Homeಆರೋಗ್ಯಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-18

ಮಾನಸಿಕ ಒತ್ತಡ ಎಂದ ಕೂಡಲೇ ನಮಗೆ ಒಂದು ರೀತಿಯ ಹೆದರಿಕೆ, ಆತಂಕ ಶುರುವಾಗುತ್ತದೆ. ಅದರ ಭಯಾನಕ ಪರಿಣಾಮಗಳ ದೃಶ್ಯ ಕಣ್ಣಮುಂದೆ ಬರುತ್ತವೆ. ಹಾಗಾದರೆ ಮಾನಸಿಕ ಒತ್ತಡಗಳನ್ನು ತಡೆದುಕೊಳ್ಳುವುದು ಹೇಗೆ?

ಮಾನಸಿಕ ಒತ್ತಡ (ಸ್ಟ್ರೆಸ್) ಒಂದು ಭಾವನಾತ್ಮಕ ಮಾನಸಿಕ ಉದ್ವೇಗ ಮತ್ತು ದೈಹಿಕ ಬಿಗುಪು. ಯಾವುದೋ ಸನ್ನಿವೇಶ ಅಥವಾ ನಮ್ಮ ನಿಯಂತ್ರಣದಲ್ಲಿರದ ವಿಷಯದ ಬಗ್ಗೆಯ ಯೋಚನೆಯಿಂದಾಗಿ ನಾವು ನಿರಾಶೆ, ಆತಂಕಕ್ಕೆ, ಕೋಪಕ್ಕೆ, ಕ್ಷೋಭೆಗೆ ಒಳಗೊಂಡಾಗ, ಪರೀಕ್ಷೆ, ಸವಾಲನ್ನು ಎದುರಿಸಬೇಕಾದಾಗ ದೈಹಿಕ ಪ್ರತಿಕ್ರಿಯೆಯೇ ಸ್ಟ್ರೆಸ್. ಇದು ಧನಾತ್ಮಕವೂ ಆಗಿರಬಹುದು ಅಥವಾ ಜೀವರಸ ಹಿಂಡುವ ಶಕ್ತಿಯೂ ಆಗಿರಬಹುದು. ಹಲವರು ಇಂತಹ ಒತ್ತಡದಲ್ಲಿ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಾರೆ. ಕೆಲವರು ಕೆಲಸದ ಸಮಯಮಿತಿ (ಡೆಡ್ಲೈನ್)ಯಿಂದಾಗಿ ಹೆದರಿ ಏನೂ ತೋಚದೆ, ಭ್ರಮೆಗೆ ಸಿಲುಕುತ್ತಾರೆ. ಸ್ವಲ್ಪ ಸಮಯದ ಒತ್ತಡ ಪ್ರೇರೇಪಕವೂ ಆಗಬಹುದು ಆದರೆ ದೀರ್ಘ ಸಮಯದ ಒತ್ತಡ ಆಸ್ಪತ್ರೆಗೂ ಸೇರಿಸಬಹುದು, ಆದ್ದರಿಂದ ಅದನ್ನು ನಿಭಾಯಿಸುವುದು ಅತ್ಯಗತ್ಯ.

ಇನ್ನೊಂದು ಒತ್ತಡ ಬರುವುದು ನಮ್ಮ ಸಮಾನಸ್ಕಂಧರಿಂದ (ಪೀರ್ ಪ್ರೆಷರ್). ಈ ಒತ್ತಡ ಅವರಿಂದ ಯಾವುದೋ ದುರಭ್ಯಾಸಕ್ಕೋ, ಕೆಟ್ಟ ಕೆಲಸಕ್ಕೋ ಬರಬಹುದು ಅಥವಾ ನಾವೂ ಮಿಕ್ಕವರಂತೆ ಆಗಬೇಕು ಎನ್ನುವ ನಮ್ಮ ಸ್ವಂತ ಹಂಬಲದಿಂದಲೂ ಬರಬಹುದು. ಉದಾ: ಮಾದಕ ವಸ್ತುಗಳ ಸೇವನ, ಅಸಾಮಾಜಿಕ ನಡವಳಿಕೆ, ಇತ್ಯಾದಿ.

