Homeಮುಖಪುಟಕೇರಳದಲ್ಲಿ ರಾಜಕೀಯ ಹಿಂದುತ್ವದ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವುದು ಹೇಗೆ?

ಕೇರಳದಲ್ಲಿ ರಾಜಕೀಯ ಹಿಂದುತ್ವದ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವುದು ಹೇಗೆ?

2020ರ ಲೆಕ್ಕದ ಪ್ರಕಾರ ಕೇರಳದಲ್ಲಿರುವ ಆರ್‌ಎಸ್‌ಎಸ್ ಶಾಖೆಗಳು ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿರುವ ಒಟ್ಟು ಶಾಖೆಗಳಿಗಿಂತ ಹೆಚ್ಚು!

- Advertisement -
- Advertisement -

ಪರಿಚಯವಿಲ್ಲದವರಿಗೆ ಕೇರಳದಲ್ಲಿನ ರಾಜಕೀಯ ಹಿಂದುತ್ವದ ಬೆಳವಣಿಗೆ ಹಾಗೂ ಅದರ ಭಾಗವೇ ಆದ ಬಿಜೆಪಿಯ ಮುನ್ನಡೆ ಕಾಲದ ಪ್ರವಾಹದಲ್ಲಿ ನುಚ್ಚುನೂರಾಗುವ ಪ್ರಕ್ರಿಯೆಯಂತೆ ಕಾಣಬಹುದು. ಕೇರಳದ ಒಳಗೆ ಮತ್ತು ಹೊರಗಿರುವ ಅನೇಕ ಪ್ರಗತಿಪರರಿಗೆ ಕೇರಳ ರಾಜ್ಯದೊಳಗಿನ ಹಿಂದುತ್ವದ ಶಕ್ತಿಗಳು ದುರ್ಬಲವಾಗಿವೆ, ಕೊನೇ ಪಕ್ಷ ಚುನಾವಣಾ ರಾಜಕೀಯದಲ್ಲಿ ಅವುಗಳ ಪ್ರಭಾವ ಕಡಿಮೆ ಎನ್ನಿಸಿ, ಅಲ್ಲಿನ ಎಡಪಕ್ಷಗಳು ಅದನ್ನು ತಡೆಯುತ್ತವೆ ಎಂದೆನಿಸಬಹುದು. ಈ ಅಭಿಪ್ರಾಯಗಳಿಗೆ ವಾಸ್ತವಾಂಶಕ್ಕಿಂತ ಹೆಚ್ಚಾಗಿ ಅತಿಯಾದ ಆತ್ಮವಿಶ್ವಾಸ ಕಾರಣವಾಗಿರುತ್ತವೆ. ಬಲಪಂಥೀಯ ಹಿಂದುತ್ವ ಶಕ್ತಿಗಳ ದೀರ್ಘಕಾಲೀನ ರಾಜಕೀಯ ಯೋಜನೆಗಳನ್ನು ಅಂದಾಜು ಮಾಡುವುದಕ್ಕೆ ಎಡವುದರಿಂದ ಈ ಅಭಿಪ್ರಾಯಗಳು ಮೂಡುತ್ತವೆ.

ಸ್ಥಾಪನೆಯ ದಿನದಿಂದಲೂ ಕೇರಳದ ಸಾಮಾಜಿಕ ಸಂರಚನೆಯಲ್ಲಿ ಸಂಘ ಪರಿವಾರ ಅಸ್ತಿತ್ವದಲ್ಲಿದೆ. ಸಂಘ ಪರಿವಾರದ ರಾಜಕೀಯ ಬಣ ಬಿಜೆಪಿಯು ರಾಜ್ಯದಲ್ಲಿ ಪಡೆಯುವ ಮತಗಳ ಸಂಖ್ಯೆ ತುಂಬಾ ಕಡಿಮೆ ಇರುವುದು ಹೌದಾದರೂ 2020ರ ಲೆಕ್ಕದ ಪ್ರಕಾರ ಕೇರಳದಲ್ಲಿರುವ ಆರ್‌ಎಸ್‌ಎಸ್ ಶಾಖೆಗಳು ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿರುವ ಒಟ್ಟು ಶಾಖೆಗಳಿಗಿಂತ ಹೆಚ್ಚು. 1940ರ ಇಸವಿಯಲ್ಲಿಯೇ ಆರ್‌ಎಸ್‌ಎಸ್ ಕೇರಳದಲ್ಲಿ ತನ್ನ ಬೇರು ಬಿಡಲು ಪ್ರಾರಂಭಿಸಿತು ಮತ್ತು ಕೇರಳದ ಮೇಲ್ಜಾತಿಗಳ ಹಿಂದೂಗಳ ನಡುವೆ ಮುಖ್ಯವಾಹಿನಿ ಶಕ್ತಿಯಾಗಿ ರೂಪುಗೊಂಡಿತು. 1948ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ ಆರ್‌ಎಸ್‌ಎಸ್‌ನ ಸದಸ್ಯರು ಬಹಿರಂಗವಾಗಿಯೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದನ್ನು ಕಂಡು ಉಂಟಾದ ಹತಾಶೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಮತ್ತು ಯುವ ಕಮ್ಯುನಿಸ್ಟ್ ಒ.ಎನ್.ವಿ ಕುರುಪ್ ತಮ್ಮ ನೆನಪಿನ ಪುಟಗಳಲ್ಲಿ ದಾಖಲಿಸಿದ್ದಾರೆ.

