Homeಮುಖಪುಟವಿಮರ್ಶಾತ್ಮಕ ಚಿಂತನೆ (Critical thinking) ಪ್ರಾರಂಭಿಸಲು ಒಂದು ಸರಳ ವಿಧಾನ ಇಲ್ಲಿದೆ

ವಿಮರ್ಶಾತ್ಮಕ ಚಿಂತನೆ (Critical thinking) ಪ್ರಾರಂಭಿಸಲು ಒಂದು ಸರಳ ವಿಧಾನ ಇಲ್ಲಿದೆ

- Advertisement -
- Advertisement -

ಜೀವನ ಕಲೆಗಳು : ಅಂಕಣ – 10

ವಿಮರ್ಶಾತ್ಮಕ ಚಿಂತನೆ

ಸ್ಪಷ್ಟ ಮತ್ತು ತರ್ಕಬದ್ಧವಾಗಿ ಯೋಚಿಸುವ ಕಲೆಯನ್ನು ವಿಮರ್ಶಾತ್ಮಕ ಚಿಂತನೆ ಎಂದು ಕರೆಯಬಹುದು. ಯೋಚನೆಯ ಒಂದೊಂದು ಭಾಗಗಳನ್ನು ಅಥವಾ ಯೋಚನೆ/ಹೇಳಿಕೆ/ವಾದಗಳ ನಡುವಿನ ಕೊಂಡಿಯನ್ನು ಬೇರೆ ಬೇರೆ ಪಾರ್ಶ್ವದಿಂದ ತರ್ಕಬದ್ಧವಾಗಿ ವಿಶ್ಲೇಷಿಸಿ, ಅರ್ಥಮಾಡಿಕೊಂಡು, ಅದರ ಆಧಾರದ ಮೇಲೆ ಒಂದು ನಿರ್ಧಾರಕ್ಕೆ ಬರುವುದು ವಿಮರ್ಶಾತ್ಮಕ ಚಿಂತನೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಯೋಗವನ್ನು ಅಪ-ಪ್ರಚಾರ (ಫೇಕ್-ನ್ಯೂಸ್) ಗುರುತಿಸಲು ಬಳಸಬಹುದು. ವಿವಿಧ ಮೂಲಗಳಿಂದ ದಿನನಿತ್ಯ ಬರುವ ಮಾಹಿತಿಯ ಮಹಾಪೂರದ ಮೂಕ ಪ್ರೇಕ್ಷಕ/ವಾಚಕ/ಸಂವಾಹಕರಾಗದೆ, ಸತ್ಯಾಸತ್ಯತೆಯನ್ನು ಅರಿಯುವ ವಿವೇಕವೇ ವಿಮರ್ಶಾತ್ಮಕ ಚಿಂತನೆ. ಇದಕ್ಕೆ ಅನೇಕ ಪೂರಕ ಕಲೆಗಳು ಇರಬೇಕು, ಉದಾ: ಅವಲೋಕನ, ವಿಶ್ಲೇಷಣ, ಗ್ರಹಣಶಕ್ತಿ, ವ್ಯಕ್ತಪಡಿಸುವಿಕೆ, ಊಹೆ, ವಿವರಣೆ, ಪ್ರಯೋಗ, ಇತ್ಯಾದಿ. ಇದನ್ನು ವ್ಯಕ್ತಿಯ ಜಾಣತನ ಎಂದರೂ ಸರಿ.

ವಿಮರ್ಶಾತ್ಮಕ ಚಿಂತನೆಯುಳ್ಳ ವ್ಯಕ್ತಿ:

·         ವಿವಿಧ ಯೋಚನೆ/ಹೇಳಿಕೆಗಳ ಪರಸ್ಪರ ಸಂಬಂಧವನ್ನು ಅರ್ಥ ಮಾಡಿಕೊಳ್ಳುವರು.

·         ಈ ವಿವಿಧ ಯೋಚನೆ/ಹೇಳಿಕೆ/ವಾದಗಳ ಮಹತ್ವ/ಸಂಗತವನ್ನು ಇತ್ಯರ್ಥಮಾಡಬಲ್ಲರು.

·         ಅವಶ್ಯಕತೆಗೆ ಬೇಕಾದಷ್ಟು ಮಾಹಿತಿಯನ್ನು ಕಲೆಹಾಕಬಲ್ಲರು.

·         ಪರ/ವಿರುದ್ಧ ವಾದಗಳನ್ನು ಗುರುತಿಸಿ/ಸೃಷ್ಟಿಸಿ/ಅವಲೋಕಿಸಬಲ್ಲರು.

