Homeಮುಖಪುಟದೇಶಪ್ರೇಮ ಇದ್ದರೆ, ಆರೋಗ್ಯ ಸೇತು ಸೋರ್ಸ್‌ ಕೋಡ್‌ ಪ್ರಕಟಿಸಿ | ಭಾರತ ಸರ್ಕಾರಕ್ಕೆ ಹ್ಯಾಕರ್‌ ಸವಾಲು

ದೇಶಪ್ರೇಮ ಇದ್ದರೆ, ಆರೋಗ್ಯ ಸೇತು ಸೋರ್ಸ್‌ ಕೋಡ್‌ ಪ್ರಕಟಿಸಿ | ಭಾರತ ಸರ್ಕಾರಕ್ಕೆ ಹ್ಯಾಕರ್‌ ಸವಾಲು

- Advertisement -
- Advertisement -

ಫ್ರೆಂಚ್‌ ಮೂಲದ ಹ್ಯಾಕರ್‌, ಡಾಟಾ ಸಂಶೋಧಕ ಏಲಿಯಟ್‌ ಆಲ್ಡರ್‌ಸನ್‌ ಭಾರತ ಸರ್ಕಾರಕ್ಕೆ ಆರೋಗ್ಯ ಸೇತು ಆಪ್‌ನ ಸೋರ್ಸ್‌ ಕೋಡ್‌ ಪ್ರಕಟಿಸುವಂತೆ ಸವಾಲು ಹಾಕಿದ್ದಾರೆ.

ಮಂಗಳವಾರ ಈ ಕುರಿತು ಟ್ವೀಟ್‌ ಮಾಡಿದ ಏಲಿಯಟ್ ಆಲ್ಡರ್ಸನ್‌ ಸುರಕ್ಷತೆಯಲ್ಲಿ ಲೋಪವಿದೆ ಎಂದು ನ್ಯಾಷನಲ್‌ ಇನ್‌ಫಾರ್ಮ್ಯಾಟಿಕ್ಸ್‌ ಸೆಂಟರ್‌ಗೆ ಎಚ್ಚರಿಸಿದ್ದರು. ಜೊತೆಗೆ ರಾಹುಲ್‌ ಗಾಂಧಿ ಅನುಮಾನ ಸತ್ಯವೆಂದು ಟ್ವೀಟ್‌ ಮಾಡುವ ಮೂಲಕ ಆರೋಗ್ಯ ಸೇತು ಒಂದು ಕಣ್ಗಾವಲು ವ್ಯವಸ್ಥೆ ಎಂಬ ಅನುಮಾನಕ್ಕೆ ಇಂಬು ನೀಡಿದ್ದರು.

ಬೆನ್ನಲ್ಲೇ ಸಚಿವ ರವಿಶಂಕರ್‌ ಪ್ರಸಾದ್‌ ಯಾವುದೇ ಲೋಪವಿಲ್ಲದ ಎಂದು ಹೇಳಿಕೆ ನೀಡಿ ಸಮರ್ಥಿಸಿಕೊಂಡಿದ್ದರು. ಆದರೆ ಏಲಿಯಟ್‌ ಆಲ್ಡರ್ಸನ್‌ ಬುಧವಾರ ಪ್ರಕಟಿಸಿದ ಸರಣಿ ಟ್ವೀಟ್‌ಗಳಲ್ಲಿ ಭಾರತ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ.

ಏಲಿಯಟ್‌ ಆಲ್ಡರ್‌ಸನ್‌ ಸವಾಲುಗಳು

ಆರೋಗ್ಯ ಸೇತು ಆಪ್‌ನ ಸೋರ್ಸ್‌ ಕೋಡ್‌ ಮುಕ್ತವಾಗಿರಬೇಕು. ನೀವು ನಿಮ್ಮ ದೇಶದ ಪ್ರಜೆಗಳಿಗೆ ಕಡ್ಡಾಯವಾಗಿ ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಲು ಹೇಳುತ್ತಿರುವಾಗ, ಈ ಆಪ್‌ ಏನು ಮಾಡುತ್ತಿದೆ ಎಂಬುದನ್ನು ಅರಿಯುವ ಹಕ್ಕಿದೆ. ನಿಮಗೆ ನಿಜಕ್ಕೂ ದೇಶ ಪ್ರೇಮವಿದ್ದರೆ ಆರೋಗ್ಯ ಸೇತು ಆಪ್‌ನ ಸೋರ್ಸ್‌ ಕೋಡ್‌ ಪ್ರಕಟಿಸಿ ಎಂದಿದ್ದಾರೆ.

