Homeಮುಖಪುಟಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

ಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

- Advertisement -
- Advertisement -

15ನೆಯ ಆಗಸ್ಟ್‌ರಿಂದ ನನ್ನ ತಲೆಯಲ್ಲಿ ಪದೇಪದೇ ಹಿಂದಿಯ ಮಹಾನ್ ಕವಿ ಸರ್ವೇಶ್ವರ್ ದಯಾಲ್ ಸಕ್ಸೇನ ಅವರ ಪ್ರಸಿದ್ಧ ಕವಿತೆ ’ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲವಲ್ಲ’ ಗುಂಯ್ಗುಟ್ಟುತ್ತಿದೆ. ಇತ್ತ ದೇಶ ಸ್ವಾತಂತ್ರದ 75ನೆಯ ವರ್ಷದ ಸಂಭ್ರಮಾಚರಣೆ ಮಾಡುತ್ತಿತ್ತು, ಅತ್ತ ಗೋಧ್ರಾ ಜೈಲಿನಿಂದ 11 ಜನ ಬಲಾತ್ಕಾರಿ ಮತ್ತು ಕೊಲೆಗಾರರಿಗೆ ಸ್ವಾತಂತ್ರ್ಯ ನೀಡಲಾಗುತ್ತಿತ್ತು. ದೇಶದಲ್ಲಿ ತಿರಂಗಾ ಯಾತ್ರೆ ನಡೆಯುತ್ತಿತ್ತು ಹಾಗೂ ಅತ್ತ ಅಪರಾಧಿಗಳಿಗೆ ಹೂವಿನ ಮಾಲೆ ಹಾಕಲಾಗುತ್ತಿತ್ತು. ಕವಿ ನನಗೆ ಪ್ರಶ್ನೆ ಕೇಳುತ್ತಿದ್ದ, ಈ ಕವಿತೆಯನ್ನು 50 ವರ್ಷ ಹಿಂದೆಯಲ್ಲ, 2022ರ ಸಲುವಾಗಿ ಬರೆದಂತಿತ್ತು:

“ಒಂದು ವೇಳೆ ನಿಮ್ಮ ಮನೆಯ
ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ
ನೀವು, ಇನ್ನೊಂದು ಕೋಣೆಯಲ್ಲಿ ನಿದ್ರಿಸಬಹುದೇ?
ಒಂದು ವೇಳೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ
ಹೆಣಗಳು ಕೊಳೆತು ನಾರುತ್ತಿದ್ದರೆ
ನೀವು ಇನ್ನೊಂದು ಕೋಣೆಯಲ್ಲಿ ಪ್ರಾರ್ಥನೆ ಸಲ್ಲಿಸಬಲ್ಲಿರಾ?
ಹೌದು ಎಂತಾದಲ್ಲಿ,
ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಸ್ವಾಭಾವಿಕವಾಗಿಯೇ, ನನಗೆ ’ಹೌದು’ ಎಂದು ಹೇಳಲು ಆಗುವುದಿಲ್ಲ. ಮನೆಯಲ್ಲಿ ಬೆಂಕಿ ಹತ್ತಿದ್ದರೆ ಎಚ್ಚರವಿದ್ದ ಯಾವ ವ್ಯಕ್ತಿಯೂ ನಿದ್ರೆ ಮಾಡಲಾರ. ಪಕ್ಕದ ಕೋಣೆಯಲ್ಲಿ ಹೆಣ ಬಿದ್ದಿದ್ದರೆ, ಒಬ್ಬ ನಿಜವಾದ ಉಪಾಸಕನಿಗೆ ಪ್ರಾರ್ಥನೆ ಸಲ್ಲಿಸಲು ಆಗುವುದಿಲ್ಲ. ಅದೇ ರೀತಿಯಲ್ಲಿ ಯಾವ ದೇಶದಲ್ಲಿ ಬಲಾತ್ಕಾರಿಗಳ ಮತ್ತು ಅಪರಾಧಿಗಳ ಗುಣಗಾನ ನಡೆಯುತ್ತಿದೆಯೋ, ಅಲ್ಲಿ ಒಬ್ಬ ನಿಜವಾದ ದೇಶಭಕ್ತನಿಗೆ ತಲೆಯೆತ್ತಿ ನಡೆಯಲಾಗುವುದಿಲ್ಲ. ಕವಿತೆಯ ಎರಡನೆಯ ಪಂಕ್ತಿಯು ಅದಕ್ಕೆ ಕಾರಣ ನೀಡುತ್ತದೆ:

“ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲ
ಒಂದು ಭಾಗ ಹರಿದುಹೋದಲ್ಲಿ
ಇನ್ನೊಂದು ಭಾಗ ಹಾಗೇ ತುಂಡಾಗದೇ ಅದೇ ರೀತಿಯಲ್ಲಿ ನಿಲ್ಲಲು
ಹಾಗೂ ನದಿಗಳು, ಪರ್ವತ, ನಗರ, ಹಳ್ಳಿ
ಹಾಗೇ ತಮ್ಮ ತಮ್ಮ ಜಾಗದಲ್ಲಿ
ಕದಲದೇ ನಿಲ್ಲಲು”

ಈಗ ಯೋಚಿಸಿ, ವಿಮಲಾದೇವಿ ಎಂಬ ಹೆಸರಿನ 21 ವರ್ಷದ ಒಬ್ಬ ಮಹಿಳೆ ಇದ್ದಾಳೆ, ಅವಳು ಐದು ತಿಂಗಳ ಗರ್ಭಿಣಿ. ಇದ್ದಕ್ಕಿದ್ದಂತೆ ಗಲಭೆಗಳಾಗುತ್ತವೆ. ಕುಟುಂಬದ ಜನರು ಮನೆ ತೊರೆದು, ತಮ್ಮ ನೆಂಟರಿಸ್ಟರ ಮನೆ ಕಡೆ ಓಡುತ್ತಾರೆ. ಹೇಗೋ ಒಂದು ಟ್ರಕ್ ವ್ಯವಸ್ಥೆ ಮಾಡಿ, ಅದರಲ್ಲಿ ತುರುಕಿಕೊಳ್ಳುತ್ತಾರೆ. ಇದ್ದಕ್ಕಿಂದ್ದಂತೆ ರಸ್ತೆಯಲ್ಲಿ ಒಂದು ಗುಂಪು ಎದರಾಗುತ್ತದೆ. ಟ್ರಕ್ ನಿಲ್ಲಿಸುತ್ತಾರೆ. ಗಂಡಸರನ್ನು ಕೊಲ್ಲುತ್ತಾರೆ. ವಿಮಲಾದೇವಿಯ ಕಣ್ಣುಗಳೆದುರಿಗೇ, ಅವಳ 3 ವರ್ಷದ ಮಗಳನ್ನು ರಸ್ತೆಯ ಮೇಲೆ ಪದೇಪದೇ ಅಪ್ಪಳಿಸಿ ಕೊಲ್ಲುತ್ತಾರೆ. ನಂತರ ಈ ಗರ್ಭವತಿ ಮಹಿಳೆಯ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗುತ್ತಾರೆ. ನಂತರ ಅವಳು ಸತ್ತಿದ್ದಾಳೆ ಎಂದುಕೊಂಡು ಅವಳ ಬೆತ್ತಲೆ ಶರೀರವನ್ನು ರಸ್ತೆಯ ಮೇಲೆ ಬಿಟ್ಟುಹೋಗುತ್ತಾರೆ.

