆ. ನಿಜಕ್ಕು ಇದು ವಿಚಿತ್ರ. ಬಳ್ಳಿಗಳು ಬೇಲಿಯಾಚೆ ಹಬ್ಬಿ ಆಚೆಯ ಬಿಸಿಲಿನ ಬಳಕೆ ಮಾಡಿಕೊಂಡು ಕಾಯಿ ಕಸುರು ಬಿಟ್ಟು ದಾರಿ ಹೋಕರನ್ನು ಕರೆದು ತರಕಾರಿ ಕೊಟ್ಟರೆ ನಮಗೇನು ತೊಂದರೆ, ಇಷ್ಟಕ್ಕೂ ಯಾರು ನಮ್ಮ ಬೇಲಿಗೆ ಕೈಹಾಕಿ ಕದ್ದು ಕಿತ್ತುಕೊಂಡು ಹೋದದ್ದನ್ನು ನಾವು ಕಾಣೆವು. ಪುಕ್ಕಟೆ ಸಲಹೆ ಕೊಡುವ ಜನರೂ ಸೇರಿದಂತೆ ಎಲ್ಲರೂ ಬೇಲಿಗಳಿಗೆ ತರಕಾರಿ ಬಳ್ಳಿ ಹಬ್ಬಿಸಿದರೆ ಅದರ ಮಜ ಹೇಗಿರುತ್ತದೆ?  ಬೀಜ ಬಿತ್ತಬೇಕಷ್ಟೆ. ಅದಕ್ಕೆ ಮನಸ್ಸು ಇರಬೇಕು, ಒಳ್ಳೆಯದನ್ನು ತಿನ್ನುವ ಪುಣ್ಯವಿರಬೇಕು.

ಬೇಲಿಗಳಿರುವ ತೆಂಗಿನ ತೋಟದಲ್ಲಿ ನುಸಿ ರೋಗ ನಿಯಂತ್ರಣದಲ್ಲಿರುತ್ತದೆ ಎಂದು ನಮ್ಮ ಅನುಭವಕ್ಕೆ ಬಂದಿದೆ. ತೋಟದಲ್ಲಿ ಹುಲ್ಲು ಸೊಪ್ಪು ಇದ್ದರೆ ನುಸಿ ತನ್ನ ಜಾಲವನ್ನು ಇಲ್ಲಿಗೆ ವರ್ಗಾಯಿಸುವ ಅವಕಾಶವಿರುತ್ತದೆ.

ಎಷ್ಟೋ ಜನ ಬೇಲಿ ಎಂದರೆ ಮುಳ್ಳು ಎಂದು ತಿಳಿದಿದ್ದಾರೆ. ನಿಜ ಈ ಹಿಂದೆ ಬಿದಿರು ಮುಳ್ಳು, ಎರದೆ ಮುಳ್ಳು, ಜಾಲಿಮುಳ್ಳುಗಳನ್ನು ಬಳಸಿ ಬೇಲಿ ಕಟ್ಟುವ ಸಾಹಸ ಮಾಡುತ್ತಿದ್ದರು, ಅವು ಒಂದೆರಡು ವರ್ಷಕ್ಕೆ ಕರಕಲಾಗಿ ಹೋಗುತ್ತಿದ್ದವು. ಮತ್ತೆ ಮತ್ತೆ ಕಟ್ಟುವ ಉಸಾಬರಿ ಇರುತ್ತಿತ್ತು. ಆಗಲೂ ಬುದ್ಧಿವಂತ ರೈತರು ಈ ಮುಳ್ಳು ಬೇಲಿಯ ತಂಟೆಗೆ ಹೋಗದೆ, ಚಿಗುರು ಕಡ್ಡಿಗಳ ಸಹಾಯದಿಂದ ಹಸಿರು ಬೇಲಿಯನ್ನು ಸೃಷ್ಟಿಸುತ್ತಿದ್ದರು. ಅದರ ಎಲ್ಲಾ ಲಾಭಗಳನ್ನು ಪಡೆಯುತ್ತಿದ್ದರು.

