Homeಅಂಕಣಗಳುಇನ್ಮುಂದೆ ಖಾಯಂ ಕೆಲಸ ಎಂಬುದು ಕನಸು ಮಾತ್ರ: ಗುತ್ತಿಗೆ ನೌಕರರು ಏನು ಮಾಡಬೇಕು?

ಇನ್ಮುಂದೆ ಖಾಯಂ ಕೆಲಸ ಎಂಬುದು ಕನಸು ಮಾತ್ರ: ಗುತ್ತಿಗೆ ನೌಕರರು ಏನು ಮಾಡಬೇಕು?

ಕೊರೊನಾದಿಂದ ಈ ಸ್ಥಿತಿ ಬಂದೇತಿ ಅಂತ ಬಂಡವಾಳಶಾಹಿಗಳು ಹೇಳತಾರ. ಆದರ ಅವರ ಮನಸ್ಥಿತಿ ನೋಡಿದರ ಅವರು ಇದನ್ನ ಮಾಡಲಿಕ್ಕೆ ಕಾಯುತ್ತಾ ಇದ್ದರು, ಅಷ್ಟರಾಗ ಕೊರೊನಾ ಮಾಮ ಬಂದು ಅವರ ಕೆಲಸ ಹಗುರ ಮಾಡಿದ ಅಂತ ಅನ್ನಸತೇತಿ.

- Advertisement -
- Advertisement -

ಗಿಗ್ಗು ಅರ್ಥವ್ಯವಸ್ಥೆ ಅರ್ಥಾತ್ ಗಿಗ್ಗಾವಸ್ತೆ- ಡೇಟಾಮ್ಯಾಟಿಕ್ಸ್

ಹಳೇ ಕನ್ನಡ ಸಿನಿಮಾದಾಗ ಹೊಸ ಹೀರೋಗಳ ಕಡೆ ಹೊಡತ ತಿನ್ನಲಿಕ್ಕೆ ಒಬ್ಬ ಸಣ್ಣ ರೌಡಿ ಇರ್ತಾ ಇದ್ದ. ಅವನ ಹೆಸರು ಗುಗ್ಗು.

ಅವನು ಒಮ್ಮೊಮ್ಮೆ ಕಾಮೇಡಿ ಮಾಡ್ತಾ ಇದ್ದ. ಇನ್ನೊಮ್ಮೆ ರೌಡಿಗಿರಿ ಮಾಡ್ತಾ ಇದ್ದ. ಅವನ ಪಾತ್ರ ಸಣ್ಣದು. ಅವ ಹೀರೋ ಆಗಿ ಯಾವ ಪಿಚ್ಚರೂ ಮಾಡಲಿಲ್ಲ. ಮೂರು ತಾಸೀನ ಪಿಚ್ಚರಿನಾಗ ಒಂದು ಹತ್ತು ನಿಮಿಷ ಬಂದು ಹೋಗತಿದ್ದ. ಬಹಳ ಮಂದಿಗೆ ಅವ ಇದ್ದದ್ದೂ ಗೊತ್ತಾಗಲಿಲ್ಲ, ಹೋದದ್ದೂ ಗೊತ್ತಾಗಲಿಲ್ಲ.

ಈಗ ನಮ್ಮ ಜಾಗತಿಕ ಅರ್ಥವ್ಯವಸ್ಥೆ ಅನ್ನೋದು ಕೊರೊನಾದಿಂದಾಗಿ ಕೆಟ್ಟು ಕೆರ ಹಿಡದು ಹೋಗೇದ. ಇಂಥದ್ದರಾಗ ನಮ್ಮನ್ನು ಆಳುವ ಗುಗ್ಗುಗಳು ಗಿಗ್ಗು ಅರ್ಥವ್ಯವಸ್ಥೆ ಅಥವಾ ಗಿಗ್ಗಾವಸ್ತೆಯನ್ನ ಜಾರಿಗೆ ತರೋ ತಯಾರಿ ಮಾಡಾಕ ಹತ್ಯಾರ.

