Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ...

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ಹಸಿರು ಬೇಲಿಗಳಿರುವ ತೆಂಗಿನ ತೋಟದಲ್ಲಿ ನುಸಿ ರೋಗ ನಿಯಂತ್ರಣದಲ್ಲಿರುತ್ತದೆ ಎಂದು ನಮ್ಮ ಅನುಭವಕ್ಕೆ ಬಂದಿದೆ.

- Advertisement -
- Advertisement -

ಹಸಿರು ಬೇಲಿಗಳು ತೋಟ ಹೊಲಗಳ ಜೀವಾಳ. ಆದರೀಗ ಮುಳ್ಳು ತಂತಿ ಬೇಲಿಗಳು ಹೆಚ್ಚಾಗಿವೆ. ನಾವು ಹಸಿರು ಬೇಲಿಗಳನ್ನು ಉಳಿಸಿಕೊಂಡಿದ್ದೇವೆ  ಏಕೆಂದರೆ ಅವು ನಮಗೆ ಬೇಕಾದಷ್ಟು ಹಸಿರು ಸೊಪ್ಪು ಕೊಡುತ್ತವೆ, ಕೀಟಗಳ ನಿಯಂತ್ರಣ ಮಾಡುತ್ತವೆ, ಗಾಳಿತಡೆಗಳಾಗಿ ನಿಂತು ಮಣ್ಣಿನ ಸವಕಳಿ ಆಗದಂತೆ ನೋಡಿಕೊಳ್ಳುತ್ತವೆ, ಆಗೊಮ್ಮೆ ಈಗೊಮ್ಮೆ ಜೇನು ತುಪ್ಪ ಕೊಡುತ್ತವೆ. ಬೇಲಿಗೆ ಹೊಂದಿಕೊಂಡಂತೆ ಅನೇಕ ಜಾತಿಯ ಗಿಡಮರಗಳು ಅವರಷ್ಟಕ್ಕೆ ಅವು ಬೆಳೆದು ನಿಲ್ಲುತ್ತವೆ.

ಬೇಲಿಯನ್ನು ವರ್ಷಕ್ಕೆ ಎರಡು ಮೂರು ಬಾರಿ ಸವರಿದರೂ ಅದು ಚಿಮ್ಮಿ ಚಿಗುರಿ ಬೆಳೆಯುತ್ತದೆ. ಯಾಕೆಂದರೆ ಅದರ ಅಡಿಯಲ್ಲಿ ಅಪಾರ ತೇವಾಂಶ ಮತ್ತು ಗೊಬ್ಬರ ಇರುತ್ತದೆ. ಅದು ನಾವು ಹಾಕಿದ್ದಲ್ಲ, ಅಲ್ಲೆ ಉತ್ಪತ್ತಿಯಾದದ್ದು ಅದಕ್ಕೆ ಆ ಬೇಲಿಗೆ ಅಷ್ಟು ಶಕ್ತಿ.

