Homeಕರ್ನಾಟಕಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

ಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

- Advertisement -
- Advertisement -

ಸದನದಲ್ಲಿಂದು ಬಹುಮತ ಸಾಬೀತು ಮಾಡಲಾಗದಿದ್ದರೂ ಮೈತ್ರಿ ಪಕ್ಷಗಳ ಶಾಸಕರು ಭರ್ಜರಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ. ಬಸವಕಲ್ಯಾಣದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು ಈ ಕೆಳಗಿನಂತಿವೆ.

ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಸವಣ್ಣನವರನ್ನ ನೆನೆದು ಮಾತು ಆರಂಭಿಸಿದ ಬಿ.ನಾರಾಯಣರಾವ್ ಜನರ ಮಧ್ಯೆ ಹೋರಾಟ ಮಾಡಿ ಮಾಡಿ ಕೊನೆಗೆ ಸಿದ್ಧರಾಮಯ್ಯ, ಪರಮೇಶ್ವರ್ ಅವರು ಟಿಕೇಟ್ ಕೊಟ್ಟಿದ್ದರಿಂದ ನಾನು ಬಂದು ಇಲ್ಲಿ ನಿಮ್ಮ ಮುಂದೆ ನಿಂತಿದ್ದೇನೆ. ಮೊದಲು ದೇವೆಗೌಡರು ಟಿಕೇಟ್ ಕೊಟ್ಟಿದ್ದರು ಅಲ್ಲಿ ಸೋತಿದ್ದೆ ಇಲ್ಲಿಗೆ ಬಂದರೆ ಇಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾರೆ, ನಾವು ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗತ್ತಾರೆ ಅಂದುಕೊಂಡಿದ್ದೆವು ಎಂದು ಹೇಳಿದಾಗ ಸದನದ ಸದಸ್ಯರನ್ನು ನಗೆಯ ಅಲೆ ತೇಲಿಹೋದರು.

ಅನ್ನಭಾಗ್ಯ ಯೋಜನೆ ಇಂದು ಬಡವರು ನೆನೆಯುವಂತ ಕಾರ್ಯಕ್ರಮ ಎಂದ ಅವರು, ನಾವು ಪಂಚಾಯಿತಿ ಕಟ್ಟೆಯಿಂದದ ಬಂದವರು, ನನಗೆ ಕೃಷ್ಣಭೈರೆಗೌಡ, ಮಾಧುಸ್ವಾಮಿ ರೀತಿ ಕಾನೂನು ಮಾತಾಡಲು ಬರುವುದಿಲ್ಲ ಆದರೆ ನಮ್ಮ ಮೂರು ಪಕ್ಷದ ಮುಖಂಡರು ಬೇವಿನ ಬೀಜಗಳನ್ನು ಬಿತ್ತಲು ಹೋಗಬೇಡಿ. ಇಲ್ಲಿ ಏನ್ ನಡೆಯುತ್ತಿದೆ ಎಂಬುದನ್ನು ಎಲ್ಲಾ ಜನ ಮಾಧ್ಯಮಗಳಲ್ಲಿ ನೋಡುತ್ತಿದ್ದಾರೆ, ಎಲ್ಲಾರಿಗಿಂತ ಹೆಚ್ಚು ಮತದಾರರು ಗಮನಿಸುತ್ತಿದ್ದಾರೆ. ಅವರು ಚನ್ನಾಗಿ ಅರಿಯುತ್ತಾರೆ ಸಾರ್, ನಾವು ರಾಜಕೀಯ ಮನೆತನದಿಂದ ಬಂದಿಲ್ಲ ದುಡ್ಡಿರೋರು ಮತ್ತೆ ಚುನಾವಣೆಗೆ ಹೋಗತಾರೆ ನಾವು ಬಡವರು ನಾವು ಎಲ್ಲಿಗೆ ಹೋಗಬೇಕು?

