Homeಆರೋಗ್ಯಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಮಾನಸಿಕ ಒತ್ತಡ (stress) ತೊಲಗಿಸಲು ಇರುವ ಹತ್ತು ನಡೆಗಳು

ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-18

ಮಾನಸಿಕ ಒತ್ತಡ ಎಂದ ಕೂಡಲೇ ನಮಗೆ ಒಂದು ರೀತಿಯ ಹೆದರಿಕೆ, ಆತಂಕ ಶುರುವಾಗುತ್ತದೆ. ಅದರ ಭಯಾನಕ ಪರಿಣಾಮಗಳ ದೃಶ್ಯ ಕಣ್ಣಮುಂದೆ ಬರುತ್ತವೆ. ಹಾಗಾದರೆ ಮಾನಸಿಕ ಒತ್ತಡಗಳನ್ನು ತಡೆದುಕೊಳ್ಳುವುದು ಹೇಗೆ?

ಮಾನಸಿಕ ಒತ್ತಡ (ಸ್ಟ್ರೆಸ್) ಒಂದು ಭಾವನಾತ್ಮಕ ಮಾನಸಿಕ ಉದ್ವೇಗ ಮತ್ತು ದೈಹಿಕ ಬಿಗುಪು. ಯಾವುದೋ ಸನ್ನಿವೇಶ ಅಥವಾ ನಮ್ಮ ನಿಯಂತ್ರಣದಲ್ಲಿರದ ವಿಷಯದ ಬಗ್ಗೆಯ ಯೋಚನೆಯಿಂದಾಗಿ ನಾವು ನಿರಾಶೆ, ಆತಂಕಕ್ಕೆ, ಕೋಪಕ್ಕೆ, ಕ್ಷೋಭೆಗೆ ಒಳಗೊಂಡಾಗ, ಪರೀಕ್ಷೆ, ಸವಾಲನ್ನು ಎದುರಿಸಬೇಕಾದಾಗ ದೈಹಿಕ ಪ್ರತಿಕ್ರಿಯೆಯೇ ಸ್ಟ್ರೆಸ್. ಇದು ಧನಾತ್ಮಕವೂ ಆಗಿರಬಹುದು ಅಥವಾ ಜೀವರಸ ಹಿಂಡುವ ಶಕ್ತಿಯೂ ಆಗಿರಬಹುದು. ಹಲವರು ಇಂತಹ ಒತ್ತಡದಲ್ಲಿ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಾರೆ. ಕೆಲವರು ಕೆಲಸದ ಸಮಯಮಿತಿ (ಡೆಡ್ಲೈನ್)ಯಿಂದಾಗಿ ಹೆದರಿ ಏನೂ ತೋಚದೆ, ಭ್ರಮೆಗೆ ಸಿಲುಕುತ್ತಾರೆ. ಸ್ವಲ್ಪ ಸಮಯದ ಒತ್ತಡ ಪ್ರೇರೇಪಕವೂ ಆಗಬಹುದು ಆದರೆ ದೀರ್ಘ ಸಮಯದ ಒತ್ತಡ ಆಸ್ಪತ್ರೆಗೂ ಸೇರಿಸಬಹುದು, ಆದ್ದರಿಂದ ಅದನ್ನು ನಿಭಾಯಿಸುವುದು ಅತ್ಯಗತ್ಯ.

ಇನ್ನೊಂದು ಒತ್ತಡ ಬರುವುದು ನಮ್ಮ ಸಮಾನಸ್ಕಂಧರಿಂದ (ಪೀರ್ ಪ್ರೆಷರ್). ಈ ಒತ್ತಡ ಅವರಿಂದ ಯಾವುದೋ ದುರಭ್ಯಾಸಕ್ಕೋ, ಕೆಟ್ಟ ಕೆಲಸಕ್ಕೋ ಬರಬಹುದು ಅಥವಾ ನಾವೂ ಮಿಕ್ಕವರಂತೆ ಆಗಬೇಕು ಎನ್ನುವ ನಮ್ಮ ಸ್ವಂತ ಹಂಬಲದಿಂದಲೂ ಬರಬಹುದು. ಉದಾ: ಮಾದಕ ವಸ್ತುಗಳ ಸೇವನ, ಅಸಾಮಾಜಿಕ ನಡವಳಿಕೆ, ಇತ್ಯಾದಿ.

