Homeಮುಖಪುಟಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

ಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

- Advertisement -
- Advertisement -

15ನೆಯ ಆಗಸ್ಟ್‌ರಿಂದ ನನ್ನ ತಲೆಯಲ್ಲಿ ಪದೇಪದೇ ಹಿಂದಿಯ ಮಹಾನ್ ಕವಿ ಸರ್ವೇಶ್ವರ್ ದಯಾಲ್ ಸಕ್ಸೇನ ಅವರ ಪ್ರಸಿದ್ಧ ಕವಿತೆ ’ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲವಲ್ಲ’ ಗುಂಯ್ಗುಟ್ಟುತ್ತಿದೆ. ಇತ್ತ ದೇಶ ಸ್ವಾತಂತ್ರದ 75ನೆಯ ವರ್ಷದ ಸಂಭ್ರಮಾಚರಣೆ ಮಾಡುತ್ತಿತ್ತು, ಅತ್ತ ಗೋಧ್ರಾ ಜೈಲಿನಿಂದ 11 ಜನ ಬಲಾತ್ಕಾರಿ ಮತ್ತು ಕೊಲೆಗಾರರಿಗೆ ಸ್ವಾತಂತ್ರ್ಯ ನೀಡಲಾಗುತ್ತಿತ್ತು. ದೇಶದಲ್ಲಿ ತಿರಂಗಾ ಯಾತ್ರೆ ನಡೆಯುತ್ತಿತ್ತು ಹಾಗೂ ಅತ್ತ ಅಪರಾಧಿಗಳಿಗೆ ಹೂವಿನ ಮಾಲೆ ಹಾಕಲಾಗುತ್ತಿತ್ತು. ಕವಿ ನನಗೆ ಪ್ರಶ್ನೆ ಕೇಳುತ್ತಿದ್ದ, ಈ ಕವಿತೆಯನ್ನು 50 ವರ್ಷ ಹಿಂದೆಯಲ್ಲ, 2022ರ ಸಲುವಾಗಿ ಬರೆದಂತಿತ್ತು:

“ಒಂದು ವೇಳೆ ನಿಮ್ಮ ಮನೆಯ
ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ
ನೀವು, ಇನ್ನೊಂದು ಕೋಣೆಯಲ್ಲಿ ನಿದ್ರಿಸಬಹುದೇ?
ಒಂದು ವೇಳೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ
ಹೆಣಗಳು ಕೊಳೆತು ನಾರುತ್ತಿದ್ದರೆ
ನೀವು ಇನ್ನೊಂದು ಕೋಣೆಯಲ್ಲಿ ಪ್ರಾರ್ಥನೆ ಸಲ್ಲಿಸಬಲ್ಲಿರಾ?
ಹೌದು ಎಂತಾದಲ್ಲಿ,
ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಸ್ವಾಭಾವಿಕವಾಗಿಯೇ, ನನಗೆ ’ಹೌದು’ ಎಂದು ಹೇಳಲು ಆಗುವುದಿಲ್ಲ. ಮನೆಯಲ್ಲಿ ಬೆಂಕಿ ಹತ್ತಿದ್ದರೆ ಎಚ್ಚರವಿದ್ದ ಯಾವ ವ್ಯಕ್ತಿಯೂ ನಿದ್ರೆ ಮಾಡಲಾರ. ಪಕ್ಕದ ಕೋಣೆಯಲ್ಲಿ ಹೆಣ ಬಿದ್ದಿದ್ದರೆ, ಒಬ್ಬ ನಿಜವಾದ ಉಪಾಸಕನಿಗೆ ಪ್ರಾರ್ಥನೆ ಸಲ್ಲಿಸಲು ಆಗುವುದಿಲ್ಲ. ಅದೇ ರೀತಿಯಲ್ಲಿ ಯಾವ ದೇಶದಲ್ಲಿ ಬಲಾತ್ಕಾರಿಗಳ ಮತ್ತು ಅಪರಾಧಿಗಳ ಗುಣಗಾನ ನಡೆಯುತ್ತಿದೆಯೋ, ಅಲ್ಲಿ ಒಬ್ಬ ನಿಜವಾದ ದೇಶಭಕ್ತನಿಗೆ ತಲೆಯೆತ್ತಿ ನಡೆಯಲಾಗುವುದಿಲ್ಲ. ಕವಿತೆಯ ಎರಡನೆಯ ಪಂಕ್ತಿಯು ಅದಕ್ಕೆ ಕಾರಣ ನೀಡುತ್ತದೆ:

“ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲ
ಒಂದು ಭಾಗ ಹರಿದುಹೋದಲ್ಲಿ
ಇನ್ನೊಂದು ಭಾಗ ಹಾಗೇ ತುಂಡಾಗದೇ ಅದೇ ರೀತಿಯಲ್ಲಿ ನಿಲ್ಲಲು
ಹಾಗೂ ನದಿಗಳು, ಪರ್ವತ, ನಗರ, ಹಳ್ಳಿ
ಹಾಗೇ ತಮ್ಮ ತಮ್ಮ ಜಾಗದಲ್ಲಿ
ಕದಲದೇ ನಿಲ್ಲಲು”

ಈಗ ಯೋಚಿಸಿ, ವಿಮಲಾದೇವಿ ಎಂಬ ಹೆಸರಿನ 21 ವರ್ಷದ ಒಬ್ಬ ಮಹಿಳೆ ಇದ್ದಾಳೆ, ಅವಳು ಐದು ತಿಂಗಳ ಗರ್ಭಿಣಿ. ಇದ್ದಕ್ಕಿದ್ದಂತೆ ಗಲಭೆಗಳಾಗುತ್ತವೆ. ಕುಟುಂಬದ ಜನರು ಮನೆ ತೊರೆದು, ತಮ್ಮ ನೆಂಟರಿಸ್ಟರ ಮನೆ ಕಡೆ ಓಡುತ್ತಾರೆ. ಹೇಗೋ ಒಂದು ಟ್ರಕ್ ವ್ಯವಸ್ಥೆ ಮಾಡಿ, ಅದರಲ್ಲಿ ತುರುಕಿಕೊಳ್ಳುತ್ತಾರೆ. ಇದ್ದಕ್ಕಿಂದ್ದಂತೆ ರಸ್ತೆಯಲ್ಲಿ ಒಂದು ಗುಂಪು ಎದರಾಗುತ್ತದೆ. ಟ್ರಕ್ ನಿಲ್ಲಿಸುತ್ತಾರೆ. ಗಂಡಸರನ್ನು ಕೊಲ್ಲುತ್ತಾರೆ. ವಿಮಲಾದೇವಿಯ ಕಣ್ಣುಗಳೆದುರಿಗೇ, ಅವಳ 3 ವರ್ಷದ ಮಗಳನ್ನು ರಸ್ತೆಯ ಮೇಲೆ ಪದೇಪದೇ ಅಪ್ಪಳಿಸಿ ಕೊಲ್ಲುತ್ತಾರೆ. ನಂತರ ಈ ಗರ್ಭವತಿ ಮಹಿಳೆಯ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗುತ್ತಾರೆ. ನಂತರ ಅವಳು ಸತ್ತಿದ್ದಾಳೆ ಎಂದುಕೊಂಡು ಅವಳ ಬೆತ್ತಲೆ ಶರೀರವನ್ನು ರಸ್ತೆಯ ಮೇಲೆ ಬಿಟ್ಟುಹೋಗುತ್ತಾರೆ.

