Homeಅಂತರಾಷ್ಟ್ರೀಯಮೋದಿ ಗೆದ್ರೆ ಒಳ್ಳೇದು ಅಂತ ಪಾಕ್ ಪ್ರಧಾನಿ ಹೇಳಿದ್ಯಾಕೆ?

ಮೋದಿ ಗೆದ್ರೆ ಒಳ್ಳೇದು ಅಂತ ಪಾಕ್ ಪ್ರಧಾನಿ ಹೇಳಿದ್ಯಾಕೆ?

- Advertisement -
- Advertisement -

ಇಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಅವರು ಹೇಳಿದ ಒಂದು ಮಾತು ಎಲ್ಲಾ ಕಡೆ ಸದ್ದು ಮಾಡ್ತಿದೆ. ಇದು ಪಾಕಿಸ್ತಾನದ ಜೊತೆಗೆ ಮೋದಿಗಿರುವ ಮ್ಯಾಚ್ ಫಿಕ್ಸಿಂಗ್ ಅಲ್ವಾ ಎಂತಲೂ, ಮೋದಿ ಗ್ಯಾಂಗೇ ತುಕ್ಡೇ ತುಕ್ಡೇ ಗ್ಯಾಂಗ್ ಎಂತಲೂ ನೆಟ್ಟಿಗರು ಜಡಾಯಿಸುತ್ತಿದ್ದಾರೆ. ಹಾಗಾದರೆ ಅವರ ಮಾತಿನ ಅರ್ಥ ಇಷ್ಟೇನಾ?

ನಿಜವಾಗಲೂ ಅಲ್ಲ. ಇಮ್ರಾನ್‍ಖಾನ್ ಹೇಳಿರುವ ಮಾತಿನ ಮುಂದುವರೆದ ಭಾಗ ಹೀಗಿದೆ. ಒಂದು ಬಲಪಂಥೀಯ ಸರ್ಕಾರ ಇದ್ದರೆ, ಶಾಂತಿ ಮಾತುಕತೆ ಸಾಧ್ಯ, ಕಾಶ್ಮೀರದ ಕುರಿತೂ ಚರ್ಚೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಈ ಮಾತಿಗೆ ಅರ್ಥ ಇದೆ. ಯಾವುದೇ ಎರಡು ದೇಶಗಳ ನಡುವೆ ಬಹಳ ಟೆನ್ಶನ್ ಇದ್ದರೆ, ಎರಡೂ ದೇಶಗಳಲ್ಲೂ ಅದರ ದುರುಪಯೋಗ ಮಾಡಿಕೊಳ್ಳುವ ಶಕ್ತಿಗಳು ಇದ್ದೇ ಇರುತ್ತವೆ. ಆ ದೇಶವನ್ನು ತೋರಿಸಿ ಇವರು, ಈ ದೇಶವನ್ನು ತೋರಿಸಿ ಅವರು ಹುಸಿ ರಾಷ್ಟ್ರೀಯವಾದ ಬಿತ್ತುತ್ತಾ ಇರುತ್ತಾರೆ. ದೇಶದೊಳಗೆ ತಾವು ಮಾಡುವ ಎಲ್ಲಾ ಅನ್ಯಾಯಗಳಿಗೂ ಅದನ್ನೊಂದು ಗುರಾಣಿಯಾಗಿ ಬಳಸುತ್ತಾ ಇರುತ್ತಾರೆ.

ಒಂದು ವೇಳೆ ಎರಡೂ ದೇಶಗಳಲ್ಲಿನ ಬಹುಸಂಖ್ಯಾತ ಜನರು ಭಿನ್ನ ಭಿನ್ನ ಧರ್ಮಕ್ಕೆ ಸೇರಿದ್ದರಂತೂ ಮುಗಿದೇ ಹೋಯಿತು, ಈ ನಕಲಿ ರಾಷ್ಟ್ರೀಯವಾದಿಗಳಿಗೆ ಹಬ್ಬ. ಪಾಕಿಸ್ತಾನ ಅಭಿವೃದ್ಧಿ ಹೊಂದದೇ ಈ ರೀತಿ ಹಾಳಾಗಿ ಹೋಗಿರುವುದರಲ್ಲಿ ಇದರ ಪ್ರಮುಖ ಪಾತ್ರ ಇದೆ. ಒಂದು ವೇಳೆ ಎರಡೂ ಕಡೆ, ಅಥವಾ ಒಂದು ಕಡೆ ಈ ನಕಲಿ ರಾಷ್ಟ್ರೀಯವಾದಿಗಳೇ ಅಧಿಕಾರಕ್ಕೆ ಬಂದು, ಅವರೇ ಮಾತುಕತೆಯಲ್ಲಿ ಭಾಗಿಯಾದರೆ?

