Homeಅಂಕಣಗಳುಹೈದ್ರಾಬಾದ್ ಫಂಡ್: ಪಾಕಿಸ್ತಾನಕ್ಕೆ ಮುಖಭಂಗ, 306 ಕೋಟಿ ರೂ. ಯಾರ ಪಾಲಾಗಲಿದೆ?

ಹೈದ್ರಾಬಾದ್ ಫಂಡ್: ಪಾಕಿಸ್ತಾನಕ್ಕೆ ಮುಖಭಂಗ, 306 ಕೋಟಿ ರೂ. ಯಾರ ಪಾಲಾಗಲಿದೆ?

- Advertisement -
- Advertisement -

ಇಂಗ್ಲೆಂಡ್ ಅಂಡ್ ವೇಲ್ಸ್ ಹೈಕೋರ್ಟ್ ಇತ್ತೀಚೆಗೆ ಕೊಟ್ಟ ತೀರ್ಪೊಂದು ಎಲ್ಲರ ಗಮನ ಸೆಳೆದಿದೆ. ಲಂಡನ್‍ನ ನ್ಯಾಟ್‍ವೆಸ್ಟ್ ಬ್ಯಾಂಕಿನಲ್ಲಿರುವ 35 ಮಿಲಿಯನ್ ಪೌಂಡ್ ಅಂದರೆ 306 ಕೋಟಿ ರೂಪಾಯಿ ಹಣ ತನಗೆ ಸೇರಬೇಕೆಂದು ಪಾಕಿಸ್ತಾನ ಹೂಡಿದ್ದ ದಾವೆಯನ್ನು ತಳ್ಳಿ ಹಾಕಿರುವ ನ್ಯಾಯಾಲಯ ಭಾರತದ ಪರವಾಗಿ ತೀರ್ಪು ನೀಡಿದೆ. ಆ ಮೂಲಕ ಸುಮಾರು ಏಳು ದಶಕಗಳ ಹಳೆಯ ಪ್ರಕರಣವೊಂದು ಇತ್ಯರ್ಥ ಕಂಡಂತಾಗಿದೆ. ‘ಹೈದ್ರಾಬಾದ್ ಫಂಡ್’ ಎಂತಲೇ ಹೆಸರಾದ ಈ ವಿವಾದ ಕೇವಲ ಹಣದ ಕಾರಣಕ್ಕೆ ಮಾತ್ರವಲ್ಲದೆ ಭಾರತ ಪಾಕಿಸ್ತಾನಗಳ ನಡುವೆ ಪ್ರತಿಷ್ಠೆಯ ವಿಷಯವಾಗಿತ್ತು.

ಏನಿದು ಹೈದ್ರಾಬಾದ್ ಫಂಡ್..?

1948ರ ಸೆಪ್ಟೆಂಬರ್ ನಲ್ಲಿ ಹೈದ್ರಾಬಾದ್‍ನ ಏಳನೇ ನಿಜಾಮನಾಗಿದ್ದ ಮೀರ್ ಒಸ್ಮಾನ್ ಅಲಿ ಖಾನ್, ಇಂಗ್ಲೆಂಡ್‍ನಲ್ಲಿದ್ದ ಪಾಕಿಸ್ತಾನದ ಅಂದಿನ ರಾಯಭಾರಿ ಹಬೀಬ್ ಇಬ್ರಾಹಿಂ ರಹಮತುಲ್ಲಾ ಖಾತೆಗೆ ವರ್ಗಾವಣೆ ಮಾಡಿದ್ದ 1 ಮಿಲಿಯನ್ ಪೌಂಡ್ ಹಣವಿದು. ಅದೀಗ 35 ಮಿಲಿಯನ್‍ನಷ್ಟಾಗಿದೆ. ಆದರೆ ನಂತರ ಕೋರ್ಟ್‍ನಲ್ಲಿ ಹಣಕ್ಕಾಗಿ ದಾವೆ ಹೂಡಿದ ಒಸ್ಮಾನ್ ಅಲಿ ಖಾನ್, ಹಣವನ್ನು ತಾನು ವರ್ಗಾವಣೆ ಮಾಡಿಲ್ಲ, ನನ್ನ ಗಮನಕ್ಕೆ ಬಾರದೆ ಅಂದಿನ ಹೈದ್ರಾಬಾದ್ ಪ್ರಾಂತ್ಯದ ಹಣಕಾಸು ಮತ್ತು ವಿದೇಶಾಂಗ ಸಚಿವನಾಗಿದ್ದ ನವಾಬ್ ಮೊಯಿನ್ ನವಾಜ್ ಜಂಗ್, ವರ್ಗಾವಣೆ ಮಾಡಿದ್ದ ಎಂದು ಹೇಳಿಕೆ ನೀಡಿದ್ದರು. ಆಗ ಪ್ರಕರಣ ಇತ್ಯರ್ಥವಾಗುವವರೆಗೆ ಹಣವನ್ನು ‘ಫ್ರೀಜ್’ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು.

