Homeಸಿನಿಮಾಕ್ರೀಡೆಕ್ರಿಕೆಟ್‌ ಗೆಲುವಿನ ನಾಗಲೋಟದಲ್ಲಿ ‘ವಿನ್’ಡಿಯಾ!

ಕ್ರಿಕೆಟ್‌ ಗೆಲುವಿನ ನಾಗಲೋಟದಲ್ಲಿ ‘ವಿನ್’ಡಿಯಾ!

- Advertisement -
- Advertisement -

2019 ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಗೆಲ್ಲುವ ಫೇವರೆಟ್ ತಂಡಗಳ ಪೈಕಿ ಒಂದಾಗಿದ್ದ ಭಾರತ ಸೆಮಿ ಫೈನಲ್ ತಲುಪಿ ಪಂದ್ಯದಿಂದ ಹೊರಬಂದಿತ್ತು. ವಿಶ್ವಕಪ್ ನಂತರದಲ್ಲಿ ನಡೆದ ಎಲ್ಲಾ ಟೂರ್ನಮೆಂಟ್‌ಗಳಲ್ಲಿ ಭಾರತದ ಸಾಧನೆ ಐತಿಹಾಸಿಕವಾದದ್ದು.

ವಿಶ್ವಕಪ್ ಪಂದ್ಯಾವಳಿಯ ನಂತರ ಸೆಪ್ಟೆಂಬರ್‌ನಲ್ಲಿ ವಿಂಡೀಸ್ ಜೊತೆಗೆ ಆರಂಭವಾದ ಟೂರ್ನಿಯಿಂದ ಈಗ ನ್ಯೂಜಿಲ್ಯಾಂಡ್‌ಗೆ ಭಾರತ ನಡೆಸಿರುವ ಟೂರ್‌ವರೆಗೂ ಭಾರತದ ಸಾಧನೆಯನ್ನು ಗಮನಿಸೋಣ.

ಸೆಪ್ಟೆಂಬರ್ ನಲ್ಲಿ ವಿಂಡೀಸ್ ವಿರುದ್ಧ ಭಾರತವು ಟೆಸ್ಟ್, ಏಕದಿನ ಪಂದ್ಯ ಹಾಗೂ ಟಿ-20 ಮೂರು ಪ್ರಕಾರಗಳಲ್ಲಿ ಆಡಿತ್ತು ಮೂರರಲ್ಲಿಯೂ ಭಾರತ ಕ್ರಮವಾಗಿ 2-0, 2-0, 2-0 ಅಂತರದಲ್ಲಿ ವಿಂಡೀಸ್‌ಗೆ ಯಾವುದೇ ಗೆಲ್ಲುವ ಅವಕಾಶ ಕೊಡದೆ ಜಯಭೇರಿ ಸಾಧಿಸಿತು.

ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಹಾಗೂ ಟೆಸ್ಟ್ ಮ್ಯಾಚ್‌ಗಳನ್ನು ಭಾರತ ಆಡಿತ್ತು. ಟಿ-20 ಯಲ್ಲಿ ಸಮಬಲ ಸಾಧಿಸಿದರೆ (1-1) ಟೆಸ್ಟ್ ಪಂದ್ಯದಲ್ಲಿ 3-0 ಅಂತರದಲ್ಲಿ ವಿಜಯ ಸಾಧಿಸಿತು.

ನವೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಬಳಸಿದ ಬಾಂಗ್ಲಾದೇಶದ ವಿರುದ್ಧ ಭಾರತ ಟಿ-20 (2-1) ಹಾಗೂ ಟೆಸ್ಟ್ (2-0) ಪಂದ್ಯಗಳಲ್ಲಿ ಸೀರಿಸ್ ಗೆದ್ದುಕೊಂಡಿತ್ತು.

