Homeಮುಖಪುಟವಿಮರ್ಶಾತ್ಮಕ ಚಿಂತನೆ (Critical thinking) ಪ್ರಾರಂಭಿಸಲು ಒಂದು ಸರಳ ವಿಧಾನ ಇಲ್ಲಿದೆ

ವಿಮರ್ಶಾತ್ಮಕ ಚಿಂತನೆ (Critical thinking) ಪ್ರಾರಂಭಿಸಲು ಒಂದು ಸರಳ ವಿಧಾನ ಇಲ್ಲಿದೆ

- Advertisement -
- Advertisement -

ಜೀವನ ಕಲೆಗಳು : ಅಂಕಣ – 10

ವಿಮರ್ಶಾತ್ಮಕ ಚಿಂತನೆ

ಸ್ಪಷ್ಟ ಮತ್ತು ತರ್ಕಬದ್ಧವಾಗಿ ಯೋಚಿಸುವ ಕಲೆಯನ್ನು ವಿಮರ್ಶಾತ್ಮಕ ಚಿಂತನೆ ಎಂದು ಕರೆಯಬಹುದು. ಯೋಚನೆಯ ಒಂದೊಂದು ಭಾಗಗಳನ್ನು ಅಥವಾ ಯೋಚನೆ/ಹೇಳಿಕೆ/ವಾದಗಳ ನಡುವಿನ ಕೊಂಡಿಯನ್ನು ಬೇರೆ ಬೇರೆ ಪಾರ್ಶ್ವದಿಂದ ತರ್ಕಬದ್ಧವಾಗಿ ವಿಶ್ಲೇಷಿಸಿ, ಅರ್ಥಮಾಡಿಕೊಂಡು, ಅದರ ಆಧಾರದ ಮೇಲೆ ಒಂದು ನಿರ್ಧಾರಕ್ಕೆ ಬರುವುದು ವಿಮರ್ಶಾತ್ಮಕ ಚಿಂತನೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಯೋಗವನ್ನು ಅಪ-ಪ್ರಚಾರ (ಫೇಕ್-ನ್ಯೂಸ್) ಗುರುತಿಸಲು ಬಳಸಬಹುದು. ವಿವಿಧ ಮೂಲಗಳಿಂದ ದಿನನಿತ್ಯ ಬರುವ ಮಾಹಿತಿಯ ಮಹಾಪೂರದ ಮೂಕ ಪ್ರೇಕ್ಷಕ/ವಾಚಕ/ಸಂವಾಹಕರಾಗದೆ, ಸತ್ಯಾಸತ್ಯತೆಯನ್ನು ಅರಿಯುವ ವಿವೇಕವೇ ವಿಮರ್ಶಾತ್ಮಕ ಚಿಂತನೆ. ಇದಕ್ಕೆ ಅನೇಕ ಪೂರಕ ಕಲೆಗಳು ಇರಬೇಕು, ಉದಾ: ಅವಲೋಕನ, ವಿಶ್ಲೇಷಣ, ಗ್ರಹಣಶಕ್ತಿ, ವ್ಯಕ್ತಪಡಿಸುವಿಕೆ, ಊಹೆ, ವಿವರಣೆ, ಪ್ರಯೋಗ, ಇತ್ಯಾದಿ. ಇದನ್ನು ವ್ಯಕ್ತಿಯ ಜಾಣತನ ಎಂದರೂ ಸರಿ.

ವಿಮರ್ಶಾತ್ಮಕ ಚಿಂತನೆಯುಳ್ಳ ವ್ಯಕ್ತಿ:

·         ವಿವಿಧ ಯೋಚನೆ/ಹೇಳಿಕೆಗಳ ಪರಸ್ಪರ ಸಂಬಂಧವನ್ನು ಅರ್ಥ ಮಾಡಿಕೊಳ್ಳುವರು.

·         ಈ ವಿವಿಧ ಯೋಚನೆ/ಹೇಳಿಕೆ/ವಾದಗಳ ಮಹತ್ವ/ಸಂಗತವನ್ನು ಇತ್ಯರ್ಥಮಾಡಬಲ್ಲರು.

·         ಅವಶ್ಯಕತೆಗೆ ಬೇಕಾದಷ್ಟು ಮಾಹಿತಿಯನ್ನು ಕಲೆಹಾಕಬಲ್ಲರು.

·         ಪರ/ವಿರುದ್ಧ ವಾದಗಳನ್ನು ಗುರುತಿಸಿ/ಸೃಷ್ಟಿಸಿ/ಅವಲೋಕಿಸಬಲ್ಲರು.