ಇದು ಏನಪಾ ಗಿಗ್ಗಾವಸ್ತೆ? ಹಂಗಅಂದ್ರ ಖಾತ್ರಿಯಲ್ಲದ ಕೆಲಸ. ಪಂಚಾಯಿತಿಯಿಂದ ಹಿಡದು ಯೂನನಿವರ್ಸಿಟಿವರೆಗೂ ಎಲ್ಲ ಭಾರತೀಯರಿಗೂ ಉದ್ಯೋಗ ಖಾತ್ರಿ ಅಭ್ಯಾಸ ಆಗಿ ಹೋಗೇದ. ಹಿಂಗಾಗಿ ಅಂತವರಿಗೆ ಇದು ಅಪಥ್ಯ. ಕೋಟ್ಯಾಂತರ ಮಂದಿಗೆ – ಕೂಲಿಕಾರರಿಗೆ, ಮನೆ ಕೆಲಸದವರಿಗೆ, ಅರೆಕಾಲಿಕ ಸಿಬ್ಬಂದಿಗಳಿಗೆ, ಅತಿಥಿ ಉಪನ್ಯಾಸಕರಿಗೆ ಇದು ದಿನ ನಿತ್ಯದ ಗೋಳು. ಅವರಿಗೆ ಏನೂ ಆಶ್ಚರ್ಯ ಆಗೋದಿಲ್ಲ.

ಈ ಗಿಗ್ಗು ಯಾಕ ಬಂತು ಅಂತ ತಿಳಕೋಬೇಕು ಅಂದ್ರ ಅದಕ್ಕ ಒಂದು ಸ್ವಲ್ಪ ಹಿನ್ನೆಲೆ ಬೇಕಾಗತದ. ಸರಳ ಭಾಷೆಯೊಳಗ ಹೇಳಬೇಕು ಅಂದ್ರ ಈ ಸಮಕಾಲೀನ ಜಾಗತಿಕ ಸಂದರ್ಭದಲ್ಲಿ ನವ್ಯೋತ್ತರ ವಸಾಹತುಶಾಹಿಯ ಪ್ರಭಾವದಿಂದ ಏನು ನಮ್ಮ ಅರ್ಥವ್ಯವಸ್ಥೆ ನಡದದ ಅಲ್ಲಾ. ಅದಕ್ಕ ಸಾಂಪ್ರದಾಯಿಕ ಅರ್ಥವ್ಯವಸ್ಥೆ ಅಥವಾ ಮಾರುಕಟ್ಟೆ ಹಿನ್ನೆಲೆಯ ಅರ್ಥವ್ಯವಸ್ಥೆ ಅಂತ ಅಂತಾರ.

ಇದರಾಗ ಎರಡು ಮಾರುಕಟ್ಟೆ ಮುಖ್ಯ ಆಗತಾವು. ಒಂದು ಸರಕು ಮತ್ತು ಸೇವೆ ಹಾಗೂ ಇನ್ನೊಂದು ಕಾರ್ಮಿಕ ಮಾರುಕಟ್ಟೆ. ಕಾರ್ಮಿಕ ವಿಭಾಗದೊಳ ಎರಡು ಉಪ ವಿಭಾಗ ಅದಾವು – ಕೌಶಲ್ಯ ರಹಿತ ಮತ್ತು ಕೌಶಲ್ಯ ಸಹಿತ.

ಇದು ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ನಡೀತೇತಿ. ಬೇಡಿಕೆ ಹೆಚ್ಚು ಇದ್ದರ ಸರಕಿನ ಬೆಲೆ ಹೆಚ್ಚಾಗಿ, ಸಂಬಳ ಹೆಚ್ಚಾಗಿ ಇರ್ತದ. ಪೂರೈಕೆ ಹೆಚ್ಚು ಆದರ ಬೆಲೆ ಮತ್ತು ಸಂಬಳ ಕಮ್ಮಿ. ಇದು ರಸ್ತೆ ಪಕ್ಕದಾಗ ಶೇಂಗಾ ಮಾರೋ ಮುದುಕಿಯಿಂದ ಹಿಡದು ಗೌತಮ್ ಅಡಾಣಿ ಅವರವರೆಗೆ ಎಲ್ಲರಿಗೂ ಗೊತ್ತಿರತದ.