ಹಸಿರು ಬೇಲಿಯನ್ನು ಚಪ್ಪರದ ರೀತಿಯಲ್ಲಿ ಬಳಸಿಕೊಂಡು ಮಳೆಗಾಲದಲ್ಲಿ ಬಳ್ಳಿ ತರಕಾರಿ ಬೆಳೆಯಬಹುದು. ಬೇಲಿಗೆ ಹೊಂದಿಕೊಂಡಂತೆ 2 ಅಡಿ ಗುಂಡಿ ತೆಗೆದು ಒಳ್ಳೆ ಗೊಬ್ಬರ ತುಂಬಿ ಬಿಟ್ಟುಕೊಂಡರೆ, ಒಂದೆರಡು ಮಳೆಬಿದ್ದ ನಂತರ ಹದಗೊಂಡ ಆ ಗುಂಡಿಗೆ ತುಪ್ಪೀರೆ, ಹಿತ್ತಲವರೆ, ಕುಂಬಳ,ತೊಂಡೆ, ಶಂಬೆ ಮುಂತಾದ ಬಳ್ಳಿ ತರಕಾರಿ ಬೀಜಗಳನ್ನು ಊರಿದರೆ ಹೆಚ್ಚು ಹಾರೈಕೆಯಿಲ್ಲದೆ ಬೇಲಿಗೆ ಹಬ್ಬಿ ರುಚಿಕರ, ವಿಷರಹಿತ ತರಕಾರಿ ಕೊಡುತ್ತವೆ. ತೋಟಕ್ಕೆ ಹೋದರೆ ಆ ಬೇಲಿಸಾಲಿಗೆ ಹೋಗದೆ ಹಿಂದಿರುಗದಂತಾ ಸುಸಮಯ ಒದಗಿಬರುತ್ತದೆ. ತರತರದ ತರಕಾರಿಗಳು ನಮ್ಮ ತರಕಾರಿ ಬ್ಯಾಗಿಗೆ ಬಂದು ತುಂಬಿಕೊಳ್ಳುತ್ತವೆ. ಮಳೆ ಆಶ್ರಯದಲ್ಲೆಯೇ ಬೆಳೆದ ಈ ತರಕಾರಿ ರುಚಿಗೆ ಯಾವುದೂ ಸಮವಲ್ಲ. ಚಪ್ಪರ ಹಾಕುವ ಉಸಾಬರಿಯಿಲ್ಲ, ಮತ್ತೆ ಗೊಬ್ಬರ ಕೊಡುವ ಗೊಡವೆ ಇಲ್ಲ, ಕೀಟನಾಶಕದ ಸುದ್ದಿಯಿಲ್ಲ, ಅನಿವಾರ್ಯವಾದರೆ ಮಾತ್ರ ಒಂದೆರಡು ಸಲ ನೀರು ಕೊಡಬೇಕಾಗಬಹುದು ಅಷ್ಟೆ.

ನಮ್ಮ ತೋಟಕ್ಕೆ ಬಂದ ಕೆಲವರು “ನಿಮಗೆ ಬುದ್ಧಿ ಗಿದ್ದಿ ಇದೆಯಾ ಈ ದಾರಿ ಕಡೆಯ ಬೇಲಿಗೆ ತರಕಾರಿ ಬಳ್ಳಿಗಳನ್ನ ಹಬ್ಬಿಸಿದ್ದೀರಲ್ಲ, ಜನ ತರಕಾರಿ ಕದಿಯದೆ ಬಿಟ್ಟಾರೆಯೇ?” ಎಂದು ತಗಾದೆ ತೆಗಿಯುತ್ತಾರೆ. ತೋಟದ ಮಧ್ಯೆ ಈ ಬಳ್ಳಿ ಹಬ್ಬಿಸಲು ಪುಕ್ಕಟೆ ಸಲಹೆ ಕೊಡುತ್ತಾರೆ. ನಿಜಕ್ಕು ಇದು ವಿಚಿತ್ರ. ಬಳ್ಳಿಗಳು ಬೇಲಿಯಾಚೆ ಹಬ್ಬಿ ಆಚೆಯ ಬಿಸಿಲಿನ ಬಳಕೆ ಮಾಡಿಕೊಂಡು ಕಾಯಿ ಕಸುರು ಬಿಟ್ಟು ದಾರಿ ಹೋಕರನ್ನು ಕರೆದು ತರಕಾರಿ ಕೊಟ್ಟರೆ ನಮಗೇನು ತೊಂದರೆ, ಇಷ್ಟಕ್ಕೂ ಯಾರು ನಮ್ಮ ಬೇಲಿಗೆ ಕೈಹಾಕಿ ಕದ್ದು ಕಿತ್ತುಕೊಂಡು ಹೋದದ್ದನ್ನು ನಾವು ಕಾಣೆವು. ಪುಕ್ಕಟೆ ಸಲಹೆ ಕೊಡುವ ಜನರೂ ಸೇರಿದಂತೆ ಎಲ್ಲರೂ ಬೇಲಿಗಳಿಗೆ ತರಕಾರಿ ಬಳ್ಳಿ ಹಬ್ಬಿಸಿದರೆ ಅದರ ಮಜ ಹೇಗಿರುತ್ತದೆ?  ಬೀಜ ಬಿತ್ತಬೇಕಷ್ಟೆ. ಅದಕ್ಕೆ ಮನಸ್ಸು ಇರಬೇಕು, ಒಳ್ಳೆಯದನ್ನು ತಿನ್ನುವ ಪುಣ್ಯವಿರಬೇಕು.