·         ವಾದದಲ್ಲಿ ಇರುವ ಅಸಮರ್ಥತೆ, ತರ್ಕದ ಕೊರತೆಯನ್ನು ಗುರುತಿಸಬಲ್ಲರು.

·         ತಮ್ಮ ಸ್ವಂತ ಅರ್ಥೈಸುವಿಕೆ ಅಥವಾ ವಾದ/ನಂಬಿಕೆ/ಮೌಲ್ಯವನ್ನು ಸಮರ್ಥಿಸಿಕೊಳ್ಳಬಲ್ಲರು.

·         ಸಮಸ್ಯೆಯನ್ನು ಸ್ಥಿರ ಮತ್ತು ವ್ಯವಸ್ಥಿತ ರೀತಿಯಲ್ಲಿ ಎದುರಿಸಬಲ್ಲರು.

·         ವಿಮರ್ಶಾತ್ಮಕ ರೀತಿಯಲ್ಲಿ ಯೋಚಿಸಿ, ಸಮಸ್ಯೆಗೆ ಉತ್ತಮ ಪರಿಹಾರ ದೊರಕಿಸಿಕೊಡಬಲ್ಲರು.

ಎಡ್ವರ್ಡ್ ಡಿ. ಬೋನೋ ಅವರ “ಆರು ಯೋಚಿಸುವ ಟೋಪಿಗಳು” (ಸಿಕ್ಸ್ ಥಿಂಕಿಂಗ್ ಹ್ಯಾಟ್ಸ್) ಎಂಬ ಮಾದರಿ (ಮಾಡಲ್)ವ್ಯಕ್ತಿಯ ಮತ್ತು ಗುಂಪಿನ ವಿಮರ್ಶಾತ್ಮಕ ಚಿಂತನೆಗೆ ಸಹಕಾರಿಯಾಗಿರುತ್ತದೆ. ಇದರ ಪ್ರಕಾರ ಯೋಚಿಸುವವರು ತಮ್ಮ ಬುದ್ಧಿಯನ್ನು ಶಕ್ತಿಶಾಲಿ ಅಸ್ತ್ರವನ್ನಾಗಿ ಬಳಸಿ, ಗಮನವನ್ನು ಕೇಂದ್ರೀಕರಿಸಿ, ತಕ್ಕ ನಿರ್ಧಾರಕ್ಕೆ ಬರಬಹುದು. ಪ್ರತಿಯೊಂದು ಟೋಪಿಗೂ ಬೇರೆ-ಬೇರೆ ಬಣ್ಣ ಕೊಡಲಾಗಿದ್ದು ಪ್ರತಿಯೊಂದು ಬಣ್ಣ ಒಂದು ನಿರ್ದಿಷ್ಟ ಯೋಚನಾ ಲಹರಿ/ವಾದವನ್ನು ಉತ್ತೇಜಿಸುತ್ತದೆ. ಟೋಪಿ ಬದಲಾಯಿಸಿ ಇನ್ನೊಂದು ರೀತಿಯಲ್ಲಿ ಯೋಚಿಸಿ ಅಥವಾ ಚರ್ಚಿಸಬಹುದು, ಇದರಿಂದ ವಿವಿಧ ಪಾರ್ಶ್ವಗಳ ದರ್ಶನವೂ ಆಗುತ್ತದೆ, ಏಕೆಂದರೆ ಪ್ರತಿಯೊಂದು ವಾದ/ಪಕ್ಷವೂ ಅಷ್ಟೇ ಮಹತ್ವದ್ದಾಗಿರುತ್ತದೆ.

ಬಿಳಿ ಟೋಪಿ:ಇದನ್ನು ಧರಿಸಿ ನೀವು ಇರುವ ಮಾಹಿತಿ/ತಥ್ಯವನ್ನು ಗಮನದಲ್ಲಿಟ್ಟುಕೊಂಡು, ವಿಶ್ಲೇಷಿಸಿ, ಹಿಂದಿನ ಆಗು-ಹೋಗುಗಳನ್ನು ಪರಿಗಣಿಸಿ, ಮಾಹಿತಿಯಲ್ಲಿ ಇರುವ ಕೊರತೆಯನ್ನು ಭರಿಸಿಕೊಂಡು ಅಥವಾ ಅದಕ್ಕೆ ಪರ್ಯಾಯ ಹುಡುಕಿಕೊಂಡು, ಯಾವ ನಿರ್ಧಾರಕ್ಕೆ ಬರಬಹುದು ಎಂದು ಯೋಚಿಸಬಹುದು.