1947ರಲ್ಲಿ ಭಾರತ ವಿಭಜನೆಯಾದಾಗ, ತನ್ನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ ಪ್ರಾಂತ್ಯವನ್ನು ಭಾರತದೊಂದಿಗೆ ವಿಲೀನ ಮಾಡದೆ ಸ್ವತಂತ್ರವಾಗುಳಿಯಲು ನಿಜಾಮ ನಿರ್ಧರಿಸಿದ. ಆಗ ಭಾರತದೊಂದಿಗೆ ಒಂದು ಯಥಾಸ್ಥಿತಿ ಒಪ್ಪಂದಕ್ಕೆ ಸಹಿ ಹಾಕಿದ್ದ. ಅದರ ಪ್ರಕಾರ ಒಂದು ವರ್ಷದ ಕಾಲ ಭಾರತವು ಹೈದ್ರಾಬಾದ್‍ನಲ್ಲಿ ಸೇನೆಯನ್ನು ಜಮಾವಣೆ ಮಾಡದೆ ಯಥಾಸ್ಥಿತಿ ಕಾಪಾಡಬೇಕಿತ್ತು. ಹಾಗಾಗಿ ಸಿಕಂದರಾಬಾದ್‍ನಲ್ಲಿ ಭಾರತೀಯ ಸೇನೆಯನ್ನು ವಾಪಾಸ್ ಕೂಡಾ ಕರೆಸಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ನಿಜಾಮನ ‘ರಜಾಕಾರ್’ ಸೈನಿಕರ ಉಪಟಳ ಹೆಚ್ಚಾಗಿತ್ತಲ್ಲದೆ, ನಿಜಾಮ ಪೋರ್ಚುಗೀಸರ ಜತೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದರಿಂದ ಭಾರತವು 1948ರ ಸೆಪ್ಟೆಂಬರ್ ನಲ್ಲಿ ‘ಆಪರೇಷನ್ ಪೋಲೊ’ ಹೆಸರಿನ ಸೇನಾ ಕಾರ್ಯಾಚರಣೆ ಮೂಲಕ ಹೈದ್ರಾಬಾದ್ ಅನ್ನು ತನ್ನೊಳಗೆ ವಿಲೀನ ಮಾಡಿಕೊಂಡಿತು. ಅಂತಹ ಯುದ್ಧಮಯ ಸನ್ನಿವೇಶದಲ್ಲೇ ವಿತ್ತ ಸಚಿವ ಹಣವನ್ನು ಪಾಕಿಸ್ತಾನದ ರಾಯಭಾರಿ ಅಕೌಂಟಿಗೆ ವರ್ಗಾಯಿಸಿದ್ದ.