ಕವಿ ಕಿರುಚುತ್ತಾನೆ:
“ಈ ಜಗತ್ತಿನಲ್ಲಿ ಮನುಷ್ಯನ ಪ್ರಾಣಕ್ಕಿಂತ
ದೊಡ್ಡದು ಏನೂ ಇಲ್ಲ
ದೇವರೂ ಇಲ್ಲ
ಜ್ಞಾನವೂ ಇಲ್ಲ
ಚುನಾವಣೆಯೂ ಇಲ್ಲ
ಕಾಗದದ ಮೇಲೆ ಬರೆಯಲಾದ ಯಾವುದೇ ಬರಹವನ್ನೂ
ಹರಿದುಹಾಕಬಹುದು
ಹಾಗೂ ನೆಲದ ಏಳು ಪದರುಗಳ ಒಳಗೆ
ಹೂತು ಹಾಕಬಹುದು”

ಆದರೆ ಯಾವುದೇ ಸಿನೆಮಾದ ಕಥೆಯಂತೆ ವಿಮಲಾದೇವಿ ಸಾಯಲಿಲ್ಲ. ಅವಳು ಪ್ರಜ್ಞೆ ಮರಳಿ ಪಡೆದು, ಹೇಗೋ ತನ್ನ ದೇಹ ಮುಚ್ಚಿಕೊಂಡು ಸುರಕ್ಷಿತ ಸ್ಥಳ ತಲುಪುತ್ತಾಳೆ. ಪೊಲೀಸರು ಅವಳ ದೂರನ್ನು ದಾಖಲಿಸಲೂ ನಿರಾಕರಿಸುತ್ತಾರೆ. ದಾಖಲಿಸಿದ ನಂತರ ಸರಿಯಾಗಿ ತನಿಖೆ ಆಗುವುದಿಲ್ಲ. ಹೇಗೋ ವಿಷಯ ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪುತ್ತದೆ. ನ್ಯಾಯ ಆಗಲಿ ಎಂದು ಪ್ರಕರಣವನ್ನು ಬೇರೊಂದು ರಾಜ್ಯದಲ್ಲಿ ನಡೆಸಲಾಗುತ್ತದೆ. ಆಗ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. ಕೊನೆಗೆ, 11 ಅಪರಾಧಿಗಳಿಗೆ ಬಲಾತ್ಕಾರ ಮತ್ತು ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

ಸರ್ವೇಶ್ವರ್ ದಯಾಲ್ ಸಕ್ಸೇನ

ಕಥೆ ಇಲ್ಲಿಯೇ ಮುಗಿಯುವುದಿಲ್ಲ. ಜೈಲಿನಲ್ಲಿದ್ದರೂ, ಈ ಎಲ್ಲ ಅಪರಾಧಿಗಳು ಪದೇಪದೇ ಪೆರೋಲ್ ಮೇಲೆ ಹೊರಬರುತ್ತಾರೆ, ಸಂಭ್ರಮಿಸುತ್ತಾರೆ, ಪಕ್ಷದ ರ್‍ಯಾಲಿಗಳಲ್ಲಿ ಶಾಮೀಲಾಗುತ್ತಾರೆ ಹಾಗೂ ವಿಮಲಾದೇವಿಯ ಪರಿವಾರಕ್ಕೆ ಬೆದರಿಕೆ ಹಾಕುತ್ತಾರೆ. ಪೊಲೀಸರು, ಆಡಳಿತ ಮತ್ತು ಸರಕಾರ ಮಂದಹಾಸ ಬೀರುತ್ತವೆ. ಹಾಗೂ ಶಿಕ್ಷೆ ಪೂರ್ಣವಾಗುವ ಮುನ್ನ ಸರಕಾರ ಒಂದು ಸಮಿತಿಯನ್ನು ರಚಿಸುತ್ತದೆ, ಅದು ಈ ಅತ್ಯಂತ ಕ್ರೂರ ಅಪರಾಧಿಗಳನ್ನು ಅವರ ಒಳ್ಳೆಯ ನಡೆತೆ ಮತ್ತು ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡುತ್ತದೆ. ಹೀಗೆ 15ನೆಯ ಆಗಸ್ಟ್‌ರಂದು ಸ್ವಾತಂತ್ರ್ಯದ ದಿನವನ್ನು ಆಚರಿಸಲಾಗುತ್ತದೆ. ಈಗ ಕವಿತೆ ತನ್ನ ಉತ್ತುಂಗವನ್ನು ತಲುಪುತ್ತದೆ:

“ನೆನಪಿಡಿ
ಒಂದು ಮಗುವಿನ ಕೊಲೆ
ಒಬ್ಬ ಮಹಿಳೆಯ ಸಾವು
ಒಬ್ಬ ವ್ಯಕ್ತಿಯ ಗುಂಡುಗಳಿಂದ
ಛಿದ್ರಗೊಂಡ ದೇಹ
ಯಾವುದೇ ಶಾಸನದ್ದಷ್ಟೇ ಅಲ್ಲ
ಇಡೀ ರಾಷ್ಟ್ರದ ಪತನವಾಗಿದೆ”
ಹೀಗೆ ರಕ್ತ ಸುರಿದು
ಭೂಮಿಯಲ್ಲಿ ಚೈತನ್ಯವಿರುವುದಿಲ್ಲ
ಆಕಾಶದಲ್ಲಿ ಹಾರುವ ಬಾವುಟಗಳನ್ನು
ಕಪ್ಪಾಗಿಸುತ್ತದೆ”

ನಾನು ಆಗಸದಲ್ಲಿ ಹಾರುತ್ತಿರುವ ತ್ರಿವರ್ಣ ಧ್ವಜವನ್ನು ನೋಡುತ್ತೇನೆ. ಅವುಗಳ ಸಂಖ್ಯೆ ಹೆಚ್ಚಿದೆ, ಅವುಗಳ ಆಕಾರ ಮತ್ತು ಎತ್ತರವೂ ಹೆಚ್ಚಿದೆ. ಆದರೆ ಕವಿತೆಯ ಸಾಲುಗಳು ನನ್ನ ಬೆನ್ನು ಬಿಡುತ್ತಿಲ್ಲ. ವಿಮಲಾ ದೇವಿಯ ಬಲಾತ್ಕಾರಿಗಳನ್ನು ಬಿಡುಗಡೆ ಮಾಡಲು ಕಾನೂನಾತ್ಮಕ ದಾಳಗಳ ಆಸರೆ ಪಡೆಯಲಾಗುತ್ತದೆ. ಆದರೆ ಕವಿ ಮತ್ತೆ ನಮ್ಮನ್ನು ಎಚ್ಚರಿಸುತ್ತಾನೆ:

“ಹೆಣಗಳ ಆಸರೆ ಪಡೆದು
ನಿಂತಿರುವ ವಿವೇಕ
ಅದು ಕುರುಡು ವಿವೇಕ”
ವಿಮಲಾ ದೇವಿ ಹೇಳುತ್ತಾಳೆ:

“ನಾನು ಮೌನವಾಗಿದ್ದೇನೆ, ಪ್ರಜ್ಞಾಹೀನಳಾಗಿದ್ದೇನೆ. ಇಷ್ಟು ಮಾತ್ರ ಹೇಳಬಲ್ಲೆ, ಒಬ್ಬ ಮಹಿಳೆಯೊಂದಿಗೆ ನ್ಯಾಯವು ಈ ರೀತಿಯಲ್ಲಿ ಬದಲಾಗಲು ಹೇಗೆ ಸಾಧ್ಯ? ನಾನು ಎಲ್ಲಕ್ಕಿಂತ ದೊಡ್ಡ ನ್ಯಾಯಾಲಯದಲ್ಲಿ ನಂಬಿಕೆ ಇಟ್ಟಿದ್ದೆ. ನಾನು ಈ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟಿದ್ದೆ. ನಾನು ನನ್ನ ದುರಂತದೊಂದಿಗೆ ಬದುಕಲು ಕಲಿಯುತ್ತಿದ್ದೆ. ಆದರೆ ಈಗ ಶಾಂತಿ ಕದಡಿದೆ. ನ್ಯಾಯದಲ್ಲಿಯ ನನ್ನ ನಂಬಿಕೆ ಕದಡಿದೆ.” ವಿಮಲಾಳ ಧ್ವನಿಯನ್ನು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ದೇಶ ಮೌನವಾಗಿದೆ. ಯಾವುದೇ ಕುರ್ಚಿ ಅಲುಗಾಡಿಲ್ಲ. ನಿರ್ಭಯಾಳ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಬೇಡಿಕೆ ಇಡುವವರು ಹಾಗೂ ಆರುಶಿ ಹತ್ಯೆಯ ಮೇಲೆ ಹಗಲೂರಾತ್ರಿ ಕಿರುಚಾಡಿದ ಟವಿ ಚಾನೆಲ್‌ಗಳು ಮೂಕರಾಗುತ್ತಾರೆ.