ಡಿಸೆಂಬರ್‌ನಲ್ಲಿ ಕೆರೇಬಿಯನ್‌ರ ವಿರುದ್ಧ ಟಿ-20 ಯಲ್ಲಿ 2-1 ಹಾಗೂ ಏಕದಿನ ಪಂದ್ಯದಲ್ಲಿ 2-1 ಅಂತರದಿಂದ ಮತ್ತೊಮ್ಮೆ ಭಾರತ ವಿಜಯ ಸಾಧಿಸಿತು. ಜನವರಿ 2020ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧ 2-0 ಅಂತರದಿಂದ ಟಿ-20 ಪಂದ್ಯವನ್ನು ಭಾರತ ಗೆದ್ದಿತು.

ಅದೇ ತಿಂಗಳಿನಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರು ಏಕದಿನ ಪಂದ್ಯವನ್ನು ಆಡಿತ್ತು. ಮೊದಲ ಪಂದ್ಯವನ್ನು ಸೋತಿದ್ದ ಭಾರತ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದು ಬಲಿಷ್ಠ ಆಸಿಸ್‌ಗೆ ಶಾಕ್ ನೀಡಿತ್ತು. ಆಸಿಸ್ ವಿರುದ್ಧದ ಪಂದ್ಯಾವಳಿಯ ನಂತರ ಭಾರತ ತಂಡ ಇದೀಗ ನ್ಯೂಜೀಲ್ಯಾಂಡ್‌ಗೆ ಪ್ರವಾಸ ನಡೆಸಿದೆ. ಈ ಪ್ರವಾಸದಲ್ಲಿ ಆತಿಥೇಯ ನ್ಯೂಜೀಲ್ಯಾಂಡ್ ವಿರುದ್ಧ ಟಿ-20, ಏಕದಿನ ಹಾಗೂ ಟೆಸ್ಟ್ ಮೂರು ಪ್ರಕಾರಗಳ ಪಂದ್ಯವನ್ನು ಆಡಲಿದೆ.

ನ್ಯೂಜೀಲ್ಯಾಂಡ್ ವಿರುದ್ಧ ಭಾರತದ ಐತಿಹಾಸಿಕ ಗೆಲುವು: ಜನವರಿ 24 ರಿಂದ ಶುರುವಾಗಿರುವ ಪಂದ್ಯಾವಳಿಯಲ್ಲಿ ಒಟ್ಟು 5 ಟಿ-20, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈಗಾಗಲೇ 5 ಟಿ-20 ಪಂದ್ಯಗಳನ್ನು ಆಡಿದ್ದು 5-0 ಅಂತರದಲ್ಲಿ ಭರ್ಜರಿಯಾಗಿ ಐತಿಹಾಸಿಕ ವಿಜಯ ಸಾಧಿಸಿದೆ. ಐಸಿಸಿ ಸದಸ್ಯ ತಂಡಗಳ ಪೈಕಿ ಟಿ-20 ಪ್ರಕಾರದಲ್ಲಿ ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದಿರುವ (ವೈಟ್‌ವಾಷ್) ಮೊದಲ ತಂಡವೆಂಬ ಗರಿಯು ಈಗ ಭಾರತದ ಪಾಲಾಗಿದೆ.

ಅಲ್ಲದೆ 2008 ರಿಂದ ನ್ಯೂಜೀ಼ಲ್ಯಾಂಡ್ ನೆಲದಲ್ಲಿ ಟಿ-20 ಸಿರೀಸ್ ಅನ್ನು ಭಾರತ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಅದನ್ನೂ ಸಾಧಿಸಿದೆ. ಇನ್ನೂ ಮುಂದಿನ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿಯೂ ಭಾರತ ಗೆಲ್ಲುವ ಫೇವರಿಟ್ ತಂಡವಾಗಿದೆ. ಒಟ್ಟಾರೆಯಲ್ಲಿ ಭಾರತ ವಿಶ್ವಕಪ್ ನಂತರದಲ್ಲಿ ಎಲ್ಲಾ ಪ್ರಕಾರಗಳ ಪಂದ್ಯದಲ್ಲಿ ವಿಜಯ ಸಾಧಿಸಿದೆ. ವಿಶೇಷವಾಗಿ ಟೆಸ್ಟ್ ಪಂದ್ಯಗಳಲ್ಲಿ ವೈಟ್‌ವಾಷ್ ಅನ್ನು ಸಾಧಿಸಿದೆ. ಭಾರತ ಐಸಿಸಿಯ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮುಂದುವರೆಸಿದೆ.

ದಾಖಲೆ ಬರೆದ ಕರ್ನಾಟಕದ ಕೆ.ಎಲ್. ರಾಹುಲ್

ಹಿಟ್‌ಮ್ಯಾನ್ ರೋಹಿತ್ ಶರ್ಮಾರ ಜೊತೆ ಆರಂಭಿಕ ಬ್ಯಾಟ್ಸ್ಮೆನ್ ಆಗಿ ಕಣಕ್ಕೆ ಇಳಿಯುತ್ತಿರುವ ರಾಹುಲ್ ವಿಶ್ವಕಪ್ ನಲ್ಲಿ ಹೇಳಿಕೊಳ್ಳುವಂತ ಸಾಧನೆಯನ್ನು ಮಾಡಿರಲಿಲ್ಲ. ಇದೀಗ ಶಿಖರ್ ಧವನ್‌ರ ಅನುಪಸ್ಥಿತಿಯಲ್ಲಿ ರಾಹುಲ್ ಆರಂಭಿಕ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಓಪನಿಂಗ್ ಅಲ್ಲಿ ಅತ್ಯುತ್ತಮ ಲಯ ಕಂಡುಕೊAಡಿರುವ ರಾಹುಲ್ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ, ಭಾರತ ತಂಡದ ನಂಬಿಕಾರ್ಹ ಭರವಸೆಯ ಬ್ಯಾಟ್ಸ್ಮೆನ್ ಆಗಿದ್ದಾರೆ.

ನ್ಯೂಜೀ಼ಲ್ಯಾಂಡ್ ವಿರುದ್ಧದ ಟಿ-20 ಸಿರೀಸ್ ಅಲ್ಲಿ ಎರಡು ಅರ್ಧ ಶತಕಗಳೊಂದಿಗೆ ಒಟ್ಟು 224 ರನ್ನ ಗಳಿಸಿ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದಿದ್ದು ಅಲ್ಲದೆ ಟಿ-20 ಸಿರೀಸ್ ಒಂದರಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ಭಾರತದ ಬ್ಯಾಟ್ಸ್ಮೆನ್ ಎಂಬ ಇತಿಹಾಸ ಬರೆದಿದ್ದಾರೆ. ಅಲ್ಲದೆ ವಿಶ್ವದ ಎರಡನೇ ಬ್ಯಾಟ್ಸ್ಮೆನ್ ಆಗಿದ್ದಾರೆ.

ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸಾಧನೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಒಟ್ಟು 5,046 ಅಂಕಗಳೊಂದಿಗೆ ಟಾಪ್ 1 ಸ್ಥಾನದಲ್ಲಿದೆ.

ಏಕದಿನ ಕ್ರಿಕೆಟ್‌ನಲ್ಲಿ 7,748 ಅಂಕಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ವಿರಾಟ್ ಕೋಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಏಕದಿನ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ ಟಾಪ್ 1 ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್ ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.

ಟಿ-20 ಬ್ಯಾಟಿಂಗ್ ರ‍್ಯಾಕಿಂಗ್ ಅಲ್ಲಿ ಕರ್ನಾಟಕದ ಕೆ.ಎಲ್. ರಾಹುಲ್ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಭಾರತಕ್ಕೆ ಬುಮ್ರಾ ಬಲ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಟ್ರಂಪ್ ಕಾರ್ಡ್ ಆಗಿದ್ದ ಭರವಸೆಯ ಬೌಲರ್ ಜಸ್ಪ್ರಿತ್ ಬುಮ್ರಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಾನ ಗಳಿಸಿದಾಗಿನಿಂದಲೂ ಅತ್ಯುತ್ತಮ ಸಾಧನೆ ನೀಡಿದ್ದಾರೆ. ತನ್ನ ವಿಶಿಷ್ಟವಾದ ಬೌಲಿಂಗ್ ಶೈಲಿ ಹಾಗೂ ಯಾರ್ಕರ್‌ನಿಂದಾಗಿ ಬುಮ್ರಾ ವಿಶ್ವದ ಟಾಪ್ ಒನ್ ಬೌಲರ್ ಆಗಿದ್ದಾರೆ.