ಈ ಸನ್ನಿವೇಶವನ್ನು ಊಹಿಸಿಕೊಳ್ಳಿ. ಇಂತಹ ಹುಸಿ ರಾಷ್ಟ್ರೀಯವಾದಿಗಳಲ್ಲದೇ, ಬೇರೆ ಒಂದು ಪಕ್ಷ ಅಧಿಕಾರದಲ್ಲಿರುತ್ತದೆ. ಅದು ಆ ಇನ್ನೊಂದು ರಾಷ್ಟ್ರದ ಜೊತೆಗೆ ಮಾತುಕತೆಗೆ ಕೂರುತ್ತದೆ. ಮಾತುಕತೆ ಎಂದ ಮೇಲೆ ಕೊಟ್ಟು ತೆಗೆದುಕೊಳ್ಳುವುದು ಇರುತ್ತದೆ. ಅದು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಅವರೇನಾದರೂ ಸ್ವಲ್ಪ ಆ ಕಡೆ ಈ ಕಡೆ ಮಾತಾಡಿದರೂ, ಶುರುವಾಗುತ್ತದೆ ‘ಇವರು ದೇಶದ ಹಿತಾಸಕ್ತಿಯನ್ನು ಬಲಿ ಕೊಟ್ಟರು. ಇವರು ಆ ಇನ್ನೊಂದು ದೇಶದ ಏಜೆಂಟರು’ ಇತ್ಯಾದಿ. ಒಂದು ವೇಳೆ ನಕಲಿ ರಾಷ್ಟ್ರೀಯವಾದಿಗಳೇ ಅಧಿಕಾರದಲ್ಲಿದ್ದರೆ? ಆ ಅಪಾಯ ಅಷ್ಟೊಂದು ಇರುವುದಿಲ್ಲ. ಅವರಿಗಿಂತ ಉಗ್ರ ನಕಲಿ ರಾಷ್ಟ್ರೀಯವಾದಿಗಳು ಯಾರಾದರೂ ಇದ್ದರೆ ಅವರು ಸ್ವಲ್ಪ ಕೂಗಾಡಬಹುದು ಅಷ್ಟೆ. ಈಗ ಮೋದಿ ವಿರುದ್ಧ ಪ್ರವೀಣ್ ತೊಗಾಡಿಯಾ ಕೂಗಾಡುತ್ತಿಲ್ಲವೇ? ಹಾಗೆ.

ವಾಜಪೇಯಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಯುದ್ಧಾನಂತರವೂ, ಯುದ್ಧಕ್ಕೆ ಕಾರಣನಾದ ಜನರಲ್ ಮುಷರಫ್ ಜೊತೆಗೇ ಮಾತುಕತೆ ನಡೆಸಿದರು. ಸಂಝೋತಾ ಎಕ್ಸ್‍ಪ್ರೆಸ್ ಬಿಟ್ಟರು. ಕಾಶ್ಮೀರವೂ ಚೆನ್ನಾಗಿತ್ತು.