ಕೌಶಲ್ಯ ಅನ್ನೋದು ಹೆಚ್ಚು ಆದಷ್ಟು ಸಂಬಳ ಹೆಚ್ಚು. ಕಮ್ಮಿ ಆದರ ಕಮ್ಮಿ. ಆಷ್ಟ.

ಆದರ ಇನ್ನೂ ಮುಂದು ಬರೋ ಗಿಗ್ಗಾವಸ್ತೆಯೊಳಗ ಇದು ಎಲ್ಲಾ ಉಲ್ಟಾ ಪಲ್ಟ ಆಗತದ.

ಯಾವ ಕೆಲಸಗಾರ ಎಷ್ಟು ಕೌಶಲ್ಯಾದಿಂದ ಕೆಲಸ ಮಾಡತಾನ, ಅವನಿಗೆ ಎಷ್ಟು ಅನುಭವ ಐತಿ, ಇದು ಯಾವುದೂ ಲೆಕ್ಕಕ್ಕೆ ಬರೋದಿಲ್ಲ.

ಎಂಥ ಕೆಲಸಗಾರನ ಇರಲಿ ಯಾರೂ ಕಾಯಂ ಅಲ್ಲ. ಎಲ್ಲರೂ ಅರೆಕಾಲಿಕ. ಉದಾಹರಣೆಗೆ ಪೊಲೀಸು, ಡಾಕ್ಟರು, ಸೇನಾ ಪಡೆ, ಶಿಕ್ಷಕರು, ನರ್ಸು, ಕಾರ್ಖಾನೆ ಕಾರ್ಮಿಕರು, ಬ್ಯಾಂಕು ಸಿಬ್ಬಂದಿ, ಎಲ್ಲರೂ ಗುತ್ತಿಗೆ ಮೇಲೆ ಕೆಲಸ ಮಾಡೋದು.

ಕೆಲವರು ಅದರ ಒಳ್ಳೆ ಗುಣಗಳನ್ನು ಪಟ್ಟಿ ಮಾಡಿದಾರು. ಅವು ಯಾವಪ ಅಂದ್ರ – ಜಲ್ದಿ ಕೆಲಸ ಸಿಗೋದು, ಬರೇ ಫೈಲು ಓಡಾಟ ಇಲ್ಲ, ಕೆಂಪು ಪಟ್ಟಿಗೆ ಕತ್ತರಿ, ಮನೆಯಲ್ಲಿಯೇ ಕುಳಿತು ಕೆಲಸ ಮಾಡೋದು, ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ, ಕಚೇರಿ ಕೆಲಸ ಇಲ್ಲ, ಹಾಜರಿ ಹಾಕೋದು ಇಲ್ಲ, ಒಬ್ಬ ವ್ಯಕ್ತಿ ನೂರಾರು ತರಹ ಕೆಲಸ ಮಾಡೋದರಿಂದ ಅವನಿಗೆ ಬೇರೆ ಬೇರೆ ಕ್ಷೇತ್ರದ ಅನುಭವ ಜಾಸ್ತಿ, ನಿವೃತ್ತರಿಗೂ ಕೆಲಸ, ಇತ್ಯಾದಿ.

ಇನ್ನ ಗಿಗ್ಗು ವ್ಯವಸ್ಥೆಯ ಅವಗುಣಗಳನ್ನ ನೋಡೋಣ. ಅವು ಕಣ್ಣಿಗೆ ಕಾಣೋವಂತಾವು.