·         ವಾದದಲ್ಲಿ ಇರುವ ಅಸಮರ್ಥತೆ, ತರ್ಕದ ಕೊರತೆಯನ್ನು ಗುರುತಿಸಬಲ್ಲರು.

·         ತಮ್ಮ ಸ್ವಂತ ಅರ್ಥೈಸುವಿಕೆ ಅಥವಾ ವಾದ/ನಂಬಿಕೆ/ಮೌಲ್ಯವನ್ನು ಸಮರ್ಥಿಸಿಕೊಳ್ಳಬಲ್ಲರು.

·         ಸಮಸ್ಯೆಯನ್ನು ಸ್ಥಿರ ಮತ್ತು ವ್ಯವಸ್ಥಿತ ರೀತಿಯಲ್ಲಿ ಎದುರಿಸಬಲ್ಲರು.

·         ವಿಮರ್ಶಾತ್ಮಕ ರೀತಿಯಲ್ಲಿ ಯೋಚಿಸಿ, ಸಮಸ್ಯೆಗೆ ಉತ್ತಮ ಪರಿಹಾರ ದೊರಕಿಸಿಕೊಡಬಲ್ಲರು.

ಎಡ್ವರ್ಡ್ ಡಿ. ಬೋನೋ ಅವರ “ಆರು ಯೋಚಿಸುವ ಟೋಪಿಗಳು” (ಸಿಕ್ಸ್ ಥಿಂಕಿಂಗ್ ಹ್ಯಾಟ್ಸ್) ಎಂಬ ಮಾದರಿ (ಮಾಡಲ್)ವ್ಯಕ್ತಿಯ ಮತ್ತು ಗುಂಪಿನ ವಿಮರ್ಶಾತ್ಮಕ ಚಿಂತನೆಗೆ ಸಹಕಾರಿಯಾಗಿರುತ್ತದೆ. ಇದರ ಪ್ರಕಾರ ಯೋಚಿಸುವವರು ತಮ್ಮ ಬುದ್ಧಿಯನ್ನು ಶಕ್ತಿಶಾಲಿ ಅಸ್ತ್ರವನ್ನಾಗಿ ಬಳಸಿ, ಗಮನವನ್ನು ಕೇಂದ್ರೀಕರಿಸಿ, ತಕ್ಕ ನಿರ್ಧಾರಕ್ಕೆ ಬರಬಹುದು. ಪ್ರತಿಯೊಂದು ಟೋಪಿಗೂ ಬೇರೆ-ಬೇರೆ ಬಣ್ಣ ಕೊಡಲಾಗಿದ್ದು ಪ್ರತಿಯೊಂದು ಬಣ್ಣ ಒಂದು ನಿರ್ದಿಷ್ಟ ಯೋಚನಾ ಲಹರಿ/ವಾದವನ್ನು ಉತ್ತೇಜಿಸುತ್ತದೆ. ಟೋಪಿ ಬದಲಾಯಿಸಿ ಇನ್ನೊಂದು ರೀತಿಯಲ್ಲಿ ಯೋಚಿಸಿ ಅಥವಾ ಚರ್ಚಿಸಬಹುದು, ಇದರಿಂದ ವಿವಿಧ ಪಾರ್ಶ್ವಗಳ ದರ್ಶನವೂ ಆಗುತ್ತದೆ, ಏಕೆಂದರೆ ಪ್ರತಿಯೊಂದು ವಾದ/ಪಕ್ಷವೂ ಅಷ್ಟೇ ಮಹತ್ವದ್ದಾಗಿರುತ್ತದೆ.

ಬಿಳಿ ಟೋಪಿ:ಇದನ್ನು ಧರಿಸಿ ನೀವು ಇರುವ ಮಾಹಿತಿ/ತಥ್ಯವನ್ನು ಗಮನದಲ್ಲಿಟ್ಟುಕೊಂಡು, ವಿಶ್ಲೇಷಿಸಿ, ಹಿಂದಿನ ಆಗು-ಹೋಗುಗಳನ್ನು ಪರಿಗಣಿಸಿ, ಮಾಹಿತಿಯಲ್ಲಿ ಇರುವ ಕೊರತೆಯನ್ನು ಭರಿಸಿಕೊಂಡು ಅಥವಾ ಅದಕ್ಕೆ ಪರ್ಯಾಯ ಹುಡುಕಿಕೊಂಡು, ಯಾವ ನಿರ್ಧಾರಕ್ಕೆ ಬರಬಹುದು ಎಂದು ಯೋಚಿಸಬಹುದು.

