Homeಅಂತರಾಷ್ಟ್ರೀಯಮೋದಿ ಗೆದ್ರೆ ಒಳ್ಳೇದು ಅಂತ ಪಾಕ್ ಪ್ರಧಾನಿ ಹೇಳಿದ್ಯಾಕೆ?

ಮೋದಿ ಗೆದ್ರೆ ಒಳ್ಳೇದು ಅಂತ ಪಾಕ್ ಪ್ರಧಾನಿ ಹೇಳಿದ್ಯಾಕೆ?

- Advertisement -
- Advertisement -

ಇಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಅವರು ಹೇಳಿದ ಒಂದು ಮಾತು ಎಲ್ಲಾ ಕಡೆ ಸದ್ದು ಮಾಡ್ತಿದೆ. ಇದು ಪಾಕಿಸ್ತಾನದ ಜೊತೆಗೆ ಮೋದಿಗಿರುವ ಮ್ಯಾಚ್ ಫಿಕ್ಸಿಂಗ್ ಅಲ್ವಾ ಎಂತಲೂ, ಮೋದಿ ಗ್ಯಾಂಗೇ ತುಕ್ಡೇ ತುಕ್ಡೇ ಗ್ಯಾಂಗ್ ಎಂತಲೂ ನೆಟ್ಟಿಗರು ಜಡಾಯಿಸುತ್ತಿದ್ದಾರೆ. ಹಾಗಾದರೆ ಅವರ ಮಾತಿನ ಅರ್ಥ ಇಷ್ಟೇನಾ?

ನಿಜವಾಗಲೂ ಅಲ್ಲ. ಇಮ್ರಾನ್‍ಖಾನ್ ಹೇಳಿರುವ ಮಾತಿನ ಮುಂದುವರೆದ ಭಾಗ ಹೀಗಿದೆ. ಒಂದು ಬಲಪಂಥೀಯ ಸರ್ಕಾರ ಇದ್ದರೆ, ಶಾಂತಿ ಮಾತುಕತೆ ಸಾಧ್ಯ, ಕಾಶ್ಮೀರದ ಕುರಿತೂ ಚರ್ಚೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಈ ಮಾತಿಗೆ ಅರ್ಥ ಇದೆ. ಯಾವುದೇ ಎರಡು ದೇಶಗಳ ನಡುವೆ ಬಹಳ ಟೆನ್ಶನ್ ಇದ್ದರೆ, ಎರಡೂ ದೇಶಗಳಲ್ಲೂ ಅದರ ದುರುಪಯೋಗ ಮಾಡಿಕೊಳ್ಳುವ ಶಕ್ತಿಗಳು ಇದ್ದೇ ಇರುತ್ತವೆ. ಆ ದೇಶವನ್ನು ತೋರಿಸಿ ಇವರು, ಈ ದೇಶವನ್ನು ತೋರಿಸಿ ಅವರು ಹುಸಿ ರಾಷ್ಟ್ರೀಯವಾದ ಬಿತ್ತುತ್ತಾ ಇರುತ್ತಾರೆ. ದೇಶದೊಳಗೆ ತಾವು ಮಾಡುವ ಎಲ್ಲಾ ಅನ್ಯಾಯಗಳಿಗೂ ಅದನ್ನೊಂದು ಗುರಾಣಿಯಾಗಿ ಬಳಸುತ್ತಾ ಇರುತ್ತಾರೆ.

ಒಂದು ವೇಳೆ ಎರಡೂ ದೇಶಗಳಲ್ಲಿನ ಬಹುಸಂಖ್ಯಾತ ಜನರು ಭಿನ್ನ ಭಿನ್ನ ಧರ್ಮಕ್ಕೆ ಸೇರಿದ್ದರಂತೂ ಮುಗಿದೇ ಹೋಯಿತು, ಈ ನಕಲಿ ರಾಷ್ಟ್ರೀಯವಾದಿಗಳಿಗೆ ಹಬ್ಬ. ಪಾಕಿಸ್ತಾನ ಅಭಿವೃದ್ಧಿ ಹೊಂದದೇ ಈ ರೀತಿ ಹಾಳಾಗಿ ಹೋಗಿರುವುದರಲ್ಲಿ ಇದರ ಪ್ರಮುಖ ಪಾತ್ರ ಇದೆ. ಒಂದು ವೇಳೆ ಎರಡೂ ಕಡೆ, ಅಥವಾ ಒಂದು ಕಡೆ ಈ ನಕಲಿ ರಾಷ್ಟ್ರೀಯವಾದಿಗಳೇ ಅಧಿಕಾರಕ್ಕೆ ಬಂದು, ಅವರೇ ಮಾತುಕತೆಯಲ್ಲಿ ಭಾಗಿಯಾದರೆ?