ಬೇಲಿಗಳಿರುವ ತೆಂಗಿನ ತೋಟದಲ್ಲಿ ನುಸಿ ರೋಗ ನಿಯಂತ್ರಣದಲ್ಲಿರುತ್ತದೆ ಎಂದು ನಮ್ಮ ಅನುಭವಕ್ಕೆ ಬಂದಿದೆ. ತೋಟದಲ್ಲಿ ಹುಲ್ಲು ಸೊಪ್ಪು ಇದ್ದರೆ ನುಸಿ ತನ್ನ ಜಾಲವನ್ನು ಇಲ್ಲಿಗೆ ವರ್ಗಾಯಿಸುವ ಅವಕಾಶವಿರುತ್ತದೆ.

ಎಷ್ಟೋ ಜನ ಬೇಲಿ ಎಂದರೆ ಮುಳ್ಳು ಎಂದು ತಿಳಿದಿದ್ದಾರೆ. ನಿಜ ಈ ಹಿಂದೆ ಬಿದಿರು ಮುಳ್ಳು, ಎರದೆ ಮುಳ್ಳು, ಜಾಲಿಮುಳ್ಳುಗಳನ್ನು ಬಳಸಿ ಬೇಲಿ ಕಟ್ಟುವ ಸಾಹಸ ಮಾಡುತ್ತಿದ್ದರು, ಅವು ಒಂದೆರಡು ವರ್ಷಕ್ಕೆ ಕರಕಲಾಗಿ ಹೋಗುತ್ತಿದ್ದವು. ಮತ್ತೆ ಮತ್ತೆ ಕಟ್ಟುವ ಉಸಾಬರಿ ಇರುತ್ತಿತ್ತು. ಆಗಲೂ ಬುದ್ಧಿವಂತ ರೈತರು ಈ ಮುಳ್ಳು ಬೇಲಿಯ ತಂಟೆಗೆ ಹೋಗದೆ, ಚಿಗುರು ಕಡ್ಡಿಗಳ ಸಹಾಯದಿಂದ ಹಸಿರು ಬೇಲಿಯನ್ನು ಸೃಷ್ಟಿಸುತ್ತಿದ್ದರು. ಅದರ ಎಲ್ಲಾ ಲಾಭಗಳನ್ನು ಪಡೆಯುತ್ತಿದ್ದರು.

ಈ ಬಗೆಯ ಬೇಲಿಗಳಿದ್ದರೆ ಇಲಿಗಳು ಮಾಮೇರಿ ಹೆಚ್ಚುತ್ತವೆ ಎಂಬ ಆಪಾದನೆ ಇದೆ. ಇದು ನಮ್ಮ ತೋಟದ ವಿಷಯದಲ್ಲಿ ಸಂಪೂರ್ಣ ಸುಳ್ಳು. ನಮ್ಮ ಇಡೀ ತೋಟವೇ ಬೇಲಿಯ ಲಕ್ಷಣಗಳನ್ನು ಹೊಂದಿದೆ. ಇವರ ಪ್ರಕಾರ ಇಲಿಗಳ ಸಾಮ್ರಜ್ಯವೇ ಇಲ್ಲಿ ನೆರೆಯಬೇಕಾಗಿತ್ತು. ನಮ್ಮ ತೋಟದಲ್ಲಿ ಇಲಿಗಳೇ ಇಲ್ಲ ಎನ್ನುವಂತಿಲ್ಲ, ಇವೆ ನಿಯಂತ್ರಣದಲ್ಲಿವೆ.