ಒತ್ತಡ ತಡೆದುಕೊಳ್ಳಲು ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ಹಗುರವಾಗಿರಬೇಕು. ನಮ್ಮ ಜೀವನದ ಗುರಿ ಸ್ಪಷ್ಟವಾಗಿರಬೇಕು.

ಇದಕ್ಕೆ ಸಹಕಾರಿಯಾಗುವ ಹತ್ತು ನಡೆಗಳು:

1. ಕಾಫಿ, ಸಾರಾಯಿ, ತಂಬಾಕು ಮುಂತಾದ ವ್ಯಸನಗಳನ್ನು ತ್ಯಜಿಸಿ. ಇವು ಸಣ್ಣ ಪ್ರಮಾಣದಲ್ಲಿ ಉತ್ತೇಜನಕಾರಿ ಎಂದು ಎನಿಸಿದರೂ, ಕ್ರಮೇಣ ಅಭ್ಯಾಸ ಹೆಚ್ಚಾಗಿ, ಯಾವಾಗ ವ್ಯಸನಕ್ಕೆ ತಿರುಗುತ್ತದೋ ಹೇಳಲು ಸಾಧ್ಯವಿಲ್ಲ. ಖಂಡಿತಾ ನಿಮ್ಮನ್ನು ಪ್ರಪಾತಕ್ಕೆ ಎಳೆದುಕೊಂಡು ಹೋಗುತ್ತವೆ. ಇದರ ಬದಲಿಗೆ ಎಳನೀರು, ಹರ್ಬಲ್ ಟೀ, ಹಣ್ಣಿನ ರಸ (ಅಧಿಕ ಅಥವಾ ಬಿಳಿ ಸಕ್ಕರೆ ಇಲ್ಲದ), ತಂಪು ಪಾನೀಯಗಳನ್ನು ಕುಡಿಯಿರಿ. ಇದರಿಂದ ದೇಹ ದ್ರವಹೀನಗೊಳ್ಳದೆ ಸ್ಟ್ರೆಸ್ ನಿಂದ ಹೋರಾಡುವಲ್ಲಿ ಸಹಕಾರಿಯಾಗುತ್ತದೆ. ಆಹಾರ ನಿಯಮಿತವಾಗಿ ಸೇವಿಸಿ. ಊಟದಲ್ಲಿ ಸಮತೋಲನೆ ಮತ್ತು ಪೌಷ್ಟಿಕಾಂಶ ಇರಲಿ. ಪಾಚನಕ್ರಿಯೆ ಸುಗಮವಾಗಿರಲಿ. ಇದರಿಂದ ಮನಸ್ಸು ಹಗುರವಾಗಿರುತ್ತದೆ.

2. ವ್ಯಾಯಾಮ ಅಥವಾ ದೈಹಿಕ ಶ್ರಮದಲ್ಲಿ ಭಾಗವಹಿಸಿ. ಒತ್ತಡದಿಂದಾಗಿ ದೇಹದ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ನಮ್ಮ ದೇಹವನ್ನು ರಕ್ಷಿಸುವ ಹಾರ್ಮೋನುಗಳು ಇಂದಿನ ಒತ್ತಡಕ್ಕೆ ಸರಿಹೊಂದುವುದಿಲ್ಲ. ದೈಹಿಕ ವ್ಯಾಯಾಮ, ಹೊರಗಿನ ಮುಕ್ತ ವಾತಾವರಣ ನಮ್ಮ ಬಿಗುಪನ್ನು ಕಡಿಮೆ ಮಾಡಿ, ಮನಸ್ಸಿನ ವ್ಯಾಕುಲತೆಯನ್ನು ಸಡಿಲಗೊಳಿಸುತ್ತದೆ. ನಿದ್ದೆಯೂ ಸರಿಯಾಗಿ ಬರುತ್ತದೆ.

