Homeಕರ್ನಾಟಕನಾಟಕದ ಮೂಲಕ ಕೈದಿಗಳಲ್ಲಿನ ಅದ್ಭುತ ಪ್ರತಿಭೆ ಹೊರತೆಗೆದ ಹುಲುಗಪ್ಪ ಕಟ್ಟೀಮನಿ

ನಾಟಕದ ಮೂಲಕ ಕೈದಿಗಳಲ್ಲಿನ ಅದ್ಭುತ ಪ್ರತಿಭೆ ಹೊರತೆಗೆದ ಹುಲುಗಪ್ಪ ಕಟ್ಟೀಮನಿ

- Advertisement -
- Advertisement -

| ಬಿ. ಚಂದ್ರೇಗೌಡ |

ನಾಟಕ ನಿರ್ದೇಶಕ ಹುಲುಗಪ್ಪ ಕಟ್ಟೀಮನಿಯವರು ಮೈಸೂರಿನ ಜೈಲು ನಿವಾಸಿಗಳಿಗೆ ಕಲಿಸಿದ್ದ ಎರಡು ನಾಟಕಗಳನ್ನು ತಂದು ಶಿವಮೊಗ್ಗದಲ್ಲಿ ಪ್ರದರ್ಶಿಸಿದರು. ನಿಜಕ್ಕೂ ಇದೊಂದು ಅಸಾಮಾನ್ಯ ಸಾಧನೆಯೆಂದೇ ಹೇಳಬೇಕು. ಸಹಜವಾಗಿ ಇಂತಹ ಸಾಹಸಗಳಿಗೆ ಬೆನ್ನೆಲುಬಾಗಿ ನಿಲ್ಲುವ ಜಿಲ್ಲಾಧಿಕಾರಿ ದಯಾನಂದ್‍ರವರು ಮತ್ತು ಮೈಸೂರಿನ ಕಾರಾಗೃಹದ ಸೂಪರಿಂಟೆಂಡೆಂಟ್ ದಿವ್ಯಶ್ರೀಯವರ ಕಾಳಜಿಯ ಫಲವಾಗಿ ಇಂತಹ ಘಟನೆ ಸಂಭವಿಸಿತು.

ಘಟನೆ ಏಕೆಂದರೆ, ಕಾರಾಗೃಹ ವಾಸಿಗಳಿಗೆ, ನಾಟಕ ಕಲಿಸಿ ಅದನ್ನು ಜೈಲಿನಿಂದ ಹೊರಗೆ ತೆಗೆದುಕೊಂಡು ಹೋಗಿ ಅದ್ಭುತ ಪ್ರದರ್ಶನ ನೀಡಿದ್ದಕ್ಕೆ. ಇದು ದೇಶದಲ್ಲೆಲ್ಲೊ ನಡೆಯದೆ ಇರುವ ಸಾಹಸ. ದಿವ್ಯಶ್ರೀ ಈಗ ಶಿವಮೊಗ್ಗದ ಜಿಲ್ಲಾ ಸೂಪರಿಂಟೆಂಡೆಂಟ್ ಆಗಿ ಬಂದಿರುವುದರಿಂದ ಇಲ್ಲೂ ಅಂತಹ ಸಾಹಸ ಜರುಗಬಹುದು.