ಕೆಂಪು ಟೋಪಿ:ಇದನ್ನು ಧರಿಸಿ ಸಮಸ್ಯೆಗಳತ್ತ ನಿಮ್ಮ ಒಳಗಿನ ಅನಿಸಿಕೆ, ಭಾವನೆಗಳನ್ನು ಬಳಸಿ ಯೋಚಿಸಿ. ಹಾಗೇ ಇತರರು ಹೇಗೆ ಭಾವನಾತ್ಮಕವಾಗಿ ಮತ್ತು ನಿಮ್ಮ ತರ್ಕದ ಬಗ್ಗೆ ಸರಿಯಾಗಿ ಗೊತ್ತಿಲ್ಲದವರು ಹೇಗೆ ಸ್ಪಂದಿಸಬಹುದು ಎಂಬುದನ್ನು ಯೋಚಿಸಿ.

ನೀಲಿ ಟೋಪಿ:ಇದನ್ನು ಧರಿಸಿ ನೀವು ಪ್ರಕ್ರಿಯೆಯಲ್ಲಿರುವ ನಿಯಂತ್ರಣದಿಂದ ಹತೋಟಿಯ ಕೆಲಸ ಮಾಡಬಹುದು. ಯೋಚನೆ ತಂಡದ ಮುಖ್ಯಸ್ಥ ಇದನ್ನು ಬಳಸಿ ಹೊಸ ಯೋಚನೆಗೆ ಕರೆ ನೀಡಬಹುದು ಅಥವಾ ಯೋಚನೆಗಳು ದಾರಿ ತಪ್ಪಿ ಹೋಗುವುದನ್ನು ತಡೆಯಬಹುದು.

ಹಸಿರು ಟೋಪಿ:ಇದನ್ನು ಧರಿಸಿ ನೀವು ಸೃಜನಶೀಲತೆಯಿಂದ ಯೋಚಿಸಬಹುದು. ಇದರಿಂದ ನೀವು ಹೊಸ ಅಥವಾ ಹಳೆಯ ಸಮಸ್ಯೆಗೆ ಹೊಸ ರೀತಿಯ ಪರಿಹಾರ ಕಂಡು ಹಿಡಿಯಬಹುದು. ಇದು ಮುಕ್ತ ಯೋಚನೆಗೆ ಸಹಕಾರಿಯಾಗಿದ್ದು, ಇದರ ಬಗ್ಗೆ ಹೆಚ್ಚಿನ ವಿವಾದ ಇರುವುದಿಲ್ಲ.

ಹಳದಿ ಟೋಪಿ:ಇದನ್ನು ಧರಿಸಿ ನೀವು ಧನಾತ್ಮಕವಾಗಿ ಯೋಚಿಸಬಹುದು. ಇದು ಸಕರಾತ್ಮಕ ದೃಷ್ಟಿಕೋಣವಾಗಿರುವುದರಿಂಡ ಎಲ್ಲಾ ವಿಧವಾದ ಪ್ರಯೋಜನ ಮತ್ತು ಲಾಭಗಳ ಬಗ್ಗೆ ಯೋಚಿಸಬಹುದು. ಇದು ನಿಮ್ಮನ್ನು ಕಷ್ಟಕಾಲದಲ್ಲೂ ಮುಂದೆ ಹೋಗಲು ಪ್ರೇರೇಪಿಸುತ್ತದೆ.

ಕರಿ ಟೋಪಿ:ಇದನ್ನು ಧರಿಸಿ ನಿರ್ಧಾರದ ಬಗ್ಗೆ ಜಾಗೃತೆಯಿಂದ ಮತ್ತು ರಕ್ಷಣೆಯ ದೃಷ್ಟಿಯಿಂದ ಎಲ್ಲಾ ಋಣಾತ್ಮಕ ಪರಿಣಾಮ, ಅನಿಸಿಕೆಗಳ ಬಗ್ಗೆ ಯೋಚಿಸಿ. ಯಾವುದು ನಡೆಯಲಾರದು ಎಂದು ಯೋಚಿಸಿ ಅದರಲ್ಲಿರುವ ಋಣಾತ್ಮಕ ಅಂಶಗಳನ್ನು ಗುರುತಿಸಿ. ಇದರಿಂದ ಅವುಗಳನ್ನು ಬದಲಾಯಿಸಲು, ಹೋಗಲಾಡಿಸಲು ಅಥವಾ ಎದುರಿಸಲು ಪರ್ಯಾಯ ಮಾರ್ಗ ಹುಡುಕಲು ನೆರವಾಗುತ್ತದೆ. ಕರಿ ಟೋಪಿ ನಿಮ್ಮ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ ಆದರೆ ಬಿದ್ದಲ್ಲಿ ಏಳುವುದಕ್ಕೆ ಸಹಕಾರಿಯಾಗಿರುತ್ತದೆ. ಇದು ನಿಮ್ಮ ಯೋಜನೆಯ ಅತ್ಯಂತ ಮಹತ್ವದ ಟೋಪಿ ಏಕೆಂದರೆ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವವರು ರಸ್ತೆಯ ಅಡೆತಡೆಗಳನ್ನು ನಿರ್ಲಕ್ಷಿಸಿರುತ್ತಾರೆ ಮತ್ತು ಅದಕ್ಕೆ ತಯಾರಿ ನಡೆಸಿರುವುದಿಲ್ಲ.

