Homeಮುಖಪುಟಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

ಬಿಲ್ಕಿಸ್ ಬಾನೋ ಒಂದು ವೇಳೆ ವಿಮಲಾ ದೇವಿ ಆಗಿದ್ದರೆ?

- Advertisement -
- Advertisement -

15ನೆಯ ಆಗಸ್ಟ್‌ರಿಂದ ನನ್ನ ತಲೆಯಲ್ಲಿ ಪದೇಪದೇ ಹಿಂದಿಯ ಮಹಾನ್ ಕವಿ ಸರ್ವೇಶ್ವರ್ ದಯಾಲ್ ಸಕ್ಸೇನ ಅವರ ಪ್ರಸಿದ್ಧ ಕವಿತೆ ’ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲವಲ್ಲ’ ಗುಂಯ್ಗುಟ್ಟುತ್ತಿದೆ. ಇತ್ತ ದೇಶ ಸ್ವಾತಂತ್ರದ 75ನೆಯ ವರ್ಷದ ಸಂಭ್ರಮಾಚರಣೆ ಮಾಡುತ್ತಿತ್ತು, ಅತ್ತ ಗೋಧ್ರಾ ಜೈಲಿನಿಂದ 11 ಜನ ಬಲಾತ್ಕಾರಿ ಮತ್ತು ಕೊಲೆಗಾರರಿಗೆ ಸ್ವಾತಂತ್ರ್ಯ ನೀಡಲಾಗುತ್ತಿತ್ತು. ದೇಶದಲ್ಲಿ ತಿರಂಗಾ ಯಾತ್ರೆ ನಡೆಯುತ್ತಿತ್ತು ಹಾಗೂ ಅತ್ತ ಅಪರಾಧಿಗಳಿಗೆ ಹೂವಿನ ಮಾಲೆ ಹಾಕಲಾಗುತ್ತಿತ್ತು. ಕವಿ ನನಗೆ ಪ್ರಶ್ನೆ ಕೇಳುತ್ತಿದ್ದ, ಈ ಕವಿತೆಯನ್ನು 50 ವರ್ಷ ಹಿಂದೆಯಲ್ಲ, 2022ರ ಸಲುವಾಗಿ ಬರೆದಂತಿತ್ತು:

“ಒಂದು ವೇಳೆ ನಿಮ್ಮ ಮನೆಯ
ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ
ನೀವು, ಇನ್ನೊಂದು ಕೋಣೆಯಲ್ಲಿ ನಿದ್ರಿಸಬಹುದೇ?
ಒಂದು ವೇಳೆ ನಿಮ್ಮ ಮನೆಯ ಒಂದು ಕೋಣೆಯಲ್ಲಿ
ಹೆಣಗಳು ಕೊಳೆತು ನಾರುತ್ತಿದ್ದರೆ
ನೀವು ಇನ್ನೊಂದು ಕೋಣೆಯಲ್ಲಿ ಪ್ರಾರ್ಥನೆ ಸಲ್ಲಿಸಬಲ್ಲಿರಾ?
ಹೌದು ಎಂತಾದಲ್ಲಿ,
ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಸ್ವಾಭಾವಿಕವಾಗಿಯೇ, ನನಗೆ ’ಹೌದು’ ಎಂದು ಹೇಳಲು ಆಗುವುದಿಲ್ಲ. ಮನೆಯಲ್ಲಿ ಬೆಂಕಿ ಹತ್ತಿದ್ದರೆ ಎಚ್ಚರವಿದ್ದ ಯಾವ ವ್ಯಕ್ತಿಯೂ ನಿದ್ರೆ ಮಾಡಲಾರ. ಪಕ್ಕದ ಕೋಣೆಯಲ್ಲಿ ಹೆಣ ಬಿದ್ದಿದ್ದರೆ, ಒಬ್ಬ ನಿಜವಾದ ಉಪಾಸಕನಿಗೆ ಪ್ರಾರ್ಥನೆ ಸಲ್ಲಿಸಲು ಆಗುವುದಿಲ್ಲ. ಅದೇ ರೀತಿಯಲ್ಲಿ ಯಾವ ದೇಶದಲ್ಲಿ ಬಲಾತ್ಕಾರಿಗಳ ಮತ್ತು ಅಪರಾಧಿಗಳ ಗುಣಗಾನ ನಡೆಯುತ್ತಿದೆಯೋ, ಅಲ್ಲಿ ಒಬ್ಬ ನಿಜವಾದ ದೇಶಭಕ್ತನಿಗೆ ತಲೆಯೆತ್ತಿ ನಡೆಯಲಾಗುವುದಿಲ್ಲ. ಕವಿತೆಯ ಎರಡನೆಯ ಪಂಕ್ತಿಯು ಅದಕ್ಕೆ ಕಾರಣ ನೀಡುತ್ತದೆ:

