Homeಆರೋಗ್ಯಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-18

ಮಾನಸಿಕ ಒತ್ತಡ ಎಂದ ಕೂಡಲೇ ನಮಗೆ ಒಂದು ರೀತಿಯ ಹೆದರಿಕೆ, ಆತಂಕ ಶುರುವಾಗುತ್ತದೆ. ಅದರ ಭಯಾನಕ ಪರಿಣಾಮಗಳ ದೃಶ್ಯ ಕಣ್ಣಮುಂದೆ ಬರುತ್ತವೆ. ಹಾಗಾದರೆ ಮಾನಸಿಕ ಒತ್ತಡಗಳನ್ನು ತಡೆದುಕೊಳ್ಳುವುದು ಹೇಗೆ?

ಮಾನಸಿಕ ಒತ್ತಡ (ಸ್ಟ್ರೆಸ್) ಒಂದು ಭಾವನಾತ್ಮಕ ಮಾನಸಿಕ ಉದ್ವೇಗ ಮತ್ತು ದೈಹಿಕ ಬಿಗುಪು. ಯಾವುದೋ ಸನ್ನಿವೇಶ ಅಥವಾ ನಮ್ಮ ನಿಯಂತ್ರಣದಲ್ಲಿರದ ವಿಷಯದ ಬಗ್ಗೆಯ ಯೋಚನೆಯಿಂದಾಗಿ ನಾವು ನಿರಾಶೆ, ಆತಂಕಕ್ಕೆ, ಕೋಪಕ್ಕೆ, ಕ್ಷೋಭೆಗೆ ಒಳಗೊಂಡಾಗ, ಪರೀಕ್ಷೆ, ಸವಾಲನ್ನು ಎದುರಿಸಬೇಕಾದಾಗ ದೈಹಿಕ ಪ್ರತಿಕ್ರಿಯೆಯೇ ಸ್ಟ್ರೆಸ್. ಇದು ಧನಾತ್ಮಕವೂ ಆಗಿರಬಹುದು ಅಥವಾ ಜೀವರಸ ಹಿಂಡುವ ಶಕ್ತಿಯೂ ಆಗಿರಬಹುದು. ಹಲವರು ಇಂತಹ ಒತ್ತಡದಲ್ಲಿ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಾರೆ. ಕೆಲವರು ಕೆಲಸದ ಸಮಯಮಿತಿ (ಡೆಡ್ಲೈನ್)ಯಿಂದಾಗಿ ಹೆದರಿ ಏನೂ ತೋಚದೆ, ಭ್ರಮೆಗೆ ಸಿಲುಕುತ್ತಾರೆ. ಸ್ವಲ್ಪ ಸಮಯದ ಒತ್ತಡ ಪ್ರೇರೇಪಕವೂ ಆಗಬಹುದು ಆದರೆ ದೀರ್ಘ ಸಮಯದ ಒತ್ತಡ ಆಸ್ಪತ್ರೆಗೂ ಸೇರಿಸಬಹುದು, ಆದ್ದರಿಂದ ಅದನ್ನು ನಿಭಾಯಿಸುವುದು ಅತ್ಯಗತ್ಯ.

ಇನ್ನೊಂದು ಒತ್ತಡ ಬರುವುದು ನಮ್ಮ ಸಮಾನಸ್ಕಂಧರಿಂದ (ಪೀರ್ ಪ್ರೆಷರ್). ಈ ಒತ್ತಡ ಅವರಿಂದ ಯಾವುದೋ ದುರಭ್ಯಾಸಕ್ಕೋ, ಕೆಟ್ಟ ಕೆಲಸಕ್ಕೋ ಬರಬಹುದು ಅಥವಾ ನಾವೂ ಮಿಕ್ಕವರಂತೆ ಆಗಬೇಕು ಎನ್ನುವ ನಮ್ಮ ಸ್ವಂತ ಹಂಬಲದಿಂದಲೂ ಬರಬಹುದು. ಉದಾ: ಮಾದಕ ವಸ್ತುಗಳ ಸೇವನ, ಅಸಾಮಾಜಿಕ ನಡವಳಿಕೆ, ಇತ್ಯಾದಿ.