ಮೈಸೂರಿನಿಂದ ಐವತ್ತು ಜನ ಕೈದಿಗಳನ್ನ ಹೊರತೆಗೆದುಕೊಂಡು ಹೋಗುವುದೇ ಒಂದು ಸಾಹಸ. ಇದಕ್ಕಾಗಿ ಇಲಾಖೆ ಮತ್ತು ಸರಕಾರದ ನಡುವೆ ನಂಬಿಕೆಯ ನಡವಳಿಕೆ ಬೇಕಾಗುತ್ತದೆ. ಇದನ್ನೆಲ್ಲಾ ಸುಗಮಗೊಳಿಸಿ ಹೋದವರು, ಅಂದು ಗೃಹ ಸಚಿವರಾಗಿದ್ದ ಎಂ.ಪಿ ಪ್ರಕಾಶರು. ಅವರೆಂತಹ ವ್ಯಕ್ತಿ ಎಂದರೆ, – ಪೆರೋಲ್ ಮೇಲೆ ಬಿಡುಗಡೆ ಕೇಳಲು ಮನೆಗೆ ಹೋದ ಕೈದಿಯನ್ನ ಕೂರಪ್ಪ ಕೂತುಗೊ” ಎಂದು ಕೂರಿಸಿ, ಕಾಫಿ ಕೊಟ್ಟು ಊರು, ಕೇರಿ, ಮಾಡಿದ ಅಪರಾಧವನ್ನು ಕೇಳಿ ಕಳುಹಿಸುತ್ತಿದ್ದ ಅಪರೂಪದ ವ್ಯಕ್ತಿ. ಅವರ ಕಾಳಜಿಯ ಫಲವಾಗಿ ನಮ್ಮ ನಡುವೆಯಿದ್ದ ರಂಗ ಚಟುವಟಿಕೆ ಜೈಲು ಪ್ರವೇಶಿಸುವಂತಾಯ್ತು. ಅವರ ಮೆಚ್ಚಿನ ವ್ಯಕ್ತಿಯಾಗಿದ್ದ ಹುಲುಗಪ್ಪ ಕಟ್ಟಿಮನಿ, ತಿಂಗಳಾನುಗಟ್ಟಲೆ ಶ್ರಮವಹಿಸಿ, ಅಪರಾಧವೆಸಗಿದ ಕಾರಣಕ್ಕೆ ಖಿನ್ನತೆಗೊಳಗಾಗಿ ಅವಸಾನದ ಮುಖಭಾವದಲ್ಲಿದ್ದ ಕೈದಿಗಳಿಗೆ, ಮರುಜೀವ ಕೊಟ್ಟಿದ್ದಾರೆ.

ಹುಲುಗಪ್ಪ ಕಟ್ಟೀಮನಿ

ಕಟ್ಟಿಮನಿ ನೇರ ನಾಟಕ ಕಲಿಸಿದ, ಅವರಿಗೆಲ್ಲಾ ಯೋಗದ ಶಿಬಿರ ಮತ್ತಿತರ ಚಟುವಟಿಕೆ ಕಲಿಸಿ ಆನಂತರ ಅವರಲ್ಲಿನ ಪ್ರತಿಭೆ ಗುರುತಿಸಿ ನಂತರ ತಾವು ಆರಿಸಿಕೊಂಡ ನಾಟಕದ ಪಾತ್ರಗಳಿಗೆ ಲಗತ್ತಾದ ದೇಹಾಕೃತಿ ಮತ್ತು ಮುಖಚರ್ಯೆ ಗ್ರಹಿಸಿ ಆಯ್ಕೆಮಾಡಿಕೊಂಡಿದ್ದರಿಂದ ಕೈದಿಗಳು ಪಾತ್ರಗಳೇ ಆಗಿ ಹೋಗಿದ್ದರು. ಸಾಮಾನ್ಯವಾಗಿ ಜೈಲು ಸೇರಿದ ಅಪರಾಧಿಗಳು ಉಕ್ಕುವ ಆರೋಗ್ಯವಂತರಾಗಿರುತ್ತಾರೆ. ದಷ್ಟಪುಷ್ಟ ದೇಹದವರಾಗಿರುತ್ತಾರೆ. ಅಪರಾಧವೆಸಗಲು ಇದು ಪ್ರಧಾನ ಕಾರಣ. ಹುಲುಗಪ್ಪ ಕಟ್ಟೀಮನಿ ಕರೆತಂದ ಕೈದಿಗಳೆಲ್ಲರೂ ಆರೋಗ್ಯವಂತರಾಗಿದ್ದರು. ಈ ಪೈಕಿ ಸಂಗ್ಯಾಬಾಳ್ಯಾ ನಾಟಕದ ಸಂಗ್ಯಾನ ಪಾತ್ರಧಾರಿ ನಮ್ಮ ಕಲ್ಪನೆಯ ಸಂಗ್ಯಾನ ಪ್ರತಿರೂಪದಂತಿದ್ದ. ಇಲ್ಲಿನ ಪಾತ್ರಧಾರಿಗಳೆಲ್ಲಾ ಬಹುತೇಕ ಕೊಲೆ ಆಪಾದನೆಯಿಂದ ಜೀವಾವಧಿಗೆ ತುತ್ತಾಗಿದ್ದವರು.