“ದೇಶ ಹಾಳೆಯ ಮೇಲೆ ಬರೆದಿರುವ ನಕ್ಷೆಯಂತೂ ಅಲ್ಲ
ಒಂದು ಭಾಗ ಹರಿದುಹೋದಲ್ಲಿ
ಇನ್ನೊಂದು ಭಾಗ ಹಾಗೇ ತುಂಡಾಗದೇ ಅದೇ ರೀತಿಯಲ್ಲಿ ನಿಲ್ಲಲು
ಹಾಗೂ ನದಿಗಳು, ಪರ್ವತ, ನಗರ, ಹಳ್ಳಿ
ಹಾಗೇ ತಮ್ಮ ತಮ್ಮ ಜಾಗದಲ್ಲಿ
ಕದಲದೇ ನಿಲ್ಲಲು”

ಈಗ ಯೋಚಿಸಿ, ವಿಮಲಾದೇವಿ ಎಂಬ ಹೆಸರಿನ 21 ವರ್ಷದ ಒಬ್ಬ ಮಹಿಳೆ ಇದ್ದಾಳೆ, ಅವಳು ಐದು ತಿಂಗಳ ಗರ್ಭಿಣಿ. ಇದ್ದಕ್ಕಿದ್ದಂತೆ ಗಲಭೆಗಳಾಗುತ್ತವೆ. ಕುಟುಂಬದ ಜನರು ಮನೆ ತೊರೆದು, ತಮ್ಮ ನೆಂಟರಿಸ್ಟರ ಮನೆ ಕಡೆ ಓಡುತ್ತಾರೆ. ಹೇಗೋ ಒಂದು ಟ್ರಕ್ ವ್ಯವಸ್ಥೆ ಮಾಡಿ, ಅದರಲ್ಲಿ ತುರುಕಿಕೊಳ್ಳುತ್ತಾರೆ. ಇದ್ದಕ್ಕಿಂದ್ದಂತೆ ರಸ್ತೆಯಲ್ಲಿ ಒಂದು ಗುಂಪು ಎದರಾಗುತ್ತದೆ. ಟ್ರಕ್ ನಿಲ್ಲಿಸುತ್ತಾರೆ. ಗಂಡಸರನ್ನು ಕೊಲ್ಲುತ್ತಾರೆ. ವಿಮಲಾದೇವಿಯ ಕಣ್ಣುಗಳೆದುರಿಗೇ, ಅವಳ 3 ವರ್ಷದ ಮಗಳನ್ನು ರಸ್ತೆಯ ಮೇಲೆ ಪದೇಪದೇ ಅಪ್ಪಳಿಸಿ ಕೊಲ್ಲುತ್ತಾರೆ. ನಂತರ ಈ ಗರ್ಭವತಿ ಮಹಿಳೆಯ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗುತ್ತಾರೆ. ನಂತರ ಅವಳು ಸತ್ತಿದ್ದಾಳೆ ಎಂದುಕೊಂಡು ಅವಳ ಬೆತ್ತಲೆ ಶರೀರವನ್ನು ರಸ್ತೆಯ ಮೇಲೆ ಬಿಟ್ಟುಹೋಗುತ್ತಾರೆ.

