Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ...

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ಹಸಿರು ಬೇಲಿಗಳಿರುವ ತೆಂಗಿನ ತೋಟದಲ್ಲಿ ನುಸಿ ರೋಗ ನಿಯಂತ್ರಣದಲ್ಲಿರುತ್ತದೆ ಎಂದು ನಮ್ಮ ಅನುಭವಕ್ಕೆ ಬಂದಿದೆ.

- Advertisement -
- Advertisement -

ಹಸಿರು ಬೇಲಿಗಳು ತೋಟ ಹೊಲಗಳ ಜೀವಾಳ. ಆದರೀಗ ಮುಳ್ಳು ತಂತಿ ಬೇಲಿಗಳು ಹೆಚ್ಚಾಗಿವೆ. ನಾವು ಹಸಿರು ಬೇಲಿಗಳನ್ನು ಉಳಿಸಿಕೊಂಡಿದ್ದೇವೆ  ಏಕೆಂದರೆ ಅವು ನಮಗೆ ಬೇಕಾದಷ್ಟು ಹಸಿರು ಸೊಪ್ಪು ಕೊಡುತ್ತವೆ, ಕೀಟಗಳ ನಿಯಂತ್ರಣ ಮಾಡುತ್ತವೆ, ಗಾಳಿತಡೆಗಳಾಗಿ ನಿಂತು ಮಣ್ಣಿನ ಸವಕಳಿ ಆಗದಂತೆ ನೋಡಿಕೊಳ್ಳುತ್ತವೆ, ಆಗೊಮ್ಮೆ ಈಗೊಮ್ಮೆ ಜೇನು ತುಪ್ಪ ಕೊಡುತ್ತವೆ. ಬೇಲಿಗೆ ಹೊಂದಿಕೊಂಡಂತೆ ಅನೇಕ ಜಾತಿಯ ಗಿಡಮರಗಳು ಅವರಷ್ಟಕ್ಕೆ ಅವು ಬೆಳೆದು ನಿಲ್ಲುತ್ತವೆ.

ಬೇಲಿಯನ್ನು ವರ್ಷಕ್ಕೆ ಎರಡು ಮೂರು ಬಾರಿ ಸವರಿದರೂ ಅದು ಚಿಮ್ಮಿ ಚಿಗುರಿ ಬೆಳೆಯುತ್ತದೆ. ಯಾಕೆಂದರೆ ಅದರ ಅಡಿಯಲ್ಲಿ ಅಪಾರ ತೇವಾಂಶ ಮತ್ತು ಗೊಬ್ಬರ ಇರುತ್ತದೆ. ಅದು ನಾವು ಹಾಕಿದ್ದಲ್ಲ, ಅಲ್ಲೆ ಉತ್ಪತ್ತಿಯಾದದ್ದು ಅದಕ್ಕೆ ಆ ಬೇಲಿಗೆ ಅಷ್ಟು ಶಕ್ತಿ.

ಹಸಿರು ಬೇಲಿಯನ್ನು ಚಪ್ಪರದ ರೀತಿಯಲ್ಲಿ ಬಳಸಿಕೊಂಡು ಮಳೆಗಾಲದಲ್ಲಿ ಬಳ್ಳಿ ತರಕಾರಿ ಬೆಳೆಯಬಹುದು. ಬೇಲಿಗೆ ಹೊಂದಿಕೊಂಡಂತೆ 2 ಅಡಿ ಗುಂಡಿ ತೆಗೆದು ಒಳ್ಳೆ ಗೊಬ್ಬರ ತುಂಬಿ ಬಿಟ್ಟುಕೊಂಡರೆ, ಒಂದೆರಡು ಮಳೆಬಿದ್ದ ನಂತರ ಹದಗೊಂಡ ಆ ಗುಂಡಿಗೆ ತುಪ್ಪೀರೆ, ಹಿತ್ತಲವರೆ, ಕುಂಬಳ,ತೊಂಡೆ, ಶಂಬೆ ಮುಂತಾದ ಬಳ್ಳಿ ತರಕಾರಿ ಬೀಜಗಳನ್ನು ಊರಿದರೆ ಹೆಚ್ಚು ಹಾರೈಕೆಯಿಲ್ಲದೆ ಬೇಲಿಗೆ ಹಬ್ಬಿ ರುಚಿಕರ, ವಿಷರಹಿತ ತರಕಾರಿ ಕೊಡುತ್ತವೆ. ತೋಟಕ್ಕೆ ಹೋದರೆ ಆ ಬೇಲಿಸಾಲಿಗೆ ಹೋಗದೆ ಹಿಂದಿರುಗದಂತಾ ಸುಸಮಯ ಒದಗಿಬರುತ್ತದೆ. ತರತರದ ತರಕಾರಿಗಳು ನಮ್ಮ ತರಕಾರಿ ಬ್ಯಾಗಿಗೆ ಬಂದು ತುಂಬಿಕೊಳ್ಳುತ್ತವೆ. ಮಳೆ ಆಶ್ರಯದಲ್ಲೆಯೇ ಬೆಳೆದ ಈ ತರಕಾರಿ ರುಚಿಗೆ ಯಾವುದೂ ಸಮವಲ್ಲ. ಚಪ್ಪರ ಹಾಕುವ ಉಸಾಬರಿಯಿಲ್ಲ, ಮತ್ತೆ ಗೊಬ್ಬರ ಕೊಡುವ ಗೊಡವೆ ಇಲ್ಲ, ಕೀಟನಾಶಕದ ಸುದ್ದಿಯಿಲ್ಲ, ಅನಿವಾರ್ಯವಾದರೆ ಮಾತ್ರ ಒಂದೆರಡು ಸಲ ನೀರು ಕೊಡಬೇಕಾಗಬಹುದು ಅಷ್ಟೆ.