ಪಕ್ಕದ ಮನೆಯ ಕೆಟ್ಟ ಮನುಷ್ಯನನ್ನೇ ಒಂದೇ ಏಟಿಗೆ ಕೊಂದವನು, ಹೆಂಡತಿ ಕೊಂದವನು, ತಂಗಿಯ ಬಗ್ಗೆ ಕೆಟ್ಟ ಮಾತನಾಡಿದವನನ್ನೇ ಕೊಂದುಹಾಕಿದವನು, ಮುಸ್ಲಿಮನನ್ನು ಹದಿನಾಲ್ಕು ಪೀಸುಗಳಾಗಿ ಕೊಂದ ಭಜರಂಗಿ, ತನ್ನಿಂದ ಇಂತಹ ಕೃತ್ಯವೆಸಗಲು ಪ್ರಚೋದಿಸಿ ಮರೆಯಾದ ಆರೆಸೆಸ್‍ನವರ ಬಗ್ಗೆ ಜೈಲಲ್ಲಿ ಕುದಿಯುತ್ತಿರುವವನು, ಹೀಗೆ, ಅಪರಾಧಗಳ ವಿಭಾಗ ಅಸಂಖ್ಯ. ಇವರೆಲ್ಲರ ಕೃತ್ಯ ಕೇಳುತ್ತಿದ್ದರೆ, ಮನುಷ್ಯನ ಮನಸ್ಸಿನಲ್ಲಿನ ಕ್ರೌರ್ಯದ ವಿರಾಟ ದರ್ಶನವಾಗುತ್ತದೆ. ಅಲ್ಲದೆ ಸಿಟ್ಟೇ ಇಲ್ಲದಿದ್ದರೆ ಮನುಷ್ಯನ ಬಾಳು ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ.

ಹುಲುಗಪ್ಪ ಕಟ್ಟೀಮನಿ ಆರಿಸಿಕೊಂಡ ನಾಟಕ ಜಯಂತರ ತರ್ಜುಮೆಯಾದ “ಜೊತೆಗಿರುವನು ಚಂದಿರ” ಮತ್ತು ಕಂಬಾರರ “ಸಂಗ್ಯಾ ಬಾಳ್ಯಾ”. ಈ ಎರಡೂ ನಾಟಕ ಈ ಹಿಂದೆ ಹಲವು ಪ್ರಯೋಗ ಕಂಡಿದ್ದರೂ ಹುಲುಗಪ್ಪನವರು ಮೂಲ ನಾಟಕದೊಳಕ್ಕೆ ತಮ್ಮ ಪ್ರತಿಭೆಯನ್ನು ಬೆರೆಸಿರುವುದರಿಂದ ಸಮಯ ದ್ವಗುಣಗೊಂಡಿರುವುದಲ್ಲದೆ, ಎಲ್ಲ ಕೈದಿಗಳೂ ಸ್ಟೇಜಿಗೆ ಬಂದು ವಿಜೃಂಭಿಸುವಂತಾಗಿದೆ. ಹಾಗೆ ನೋಡಿದರೆ ಈ ಎರಡೂ ನಾಟಕಗಳು ಐತಿಹಾಸಿಕ ಘಟನೆಗಳು. ಭಾರತ ಪಾಕಿಸ್ತಾನ ಇಬ್ಭಾಗವಾದಾಗಿನ ಒಂದು ಘಟನೆ ಹೇಳುವ ‘ಜತೆಗಿರುವನು ಚಂದಿರ’ವನ್ನು ನೋಡುತ್ತಿದ್ದರೆ ಇದೇ ಘಟನೆಯನ್ನ ಹಿಂದೂ ಕುಟುಂಬಕ್ಕೆ ಬದಲಾಯಿಸಿದರೆ ಎರಡೂ ಒಂದೇ ವೃತ್ತಾಂತವನ್ನು ಹೇಳುತ್ತವೆ.