ಕವಿ ಕಿರುಚುತ್ತಾನೆ:
“ಈ ಜಗತ್ತಿನಲ್ಲಿ ಮನುಷ್ಯನ ಪ್ರಾಣಕ್ಕಿಂತ
ದೊಡ್ಡದು ಏನೂ ಇಲ್ಲ
ದೇವರೂ ಇಲ್ಲ
ಜ್ಞಾನವೂ ಇಲ್ಲ
ಚುನಾವಣೆಯೂ ಇಲ್ಲ
ಕಾಗದದ ಮೇಲೆ ಬರೆಯಲಾದ ಯಾವುದೇ ಬರಹವನ್ನೂ
ಹರಿದುಹಾಕಬಹುದು
ಹಾಗೂ ನೆಲದ ಏಳು ಪದರುಗಳ ಒಳಗೆ
ಹೂತು ಹಾಕಬಹುದು”

ಆದರೆ ಯಾವುದೇ ಸಿನೆಮಾದ ಕಥೆಯಂತೆ ವಿಮಲಾದೇವಿ ಸಾಯಲಿಲ್ಲ. ಅವಳು ಪ್ರಜ್ಞೆ ಮರಳಿ ಪಡೆದು, ಹೇಗೋ ತನ್ನ ದೇಹ ಮುಚ್ಚಿಕೊಂಡು ಸುರಕ್ಷಿತ ಸ್ಥಳ ತಲುಪುತ್ತಾಳೆ. ಪೊಲೀಸರು ಅವಳ ದೂರನ್ನು ದಾಖಲಿಸಲೂ ನಿರಾಕರಿಸುತ್ತಾರೆ. ದಾಖಲಿಸಿದ ನಂತರ ಸರಿಯಾಗಿ ತನಿಖೆ ಆಗುವುದಿಲ್ಲ. ಹೇಗೋ ವಿಷಯ ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪುತ್ತದೆ. ನ್ಯಾಯ ಆಗಲಿ ಎಂದು ಪ್ರಕರಣವನ್ನು ಬೇರೊಂದು ರಾಜ್ಯದಲ್ಲಿ ನಡೆಸಲಾಗುತ್ತದೆ. ಆಗ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. ಕೊನೆಗೆ, 11 ಅಪರಾಧಿಗಳಿಗೆ ಬಲಾತ್ಕಾರ ಮತ್ತು ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

ಸರ್ವೇಶ್ವರ್ ದಯಾಲ್ ಸಕ್ಸೇನ

ಕಥೆ ಇಲ್ಲಿಯೇ ಮುಗಿಯುವುದಿಲ್ಲ. ಜೈಲಿನಲ್ಲಿದ್ದರೂ, ಈ ಎಲ್ಲ ಅಪರಾಧಿಗಳು ಪದೇಪದೇ ಪೆರೋಲ್ ಮೇಲೆ ಹೊರಬರುತ್ತಾರೆ, ಸಂಭ್ರಮಿಸುತ್ತಾರೆ, ಪಕ್ಷದ ರ್‍ಯಾಲಿಗಳಲ್ಲಿ ಶಾಮೀಲಾಗುತ್ತಾರೆ ಹಾಗೂ ವಿಮಲಾದೇವಿಯ ಪರಿವಾರಕ್ಕೆ ಬೆದರಿಕೆ ಹಾಕುತ್ತಾರೆ. ಪೊಲೀಸರು, ಆಡಳಿತ ಮತ್ತು ಸರಕಾರ ಮಂದಹಾಸ ಬೀರುತ್ತವೆ. ಹಾಗೂ ಶಿಕ್ಷೆ ಪೂರ್ಣವಾಗುವ ಮುನ್ನ ಸರಕಾರ ಒಂದು ಸಮಿತಿಯನ್ನು ರಚಿಸುತ್ತದೆ, ಅದು ಈ ಅತ್ಯಂತ ಕ್ರೂರ ಅಪರಾಧಿಗಳನ್ನು ಅವರ ಒಳ್ಳೆಯ ನಡೆತೆ ಮತ್ತು ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡುತ್ತದೆ. ಹೀಗೆ 15ನೆಯ ಆಗಸ್ಟ್‌ರಂದು ಸ್ವಾತಂತ್ರ್ಯದ ದಿನವನ್ನು ಆಚರಿಸಲಾಗುತ್ತದೆ. ಈಗ ಕವಿತೆ ತನ್ನ ಉತ್ತುಂಗವನ್ನು ತಲುಪುತ್ತದೆ:

“ನೆನಪಿಡಿ
ಒಂದು ಮಗುವಿನ ಕೊಲೆ
ಒಬ್ಬ ಮಹಿಳೆಯ ಸಾವು
ಒಬ್ಬ ವ್ಯಕ್ತಿಯ ಗುಂಡುಗಳಿಂದ
ಛಿದ್ರಗೊಂಡ ದೇಹ
ಯಾವುದೇ ಶಾಸನದ್ದಷ್ಟೇ ಅಲ್ಲ
ಇಡೀ ರಾಷ್ಟ್ರದ ಪತನವಾಗಿದೆ”
ಹೀಗೆ ರಕ್ತ ಸುರಿದು
ಭೂಮಿಯಲ್ಲಿ ಚೈತನ್ಯವಿರುವುದಿಲ್ಲ
ಆಕಾಶದಲ್ಲಿ ಹಾರುವ ಬಾವುಟಗಳನ್ನು
ಕಪ್ಪಾಗಿಸುತ್ತದೆ”

ನಾನು ಆಗಸದಲ್ಲಿ ಹಾರುತ್ತಿರುವ ತ್ರಿವರ್ಣ ಧ್ವಜವನ್ನು ನೋಡುತ್ತೇನೆ. ಅವುಗಳ ಸಂಖ್ಯೆ ಹೆಚ್ಚಿದೆ, ಅವುಗಳ ಆಕಾರ ಮತ್ತು ಎತ್ತರವೂ ಹೆಚ್ಚಿದೆ. ಆದರೆ ಕವಿತೆಯ ಸಾಲುಗಳು ನನ್ನ ಬೆನ್ನು ಬಿಡುತ್ತಿಲ್ಲ. ವಿಮಲಾ ದೇವಿಯ ಬಲಾತ್ಕಾರಿಗಳನ್ನು ಬಿಡುಗಡೆ ಮಾಡಲು ಕಾನೂನಾತ್ಮಕ ದಾಳಗಳ ಆಸರೆ ಪಡೆಯಲಾಗುತ್ತದೆ. ಆದರೆ ಕವಿ ಮತ್ತೆ ನಮ್ಮನ್ನು ಎಚ್ಚರಿಸುತ್ತಾನೆ:

“ಹೆಣಗಳ ಆಸರೆ ಪಡೆದು
ನಿಂತಿರುವ ವಿವೇಕ
ಅದು ಕುರುಡು ವಿವೇಕ”
ವಿಮಲಾ ದೇವಿ ಹೇಳುತ್ತಾಳೆ:

“ನಾನು ಮೌನವಾಗಿದ್ದೇನೆ, ಪ್ರಜ್ಞಾಹೀನಳಾಗಿದ್ದೇನೆ. ಇಷ್ಟು ಮಾತ್ರ ಹೇಳಬಲ್ಲೆ, ಒಬ್ಬ ಮಹಿಳೆಯೊಂದಿಗೆ ನ್ಯಾಯವು ಈ ರೀತಿಯಲ್ಲಿ ಬದಲಾಗಲು ಹೇಗೆ ಸಾಧ್ಯ? ನಾನು ಎಲ್ಲಕ್ಕಿಂತ ದೊಡ್ಡ ನ್ಯಾಯಾಲಯದಲ್ಲಿ ನಂಬಿಕೆ ಇಟ್ಟಿದ್ದೆ. ನಾನು ಈ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟಿದ್ದೆ. ನಾನು ನನ್ನ ದುರಂತದೊಂದಿಗೆ ಬದುಕಲು ಕಲಿಯುತ್ತಿದ್ದೆ. ಆದರೆ ಈಗ ಶಾಂತಿ ಕದಡಿದೆ. ನ್ಯಾಯದಲ್ಲಿಯ ನನ್ನ ನಂಬಿಕೆ ಕದಡಿದೆ.” ವಿಮಲಾಳ ಧ್ವನಿಯನ್ನು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ದೇಶ ಮೌನವಾಗಿದೆ. ಯಾವುದೇ ಕುರ್ಚಿ ಅಲುಗಾಡಿಲ್ಲ. ನಿರ್ಭಯಾಳ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಬೇಡಿಕೆ ಇಡುವವರು ಹಾಗೂ ಆರುಶಿ ಹತ್ಯೆಯ ಮೇಲೆ ಹಗಲೂರಾತ್ರಿ ಕಿರುಚಾಡಿದ ಟವಿ ಚಾನೆಲ್‌ಗಳು ಮೂಕರಾಗುತ್ತಾರೆ.