3. ಸರಿಯಾಗಿ ನಿದ್ರಿಸದಿರುವುದು ಸಹ ವ್ಯಾಕುಲತೆಯ ಲಕ್ಷಣ. ಮನಸ್ಸು ರಿಲಾಕ್ಸ್ ಆಗಿಲ್ಲದಿದ್ದಾಗ ನಿದ್ದೆ ಹಾರಿ ಹೋಗುವುದು ಸಹಜ. ಅಂತಹ ಸಮಯದಲ್ಲಿ ನಿದ್ದೆ ಮಾತ್ರೆ ಅಥವಾ ಇತರ ವ್ಯಸನಗಳಿಗೆ ಮಾರು ಹೋಗದೆ, ಮನಸ್ಸನ್ನು ಹಗುರಗೊಳಿಸುವ ಸಂಗೀತ ಕೇಳಿ. ಪ್ರಯೋಜನಕಾರಿ ಹಗುರವಾದ ಪುಸ್ತಕ ಓದಿ. ನಿಮ್ಮ ಮಲಗುವ ಕೋಣೆಯಲ್ಲಿ ನಿದ್ರೆಗೆ ಸೂಕ್ತವಾಗುವಂತಹ ವಾತಾವರಣ ಕಲ್ಪಿಸಿ, ಬೆಳಕು ಜಾಸ್ತಿ ಇಲ್ಲದಿರಲಿ. ಹೆಚ್ಚಿನ ಬುದ್ಧಿಶಕ್ತಿ ಬೇಕಾಗುವ ಕೆಲಸ ಮಲಗುವ ಮುನ್ನ ಮಾಡಬೇಡಿ. ಪ್ರತಿದಿನ (ರಾತ್ರಿ ಮತ್ತು ಬೆಳಿಗ್ಗೆ) ಅದೇ ಸಮಯಕ್ಕೆ, ಬೇಗ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಬೆಳಿಗ್ಗೆ ಮನಸ್ಸು ಹಗುರವೂ, ಉಲ್ಲಾಸ ಭರಿತವೂ ಆಗಿರುತ್ತದೆ.

4. ಮನಸ್ಸನ್ನು ತಿಳಿಗೊಳಿಸುವ ಕಸರತ್ತು ಮಾಡಿ: ಯೋಗ, ಪ್ರಾಣಾಯಾಮ, ಸ್ವಯಂ-ವಶೀಕರಣ ತಂತ್ರಗಳನ್ನು ಬಳಸಿ, ನಿಮ್ಮನ್ನು ನೀವೇ ಶಾಂತಗೊಳಿಸಲು ಕಲಿಯಿರಿ.

 

5. ಇನ್ನೊಬ್ಬರೊಂದಿಗೆ ಮಾತನಾಡಿ. ಅದು ನಿಮ್ಮ ಸಹೋದ್ಯೋಗಿ/ಸಹಪಾಠಿ, ಪೋಷಕ/ಶಿಕ್ಷಕ/ಗುರು ಅಥವಾ ಸ್ನೇಹಿತರಾಗಿರಬಹುದು. ನಿಮ್ಮ ಬಗ್ಗೆ ತೀರ್ಪು ನೀಡದ, ಕೇವಲ ಸಲಹೆ ನೀಡಬಲ್ಲ ವ್ಯಕ್ತಿಯ ಜೊತೆ ನಿಮ್ಮ ಆತಂಕ ಹಂಚಿಕೊಳ್ಳಿ. ಅಂತಹ ವ್ಯಕ್ತಿ ಇಲ್ಲದಿದ್ದಲ್ಲಿ ಪರಿಣಿತರ (ಕೌನ್ಸೆಲ್ಲಿಂಗ್) ಸಲಹೆ ಪಡೆಯಿರಿ.

6. ಸ್ಟ್ರೆಸ್ ಡೈರಿ ಬರೆಯಿರಿ. ನಿಮ್ಮ ಆತಂಕದ ಸನ್ನಿವೇಶಗಳು, ಅನುಭವಗಳು, ಪರಿಹಾರಗಳನ್ನು ಒಂದು ದಿನಚರಿ ಪುಸ್ತಕದಲ್ಲಿ ಬರೆದಿಡಿ. ಪ್ರತಿಯೊಂದು ಸನ್ನಿವೇಶಕ್ಕೂ/ಕಾರಣಕ್ಕೂ ಒಂದು ಸೂಚ್ಯಾಂಕ ನೀಡಿ, ಅತ್ಯಂತ ಹೆಚ್ಚಿನ ಒತ್ತಡಕ್ಕೆ 10, ತೀರಾ ಕಡಿಮೆಗೆ 1, ಹೀಗೆ ಅಂಕಗಳನ್ನು ನೀಡುತ್ತಾ ಬನ್ನಿ. ಕೆಲವೇ ದಿನಗಳಲ್ಲಿ ನಿಮ್ಮ ಆತಂಕಕ್ಕೆ ಕಾರಣ ಮತ್ತು ಪರಿಹಾರ ಎರಡೂ ನಿಮ್ಮ ಮುಂದೆ ಇರುತ್ತದೆ. ಇದರಿಂದ ಅಂತಹ ಸನ್ನಿವೇಶದಿಂದ ದೂರವಿರಲು ಮತ್ತು ಧೈರ್ಯದಿಂದ ಸೆಣಸಾಡುವ ಉಪಾಯ ದೊರಕುತ್ತದೆ.