ಪ್ರಪಂಚದ ಯಾವ ದೇಶವೂ ಭಾರತದಂತೆ ಇಬ್ಭಾಗವಾಗಿಲ್ಲ, ಮತ್ತು ಇಷ್ಟು ವರ್ಷಗಳ ನಂತರವೂ ಪರಸ್ಪರ ದ್ವೇಷಿಸುತ್ತಾ ಯುದ್ದ ಮಾಡುತ್ತಾ ಬಂದಿಲ್ಲ. ಆದರೆ ಆ ಸಂದರ್ಭದ ಯಾವ ಪ್ರಜೆಗೂ ಈ ವಿಭಾಗ ಮತ್ತು ವಲಸೆ ಬೇಕಿರಲಿಲ್ಲ. ಆದರೆ ನಡೆದುಹೋಯ್ತು. ವಿಭಾಗ ಮತ್ತು ಹತ್ಯಾಕಾಂಡದ ಆಗಿನ ವಲಸೆ ನೋಡಿದ ಮಹಮದ್ ಅಲಿ ಜಿನ್ನಾ ನಾನು ವಿಭಾಗಿಸಿದ್ದು ಇಂತಹ ವಲಸೆ ನೋಡಲಿಲ್ಲ. ಅಲ್ಲಿಯವರು ಅಲ್ಲಲ್ಲೇ ಇರುತ್ತಾರೆ. ವಿಭಾಗದ ಗಡಿಯಷ್ಟೇ ನಿರ್ಮಾಣವಾಗುತ್ತದೆ ಎಂದು ಭಾವಿಸಿದ್ದನಂತೆ. ಆದರೆ ಆಗಿನ ಸಂದರ್ಭ ಕುರಿತ ಈ ನಾಟಕ ನೋಡುಗರನ್ನ ಆಧ್ರಗೊಳಿಸುತ್ತದೆ.

ಮುಸ್ಲಿಂ ಕುಟುಂಬವೊಂದು ಅನಾಥವಾಗಿ ಭಾರತ ಬಿಟ್ಟು ಹೋಗುತ್ತದೆ. ಹೋಗುವ ಮುನ್ನ ಮನೆಯೊಡತಿ ಮನೆ ಕಸಗುಡಿಸಿ ಹೋಗುತ್ತಾಳೆ. ಇದು ಪ್ರೇಕ್ಷಕನ ಮಧುರಗೊಳಿಸಲು ಆ ಕಾಲದ ಹಿಂದಿ ಸಿನಿಮಾ ಹಾಡುಗಳನ್ನ ಬಳಸಿಕೊಂಡಿದ್ದಾರೆ. ಇದೊಂದು ರೀತಿ ಅರ್ಥಪೂರ್ಣವಾಗಿದೆ. ಅಂದು ವಿಭಾಗದ ವಲಸೆ ಹತ್ಯಾಕಾಂಡ ನಡೆಯುತ್ತಿದ್ದರೆ, ಇತ್ತ ಹಿಂದೂಸ್ತಾನಿ ಸಂಗೀತಗಾರರಾದ ಬಡೇಗುಲಾಂ ಆಲಿ ಖಾನ್‍ರ ಸಂಗೀತ ಮತ್ತು ಪಾಕಿಸ್ತಾನದಿಂದ ಬಂದ ದೇವಾನಂದ್ ದಿಲೀಪ್‍ಕುಮಾರ್ ಇತ್ಯಾದಿ ನಾಯಕ ನಟರು ವಿಜೃಂಭಿಸುತ್ತಿದ್ದರು. ಇಡೀ ಹಿಂದಿ ಚಿತ್ರರಂಗವೇ ಮುಸ್ಲಿಂ ಪ್ರತಿಭಾವಂತರಿಂದ ತುಂಬಿಹೋಗಿತ್ತು. ಅದೊಂದು ವಿಪರ್ಯಾಸಗಳೇ ಮೇಳೈಸಿದ ಕಾಲ ಅನ್ನಬಹುದು.