ಈ ಬಗೆಯ ಬೇಲಿಗಳಿದ್ದರೆ ಇಲಿಗಳು ಮಾಮೇರಿ ಹೆಚ್ಚುತ್ತವೆ ಎಂಬ ಆಪಾದನೆ ಇದೆ. ಇದು ನಮ್ಮ ತೋಟದ ವಿಷಯದಲ್ಲಿ ಸಂಪೂರ್ಣ ಸುಳ್ಳು. ನಮ್ಮ ಇಡೀ ತೋಟವೇ ಬೇಲಿಯ ಲಕ್ಷಣಗಳನ್ನು ಹೊಂದಿದೆ. ಇವರ ಪ್ರಕಾರ ಇಲಿಗಳ ಸಾಮ್ರಜ್ಯವೇ ಇಲ್ಲಿ ನೆರೆಯಬೇಕಾಗಿತ್ತು. ನಮ್ಮ ತೋಟದಲ್ಲಿ ಇಲಿಗಳೇ ಇಲ್ಲ ಎನ್ನುವಂತಿಲ್ಲ, ಇವೆ ನಿಯಂತ್ರಣದಲ್ಲಿವೆ.

ನಮ್ಮಪ್ಪ ಉಳುಮೆ ಮಾಡುತ್ತಿದ್ದ ತೋಟದಲ್ಲಿ ಇಲಿಗಳ ಉಪಟಳ ಎಲ್ಲೆ ಮೀರುತ್ತಿತ್ತು. ಅವು ಎಳನೀರು ಕುಡಿದು ಸುರಿಸುವ ಬುಲ್ಡೆಗಳನ್ನು ನೋಡಿ ಅವುಗಳ ಮೇಲೆ ಸಮರ ಸಾರುವ ತೀರ್ಮಾನ ಮಾಡುತ್ತಿತ್ತು. ಹದವಾಗಿ ಹುರಿದ ನೆಲಗಡಲೆ ಕಾಯಿಗಳನ್ನು ಸಿಪ್ಪೆಬೆರೆಸೆ ಕುಟ್ಟಿ ಪುಡಿಮಾಡಿ, ಬರ್ನ್‌ ಆದ ಬುಲ್ಡೆ ಬಲ್ಬುಗಳನ್ನೂ ಸಣ್ಣಗೆ ಪುಡಿಮಾಡಿ, ಎರಡನ್ನು ಮಿಶ್ರಣ ಮಾಡುತ್ತಿದ್ದರು. ಇದಕ್ಕೆ ಹುಚ್ಚಳ್ಳು ಪುಡಿಯನ್ನು ಬೆರಸುತ್ತಿದ್ದರು. ಈ ಬಗೆಯ ಘಮಗುಟ್ಟುವ ಪರಿಕರವು ಇಲಿಗಳನ್ನು ಆಕರ್ಷಿಸಿ ತಿನ್ನುವಂತೆ ಮಾಡುತ್ತದೆಂದೂ, ತಿಂದ ಇಲಿಗಳು ನೆಗೆದು ಬೀಳುತ್ತವೆಂದು ಅವರ ಊಹೆ. ಸದರಿ ʻಇಲಿಬಾಂಬುʼ ತಯಾರಾಗುತ್ತಿರಬೇಕಾದರೆ ಆ ಘಮಗುಟ್ಟುವ ಪದಾರ್ಥದಿಂದ ಆಕರ್ಷಿತರಾಗಿ ನಾವೇ ಅದನ್ನು ತಿಂದುಬಿಡುವ ವಾಂಚಲ್ಯಕ್ಕೆ ಒಳಗಾಗುತ್ತಿದ್ದುದುಂಟು. ಇಂಥ ಇಲಿಪಾತಕ ಪುಡಿಯನ್ನು ಸಣ್ಣ ಸಣ್ಣ ಬಟ್ಟೆ ಗಂಟುಗಳಾಗಿಸಿ ರೆಡಿ ಮಾಡಿಕೊಳ್ಳುತ್ತಿದ್ದ ನಮ್ಮಪ್ಪ ಆ ಸಂದರ್ಭದಲ್ಲಿ ಮಾತೇ ಆಡುತ್ತಿರಲಿಲ್ಲ, ಯಜ್ಞಧ್ಯಾನದಲ್ಲಿ ತೊಡಗುತ್ತಿದ್ದರು.