ನಮ್ಮ ತೋಟಕ್ಕೆ ಬಂದ ಕೆಲವರು “ನಿಮಗೆ ಬುದ್ಧಿ ಗಿದ್ದಿ ಇದೆಯಾ ಈ ದಾರಿ ಕಡೆಯ ಬೇಲಿಗೆ ತರಕಾರಿ ಬಳ್ಳಿಗಳನ್ನ ಹಬ್ಬಿಸಿದ್ದೀರಲ್ಲ, ಜನ ತರಕಾರಿ ಕದಿಯದೆ ಬಿಟ್ಟಾರೆಯೇ?” ಎಂದು ತಗಾದೆ ತೆಗಿಯುತ್ತಾರೆ. ತೋಟದ ಮಧ್ಯೆ ಈ ಬಳ್ಳಿ ಹಬ್ಬಿಸಲು ಪುಕ್ಕಟೆ ಸಲಹೆ ಕೊಡುತ್ತಾರೆ. ನಿಜಕ್ಕು ಇದು ವಿಚಿತ್ರ. ಬಳ್ಳಿಗಳು ಬೇಲಿಯಾಚೆ ಹಬ್ಬಿ ಆಚೆಯ ಬಿಸಿಲಿನ ಬಳಕೆ ಮಾಡಿಕೊಂಡು ಕಾಯಿ ಕಸುರು ಬಿಟ್ಟು ದಾರಿ ಹೋಕರನ್ನು ಕರೆದು ತರಕಾರಿ ಕೊಟ್ಟರೆ ನಮಗೇನು ತೊಂದರೆ, ಇಷ್ಟಕ್ಕೂ ಯಾರು ನಮ್ಮ ಬೇಲಿಗೆ ಕೈಹಾಕಿ ಕದ್ದು ಕಿತ್ತುಕೊಂಡು ಹೋದದ್ದನ್ನು ನಾವು ಕಾಣೆವು. ಪುಕ್ಕಟೆ ಸಲಹೆ ಕೊಡುವ ಜನರೂ ಸೇರಿದಂತೆ ಎಲ್ಲರೂ ಬೇಲಿಗಳಿಗೆ ತರಕಾರಿ ಬಳ್ಳಿ ಹಬ್ಬಿಸಿದರೆ ಅದರ ಮಜ ಹೇಗಿರುತ್ತದೆ?  ಬೀಜ ಬಿತ್ತಬೇಕಷ್ಟೆ. ಅದಕ್ಕೆ ಮನಸ್ಸು ಇರಬೇಕು, ಒಳ್ಳೆಯದನ್ನು ತಿನ್ನುವ ಪುಣ್ಯವಿರಬೇಕು.

ಬೇಲಿಗಳಿರುವ ತೆಂಗಿನ ತೋಟದಲ್ಲಿ ನುಸಿ ರೋಗ ನಿಯಂತ್ರಣದಲ್ಲಿರುತ್ತದೆ ಎಂದು ನಮ್ಮ ಅನುಭವಕ್ಕೆ ಬಂದಿದೆ. ತೋಟದಲ್ಲಿ ಹುಲ್ಲು ಸೊಪ್ಪು ಇದ್ದರೆ ನುಸಿ ತನ್ನ ಜಾಲವನ್ನು ಇಲ್ಲಿಗೆ ವರ್ಗಾಯಿಸುವ ಅವಕಾಶವಿರುತ್ತದೆ.