ವಿಲೀನದ ನಂತರ ನಿಜಾಮ ಹಣ ವಾಪಾಸ್ ನೀಡುವಂತೆ ಕೇಳಿದಾಗ ಪಾಕಿಸ್ತಾನ ತಕರಾರು ಮಾಡಿತು. ಹಾಗಾಗಿ ಲಂಡನ್ ಕೋರ್ಟ್‍ನಲ್ಲಿ ದಾವೆ ಹೂಡಿದರು.

ಪಾಕಿಸ್ತಾನದ ವಾದ ಏನಾತ್ತು..?

ಆರಂಭದಲ್ಲಿ ಇದು ಏಳನೇ ನಿಜಾಮ ಮತ್ತು ಪಾಕಿಸ್ತಾನ ನಡುವಿನ ವಿವಾದವಾಗಿತ್ತಷ್ಟೆ. ಆದರೆ 1956ರಲ್ಲಿ ನಿಜಾಮ ಹಣದ ಮೇಲಿನ ದಾವೆ ಹೂಡಿಕೆ ಹಕ್ಕನ್ನು ಭಾರತದ ರಾಷ್ಟ್ರಪತಿಗಳ ಜತೆ ಹಂಚಿಕೊಂಡಾಗ ‘ಹೈದ್ರಾಬಾದ್ ಫಂಡ್’ನ ಮೇಲೆ ಮೂರು ಹಕ್ಕುದಾರರು ಸೃಷ್ಟಿಯಾಗಿದ್ದರು. ಹಣ ತನಗೆ ಸೇರಬೇಕೆಂದು ವಾದಿಸಲು ಪಾಕಿಸ್ತಾನ ಎರಡು ಅಂಶಗಳನ್ನು ಮುಂದಿಡುತ್ತಿತ್ತು. ಮೊದಲನೆಯದು, ಹೈದ್ರಾಬಾದ್ ಪ್ರಾಂತ್ಯವು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವಂತೆ ತನಗೆ ಕೊಟ್ಟಿದ್ದ ಹಣ ಇದು ಎನ್ನುವುದು. ಎರಡನೆಯ ವಾದದಲ್ಲಿ, ಸರ್ಕಾರಿ ಮಾನದಂಡಗಳ ಅನ್ವಯ ವರ್ಗಾವಣೆಯಾದ ಈ ಹಣವನ್ನು ಭಾರತದಿಂದ ‘ಸುರಕ್ಷಿತವಾಗಿಡಲು’ ತನಗೆ ವರ್ಗಾಯಿಸಬೇಕೆಂದು ಹೇಳಿಕೊಂಡಿತ್ತು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ದಿವಂಗತ ಮೀರ್ ಒಸ್ಮಾನ್ ಅಲಿ ಖಾನ್‍ನ ಮೊಮ್ಮಕ್ಕಳಾದ ಮುಫ್ಫಖಮ್ ಝಾ ಮತ್ತು ಮುಖ್ಖರ್ರಂ ಝಾ, ವಿದೇಶಾಂಗ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೂ ಮುಂದಾಗಿದ್ದರು. ಆದರೆ 2013ರಲ್ಲಿ ಪಾಕಿಸ್ತಾನ ಇದನ್ನು ಮತ್ತೆ ನ್ಯಾಯಾಲಯದ ಕಟೆಕಟೆ ಹತ್ತಿಸಿತ್ತು. ಈಗ ಅದರ ವಿರುದ್ಧವೇ ತೀರ್ಪು ಹೊರಬಂದಿದೆ.

ಯಾರಿಗೆ ಸೇರಲಿದೆ ಈ ಹಣ..?