ಇನ್ನ ಹುಲುಗಪ್ಪನವರು ನಿರ್ದೇಶಿಸಿರುವ ಸಂಗ್ಯಾ ಬಾಳ್ಯಾ ಹಲವು ನಿರ್ದೇಶಕರ ಕೈಲಿ ನಾಡಿನಾದ್ಯಂತ ಸಾವಿರಾರು ಪ್ರದರ್ಶನ ಕಂಡಿದೆ. ನೂರು ವರ್ಷದ ಹಿಂದೆ ನಡೆದ ಈ ಕೊಲೆ ಅಕ್ರಮ ಸಂಬಂಧಕ್ಕೆ ಪ್ರತಿಕಾರವಾಗಿ ನಡೆದದ್ದು, ಇಂದೂ ಕೂಡ ನಡೆಯುತ್ತಿದೆ. ಹಾಗಾಗಿ ಇದೊಂದು ಎಂದೆಂದೂ ಬದುಕಿಕೊಂಡೇ ಇರುವ ಕ್ರೌರ್ಯದ ವಸ್ತು. ತನ್ನ ಹೆಂಡತಿ ಗಂಗಿಯನ್ನ ಇಟ್ಟುಕೊಂಡ ಸಂಗ್ಯನನ್ನ ವೀರಪ್ಪ ಕೊಂದು ಹಾಕುತ್ತಾನೆ. ಜೈಲಿಗೆ ಬರುತ್ತಾನೆ, ಕೈದಿಗಳು ಘಟನೆ ಕುರಿತು ಕೇಳುತ್ತಾರೆ. ಅಂದರೆ ನಾಟಕ ಆರಂಭವಾದ ಅರ್ಧಗಂಟೆಯಲ್ಲೇ ಮುಗಿದುಹೋದ ನಾಟಕ, ಜೈಲಿನ ಮುಖಾಂತರ ಬೆಳೆಯತೊಡಗುತ್ತದೆ. ಖೈದಿಗಳೆಲ್ಲರಿಗೂ ಅವಕಾಶ ಕೊಟ್ಟಿರುವ ಹುಲುಗಪ್ಪ ಕಡೆಯಲ್ಲಿ ವೀರಪ್ಪ ಗಲ್ಲಿಗೇರುವ ದೃಶ್ಯದಲ್ಲಿ ಕೊನೆಗೊಳಿಸಿದ್ದಾರೆ.

ವೀರಪ್ಪನಿಗೆ ನೇಣಿಗೇರಿಸುವ ಅಧಿಕಾರಿಗಳು ಕೊನೆಯಾಸೆ ಕೇಳಿದಾಗ ಆತ “ತನ್ನ ಗಂಗಿಯನ್ನ ತಪ್ಪು ತಿಳಿದೆ, ಸಂಗ್ಯಾನನ್ನ ನಾನು ಕೊಲ್ಲುವಾಗ ಆತನಗುತ್ತಿದ್ದ ನನ್ನನ್ನು ಇಲ್ಲಿಯವರೆಗೂ ಕಾಡಿಸಿದ್ದು ಆತನ ನಗು ವ್ಯಾಪಾರ ಮಾಡಿ ಹಣ ಸಂಗ್ರಹಿಸುವ ಲೋಭಿತನಕ್ಕೆ ಬಿದ್ದ ನಾನು ಗಂಗಿಯನ್ನ ನಿರ್ಲಕ್ಷಿಸಿದೆ” ಎನ್ನುತ್ತಾನೆ. ಆತ ತಪ್ಪು ಒಪ್ಪಿಕೊಂಡು ಪಶ್ಚಾತ್ತಾಪ ಪಡುವ ಸಮಯಕ್ಕೆ ನೇಣು ಬೀಳುತ್ತದೆ. ಕೈದಿಗಳ ಸಮೇತ ಪ್ರೇಕ್ಷಕ ಸಮೂಹ ದಿಗ್ಭ್ರಮೆಗೊಳ್ಳುತ್ತದೆ. ಹುಲುಗಪ್ಪ ಆರಿಸಿರುವ ವೀರಪ್ಪನ ಪಾತ್ರ ಕೂಡ, ಕೊಲೆಯೆಂದರೆ ಫಲವಾಗಿ ಜೈಲು ಸೇರಿದ ವ್ಯಕ್ತಿ. ಆದ್ದರಿಂದ ಅವನ ಅಭಿನಯ ಮನಮುಟ್ಟುವಂತಿತ್ತು.