ಒಬ್ಬ ಕವಿ ಮಾತ್ರ ಗಂಟಲು ಹರಿದುಕೊಂಡು ವಿಮಲಾಳ ಪರವಾಗಿ ಮಾತನಾಡುತ್ತಿದ್ದಾನೆ:

“ಕೊನೆಯ ಮಾತು
ಅತ್ಯಂತ ಸ್ಪಷ್ಟ
ಯಾವುದೇ ಕೊಲೆಗಾರನಿಗೆ
ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೇ ಆಗಿರಲಿ
ಧರ್ಮದ ಗುತ್ತಿಗೆದಾರನೇ ಆಗಿರಲಿ
ಪ್ರಜಾಪ್ರಭುತ್ವದ ಪ್ರಸಿದ್ಧ ಕಾವಲುಗಾರನೇ ಆಗಿರಲಿ”

ಆದರೆ, ಆ ಮಹಿಳೆಯ ಹೆಸರು ವಿಮಲಾ ದೇವಿ ಅಲ್ಲ, ಬಿಲ್ಕಿಸ್ ಬಾನೋ ಎಂದು ನೀವು ಹೇಳುವಿರಿ. ಹಾಗಿದ್ದರೆ? ಹಾಗಿದ್ದರೆ ಅದರಿಂದ ನ್ಯಾಯದ ತಕ್ಕಡಿ ಪಲ್ಟಿ ಹೊಡೆಯುತ್ತದೆಯೇ? ಬಲಾತ್ಕಾರದ ಚೀತ್ಕಾರಗಳು ಮಧುರವಾಗುತ್ತವೆಯೇ? ಕೊಲೆಯ ಭೀಭತ್ಸತೆ ಮುಗ್ಧವಾಗುತ್ತದೆಯೇ? ಒಂದು ವೇಳೆ ಸರ್ವೇಶ್ವರ್ ದಯಾಲ್ ಸಕ್ಸೇನಾ 2022ರಲ್ಲಿ ಜೀವಿತವಿದ್ದಲ್ಲಿ, ಕವಿತೆಯಲ್ಲಿ ಎರಡು ಸಾಲು ಸೇರಿಸುತ್ತಿದ್ದರು:

“ಒಂದು ವೇಳೆ ನೀವು ವಿಮಲಾ ದೇವಿಯ ಬಲಾತ್ಕಾರದ ಬಗ್ಗೆ ಗಟ್ಟಿಯಾಗಿ ಕಿರುಚುತ್ತೀರಾ ಎಂದಾದಲ್ಲಿ
ಬಿಲ್ಕಿಸ್ ಬಾನೋನ ಹೆಸರು ಕೇಳಿ ಸುಮ್ಮನಿರಬಹುದೇ?
ಹೌದು ಎಂತಾದಲ್ಲಿ
ನಿಮಗೆ ಹೇಳಲು ನನ್ನ ಬಳಿ ಏನೂ ಇಲ್ಲ”

ಕನ್ನಡಕ್ಕೆ: ರಾಜಶೇಖರ ಅಕ್ಕಿ


ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅತ್ಯಾಚಾರಿ-ಕೊಲೆಗಡುಕರನ್ನು ಗೌರವಿಸಿದ ಕರಾಳ ವಿದ್ಯಮಾನ

ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಅಪರಾಧಿಗಳನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿಲ್ಲ ಎಂದ ಸುಪ್ರೀಂ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...