ನ್ಯಾಯಾಲಯವು ತನ್ನ ತೀರ್ಪಿನಲ್ಲಿ “ಈ ಹಣದ ಮೇಲೆ ಏಳನೇ ನಿಜಾಮನ ಹಕ್ಕಿದೆ. ಹಾಗಾಗಿ ದಿವಂಗತ ನಿಜಾಮನ ಪರ ವಾದಿಗಳಾದವರಿಗೆ (ಅವರ ಮೊಮ್ಮಕ್ಕಳು ಮತ್ತು ಭಾರತ) ಈ ಹಣ ಸಂದಾಯವಾಗುತ್ತೆ” ಎಂದು ಹೇಳಿದೆ ಮಾತ್ರವಲ್ಲ, “ಅದನ್ನು ಹೇಗೆ ಹಂಚಿಕೊಳ್ಳಬೇಕೆಂಬ ಆಯ್ಕೆಯನ್ನು ಅವರಿಗೇ ಬಿಟ್ಟಿದ್ದೇನೆ. ಆದರೆ ಹಾಗೆ ಹಂಚಿಕೊಳ್ಳುವ ವಿಧಾನ/ನಿಯಮವನ್ನು ನನ್ನ ಮುಂದೆ ಮಂಡಿಸಿ, ಅನುಮೋದನೆ ಪಡೆದುಕೊಳ್ಳಬೇಕು” ಎಂದೂ ಹೇಳಿದೆ.

ನಿಜವಾದ ಪ್ರಶ್ನೆ ಶುರುವಾಗುವುದೇ ಇಲ್ಲಿಂದ. ಯಾಕೆಂದರೆ ನಿಜಾಮನ ಪರವಾಗಿ ಇಬ್ಬರು ಮೊಮ್ಮಕ್ಕಳು ಮಾತ್ರ ದಾವೆಯಲ್ಲಿ ಭಾಗಿಯಾಗಿದ್ದರೂ ಕಾನೂನುಬದ್ಧವಾಗಿ ನಿಜಾಮನ ಪಿತ್ರಾರ್ಜಿತ ಫಲಾನುಭವಿಗಳ ಸಂಖ್ಯೆ 120! ನಿಜಾಮರ ಕುಟುಂಬ ಕಲ್ಯಾಣ ಸಂಘವನ್ನು ಹುಟ್ಟುಹಾಕಿ ಅದರ ಅಧ್ಯಕ್ಷರೂ ಆಗಿರುವ ನಿಜಾಮರ ಮತ್ತೊಬ್ಬ ಮೊಮ್ಮಗ ನಜಾಫ್ ಅಲಿಖಾನ್ ಹೇಳುವಂತೆ, ಬೆರಳೆಣಿಕೆಯ ಮಂದಿ ಬಿಟ್ಟರೆ ಇನ್ನುಳಿದ ನಿಜಾಮನ ವಂಶಸ್ಥರೆಲ್ಲ ಆರ್ಥಿಕ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಭಾರತ ಸರ್ಕಾರ ಈ ಹಣದ ಮೇಲೆ ಯಾವ ರೀತಿ ಪಾಲನ್ನು ನಿರೀಕ್ಷಿಸಲಿದೆ ಎನ್ನುವುದು ಸದ್ಯಕ್ಕಂತು ನಿಗೂಢವಾಗಿದೆ. ಹಾಗಾಗಿ ಹಂಚಿಕೆಯ ಕಗ್ಗಂಟು ಇನ್ನಷ್ಟು ಮುಂದುವರೆಯಲಿದೆ.

ಅಂದ ಹಾಗೆ, ಸದರಿ ತೀರ್ಪಿನ ಸಾಧಕ ಬಾಧಕಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪಾಕಿಸ್ತಾನ ಹೇಳಿದೆ. ಹಾಗೊಮ್ಮೆ ಅದೇನಾದರು ಮೇಲ್ಮನವಿ ಸಲ್ಲಿಸಿದರೆ, ಏಳು ದಶಕಗಳ ಈ ಪ್ರಕರಣ ಇನ್ನೊಂದಷ್ಟು ದಶಕಗಳಿಗೆ ಮುಂದುವರೆದರೆ ಅಚ್ಚರಿಯಿಲ್ಲ. ಒಟ್ಟಿನಲ್ಲಿ, ಈ ತೀರ್ಪಿನಿಂದಾಗಿ ಭಾರತದ ಎದುರು ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗ ಆಗಿರುವುದು ಮಾತ್ರ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...