ಒತ್ತಡ ತಡೆದುಕೊಳ್ಳಲು ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ಹಗುರವಾಗಿರಬೇಕು. ನಮ್ಮ ಜೀವನದ ಗುರಿ ಸ್ಪಷ್ಟವಾಗಿರಬೇಕು.

ಇದಕ್ಕೆ ಸಹಕಾರಿಯಾಗುವ ಹತ್ತು ನಡೆಗಳು:

1. ಕಾಫಿ, ಸಾರಾಯಿ, ತಂಬಾಕು ಮುಂತಾದ ವ್ಯಸನಗಳನ್ನು ತ್ಯಜಿಸಿ. ಇವು ಸಣ್ಣ ಪ್ರಮಾಣದಲ್ಲಿ ಉತ್ತೇಜನಕಾರಿ ಎಂದು ಎನಿಸಿದರೂ, ಕ್ರಮೇಣ ಅಭ್ಯಾಸ ಹೆಚ್ಚಾಗಿ, ಯಾವಾಗ ವ್ಯಸನಕ್ಕೆ ತಿರುಗುತ್ತದೋ ಹೇಳಲು ಸಾಧ್ಯವಿಲ್ಲ. ಖಂಡಿತಾ ನಿಮ್ಮನ್ನು ಪ್ರಪಾತಕ್ಕೆ ಎಳೆದುಕೊಂಡು ಹೋಗುತ್ತವೆ. ಇದರ ಬದಲಿಗೆ ಎಳನೀರು, ಹರ್ಬಲ್ ಟೀ, ಹಣ್ಣಿನ ರಸ (ಅಧಿಕ ಅಥವಾ ಬಿಳಿ ಸಕ್ಕರೆ ಇಲ್ಲದ), ತಂಪು ಪಾನೀಯಗಳನ್ನು ಕುಡಿಯಿರಿ. ಇದರಿಂದ ದೇಹ ದ್ರವಹೀನಗೊಳ್ಳದೆ ಸ್ಟ್ರೆಸ್ ನಿಂದ ಹೋರಾಡುವಲ್ಲಿ ಸಹಕಾರಿಯಾಗುತ್ತದೆ. ಆಹಾರ ನಿಯಮಿತವಾಗಿ ಸೇವಿಸಿ. ಊಟದಲ್ಲಿ ಸಮತೋಲನೆ ಮತ್ತು ಪೌಷ್ಟಿಕಾಂಶ ಇರಲಿ. ಪಾಚನಕ್ರಿಯೆ ಸುಗಮವಾಗಿರಲಿ. ಇದರಿಂದ ಮನಸ್ಸು ಹಗುರವಾಗಿರುತ್ತದೆ.

2. ವ್ಯಾಯಾಮ ಅಥವಾ ದೈಹಿಕ ಶ್ರಮದಲ್ಲಿ ಭಾಗವಹಿಸಿ. ಒತ್ತಡದಿಂದಾಗಿ ದೇಹದ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ನಮ್ಮ ದೇಹವನ್ನು ರಕ್ಷಿಸುವ ಹಾರ್ಮೋನುಗಳು ಇಂದಿನ ಒತ್ತಡಕ್ಕೆ ಸರಿಹೊಂದುವುದಿಲ್ಲ. ದೈಹಿಕ ವ್ಯಾಯಾಮ, ಹೊರಗಿನ ಮುಕ್ತ ವಾತಾವರಣ ನಮ್ಮ ಬಿಗುಪನ್ನು ಕಡಿಮೆ ಮಾಡಿ, ಮನಸ್ಸಿನ ವ್ಯಾಕುಲತೆಯನ್ನು ಸಡಿಲಗೊಳಿಸುತ್ತದೆ. ನಿದ್ದೆಯೂ ಸರಿಯಾಗಿ ಬರುತ್ತದೆ.