ಸೋರ್ಸ್‌ ಆಪ್‌ನ ವಿನ್ಯಾಸವನ್ನು ರೂಪಿಸಲು ಬಳಸುವ ನಿರ್ದೇಶನಗಳ ಒಟ್ಟು ಗುಚ್ಚ. ಇದೇ ಆಪ್‌ ಕಾರ್ಯವಿಧಾನವನ್ನು ಬಿಚ್ಚಿಡುತ್ತದೆ. ಅದನ್ನ ಸರ್ಕಾರ ಮುಚ್ಚಿಡುತ್ತಿದೆ ಎಂಬುದು ಏಲಿಯಟ್‌ ಆಲ್ಡರ್ಸನ್‌ ತಕರಾರು.

ಮುಂದುವರೆದು ಈ ಆಪ್‌ನ ಹಿಂದಿನ ಆವೃತ್ತಿಯಲ್ಲಿ ಸ್ವತಃ ಏಲಿಯಟ್‌ ಲೋಕಲ್‌ ಡಾಟಾಬೇಸ್‌ನಿಂದ ಯಾವುದೇ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಬಹುದು ಎಂಬುದನ್ನು ಕಂಡುಕೊಂಡಿದ್ದರು. ಮಂಗಳವಾರ ಕರೋನಾ ಸೋಂಕಿತರು, ಅನಾರೋಗ್ಯ ಪೀಡಿತರು, ತಮ್ಮ ಇಚ್ಛೆಯ ಪ್ರದೇಶದಲ್ಲಿ ಸ್ವಯಂ ತಪಾಸಣೆಗೆ ಒಳಪಟ್ಟವರ ಮಾಹಿತಿಯನ್ನು ನೋಡುವ ಅವಕಾಶವೂ ಇತ್ತು ಎಂದು ತಮ್ಮ ಟ್ವೀಟ್‌ನಲ್ಲಿ ವಿವರಿಸಿದ್ದಾರೆ. ಅಂದರೆ ಎಷ್ಟರ ಮಟ್ಟಿಗೆ ಮಾಹಿತಿ ಬಹಿರಂಗವಾಗಿತ್ತು ಎಂದರೆ ಪ್ರಧಾನಿ ಕಚೇರಿ ಅಥವಾ ಭಾರತೀಯ ಸಂಸತ್ತಿನಲ್ಲಿ ಯಾರು ಅನಾರೋಗ್ಯ ಪೀಡಿತರು ಎಂಬುದನ್ನು ತಿಳಿಯಬಹುದು ಎಂದಿದ್ದಾರೆ. ಅಂದರೆ ನಿರ್ದಿಷ್ಟವಾಗಿ ಇಂಥದ್ದೇ ಮನೆಯಲ್ಲಿ ಸೋಂಕು ತಗುಲಿದೆ ಎಂಬುದನ್ನು ಎಲ್ಲೋ ಕೂತಿರುವ ನನಗೆ ತಿಳಿಯಲು ಸಾಧ್ಯ ಎಂಬುದನ್ನು ವಿವರಿಸಿದ್ದರು.

ಅದರಂತೆ ಪ್ರಧಾನಿ ಕಚೇರಿಯಲ್ಲಿ 5 ಮಂದಿ ಅನಾರೋಗ್ಯವಿದೆ, ಭಾರತೀಯ ಸೇನಾ ಮುಖ್ಯ ಕಚೇರಿಯಲ್ಲಿ ಇಬ್ಬರು ಅನಾರೋಗ್ಯ ಪೀಡಿತರು, ಭಾರತೀಯ ಸಂಸತ್ತಿನಲ್ಲಿ ಒಬ್ಬರಿಗೆ ಸೋಂಕಿದೆ ಗೃಹ ಕಚೇರಿಯಲ್ಲಿ ಮೂವರಿಗೆ ಸೋಂಕಿದೆ ಎಂಬ ಮಾಹಿತಿಯನ್ನು ತಮಗೆ ಸಿಕ್ಕಿದೆ. ಇನ್ನು ಮುಂದೆ ಹೇಳಬೇಕೆ ಎಂದು ಸವಾಲು ಹಾಕಿದ್ದಾರೆ.

ಏಪ್ರಿಲ್‌ 4ರಿಂದ ಆರೋಗ್ಯ ಸೇತುವಿನಲ್ಲಿರುವ ಲೋಪಗಳನ್ನು ಗುರುತಿಸುತ್ತಾ ಬಂದಿರುವ ಏಲಿಯಟ್‌ ಆಲ್ಡರ್ಸನ್‌ ಬಳಕೆದಾರರ ಅಂದರೆ ಭಾರತೀಯ ನಾಗರಿಕರ ಖಾಸಗಿತನ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಕುರಿತು ದೀರ್ಘ ಲೇಖನ ಬರೆಯುವುದಾಗಿಯೂ ಏಲಿಯಟ್‌ ತಮ್ಮ ಟ್ವೀಟ್‌ವೊಂದರಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಇದೇ ಏಲಿಯಟ್‌ ಆಲ್ಡರ್ಸನ್‌ ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳು ಸೋಂಕು ಹರಡುವಿಕೆಯನ್ನು ಪತ್ತೆ ಮಾಡುವ ನೆಪದಲ್ಲಿ ಕಣ್ಗಾವಲು ಇಡಲು ಆಪ್‌ಗಳನ್ನುಬಳಸುತ್ತಿವೆ ಎಂದು ಅನುಮಾನ ವ್ಯಕ್ತಪಡಿಸಿ ಅಂತಹ ಆಪ್‌ಗಳನ್ನು ಪಟ್ಟಿ ಮಾಡಿದ್ದರು. ಸಿಂಗಪುರ್‌, ಇಸ್ರೇಲ್‌ ಐಸ್‌ಲ್ಯಾಂಡ್‌, ಸೇರಿದಂತೆ ಹಲವು ದೇಶಗಳು ಈ ಪಟ್ಟಿಯಲ್ಲಿದ್ದವು. ಭಾರತವೂ ಅದೇ ಸಾಲಿಗೆ ಸೇರಿದೆ ಎಂಬ ಅನುಮಾನ ಈಗ ವ್ಯಕ್ತವಾಗುತ್ತಿದೆ.