ಒತ್ತಡ ತಡೆದುಕೊಳ್ಳಲು ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ಹಗುರವಾಗಿರಬೇಕು. ನಮ್ಮ ಜೀವನದ ಗುರಿ ಸ್ಪಷ್ಟವಾಗಿರಬೇಕು.

ಇದಕ್ಕೆ ಸಹಕಾರಿಯಾಗುವ ಹತ್ತು ನಡೆಗಳು:

1. ಕಾಫಿ, ಸಾರಾಯಿ, ತಂಬಾಕು ಮುಂತಾದ ವ್ಯಸನಗಳನ್ನು ತ್ಯಜಿಸಿ. ಇವು ಸಣ್ಣ ಪ್ರಮಾಣದಲ್ಲಿ ಉತ್ತೇಜನಕಾರಿ ಎಂದು ಎನಿಸಿದರೂ, ಕ್ರಮೇಣ ಅಭ್ಯಾಸ ಹೆಚ್ಚಾಗಿ, ಯಾವಾಗ ವ್ಯಸನಕ್ಕೆ ತಿರುಗುತ್ತದೋ ಹೇಳಲು ಸಾಧ್ಯವಿಲ್ಲ. ಖಂಡಿತಾ ನಿಮ್ಮನ್ನು ಪ್ರಪಾತಕ್ಕೆ ಎಳೆದುಕೊಂಡು ಹೋಗುತ್ತವೆ. ಇದರ ಬದಲಿಗೆ ಎಳನೀರು, ಹರ್ಬಲ್ ಟೀ, ಹಣ್ಣಿನ ರಸ (ಅಧಿಕ ಅಥವಾ ಬಿಳಿ ಸಕ್ಕರೆ ಇಲ್ಲದ), ತಂಪು ಪಾನೀಯಗಳನ್ನು ಕುಡಿಯಿರಿ. ಇದರಿಂದ ದೇಹ ದ್ರವಹೀನಗೊಳ್ಳದೆ ಸ್ಟ್ರೆಸ್ ನಿಂದ ಹೋರಾಡುವಲ್ಲಿ ಸಹಕಾರಿಯಾಗುತ್ತದೆ. ಆಹಾರ ನಿಯಮಿತವಾಗಿ ಸೇವಿಸಿ. ಊಟದಲ್ಲಿ ಸಮತೋಲನೆ ಮತ್ತು ಪೌಷ್ಟಿಕಾಂಶ ಇರಲಿ. ಪಾಚನಕ್ರಿಯೆ ಸುಗಮವಾಗಿರಲಿ. ಇದರಿಂದ ಮನಸ್ಸು ಹಗುರವಾಗಿರುತ್ತದೆ.

2. ವ್ಯಾಯಾಮ ಅಥವಾ ದೈಹಿಕ ಶ್ರಮದಲ್ಲಿ ಭಾಗವಹಿಸಿ. ಒತ್ತಡದಿಂದಾಗಿ ದೇಹದ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ನಮ್ಮ ದೇಹವನ್ನು ರಕ್ಷಿಸುವ ಹಾರ್ಮೋನುಗಳು ಇಂದಿನ ಒತ್ತಡಕ್ಕೆ ಸರಿಹೊಂದುವುದಿಲ್ಲ. ದೈಹಿಕ ವ್ಯಾಯಾಮ, ಹೊರಗಿನ ಮುಕ್ತ ವಾತಾವರಣ ನಮ್ಮ ಬಿಗುಪನ್ನು ಕಡಿಮೆ ಮಾಡಿ, ಮನಸ್ಸಿನ ವ್ಯಾಕುಲತೆಯನ್ನು ಸಡಿಲಗೊಳಿಸುತ್ತದೆ. ನಿದ್ದೆಯೂ ಸರಿಯಾಗಿ ಬರುತ್ತದೆ.