1970ರ ಹೊತ್ತಿಗೆ ಆರ್‌ಎಸ್‌ಎಸ್ ಸಂಘಟಿತ ಕೋಮು ಹಿಂಸಾಚಾರವನ್ನು ನಡೆಸುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಬೇರುಬಿಟ್ಟಿತ್ತು. ಕಣ್ಣೂರಿನಲ್ಲಿ ಆರ್‌ಎಸ್‌ಎಸ್ ಪ್ರೇರಿತ ಕೋಮು ದ್ವೇಷದ ವದಂತಿಗಳು 1972ರ ತಲಚೇರಿ ಗಲಭೆಗೆ ಕಾರಣವಾಗಿತ್ತು. ಈ ಗಲಭೆಯ ಸಮಯದಲ್ಲಿ ಈಗ ಮುಖ್ಯ ಮಂತ್ರಿಯಾಗಿರುವ ಪಿಣರಾಯಿ ವಿಜಯನ್‌ರವರು ಸಿಪಿಐಎಂಅನ್ನು ಆರ್‌ಎಸ್‌ಎಸ್‌ನ ದಾಳಿಗೆದುರಾಗಿ ಮುನ್ನಡೆಸಿದರು. ಈ ಪ್ರದೇಶದಲ್ಲಿದ್ದ ಮಸೀದಿಗಳ ಮೇಲೆ ಆರ್‌ಎಸ್‌ಎಸ್ ನಡೆಸುತ್ತಿದ್ದ ದಾಳಿಗಳನ್ನು ತಡೆದರು. ಈ ಗಲಭೆಯ ಸಮಯದಲ್ಲೇ ಮೆರುವಂಬಾಯಿ ಮಸೀದಿಯನ್ನು ಕಾಯುತ್ತಿದ್ದ ಸಿಪಿಐಎಂನ ಯು.ಕೆ. ಕುಂಯಿರಾಮನ್‌ರವರನ್ನು ಆರ್‌ಎಸ್‌ಎಸ್‌ನವರು ಹತ್ಯೆ ಮಾಡಿದರು. ಆರ್‌ಎಸ್‌ಎಸ್‌ನಿಂದ ಹತ್ಯೆಗೊಳಗಾದ ಮೊದಲ ಸಿಪಿಐಎಂ ಹುತಾತ್ಮ ಯು.ಕೆ. ಕುಂಯಿರಾಮನ್. ಕೇರಳದಲ್ಲಿ ಎಡಪಕ್ಷಗಳ ಮೇಲೆ ಆರ್‌ಎಸ್‌ಎಸ್ ನಡೆಸುವ ದಾಳಿಯು ಪ್ರಾರಂಭವಾಗಿದ್ದೇ ಈ ಗಲಭೆಯಿಂದ. ಆರ್‌ಎಸ್‌ಎಸ್‌ನ ಈ ನಿರಂತರ ಸರಣಿ ದಾಳಿಗಳು ಇವತ್ತಿಗೂ ಮುಂದುವರೆದಿದೆ, ಹಲವು ಜೀವಗಳನ್ನು ಬಲಿ ಪಡೆದಿದೆ.