ಆದರೆ ಇಮ್ರಾನ್ ಖಾನ್ ಮೋಸ ಹೋಗುತ್ತಿರುವುದು ಇಲ್ಲೇ. ಮೋದಿ ಮತ್ತು ವಾಜಪೇಯಿ ಒಂದೇ ಅಲ್ಲ. ಯಾವ ಕಾರಣಕ್ಕೂ ಎರಡೂ ದೇಶಗಳ ನಡುವಿನ ಸಮಸ್ಯೆ ಬಗೆಹರಿಯುವುದು ಅವರಿಗೆ ಬೇಕಿಲ್ಲ. ಆದರೂ ಒಂದು ಅವಕಾಶ ಇದೆ. ಏಕೆಂದರೆ, ಮೋದಿಯ ಪರಮಾಪ್ತರಾದ ಅಂಬಾನಿ ಮತ್ತು ಅದಾನಿಗಳಿಗೆ ಪಾಕಿಸ್ತಾನದಲ್ಲಿ ವ್ಯಾವಹಾರಿಕ ಸಂಬಂಧದ ಅಗತ್ಯವಿದೆ. ಚುನಾವಣೆ ಮುಗಿದ ನಂತರ ಪಾಕಿಸ್ತಾನವನ್ನು ಬಯ್ದು ಏನು ಪ್ರಯೋಜನ? ಆಗ ಬಿಸಿನೆಸ್ ಡೀಲ್ ಮಾಡಿಕೊಳ್ಳುವುದು. ನಂತರ ದೇಶದೊಳಗೆ ಜನವಿರೋಧಿ ಕೆಲಸವನ್ನೇ ಮುಂದುವರೆಸುವುದು. ಮತ್ತೆ ಚುನಾವಣೆ ಬರುವ ಹೊತ್ತಿಗೆ ‘ರಾಷ್ಟ್ರೀಯವಾದ’ ತರುವುದು.

ಇಲ್ಲೇ ಇನ್ನೊಂದು ಮಾತನ್ನೂ ಹೇಳಬೇಕು. ಇಮ್ರಾನ್‍ಖಾನ್ ಸಹಾ ಎಲ್ಲಿಯವರೆಗೆ ತಮ್ಮಲ್ಲಿ ಉಗ್ರರಿಲ್ಲ, ಉಗ್ರರಿಗೆ ಪ್ರೋತ್ಸಾಹ ಕೊಡುತ್ತಿಲ್ಲ ಎಂಬ ಸುಳ್ಳುಗಳನ್ನು ಹೇಳುತ್ತಿರುತ್ತಾರೋ ಅಲ್ಲಿಯವರೆಗೆ ಅವರ ಬಗ್ಗೆಯೂ ನಂಬಿಕೆ ಬರಲ್ಲ. ಅವರ ನೆಲದಿಂದ ಭಾರತದಲ್ಲಿ ಅಶಾಂತಿ, ಹಿಂಸೆಗಳಿಗೆ ಕಾರಣರಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ತನಕ, ಭಾರತದ ಮಟ್ಟಿಗೆ ಅವರೂ ಸಹಾ ಇನ್ನೊಬ್ಬ ಪಾಕ್ ಪ್ರಧಾನಿ ಅಷ್ಟೇ.

ಇವೆಲ್ಲಾ ಕಾರಣಗಳಿಂದ ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ಸ್ನೇಹಭಾವದಿಂದ ಅಭಿವೃದ್ಧಿಯ ಕಡೆಗೆ ಗಮನ ಕೊಡುವ ವಿಚಾರ ಇನ್ನೂ ದೂರವೇ ಉಳಿದಿವೆ ಎಂಬುದೇ ವಿಷಾದಕರ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...

ಅಸ್ಸಾಂ ಎಸ್‌ಐಆರ್‌ನಲ್ಲಿ 5 ಲಕ್ಷ ‘ಮಿಯಾ’ಗಳ ಹೆಸರು ಅಳಿಸಲಾಗುವುದು, ಅವರಿಗೆ ತೊಂದರೆ ಕೊಡುವುದೇ ನನ್ನ ಕೆಲಸ : ಸಿಎಂ ಹಿಮಂತ ಬಿಸ್ವಾ ಶರ್ಮಾ

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕೈಗೆತ್ತಿಕೊಂಡಾಗ ನಾಲ್ಕರಿಂದ ಐದು ಲಕ್ಷ 'ಮಿಯಾ ಮತದಾರರ' ಹೆಸರುಗಳನ್ನು ಅಳಿಸಲಾಗುವುದು, ಅವರಿಗೆ ತೊಂದರೆ ಕೊಡುವುದೇ ನನ್ನ ಕೆಲಸ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ...

ವಿಮಾನ ಪತನ : ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಸೇರಿ ಐದು ಮಂದಿ ಸಾವು

ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಸೇರಿದಂತೆ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ...