3. ಸರಿಯಾಗಿ ನಿದ್ರಿಸದಿರುವುದು ಸಹ ವ್ಯಾಕುಲತೆಯ ಲಕ್ಷಣ. ಮನಸ್ಸು ರಿಲಾಕ್ಸ್ ಆಗಿಲ್ಲದಿದ್ದಾಗ ನಿದ್ದೆ ಹಾರಿ ಹೋಗುವುದು ಸಹಜ. ಅಂತಹ ಸಮಯದಲ್ಲಿ ನಿದ್ದೆ ಮಾತ್ರೆ ಅಥವಾ ಇತರ ವ್ಯಸನಗಳಿಗೆ ಮಾರು ಹೋಗದೆ, ಮನಸ್ಸನ್ನು ಹಗುರಗೊಳಿಸುವ ಸಂಗೀತ ಕೇಳಿ. ಪ್ರಯೋಜನಕಾರಿ ಹಗುರವಾದ ಪುಸ್ತಕ ಓದಿ. ನಿಮ್ಮ ಮಲಗುವ ಕೋಣೆಯಲ್ಲಿ ನಿದ್ರೆಗೆ ಸೂಕ್ತವಾಗುವಂತಹ ವಾತಾವರಣ ಕಲ್ಪಿಸಿ, ಬೆಳಕು ಜಾಸ್ತಿ ಇಲ್ಲದಿರಲಿ. ಹೆಚ್ಚಿನ ಬುದ್ಧಿಶಕ್ತಿ ಬೇಕಾಗುವ ಕೆಲಸ ಮಲಗುವ ಮುನ್ನ ಮಾಡಬೇಡಿ. ಪ್ರತಿದಿನ (ರಾತ್ರಿ ಮತ್ತು ಬೆಳಿಗ್ಗೆ) ಅದೇ ಸಮಯಕ್ಕೆ, ಬೇಗ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬೆಳಿಗ್ಗೆ ಮನಸ್ಸು ಹಗುರವೂ, ಉಲ್ಲಾಸ ಭರಿತವೂ ಆಗಿರುತ್ತದೆ.

4. ಮನಸ್ಸನ್ನು ತಿಳಿಗೊಳಿಸುವ ಕಸರತ್ತು ಮಾಡಿ: ಯೋಗ, ಪ್ರಾಣಾಯಾಮ, ಸ್ವಯಂ-ವಶೀಕರಣ ತಂತ್ರಗಳನ್ನು ಬಳಸಿ, ನಿಮ್ಮನ್ನು ನೀವೇ ಶಾಂತಗೊಳಿಸಲು ಕಲಿಯಿರಿ.

 

5. ಇನ್ನೊಬ್ಬರೊಂದಿಗೆ ಮಾತನಾಡಿ. ಅದು ನಿಮ್ಮ ಸಹೋದ್ಯೋಗಿ/ಸಹಪಾಠಿ, ಪೋಷಕ/ಶಿಕ್ಷಕ/ಗುರು ಅಥವಾ ಸ್ನೇಹಿತರಾಗಿರಬಹುದು. ನಿಮ್ಮ ಬಗ್ಗೆ ತೀರ್ಪು ನೀಡದ, ಕೇವಲ ಸಲಹೆ ನೀಡಬಲ್ಲ ವ್ಯಕ್ತಿಯ ಜೊತೆ ನಿಮ್ಮ ಆತಂಕ ಹಂಚಿಕೊಳ್ಳಿ. ಅಂತಹ ವ್ಯಕ್ತಿ ಇಲ್ಲದಿದ್ದಲ್ಲಿ ಪರಿಣಿತರ (ಕೌನ್ಸೆಲ್ಲಿಂಗ್) ಸಲಹೆ ಪಡೆಯಿರಿ.