ಒಬ್ಬ ಕವಿ ಮಾತ್ರ ಗಂಟಲು ಹರಿದುಕೊಂಡು ವಿಮಲಾಳ ಪರವಾಗಿ ಮಾತನಾಡುತ್ತಿದ್ದಾನೆ:

“ಕೊನೆಯ ಮಾತು
ಅತ್ಯಂತ ಸ್ಪಷ್ಟ
ಯಾವುದೇ ಕೊಲೆಗಾರನಿಗೆ
ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೇ ಆಗಿರಲಿ
ಧರ್ಮದ ಗುತ್ತಿಗೆದಾರನೇ ಆಗಿರಲಿ
ಪ್ರಜಾಪ್ರಭುತ್ವದ ಪ್ರಸಿದ್ಧ ಕಾವಲುಗಾರನೇ ಆಗಿರಲಿ”

ಆದರೆ, ಆ ಮಹಿಳೆಯ ಹೆಸರು ವಿಮಲಾ ದೇವಿ ಅಲ್ಲ, ಬಿಲ್ಕಿಸ್ ಬಾನೋ ಎಂದು ನೀವು ಹೇಳುವಿರಿ. ಹಾಗಿದ್ದರೆ? ಹಾಗಿದ್ದರೆ ಅದರಿಂದ ನ್ಯಾಯದ ತಕ್ಕಡಿ ಪಲ್ಟಿ ಹೊಡೆಯುತ್ತದೆಯೇ? ಬಲಾತ್ಕಾರದ ಚೀತ್ಕಾರಗಳು ಮಧುರವಾಗುತ್ತವೆಯೇ? ಕೊಲೆಯ ಭೀಭತ್ಸತೆ ಮುಗ್ಧವಾಗುತ್ತದೆಯೇ? ಒಂದು ವೇಳೆ ಸರ್ವೇಶ್ವರ್ ದಯಾಲ್ ಸಕ್ಸೇನಾ 2022ರಲ್ಲಿ ಜೀವಿತವಿದ್ದಲ್ಲಿ, ಕವಿತೆಯಲ್ಲಿ ಎರಡು ಸಾಲು ಸೇರಿಸುತ್ತಿದ್ದರು:

“ಒಂದು ವೇಳೆ ನೀವು ವಿಮಲಾ ದೇವಿಯ ಬಲಾತ್ಕಾರದ ಬಗ್ಗೆ ಗಟ್ಟಿಯಾಗಿ ಕಿರುಚುತ್ತೀರಾ ಎಂದಾದಲ್ಲಿ
ಬಿಲ್ಕಿಸ್ ಬಾನೋನ ಹೆಸರು ಕೇಳಿ ಸುಮ್ಮನಿರಬಹುದೇ?
ಹೌದು ಎಂತಾದಲ್ಲಿ
ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಕನ್ನಡಕ್ಕೆ: ರಾಜಶೇಖರ ಅಕ್ಕಿ


ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅತ್ಯಾಚಾರಿ-ಕೊಲೆಗಡುಕರನ್ನು ಗೌರವಿಸಿದ ಕರಾಳ ವಿದ್ಯಮಾನ

ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಅಪರಾಧಿಗಳನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿಲ್ಲ ಎಂದ ಸುಪ್ರೀಂ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...