ಕೆಂಪು ಟೋಪಿ:ಇದನ್ನು ಧರಿಸಿ ಸಮಸ್ಯೆಗಳತ್ತ ನಿಮ್ಮ ಒಳಗಿನ ಅನಿಸಿಕೆ, ಭಾವನೆಗಳನ್ನು ಬಳಸಿ ಯೋಚಿಸಿ. ಹಾಗೇ ಇತರರು ಹೇಗೆ ಭಾವನಾತ್ಮಕವಾಗಿ ಮತ್ತು ನಿಮ್ಮ ತರ್ಕದ ಬಗ್ಗೆ ಸರಿಯಾಗಿ ಗೊತ್ತಿಲ್ಲದವರು ಹೇಗೆ ಸ್ಪಂದಿಸಬಹುದು ಎಂಬುದನ್ನು ಯೋಚಿಸಿ.

ನೀಲಿ ಟೋಪಿ:ಇದನ್ನು ಧರಿಸಿ ನೀವು ಪ್ರಕ್ರಿಯೆಯಲ್ಲಿರುವ ನಿಯಂತ್ರಣದಿಂದ ಹತೋಟಿಯ ಕೆಲಸ ಮಾಡಬಹುದು. ಯೋಚನೆ ತಂಡದ ಮುಖ್ಯಸ್ಥ ಇದನ್ನು ಬಳಸಿ ಹೊಸ ಯೋಚನೆಗೆ ಕರೆ ನೀಡಬಹುದು ಅಥವಾ ಯೋಚನೆಗಳು ದಾರಿ ತಪ್ಪಿ ಹೋಗುವುದನ್ನು ತಡೆಯಬಹುದು.

ಹಸಿರು ಟೋಪಿ:ಇದನ್ನು ಧರಿಸಿ ನೀವು ಸೃಜನಶೀಲತೆಯಿಂದ ಯೋಚಿಸಬಹುದು. ಇದರಿಂದ ನೀವು ಹೊಸ ಅಥವಾ ಹಳೆಯ ಸಮಸ್ಯೆಗೆ ಹೊಸ ರೀತಿಯ ಪರಿಹಾರ ಕಂಡು ಹಿಡಿಯಬಹುದು. ಇದು ಮುಕ್ತ ಯೋಚನೆಗೆ ಸಹಕಾರಿಯಾಗಿದ್ದು, ಇದರ ಬಗ್ಗೆ ಹೆಚ್ಚಿನ ವಿವಾದ ಇರುವುದಿಲ್ಲ.

ಹಳದಿ ಟೋಪಿ:ಇದನ್ನು ಧರಿಸಿ ನೀವು ಧನಾತ್ಮಕವಾಗಿ ಯೋಚಿಸಬಹುದು. ಇದು ಸಕರಾತ್ಮಕ ದೃಷ್ಟಿಕೋಣವಾಗಿರುವುದರಿಂಡ ಎಲ್ಲಾ ವಿಧವಾದ ಪ್ರಯೋಜನ ಮತ್ತು ಲಾಭಗಳ ಬಗ್ಗೆ ಯೋಚಿಸಬಹುದು. ಇದು ನಿಮ್ಮನ್ನು ಕಷ್ಟಕಾಲದಲ್ಲೂ ಮುಂದೆ ಹೋಗಲು ಪ್ರೇರೇಪಿಸುತ್ತದೆ.

ಕರಿ ಟೋಪಿ:ಇದನ್ನು ಧರಿಸಿ ನಿರ್ಧಾರದ ಬಗ್ಗೆ ಜಾಗೃತೆಯಿಂದ ಮತ್ತು ರಕ್ಷಣೆಯ ದೃಷ್ಟಿಯಿಂದ ಎಲ್ಲಾ ಋಣಾತ್ಮಕ ಪರಿಣಾಮ, ಅನಿಸಿಕೆಗಳ ಬಗ್ಗೆ ಯೋಚಿಸಿ. ಯಾವುದು ನಡೆಯಲಾರದು ಎಂದು ಯೋಚಿಸಿ ಅದರಲ್ಲಿರುವ ಋಣಾತ್ಮಕ ಅಂಶಗಳನ್ನು ಗುರುತಿಸಿ. ಇದರಿಂದ ಅವುಗಳನ್ನು ಬದಲಾಯಿಸಲು, ಹೋಗಲಾಡಿಸಲು ಅಥವಾ ಎದುರಿಸಲು ಪರ್ಯಾಯ ಮಾರ್ಗ ಹುಡುಕಲು ನೆರವಾಗುತ್ತದೆ. ಕರಿ ಟೋಪಿ ನಿಮ್ಮ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ ಆದರೆ ಬಿದ್ದಲ್ಲಿ ಏಳುವುದಕ್ಕೆ ಸಹಕಾರಿಯಾಗಿರುತ್ತದೆ. ಇದು ನಿಮ್ಮ ಯೋಜನೆಯ ಅತ್ಯಂತ ಮಹತ್ವದ ಟೋಪಿ ಏಕೆಂದರೆ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವವರು ರಸ್ತೆಯ ಅಡೆತಡೆಗಳನ್ನು ನಿರ್ಲಕ್ಷಿಸಿರುತ್ತಾರೆ ಮತ್ತು ಅದಕ್ಕೆ ತಯಾರಿ ನಡೆಸಿರುವುದಿಲ್ಲ.