ನಮ್ಮಪ್ಪ ಉಳುಮೆ ಮಾಡುತ್ತಿದ್ದ ತೋಟದಲ್ಲಿ ಇಲಿಗಳ ಉಪಟಳ ಎಲ್ಲೆ ಮೀರುತ್ತಿತ್ತು. ಅವು ಎಳನೀರು ಕುಡಿದು ಸುರಿಸುವ ಬುಲ್ಡೆಗಳನ್ನು ನೋಡಿ ಅವುಗಳ ಮೇಲೆ ಸಮರ ಸಾರುವ ತೀರ್ಮಾನ ಮಾಡುತ್ತಿತ್ತು. ಹದವಾಗಿ ಹುರಿದ ನೆಲಗಡಲೆ ಕಾಯಿಗಳನ್ನು ಸಿಪ್ಪೆಬೆರೆಸೆ ಕುಟ್ಟಿ ಪುಡಿಮಾಡಿ, ಬರ್ನ್‌ ಆದ ಬುಲ್ಡೆ ಬಲ್ಬುಗಳನ್ನೂ ಸಣ್ಣಗೆ ಪುಡಿಮಾಡಿ, ಎರಡನ್ನು ಮಿಶ್ರಣ ಮಾಡುತ್ತಿದ್ದರು. ಇದಕ್ಕೆ ಹುಚ್ಚಳ್ಳು ಪುಡಿಯನ್ನು ಬೆರಸುತ್ತಿದ್ದರು. ಈ ಬಗೆಯ ಘಮಗುಟ್ಟುವ ಪರಿಕರವು ಇಲಿಗಳನ್ನು ಆಕರ್ಷಿಸಿ ತಿನ್ನುವಂತೆ ಮಾಡುತ್ತದೆಂದೂ, ತಿಂದ ಇಲಿಗಳು ನೆಗೆದು ಬೀಳುತ್ತವೆಂದು ಅವರ ಊಹೆ. ಸದರಿ ʻಇಲಿಬಾಂಬುʼ ತಯಾರಾಗುತ್ತಿರಬೇಕಾದರೆ ಆ ಘಮಗುಟ್ಟುವ ಪದಾರ್ಥದಿಂದ ಆಕರ್ಷಿತರಾಗಿ ನಾವೇ ಅದನ್ನು ತಿಂದುಬಿಡುವ ವಾಂಚಲ್ಯಕ್ಕೆ ಒಳಗಾಗುತ್ತಿದ್ದುದುಂಟು. ಇಂಥ ಇಲಿಪಾತಕ ಪುಡಿಯನ್ನು ಸಣ್ಣ ಸಣ್ಣ ಬಟ್ಟೆ ಗಂಟುಗಳಾಗಿಸಿ ರೆಡಿ ಮಾಡಿಕೊಳ್ಳುತ್ತಿದ್ದ ನಮ್ಮಪ್ಪ ಆ ಸಂದರ್ಭದಲ್ಲಿ ಮಾತೇ ಆಡುತ್ತಿರಲಿಲ್ಲ, ಯಜ್ಞಧ್ಯಾನದಲ್ಲಿ ತೊಡಗುತ್ತಿದ್ದರು.