3. ಸರಿಯಾಗಿ ನಿದ್ರಿಸದಿರುವುದು ಸಹ ವ್ಯಾಕುಲತೆಯ ಲಕ್ಷಣ. ಮನಸ್ಸು ರಿಲಾಕ್ಸ್ ಆಗಿಲ್ಲದಿದ್ದಾಗ ನಿದ್ದೆ ಹಾರಿ ಹೋಗುವುದು ಸಹಜ. ಅಂತಹ ಸಮಯದಲ್ಲಿ ನಿದ್ದೆ ಮಾತ್ರೆ ಅಥವಾ ಇತರ ವ್ಯಸನಗಳಿಗೆ ಮಾರು ಹೋಗದೆ, ಮನಸ್ಸನ್ನು ಹಗುರಗೊಳಿಸುವ ಸಂಗೀತ ಕೇಳಿ. ಪ್ರಯೋಜನಕಾರಿ ಹಗುರವಾದ ಪುಸ್ತಕ ಓದಿ. ನಿಮ್ಮ ಮಲಗುವ ಕೋಣೆಯಲ್ಲಿ ನಿದ್ರೆಗೆ ಸೂಕ್ತವಾಗುವಂತಹ ವಾತಾವರಣ ಕಲ್ಪಿಸಿ, ಬೆಳಕು ಜಾಸ್ತಿ ಇಲ್ಲದಿರಲಿ. ಹೆಚ್ಚಿನ ಬುದ್ಧಿಶಕ್ತಿ ಬೇಕಾಗುವ ಕೆಲಸ ಮಲಗುವ ಮುನ್ನ ಮಾಡಬೇಡಿ. ಪ್ರತಿದಿನ (ರಾತ್ರಿ ಮತ್ತು ಬೆಳಿಗ್ಗೆ) ಅದೇ ಸಮಯಕ್ಕೆ, ಬೇಗ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬೆಳಿಗ್ಗೆ ಮನಸ್ಸು ಹಗುರವೂ, ಉಲ್ಲಾಸ ಭರಿತವೂ ಆಗಿರುತ್ತದೆ.

4. ಮನಸ್ಸನ್ನು ತಿಳಿಗೊಳಿಸುವ ಕಸರತ್ತು ಮಾಡಿ: ಯೋಗ, ಪ್ರಾಣಾಯಾಮ, ಸ್ವಯಂ-ವಶೀಕರಣ ತಂತ್ರಗಳನ್ನು ಬಳಸಿ, ನಿಮ್ಮನ್ನು ನೀವೇ ಶಾಂತಗೊಳಿಸಲು ಕಲಿಯಿರಿ.

 

5. ಇನ್ನೊಬ್ಬರೊಂದಿಗೆ ಮಾತನಾಡಿ. ಅದು ನಿಮ್ಮ ಸಹೋದ್ಯೋಗಿ/ಸಹಪಾಠಿ, ಪೋಷಕ/ಶಿಕ್ಷಕ/ಗುರು ಅಥವಾ ಸ್ನೇಹಿತರಾಗಿರಬಹುದು. ನಿಮ್ಮ ಬಗ್ಗೆ ತೀರ್ಪು ನೀಡದ, ಕೇವಲ ಸಲಹೆ ನೀಡಬಲ್ಲ ವ್ಯಕ್ತಿಯ ಜೊತೆ ನಿಮ್ಮ ಆತಂಕ ಹಂಚಿಕೊಳ್ಳಿ. ಅಂತಹ ವ್ಯಕ್ತಿ ಇಲ್ಲದಿದ್ದಲ್ಲಿ ಪರಿಣಿತರ (ಕೌನ್ಸೆಲ್ಲಿಂಗ್) ಸಲಹೆ ಪಡೆಯಿರಿ.