ನಮಗೆ ಕೋಟಿ ಕೋಟಿ ದುಡ್ಡು ಕೊಟ್ಟರೆ ನಾವು ಇಡೋಕೆ ಜಾಗ ಇಲ್ಲ. ನಾನು ಪಾನ್ ಕಾರ್ಡ್ ಮಾಡಿಸಿಲ್ಲ , ಸತ್ತರೆ ಉಳೋದಕ್ಕೆ ಜಾಗ ಇಲ್ಲ ಸಾರ್. ಇನ್ನು ಲೋಕಯುಕ್ತರು ಕೇಳಿಯೇ ಕೇಳುತ್ತಾರೆ, ಕದ್ದು ಮುಚ್ಚು ತಗೊಂಡರೆ ವಿಡಿಯೋ ಮಾಡಿದರೆ ಮತ್ತೆ ಜೈಲಿಗೆ ಹೋಗಬೆಕು ಎಂದು ವಿವರಿಸಿದರು. ನಾನು ನಮ್ಮ ಕ್ಷೇತ್ರದ ವಾರ್ಡ್ ನಲ್ಲಿ ತಿರುಗುತ್ತಿದ್ದರೂ ಉಮೇಶ್ ಜಾಧವ್ ಜೊತೆ ಮುಂಬೈನಲ್ಲಿ ವಾಸ್ತವ್ಯ ಅಂತ ಈ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಮಾಡತ್ತಾರೆ. ನಾವು ಮೊದಲೆ ಬಡವರು, ಬಡವ ಸತ್ಯ ಹೇಳಿದರು ನಂಬೊದಿಲ್ಲ. ನನಗೆ ಮಾಲೀಕರು ಮತದಾರರು.

ಎಲ್ಲಾ 224 ಗೌರವಾನ್ವಿತ ಸದಸ್ಯರೆ ನೀವು ಮತದಾರರ ಕಣ್ಣಲ್ಲಿ ಕೀಳು ಮಟ್ಟದಲ್ಲಿ ಕಾಣಬೇಡಿ. ಮೊಟ್ಟ ಮೊದಲು ಸಂಸತ್ತು ಹುಟ್ಟಿದ್ದು ಬಸವಕಲ್ಯಾಣದಲ್ಲಿ. 700 ಶೋಷಿತ ಸಮುದಾಯಗಳ ನೇತೃದ್ವದಲ್ಲಿ ಸಂಸತ್ತು ಪ್ರಾರಂಭ ಆಗಿದ್ದು ಬಸವಕಲ್ಯಾಣದಲ್ಲಿ, ಅನ್ನದಾಸೋಹ ಪ್ರಾರಂಭ ಮಾಡಿದ್ದು ಬಸವ ಕಲ್ಯಾಣ. ಅನುಭವ ಮಂಟಪಕ್ಕೆ 650ಕೋಟಿ ಕೊಡಬೇಕು ಎಂದು ಮನವಿ ಮಾಡಿದರು.

ನೆಲದ ಕಾನೂನಿನ ಪ್ರಕಾರ ವಿಶ್ವಾಸಮತ ಯಾಚಿಸಲು ಹಿಂದೆ ಮುಂದೆ ಯೋಚನೆ ಮಾಡಬೇಡಿ ಈ ಹಿಂದೆ ದೇವೆಗೌಡರು ಸ್ವಾಭಿಮಾನದಿಂದ ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದ್ದರು. ನೀವು ಒಮ್ಮೆ ನಿಮ್ಮ ತಂದೆಗೆ ನೋವು ತಂದು ಬಿಜೆಪಿ ಸಹವಾಸ ಮಾಡಿದ್ದೀರಿ ಅದನ್ನ ಇಂದು ನಾವೆಲ್ಲ ಅನುಭವಿಸುವಂತಾಗಿದೆ. ಇನ್ನು ಮೇಲೆ ನೀವು ಆ ತಪ್ಪು ಮಾಡಬೇಡಿ ಎಂದು ಹೇಳಿದರು.

ಬಸವಣ್ಣನವರ ಆಶಯದಂತೆ, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದ ಚೌಕಟ್ಟಿನ ಒಳಗಡೆ ಈ ಸಮಸ್ಯೆಯನ್ನ ಬೇಗ ಪರಿಹರಿಸಿ. ಯಾರು ಜಾತ್ಯಾತೀತ ಶಕ್ತಿಗಳು ಒಂದಾಗಬೇಕೆಂದು, ಒಟ್ಟಾಗಿ ಸೇರಿಬೇಕೆಂದು ಮುಖ್ಯಮಂತ್ರಿಯಾದ ನೀವು ಗ್ರಾಮವಾಸ್ತವ್ಯಕ್ಕೆ ಬಂದು ಗಡಿಭಾಗದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೀರಿ. ಮಾಧ್ಯಮಗಳು, ವಿರೋಧ ಪಕ್ಷಗಳು ಗಮನಿಸಿ ನಮ್ಮ ಹಳ್ಳಿಗಳಿಗೆ ಸರಪಂಚ್ ಬರೋದೆ ಕಷ್ಟ ಒಬ್ಬ ಮುಖ್ಯಮಂತ್ರಿ ಬರ್ತಾನೆ ಅಂದರೆ ಅಲ್ಲಿ ಹಬ್ಬದ ವಾತಾವರಣ ಇತ್ತು ಬಸವಕಲ್ಯಾಣಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿ ಮಾತು ಮುಗಿಸಿದರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...