PC : Gardeners World

ಈ ಪುಟ್ಟ ಪುಟ್ಟ ಬಟ್ಟೆ ಗಂಟುಗಳನ್ನು ಇಲಿಗೆ ಕಾಣುವಂತೆ ಇಡುವುದು ಸವಾಲಿನ ಕೆಲಸವಾಗಿತ್ತು. ಇಲಿಗಳು ಮರಗಳಿಂದ ಇಳಿಯುವುದೇ ಅಪರೂಪವಾದ್ದರಿಂದ ನೆಲದಲ್ಲಿ ಈ ಗಂಟುಗಳನ್ನಿಟ್ಟರೆ ಯಾವ ಪ್ರಯೋಜನವೂ ಇರುವುದಿಲ್ಲ. ಆದ್ದರಿಂದ ಮರದ ಮೇಲಕ್ಕೆ ಗಂಟುಗಳನ್ನು ಎಸೆಯಲು ಶತ ಪ್ರಯತ್ನ ಮಾಡುತ್ತಿದ್ದ ಅಪ್ಪ ಈ ಗಂಟುಗಳಿಗೆ ಕಲ್ಲ ಕಟ್ಟಿ ಎಸೆಯುತ್ತಿತ್ತು. ಬಿದಿರಿನ ಜವಣಿಗೆಯ ತುದಿಗೆ ಗಂಟುಗಳನ್ನು ಸಿಕ್ಕಿಸಿ ನಿಧಾನವಾಗಿ ತೆಂಗಿನ ಸುಳಿಗೆ ಸಾಗಿಸಲು ಯತ್ನಿಸುತ್ತಿತ್ತು. ಈ ಯತ್ನಗಳು ವಿಫಲವಾದ ಮೇಲೆ ತಾನೇ ಆ ಮರಗಳನ್ನು ಹತ್ತಿ ಆ ಗಂಟುಗಳನ್ನು ಇಟ್ಟು ಇಲಿಗಳನ್ನು ಆಹ್ವಾನಿಸುತ್ತಿತ್ತು. ಇಷ್ಟಕ್ಕೆ ಸುಮ್ಮನಾಗದ ಅವರು ತೆಂಗಿನ ಸುಳಿಯಲ್ಲಿ ಕಟ್ಟಿರಬಹುದಾದ ಇಲಿಯ ಗೂಡುಗಳನ್ನು ಕಿತ್ತು ನೇರ ಕಾರ್ಯಾಚರಣೆಗೆ ಇಳಿಯುತ್ತಿತ್ತು. ಒಮ್ಮೊಮೆ ಆ ಗೂಡುಗಳಲ್ಲಿ ನಿದ್ದೆ ಮಾಡುತ್ತಿದ್ದ ಇಲಿಗಳು ದಿಢೀರ್‌ ಆಕ್ರಮಣದಿಂದ ತತ್ತರಿಸಿ ಮರದಿಂದ ಕೆಳಕ್ಕೆ ಹಾರಿಬಿಡುತ್ತಿದ್ದವು. ಕೆಳಗೆ ಕೊರಂಬಳೆ ಕುಂಚಿಕೆಯನ್ನು ಹಿಡಿದು ಸಿದ್ಧವಾಗಿರುತ್ತಿದ್ದ ನಾವು ಕೂಗಾಡುತ್ತಾ ಅವುಗಳನ್ನು ಸದೆಬಡಿಯುವ ಪ್ರಯತ್ನ ಮಾಡುತ್ತಿದ್ದೆವು. ಇಂಥ ಪ್ರಯತ್ನಗಳು ವಿಫಲವಾಗುತ್ತಿದ್ದುದೇ ಹೆಚ್ಚು. ನಮ್ಮಪ್ಪನಾದರೋ ಒಮ್ಮೊಮ್ಮೆ ಇಲಿಗಳನ್ನು ಕೈಯಲ್ಲಿಯೇ ಹಿಡಿದು ಸಾಯಿಸುವಷ್ಟು ಸಿಟ್ಟಿನಿಂದ ವ್ಯಗ್ರಗೊಳ್ಳುತ್ತಿದ್ದರು. ಮರದಡಿಯಲ್ಲಿ ಬೀಳುತ್ತಿದ್ದ ಇಲಿಬುಲ್ಡೆಗಳ ಸುರಿಮಳೆ ಇಲಿಗಳನ್ನು ಹೀಗೆ ಸಾಯಿಸಲು ಪ್ರೇರಣೆಯಾಗಿತ್ತು. ಅವರಂತ ರೈತರು ಬೆಳೆದ ಬೆಳೆಗಳು ಹೀಗೆ ಇಲಿಗಳ ಸಾಕಣೆಗೆ ಬಳಕೆಯಾಗುವುದು ಯಾವ ಸರ್ಕಾರಗಳ ಗಮನಕ್ಕೂ ಬಂದಂತೆ ಕಾಣುವುದಿಲ್ಲ. ಅದಕ್ಕೇ ಅವರು ಹೀಗೆ ಹೇಳುತ್ತಿದ್ದರು, “ಜನರನ್ನೆಲ್ಲ ಸಾಕುವುದರ ಜೊತೆಗೆ, ಇಲಿ, ಹೆಗ್ಗಣ, ನಾಯಿನರಿ, ಹಕ್ಕಿ ಪಕ್ಷಿ, ಹಂದಿ ಕರಡಿ, ಮುಂತಾದುವುಗಳನ್ನು ರೈತರು ಸಾಕುತ್ತಿರುವುದರಿಂದ ಅದಕ್ಕೆ ಅನುದಾನ ಕೊಡಲಿ” ಎಂದು.