ಅತ್ಯಂತ ಒತ್ತಡದ ಕೊನೆಯ ಓವರ್‌ಗಳಲ್ಲಿಯೂ ಬೌಂಡರಿಗಳು ನೀಡದೆ ಬ್ಯಾಟ್ಸ್ಮೆನ್‌ಗಳು ತಿಣುಕಾಡುವಂತೆ ಮಾಡುವ ಪ್ರತಿಭಾವಂತ ಬೌಲರ್ ಬುಮ್ರಾ. ಟೆಸ್ಟ್ನಲ್ಲಿ 2.64, ಏಕದಿನ ಪಂದ್ಯಗಳಲ್ಲಿ 4.49 ಹಾಗೂ ಟಿ-20 ಅಲ್ಲಿ 6.66 ಎಕಾನಮಿಯನ್ನು (ಒವರ್ ಒಂದಕ್ಕೆ ನೀಡುವ ರನ್‌ಗಳ ಸರಾಸರಿ) ಕಾಪಾಡಿಕೊಂಡಿರುವ ಬುಮ್ರಾ ಭಾರತ ತಂಡದ ಬೌಲಿಂಗ್ ಬಲವಾಗಿದ್ದಾರೆ.

ಸುಧಾರಿಸಬೇಕಿದೆ ಫೀಲ್ಡಿಂಗ್

ಹೆಚ್ಚು ಹೊಸ ಹಾಗೂ ಅನಾನುಭವಿಗಳಿರುವ ತಂಡದಲ್ಲಿ ಫೀಲ್ಡಿಂಗ್ ನೀರಸವಾಗಿದೆ. ಕ್ಯಾಚ್‌ಗಳನ್ನು ಕೈಚೆಲ್ಲುವುದು, ಬೌಂಡರಿಗಳನ್ನು ಬಿಡುವುದು ಹೆಚ್ಚಾಗಿರುವುದು ನಾಯಕ ಕೋಹ್ಲಿಯ ಕೋಪಕ್ಕೂ ಕಾರಣವಾಗಿದೆ.

ಒಳ್ಳೆಯ ಅವಕಾಶಕ್ಕೆ ಕಾದಿರುವ ಪಾಂಡೆ

ಕರ್ನಾಟಕ ತಂಡದ ಭರವಸೆಯ ಓಪನರ್ ಮನೀಷ್ ಪಾಂಡೆ ಭಾರತದ ತಂಡದ ಟಿ-20 ಪಂದ್ಯದಲ್ಲಿ ಸ್ಥಾನ ಪಡೆದಿದ್ದು ಲೊವರ್ ಆರ್ಡರ್‌ನಲ್ಲಿ ಆಡುತ್ತಿದ್ದಾರೆ. ಮಿಡಲ್ ಆರ್ಡರ್‌ನಲ್ಲಿ ಬರುತ್ತಿರುವ ಶಿವಮ್ ದೂಬೆ ಐಪಿಎಲ್‌ನಲ್ಲಿ ಮಿಂಚಿದ್ದರಾದರೂ ನ್ಯೂಜೀ಼ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಓವರ್ ಒಂದರಲ್ಲಿ 34 ರನ್ ನೀಡಿ ಭಾರತದ ದುಬಾರಿ ಬೌಲರ್ ಆಗಿದ್ದಾರೆ. ಫೀಲ್ಡಿಂಗ್ ನಲ್ಲೂ ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಇವರ ಬದಲಿಗೆ ಮನೀಷ್ ಪಾಂಡೆಗೆ ಅವಕಾಶ ನೀಡಬೇಕೆಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...