ಕವಿ ಕಿರುಚುತ್ತಾನೆ:
“ಈ ಜಗತ್ತಿನಲ್ಲಿ ಮನುಷ್ಯನ ಪ್ರಾಣಕ್ಕಿಂತ
ದೊಡ್ಡದು ಏನೂ ಇಲ್ಲ
ದೇವರೂ ಇಲ್ಲ
ಜ್ಞಾನವೂ ಇಲ್ಲ
ಚುನಾವಣೆಯೂ ಇಲ್ಲ
ಕಾಗದದ ಮೇಲೆ ಬರೆಯಲಾದ ಯಾವುದೇ ಬರಹವನ್ನೂ
ಹರಿದುಹಾಕಬಹುದು
ಹಾಗೂ ನೆಲದ ಏಳು ಪದರುಗಳ ಒಳಗೆ
ಹೂತು ಹಾಕಬಹುದು”

ಆದರೆ ಯಾವುದೇ ಸಿನೆಮಾದ ಕಥೆಯಂತೆ ವಿಮಲಾದೇವಿ ಸಾಯಲಿಲ್ಲ. ಅವಳು ಪ್ರಜ್ಞೆ ಮರಳಿ ಪಡೆದು, ಹೇಗೋ ತನ್ನ ದೇಹ ಮುಚ್ಚಿಕೊಂಡು ಸುರಕ್ಷಿತ ಸ್ಥಳ ತಲುಪುತ್ತಾಳೆ. ಪೊಲೀಸರು ಅವಳ ದೂರನ್ನು ದಾಖಲಿಸಲೂ ನಿರಾಕರಿಸುತ್ತಾರೆ. ದಾಖಲಿಸಿದ ನಂತರ ಸರಿಯಾಗಿ ತನಿಖೆ ಆಗುವುದಿಲ್ಲ. ಹೇಗೋ ವಿಷಯ ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪುತ್ತದೆ. ನ್ಯಾಯ ಆಗಲಿ ಎಂದು ಪ್ರಕರಣವನ್ನು ಬೇರೊಂದು ರಾಜ್ಯದಲ್ಲಿ ನಡೆಸಲಾಗುತ್ತದೆ. ಆಗ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. ಕೊನೆಗೆ, 11 ಅಪರಾಧಿಗಳಿಗೆ ಬಲಾತ್ಕಾರ ಮತ್ತು ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

ಸರ್ವೇಶ್ವರ್ ದಯಾಲ್ ಸಕ್ಸೇನ

ಕಥೆ ಇಲ್ಲಿಯೇ ಮುಗಿಯುವುದಿಲ್ಲ. ಜೈಲಿನಲ್ಲಿದ್ದರೂ, ಈ ಎಲ್ಲ ಅಪರಾಧಿಗಳು ಪದೇಪದೇ ಪೆರೋಲ್ ಮೇಲೆ ಹೊರಬರುತ್ತಾರೆ, ಸಂಭ್ರಮಿಸುತ್ತಾರೆ, ಪಕ್ಷದ ರ್‍ಯಾಲಿಗಳಲ್ಲಿ ಶಾಮೀಲಾಗುತ್ತಾರೆ ಹಾಗೂ ವಿಮಲಾದೇವಿಯ ಪರಿವಾರಕ್ಕೆ ಬೆದರಿಕೆ ಹಾಕುತ್ತಾರೆ. ಪೊಲೀಸರು, ಆಡಳಿತ ಮತ್ತು ಸರಕಾರ ಮಂದಹಾಸ ಬೀರುತ್ತವೆ. ಹಾಗೂ ಶಿಕ್ಷೆ ಪೂರ್ಣವಾಗುವ ಮುನ್ನ ಸರಕಾರ ಒಂದು ಸಮಿತಿಯನ್ನು ರಚಿಸುತ್ತದೆ, ಅದು ಈ ಅತ್ಯಂತ ಕ್ರೂರ ಅಪರಾಧಿಗಳನ್ನು ಅವರ ಒಳ್ಳೆಯ ನಡೆತೆ ಮತ್ತು ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡುತ್ತದೆ. ಹೀಗೆ 15ನೆಯ ಆಗಸ್ಟ್‌ರಂದು ಸ್ವಾತಂತ್ರ್ಯದ ದಿನವನ್ನು ಆಚರಿಸಲಾಗುತ್ತದೆ. ಈಗ ಕವಿತೆ ತನ್ನ ಉತ್ತುಂಗವನ್ನು ತಲುಪುತ್ತದೆ:

“ನೆನಪಿಡಿ
ಒಂದು ಮಗುವಿನ ಕೊಲೆ
ಒಬ್ಬ ಮಹಿಳೆಯ ಸಾವು
ಒಬ್ಬ ವ್ಯಕ್ತಿಯ ಗುಂಡುಗಳಿಂದ
ಛಿದ್ರಗೊಂಡ ದೇಹ
ಯಾವುದೇ ಶಾಸನದ್ದಷ್ಟೇ ಅಲ್ಲ
ಇಡೀ ರಾಷ್ಟ್ರದ ಪತನವಾಗಿದೆ”
ಹೀಗೆ ರಕ್ತ ಸುರಿದು
ಭೂಮಿಯಲ್ಲಿ ಚೈತನ್ಯವಿರುವುದಿಲ್ಲ
ಆಕಾಶದಲ್ಲಿ ಹಾರುವ ಬಾವುಟಗಳನ್ನು
ಕಪ್ಪಾಗಿಸುತ್ತದೆ”

ನಾನು ಆಗಸದಲ್ಲಿ ಹಾರುತ್ತಿರುವ ತ್ರಿವರ್ಣ ಧ್ವಜವನ್ನು ನೋಡುತ್ತೇನೆ. ಅವುಗಳ ಸಂಖ್ಯೆ ಹೆಚ್ಚಿದೆ, ಅವುಗಳ ಆಕಾರ ಮತ್ತು ಎತ್ತರವೂ ಹೆಚ್ಚಿದೆ. ಆದರೆ ಕವಿತೆಯ ಸಾಲುಗಳು ನನ್ನ ಬೆನ್ನು ಬಿಡುತ್ತಿಲ್ಲ. ವಿಮಲಾ ದೇವಿಯ ಬಲಾತ್ಕಾರಿಗಳನ್ನು ಬಿಡುಗಡೆ ಮಾಡಲು ಕಾನೂನಾತ್ಮಕ ದಾಳಗಳ ಆಸರೆ ಪಡೆಯಲಾಗುತ್ತದೆ. ಆದರೆ ಕವಿ ಮತ್ತೆ ನಮ್ಮನ್ನು ಎಚ್ಚರಿಸುತ್ತಾನೆ:

“ಹೆಣಗಳ ಆಸರೆ ಪಡೆದು
ನಿಂತಿರುವ ವಿವೇಕ
ಅದು ಕುರುಡು ವಿವೇಕ”
ವಿಮಲಾ ದೇವಿ ಹೇಳುತ್ತಾಳೆ:

“ನಾನು ಮೌನವಾಗಿದ್ದೇನೆ, ಪ್ರಜ್ಞಾಹೀನಳಾಗಿದ್ದೇನೆ. ಇಷ್ಟು ಮಾತ್ರ ಹೇಳಬಲ್ಲೆ, ಒಬ್ಬ ಮಹಿಳೆಯೊಂದಿಗೆ ನ್ಯಾಯವು ಈ ರೀತಿಯಲ್ಲಿ ಬದಲಾಗಲು ಹೇಗೆ ಸಾಧ್ಯ? ನಾನು ಎಲ್ಲಕ್ಕಿಂತ ದೊಡ್ಡ ನ್ಯಾಯಾಲಯದಲ್ಲಿ ನಂಬಿಕೆ ಇಟ್ಟಿದ್ದೆ. ನಾನು ಈ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟಿದ್ದೆ. ನಾನು ನನ್ನ ದುರಂತದೊಂದಿಗೆ ಬದುಕಲು ಕಲಿಯುತ್ತಿದ್ದೆ. ಆದರೆ ಈಗ ಶಾಂತಿ ಕದಡಿದೆ. ನ್ಯಾಯದಲ್ಲಿಯ ನನ್ನ ನಂಬಿಕೆ ಕದಡಿದೆ.” ವಿಮಲಾಳ ಧ್ವನಿಯನ್ನು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ದೇಶ ಮೌನವಾಗಿದೆ. ಯಾವುದೇ ಕುರ್ಚಿ ಅಲುಗಾಡಿಲ್ಲ. ನಿರ್ಭಯಾಳ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಬೇಡಿಕೆ ಇಡುವವರು ಹಾಗೂ ಆರುಶಿ ಹತ್ಯೆಯ ಮೇಲೆ ಹಗಲೂರಾತ್ರಿ ಕಿರುಚಾಡಿದ ಟವಿ ಚಾನೆಲ್‌ಗಳು ಮೂಕರಾಗುತ್ತಾರೆ.