ವಿಮರ್ಶಾತ್ಮಕ ಚಿಂತನೆ ಪ್ರಾರಂಭಿಸಲು ಒಂದು ಸರಳ ವಿಧಾನ ಪ್ರಯೋಗಿಸಿ ನೋಡಿ:

ಯಾರಾದರೂ ನಿಮಗೆ ಇತ್ತೀಚೆಗೆ ಹೇಳಿದ ಮಾಹಿತಿ/ಹೇಳಿಕೆ ನೆನಪಿಸಿಕೊಳ್ಳಿ. ನಂತರ ಕೆಳಗಿನ ಪ್ರಶ್ನೆ ಸಾಲಾಗಿ ಕೇಳಿ ಮತ್ತು ಉತ್ತರಿಸಿಕೊಳ್ಳಿ.

ಯಾರು ಹೇಳಿದರು?
ನಿಮಗೆ ಅವರು ತಿಳಿದವರೇ? ಅಧಿಕಾರಯುಕ್ತ ಸ್ಥಾನದಲ್ಲಿ ಇರುವವರೇ? ಯಾರು ಹೇಳಿದರು ಎಂಬುದು ಮಹತ್ವವೇ?

ಏನು ಹೇಳಿದರು?
ಅವರು ನಿಮಗೆ ತಥ್ಯಗಳನ್ನು ಅಥವಾ ಅಭಿಪ್ರಾಯವನ್ನು ತಿಳಿಸಿದರೇ? ಎಲ್ಲಾ ವಿಷಯಗಳನ್ನು ತಿಳಿಸಿದರೋ ಥವಾ ಕೆಲವನ್ನು ತಿಳಿಸದೇ ಬಿಟ್ಟರೇ?

ಎಲ್ಲಿ ಹೇಳಿದರು?
ಸಾರ್ವಜನಿಕವಾಗಿಯೋ ಅಥವಾ ಖಾಸಗಿಯಾಗಿಯೋ? ಇತರರು ಅದಕ್ಕೆ ಪ್ರತಿಕ್ರಯಿಸಲು ಅಥವಾ ಬೇರೆ ಕಡೆಯ ಚಿತ್ರಣ ನೀಡಲು ಅವಕಾಶವಿತ್ತೇ?

ಯಾವಾಗ ಹೇಳಿದರು?
ಯಾವುದೇ ಒಂದು ಮುಖ್ಯ ಸಂದರ್ಭದ ಮುಂಚೆಯೋ, ಮಧ್ಯದಲ್ಲಿಯೋ ಅಥವಾ ನಂತರವೋ? ಸಮಯ ವಿಷಯಕ್ಕೆ ಅಷ್ಟು ಮಹತ್ವವೇ?

ಯಾಕೆ ಹೇಳಿದರು?
ಅವರ ಅಭಿಪ್ರಾಯ ನೀಡುವುದಕ್ಕೆ ಕಾರಣ ತಿಳಿಸಿದರೇ? ಇನ್ಯಾರನ್ನಾದರೂ ಚೆನ್ನಾಗಿ ಅಥವಾ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದರೇ?

ಹೇಗೆ ಹೇಳಿದರು?
ಹೇಳುವಾಗ ಅವರು ಸಂತೋಷದಿಂದ ಅಥವಾ ದುಃಖದಲ್ಲಿ ಅಥವಾ ಕೋಪದಲ್ಲಿ ಅಥವಾ ಅನ್ಯಮನಸ್ಕರಾಗಿ ಇದ್ದರೇ? ಅವರು ಹೇಳಿದ್ದು ನಿಮಗೆ ಅರ್ಥವಾಯಿತೇ?

ಈ ಪ್ರಶ್ನೋತ್ತರಗಳ ನಂತರ ನಿಮಗೆ ವಿಮರ್ಶಾತ್ಮಕ ಚಿಂತನೆ ಏನು, ಹೇಗೆ ಎನ್ನುವುದು ಸಂಪೂರ್ಣ ಮನವರಿಕೆಯಾಗಿರಬಹುದು ಎಂದು ತಿಳಿದಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...