ಎಷ್ಟೋ ಜನ ಬೇಲಿ ಎಂದರೆ ಮುಳ್ಳು ಎಂದು ತಿಳಿದಿದ್ದಾರೆ. ನಿಜ ಈ ಹಿಂದೆ ಬಿದಿರು ಮುಳ್ಳು, ಎರದೆ ಮುಳ್ಳು, ಜಾಲಿಮುಳ್ಳುಗಳನ್ನು ಬಳಸಿ ಬೇಲಿ ಕಟ್ಟುವ ಸಾಹಸ ಮಾಡುತ್ತಿದ್ದರು, ಅವು ಒಂದೆರಡು ವರ್ಷಕ್ಕೆ ಕರಕಲಾಗಿ ಹೋಗುತ್ತಿದ್ದವು. ಮತ್ತೆ ಮತ್ತೆ ಕಟ್ಟುವ ಉಸಾಬರಿ ಇರುತ್ತಿತ್ತು. ಆಗಲೂ ಬುದ್ಧಿವಂತ ರೈತರು ಈ ಮುಳ್ಳು ಬೇಲಿಯ ತಂಟೆಗೆ ಹೋಗದೆ, ಚಿಗುರು ಕಡ್ಡಿಗಳ ಸಹಾಯದಿಂದ ಹಸಿರು ಬೇಲಿಯನ್ನು ಸೃಷ್ಟಿಸುತ್ತಿದ್ದರು. ಅದರ ಎಲ್ಲಾ ಲಾಭಗಳನ್ನು ಪಡೆಯುತ್ತಿದ್ದರು.

ಈ ಬಗೆಯ ಬೇಲಿಗಳಿದ್ದರೆ ಇಲಿಗಳು ಮಾಮೇರಿ ಹೆಚ್ಚುತ್ತವೆ ಎಂಬ ಆಪಾದನೆ ಇದೆ. ಇದು ನಮ್ಮ ತೋಟದ ವಿಷಯದಲ್ಲಿ ಸಂಪೂರ್ಣ ಸುಳ್ಳು. ನಮ್ಮ ಇಡೀ ತೋಟವೇ ಬೇಲಿಯ ಲಕ್ಷಣಗಳನ್ನು ಹೊಂದಿದೆ. ಇವರ ಪ್ರಕಾರ ಇಲಿಗಳ ಸಾಮ್ರಜ್ಯವೇ ಇಲ್ಲಿ ನೆರೆಯಬೇಕಾಗಿತ್ತು. ನಮ್ಮ ತೋಟದಲ್ಲಿ ಇಲಿಗಳೇ ಇಲ್ಲ ಎನ್ನುವಂತಿಲ್ಲ, ಇವೆ ನಿಯಂತ್ರಣದಲ್ಲಿವೆ.