6. ಸ್ಟ್ರೆಸ್ ಡೈರಿ ಬರೆಯಿರಿ. ನಿಮ್ಮ ಆತಂಕದ ಸನ್ನಿವೇಶಗಳು, ಅನುಭವಗಳು, ಪರಿಹಾರಗಳನ್ನು ಒಂದು ದಿನಚರಿ ಪುಸ್ತಕದಲ್ಲಿ ಬರೆದಿಡಿ. ಪ್ರತಿಯೊಂದು ಸನ್ನಿವೇಶಕ್ಕೂ/ಕಾರಣಕ್ಕೂ ಒಂದು ಸೂಚ್ಯಾಂಕ ನೀಡಿ, ಅತ್ಯಂತ ಹೆಚ್ಚಿನ ಒತ್ತಡಕ್ಕೆ 10, ತೀರಾ ಕಡಿಮೆಗೆ 1, ಹೀಗೆ ಅಂಕಗಳನ್ನು ನೀಡುತ್ತಾ ಬನ್ನಿ. ಕೆಲವೇ ದಿನಗಳಲ್ಲಿ ನಿಮ್ಮ ಆತಂಕಕ್ಕೆ ಕಾರಣ ಮತ್ತು ಪರಿಹಾರ ಎರಡೂ ನಿಮ್ಮ ಮುಂದೆ ಇರುತ್ತದೆ. ಇದರಿಂದ ಅಂತಹ ಸನ್ನಿವೇಶದಿಂದ ದೂರವಿರಲು ಮತ್ತು ಧೈರ್ಯದಿಂದ ಸೆಣಸಾಡುವ ಉಪಾಯ ದೊರಕುತ್ತದೆ.

7. ನಿಯಂತ್ರಣ ನಿಮ್ಮ ಕೈಗೆ ತೆಗೆದುಕೊಳ್ಳಿ. ನಿಮ್ಮನ್ನು ನಿಯಂತ್ರಿಸುವ “ರಿಮೋಟ್” ಬೇರೆಯವರ ಕೈಗೆ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು, ಆದಷ್ಟು ಮಟ್ಟಿಗೆ, ನೀವೇ ಪರಿಹರಿಸಿಕೊಳ್ಳಿ. ಸಣ್ಣ ಪುಟ್ಟ ತೊಂದರೆಗೂ ಇನ್ನೊಬ್ಬರ ಬಳಿ ಓಡಿ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಡಿ. ಅವರು ನಿಮ್ಮ ದುರ್ಬಲತೆಯ ದುರುಪಯೋಗ ಮಾಡಿಕೊಳ್ಳಬಹುದು. ಅವಶ್ಯಕತೆ ಎನಿಸಿದಾಗ ಪರಿಣಿತರ ಸಲಹೆ ಪಡೆಯಿರಿ.

8. ಸಮಯ ನಿರ್ವಹಣೆ ಕಲಿಯಿರಿ. ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದಿದ್ದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ನಿಮ್ಮ ಕೆಲಸದ, ಆದ್ಯತೆಯ, ಸಮಯದ, ಪಟ್ಟಿ ಮಾಡಿಕೊಂಡು ಅದರಂತೆ ಚಲಿಸಿ. ಯಾವುದು ಮುಖ್ಯ ಮತ್ತು ಅವಸರವೋ ಅದನ್ನು ಮೊದಲು ಮಾಡಿ. ಮುಖ್ಯವಲ್ಲದ, ಅವಸರವಿಲ್ಲದ ಕೆಲಸ ಸಮಯ ಸಿಕ್ಕಾಗ ಮಾಡಿ.

9. ಇಲ್ಲ ಎನ್ನುವುದನ್ನು ಕಲಿಯಿರಿ. ದಾಕ್ಷಿಣ್ಯಕ್ಕೆ ಬಲಿಯಾಗಿ ಕೈಯಲ್ಲಾಗದ/ಮನಸ್ಸು ಒಪ್ಪದ ಕೆಲಸಕ್ಕೆ ಒಪ್ಪಿಕೊಳ್ಳಬೇಡಿ. ಇಲ್ಲ ಎನ್ನುವುದನ್ನು ಕಲಿಯಿರಿ. ನೀವು “ಇಲ್ಲ” ಎಂದರೆ “ಇಲ್ಲ” ಎನ್ನುವುದನ್ನು ಬೇರೆಯವರಿಗೆ ಅರ್ಥವಾಗುವಂತೆ, ನಯವಾಗಿ ತಿಳಿಸಿ. ಪ್ರತಿಯೊಂದು “ಇಲ್ಲ”ವೂ ಜಗಳಕ್ಕೆ ಕಾರಣವಾಗುವುದಿಲ್ಲ.

10. ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...