ಕೇರಳದಲ್ಲಿ ಈಗ ಹೆಚ್ಚುಕಡಿಮೆ ಏಳು ಸಾವಿರ ಶಾಖೆಗಳನ್ನು ಹೊಂದಿರುವ ಆರ್‌ಎಸ್‌ಎಸ್ ಅಪಾಯಕಾರಿ ರೀತಿಯಲ್ಲಿ ಬೆಳೆಯುತ್ತಿದೆ. 2014ರಿಂದ ಸಂಘ ಪರಿವಾರ ಕೇರಳದೆಡೆಗೆ ತನ್ನ ರಾಜಕೀಯ ಗುರಿಯನ್ನು ವರ್ಗಾಯಿಸಿದ್ದು, ಬಿಜೆಪಿಯ ಮತಗಳಿಕೆ ಪ್ರಮಾಣವು ಗಣನೀಯವಾಗಿ ಏರಿಕೆ ಕಂಡಿದೆ. ಈ ಮುಂಚೆ ಕಾಂಗ್ರೆಸ್ಸಿಗೆ ಮತ ಚಲಾಯಿಸುತ್ತಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್ ಜೊತೆ ಸಂಬಂಧ ಹೊಂದಿದವರು ಈಗ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನೆಮೋಮ್‌ನಿಂದ ಬಿಜೆಪಿಯ ಮುಖಂಡರಾದ ಓ ರಾಜಗೋಪಾಲ್ ಜಯಗಳಿಸಿದ್ದು ಬಿಜೆಪಿಯ ಮತಗಳಿಕೆಯ ಪ್ರಮಾಣದ ಹೆಚ್ಚುವಿಕೆಗೊಂದು ಉದಾಹರಣೆ. ನೆಮೋಮ್‌ನಲ್ಲಿ ನಡೆದ ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಐಎಂ ಪಡೆದ ಮತಗಳನ್ನು ಪರಿಗಣಿಸಿದಾಗ ಕಾಂಗ್ರೆಸ್ಸಿಗೆ ಬೀಳುತ್ತಿದ್ದ ಮತಗಳೆಲ್ಲ ಹೇಗೆ ಬಿಜೆಪಿಗೆ ವರ್ಗವಾಗಿವೆ ಎನ್ನುವುದನ್ನು ಗುರುತಿಸಬಹುದಾಗಿದೆ.

ಈ ಬದಲಾವಣೆಗೆ ಹಲವು ಕಾರಣಗಳಿವೆ. ಇದರಲ್ಲಿ ಪ್ರಮುಖ ಕಾರಣವೆಂದರೆ ಬಿಜೆಪಿಗೆ ತನ್ನ ನೆಲೆಗಳನ್ನು ಬಿಟ್ಟುಕೊಡಬಾರದೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸುತ್ತಿರುವ ಮೃದು ಹಿಂದುತ್ವ ಧೋರಣೆ. 2018ರಲ್ಲಿ ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ನೀಡಿದ ಆದೇಶದ ಕುರಿತು ಕಾಂಗ್ರೆಸ್ ತೆಗೆದುಕೊಂಡ ಧೋರಣೆಗಳು ಬಿಜೆಪಿಯ ಧೋರಣೆಗಿಂತ ಯಾವ ರೀತಿಯಲ್ಲೂ ಭಿನ್ನವಾಗಿರಲಿಲ್ಲ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕಿದ್ದ ಅಡೆತಡೆಯ ಹಿಂದಿನ ಪುರುಷ ಪ್ರಧಾನ ಮನಸ್ಥಿತಿಯನ್ನು ಗಮನಕ್ಕೇ ತೆಗೆದುಕೊಳ್ಳದೇ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ’ಸಂಪ್ರದಾಯವನ್ನು ರಕ್ಷಿಸಬೇಕು’, ’ಕಮ್ಯುನಿಸ್ಟರು ಹಿಂದೂ ಮೌಲ್ಯಗಳ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಬೊಬ್ಬಿರಿದರು.