ನಮ್ಮಪ್ಪ ಉಳುಮೆ ಮಾಡುತ್ತಿದ್ದ ತೋಟದಲ್ಲಿ ಇಲಿಗಳ ಉಪಟಳ ಎಲ್ಲೆ ಮೀರುತ್ತಿತ್ತು. ಅವು ಎಳನೀರು ಕುಡಿದು ಸುರಿಸುವ ಬುಲ್ಡೆಗಳನ್ನು ನೋಡಿ ಅವುಗಳ ಮೇಲೆ ಸಮರ ಸಾರುವ ತೀರ್ಮಾನ ಮಾಡುತ್ತಿತ್ತು. ಹದವಾಗಿ ಹುರಿದ ನೆಲಗಡಲೆ ಕಾಯಿಗಳನ್ನು ಸಿಪ್ಪೆಬೆರೆಸೆ ಕುಟ್ಟಿ ಪುಡಿಮಾಡಿ, ಬರ್ನ್‌ ಆದ ಬುಲ್ಡೆ ಬಲ್ಬುಗಳನ್ನೂ ಸಣ್ಣಗೆ ಪುಡಿಮಾಡಿ, ಎರಡನ್ನು ಮಿಶ್ರಣ ಮಾಡುತ್ತಿದ್ದರು. ಇದಕ್ಕೆ ಹುಚ್ಚಳ್ಳು ಪುಡಿಯನ್ನು ಬೆರಸುತ್ತಿದ್ದರು. ಈ ಬಗೆಯ ಘಮಗುಟ್ಟುವ ಪರಿಕರವು ಇಲಿಗಳನ್ನು ಆಕರ್ಷಿಸಿ ತಿನ್ನುವಂತೆ ಮಾಡುತ್ತದೆಂದೂ, ತಿಂದ ಇಲಿಗಳು ನೆಗೆದು ಬೀಳುತ್ತವೆಂದು ಅವರ ಊಹೆ. ಸದರಿ ʻಇಲಿಬಾಂಬುʼ ತಯಾರಾಗುತ್ತಿರಬೇಕಾದರೆ ಆ ಘಮಗುಟ್ಟುವ ಪದಾರ್ಥದಿಂದ ಆಕರ್ಷಿತರಾಗಿ ನಾವೇ ಅದನ್ನು ತಿಂದುಬಿಡುವ ವಾಂಚಲ್ಯಕ್ಕೆ ಒಳಗಾಗುತ್ತಿದ್ದುದುಂಟು. ಇಂಥ ಇಲಿಪಾತಕ ಪುಡಿಯನ್ನು ಸಣ್ಣ ಸಣ್ಣ ಬಟ್ಟೆ ಗಂಟುಗಳಾಗಿಸಿ ರೆಡಿ ಮಾಡಿಕೊಳ್ಳುತ್ತಿದ್ದ ನಮ್ಮಪ್ಪ ಆ ಸಂದರ್ಭದಲ್ಲಿ ಮಾತೇ ಆಡುತ್ತಿರಲಿಲ್ಲ, ಯಜ್ಞಧ್ಯಾನದಲ್ಲಿ ತೊಡಗುತ್ತಿದ್ದರು.