ಕಾನೂನುಬಾಹಿರ ಹತ್ಯೆ ಆರೋಪ : ಸಿಆರ್‌ಪಿಎಫ್ ಅಧಿಕಾರಿಗೆ ಶೌರ್ಯ ಚಕ್ರ ನೀಡಿರುವುದನ್ನು ಖಂಡಿಸಿದ ಕುಕಿ-ಝೋ ಗುಂಪುಗಳು

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಅಧಿಕಾರಿಯೊಬ್ಬರು ತಮ್ಮ ಸಮುದಾಯದ ಹತ್ತು ಪುರುಷರ "ಕಾನೂನುಬಾಹಿರ ಹತ್ಯೆ"ಯಲ್ಲಿ ಭಾಗಿಯಾಗಿದ್ದಾರೆ ಎಂದು ಮಣಿಪುರದ ಕುಕಿ-ಝೋ ಸಂಘಟನೆಗಳು ಸೋಮವಾರ (ಜ.26) ಆರೋಪಿಸಿದ್ದು, ಆ ಅಧಿಕಾರಿಗೆ ಶೌರ್ಯ ಚಕ್ರ...

ಉತ್ತರ ಪ್ರದೇಶ: ಸೋನಭದ್ರಾದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ದುಷ್ಕರ್ಮಿಗಳು 

ಸೋನಭದ್ರ: ರಾಯ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕ್ರವಾರ್ ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸೋಮವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕ್ರಾವರ್ ಗ್ರಾಮದ ಪಂಚಾಯತ್ ಕಟ್ಟಡದ ಬಳಿ...

ಬುಡಕಟ್ಟು ರೈತರ ಬೃಹತ್ ಮೆರವಣಿಗೆ: ಬೇಡಿಕೆಗಳ ಕುರಿತು ಸಿಪಿಐ(ಎಂ)-ಎಐಕೆಎಸ್ ನಿಯೋಗದೊಂದಿಗೆ ಮುಖ್ಯಮಂತ್ರಿ ಫಡ್ನವೀಸ್ ಮಾತುಕತೆ

ಬಾಕಿ ಇರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ)-ಎಐಕೆಎಸ್ ನೇತೃತ್ವದಲ್ಲಿ ನಾಸಿಕ್‌ನಿಂದ ಮುಂಬೈಗೆ ಸಾವಿರಾರು ರೈತರು ಮತ್ತು ಬುಡಕಟ್ಟು ನಿವಾಸಿಗಳು ನಡೆಸಿದ ದೀರ್ಘ ಮೆರವಣಿಗೆ ಇಂದು ಜನವರಿ 27 ರಂದು ಮುಂಬೈನ ಮಂತ್ರಾಲಯ...

‘ಭಾರತದಲ್ಲಿ ಬಿಜೆಪಿ ದಾಳಿಯನ್ನು ಎದುರಿಸಲು ‘ದೀದಿ’ಗೆ ಮಾತ್ರ ಸಾಧ್ಯ’: ಅಖಿಲೇಶ್ ಯಾದವ್ 

ಕೋಲ್ಕತ್ತಾ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ "ಬಿಜೆಪಿಯ ದಾಳಿಯನ್ನು ಎದುರಿಸುವಲ್ಲಿನ ಧೈರ್ಯ"ಕ್ಕಾಗಿ ಟಿಎಂಸಿ ಮುಖ್ಯಸ್ಥೆಯನ್ನು ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ...

ಬದರಿನಾಥ್-ಕೇದಾರನಾಥ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧ ಸಾಧ್ಯತೆ

ಉತ್ತರಾಖಂಡದ ಹಿಮಾಲಯದ ಮಡಿಲಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶ ಅನುಮತಿಸಬಹುದು. ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿರುವ ಎರಡು ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು...

ವಿಬಿ-ಜಿ ರಾಮ್ ಜಿ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ (ಜ.27) ಬೆಂಗಳೂರಿನ ಫ್ರೀಡಂ...

ಯುಸಿಸಿಯಲ್ಲಿ 18 ಬದಲಾವಣೆ ಮಾಡಿದ ಉತ್ತರಾಖಂಡ್ ಸರ್ಕಾರ; ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ

ವಿವಾಹ, ವಿಚ್ಛೇದನ, ಲಿವ್-ಇನ್ ಸಂಬಂಧಗಳು ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುವ ಗುರಿಯನ್ನು ಹೊಂದಿರುವ ಸುಮಾರು ಹದಿನೆಂಟು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯ ಹಲವಾರು ನಿಬಂಧನೆಗಳನ್ನು ಮಾರ್ಪಡಿಸಲು ಉತ್ತರಾಖಂಡ ಸರ್ಕಾರ...