PC : Gardeners World

ಈ ಪುಟ್ಟ ಪುಟ್ಟ ಬಟ್ಟೆ ಗಂಟುಗಳನ್ನು ಇಲಿಗೆ ಕಾಣುವಂತೆ ಇಡುವುದು ಸವಾಲಿನ ಕೆಲಸವಾಗಿತ್ತು. ಇಲಿಗಳು ಮರಗಳಿಂದ ಇಳಿಯುವುದೇ ಅಪರೂಪವಾದ್ದರಿಂದ ನೆಲದಲ್ಲಿ ಈ ಗಂಟುಗಳನ್ನಿಟ್ಟರೆ ಯಾವ ಪ್ರಯೋಜನವೂ ಇರುವುದಿಲ್ಲ. ಆದ್ದರಿಂದ ಮರದ ಮೇಲಕ್ಕೆ ಗಂಟುಗಳನ್ನು ಎಸೆಯಲು ಶತ ಪ್ರಯತ್ನ ಮಾಡುತ್ತಿದ್ದ ಅಪ್ಪ ಈ ಗಂಟುಗಳಿಗೆ ಕಲ್ಲ ಕಟ್ಟಿ ಎಸೆಯುತ್ತಿತ್ತು. ಬಿದಿರಿನ ಜವಣಿಗೆಯ ತುದಿಗೆ ಗಂಟುಗಳನ್ನು ಸಿಕ್ಕಿಸಿ ನಿಧಾನವಾಗಿ ತೆಂಗಿನ ಸುಳಿಗೆ ಸಾಗಿಸಲು ಯತ್ನಿಸುತ್ತಿತ್ತು. ಈ ಯತ್ನಗಳು ವಿಫಲವಾದ ಮೇಲೆ ತಾನೇ ಆ ಮರಗಳನ್ನು ಹತ್ತಿ ಆ ಗಂಟುಗಳನ್ನು ಇಟ್ಟು ಇಲಿಗಳನ್ನು ಆಹ್ವಾನಿಸುತ್ತಿತ್ತು. ಇಷ್ಟಕ್ಕೆ ಸುಮ್ಮನಾಗದ ಅವರು ತೆಂಗಿನ ಸುಳಿಯಲ್ಲಿ ಕಟ್ಟಿರಬಹುದಾದ ಇಲಿಯ ಗೂಡುಗಳನ್ನು ಕಿತ್ತು ನೇರ ಕಾರ್ಯಾಚರಣೆಗೆ ಇಳಿಯುತ್ತಿತ್ತು. ಒಮ್ಮೊಮೆ ಆ ಗೂಡುಗಳಲ್ಲಿ ನಿದ್ದೆ ಮಾಡುತ್ತಿದ್ದ ಇಲಿಗಳು ದಿಢೀರ್‌ ಆಕ್ರಮಣದಿಂದ ತತ್ತರಿಸಿ ಮರದಿಂದ ಕೆಳಕ್ಕೆ ಹಾರಿಬಿಡುತ್ತಿದ್ದವು. ಕೆಳಗೆ ಕೊರಂಬಳೆ ಕುಂಚಿಕೆಯನ್ನು ಹಿಡಿದು ಸಿದ್ಧವಾಗಿರುತ್ತಿದ್ದ ನಾವು ಕೂಗಾಡುತ್ತಾ ಅವುಗಳನ್ನು ಸದೆಬಡಿಯುವ ಪ್ರಯತ್ನ ಮಾಡುತ್ತಿದ್ದೆವು. ಇಂಥ ಪ್ರಯತ್ನಗಳು ವಿಫಲವಾಗುತ್ತಿದ್ದುದೇ ಹೆಚ್ಚು. ನಮ್ಮಪ್ಪನಾದರೋ ಒಮ್ಮೊಮ್ಮೆ ಇಲಿಗಳನ್ನು ಕೈಯಲ್ಲಿಯೇ ಹಿಡಿದು ಸಾಯಿಸುವಷ್ಟು ಸಿಟ್ಟಿನಿಂದ ವ್ಯಗ್ರಗೊಳ್ಳುತ್ತಿದ್ದರು. ಮರದಡಿಯಲ್ಲಿ ಬೀಳುತ್ತಿದ್ದ ಇಲಿಬುಲ್ಡೆಗಳ ಸುರಿಮಳೆ ಇಲಿಗಳನ್ನು ಹೀಗೆ ಸಾಯಿಸಲು ಪ್ರೇರಣೆಯಾಗಿತ್ತು. ಅವರಂತ ರೈತರು ಬೆಳೆದ ಬೆಳೆಗಳು ಹೀಗೆ ಇಲಿಗಳ ಸಾಕಣೆಗೆ ಬಳಕೆಯಾಗುವುದು ಯಾವ ಸರ್ಕಾರಗಳ ಗಮನಕ್ಕೂ ಬಂದಂತೆ ಕಾಣುವುದಿಲ್ಲ. ಅದಕ್ಕೇ ಅವರು ಹೀಗೆ ಹೇಳುತ್ತಿದ್ದರು, “ಜನರನ್ನೆಲ್ಲ ಸಾಕುವುದರ ಜೊತೆಗೆ, ಇಲಿ, ಹೆಗ್ಗಣ, ನಾಯಿನರಿ, ಹಕ್ಕಿ ಪಕ್ಷಿ, ಹಂದಿ ಕರಡಿ, ಮುಂತಾದುವುಗಳನ್ನು ರೈತರು ಸಾಕುತ್ತಿರುವುದರಿಂದ ಅದಕ್ಕೆ ಅನುದಾನ ಕೊಡಲಿ” ಎಂದು.