ಈ ಸನ್ನಿವೇಶವನ್ನು ಊಹಿಸಿಕೊಳ್ಳಿ. ಇಂತಹ ಹುಸಿ ರಾಷ್ಟ್ರೀಯವಾದಿಗಳಲ್ಲದೇ, ಬೇರೆ ಒಂದು ಪಕ್ಷ ಅಧಿಕಾರದಲ್ಲಿರುತ್ತದೆ. ಅದು ಆ ಇನ್ನೊಂದು ರಾಷ್ಟ್ರದ ಜೊತೆಗೆ ಮಾತುಕತೆಗೆ ಕೂರುತ್ತದೆ. ಮಾತುಕತೆ ಎಂದ ಮೇಲೆ ಕೊಟ್ಟು ತೆಗೆದುಕೊಳ್ಳುವುದು ಇರುತ್ತದೆ. ಅದು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಅವರೇನಾದರೂ ಸ್ವಲ್ಪ ಆ ಕಡೆ ಈ ಕಡೆ ಮಾತಾಡಿದರೂ, ಶುರುವಾಗುತ್ತದೆ ‘ಇವರು ದೇಶದ ಹಿತಾಸಕ್ತಿಯನ್ನು ಬಲಿ ಕೊಟ್ಟರು. ಇವರು ಆ ಇನ್ನೊಂದು ದೇಶದ ಏಜೆಂಟರು’ ಇತ್ಯಾದಿ. ಒಂದು ವೇಳೆ ನಕಲಿ ರಾಷ್ಟ್ರೀಯವಾದಿಗಳೇ ಅಧಿಕಾರದಲ್ಲಿದ್ದರೆ? ಆ ಅಪಾಯ ಅಷ್ಟೊಂದು ಇರುವುದಿಲ್ಲ. ಅವರಿಗಿಂತ ಉಗ್ರ ನಕಲಿ ರಾಷ್ಟ್ರೀಯವಾದಿಗಳು ಯಾರಾದರೂ ಇದ್ದರೆ ಅವರು ಸ್ವಲ್ಪ ಕೂಗಾಡಬಹುದು ಅಷ್ಟೆ. ಈಗ ಮೋದಿ ವಿರುದ್ಧ ಪ್ರವೀಣ್ ತೊಗಾಡಿಯಾ ಕೂಗಾಡುತ್ತಿಲ್ಲವೇ? ಹಾಗೆ.

ವಾಜಪೇಯಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಯುದ್ಧಾನಂತರವೂ, ಯುದ್ಧಕ್ಕೆ ಕಾರಣನಾದ ಜನರಲ್ ಮುಷರಫ್ ಜೊತೆಗೇ ಮಾತುಕತೆ ನಡೆಸಿದರು. ಸಂಝೋತಾ ಎಕ್ಸ್‍ಪ್ರೆಸ್ ಬಿಟ್ಟರು. ಕಾಶ್ಮೀರವೂ ಚೆನ್ನಾಗಿತ್ತು.

ಆದರೆ ಇಮ್ರಾನ್ ಖಾನ್ ಮೋಸ ಹೋಗುತ್ತಿರುವುದು ಇಲ್ಲೇ. ಮೋದಿ ಮತ್ತು ವಾಜಪೇಯಿ ಒಂದೇ ಅಲ್ಲ. ಯಾವ ಕಾರಣಕ್ಕೂ ಎರಡೂ ದೇಶಗಳ ನಡುವಿನ ಸಮಸ್ಯೆ ಬಗೆಹರಿಯುವುದು ಅವರಿಗೆ ಬೇಕಿಲ್ಲ. ಆದರೂ ಒಂದು ಅವಕಾಶ ಇದೆ. ಏಕೆಂದರೆ, ಮೋದಿಯ ಪರಮಾಪ್ತರಾದ ಅಂಬಾನಿ ಮತ್ತು ಅದಾನಿಗಳಿಗೆ ಪಾಕಿಸ್ತಾನದಲ್ಲಿ ವ್ಯಾವಹಾರಿಕ ಸಂಬಂಧದ ಅಗತ್ಯವಿದೆ. ಚುನಾವಣೆ ಮುಗಿದ ನಂತರ ಪಾಕಿಸ್ತಾನವನ್ನು ಬಯ್ದು ಏನು ಪ್ರಯೋಜನ? ಆಗ ಬಿಸಿನೆಸ್ ಡೀಲ್ ಮಾಡಿಕೊಳ್ಳುವುದು. ನಂತರ ದೇಶದೊಳಗೆ ಜನವಿರೋಧಿ ಕೆಲಸವನ್ನೇ ಮುಂದುವರೆಸುವುದು. ಮತ್ತೆ ಚುನಾವಣೆ ಬರುವ ಹೊತ್ತಿಗೆ ‘ರಾಷ್ಟ್ರೀಯವಾದ’ ತರುವುದು.

ಇಲ್ಲೇ ಇನ್ನೊಂದು ಮಾತನ್ನೂ ಹೇಳಬೇಕು. ಇಮ್ರಾನ್‍ಖಾನ್ ಸಹಾ ಎಲ್ಲಿಯವರೆಗೆ ತಮ್ಮಲ್ಲಿ ಉಗ್ರರಿಲ್ಲ, ಉಗ್ರರಿಗೆ ಪ್ರೋತ್ಸಾಹ ಕೊಡುತ್ತಿಲ್ಲ ಎಂಬ ಸುಳ್ಳುಗಳನ್ನು ಹೇಳುತ್ತಿರುತ್ತಾರೋ ಅಲ್ಲಿಯವರೆಗೆ ಅವರ ಬಗ್ಗೆಯೂ ನಂಬಿಕೆ ಬರಲ್ಲ. ಅವರ ನೆಲದಿಂದ ಭಾರತದಲ್ಲಿ ಅಶಾಂತಿ, ಹಿಂಸೆಗಳಿಗೆ ಕಾರಣರಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ತನಕ, ಭಾರತದ ಮಟ್ಟಿಗೆ ಅವರೂ ಸಹಾ ಇನ್ನೊಬ್ಬ ಪಾಕ್ ಪ್ರಧಾನಿ ಅಷ್ಟೇ.

ಇವೆಲ್ಲಾ ಕಾರಣಗಳಿಂದ ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ಸ್ನೇಹಭಾವದಿಂದ ಅಭಿವೃದ್ಧಿಯ ಕಡೆಗೆ ಗಮನ ಕೊಡುವ ವಿಚಾರ ಇನ್ನೂ ದೂರವೇ ಉಳಿದಿವೆ ಎಂಬುದೇ ವಿಷಾದಕರ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...