ಎರಡೂ ಮುಕ್ಕಾಲು ಗಂಟೆಯಷ್ಟೇ ಆರಂಭಿಸಿರುವ ಈ ನಾಟಕ ಸಮಯ ಹೋದದ್ದೇ ಗೊತ್ತಾಗದಷ್ಟು ಲವಲವಿಕೆಯಿಂದ ಕೂಡಿದೆ. ಯಾವ ದೃಶ್ಯವನ್ನ ಕೈಬಿಡದಷ್ಟೂ ಬಿಗಿಯಾಗಿ ಕಟ್ಟೀಮನಿ ಕಟ್ಟಿಕೊಟ್ಟಿದ್ದಾರೆ. ಮರುದಿನದ ಸಂವಾದದಲ್ಲಿ ಎಲ್ಲ ಕೊಲೆಗಾರರು ತಮ್ಮ ಕೃತ್ಯಗಳ ಪರಿಣಾಮದಿಂದ ಅನುಭವಿಸುತ್ತಿರುವ ಯಾತನೆಯಿಂದ ಹೊರಬಂದಂತೆ ಕಂಡರು. ಕೆಲವರು ತಮ್ಮ ಕೃತ್ಯ ನೆನೆದು ಅತ್ತರು. ಅಂದರೆ, ತಾವು ಕೊಂದವರ ಕುಟುಂಬ ನೆನೆಸಿಕೊಂಡಲ್ಲ, ತಮ್ಮ ಬಂಧು-ಬಳಗ, ಮಕ್ಕಳು, ಮಡದಿ ನೆನಸಿಕೊಂಡು. ಇಲ್ಲಿನ ಜೀವಾವಧಿಯ ಜನ, ತಾವು ಕೊಂದವರ ಕುಟುಂಬದ ಬಗ್ಗೆ ಯೋಚಿಸಿದಂತೆ ನನಗೆ ಕಾಣಲಿಲ್ಲ. ಹಾಗೇನಾದರೂ ಯೋಚಿಸಿದರೆ, ಅದು ಮಾತ್ರ ಅವರನ್ನ ಮಾನವೀಯ ಆವರಣಕ್ಕೆ ತಂದು ನಿಲ್ಲಿಸುವಂತದ್ದು. ಕೊಂದವನನ್ನೇ ಅಯ್ಯೋ ಪಾಪ ಎಂಥಾ ಕೆಲಸ ಮಾಡಿಬುಟ್ಟ, ಹೋದೊನ ಕತೆ ಇರ್ಲಿ, ಬದುಕಿದೋನ್ನ ಯಂಗಾರ ಮಾಡಿ ಏಳಿಸಿಕೊಬೇಕು ಅನ್ನೋ ಮನೋಭಾವ ನಮ್ಮ ನಡುವೆ ಇದೆ. ಇದಷ್ಟು ಒಳ್ಳೆಯದಲ್ಲ. ಇದರಿಂದ ಸತ್ತವನ ಪರ ಸಾಕ್ಷಿ ಹೇಳಲು ಯಾರೂ ಬರುವುದಿಲ್ಲ. ಇರಲಿ ಕೈದಿಗಳ ಲೋಕ ತೋರಿದ ಕಟ್ಟೀಮನಿಗೆ ಧನ್ಯವಾದಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....