ಇವೆಲ್ಲವುಗಳ ಜೊತೆಗೆ ಕೇರಳದ ಬಹುಜನರನ್ನು ಕಳೆದ ಕೆಲವು ದಶಕಗಳಿಂದ ’ಸಂಸ್ಕೃತೀಕರಣ’ಕ್ಕೊಳಪಡಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮುಂದೆ ನಿಂತು ನಡೆಸುತ್ತಿರುವುದು ಸಂಘ ಪರಿವಾರ. ಪಾರಂಪರಿಕ ಪೂಜ್ಯ ಜಾಗಗಳನ್ನೆಲ್ಲ ದೇವಸ್ಥಾನಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬಹುಜನರು ವೈದಿಕ ಆಚರಣೆಗಳ ಜೊತೆ ಹೆಚ್ಚೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯು ರಾಜಕೀಯವಾಗಿಯೂ ಗೆಲ್ಲುತ್ತಿರುವುದು, ರಾಜ್ಯದಲ್ಲಿ 1957ರಿಂದ ಕಂಡುಬರುವ ಜಾತಿ ಆಧಾರಿತ ಐತಿಹಾಸಿಕ ಮತ ಚಲಾವಣೆಯು ಮುರಿದು ಬೀಳುತ್ತಿರುವ ಸೂಚನೆ. ಅರವತ್ತು ವರುಷಗಳ ಹಿಂದೆ ಕೇರಳದಲ್ಲಿದ್ದ ಕಮ್ಯುನಿಸ್ಟರ ಸರಕಾರವನ್ನು ಸವರ್ಣ ಭೂಮಾಲೀಕರ ಮೈತ್ರಿ ಮೋಸದಿಂದ ಕೆಡವಿದ ಮೇಲೆ ಕೇರಳದಲ್ಲಿ ಮತ ಚಲಾವಣೆಯು ಜಾತಿಯಾಧಾರಿತವಾಗಿದೆ. ರಾಜ್ಯದಲ್ಲಿನ ದಲಿತರು – ಹಿಂದುಳಿದ ವರ್ಗಗಳ ಮತಗಳನ್ನು ಕಮ್ಯುನಿಸ್ಟರೇ ನಿರಂತರವಾಗಿ ಪಡೆಯುತ್ತಾ ಬಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ಹಿಂದುತ್ವದ ಶಕ್ತಿಗಳು ವಾಟ್ಸ್‌ಆಪ್ ಮೆಸೇಜುಗಳ ಮೂಲಕ ಸಂಘಟಿತವಾಗಿ ಸುಳ್ಳು ಸುದ್ದಿಗಳನ್ನು ಹಂಚುತ್ತಿರುವುದು ಕೂಡ ಹಿಂದುತ್ವವು ರಾಜಕೀಯ ಶಕ್ತಿಯಾಗಿ ಬೆಳೆಯಲು ಕಾರಣವಾಗಿದೆ. ರಾಜಕಾರಣದ ಕುರಿತು ಕಾಂಗ್ರೆಸ್ಸಿನ ದೃಷ್ಟಿಕೋನ ಆಮೂಲಾಗ್ರವಾಗಿ ಬದಲಾಗದೇ ಹೋದಲ್ಲಿ ಕೇರಳ ರಾಜ್ಯದಲ್ಲಿ ಬಹುದೊಡ್ಡ ಪಕ್ಷಪಾತಿ ರಾಜಕೀಯ ಬದಲಾವಣೆ ಕಾಣಿಸಿಕೊಳ್ಳಲಿದೆ. ಕಾಂಗ್ರೆಸ್ಸಿನ ಜಾಗದಲ್ಲಿ ಬಿಜೆಪಿ ಬೆಳೆದು ಎಡ ಪಕ್ಷಗಳಿಗೆ ಪ್ರಮುಖ ವಿರೋಧ ಪಕ್ಷವಾಗಿ ಬೆಳೆಯುತ್ತದೆ. ಇದರಿಂದ ಉಂಟಾಗುವ ರಾಜಕೀಯ ಧ್ರುವೀಕರಣದ ಪ್ರಭಾವಗಳು ಸುದೀರ್ಘ ಕಾಲದವರೆಗೆ ಪರಿಣಾಮ ಬೀರುತ್ತವೆ.

  • ವಾರ್ಕಿ ಪಾರಕ್ಕಲ್

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಮಾಜಶಾಸ್ತ್ರ ವಿದ್ಯಾರ್ಥಿಯಾಗಿರುವ ವಾರ್ಕಿ ಸಾಮಾಜಿಕ ಕಾರ್ಯಕರ್ತರು ಕೂಡ. ದೆಹಲಿ ಎಸ್‌ಎಫ್‌ಐ ಸಂಘಟನೆಯ ರಾಜ್ಯ ಸಮಿತಿ ಸದಸ್ಯ.

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.


ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...