ನಾವೀಗ ಇಲಿಗಳಿಗೆ ಈ ಬಗೆಯ ಯಾವ ಪುಡಿಗಳನ್ನು, ವಿಷಗಳನ್ನು ಇಡುತ್ತಿಲ್ಲ. ಮರ ಹತ್ತಿ ಇಲಿಗಳ ಗೂಡಿಗೆ ಕೈ ಹಾಕುವಷ್ಟು ಯೋಗ್ಯತೆಯೂ ನಮ್ಮಲ್ಲಿಲ್ಲ. ಆದರೂ ಇಲಿಗಳು ನಿಯಂತ್ರಣದಲ್ಲಿವೆ. ನಮ್ಮ ತೋಟದಲ್ಲಿ ವಿಷ ಇಡುತ್ತಿಲ್ಲ ಎಂಬ ವಿಷಯ ಗೂಬೆಗಳಿಗೆ, ಸಾಂಬಾರ್ಗಾಗೆಗಳಿಗೆ, ಹಾವುಗಳಿಗೆ, ಹದ್ದು ಲಗಡಗಳಿಗೆ, ಕಾಡುಬೆಕ್ಕುಗಳಿಗೆ ಮುಂತಾಗಿ ಇಲಿ ಹಿಡಿದು ತಿನ್ನುವ ಜೀವಿಗಳಿಗೆ ಗೊತ್ತಾಗಿರಬೇಕು. ಅವು ನಮ್ಮ ಅರಿವಿಗೆ ಬಾರದಂತೆ ಇಲಿಗಳ ಊಟ ಮಾಡುತ್ತಿರಬೇಕು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...