ಒಬ್ಬ ಕವಿ ಮಾತ್ರ ಗಂಟಲು ಹರಿದುಕೊಂಡು ವಿಮಲಾಳ ಪರವಾಗಿ ಮಾತನಾಡುತ್ತಿದ್ದಾನೆ:

“ಕೊನೆಯ ಮಾತು
ಅತ್ಯಂತ ಸ್ಪಷ್ಟ
ಯಾವುದೇ ಕೊಲೆಗಾರನಿಗೆ
ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೇ ಆಗಿರಲಿ
ಧರ್ಮದ ಗುತ್ತಿಗೆದಾರನೇ ಆಗಿರಲಿ
ಪ್ರಜಾಪ್ರಭುತ್ವದ ಪ್ರಸಿದ್ಧ ಕಾವಲುಗಾರನೇ ಆಗಿರಲಿ”

ಆದರೆ, ಆ ಮಹಿಳೆಯ ಹೆಸರು ವಿಮಲಾ ದೇವಿ ಅಲ್ಲ, ಬಿಲ್ಕಿಸ್ ಬಾನೋ ಎಂದು ನೀವು ಹೇಳುವಿರಿ. ಹಾಗಿದ್ದರೆ? ಹಾಗಿದ್ದರೆ ಅದರಿಂದ ನ್ಯಾಯದ ತಕ್ಕಡಿ ಪಲ್ಟಿ ಹೊಡೆಯುತ್ತದೆಯೇ? ಬಲಾತ್ಕಾರದ ಚೀತ್ಕಾರಗಳು ಮಧುರವಾಗುತ್ತವೆಯೇ? ಕೊಲೆಯ ಭೀಭತ್ಸತೆ ಮುಗ್ಧವಾಗುತ್ತದೆಯೇ? ಒಂದು ವೇಳೆ ಸರ್ವೇಶ್ವರ್ ದಯಾಲ್ ಸಕ್ಸೇನಾ 2022ರಲ್ಲಿ ಜೀವಿತವಿದ್ದಲ್ಲಿ, ಕವಿತೆಯಲ್ಲಿ ಎರಡು ಸಾಲು ಸೇರಿಸುತ್ತಿದ್ದರು:

“ಒಂದು ವೇಳೆ ನೀವು ವಿಮಲಾ ದೇವಿಯ ಬಲಾತ್ಕಾರದ ಬಗ್ಗೆ ಗಟ್ಟಿಯಾಗಿ ಕಿರುಚುತ್ತೀರಾ ಎಂದಾದಲ್ಲಿ
ಬಿಲ್ಕಿಸ್ ಬಾನೋನ ಹೆಸರು ಕೇಳಿ ಸುಮ್ಮನಿರಬಹುದೇ?
ಹೌದು ಎಂತಾದಲ್ಲಿ
ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಕನ್ನಡಕ್ಕೆ: ರಾಜಶೇಖರ ಅಕ್ಕಿ


ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅತ್ಯಾಚಾರಿ-ಕೊಲೆಗಡುಕರನ್ನು ಗೌರವಿಸಿದ ಕರಾಳ ವಿದ್ಯಮಾನ

ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಅಪರಾಧಿಗಳನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿಲ್ಲ ಎಂದ ಸುಪ್ರೀಂ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...