ಒಂದು ದೇಶದೊಳಗ ಹೆಚ್ಚಾನು ಹೆಚ್ಚು ಅರೆಕಾಲಿಕ, ಗುತ್ತಿಗೆ ಕೆಲ್ಸನ ಇರತಾವು. ಎಲ್ಲರಿಗೂ ಸರಕಾರಿ ಕೆಲಸ ಎಲ್ಲಿ ಸಿಗತದ? ನಮ್ಮ ದೇಶದಾಗ ಸರ್ಕಾರಿ ನೌಕರರು ಕೇವಲ ಮೂರು ಶೇಕಡಾ ಅದಾರು. ಉಳಿದ 97 ಶೇಕಡಾ ಕೆಲಸಗಾರರು ಖಾಸಗಿ ಕ್ಷೇತ್ರದಾಗ ಅದಾರು.

ಇವರಿಗೆ ಯಾರಿಗೂ ಸಿಬ್ಬಂದಿ ಕಲ್ಯಾಣದ ಯೋಜನೆಗಳು ಲಾಗೂ ಆಗೋದಿಲ್ಲ. ಇವರಿಗೆ ಪಿಂಚಣಿ ಇಲ್ಲ, ಆರೋಗ್ಯ – ಅಪಘಾತ ವಿಮೆ ಇಲ್ಲ, ಉದ್ಯೋಗಿ ವಿಮಾ ಯೋಜನೆಯ ಆಸ್ಪತ್ರೆ – ಮುಂತಾದ ಸೌಲಭ್ಯ ಇಲ್ಲ.

ಮೊದಲಿಗೆ ನಮ್ಮ ಬೆಂಗಳೂರಿನೊಳಗ ಎಚ್‌ಎಂಟಿ, ಬಿಇಎಲ್ ಅಂಥ ಸಾರ್ವಜನಿಕ ಕಂಪನಿಗಳು ಇದ್ದವು. ಅದರಾಗ ದೊಡ್ಡ ಹುದ್ದೆ ಒಳಗ ಇದ್ದವರು ಹಾಗೂ ಅವರ ಗಾಡಿ ಚಾಲಕರು ಎಲ್ಲರೂ ಕಾಯಂ ಕೆಲಸದಾಗ ಇದ್ದರು. ಅವರು ಇಬ್ಬರೂ ತಮ್ಮ ಮಕ್ಕಳನ್ನ ಒಳ್ಳೆ ಸಾಲಿಗೆ ಕಳಿಸಿ, ಒಳ್ಳೆ ಕೆಲಸ ಕೊಡಿಸಿ, ಪಿಂಚಣಿ ಪಡೆದು, ಮೊಮ್ಮಕ್ಕಳನ್ನ ನೋಡಲಿಕ್ಕೆ ಅಮೇರಿಕಾಗೆ ಹೋಗಿ, ನಯಾಗರ ಜಲಪಾತದ ಮುಂದ ನಿಂತು ಫೋಟೋ ಹೊಡಿಸಿಕಂಡರು. ಎಲ್ಲ ಜಾತಿ, ಜನಾಂಗದವರು ಈ ಸೌಲಭ್ಯಗಳನ್ನ ಪಡೆದರು.

ಖಾಸಗಿ ಕಂಪನಿಗಳು ಇಷ್ಟು ಅನುಕೂಲ ಮಾಡಿಕೊಡಲಾರದೇ ಇದ್ದರೂ ಕೂಡ, ಸ್ವಲ್ಪ ಅನುಕೂಲ ಮಾಡಿ ಕೊಡಬೇಕು ಅಂತ ನಮ್ಮಲ್ಲೇ ಕಾರ್ಮಿಕ ಕಲ್ಯಾಣ ಕಾಯಿದೆಗಳು ಬಂದವು. ಅವನ್ನು ಮುಖಾ ಮೂತಿ ನೋಡದೇ ಕೊರೊನಾ ನೆವ ಹೇಳಿ ಬಂದು ಮಾಡಲಾಯಿತು.