ವಿಮರ್ಶಾತ್ಮಕ ಚಿಂತನೆ ಪ್ರಾರಂಭಿಸಲು ಒಂದು ಸರಳ ವಿಧಾನ ಪ್ರಯೋಗಿಸಿ ನೋಡಿ:

ಯಾರಾದರೂ ನಿಮಗೆ ಇತ್ತೀಚೆಗೆ ಹೇಳಿದ ಮಾಹಿತಿ/ಹೇಳಿಕೆ ನೆನಪಿಸಿಕೊಳ್ಳಿ. ನಂತರ ಕೆಳಗಿನ ಪ್ರಶ್ನೆ ಸಾಲಾಗಿ ಕೇಳಿ ಮತ್ತು ಉತ್ತರಿಸಿಕೊಳ್ಳಿ.

ಯಾರು ಹೇಳಿದರು?
ನಿಮಗೆ ಅವರು ತಿಳಿದವರೇ? ಅಧಿಕಾರಯುಕ್ತ ಸ್ಥಾನದಲ್ಲಿ ಇರುವವರೇ? ಯಾರು ಹೇಳಿದರು ಎಂಬುದು ಮಹತ್ವವೇ?

ಏನು ಹೇಳಿದರು?
ಅವರು ನಿಮಗೆ ತಥ್ಯಗಳನ್ನು ಅಥವಾ ಅಭಿಪ್ರಾಯವನ್ನು ತಿಳಿಸಿದರೇ? ಎಲ್ಲಾ ವಿಷಯಗಳನ್ನು ತಿಳಿಸಿದರೋ ಥವಾ ಕೆಲವನ್ನು ತಿಳಿಸದೇ ಬಿಟ್ಟರೇ?

ಎಲ್ಲಿ ಹೇಳಿದರು?
ಸಾರ್ವಜನಿಕವಾಗಿಯೋ ಅಥವಾ ಖಾಸಗಿಯಾಗಿಯೋ? ಇತರರು ಅದಕ್ಕೆ ಪ್ರತಿಕ್ರಯಿಸಲು ಅಥವಾ ಬೇರೆ ಕಡೆಯ ಚಿತ್ರಣ ನೀಡಲು ಅವಕಾಶವಿತ್ತೇ?

ಯಾವಾಗ ಹೇಳಿದರು?
ಯಾವುದೇ ಒಂದು ಮುಖ್ಯ ಸಂದರ್ಭದ ಮುಂಚೆಯೋ, ಮಧ್ಯದಲ್ಲಿಯೋ ಅಥವಾ ನಂತರವೋ? ಸಮಯ ವಿಷಯಕ್ಕೆ ಅಷ್ಟು ಮಹತ್ವವೇ?

ಯಾಕೆ ಹೇಳಿದರು?
ಅವರ ಅಭಿಪ್ರಾಯ ನೀಡುವುದಕ್ಕೆ ಕಾರಣ ತಿಳಿಸಿದರೇ? ಇನ್ಯಾರನ್ನಾದರೂ ಚೆನ್ನಾಗಿ ಅಥವಾ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದರೇ?

ಹೇಗೆ ಹೇಳಿದರು?
ಹೇಳುವಾಗ ಅವರು ಸಂತೋಷದಿಂದ ಅಥವಾ ದುಃಖದಲ್ಲಿ ಅಥವಾ ಕೋಪದಲ್ಲಿ ಅಥವಾ ಅನ್ಯಮನಸ್ಕರಾಗಿ ಇದ್ದರೇ? ಅವರು ಹೇಳಿದ್ದು ನಿಮಗೆ ಅರ್ಥವಾಯಿತೇ?

ಈ ಪ್ರಶ್ನೋತ್ತರಗಳ ನಂತರ ನಿಮಗೆ ವಿಮರ್ಶಾತ್ಮಕ ಚಿಂತನೆ ಏನು, ಹೇಗೆ ಎನ್ನುವುದು ಸಂಪೂರ್ಣ ಮನವರಿಕೆಯಾಗಿರಬಹುದು ಎಂದು ತಿಳಿದಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...