PC : Gardeners World

ಈ ಪುಟ್ಟ ಪುಟ್ಟ ಬಟ್ಟೆ ಗಂಟುಗಳನ್ನು ಇಲಿಗೆ ಕಾಣುವಂತೆ ಇಡುವುದು ಸವಾಲಿನ ಕೆಲಸವಾಗಿತ್ತು. ಇಲಿಗಳು ಮರಗಳಿಂದ ಇಳಿಯುವುದೇ ಅಪರೂಪವಾದ್ದರಿಂದ ನೆಲದಲ್ಲಿ ಈ ಗಂಟುಗಳನ್ನಿಟ್ಟರೆ ಯಾವ ಪ್ರಯೋಜನವೂ ಇರುವುದಿಲ್ಲ. ಆದ್ದರಿಂದ ಮರದ ಮೇಲಕ್ಕೆ ಗಂಟುಗಳನ್ನು ಎಸೆಯಲು ಶತ ಪ್ರಯತ್ನ ಮಾಡುತ್ತಿದ್ದ ಅಪ್ಪ ಈ ಗಂಟುಗಳಿಗೆ ಕಲ್ಲ ಕಟ್ಟಿ ಎಸೆಯುತ್ತಿತ್ತು. ಬಿದಿರಿನ ಜವಣಿಗೆಯ ತುದಿಗೆ ಗಂಟುಗಳನ್ನು ಸಿಕ್ಕಿಸಿ ನಿಧಾನವಾಗಿ ತೆಂಗಿನ ಸುಳಿಗೆ ಸಾಗಿಸಲು ಯತ್ನಿಸುತ್ತಿತ್ತು. ಈ ಯತ್ನಗಳು ವಿಫಲವಾದ ಮೇಲೆ ತಾನೇ ಆ ಮರಗಳನ್ನು ಹತ್ತಿ ಆ ಗಂಟುಗಳನ್ನು ಇಟ್ಟು ಇಲಿಗಳನ್ನು ಆಹ್ವಾನಿಸುತ್ತಿತ್ತು. ಇಷ್ಟಕ್ಕೆ ಸುಮ್ಮನಾಗದ ಅವರು ತೆಂಗಿನ ಸುಳಿಯಲ್ಲಿ ಕಟ್ಟಿರಬಹುದಾದ ಇಲಿಯ ಗೂಡುಗಳನ್ನು ಕಿತ್ತು ನೇರ ಕಾರ್ಯಾಚರಣೆಗೆ ಇಳಿಯುತ್ತಿತ್ತು. ಒಮ್ಮೊಮೆ ಆ ಗೂಡುಗಳಲ್ಲಿ ನಿದ್ದೆ ಮಾಡುತ್ತಿದ್ದ ಇಲಿಗಳು ದಿಢೀರ್‌ ಆಕ್ರಮಣದಿಂದ ತತ್ತರಿಸಿ ಮರದಿಂದ ಕೆಳಕ್ಕೆ ಹಾರಿಬಿಡುತ್ತಿದ್ದವು. ಕೆಳಗೆ ಕೊರಂಬಳೆ ಕುಂಚಿಕೆಯನ್ನು ಹಿಡಿದು ಸಿದ್ಧವಾಗಿರುತ್ತಿದ್ದ ನಾವು ಕೂಗಾಡುತ್ತಾ ಅವುಗಳನ್ನು ಸದೆಬಡಿಯುವ ಪ್ರಯತ್ನ ಮಾಡುತ್ತಿದ್ದೆವು. ಇಂಥ ಪ್ರಯತ್ನಗಳು ವಿಫಲವಾಗುತ್ತಿದ್ದುದೇ ಹೆಚ್ಚು. ನಮ್ಮಪ್ಪನಾದರೋ ಒಮ್ಮೊಮ್ಮೆ ಇಲಿಗಳನ್ನು ಕೈಯಲ್ಲಿಯೇ ಹಿಡಿದು ಸಾಯಿಸುವಷ್ಟು ಸಿಟ್ಟಿನಿಂದ ವ್ಯಗ್ರಗೊಳ್ಳುತ್ತಿದ್ದರು. ಮರದಡಿಯಲ್ಲಿ ಬೀಳುತ್ತಿದ್ದ ಇಲಿಬುಲ್ಡೆಗಳ ಸುರಿಮಳೆ ಇಲಿಗಳನ್ನು ಹೀಗೆ ಸಾಯಿಸಲು ಪ್ರೇರಣೆಯಾಗಿತ್ತು. ಅವರಂತ ರೈತರು ಬೆಳೆದ ಬೆಳೆಗಳು ಹೀಗೆ ಇಲಿಗಳ ಸಾಕಣೆಗೆ ಬಳಕೆಯಾಗುವುದು ಯಾವ ಸರ್ಕಾರಗಳ ಗಮನಕ್ಕೂ ಬಂದಂತೆ ಕಾಣುವುದಿಲ್ಲ. ಅದಕ್ಕೇ ಅವರು ಹೀಗೆ ಹೇಳುತ್ತಿದ್ದರು, “ಜನರನ್ನೆಲ್ಲ ಸಾಕುವುದರ ಜೊತೆಗೆ, ಇಲಿ, ಹೆಗ್ಗಣ, ನಾಯಿನರಿ, ಹಕ್ಕಿ ಪಕ್ಷಿ, ಹಂದಿ ಕರಡಿ, ಮುಂತಾದುವುಗಳನ್ನು ರೈತರು ಸಾಕುತ್ತಿರುವುದರಿಂದ ಅದಕ್ಕೆ ಅನುದಾನ ಕೊಡಲಿ” ಎಂದು.

ನಾವೀಗ ಇಲಿಗಳಿಗೆ ಈ ಬಗೆಯ ಯಾವ ಪುಡಿಗಳನ್ನು, ವಿಷಗಳನ್ನು ಇಡುತ್ತಿಲ್ಲ. ಮರ ಹತ್ತಿ ಇಲಿಗಳ ಗೂಡಿಗೆ ಕೈ ಹಾಕುವಷ್ಟು ಯೋಗ್ಯತೆಯೂ ನಮ್ಮಲ್ಲಿಲ್ಲ. ಆದರೂ ಇಲಿಗಳು ನಿಯಂತ್ರಣದಲ್ಲಿವೆ. ನಮ್ಮ ತೋಟದಲ್ಲಿ ವಿಷ ಇಡುತ್ತಿಲ್ಲ ಎಂಬ ವಿಷಯ ಗೂಬೆಗಳಿಗೆ, ಸಾಂಬಾರ್ಗಾಗೆಗಳಿಗೆ, ಹಾವುಗಳಿಗೆ, ಹದ್ದು ಲಗಡಗಳಿಗೆ, ಕಾಡುಬೆಕ್ಕುಗಳಿಗೆ ಮುಂತಾಗಿ ಇಲಿ ಹಿಡಿದು ತಿನ್ನುವ ಜೀವಿಗಳಿಗೆ ಗೊತ್ತಾಗಿರಬೇಕು. ಅವು ನಮ್ಮ ಅರಿವಿಗೆ ಬಾರದಂತೆ ಇಲಿಗಳ ಊಟ ಮಾಡುತ್ತಿರಬೇಕು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...