ಗಿಗ್ಗುದಾಗ ಈ ಕಾಯಿದೆಗಳ ಸುಳಿವೆ ಇರಂಗಿಲ್ಲ. ಉಳ್ಳವರು – ಮತ್ತು ಇಲ್ಲದವರು ಅಂತ ವ್ಯತ್ಯಾಸ ಖಾತ್ರಿ. ಇವರಿಗೆ ಸಿಕ್ಕಿದ್ದು ಅವರಿಗೆ ಸಿಗಬೇಕು ಅಂತ ಇಲ್ಲ.

ಕೊರೊನಾದಿಂದ ಈ ಸ್ಥಿತಿ ಬಂದೇತಿ ಅಂತ ಬಂಡವಾಳಶಾಹಿಗಳು ಹೇಳತಾರ. ಆದರ ಅವರ ಮನಸ್ಥಿತಿ ನೋಡಿದರ ಅವರು ಇದನ್ನ ಮಾಡಲಿಕ್ಕೆ ಕಾಯುತ್ತಾ ಇದ್ದರು, ಅಷ್ಟರಾಗ ಕೊರೊನಾ ಮಾಮ ಬಂದು ಅವರ ಕೆಲಸ ಹಗುರ ಮಾಡಿದ ಅಂತ ಅನ್ನಸತೇತಿ.

ಗಿಗ್ಗು ಅಂದ್ರ ಇಂಗ್ಲೀಷ್‌ದಾಗ ಸಂಗೀತ ಕಚೇರಿ ಅಂತ. ಅಂದ್ರ ಊರೂರಿಗೆ ಹಾಡಿಕೋತ ಹೋಗೋರು ಯಾವ ಊರಾಗೂ ನಿಲ್ಲೋದಿಲ್ಲಾ. ಅವರಿಗೆ ಯಾವ ಊರು ಆದರೇನು? ಸಂಗೀತ ಮುಖ್ಯ ಅಂತ ಅಲ್ಲಿಯ ಅರ್ಥ.

ನಮ್ಮಲ್ಲೆ ಹಂಗ ಇಲ್ಲಲ್ಲ. ಊರಾಗ ಒಂದು ಕಾರಖಾನೆ ಹಾಕಿಕೋತ ಹೋಗೋರಿಗೆ ಕೆಲಸಗಾರರ ಹಂಗು ಯಾಕ? ಅವರಿಗೆ ಬರೇ ರೊಕ್ಕದ ಚಿಂತೆ. ಯಾವ ಪಕ್ಷ ಅಧಿಕಾರಕ್ಕ ಬರ್ತೇತೋ ಆ ಪಕ್ಷದ ಬೆನ್ನು ಬಡಿಯೋರು ಅವರು. ಕೆಲಸಗಾರರು ಮಾತ್ರ ಊರು ಬಿಟ್ಟು, ದುಡಿಯಲಿಕ್ಕೆ ಹೋಗಿ ಲಾಕಡೌನ್ ಆದಾಗ ಸಾವಿರಾರು ಕಿಲೋ ಮೀಟರು ನಡಕೋತ ಬಂದು ರಸ್ತೆದಾಗ ಸಾಯೋರು. ಮಾಲೀಕರಿಗೆ ಕಾನೂನಿಗೆ ಕಿಮ್ಮತ್ತು ಇಲ್ಲ, ಕೆಲಸಗಾರರಿಗೆ ಕಾನೂನು ಗೊತ್ತಿಲ್ಲ. ಸರಕಾರ ಮಾಲೀಕರ ಮಾತು ಕೇಳತದ, ಕೆಲಸಗಾರರ ಮಾತು ಕೇಳೋದಿಲ್ಲ.

ಈ ಗಿಗ್ಗು ಬದಲಾಯಿಸುವುದು ಯಾರ ಕೈಯಾಗ ಐತಿ?


ಇದನ್ನೂ ಓದಿ: ಕೋವಿಡ್‌ನಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತಲು ಸರ್ಕಾರ ಮಾಡಬೇಕಾದುದ್ದೇನು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...