6. ಸ್ಟ್ರೆಸ್ ಡೈರಿ ಬರೆಯಿರಿ. ನಿಮ್ಮ ಆತಂಕದ ಸನ್ನಿವೇಶಗಳು, ಅನುಭವಗಳು, ಪರಿಹಾರಗಳನ್ನು ಒಂದು ದಿನಚರಿ ಪುಸ್ತಕದಲ್ಲಿ ಬರೆದಿಡಿ. ಪ್ರತಿಯೊಂದು ಸನ್ನಿವೇಶಕ್ಕೂ/ಕಾರಣಕ್ಕೂ ಒಂದು ಸೂಚ್ಯಾಂಕ ನೀಡಿ, ಅತ್ಯಂತ ಹೆಚ್ಚಿನ ಒತ್ತಡಕ್ಕೆ 10, ತೀರಾ ಕಡಿಮೆಗೆ 1, ಹೀಗೆ ಅಂಕಗಳನ್ನು ನೀಡುತ್ತಾ ಬನ್ನಿ. ಕೆಲವೇ ದಿನಗಳಲ್ಲಿ ನಿಮ್ಮ ಆತಂಕಕ್ಕೆ ಕಾರಣ ಮತ್ತು ಪರಿಹಾರ ಎರಡೂ ನಿಮ್ಮ ಮುಂದೆ ಇರುತ್ತದೆ. ಇದರಿಂದ ಅಂತಹ ಸನ್ನಿವೇಶದಿಂದ ದೂರವಿರಲು ಮತ್ತು ಧೈರ್ಯದಿಂದ ಸೆಣಸಾಡುವ ಉಪಾಯ ದೊರಕುತ್ತದೆ.

7. ನಿಯಂತ್ರಣ ನಿಮ್ಮ ಕೈಗೆ ತೆಗೆದುಕೊಳ್ಳಿ. ನಿಮ್ಮನ್ನು ನಿಯಂತ್ರಿಸುವ “ರಿಮೋಟ್” ಬೇರೆಯವರ ಕೈಗೆ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು, ಆದಷ್ಟು ಮಟ್ಟಿಗೆ, ನೀವೇ ಪರಿಹರಿಸಿಕೊಳ್ಳಿ. ಸಣ್ಣ ಪುಟ್ಟ ತೊಂದರೆಗೂ ಇನ್ನೊಬ್ಬರ ಬಳಿ ಓಡಿ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಡಿ. ಅವರು ನಿಮ್ಮ ದುರ್ಬಲತೆಯ ದುರುಪಯೋಗ ಮಾಡಿಕೊಳ್ಳಬಹುದು. ಅವಶ್ಯಕತೆ ಎನಿಸಿದಾಗ ಪರಿಣಿತರ ಸಲಹೆ ಪಡೆಯಿರಿ.

8. ಸಮಯ ನಿರ್ವಹಣೆ ಕಲಿಯಿರಿ. ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದಿದ್ದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ನಿಮ್ಮ ಕೆಲಸದ, ಆದ್ಯತೆಯ, ಸಮಯದ, ಪಟ್ಟಿ ಮಾಡಿಕೊಂಡು ಅದರಂತೆ ಚಲಿಸಿ. ಯಾವುದು ಮುಖ್ಯ ಮತ್ತು ಅವಸರವೋ ಅದನ್ನು ಮೊದಲು ಮಾಡಿ. ಮುಖ್ಯವಲ್ಲದ, ಅವಸರವಿಲ್ಲದ ಕೆಲಸ ಸಮಯ ಸಿಕ್ಕಾಗ ಮಾಡಿ.

9. ಇಲ್ಲ ಎನ್ನುವುದನ್ನು ಕಲಿಯಿರಿ. ದಾಕ್ಷಿಣ್ಯಕ್ಕೆ ಬಲಿಯಾಗಿ ಕೈಯಲ್ಲಾಗದ/ಮನಸ್ಸು ಒಪ್ಪದ ಕೆಲಸಕ್ಕೆ ಒಪ್ಪಿಕೊಳ್ಳಬೇಡಿ. ಇಲ್ಲ ಎನ್ನುವುದನ್ನು ಕಲಿಯಿರಿ. ನೀವು “ಇಲ್ಲ” ಎಂದರೆ “ಇಲ್ಲ” ಎನ್ನುವುದನ್ನು ಬೇರೆಯವರಿಗೆ ಅರ್ಥವಾಗುವಂತೆ, ನಯವಾಗಿ ತಿಳಿಸಿ. ಪ್ರತಿಯೊಂದು “ಇಲ್ಲ”ವೂ ಜಗಳಕ್ಕೆ ಕಾರಣವಾಗುವುದಿಲ್ಲ.

10. ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...