ನಾವೀಗ ಇಲಿಗಳಿಗೆ ಈ ಬಗೆಯ ಯಾವ ಪುಡಿಗಳನ್ನು, ವಿಷಗಳನ್ನು ಇಡುತ್ತಿಲ್ಲ. ಮರ ಹತ್ತಿ ಇಲಿಗಳ ಗೂಡಿಗೆ ಕೈ ಹಾಕುವಷ್ಟು ಯೋಗ್ಯತೆಯೂ ನಮ್ಮಲ್ಲಿಲ್ಲ. ಆದರೂ ಇಲಿಗಳು ನಿಯಂತ್ರಣದಲ್ಲಿವೆ. ನಮ್ಮ ತೋಟದಲ್ಲಿ ವಿಷ ಇಡುತ್ತಿಲ್ಲ ಎಂಬ ವಿಷಯ ಗೂಬೆಗಳಿಗೆ, ಸಾಂಬಾರ್ಗಾಗೆಗಳಿಗೆ, ಹಾವುಗಳಿಗೆ, ಹದ್ದು ಲಗಡಗಳಿಗೆ, ಕಾಡುಬೆಕ್ಕುಗಳಿಗೆ ಮುಂತಾಗಿ ಇಲಿ ಹಿಡಿದು ತಿನ್ನುವ ಜೀವಿಗಳಿಗೆ ಗೊತ್ತಾಗಿರಬೇಕು. ಅವು ನಮ್ಮ ಅರಿವಿಗೆ ಬಾರದಂತೆ ಇಲಿಗಳ ಊಟ ಮಾಡುತ್ತಿರಬೇಕು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್‌ ಮುಖಂಡನ ಗೂಂಡಾವರ್ತನೆ : ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಪೌರಾಯುಕ್ತೆಗೆ ಧಮ್ಕಿ, ಅವಾಚ್ಯ ಶಬ್ದಗಳಿಂದ ನಿಂದನೆ

ಸಚಿವ ಝಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಗೌಡ ಅವರೊಂದಿಗೆ ಗೂಂಡಾವರ್ತನೆ...

ಹಿಂದಿ ಶೈಕ್ಷಣಿಕ ಪದ್ಧತಿ ಹೇರಿಕೆಯಿಂದ ಉತ್ತರದ ಜನರಿಂದ ದಕ್ಷಿಣಕ್ಕೆ ವಲಸೆ: ಮಾರನ್

ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುತ್ತಾ, ವಿದ್ಯಾರ್ಥಿಗಳು ಹಿಂದಿ ಮಾತ್ರ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ರಾಜ್ಯಗಳ ಈ ನೀತಿಗಳಿಂದ ಉದ್ಯೋಗ ಸಿಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ...

ಚಿಕ್ಕಮಗಳೂರು| ದಲಿತರ ಜಮೀನಿಗೆ ನುಗ್ಗಿ ಬೆಳೆ ನಾಶ; ಪ್ರಬಲ ಜಾತಿ ಜನರಿಂದ ವಿನಾಕಾರಣ ತೊಂದರೆ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಸತ್ತಿಹಳ್ಳಿ ಗ್ರಾಮದ ದಲಿತ ಸಮುದಾಯದ ರೈತರಿಗೆ ಅದೇ ಊರಿನ ಪ್ರಬಲ ಜಾತಿಗೆ ಸೇರಿದ ಜನರು ವಿನಾಕಾರಣ ತೊಂದರೆ ನಿಡುತ್ತಿದ್ದು, ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎಂಬ...