ಆರೋಗ್ಯ ಸೇತು ಅಭಿಯಾನ

ಫೇಸ್‌ಬುಕ್‌ಗಿಂತ ಅತ್ಯಂತ ವೇಗವಾಗಿ ಡೌನ್‌ ಲೋಡ್‌ ಮಾಡಿಕೊಳ್ಳಲಾಗಿರುವ ಆರೋಗ್ಯ ಸೇತು ಆಪ್‌ ಹೆಚ್ಚು ಬಳಕೆಯಾಗುತ್ತಿದೆ. ಇದುವರೆಗೂ 50 ಲಕ್ಷ ಡೌನ್‌ಲೋಡ್‌ಗಳಾಗಿವೆ. ಈಗಾಗಲೇ ನಿಮ್ಮ ಮೊಬೈಲ್‌ ಹಲವು ಬಾರಿ ಎಸ್ಸೆಮ್ಮೆಸ್‌ ಬಂದಿರಬಹುದು. ಈ ಮೇಲ್‌ ಬಂದಿರಬಹುದು. ಅಷ್ಟೇ ಅಲ್ಲದೆ ಅಜಯ್‌ದೇವಗನ್‌ರಂತಹ ನಟರು ಆರೊಗ್ಯ ಸೇತು ಒಂದು ಬಾಡಿಗಾರ್ಡ್‌ ಎಂಬಂತೆ ಪ್ರಚಾರ ಕೂಡ ಮಾಡುತ್ತಿದ್ದಾರೆ.

ಕಡ್ಡಾಯವಾಗಿ ಆರೋಗ್ಯಸೇತು ಇನ್ಸ್ಟಾಲ್‌ ಮಾಡಿಸುತ್ತಿರುವುದಕ್ಕೂ, ಹಲವು ತಜ್ಞರು ಮಾಹಿತಿ ಸುರಕ್ಷತೆಯ ಕುರಿತು ಪ್ರಶ್ನೆ ಎತ್ತುತ್ತಿರುವುದಕ್ಕೂ, ಏಲಿಯಟ್‌ ಆಲ್ಡರ್ಸನ್‌ ಎತ್ತಿರುವ ಪ್ರಶ್ನೆಗಳು ನಿಜಕ್ಕೂ ಭಾರತ ಸರ್ಕಾರ ಈ ಆಪ್‌ ಅನ್ನು ನಾಗರಿಕರ ಮೇಲೆ ಕಣ್ಗಾವಲು ಇಡಲೆಂದೇ ಬಳಸುತ್ತಿದೆ ಎಂಬ ಅನುಮಾನವನ್ನು ಬಲಪಡಿಸುತ್ತಿದೆ.

ಈ ಹಿಂದೆ ಜಗತ್ತಿನ ಅತ್ಯಂತ ವಿಶಿಷ್ಟ ಸೇವೆ ಎಂದು ಬಣ್ಣಿಸಲಾದ ಆಧಾರ್‌ ಮಾಹಿತಿ ಸೋರಿಕೆಯ ವಿಷಯದಲ್ಲೂ ಭಾರತ ಸರ್ಕಾರವನ್ನು ಎಚ್ಚರಿಸಿದ್ದಲ್ಲದೆ, ಸಮರ್ಥನೆ ಮಾಡಿಕೊಂಡಾಗಲೆಲ್ಲಾ, ಮುಜುಗರಕ್ಕೆ ಈಡು ಮಾಡುವಂತೆ ಮಾಹಿತಿ ಬಹಿರಂಗ ಪಡಿಸಿ, ಲೋಪಗಳನ್ನು ಎತ್ತಿ ತೋರಿಸಿದ್ದು ಇದೇ ಡಾಟಾ ಸಂಶೋಧಕ ಏಲಿಯಟ್‌ ಆಲ್ಡರ್ಸನ್‌.

ಕೃಪೆ: ಟೆಕ್ ಕನ್ನಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...