7. ನಿಯಂತ್ರಣ ನಿಮ್ಮ ಕೈಗೆ ತೆಗೆದುಕೊಳ್ಳಿ. ನಿಮ್ಮನ್ನು ನಿಯಂತ್ರಿಸುವ “ರಿಮೋಟ್” ಬೇರೆಯವರ ಕೈಗೆ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು, ಆದಷ್ಟು ಮಟ್ಟಿಗೆ, ನೀವೇ ಪರಿಹರಿಸಿಕೊಳ್ಳಿ. ಸಣ್ಣ ಪುಟ್ಟ ತೊಂದರೆಗೂ ಇನ್ನೊಬ್ಬರ ಬಳಿ ಓಡಿ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಡಿ. ಅವರು ನಿಮ್ಮ ದುರ್ಬಲತೆಯ ದುರುಪಯೋಗ ಮಾಡಿಕೊಳ್ಳಬಹುದು. ಅವಶ್ಯಕತೆ ಎನಿಸಿದಾಗ ಪರಿಣಿತರ ಸಲಹೆ ಪಡೆಯಿರಿ.

8. ಸಮಯ ನಿರ್ವಹಣೆ ಕಲಿಯಿರಿ. ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದಿದ್ದಾಗ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ನಿಮ್ಮ ಕೆಲಸದ, ಆದ್ಯತೆಯ, ಸಮಯದ, ಪಟ್ಟಿ ಮಾಡಿಕೊಂಡು ಅದರಂತೆ ಚಲಿಸಿ. ಯಾವುದು ಮುಖ್ಯ ಮತ್ತು ಅವಸರವೋ ಅದನ್ನು ಮೊದಲು ಮಾಡಿ. ಮುಖ್ಯವಲ್ಲದ, ಅವಸರವಿಲ್ಲದ ಕೆಲಸ ಸಮಯ ಸಿಕ್ಕಾಗ ಮಾಡಿ.

9. ಇಲ್ಲ ಎನ್ನುವುದನ್ನು ಕಲಿಯಿರಿ. ದಾಕ್ಷಿಣ್ಯಕ್ಕೆ ಬಲಿಯಾಗಿ ಕೈಯಲ್ಲಾಗದ/ಮನಸ್ಸು ಒಪ್ಪದ ಕೆಲಸಕ್ಕೆ ಒಪ್ಪಿಕೊಳ್ಳಬೇಡಿ. ಇಲ್ಲ ಎನ್ನುವುದನ್ನು ಕಲಿಯಿರಿ. ನೀವು “ಇಲ್ಲ” ಎಂದರೆ “ಇಲ್ಲ” ಎನ್ನುವುದನ್ನು ಬೇರೆಯವರಿಗೆ ಅರ್ಥವಾಗುವಂತೆ, ನಯವಾಗಿ ತಿಳಿಸಿ. ಪ್ರತಿಯೊಂದು “ಇಲ್ಲ”ವೂ ಜಗಳಕ್ಕೆ ಕಾರಣವಾಗುವುದಿಲ್ಲ.

10. ಅರೋಗ್ಯ ಸರಿಯಿಲ್ಲದಿದ್ದರೆ ವಿಶ್ರಮಿಸಿ. ಅನಾರೋಗ್ಯದಲ್ಲಿ ಹೆಚ್ಚಿನ ಕೆಲಸ/ಯೋಚನೆ ಮಾಡಿ ಆರೋಗ್ಯ ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಖಿನ್ನತೆ ಇದೆ ಎಂದೆನಿಸಿದರೆ ವೈದ್ಯಕೀಯ ಸಲಹೆ/ಸಮಾಲೋಚನೆ ಪಡೆಯಿರಿ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...