ಎಲ್‌ಡಿಎಫ್‌ನ ‘ಕೇರಳಂ’ ಮರುನಾಮಕರಣ ಕ್ರಮ ಬೆಂಬಲಿಸಿದ ರಾಜ್ಯ ಬಿಜೆಪಿ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಮನವಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇರಳ ಘಟಕವು, ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಸರ್ಕಾರದ 'ಕೇರಳಂ' ಮರುನಾಕರಣ ಪ್ರಸ್ತಾವನೆಯನ್ನು ಬೆಂಬಲಿಸಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ...

ರಾಯಚೂರು ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ತಡೆಗೆ ಸಂಚು ಆರೋಪ: ನಿಗದಿತ ದಿನಾಂಕದಂದು ಪರೀಕ್ಷೆ ನಡೆಸಲು ಒತ್ತಾಯ 

ಬೆಂಗಳೂರು: ರಾಯಚೂರು ಕೃಷಿ ವಿವಿಯಲ್ಲಿನ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಿಗದಿತ ದಿನಾಂಕಗಳಾದ ಜನವರಿ.17 ಮತ್ತು ಜನವರಿ.18ರಂದೇ ನಡೆಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು...

ಸಂಭಾಲ್ ಹಿಂಸಾಚಾರ ಪ್ರಕರಣ : ಹಿರಿಯ ಅಧಿಕಾರಿಗಳು ಸೇರಿ 12 ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

2024ರ ನವೆಂಬರ್‌ನಲ್ಲಿ ಶಾಹಿ ಜಾಮಾ ಮಸೀದಿ ಬಳಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾತ್ರವಿದೆ ಎಂಬ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಸೇರಿದಂತೆ 12 ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್...

ಪಿಎಂ ಕೇರ್ಸ್ ನಿಧಿಗೆ ಆರ್‌ಟಿಐ ಕಾಯ್ದೆಯಡಿ ಗೌಪ್ಯತೆಯ ಹಕ್ಕಿದೆ : ದೆಹಲಿ ಹೈಕೋರ್ಟ್

ಪಿಎಂ ಕೇರ್ಸ್ ನಿಧಿಯು ಕಾನೂನು ಅಥವಾ ಸರ್ಕಾರಿ ಘಟಕವಾಗಿದ್ದರೂ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಗೌಪ್ಯತೆಯ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ (ಜ.13) ಮೌಖಿಕವಾಗಿ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು...

ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗ

ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿದೆ ಎಂದು ವರದಿಯಾಗಿದೆ. ಸೋಮವಾರ (ಜ.12) ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ...

ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿಗೆ ಎರಡು ತಿಂಗಳ ಜೈಲು ಶಿಕ್ಷೆ: ಇದು ‘ಕಾನೂನುಬಾಹಿರ’ ಎಂದ ಪಾಟ್ನಾ ಹೈಕೋರ್ಟ್: 5 ಲಕ್ಷ ಪರಿಹಾರಕ್ಕೆ ಆದೇಶ

ಬಿಹಾರ ಪೊಲೀಸರು ಎರಡು ತಿಂಗಳಿಗೂ ಹೆಚ್ಚು ಕಾಲ ಮುಸ್ಲಿಂ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಕಾನೂನುಬಾಹಿರ ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ. ಇಂಥ ವಿಚಾರಗಳಲ್ಲಿ ರಾಜ್ಯ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ ಎಂದಿರುವ ಕೋರ್ಟ್...

ಒಳ ಮೀಸಲಾತಿ ಮಸೂದೆ ವಾಪಸ್ ಕಳಿಸಿದ ರಾಜ್ಯಪಾಲರು : ಹೋರಾಟಗಾರರು ಏನಂದ್ರು?

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಂಡ ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪವರ್ಗೀಕರಣ) ಮಸೂದೆಗೆ ಅಂಕಿತ ಹಾಕದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಕೆಲವು ಸ್ಪಷ್ಟನೆಗಳನ್ನು ಕೇಳಿರುವ ರಾಜ್ಯಪಾಲರು, ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು...